Homeಮುಖಪುಟಟಿಪ್ಪು ಸುಲ್ತಾನರ ಖಡ್ಗದಲ್ಲಿ ಬರೆದಿರುವುದೇನು...?

ಟಿಪ್ಪು ಸುಲ್ತಾನರ ಖಡ್ಗದಲ್ಲಿ ಬರೆದಿರುವುದೇನು…?

- Advertisement -
- Advertisement -

ಮೇ 4, 1799ರಂದು ಮೈಸೂರು ಹುಲಿ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಅಕ್ಷರಶಃ ಹುಲಿಯಂತೆಯೇ ಕಾದಾಡಿ ರಣರಂಗದಲ್ಲಿ ಹುತಾತ್ಮರಾದರು. ಟಿಪ್ಪು ಸುಲ್ತಾನರ ಹುತಾತ್ಮತೆಯೊಂದಿಗೆ ಉಪಖಂಡದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಅಧಿಪತ್ಯ ಸ್ಥಾಪನೆಗಿದ್ದ ಅಡೆ ತಡೆ ಶಾಶ್ವತವಾಗಿ ಇಲ್ಲವಾಯಿತು. ಟಿಪ್ಪು ಹುತಾತ್ಮರಾಗಿ ರಣರಂಗದಲ್ಲಿ ಬಿದ್ಧಾಗ ಅವರ ಕೈಯಲ್ಲಿದ್ದ ಖಡ್ಗವನ್ನು ಬ್ರಿಟಿಷ್ ಸೈನಿಕರು ಎಳೆದುಕೊಂಡು ಹೋದರು. ಅಂತಹದ್ದೇ ಸಾವಿರಾರು ಖಡ್ಗಗಳು ಟಿಪ್ಪು ಸುಲ್ತಾನರ ಆಯುಧ ಮನೆಯಲ್ಲಿತ್ತು. ಅವುಗಳನ್ನೂ ಬ್ರಿಟಿಷರು ದೋಚಿದರು.

ಟಿಪ್ಪು ಸುಲ್ತಾನರು ಹುತಾತ್ಮರಾದಾಗ ಅವರ ಕೈಯಿಂದ ಬ್ರಿಟಿಷ್ ಸೈನಿಕನೋರ್ವ ಎಳೆದು ತೆಗೆದುಕೊಂಡ ಖಡ್ಗವನ್ನು ಲಂಡನ್‌ನ ಮ್ಯೂಸಿಯಂ‌ನಲ್ಲಿಡಲಾಗಿತ್ತು. ಟಿಪ್ಪು ಹುತಾತ್ಮರಾಗಿ ಸುಮಾರು 205 ವರ್ಷಗಳ ಬಳಿಕ ಅಂದರೆ 2004ರಲ್ಲಿ ಉದ್ಯಮಿ ವಿಜಯ್ ಮಲ್ಯ ಹರಾಜಿನಲ್ಲಿ ಒಂದೂವರೆ ಕೋಟಿ ರೂಪಾಯಿ ಪಾವತಿಸಿ ಆ ಖಡ್ಗವನ್ನು ಖರೀದಿಸಿದ್ದರು.
ಆ ಖಡ್ಗದಲ್ಲಿ “ನನ್ನ ಈ ಖಡ್ಗ ಕಾಫಿರರ ನಾಶಕ್ಕಾಗಿ.. ಹೈದರ್ ನನ್ನ ಸಹಾಯಿ… ಅವರು ಕಾಫಿರರ ಕುತಂತ್ರಗಳನ್ನು ನಾಶಪಡಿಸಿದ……” ಹೀಗೆ ಅರಬಿಕ್‌ನಲ್ಲಿ ಬರೆಯಲಾಗಿತ್ತೆಂದು ಟಿಪ್ಪುವಿನ ಕುರಿತಂತೆ ಅಪಪ್ರಚಾರ ಮಾಡುತ್ತಾ ಬರಲಾಗಿದೆ..

ವಾಸ್ತವದಲ್ಲಿ ಆ ಖಡ್ಗದ ಹಿಡಿಕೆಯಲ್ಲಿ ಅರಬಿ ಲಿಪಿಯಲ್ಲಿ ಬರೆದಿರುವುದು “ಯಾ ನಸೀರ್, ಯಾ ಫತಾಹ್, ಯಾ ನಸೀರ್, ಯಾ ಮುಈನ್…” ಎಂಬುದಾಗಿದೆ. ಮತ್ತು ಅದರ ಹಿಡಿಕೆಯ ಎರಡೂ ತುದಿಗಳಲ್ಲಿ ಯಾ ಅಲ್ಲಾಹ್..‌ ಯಾ ಅಲ್ಲಾಹ್… ಎಂದು ಬರೆಯಲಾಗಿದೆ. ಅರಬಿಕ್ ಮತ್ತು ಉರ್ದು ಓದಲು ಬಲ್ಲ ಯಾರು ಬೇಕಾದರೂ ಅಂತರ್ಜಾಲದಲ್ಲಿ ಸಿಗುವ ಆ ಖಡ್ಗದ ಫೋಟೋ ಡೌನ್‌ಲೋಡ್ ಮಾಡಿ ಸುಲಭವಾಗಿ ಓದಬಹುದು..

ಟಿಪ್ಪುವಿನ ಖಡ್ಗದ ಮೇಲಿರುವ ಆ ಅರಬಿಕ್ ಪದಗಳು ಅಲ್ಲಾಹನ ತೊಂಬತ್ತೊಂಬತ್ತು ನಾಮ ವಿಶೇಷಣಗಳಲ್ಲಿ ಕೆಲವಾಗಿದೆ.
ಅವುಗಳ ಅರ್ಥ ಈ ರೀತಿಯಾಗಿದೆ.
ಯಾ ನಸೀರ್ = ಓ ಸಹಾಯ ನೀಡುವವನೇ…
ಯಾ ಫತಾಹ್ = ಓ ಯಶಸ್ಸು ನೀಡುವವನೇ…
ಯಾ ಝಹೀರುಲ್ಲಾಹ್ = ಓ ಬೆಳಕು ತೋರುವವನೇ…
ಓ ಅಲ್ಲಾಹ್…ಓ ಅಲ್ಲಾಹ್..
ಅದರಲ್ಲಿ ಎಲ್ಲೂ ಕಾಫಿರ್ ಎಂಬ ಅರಬಿಕ್‌ ಪದ ಬಳಸಲಾಗಿಲ್ಲ.
ಮತ್ತು ಮುಸ್ಲಿಮರ ವಿಶ್ವಾಸದ ಪ್ರಕಾರ ತಂದೆ- ತಾಯಿಯನ್ನು ಯಾರೂ ದೈವತ್ವಕ್ಕೇರಿಸುವುದಿಲ್ಲ. ಹೈದರ್ ನನಗೆ ಸಹಾಯ ನೀಡುವವನು ಎಂದು ಬರೆಯಲಾಗಿದೆ ಎಂದೂ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ವಾಸ್ತವವಾಗಿ ಅದರಲ್ಲೆಲ್ಲೂ ಹೈದರನ ಹೆಸರೇ ಇಲ್ಲ..

ಅಂತರ್ಜಾಲದಲ್ಲಿ ಟಿಪ್ಪುವಿನ ಖಡ್ಗದಲ್ಲಿ ಬರೆದಿಡಲಾಗಿದೆ ಎನ್ನುವ ವಾಕ್ಯಗಳು ಮೈಸೂರು ಗೆಜೆಟಿಯರ್‌ನದ್ದೆಂದೂ ಇದೆ. ನಿಜಕ್ಕೂ ಮೈಸೂರು ಗೆಜೆಟಿಯರ್‌ನಲ್ಲಿ ಅಂತಹ ವಾಕ್ಯಗಳಿವೆಯೋ ನಾನರಿಯೆ.
………………….

ಟಿಪ್ಪು ಸುಲ್ತಾನರ ಇನ್ನೂ ಕೆಲವು ಖಡ್ಗಗಳನ್ನು ವೀಕ್ಷಿಸಿ ಅವುಗಳಲ್ಲಿ ಬರೆದಿಡಲ್ಪಟ್ಟ ಕೆಲವು ಅರಬಿಕ್ ವಾಕ್ಯಗಳನ್ನು ಓದಿದ ಯೂ ಟ್ಯೂಬರ್ ಒಬ್ಬರು ಅವುಗಳ ಕುರಿತಂತೆ ಯೂ ಟ್ಯೂಬ್‌‌ನಲ್ಲಿ ಉರ್ದು ಭಾಷೆಯ ವೀಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದಾರೆ.
ಎರಡು ಬೇರೆ ಬೇರೆ ಖಡ್ಗಗಳಲ್ಲಿ ಖುರ್‌ಆನಿನ ವಾಕ್ಯಗಳನ್ನು ಬರೆದಿಡಲಾಗಿದೆ.
ಒಂದು ಖಡ್ಗದಲ್ಲಿ ಖುರ್‌ಆನಿನ ಎರಡನೇ ಅಧ್ಯಾಯವಾದ ಸೂರಃ ಅಲ್ ಬಕರಾ ಇದರ ನೂರ ಎಂಟನೇ ವಾಕ್ಯದ ಒಂದು ಭಾಗವನ್ನು ಬರೆಯಲಾಗಿದೆ. ಅದರ ಅರ್ಥ “ನಿಶ್ಚಯವಾಗಿಯೂ ಅಲ್ಲಾಹನು ಸರ್ವಶಕ್ತನು…”

ಇನ್ನೊಂದು ಖಡ್ಗದಲ್ಲಿ ಖುರ್‌ಆನ್‌ನ ಅಸ್ಸ್ವಪ್ಫ್ ಎಂಬ ಇಪ್ಪತ್ತೊಂದನೇ ಅಧ್ಯಾಯದ ವಾಕ್ಯವೊಂದನ್ನು ಬರೆದಿಡಲಾಗಿದೆ. ಅದರ ಅರ್ಥ ಇಂತಿದೆ “ಅಲ್ಲಾಹನ ಸಹಾಯದಿಂದ ಯಶಸ್ಸು ಸನಿಹದಲ್ಲೇ ಇದೆ.. ಅಲ್ಲಾಹನ ಮೇಲೆ ಭರವಸೆ ಇಡುವವನಿಗೆ ಅಲ್ಲಾಹನೇ ಸಾಕು…”
………………

ಟಿಪ್ಪು ಬೇರೆ ರಾಜರುಗಳಂತಲ್ಲ, ಸ್ವಯಂ ರಣರಂಗಕ್ಕಿಳಿದು ಹೋರಾಡುತ್ತಿದ್ದವರು, ಹೋರಾಡುತ್ತಲೇ ಮಡಿದವರು. ಟಿಪ್ಪು ಇಸ್ಲಾಂ ಧರ್ಮಾನುಯಾಯಿಯಾಗಿದ್ದುದರಿಂದ ಸಹಜವಾಗಿಯೇ ತನ್ನ ಸ್ವಂತ ಬಳಕೆಯ ಖಡ್ಗಗಳಲ್ಲಿ ಈ ರೀತಿ ಇಸ್ಲಾಮಿಗೆ ಸಂಬಂಧಿಸಿದ ನಂಬಿಕೆಗಳನ್ನು ಬರೆಸಿದ್ದರೇ ಹೊರತು ವಸಾಹತುಶಾಹಿ ಪರ ಇತಿಹಾಸಕಾರರು, ಬಲಪಂಥೀಯ ಇತಿಹಾಸಕಾರರು ಸುಳ್ಳು ಸುಳ್ಳೇ ದಾಖಲಿಸಿದ ಯಾವುದೇ ಮತೀಯ ದ್ವೇಷದ ಬರಹಗಳೂ‌ ಟಿಪ್ಪುವಿನ ಖಡ್ಗದಲ್ಲಿ ಕಾಣಸಿಗದು. ಈ ಲೇಖನದ ಮೊದಲ ಭಾಗದಲ್ಲೇ ಬರೆದಂತೆ ಅದರಲ್ಲಿ‌ ಟಿಪ್ಪು ತನ್ನ ಆರಾಧ್ಯನಾದ ಅಲ್ಲಾಹನಲ್ಲಿ‌ ತನ್ನ ನಂಬಿಕೆಯ ಪ್ರಕಾರ ಸಹಾಯ ಯಾಚಿಸುವ ಬರಹಗಳಿವೆಯೇ ಹೊರತು ಅದರಲ್ಲಾಗಲೀ, ಬೇರೆ ಯಾವ ಖಡ್ಗದಲ್ಲಾಗಲೀ ಕಾಫಿರರ (ಮುಸ್ಲಿಮೇತರರ) ಕುರಿತಂತಾಗಲೀ, ತನ್ನ ತಂದೆ ಹೈದರ್ ಕುರಿತಾಗಲೀ ಯಾವುದೇ ಪ್ರಸ್ತಾಪವಿಲ್ಲ.

ವಿರೋಧಿಗಳು ಟಿಪ್ಪುವನ್ನು ಎಷ್ಟು ಹಳಿಯುತ್ತಾರೋ.. ಅಷ್ಟು ಟಿಪ್ಪುವಿನ ನಿಜ ವ್ಯಕ್ತಿತ್ವದ ಕುರಿತ ಅಧ್ಯಯನಗಳು ಆಗುತ್ತಲೇ ಇರುತ್ತವೆ.

ನಾನು ಅನೇಕ ಬಾರಿ ಯೋಚಿಸಿದ್ದಿದೆ, ಇನ್ನು ಟಿಪ್ಪುವಿನ ಜನಪರ ಕೆಲಸಗಳು, ಸುಧಾರಣೆಗಳು ಇತ್ಯಾದಿಗಳ ಕುರಿತಂತೆ ಮಾತ್ರ ಬರೆಯಬೇಕು. ಯಾವುದೇ ಕಾರಣಕ್ಕೂ ಟಿಪ್ಪುವಿನ ಧಾರ್ಮಿಕ ನೀತಿಗಳ ಕುರಿತಂತೆ ಬರೆಯಬಾರದು.. ಆದರೆ ಟಿಪ್ಪು ವಿರೋಧಿ ಹಿತಾಸಕ್ತಿಗಳು ಮತ್ತೆ ಮತ್ತೆ ಟಿಪ್ಪುವಿನ ಕುರಿತಂತೆ ಸುಳ್ಳು ಪ್ರಚಾರ ನಡೆಸುವಾಗ ಮತ್ತೆ ಮತ್ತೆ ಅವರ ಅಪ ಪ್ರಚಾರಗಳಿಗೆ ಉತ್ತರ ನೀಡಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ನನಗೆ ಅನೇಕ ಬಾರಿ ಅನ್ನಿಸುವುದಿದೆ “ಇವರು ದುರುದ್ದೇಶಪೂರ್ವಕವಾಗಿಯೇ ಇಂತಹ ಚರ್ಚೆಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ” ಎಂದು. ಇದರಿಂದ ನಮ್ಮ ಚರ್ಚೆಗಳು ಅಲ್ಲಿಯೇ ಗಿರಕಿ ಹೊಡೆಯುತ್ತಾ ಟಿಪ್ಪು ಮಾಡಿದ ಅಪಾರ ಸುಧಾರಣೆಗಳು, ಜನಪರ ಕೆಲಸಗಳು, ಟಿಪ್ಪುವಿನ ಕೊಡುಗೆಗಳು ಚರ್ಚೆಗೆ ಬರದೇ ಇರಲಿ ಎನ್ನುವುದೂ ಅವರ ಹಿಡನ್ ಅಜೆಂಡಾ…
*****

  • ಇಸ್ಮತ್ ಪಜೀರ್

(ಮಂಗಳೂರಿನ ಯುವ ಲೇಖಕರಾದ ಇಸ್ಮತ್ ಪಜೀರ್ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಅದಕ್ಕೆ ರಾಜೀನಾಮೆ ನೀಡಿ ಹೊರಬಂದವರು. ತಮ್ಮದೇ ಆದ ಪಾಲಿಕ್ಲಿನಿಕ್ ನಡೆಸುತ್ತಿದ್ದಾರೆ.)


ಇದನ್ನೂ ಓದಿ: ಟಿಪ್ಪು ಜನ್ಮ ದಿನಾಚರಣೆ: ಮೈಸೂರು ಹುಲಿ ಟಿಪ್ಪುವಿನ ಪುಸ್ತಕ ಪ್ರೇಮ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಟಿಪ್ಪು ಲೀಡರ್ ಅಷ್ಟೇ ಸ್ವತಂತ್ರ ಹೋರಾಟಗಾರ ಅಲ್ಲ..
    ತುಂಬಾ ಜನ ಸ್ವತಂತ್ರ ಹೋರಾಟಗಾರರು ಇದಾರೆ ಅವ್ರನ್ನ ಗುರ್ತಿಸಿ. ಬೆಂಕಿ ಹಚ್ಚುವ ಕೆಲಸ ಮಾಡಬೇಡಿ

  2. Shiyab, mataandharige Tipu hesaru pathyavaagolla yekendare Tipu hedigalante tappoppige patra baredu tanna jeeva rakshisikollolla.

    Itihasadallelloo kaana sigada aparoopada, apratima paraakrami Tipu Sultan.

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...