Homeಮುಖಪುಟಭಾರತದ ದುಡಿಯುವ ವರ್ಗವನ್ನು ಬಿಜೆಪಿ ಹೇಗೆ ನೋಡುತ್ತಿದೆ? - ಸಂಜಯ್ ಸಿಂಘ್ವಿ

ಭಾರತದ ದುಡಿಯುವ ವರ್ಗವನ್ನು ಬಿಜೆಪಿ ಹೇಗೆ ನೋಡುತ್ತಿದೆ? – ಸಂಜಯ್ ಸಿಂಘ್ವಿ

ಮುಂಚೆ ಇದ್ದ ಕಾಂಗ್ರೆಸ್ ಸರಕಾರವೂ ತರಲು ಇಚ್ಛಿಸಿದ್ದ ಆದರೆ ಸಾಂವಿಧಾನಿಕವಾಗಿ ಸಾಧ್ಯವಾಗಿರದಿದ್ದ ಕಾರ್ಮಿಕ ವಿರೋಧಿ ನೀತಿಗಳನ್ನು ಬಿಜೆಪಿಯು ಅಸಂವಿಧಾನಿಕವಾಗಿ ತಂದಿತು.

- Advertisement -
- Advertisement -

ದೇಶಾದ್ಯಂತ ಕಳೆದ ಆರು ವರ್ಷಗಳಲ್ಲಿ ಕಾರ್ಮಿಕರ ಸ್ಥಿತಿಗತಿಗಳ ಬಗ್ಗೆ ಅತ್ಯಂತ ಮಹತ್ವದ ಬದಲಾವಣೆಗಳು ಆಗಿವೆ. ಅದನ್ನು ಅರ್ಥ ಮಾಡಿಕೊಳ್ಳಲು ನಾವು ಜಾಗತಿಕ ಆರ್ಥಿಕತೆಯಿಂದ ಪ್ರಾರಂಭಿಸಬೇಕು. ಈಗಾಗಲೇ ಸುಮಾರು ಸಮಯದಿಂದಲೇ ಜಾಗತಿಕ ಆರ್ಥಿಕತೆ ಬಿಕ್ಕಟ್ಟಿನಲ್ಲಿದೆ. ವಿಶ್ವದೆಲ್ಲೆಡೆಯ ಬಂಡವಾಳಶಾಹಿಗಳು, ತಮ್ಮ ಜತೆಗಾರರೊಂದಿಗೆ ಆಳುವ ವರ್ಗದ ಸ್ಥಾನದಲ್ಲಿದ್ದುಕೊಂಡು, ತಮ್ಮ ಮೇಲಿರುವ ಭಾರವನ್ನು ದುಡಿಯುವ ಜನರ ಬೆನ್ನ ಮೇಲೆ ಹೊರೆಸುವ ಪ್ರಯತ್ನದಲ್ಲದ್ದು ಅದಕ್ಕೆ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದಕ್ಕಾಗಿಯೇ ಅನೇಕ ಕಾರ್ಮಿಕ ಕಾನೂನುಗಳಲ್ಲಿ ತಿದ್ದುಪಡಿಗಳನ್ನು ತರಲಾಗಿದೆ ಹಾಗೂ ಇಂದಿಗೂ ಹೆಚ್ಚಿನ ಬದಲಾವಣೆಗಳನ್ನು ತರುವಂತೆ ಅಪೇಕ್ಷಿಸಲಾಗುತ್ತಿದೆ, ಇದು ಕೇವಲ ಭಾರತದಲ್ಲಿ ಮಾತ್ರವಲ್ಲ, ವಿಶ್ವದೆಲ್ಲೆಡೆಯೂ ಆಗುತ್ತಿರುವ ವಿದ್ಯಮಾನ. ಈ ಉದ್ದೇಶಕ್ಕಾಗಿಯೇ, ಕಳೆದ ಕೆಲವು ದಶಕಗಳಲ್ಲಿ ದೊಡ್ಡಮಟ್ಟದ ಹೊರಗುತ್ತಿಗೆಯ ಕ್ರಮವನ್ನು ಕೈಗೊಳ್ಳಲಾಗಿದೆ. ಅವರು ಬಳಸಿದ ಇನ್ನೊಂದು ವಿಧಾನವೆಂದರೆ ವಿಶ್ವದಾದ್ಯಂತ ಕಾರ್ಪೋರೇಟ್ ತೆರಿಗೆಯನ್ನು ಕಡಿತಗೊಳಿಸುವುದು ಹಾಗೂ ಸಾಮಾನ್ಯ ಜನರ ಮೇಲೆ ತೆರಿಗೆಯ ಭಾರವನ್ನು ಹೆಚ್ಚಿಸಿರುವುದು.

ಭಾರತೀಯ ಬಿಸಿನೆಸ್‍ಗಳು ಇದನ್ನು ಬಳಸಿಕೊಳ್ಳಲು ಹಾಗೂ ವಿದೇಶಿ ಹೂಡಿಕೆಯನ್ನು ತರಲು ಪ್ರಯತ್ನಿಸಿವೆ. ವಾಸ್ತವದಲ್ಲಿ, ಎಲ್ಲಾ ಸರಕಾರಗಳು ಭಾರತದ ಅಭಿವೃದ್ಧಿಗೆ ಇದೊಂದೇ ಏಕೈಕ ಪ್ರಮುಖ ಮೂಲ ಎಂದು ಪರಿಗಣಿಸಿವೆ. ಕಳೆದ ಕೆಲವು ದಶಕಗಳಲ್ಲಿ ಪರಿಗಣಿಸಲಾಗುತ್ತಿರುವ ಒಂದು ಪ್ರಮುಖ ಮಾನದಂಡವೆಂದರೆ, ಎಷ್ಟು ವಿದೇಶಿ ಹೂಡಿಕೆಯನ್ನು ಆಕರ್ಷಿಸಲಾಗಿದೆ ಎಂಬುದು. ಸಮಸ್ಯೆ ಏನೆಂದರೆ, ಜಗತ್ತಿನ ಇತರ ಎಲ್ಲ ಆರ್ಥಿಕತೆಗಳೂ ಇದೇ ತಂತ್ರವನ್ನು ಅಳವಡಿಸಲು ಬಯಸಿದರು. ಇದರಲ್ಲಿ ಯಶಸ್ವಿಯಾಗಲು, ಭಾರತದ ಕಾರ್ಪೋರೇಟ್ ವರ್ಗಕ್ಕೆ ಎರಡು ಅಗತ್ಯಗಳಿದ್ದವು. ಕಡಿಮೆ ತೆರಿಗೆ ದರಗಳು ಹಾಗೂ ಕಡಿಮೆ ವೇತನ ದರಗಳು. ಭಾರತ ಇಂದು ಹೊರಗುತ್ತಿಗೆಗೆ ಅತ್ಯಂತ ಅನುಕೂಲಕರವಾದ ತಾಣವಾಗಿರವುದು, ಇಲ್ಲಿನ ಸಾಮಾನ್ಯ ಜನರು ಎಷ್ಟರ ಮಟ್ಟಿಗೆ ಶೋಷಣೆಗೆ ಒಳಗಾಗಿದ್ದಾರೆ ಎಂಬುದರ ಸಂಕೇತ ಮತ್ತು ಅಳತೆಯಾಗಿದೆ.

ದುಡಿಯುವ ವರ್ಗವನ್ನು ಶೋಷಿಸಲು ಬಳಸಿದ ವಿಧಾನಗಳು ಎರಡು – ಒಂದು ಶತಮಾನಕ್ಕಿಂತಲೂ ಹೆಚ್ಚಿನ ದೀರ್ಘ ಹೋರಾಟದಿಂದ ಗಳಿಸಿಕೊಂಡಿದ್ದ ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿ ರಕ್ಷಣೆಯನ್ನು ಇಲ್ಲವಾಗಿಸುವುದು ಮತ್ತು ಉದ್ಯೋಗದ ಹೊಸ ಸ್ವರೂಪಗಳನ್ನು ಸೃಷ್ಟಿಸಿ, ಅದರಿಂದಲೇ ಇಂತಹ ಕಾರ್ಮಿಕ ಕಾನೂನುಗಳ ಅಡಿಯಲ್ಲಿ ಬರುವ ಕಾರ್ಮಿಕರ ರಕ್ಷಣೆಯನ್ನು ಗಾಳಿಗೆ ತೂರುವುದು. ಈ ಎರಡೂ ಪ್ರಕ್ರಿಯೆಗಳು 1990ರಿಂದ ವೇಗ ಪಡೆದುಕೊಂಡವು.

1972ರ ಗ್ರ್ಯಾಚುಯಿಟಿ ಕಾಯಿದೆಯನ್ನು ದುಡಿಯುವ ವರ್ಗಕ್ಕೆ ಸಮಗ್ರವಾಗಿ ರಕ್ಷಣೆ ನೀಡಲು ತಂದ ಕೊನೆಯ ಕಾನೂನು ಎನ್ನಬಹದು. ಇದಾದ ನಂತರ, 80ರ ದಶಕದ ಪ್ರಾರಂಭದಲ್ಲಿ ಐಡಿ(ಕೈಗಾರಿಕಾ ವ್ಯಾಜ್ಯ ಕಾಯಿದೆ) ಆ್ಯಕ್ಟ್‌ನ 5ಬಿ ಅಧ್ಯಾಯವನ್ನು ಜಾರಿಗೊಳಿಸಲಾಯಿತು. ಅದರಿಂದ ಅತಿದೊಡ್ಡ ಉದ್ಯಮಗಳ ಕಾರ್ಮಿಕರಿಗೆ ಬೇಕಾಬಿಟ್ಟಿಯಾಗಿ ವಜಾ ಮಾಡುವುದು, ಉದ್ಯೋಗ ಕಡಿತಗೊಳಿಸುವುದು ಹಾಗೂ ಸಂಪೂರ್ಣ ಮುಚ್ಚುವಿಕೆಯಿಂದ ರಕ್ಷಣೆ ನೀಡಿದಂತಾಯಿತು. ಅದಾದ ನಂತರವೂ ಕೆಲವು ಕಾನೂನುಗಳನ್ನು ತರಲಾಯಿತು, (ದುಡಿಯುವ ವರ್ಗಕ್ಕೆ ಸಂಪೂರ್ಣವಾಗಿ ಅನ್ವಯವಾಗುವಲ್ಲ) 1996ರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯಿದೆ ಹಾಗೂ 2008ರ ಅಸಂಘಟಿತ ವಲಯದ ಕಾರ್ಮಿಕರ ಕಾಯಿದೆ ಇತ್ಯಾದಿ. ಈ ಕಾನೂನುಗಳು ಕೇವಲ ಹಾಳೆಯ ಮೇಲೆಯೇ ಉಳಿದಿದ್ದು, ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಆದರೆ ತದ್ವಿರುದ್ಧವಾಗಿ, ಒಂದು ರಿವರ್ಸ್ ಪ್ರಕ್ರಿಯೆ ಶುರುವಾಗಿದೆ – ಕಾರ್ಮಿಕರು ಈ ಮೊದಲು ಗಳಿಸಿಕೊಂಡಿದ್ದ ರಕ್ಷಣೆಗಳನ್ನು ಕಿತ್ತುಹಾಕುವ ಪ್ರಕ್ರಿಯೆ.

ನಾವು ಈ ಅವಧಿಯ ಪ್ರಾರಂಭವನ್ನು ಎರಡನೆಯ ಕಾರ್ಮಿಕ ಆಯೋಗದ ವರದಿಯೊಂದಿಗೆ 90ರ ದಶಕದ ಅಂತ್ಯದಲ್ಲಿ ಬಂದದ್ದು ಎಂದು ನಿಗದಿಪಡಿಸಬಹುದು. ಅದೊಂದು ಸ್ಪಷ್ಟವಾದ ತಿರುವಾಗಿತ್ತು. ಅದಕ್ಕಿಂತ ಮುನ್ನ, ಗುತ್ತಿಗೆ ಕಾರ್ಮಿಕ ಪದ್ಧತಿಯ ನಿರ್ಮೂಲನೆ, ಉದ್ಯೋಗ ಭದ್ರತೆಯನ್ನು ಖಾತ್ರಿಪಡಿಸುವ ಹಾಗೂ ಸಾಮಾಜಿಕ ಭದ್ರತೆಯನ್ನು ಹೆಚ್ಚಿಸುವ ಹಾಗೂ ಕಾರ್ಮಿಕರು ಸಂಘಟಿಸುವ ಮತ್ತು ಪ್ರತಿಭಟಿಸುವ ಹಕ್ಕುಗಳ ಬಗ್ಗೆ ಸರಕಾರ ಮತ್ತು ನ್ಯಾಯಾಲಯಗಳು ಸ್ಪಷ್ಟವಾಗಿ ಮಾತನಾಡಿದ್ದವು ಆದರೆ ಎರಡನೇ ಲೇಬರ್ ಆಯೋಗವು ಇದಕ್ಕೆ ತದ್ವಿರುದ್ಧ ಪರಿಕಲ್ಪನೆಯನ್ನು ನೀಡಿತು. ಅದು ಹೇಳಿದ್ದು, ಕಾರ್ಮಿಕರು ತಮ್ಮ ಜೀವನದುದ್ದಕ್ಕೂ ಒಂದೇ ಉದ್ಯೋಗದಲ್ಲಿ ಮುಂದುವರೆಯುವ ಕಲ್ಪನೆ ಇರುವುದರಿಂದ ಕಾರ್ಮಿಕರು ಸಂತೃಪ್ತರಾಗಿದ್ದಾರೆ(ಕಾಂಪ್ಲಸೆಂಟ್). ಅವರನ್ನು ಈ ಕಲ್ಪನೆಯ ಭ್ರಾಂತಿಯಿಂದ ಹೊರತರಬೇಕಾಗಿದೆ ಎಂದು. ಅವರು ಕಾರ್ಮಿಕ ನೀತಿಗಳಿಗೆ ಉದ್ಯೋಗದಾತರು ಬಯಸುತ್ತಿದ್ದ ಬದಲಾವಣೆಗಳನ್ನು ಶಿಫಾರಸು ಮಾಡಿದರು, ಉದಾಹರಣೆಗೆ, ವಜಾ ಮಾಡುವುದರ, ಕೆಲಸಗಾರರ ಸಂಖ್ಯೆಯನ್ನು ಕಡಿತಗೊಳಿಸುವ ಮತ್ತು ಉದ್ಯಮಗಳನ್ನು ಮುಚ್ಚುವುದರಿಂದ ಕಾರ್ಮಿಕರಿಗೆ ಇರುವ ರಕ್ಷಣೆಗಳನ್ನು ದುರ್ಬಲಗೊಳಿಸುವುದು ಹಾಗೂ ಗುತ್ತಿಗೆ ಪದ್ಧತಿಯನ್ನು ಹೆಚ್ಚು ಸಾಮಾನ್ಯವಾಗಿಸುವುದು ಆ ಆಯೋಗದ ಶಿಫಾರಸ್ಸುಗಳಾಗಿದ್ದವು. ಇಂದಿನ ನಾಲ್ಕು ಕೋಡ್‍ಗಳಲ್ಲಿ ಕಾರ್ಮಿಕ ನೀತಿಗಳ ಕ್ರೋಢೀಕರಣವೂ 2ನೇ ಲೇಬರ್ ಆಯೋಗದ ವರದಿಯಿಂದಲೇ ತನ್ನ ಸಿಂಧುತ್ವವನ್ನು ಪಡೆದುಕೊಂಡಿದೆ ಎಂದು ಹೇಳಬಹುದಾಗಿದೆ.

ಕಾರ್ಮಿಕ ಕಾನೂನುಗಳಲ್ಲಿ ಬದಲಾವಣೆಗಳೊಂದಿಗೆ, 2000ದ ಸುಮಾರಿಗೆ ಉದ್ಯೋಗದ ಹೊಸ ಸ್ವರೂಪಗಳು ಸೃಷ್ಟಿಯಾದವು. ಉದ್ಯೋಗದಾತರಿಗೆ ಕಾರ್ಮಿಕರನ್ನು ಅಪ್ರೆಂಟಿಸ್ (ಕಡಿಮೆ ವೇತನಕ್ಕೆ ಕಡಿಮೆ ಅವಧಿಗೆ ದುಡಿಯುವ ಖಾಯಂ ಅಲ್ಲದ ನೌಕರರು) ಆಗಿ ನೇಮಿಸಿಕೊಳ್ಳಲು ಹೆಚ್ಚಿನ ಅವಕಾಶ ನೀಡಲಾಯಿತು. ಆ್ಯಮ್‍ವೇ ಸೇಲ್ಸ್‍ಮನ್ ಮತ್ತು ಊಬರ್, ಓಲಾಗಳಂತಹ ಗಿಗ್ ಕಾರ್ಮಿಕರಿಗೆ ಗುರುತಿಸಿಕೊಳ್ಳಬಹುದಾದ ಉದ್ಯೋಗದಾತ ಇಲ್ಲದಿರುವ ಆರ್ಥಿಕತೆಯನ್ನು ಪರಿಚಯಿಸಲಾಯಿತು. ಇತ್ತೀಚಿನ ಸಮಯದಲ್ಲಿ ಸರಕಾರವು ನೀಮ್ (ಎನ್‍ಇಇಎಮ್ – ನ್ಯಾಷನಲ್ ಎಂಪ್ಲಾಯ್‍ಮೆಂಟ್ ಎನ್‍ಹಾನ್ಸ್‍ಮೆಂಟ್ ಮಿಷನ್) ಎಂಬ ಯೋಜನೆಯನ್ನು ಪ್ರಾರಂಭಿಸಿದೆ, ಇದರಡಿ ‘ಕಲಿಯಿರಿ ಮತ್ತು ಸಂಪಾದಿಸಿ’ ಎಂಬ ಭವ್ಯ ನುಡಿಗಟ್ಟಿನ ಅಡಿಯಲ್ಲಿ ಕಾರ್ಮಿಕರನ್ನು ಹಲವಾರು ವರ್ಷಗಳ ಕಾಲ ಶೋಷಣೆ ಮಾಡುವುದಕ್ಕೆ ಅನುವು ಮಾಡಿಕೊಡುತ್ತದೆ. ಅಲ್ಲಿ ಕಾರ್ಮಿಕರು ಕೆಲಸ ಮಾಡುತ್ತ ತರಬೇತಿ ಪಡೆಯುವ ಪ್ರಕ್ರಿಯೆ ಇದ್ದು, ಆದರೆ ಈ ತರಬೇತಿಯ ಅವಧಿಯಲ್ಲಿ ಕಾರ್ಮಿಕರಿಗೆ ಇರಬೇಕಾದ ಇತರ ಯಾವುದೇ ವೇತನ ಅಥವಾ ಕಾರ್ಮಿಕರಿಗೆ ಇರಬೇಕಾದ ಹಕ್ಕುಗಳಿಗೆ ಮತ್ತು ಸವಲತ್ತುಗಳಿಗೆ ಅರ್ಹರಾಗಿರುವುದಿಲ್ಲ. ಇದರಲ್ಲಿರುವ ಅಡಗಿರುವ ಸಮಸ್ಯೆಯೆಂದರೆ, ಇಂತಹ ‘ತರಬೇತಿ’ಯು ಎಷ್ಟು ವರ್ಷ ಬೇಕಾದರೂ ಮುಂದುವರೆಯಬಹುದು.

ಇದು, 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಪರಿಸ್ಥಿತಿ ಇನ್ನಷ್ಟು ಬದಲಾಯಿತು. ಅಧಿಕಾರಕ್ಕೆ ಬಂದ ಒಂದು ವಾರದೊಳಗೆ ಸಚಿವ ಸಂಪುಟವು ಕಾರ್ಮಿಕ ನೀತಿಗಳನ್ನು ಬದಲಿಸಬೇಕೆಂದು ನಿರ್ಣಯಿಸಿತು. ಇದಕ್ಕೆ ಬೃಹತ್ ಪ್ರತಿರೋಧ ವ್ಯಕ್ತವಾಯಿತು, 2014ರ ಸೆಪ್ಟೆಂಬರ್ 2ರಂದು ಬೃಹತ್ ಮುಷ್ಕರ ಆಯೋಜಿಸಲಾಗುತ್ತು. ಆಗ ಸರಕಾರವು ಯುನಿಯನ್‍ಗಳೊಂದಿಗೆ ಸಮಾಲೋಚನೆ ಮಾಡದೇ ಕೇಂದ್ರ ಸರಕಾರವು ಕಾರ್ಮಿಕ ನೀತಿಗಳಲ್ಲಿ ಯಾವುದೇ ಬದಲಾವಣೆ ತರುವುದಿಲ್ಲ ಎಂದು ಭರವಸೆ ನೀಡಿತು. ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರಲು ಸರಕಾರಕ್ಕೆ ವಿಶೇಷವಾಗಿ ರಾಜ್ಯಸಭೆಯಲ್ಲಿ ಸ್ಪಷ್ಟ ಬಹುಮತ ಇರಲಿಲ್ಲವಾದ್ದರಿಂದ, ಇದು ಕೇವಲ ತನ್ನ ಮರ್ಯಾದೆ ಉಳಿಸಿಕೊಳ್ಳುವ ಸಾಧನ ಆಗಿತ್ತು. ಲೋಕಸಭೆಯಲ್ಲಿ ಎನ್‍ಡಿಎದ ಹಲವು ಮಿತ್ರಪಕ್ಷದವರೂ ಕಾರ್ಮಿಕ ನೀತಿಗಳ ಬದಲಾವಣೆಯ ಪರವಾಗಿರಲಿಲ್ಲ ಹಾಗೂ ಬಿಜೆಪಿಯ ಟ್ರೇಡ್ ಯುನಿಯನ್ (ಬಿಎಂಎಸ್) ಕೂಡ ಈ ತಿದ್ದುಪಡಿಗಳನ್ನು ವಿರೋಧಿಸಿತು. ಹಾಗಾಗಿ ಅವರು ತಮ್ಮ ಪ್ರಸ್ತಾವಿತ ತಿದ್ದುಪಡಿಗಳನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಿತು ಮತ್ತು ಆ ಸಮಿತಿಯು ಈ ತಿದ್ದುಪಡಿಗಳ ವಿರುದ್ಧ ತನ್ನ ವರದಿಯನ್ನು ಸಲ್ಲಿಸಿತು.

ಇಂತಹ ಸಂದರ್ಭದಲ್ಲಿ ಬಿಜೆಪಿಯು ಸಂವಿಧಾನಕ್ಕೆ ವಂಚನೆ ಬಗೆಯಿತು. ಅವರು ತಾವು ಆಡಳಿತದಲ್ಲಿದ್ದ ರಾಜ್ಯಗಳಲ್ಲಿ ಈ ಕಾರ್ಮಿಕ ನೀತಿಗಳಿಗೆ ತಿದ್ದುಪಡಿ ತಂದು, ರಾಷ್ಟ್ರಪತಿ (ಕ್ಯಾಬಿನೆಟ್‍ನ ಸಲಹೆಯ ಮೇರೆಗೆ ಕಾರ್ಯನಿರ್ವಹಿಸಬೇಕಾಗುತ್ತದೆ.) ಒಪ್ಪಿಗೆಯನ್ನು ನೀಡುವಂತೆ ಮಾಡಿತು. ಹಾಗಾಗಿ, ಐಡಿ (ಕೈಗಾರಿಕಾ ವ್ಯಾಜ್ಯ) ಕಾಯಿದೆ, ಕಾರ್ಖಾನೆಗಳ ಕಾಯಿದೆ ಮತ್ತು ಗುತ್ತಿಗೆ ಕಾರ್ಮಿಕ ಕಾಯಿದೆ (ಇದರೊಂದಿಗೆ ಇನ್ನೂ ಕೆಲವು ಕಾಯಿದೆಗಳೂ ಸಹ)ಗಳಿಗೆ ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಇತ್ತೀಚಿಗೆ ಗೋವಾ ಮತ್ತು ಕರ್ನಾಟಕದಲ್ಲಿ ತಿದ್ದುಪಡಿಗಳನ್ನು ತರಲಾಯಿತು. ನೀಮ್(ಎನ್‍ಇಇಎಮ್)ನಂತಹ ಯೋಜನೆಯನ್ನು ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜ್ಯುಕೇಷನ್‍ನ(ಎಐಸಿಟಿಇ) ಅಧಿಸೂಚನೆಯ ಅನುಗುಣವಾಗಿ ಜಾರಿಗೆ ತರಲಾಯಿತು. ಎಐಸಿಟಿಇ ನ ಅಧಿಸೂಚನೆಯು ನೀಮ್ ಪ್ರಶಿಕ್ಷಣಾರ್ಥಿಗಳು ‘ಕೆಲಸಗಾರರು’ ಅಲ್ಲ ಎಂಬ ತೀರ್ಮಾನವನ್ನು ಹೊರಡಿಸಿತು. ಪರಿಣಾಮವಾಗಿ, ಎಐಸಿಟಿಇನ ಈ ಅಧಿಸೂಚನೆಯು ಕಾನೂನಿನ ತಿದ್ದುಪಡಿ ಮಾಡಿದೆ.

ಒಟ್ಟಾರೆಯಾಗಿ, ಮುಂಚೆ ಇದ್ದ ಕಾಂಗ್ರೆಸ್ ಸರಕಾರವೂ ತರಲು ಇಚ್ಛಿಸಿದ್ದ ಆದರೆ ಸಾಂವಿಧಾನಿಕವಾಗಿ ಸಾಧ್ಯವಾಗಿರದಿದ್ದ ಕಾರ್ಮಿಕ ವಿರೋಧಿ ನೀತಿಗಳನ್ನು ಬಿಜೆಪಿಯು ಅಸಂವಿಧಾನಿಕವಾಗಿ ತಂದಿತು.

ನ್ಯಾಯಾಲಯಗಳು ಕಾರ್ಮಿಕರ ಹಕ್ಕುಗಳ ರಕ್ಷಕನ ಕೆಲಸ ಮಾಡಬೇಕಿತ್ತು. ಆದರೆ ಕಾರ್ಮಿಕರು ನ್ಯಾಯಾಲಯಗಳಲ್ಲಿ ಇಟ್ಟಿದ್ದ ಭರವಸೆ ವ್ಯರ್ಥವಾಯಿತು. ಸರ್ವೋಚ್ಚ ನ್ಯಾಯಾಲಯಗಳ ಇತ್ತೀಚಿನ ತೀರ್ಪುಗಳ ಬಗ್ಗೆ ಹೆಚ್ಚು ಹೇಳಬೇಕಿಲ್ಲ; ವಲಸೆ ಕಾರ್ಮಿಕರ ಮತ್ತು ಇತರ ಕಾರ್ಮಿಕರ ವಿಷಯದಲ್ಲಿ ಹಾಗೂ ಪ್ರಶಾಂತ್ ಭೂಷಣ್ ಮತ್ತು ವಿದ್ಯಾರ್ಥಿಗಳ ಪರೀಕ್ಷೆಯ ವಿಷಯದಲ್ಲಿ ಸುಪ್ರೀಮ್ ಕೋರ್ಟ್ ವರ್ತಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಕೇವಲ ಕಾರ್ಮಿಕರ ಮುಂದಷ್ಟೇ ಅಲ್ಲ, ಭಾರತದ ಸಾಮಾನ್ಯ ಜನರ ಕಣ್ಣಿಗೂ ಸರ್ವೋಚ್ಚ ನ್ಯಾಯಾಲಯದ ಸಂಪೂರ್ಣವಾಗಿ ಬಯಲಾಗಿದೆ.

ಇಂತಹ ಕ್ಲಿಷ್ಟ ಸ್ಥಿತಿಯಲ್ಲಿ ಬಂದಿದ್ದು, ಕೋವಿಡ್ ಸಾಂಕ್ರಾಮಿಕ. ಈ ಸಾಂಕ್ರಾಮಿಕದ ಸಮಯದಲ್ಲೂ ಕಾರ್ಮಿಕರ ಮೇಲೆಯೇ ಸಾಂಕ್ರಾಮಿಕ ರೋಗದ ಸಂಪೂರ್ಣ ಭಾರವನ್ನು ಹೊರೆಸುವ ಪ್ರಯತ್ನ ಮಾಡಲಾಗುತ್ತಿದೆ. ಸಿಎಮ್‍ಐಇ (ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ)ಯ ಒಂದು ಅಧ್ಯಯನದ ಪ್ರಕಾರ, ಏಪ್ರಿಲ್ ತಿಂಗಳಿಂದ ಇಲ್ಲಿಯವರೆಗೆ 1ಕೋಟಿ 89 ಲಕ್ಷ ಉದ್ಯೋಗಳು ನಷ್ಟವಾಗಿವೆ. ಉದ್ಯಮಗಳನ್ನು ಉತ್ತೇಜಿಸುವ ನೆಪದಲ್ಲಿ ಕಾರ್ಮಿಕರಿಗೆ ಇರುವ ರಕ್ಷಣೆಗಳನ್ನು ತೆಗೆದುಹಾಕಲು ಕಾರ್ಮಿಕ ಕಾನೂನುಗಳನ್ನು ಬೇಕಾಬಿಟ್ಟಿಯಾಗಿ ಬದಲಿಸಲಾಗುತ್ತದೆ. ಕೋವಿಡ್‍ನ ಕವಚವನ್ನು ಬಳಸಿ, ಹಲವಾರು ಸಾರ್ವಜನಿಕ ಸೆಕ್ಟರ್‍ಗಳನ್ನು, ಕಲ್ಲಿದ್ದಲು ಗಣಿಗಳನ್ನು, ಬಿಪಿಸಿಎಲ್, ಏರ್ ಇಂಡಿಯಾ, ಬ್ಯಾಂಕುಗಳು ಇತ್ಯಾದಿಗಳನ್ನು ಖಾಸಗೀಕರಣಗೊಳಿಸುತ್ತಿದೆ. ಇಂತಹ ಸಂದರ್ಭದಲ್ಲಿ ಇರುವ ದಾರಿ ಒಂದೆ; ದುಡಿಯುವ ವರ್ಗವನ್ನು, ಇತರ ಶೋಷಿತ ಸಮುದಾಯಗಳಾದ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ವಿದ್ಯಾರ್ಥಿಗಳು ಮುಂತಾದವರೆಲ್ಲರನ್ನೂ ಒಗ್ಗೂಡಿಸಿ, ಫ್ಯಾಸಿಸ್ಟ್ ಧೋರಣೆಯ ಮೋದಿ ಸರಕಾರವನ್ನು ಸೋಲಿಸುವ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವದ ಸಲುವಾಗಿ ಹೋರಾಟ ಮಾಡುವುದು. ಇದರಿಂದ ಮಾತ್ರ ಗೌರಿ ಲಂಕೇಶ್‍ಗೆ ಗೌರವ ಸಲ್ಲಿಸಿದಂತಾಗುವುದು ಹಾಗೂ ಅವರ ಕಾರ್ಯದ ಮುಂದುವರಿಕೆಯಾಗುವುದು.

  • ಸಂಜಯ್ ಸಿಂಘ್ವಿ ಮುಂಬೈ ಕೈಕೋರ್ಟಿನಲ್ಲಿ ವಕೀಲರಾಗಿ ಕೆಲಸ ಮಾಡುತ್ತಲೇ ದೇಶದ ಕಾರ್ಮಿಕರ ಪರವಾದ ಹೋರಾಟಗಳಲ್ಲಿ ನಿರಂತರ ಸುತ್ತುವ ಸಂಜಯ್ ಸಿಂಘ್ವಿ, ಟಿಯುಸಿಐನ ರಾಷ್ಟ್ರೀಯ ಕಾರ್ಯದರ್ಶಿಯೂ ಹೌದು

ಇದನ್ನು ಓದಿ: ಪ್ರಶಾಂತ್ ಭೂಷಣ್‌ಗೆ 1 ರೂ ದಂಡ ಅಥವಾ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...