Homeಮುಖಪುಟನಾವು ಯಾವುದನ್ನು ಮಾಡಬಾರದು? ಯೋಗೇಂದ್ರ ಯಾದವ್

ನಾವು ಯಾವುದನ್ನು ಮಾಡಬಾರದು? ಯೋಗೇಂದ್ರ ಯಾದವ್

- Advertisement -
- Advertisement -

ಹರಿಯಾಣ ರಾಜ್ಯದ ಯೋಗೇಂದ್ರ ಯಾದವ್ ಸಮಾಜವಾದಿ ಚಳವಳಿಯಲ್ಲಿ ಸಕ್ರಿಯವಾಗಿರುತ್ತಲೇ, ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಬೋಧಿಸುತ್ತಿದ್ದರು. ಆದರೆ, ಅವರ ರಾಜಕೀಯ ಶಾಸ್ತ್ರದ ಪರಿಣಿತಿ ಅವರನ್ನು ದೆಹಲಿಗೆ, ಅಲ್ಲಿನ ಸಿಎಸ್‍ಡಿಎಸ್, ಟಿವಿ ಚರ್ಚೆ ಮತ್ತು ಅಂತಿಮವಾಗಿ ನೇರ ರಾಜಕಾರಣಕ್ಕೇ ಎಳೆದು ತಂದಿತು. ರೈತರ ಸಂಕಷ್ಟದ ನಿವಾರಣೆಗೆ ದೇಶಾದ್ಯಂತ ಓಡಾಡಿ ಸಂಘಟಿಸಿದ ಬೃಹತ್ ಹೋರಾಟದ ರೂವಾರಿ ಅವರು. ಇದೀಗ ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರಾಧ್ಯಕ್ಷರು.

ಭಾರತವೆಂಬ ಪರಿಕಲ್ಪನೆಯೇ ಹಿಂದೆಂದೂ ಕಾಣದಂತಹ ಸವಾಲನ್ನು ಎದುರಿಸುತ್ತಿದೆ. 2019ರ ಫಲಿತಾಂಶದ ನಂತರದಲ್ಲಿ ಭಾರತದ ಗಣತಂತ್ರವನ್ನು ಕೆಡವುವುದ ತಪ್ಪಿಸುವುದೇ ನಮ್ಮ ಕಾಲದ ಅತ್ಯಂತ ಜರೂರಿಯಾದ ಕಾರ್ಯವಾಗಿದೆ. ಇದು ನಮ್ಮ ಯುಗಧರ್ಮ. ಈ ತನಕ ಈ ಸವಾಲನ್ನು ಎದುರಿಸುತ್ತಿರುವ ರೀತಿಯಲ್ಲಿ ಒಂದೋ ಬೌದ್ಧಿಕ ಆಲಸ್ಯ, ರಾಜಕೀಯ ಪಕ್ಷಪಾತ ಅಥವಾ ಕೇವಲ ಮೋದಿ ವಿರೋಧದ ಗೀಳುಗಳು ಎದ್ದು ಕಾಣುತ್ತಿವೆ.

ಮೋದಿ ಸರಕಾರಕ್ಕೆ ಎದುರಾಗಿರುವ ವಿರೋಧದ ದೊಡ್ಡ ಸಮಸ್ಯೆಯೆಂದರೆ, ಈ ವಿರೋಧಿಗಳಲ್ಲಿ ಹೊಸ ಆಡಳಿತವು ಯಾವ ಮಟ್ಟಿಗೆ ಸವಾಲೊಡ್ಡಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಸಾಮಥ್ರ್ಯವೇ ಇಲ್ಲ. ಈ ಪರಿವಾರದ ಆಳವಾದ ಬೇರುಗಳನ್ನು ಗುರುತಿಸದೆ, ತಕ್ಷಣದ ಪರಿಹಾರಗಳನ್ನು ಹುಡುಕುವುದರಾಚೆ ತಲೆ ಕೆಡಿಸಿಕೊಳ್ಳದಿರುವ ಸಮಸ್ಯೆ ಗಾಢವಾಗಿದೆ. ಇದುವರೆಗೆ, ಮೋದಿ ಆಡಳಿತಕ್ಕೆ ಬಂದಿರುವ ಪ್ರತಿಕ್ರಿಯೆಗಳು ಮುಂಚೆಯೇ ಊಹಿಸಬಹುದಾದಂಥವು ಮಾತ್ರವೇ ಆಗಿದೆ: ಮೋದಿ ಗುಳ್ಳೆ ತನ್ನಂತೆ ತಾನೇ ಒಡೆದು ಹೋಗಲಿ ಎಂದು ಬಯಸಿ ಕಾಯುವುದು; ಮೋದಿಯನ್ನು ವಿರೋಧಿಸುವುದಕ್ಕಾಗಿ ವಿರೋಧ ಎಂದು ತೋರುವಂತೆ ಪ್ರತಿಕ್ರಿಯಿಸುವುದು; ಅವರು ಯಾವುದರಲ್ಲಿ ಪ್ರಬಲರೋ ಅದೇರೀತಿಯಲ್ಲಿ ಎದುರಿಸುವ ಪ್ರಯತ್ನ; ಜನರ ಕಣ್ಣಲ್ಲಿ ಅಮಾನ್ಯರಾಗಿರುವ ಬಿಜೆಪಿ ವಿರೋಧಿ ಪಕ್ಷಗಳ ಮಹಾಕೂಟ ರಚಿಸುವುದು. ಇವ್ಯಾವುವೂ ಯಶಸ್ವಿಯಾಗುವ ಸಾಧ್ಯತೆಗಳಿಲ್ಲ. ಬಿಜೆಪಿ ವಿರೋಧಿ ಪಕ್ಷಗಳ ಮರ್ಯಾದೆ ಎಷ್ಟು ಹೋಗಿದೆ ಎಂದರೆ, ಈ ತನಕ ಇವರ ಯಾವುದೇ ಮೈತ್ರಿ ಯಶಸ್ವಿಯಾಗಿಲ್ಲ; ಇನ್ನೆಂದಿಗೂ ಯಶಸ್ವಿಯಾಗುವ ಸಾಧ್ಯತೆ ಇಲ್ಲ.

ನರೇಂದ್ರ ಮೋದಿ ಕುರಿತಾದ ಗೀಳಿನಲ್ಲಿ, ಆತನ ಟೀಕಾಕಾರರು, ಆತನನ್ನು ಇನ್ನೂ ದೊಡ್ಡವನನ್ನಾಗಿ ಮಾಡುತ್ತಾರೆ. ಸಕಾರಾತ್ಮಕವಾದ ಏನೇ ಕಂಡರೂ, ಅದರ ಹಿರಿಮೆಯನ್ನು ತನಗೇ ಆರೋಪಿಸಿಕೊಳ್ಳುವ ಮೋದಿಯನ್ನು ವಿರೋಧಿಸುವ ಭರದಲ್ಲಿ ಇವರೇನು ಮಾಡುತ್ತಿದ್ದಾರೆ ಗೊತ್ತೇ? ಕಂಡ ಸಮಸ್ಯೆಗಳಿಗೆಲ್ಲಾ ಮೋದಿಯೇ ಕಾರಣ ಎಂದು ಗೂಬೆ ಕೂರಿಸುತ್ತಾರೆ. ದೇಶದ ಯಾವುದೇ ಮೂಲೆಯಲ್ಲಿ ನಡೆಯುವ ಗುಂಪು ಹತ್ಯೆ ಇರಲಿ, ಕೃಷಿ ನೀತಿಯ ವೈಫಲ್ಯ ಇರಲಿ, ಯಾವುದೇ ಸಮತೋಲನ, ಲೆಕ್ಕಾಚಾರ ಇಲ್ಲದ ಬಜೆಟ್ ಇರಲಿ- ಪ್ರತಿಯೊಂದನ್ನೂ ಪ್ರಧಾನಮಂತ್ರಿಯ ಮೇಲೆ ಹೇರಲಾಗುತ್ತಿದೆ. ಮೋದಿಗೆ ಆತನ ಭಕ್ತರು ಕೊಡುವಷ್ಟೇ ಪ್ರಚಾರವನ್ನು ಆತನ ಟೀಕಾಕಾರರು ಕೊಡುತ್ತಿದ್ದಾರೆ.

ಎರಡನೆಯದಾಗಿ, ಮೋದಿ ವಿರೋಧಿಗಳು ತಕ್ಷಣದ ಪ್ರತಿಕ್ರಿಯೆ (knee-jerk ರಿಯಾಕ್ಷನ್) ನೀಡುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯಾವುದೇ ನೀತಿ ಅಥವಾ ಧೋರಣೆಯು ಅವರ ಸರ್ಕಾರಕ್ಕೇ ಸಂಬಂಧಿಸಿದ್ದಾದ್ದರಿಂದ ನಾವು ಅದನ್ನು ವಿರೋಧಿಸಲೇಬೇಕು. ಆದರೆ, ಈಗ ಅವರ ಸರ್ಕಾರದ ನೀತಿಗಳ ವಿರುದ್ಧ ಬರುತ್ತಿರುವ ವಿಮರ್ಶೆಯು ಆ ನೀತಿಗಳ ವಿರೋಧಕ್ಕಿಂತ ಮೋದಿ ಸರ್ಕಾರದ ಅಡಿಯಲ್ಲಿ ಈ ನೀತಿಗಳು ಬಂದಿವೆ ಎನ್ನುವ ಕಾರಣಕ್ಕೇ ಬರುತ್ತಿದೆ ಎಂದು ನನಗನ್ನಿಸುತ್ತದೆ. ಅಂದರೆ, ಮೋದಿ ಏನೋ ಒಂದನ್ನು ಮಾಡಿದರೆ ನಾವು ವಿಮರ್ಶೆ ಮಾಡುತ್ತೇವೆ. ಒಂದು ವೇಳೆ ಅದನ್ನು ಮಾಡದಿದ್ದರೆ ಇನ್ನೂ ತೀವ್ರವಾಗಿ ವಿಮರ್ಶೆ ಮಾಡುತ್ತೇವೆ. ಇಂತಹ ವಿರೋಧದಿಂದ ಆಗುವ ಸಮಸ್ಯೆಯೇನೆಂದರೆ, ಈ ವಿರೋಧವನ್ನು ಜನಸಾಮಾನ್ಯರು ಒಪ್ಪುವುದಿಲ್ಲ. ಇದು ವಿರೋಧದ ಸಲುವಾಗಿ ವಿರೋಧ ಎಂದು ಸಹಜವಾಗಿಯೇ ಭಾವಿಸುತ್ತಾರೆ.

ಮೂರನೆಯ ಮತ್ತು ಮುಖ್ಯವಾದ ಸಂಗತಿಯೆಂದರೆ, ಮೋದಿ ವಿರೋಧಿಗಳು ನಿರಾಕರಣೆಯ ಭಾವದಲ್ಲಿ ಬದುಕುತ್ತಾರೆ. ಅವರು ಮೋದಿ ಅತ್ಯಂತ ಜನಪ್ರಿಯರು ಎಂಬುದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ ಮತ್ತು ಹಾಗಾಗಿ ಅದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ. 2019ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಮುಂಗಾಣುವುದರಲ್ಲಿನ ವೈಫಲ್ಯವು ಅದಕ್ಕೆ ದೊಡ್ಡ ಉದಾಹರಣೆ. 2018ರ ಉತ್ತರಾರ್ಧದಲ್ಲಿ ಮೋದಿಯ ಜನಪ್ರಿಯತೆ ಕುಗ್ಗಿದ್ದೇನೋ ನಿಜ. ಆದರೆ, ಪುಲ್ವಾಮಾ ಮತ್ತು ಬಾಲಾಕೋಟ್ ನಂತರ ಎಲ್ಲಾ ವಿರೋಧಿ ನಾಯಕರ ಒಟ್ಟು ಜನಪ್ರಿಯತೆಗಿಂತ ಎಷ್ಟೋ ಪಟ್ಟು ಮೋದಿಯ ಜನಪ್ರಿಯತೆ ಹೆಚ್ಚಾಗಿತ್ತು. ಆ ನಂತರ ಚುನಾವಣೆಯಲ್ಲಿ ಸ್ಪರ್ಧೆ ಎಂದೇ ಇರಲಿಲ್ಲ. ಆದರೆ, ಮೋದಿ ವಿರೋಧಿಗಳು ಈ ವಾಸ್ತವಕ್ಕೆ ಹತ್ತಿರವಿರಲಿಲ್ಲ. ಚುನಾವಣಾ ಫಲಿತಾಂಶದ ನಂತರವೂ ಅವರು ನಿರಾಕರಣೆಯಲ್ಲೇ ಇದ್ದಾರೆ. ಬಿಜೆಪಿಯು ಗೆದ್ದಿದೆ ಎಂಬುದನ್ನು ಒಪ್ಪಿಕೊಳ್ಳದೇ, ಜನರು ಮೋದಿಗೆ ಮತ್ತೊಂದು ಅವಕಾಶ ಕೊಡಲು ಬಯಸಿದ್ದಾರೆ ಎನ್ನುವುದಕ್ಕಿಂತ ಇವಿಎಂ ತಿರುಚಿದ್ದರಿಂದಲೇ ಗೆದ್ದಿರುವುದು ಎಂದು ಅವರು ನಂಬುತ್ತಾರೆ.

ಮೋದಿಯ ಜನಪ್ರಿಯತೆ ವಾಸ್ತವ ಎಂಬುದನ್ನು ಒಪ್ಪಿಕೊಳ್ಳುವುಲ್ಲಿನ ಈ ಪ್ರಮಾಣದ ವೈಫಲ್ಯವು ಅದಕ್ಕಿರುವ ಕಾರಣಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಜನಸಾಮಾನ್ಯ ಮತದಾರರು ಒಳ್ಳೆಯ ಕಾರಣಗಳಿಂದಲೇ ಅವರಿಗೆ ಮತ ಹಾಕಿರಬಹುದೆಂಬುದನ್ನು ಒಪ್ಪಿಕೊಳ್ಳಲು ಇವರಿಗೆ ಸಾಧ್ಯವೇ ಇಲ್ಲ. ಅಮೆರಿಕಾದ ಉದಾರವಾದಿಗಳು ಟ್ರಂಪ್‍ಗೆ ಜನರು ಮತ ಹಾಕುವುದನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಬಗೆದಿರುವುದು ಹೇಗೋ, ಇಲ್ಲಿಯೂ ಸಾಮಾನ್ಯ ಭಾರತೀಯ ಮತದಾರರ ಇಂಗಿತವನ್ನು ಅರ್ಥೈಸಲೂ ಇಂಥವರಿಗೆ ಆಗುತ್ತಿಲ್ಲ. ಮೋದಿ ವಿರೋಧಿಗಳು ಸಮಾಜದ ಇತರರಿಂದ ಪ್ರತ್ಯೇಕಿಸಲ್ಪಟ್ಟು ಚಿಕ್ಕದಾದ ಮತ್ತು ಚಿಕ್ಕದಾಗುತ್ತಿರುವ ವರ್ತುಲದಲ್ಲೇ ಇರುತ್ತಾರೆ. ಇದರ ಫಲಿತವೆಂದರೆ ಅವಿಶ್ವಾಸ, ಆತಂಕ, ಕೋಪ ಮತ್ತು ನಿಷ್ಕ್ರಿಯತೆ. ರಾಜಕೀಯ ಪಕ್ಷವಾತಕ್ಕೆ ಇದು ದಾರಿ ಮಾಡಿಕೊಡುತ್ತದೆ.

ನಾವು ಹೊಸದಾಗಿಯೇ ಆರಂಭಿಸಬೇಕು. ನಾವು ಹೊಸ ರಾಜಕೀಯ ಯುಗವನ್ನು ಪ್ರವೇಶಿಸಿದ್ದೇವೆನ್ನುವುದನ್ನು ಒಪ್ಪಿಕೊಳ್ಳಬೇಕು. ನಾವು ಗುರುತಿಸಲಾಗದಷ್ಟು ಪ್ರಮಾಣಕ್ಕೆ ಜನರ ಆದ್ಯತೆಗಳು, ಅಭಿರುಚಿ ಮತ್ತು ಮಾನದಂಡಗಳು ಬದಲಾಗಿವೆ ಎಂಬುದನ್ನು ಗುರುತಿಸಬೇಕು. ನಮ್ಮ ಹಳೆಯ ಪರಿಭಾಷೆಗಳು ಹೊಸ ಪೀಳಿಗೆಯೊಂದಿಗೆ ಕೆಲಸ ಮಾಡುವುದಿಲ್ಲ ಎಂಬುದನ್ನು ಗಮನಿಸಿದರೆ, ನಮ್ಮೆಲ್ಲಾ ತಂತ್ರಗಳು ಆ ಪೀಳಿಗೆಯ ಮುಂದೆ ಬಕ್ಕಾಬೋರಲು ಮಲಗುತ್ತಿರುವುದು ಗೊತ್ತಾಗುತ್ತದೆ. ಈ ಹೊಸ ಪೀಳಿಗೆ ಅಸ್ತಿತ್ವದಲ್ಲಿರುವುದು ವಾಸ್ತವ ಮತ್ತು ನಾವು ಅದನ್ನು ಬಿಟ್ಟು ಬೇರೆಯವರನ್ನು ಆಯ್ಕೆ ಮಾಡಿಕೊಳ್ಳಲಾಗದು. ಹಾಗಾಗಿ ಉಳಿದಿರುವುದು ಒಂದೇ ದಾರಿ. ಅಪಾಯದ ಆಳ ಮತ್ತು ಅದೊಡ್ಡುತ್ತಿರುವ ಸವಾಲನ್ನು ಸರಿಯಾಗಿ ಅಂದಾಜಿಸಿ, ದೀರ್ಘಕಾಲದ ಮುನ್ನೋಟದೊಂದಿಗೆ ಅಲ್ಪಕಾಲೀನ ಮತ್ತು ಮಧ್ಯಕಾಲೀನ ವ್ಯೂಹತಂತ್ರವನ್ನೊಳಗೊಂಡ ಮಾರ್ಗನಕ್ಷೆಯನ್ನು ತಯಾರಿಸುವುದು. ವಿನೂತನ ಉಪಾಯಗಳು ಮತ್ತು ಸ್ಮಾರ್ಟ್ ಆದ ಸಂವಹನದೊಂದಿಗೆ ನಡೆಸಬೇಕಿರುವ ಸಾಂಸ್ಕೃತಿಕ ಸಂಗ್ರಾಮವದು ಎಂದು ಕಡೆಯದಾಗಿ ಹೇಳಬಯಸುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಚಾಲಕ, ಕಂಡಕ್ಟರ್ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ...

ಜಗತ್ತಿನ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಕೊಳ್ಳುವಷ್ಟು ಕಪ್ಪು ಹಣ ಪ್ರಪಂಚದಲ್ಲಿದೆ: ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್

ಅಕ್ರಮ ಹಣ ವರ್ಗಾವಣೆ (Money Laundering) ಮತ್ತು 'ಡಿಜಿಟಲ್ ಅರೆಸ್ಟ್' ನಂತಹ ಆನ್‌ಲೈನ್ ವಂಚನೆಗಳ ಪ್ರಮಾಣದ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ...

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಬಹಿರಂಗಪಡಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪೆಟ್ರೋಲ್‌ನಲ್ಲಿ ಬೆರೆಸಲಾಗುವ ಎಥನಾಲ್ ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸಬೇಕು ಮತ್ತು ವಾಹನಗಳಿಗೆ ಎಥನಾಲ್ ಮಿಶ್ರಿತ ಇಂಧನದ ಹೊಂದಾಣಿಕೆಯ ಬಗ್ಗೆ ಹೆಚ್ಚಿನ ಪಾರದರ್ಶಕತೆ ತರಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆ...

ದೆಹಲಿ| ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ ಎಂಸಿಡಿ

ದೆಹಲಿ ಹೈಕೋರ್ಟ್ ನಿರ್ದೇಶನದಂತೆ, ಮೊಘಲರ ಕಾಲದ ಐತಿಹಾಸಿಕ ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ನಿರ್ಮಾಣಗಳನ್ನು ಸಮೀಕ್ಷೆ ಮಾಡಿ, ಒತ್ತುವರಿಯನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಯನ್ನು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸೋಮವಾರ (ಆ.31) ಪ್ರಾರಂಭಿಸಿದೆ...

ವೆನೆಜುವೆಲಾ ಮತ್ತೆ ಎದ್ದು ನಿಲ್ಲಲಿದೆ: ಬಂಧನದಲ್ಲಿರುವ ವೆನೆಜುವೆಲಾ ಮಾಜಿ ಅಧ್ಯಕ್ಷ ಮಡುರೊ ಮೊದಲ ಫೋಟೋ ಹಂಚಿಕೆ

ಜನವರಿಯಲ್ಲಿ ಅಮೆರಿಕ ಪಡೆಗಳಿಂದ ಬಂಧನಕ್ಕೊಳಗಾಗಿದ್ದ ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ, ಅಮೆರಿಕದ ಬಂಧನ ಕೇಂದ್ರದಿಂದ ತಮ್ಮ ಎರಡು ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಬಂಧನದ ಬಳಿಕ ಮಡುರೊ ಅವರ ಫೋಟೋಗಳು ಹೊರಬಂದಿರುವುದು...

‘ಮಹಿಳೆಯರು ಆಭರಣದಂತೆ ಮನೆಯಲ್ಲೇ ಇರಬೇಕು’ ಮುಸ್ಲಿಂ ಧರ್ಮಗುರು ವಿವಾದಾತ್ಮಕ ಹೇಳಿಕೆ

ಮಹಿಳೆಯರು ಮನೆಯಲ್ಲೇ ಇರಬೇಕು ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಪ್ರಭಾವಿ ಮುಸ್ಲಿಂ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ...

ಹಲ್ದ್ವಾನಿ ‘ಶುದ್ಧೀಕರಣ’ ವಿವಾದ : ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್‍ಯಾಲಿ ನಡೆದ ಸ್ಥಳದಲ್ಲಿ ಬಿಜೆಪಿ ಬೆಂಬಲಿಗರು 'ಶುದ್ಧೀಕರಣ' ನಡೆಸಿದ ವಿವಾದ ಹೊಸ ರಾಜಕೀಯ ಮತ್ತು ಕಾನೂನು ತಿರುವು ಪಡೆದುಕೊಂಡಿದೆ. ಜಾತಿ ನಿಂದನೆಗೆ ಸಂಬಂಧಿಸಿದಂತೆ...

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...