Homeಮುಖಪುಟನಾವು ಯಾವುದನ್ನು ಮಾಡಬಾರದು? ಯೋಗೇಂದ್ರ ಯಾದವ್

ನಾವು ಯಾವುದನ್ನು ಮಾಡಬಾರದು? ಯೋಗೇಂದ್ರ ಯಾದವ್

- Advertisement -
- Advertisement -

ಹರಿಯಾಣ ರಾಜ್ಯದ ಯೋಗೇಂದ್ರ ಯಾದವ್ ಸಮಾಜವಾದಿ ಚಳವಳಿಯಲ್ಲಿ ಸಕ್ರಿಯವಾಗಿರುತ್ತಲೇ, ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಬೋಧಿಸುತ್ತಿದ್ದರು. ಆದರೆ, ಅವರ ರಾಜಕೀಯ ಶಾಸ್ತ್ರದ ಪರಿಣಿತಿ ಅವರನ್ನು ದೆಹಲಿಗೆ, ಅಲ್ಲಿನ ಸಿಎಸ್‍ಡಿಎಸ್, ಟಿವಿ ಚರ್ಚೆ ಮತ್ತು ಅಂತಿಮವಾಗಿ ನೇರ ರಾಜಕಾರಣಕ್ಕೇ ಎಳೆದು ತಂದಿತು. ರೈತರ ಸಂಕಷ್ಟದ ನಿವಾರಣೆಗೆ ದೇಶಾದ್ಯಂತ ಓಡಾಡಿ ಸಂಘಟಿಸಿದ ಬೃಹತ್ ಹೋರಾಟದ ರೂವಾರಿ ಅವರು. ಇದೀಗ ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರಾಧ್ಯಕ್ಷರು.

ಭಾರತವೆಂಬ ಪರಿಕಲ್ಪನೆಯೇ ಹಿಂದೆಂದೂ ಕಾಣದಂತಹ ಸವಾಲನ್ನು ಎದುರಿಸುತ್ತಿದೆ. 2019ರ ಫಲಿತಾಂಶದ ನಂತರದಲ್ಲಿ ಭಾರತದ ಗಣತಂತ್ರವನ್ನು ಕೆಡವುವುದ ತಪ್ಪಿಸುವುದೇ ನಮ್ಮ ಕಾಲದ ಅತ್ಯಂತ ಜರೂರಿಯಾದ ಕಾರ್ಯವಾಗಿದೆ. ಇದು ನಮ್ಮ ಯುಗಧರ್ಮ. ಈ ತನಕ ಈ ಸವಾಲನ್ನು ಎದುರಿಸುತ್ತಿರುವ ರೀತಿಯಲ್ಲಿ ಒಂದೋ ಬೌದ್ಧಿಕ ಆಲಸ್ಯ, ರಾಜಕೀಯ ಪಕ್ಷಪಾತ ಅಥವಾ ಕೇವಲ ಮೋದಿ ವಿರೋಧದ ಗೀಳುಗಳು ಎದ್ದು ಕಾಣುತ್ತಿವೆ.

ಮೋದಿ ಸರಕಾರಕ್ಕೆ ಎದುರಾಗಿರುವ ವಿರೋಧದ ದೊಡ್ಡ ಸಮಸ್ಯೆಯೆಂದರೆ, ಈ ವಿರೋಧಿಗಳಲ್ಲಿ ಹೊಸ ಆಡಳಿತವು ಯಾವ ಮಟ್ಟಿಗೆ ಸವಾಲೊಡ್ಡಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಸಾಮಥ್ರ್ಯವೇ ಇಲ್ಲ. ಈ ಪರಿವಾರದ ಆಳವಾದ ಬೇರುಗಳನ್ನು ಗುರುತಿಸದೆ, ತಕ್ಷಣದ ಪರಿಹಾರಗಳನ್ನು ಹುಡುಕುವುದರಾಚೆ ತಲೆ ಕೆಡಿಸಿಕೊಳ್ಳದಿರುವ ಸಮಸ್ಯೆ ಗಾಢವಾಗಿದೆ. ಇದುವರೆಗೆ, ಮೋದಿ ಆಡಳಿತಕ್ಕೆ ಬಂದಿರುವ ಪ್ರತಿಕ್ರಿಯೆಗಳು ಮುಂಚೆಯೇ ಊಹಿಸಬಹುದಾದಂಥವು ಮಾತ್ರವೇ ಆಗಿದೆ: ಮೋದಿ ಗುಳ್ಳೆ ತನ್ನಂತೆ ತಾನೇ ಒಡೆದು ಹೋಗಲಿ ಎಂದು ಬಯಸಿ ಕಾಯುವುದು; ಮೋದಿಯನ್ನು ವಿರೋಧಿಸುವುದಕ್ಕಾಗಿ ವಿರೋಧ ಎಂದು ತೋರುವಂತೆ ಪ್ರತಿಕ್ರಿಯಿಸುವುದು; ಅವರು ಯಾವುದರಲ್ಲಿ ಪ್ರಬಲರೋ ಅದೇರೀತಿಯಲ್ಲಿ ಎದುರಿಸುವ ಪ್ರಯತ್ನ; ಜನರ ಕಣ್ಣಲ್ಲಿ ಅಮಾನ್ಯರಾಗಿರುವ ಬಿಜೆಪಿ ವಿರೋಧಿ ಪಕ್ಷಗಳ ಮಹಾಕೂಟ ರಚಿಸುವುದು. ಇವ್ಯಾವುವೂ ಯಶಸ್ವಿಯಾಗುವ ಸಾಧ್ಯತೆಗಳಿಲ್ಲ. ಬಿಜೆಪಿ ವಿರೋಧಿ ಪಕ್ಷಗಳ ಮರ್ಯಾದೆ ಎಷ್ಟು ಹೋಗಿದೆ ಎಂದರೆ, ಈ ತನಕ ಇವರ ಯಾವುದೇ ಮೈತ್ರಿ ಯಶಸ್ವಿಯಾಗಿಲ್ಲ; ಇನ್ನೆಂದಿಗೂ ಯಶಸ್ವಿಯಾಗುವ ಸಾಧ್ಯತೆ ಇಲ್ಲ.

ನರೇಂದ್ರ ಮೋದಿ ಕುರಿತಾದ ಗೀಳಿನಲ್ಲಿ, ಆತನ ಟೀಕಾಕಾರರು, ಆತನನ್ನು ಇನ್ನೂ ದೊಡ್ಡವನನ್ನಾಗಿ ಮಾಡುತ್ತಾರೆ. ಸಕಾರಾತ್ಮಕವಾದ ಏನೇ ಕಂಡರೂ, ಅದರ ಹಿರಿಮೆಯನ್ನು ತನಗೇ ಆರೋಪಿಸಿಕೊಳ್ಳುವ ಮೋದಿಯನ್ನು ವಿರೋಧಿಸುವ ಭರದಲ್ಲಿ ಇವರೇನು ಮಾಡುತ್ತಿದ್ದಾರೆ ಗೊತ್ತೇ? ಕಂಡ ಸಮಸ್ಯೆಗಳಿಗೆಲ್ಲಾ ಮೋದಿಯೇ ಕಾರಣ ಎಂದು ಗೂಬೆ ಕೂರಿಸುತ್ತಾರೆ. ದೇಶದ ಯಾವುದೇ ಮೂಲೆಯಲ್ಲಿ ನಡೆಯುವ ಗುಂಪು ಹತ್ಯೆ ಇರಲಿ, ಕೃಷಿ ನೀತಿಯ ವೈಫಲ್ಯ ಇರಲಿ, ಯಾವುದೇ ಸಮತೋಲನ, ಲೆಕ್ಕಾಚಾರ ಇಲ್ಲದ ಬಜೆಟ್ ಇರಲಿ- ಪ್ರತಿಯೊಂದನ್ನೂ ಪ್ರಧಾನಮಂತ್ರಿಯ ಮೇಲೆ ಹೇರಲಾಗುತ್ತಿದೆ. ಮೋದಿಗೆ ಆತನ ಭಕ್ತರು ಕೊಡುವಷ್ಟೇ ಪ್ರಚಾರವನ್ನು ಆತನ ಟೀಕಾಕಾರರು ಕೊಡುತ್ತಿದ್ದಾರೆ.

ಎರಡನೆಯದಾಗಿ, ಮೋದಿ ವಿರೋಧಿಗಳು ತಕ್ಷಣದ ಪ್ರತಿಕ್ರಿಯೆ (knee-jerk ರಿಯಾಕ್ಷನ್) ನೀಡುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯಾವುದೇ ನೀತಿ ಅಥವಾ ಧೋರಣೆಯು ಅವರ ಸರ್ಕಾರಕ್ಕೇ ಸಂಬಂಧಿಸಿದ್ದಾದ್ದರಿಂದ ನಾವು ಅದನ್ನು ವಿರೋಧಿಸಲೇಬೇಕು. ಆದರೆ, ಈಗ ಅವರ ಸರ್ಕಾರದ ನೀತಿಗಳ ವಿರುದ್ಧ ಬರುತ್ತಿರುವ ವಿಮರ್ಶೆಯು ಆ ನೀತಿಗಳ ವಿರೋಧಕ್ಕಿಂತ ಮೋದಿ ಸರ್ಕಾರದ ಅಡಿಯಲ್ಲಿ ಈ ನೀತಿಗಳು ಬಂದಿವೆ ಎನ್ನುವ ಕಾರಣಕ್ಕೇ ಬರುತ್ತಿದೆ ಎಂದು ನನಗನ್ನಿಸುತ್ತದೆ. ಅಂದರೆ, ಮೋದಿ ಏನೋ ಒಂದನ್ನು ಮಾಡಿದರೆ ನಾವು ವಿಮರ್ಶೆ ಮಾಡುತ್ತೇವೆ. ಒಂದು ವೇಳೆ ಅದನ್ನು ಮಾಡದಿದ್ದರೆ ಇನ್ನೂ ತೀವ್ರವಾಗಿ ವಿಮರ್ಶೆ ಮಾಡುತ್ತೇವೆ. ಇಂತಹ ವಿರೋಧದಿಂದ ಆಗುವ ಸಮಸ್ಯೆಯೇನೆಂದರೆ, ಈ ವಿರೋಧವನ್ನು ಜನಸಾಮಾನ್ಯರು ಒಪ್ಪುವುದಿಲ್ಲ. ಇದು ವಿರೋಧದ ಸಲುವಾಗಿ ವಿರೋಧ ಎಂದು ಸಹಜವಾಗಿಯೇ ಭಾವಿಸುತ್ತಾರೆ.

ಮೂರನೆಯ ಮತ್ತು ಮುಖ್ಯವಾದ ಸಂಗತಿಯೆಂದರೆ, ಮೋದಿ ವಿರೋಧಿಗಳು ನಿರಾಕರಣೆಯ ಭಾವದಲ್ಲಿ ಬದುಕುತ್ತಾರೆ. ಅವರು ಮೋದಿ ಅತ್ಯಂತ ಜನಪ್ರಿಯರು ಎಂಬುದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ ಮತ್ತು ಹಾಗಾಗಿ ಅದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ. 2019ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಮುಂಗಾಣುವುದರಲ್ಲಿನ ವೈಫಲ್ಯವು ಅದಕ್ಕೆ ದೊಡ್ಡ ಉದಾಹರಣೆ. 2018ರ ಉತ್ತರಾರ್ಧದಲ್ಲಿ ಮೋದಿಯ ಜನಪ್ರಿಯತೆ ಕುಗ್ಗಿದ್ದೇನೋ ನಿಜ. ಆದರೆ, ಪುಲ್ವಾಮಾ ಮತ್ತು ಬಾಲಾಕೋಟ್ ನಂತರ ಎಲ್ಲಾ ವಿರೋಧಿ ನಾಯಕರ ಒಟ್ಟು ಜನಪ್ರಿಯತೆಗಿಂತ ಎಷ್ಟೋ ಪಟ್ಟು ಮೋದಿಯ ಜನಪ್ರಿಯತೆ ಹೆಚ್ಚಾಗಿತ್ತು. ಆ ನಂತರ ಚುನಾವಣೆಯಲ್ಲಿ ಸ್ಪರ್ಧೆ ಎಂದೇ ಇರಲಿಲ್ಲ. ಆದರೆ, ಮೋದಿ ವಿರೋಧಿಗಳು ಈ ವಾಸ್ತವಕ್ಕೆ ಹತ್ತಿರವಿರಲಿಲ್ಲ. ಚುನಾವಣಾ ಫಲಿತಾಂಶದ ನಂತರವೂ ಅವರು ನಿರಾಕರಣೆಯಲ್ಲೇ ಇದ್ದಾರೆ. ಬಿಜೆಪಿಯು ಗೆದ್ದಿದೆ ಎಂಬುದನ್ನು ಒಪ್ಪಿಕೊಳ್ಳದೇ, ಜನರು ಮೋದಿಗೆ ಮತ್ತೊಂದು ಅವಕಾಶ ಕೊಡಲು ಬಯಸಿದ್ದಾರೆ ಎನ್ನುವುದಕ್ಕಿಂತ ಇವಿಎಂ ತಿರುಚಿದ್ದರಿಂದಲೇ ಗೆದ್ದಿರುವುದು ಎಂದು ಅವರು ನಂಬುತ್ತಾರೆ.

ಮೋದಿಯ ಜನಪ್ರಿಯತೆ ವಾಸ್ತವ ಎಂಬುದನ್ನು ಒಪ್ಪಿಕೊಳ್ಳುವುಲ್ಲಿನ ಈ ಪ್ರಮಾಣದ ವೈಫಲ್ಯವು ಅದಕ್ಕಿರುವ ಕಾರಣಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಜನಸಾಮಾನ್ಯ ಮತದಾರರು ಒಳ್ಳೆಯ ಕಾರಣಗಳಿಂದಲೇ ಅವರಿಗೆ ಮತ ಹಾಕಿರಬಹುದೆಂಬುದನ್ನು ಒಪ್ಪಿಕೊಳ್ಳಲು ಇವರಿಗೆ ಸಾಧ್ಯವೇ ಇಲ್ಲ. ಅಮೆರಿಕಾದ ಉದಾರವಾದಿಗಳು ಟ್ರಂಪ್‍ಗೆ ಜನರು ಮತ ಹಾಕುವುದನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಬಗೆದಿರುವುದು ಹೇಗೋ, ಇಲ್ಲಿಯೂ ಸಾಮಾನ್ಯ ಭಾರತೀಯ ಮತದಾರರ ಇಂಗಿತವನ್ನು ಅರ್ಥೈಸಲೂ ಇಂಥವರಿಗೆ ಆಗುತ್ತಿಲ್ಲ. ಮೋದಿ ವಿರೋಧಿಗಳು ಸಮಾಜದ ಇತರರಿಂದ ಪ್ರತ್ಯೇಕಿಸಲ್ಪಟ್ಟು ಚಿಕ್ಕದಾದ ಮತ್ತು ಚಿಕ್ಕದಾಗುತ್ತಿರುವ ವರ್ತುಲದಲ್ಲೇ ಇರುತ್ತಾರೆ. ಇದರ ಫಲಿತವೆಂದರೆ ಅವಿಶ್ವಾಸ, ಆತಂಕ, ಕೋಪ ಮತ್ತು ನಿಷ್ಕ್ರಿಯತೆ. ರಾಜಕೀಯ ಪಕ್ಷವಾತಕ್ಕೆ ಇದು ದಾರಿ ಮಾಡಿಕೊಡುತ್ತದೆ.

ನಾವು ಹೊಸದಾಗಿಯೇ ಆರಂಭಿಸಬೇಕು. ನಾವು ಹೊಸ ರಾಜಕೀಯ ಯುಗವನ್ನು ಪ್ರವೇಶಿಸಿದ್ದೇವೆನ್ನುವುದನ್ನು ಒಪ್ಪಿಕೊಳ್ಳಬೇಕು. ನಾವು ಗುರುತಿಸಲಾಗದಷ್ಟು ಪ್ರಮಾಣಕ್ಕೆ ಜನರ ಆದ್ಯತೆಗಳು, ಅಭಿರುಚಿ ಮತ್ತು ಮಾನದಂಡಗಳು ಬದಲಾಗಿವೆ ಎಂಬುದನ್ನು ಗುರುತಿಸಬೇಕು. ನಮ್ಮ ಹಳೆಯ ಪರಿಭಾಷೆಗಳು ಹೊಸ ಪೀಳಿಗೆಯೊಂದಿಗೆ ಕೆಲಸ ಮಾಡುವುದಿಲ್ಲ ಎಂಬುದನ್ನು ಗಮನಿಸಿದರೆ, ನಮ್ಮೆಲ್ಲಾ ತಂತ್ರಗಳು ಆ ಪೀಳಿಗೆಯ ಮುಂದೆ ಬಕ್ಕಾಬೋರಲು ಮಲಗುತ್ತಿರುವುದು ಗೊತ್ತಾಗುತ್ತದೆ. ಈ ಹೊಸ ಪೀಳಿಗೆ ಅಸ್ತಿತ್ವದಲ್ಲಿರುವುದು ವಾಸ್ತವ ಮತ್ತು ನಾವು ಅದನ್ನು ಬಿಟ್ಟು ಬೇರೆಯವರನ್ನು ಆಯ್ಕೆ ಮಾಡಿಕೊಳ್ಳಲಾಗದು. ಹಾಗಾಗಿ ಉಳಿದಿರುವುದು ಒಂದೇ ದಾರಿ. ಅಪಾಯದ ಆಳ ಮತ್ತು ಅದೊಡ್ಡುತ್ತಿರುವ ಸವಾಲನ್ನು ಸರಿಯಾಗಿ ಅಂದಾಜಿಸಿ, ದೀರ್ಘಕಾಲದ ಮುನ್ನೋಟದೊಂದಿಗೆ ಅಲ್ಪಕಾಲೀನ ಮತ್ತು ಮಧ್ಯಕಾಲೀನ ವ್ಯೂಹತಂತ್ರವನ್ನೊಳಗೊಂಡ ಮಾರ್ಗನಕ್ಷೆಯನ್ನು ತಯಾರಿಸುವುದು. ವಿನೂತನ ಉಪಾಯಗಳು ಮತ್ತು ಸ್ಮಾರ್ಟ್ ಆದ ಸಂವಹನದೊಂದಿಗೆ ನಡೆಸಬೇಕಿರುವ ಸಾಂಸ್ಕೃತಿಕ ಸಂಗ್ರಾಮವದು ಎಂದು ಕಡೆಯದಾಗಿ ಹೇಳಬಯಸುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...