Homeಮುಖಪುಟವಲಸೆ ಕಾರ್ಮಿಕರ ಈ ಸ್ಥಿತಿಗೆ ಕಾರಣವೇನು? ಅವರ ವಿಮೋಚನೆಯ ದಾರಿ ಯಾವುದು?

ವಲಸೆ ಕಾರ್ಮಿಕರ ಈ ಸ್ಥಿತಿಗೆ ಕಾರಣವೇನು? ಅವರ ವಿಮೋಚನೆಯ ದಾರಿ ಯಾವುದು?

ಕರ್ನಾಟಕದ ಗಂಗಮ್ಮದಿಂದ ಹಿಡಿದು ಮಹಾರಾಷ್ಟ್ರದ ಕನ್ನಡಿಗ ಕಾರ್ಮಿಕರವರೆಗೂ ಜನ ಸಾಯುತ್ತಿದ್ದರೂ ಸರ್ಕಾರ ಕಣ್ಣೆತ್ತಿ ನೋಡುತ್ತಿಲ್ಲ ಏಕೆ? ಇವರು ಈ ಸ್ಥಿತಿಗೆ ಬರಲು ಕಾರಣವೇನು?

- Advertisement -
- Advertisement -

ನಿನ್ನೆ ಒಂದು ಧಾರುಣ ಘಟನೆ ಜರುಗಿತು. ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಕಾಲ್ನಡಿಗೆಯಲ್ಲಿ ತಮ್ಮೂರಿಗೆ ಹೊರಟಿದ್ದ 16 ಜನ ವಲಸೆ ಕಾರ್ಮಿಕರು ವಿಶ್ರಾಂತಿಗಾಗಿ ರೈಲ್ವೆ ಹಳಿಯ ಮೇಲೆ ಮಲಗಿದ್ದಾಗ ರೈಲು ಹರಿದು ಎಲ್ಲರ ಪ್ರಾಣ ತೆಗೆಯಿತು. ಲಾಕ್‌ಡೌನ್‌ ಕಾರಣಕ್ಕೆ ರೈಲುಗಳಿಲ್ಲ ಎಂದು ತಿಳಿದು ಕಾಲ್ನಡಿಗೆಯಲ್ಲಿ ಹೊರಟಿದ್ದ ಅವರನ್ನು ಅದೇ ರೈಲು ಹರಿದು ಕೊಂದಿರುವುದು ದುರಾದೃಷ್ಟಕರ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಭುಗಿಲೆದ್ದಿವೆ. ಕೆಲವು ಜನರು ಅವರೇಕೆ ರೈಲು ಹಳಿಗಳ ಮೇಲೆ ಮಲಗಬೇಕಿತ್ತು? ಎಂಬ ಪ್ರಶ್ನೆಗೆ ಅವರು ನಡೆದು ಹೋಗಬೇಕಾದ ಪರಿಸ್ಥಿತಿ ಏಕೆ ಬಂತು ಎಂಬ ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಅವರ ಬಳಿ ಉತ್ತರಗಳಿಲ್ಲ.

ಇನ್ನು ಇವರ ಸಾವು ಆಳುವ ಸರ್ಕಾರಗಳಿಗೆ ದೊಡ್ಡ ಪ್ರಮಾದ ಎನ್ನಿಸಲೇ ಇಲ್ಲ. ಅವರ ಜೀವಕ್ಕೆ ತಲಾ 5 ಲಕ್ಷ ಬೆಲೆ ಕಟ್ಟಿ ಕೈತೊಳೆದುಕೊಂಡಿವೆ. ಅವರ ಸಾವಿಗೆ ಮಮ್ಮಲ ಮರುಗಿದ ನಾವು ಕೂಡ ಒಂದೆರೆಡು ದಿನಗಳಲ್ಲಿ ಅವರನ್ನು ಮರೆತು ಮುಂದಕ್ಕೆ ಹೋಗುತ್ತೇವೆ. ಏಕೀಗೆ? ಅವರ ನೋವು ಆಳುವವರಿಗೆ ತಟ್ಟುವುದಿಲ್ಲ ಏಕೆ? ಈ ಕುರಿತು ಕನಿಷ್ಠ ಯೋಚಿಸಬೇಕಲ್ಲವೇ?

ಇದೊಂದೆ ಘಟನೆಯಲ್ಲ. ಲಾಕ್‌ಡೌನ್‌ ಘೋಷಣೆಯಾದಾಗಿನಿಂದ ದೇಶದಲ್ಲಿರುವ ಕೋಟ್ಯಾಂತರ ವಲಸೆ ಕಾರ್ಮಿಕರನ್ನು ಶೋಷಿಸಲಾಗುತ್ತಿದೆ. ಅವರಿಗೆ ಸಮರ್ಪಕ ದಿನಸಿಗಳು, ಊಟ ಸಿಕ್ಕಿಲ್ಲ. ಸರಿ ತಮ್ಮ ಊರಿಗೆ ಹೋಗಲು ಸಾರಿಗೆ ಇಲ್ಲ. ಕರ್ನಾಟಕದ ಗಂಗಮ್ಮದಿಂದ ಹಿಡಿದು ಮಹಾರಾಷ್ಟ್ರದ ಕನ್ನಡಿಗ ಕಾರ್ಮಿಕರವರೆಗೂ ಜನ ಸಾಯುತ್ತಿದ್ದರೂ ಸರ್ಕಾರ ಕಣ್ಣೆತ್ತಿ ನೋಡುತ್ತಿಲ್ಲ ಏಕೆ? ಇವರು ಈ ಸ್ಥಿತಿಗೆ ಬರಲು ಕಾರಣವೇನು?

ರಾಜಕೀಯ ಭಾಗವಹಿಸುವಿಕೆ ತೀರಾ ಕಡಿಮೆ.

ಈ ಕುರಿತು ಯೋಚಿಸಿದಾಗ ನಮಗೆ ಕಾಡುವ ಒಂದು ಪದವೆಂದರೆ ಅದು ವಲಸಿಗ ಎಂಬುದಾಗಿದೆ. ವಲಸಿಗ ಎಂಬ ಪದದ ಅರ್ಥವೇ ನಮ್ಮವನಲ್ಲ ಎಂಬುದಾಗಿದೆ. ವಲಸೆ ಕಾರ್ಮಿಕರ ಈ ಪರಿಸ್ಥಿತಿಯನ್ನ ರಾಜ್ಯಶಾಸ್ತ್ರ ದೃಷ್ಟಿಯಿಂದ ಇಂದ ಅಧ್ಯಯನ ಮಾಡಿದರೆ ಇವರಿಗೆ ನಾವು stateless population ಎಂದು ಕರೆಯುತ್ತೇವೆ. ಅಂದರೆ ಈ ಕಾರ್ಮಿಕರು ನಮ್ಮದೇ ದೇಶದಲ್ಲಿ ಪರಕೀಯರಾಗಿ ಉಳಿದಿದ್ದಾರೆ.

ಈ ಕಾರ್ಮಿಕರು ನಮ್ಮ ದೇಶ ಕಟ್ಟುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿದ್ದಾರೆ. ಇವರಿಲ್ಲದೇ ಅಭಿವೃದ್ದಿ ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬಡತನದ ಕಾರಣಕ್ಕಾಗಿ ಉದ್ಯೋಗ ಸಿಗದೇ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಬಂದಿರುವ ಇವರು ತಮ್ಮ ರಾಜ್ಯಕ್ಕೂ ಬೇಡವಾಗಿರುತ್ತಾರೆ ಮತ್ತು ತಾವಿರುವ ರಾಜ್ಯದಲ್ಲಿಯೂ ಸಹ ಅನ್ಯರಾಗಿರುತ್ತಾರೆ.

ಇನ್ನು ಬಹುಮುಖ್ಯ ಕಾರಣ ಇವರ ರಾಜಕೀಯ ಭಾಗವಹಿಸುವಿಕೆ ತೀರಾ ಕಡಿಮೆಯಿದೆ. ಇವರುಗಳ ಮತದಾನದ ಗುರುತಿನ ಚೀಟಿ ತಮ್ಮ ಸ್ವಂತ ರಾಜ್ಯದಲ್ಲಿರುತ್ತದೆ. ಆದರೆ ದೂರದ ಇನ್ಯಾವುದೋ ರಾಜ್ಯದಲ್ಲಿ ಕೂಲಿ ಮಾಡಿಕೊಂಡು ಸ್ಲಂಗಳಲ್ಲಿ ವಾಸಿಸುತ್ತಿರುತ್ತಾರೆ. ಚುನಾವಣೆ ಬಂದಾಗ ತಮ್ಮ ಸ್ವಂತ ರಾಜ್ಯಕ್ಕೆ ತೆರಳಿ ಮತದಾನ ಮಾಡುವಷ್ಟ ಶಕ್ತಿ ಅವರಿಗೆ ಇರುವುದಿಲ್ಲ. ಇನ್ನು ಅವರಿರುವ ರಾಜ್ಯಗಳಲ್ಲಿ ಸಹ ಮತದಾನ ಮಾಡಲಾಗುವುದಿಲ್ಲ. ದೇಶದಲ್ಲಿ ಓಟು ಹಾಕುವ ರೈತರ ಬಗ್ಗೆಯೇ ಕಾಳಜಿ ವಹಿಸದ ಸರ್ಕಾರ ಇನ್ನು ಓಟೇ ಹಾಕದ ಇವರ ಮೇಲೆ ನಮ್ಮ ರಾಜಕಾರಣಿಗಳಿಗೆ, ಆಳುವವರಿಗೆ ಕಾಳಜಿ ಬರಲು ಹೇಗೆ ಸಾಧ್ಯ?

ಹೀಗಾಗಿಯೇ ಬೆಂಗಳೂರಿನಲ್ಲಿ ನಡೆದ ಒಂದೆರೆಡು ಘಟನೆಗಳನ್ನು ನೋಡಬೇಕಿದೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ಕೋವಿಡ್‌ ಪರಿಹಾರಕ್ಕಾಗಿ ಬಳಸಬಹುದೆಂದು ಸರ್ಕಾರ ತೀರ್ಮಾನಿಸಿತು. ಅದಾದ ನಂತರ ಶಾಸಕರುಗಳ ನೇತೃತ್ವದಲ್ಲಿ ದಿನಸಿ ಮತ್ತಿತರ ಕಿಟ್‌ಗಳನ್ನು ಕೊಡಲು ನಿರ್ಧರಿಸಿದಾಗ ಬೆಂಗಳೂರಿನ ಮಹಾದೇವಪುರದ ಶಾಸಕ ಅರವಿಂದ ಲಿಂಬಾವಳಿಯವರು ಕಿಟ್‌ಗಳ ಮೇಲೆ ತಮ್ಮ ಮತ್ತು ಬಿಜೆಪಿಯ ಭಾವಚಿತ್ರವನ್ನು ಹಾಕಿಸಿಕೊಂಡರು. ಅಷ್ಟು ಮಾತ್ರವಲ್ಲದೇ ಅದನ್ನು ನಿಜಕ್ಕೂ ಅಗತ್ಯವಿದ್ದ ವಲಸೆ ಕಾರ್ಮಿಕರಿಗೆ ಕೊಡುವ ಬದಲು ತಮ್ಮ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಹಂಚಿದರು. ಏಕೆಂದರೆ ಅವರಿಗೆ ಸ್ಪಷ್ಟತೆಯಿದೆ ತನಗೆ ಓಟು ಹಾಕಿರುವವರು ಬಿಜೆಪಿ ಕಾರ್ಯಕರ್ತರೇ ಹೊರತು, ವಲಸೆ ಕಾರ್ಮಿಕರಲ್ಲ ಎಂಬುದಾಗಿದೆ.

ಹಾಗಾಗಿಯೇ ಈ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಹೋಗಲು ರೈಲು ವ್ಯವಸ್ಥೆ ಮಾಡಿದಾಗಲೂ ಕಾರ್ಮಿಕರಿಂದ ಟಿಕೆಟ್‌ಗಾಗಿ ಹಣ ವಸೂಲಿ ಮಾಡಲಾಗುತ್ತಿತ್ತು. ಆನಂತರ ಉಚಿತವಾದರೂ ಅದೇ ಸಮಯಕ್ಕೆ ಕರ್ನಾಟಕ ಸರ್ಕಾರ ಅವರು ಹೊರಟುಬಿಟ್ಟರೆ ಇಲ್ಲಿ ಚಟುವಟಿಕೆ ನಡೆಸುವುದು ಕಷ್ಟ ಎಂದು ರೈಲುಸೇವೆಯನ್ನೇ ರದ್ದುಗೊಳಿಸಿದರು. ಜನರ ಒತ್ತಡಕ್ಕೆ ಮಣಿದು ಅವರು ರೈಲುಸೇವೆಯನ್ನು ಪುನರ್‌ ಆರಂಭಿಸಿದಾಗ ಜಾರ್ಖಂಡ್‌, ಬಿಹಾರ, ಪಶ್ಚಿಮ ಬಂಗಾಳ ಮತ್ತು ಓಡಿಸ್ಸಾದಂತಹ ರಾಜ್ಯಗಳು ವಲಸೆ ಕಾರ್ಮಿಕರು ಸದ್ಯಕ್ಕೆ ನಮ್ಮ ರಾಜ್ಯಗಳಿಗೆ ಬರುವುದು ಬೇಡ ಎಂದು ರೈಲುಗಳಿಗೆ ಅನುಮತಿ ನಿರಾಕರಿಸಿವೆ.

ಇಲ್ಲಿಯೂ ಅದೇ ವಲಸೆ ನೀತಿ ಕೆಲಸ ಮಾಡಿದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಕಾರ್ಮಿಕರು ಬಹಳಷ್ಟು ರಾಜ್ಯಗಳಿಂದ ತಮ್ಮ ರಾಜ್ಯಕ್ಕೆ ಒಟ್ಟಿಗೆ ಬಂದರೆ ಅವರನ್ನು ನಿಭಾಯಿಸುವುದು ಹೇಗೆ? ಮೊದಲನೇಯದು ಕೊರೊನಾ ಹರಡುವ ಭಯ. ಎರಡನೆಯದು ಕೊರೊನಾ ನಿಂತರೂ ಅವರಿಗೆ ಅನ್ನ ಆಹಾರ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂಬ ಭಯ ಅವರನ್ನು ಕಾಡುತ್ತಿದೆ. ಅವರೇನಿದ್ದರೂ ನಮಗೆ ಓಟು ಹಾಕುವವರಲ್ಲವಲ್ಲ ಎಂಬ ಅಸಡ್ಡೆ ಬೇರೆ.

ಇದು ರಾಜ್ಯಸರ್ಕಾರಗಳ ಕಥೆಯಾದರೆ ಕೇಂದ್ರ ಸರ್ಕಾರದ್ದು ಅದಕ್ಕಿಂತ ಕ್ರೂರವಾದುದ್ದು. ಲಾಕ್‌ಡೌನ್‌ ಮಾಡಿದಾಗ ಕೇವಲ 4 ಗಂಟೆ ಸಮಯ ಕೊಟ್ಟ ಸರ್ಕಾರ ವಲಸೆ ಕಾರ್ಮಿಕರ ಜೀವನೋಪಾಯಕ್ಕೆ ಬಿಡಿಗಾಸನ್ನೂ ಬಿಚ್ಚಲಿಲ್ಲ. ಆಗಲೇ ಹೇಳಿದ ಹಾಗೆ ರೈಲು ದರಕ್ಕೂ ಕಾರ್ಮಿಕರಿಂದ ವಸೂಲಿಗಿಳಿದ ಕೇಂದ್ರ, ಅವರನ್ನು ನಿಭಾಯಿಸಲು ರಾಜ್ಯ ಸರ್ಕಾರಗಳಿಗೆ ನಯಾಪೈಸೆ ಕೊಡಲಿಲ್ಲ. ಪಿಎಂ ಕೇರ್ಸ್‌‌ಗೆ 30 ಸಾವಿರ ಕೋಟಿಗೂ ಅಧಿಕ ಹಣ ಹರಿದುಬಂದಿದ್ದರೂ ಅದರಿಂದ ಪ್ರಧಾನಿಗಳು ಒಂದು ರೂಪಾಯಿ ಸಹ ಖರ್ಚು ಮಾಡಿದ ಉದಾಹರಣೆಯಿಲ್ಲ. ಕೋವಿಡ್‌ಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹಸಿವಿನಿಂದ ಕಾರ್ಮಿಕರು ಸಾಯುತ್ತಿರುವಾಗ ಖರ್ಚು ಮಾಡದೇ ಇನ್ಯಾವಾಗ ಮಾಡುತ್ತಾರೆ?

ಪರಿಹಾರವೇನು?

ವಲಸೆ ಕಾರ್ಮಿಕರು ಅಸಂಘಟಿತ ವಲಯಕ್ಕೆ ಬರುತ್ತಾರೆ. ಕಾರ್ಮಿಕ ಸಂಘಟನೆಗಳು ಇವರನ್ನು ಸಂಘಟಿಸಲು ಪ್ರಯತ್ನಸಿದರೂ ದೊಡ್ಡ ಮಟ್ಟದಲ್ಲಿ ಸಾಧ್ಯವಾಗಿಲ್ಲ. ಇವರನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸಿ ಅವರೊಂದು ರಾಜಕೀಯ ಶಕ್ತಿಯನ್ನಾಗಿ ಮಾಡಬೇಕಾದ ಅನಿವಾರ್ಯತೆ ಇದೆ. ಅದು ಮಾತ್ರವೇ ಈ ಸಂಕಷ್ಟದಿಂದ ವಲಸೆ ಕಾರ್ಮಿಕರನ್ನು ಪಾರು ಮಾಡುತ್ತದೆ. ಕಾರ್ಲ್‌‌ಮಾರ್ಕ್ಸ್‌‌ರವರು ಹೇಳಿದಂತೆ ಕಾರ್ಮಿಕರು ಈಗ ಕಳೆದುಕೊಳ್ಳಲು ಸಂಕೋಲೆಯನ್ನು ಹೊರತಪಡಿಸಿ ಕಳೆದುಕೊಳ್ಳಲು ಮತ್ತೇನೂ ಇಲ್ಲ. ಅದೇ ರೀತಿ ಬುದ್ದ ನಮ್ಮ ಅಂದರೆ ಕಾರ್ಮಿಕರ ವಿಮೋಚನೆ ನಮ್ಮಿಂದಲೇ ಸಾಧ್ಯ ಹೊರತು ಮತ್ಯಾರಿಂದಲೂ ಅಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...