Homeಮುಖಪುಟಲಾಕ್‌ಡೌನ್‌ ಸಮಯದಲ್ಲಿ ಏನು ಮಾಡಬೇಕು? ಅಭಿಜಿತ್ ಬ್ಯಾನರ್ಜಿ ಹಾಗೂ ಡಫ್ಲೋರವರ 10 ಸಲಹೆಗಳು

ಲಾಕ್‌ಡೌನ್‌ ಸಮಯದಲ್ಲಿ ಏನು ಮಾಡಬೇಕು? ಅಭಿಜಿತ್ ಬ್ಯಾನರ್ಜಿ ಹಾಗೂ ಡಫ್ಲೋರವರ 10 ಸಲಹೆಗಳು

- Advertisement -
- Advertisement -

ಮೂಲ : ಇಂಡಿಯನ್ ಎಕ್ಸ್‌ಪ್ರೆಸ್

ಅನುವಾದ: ಡಾ|ಟಿ.ಎಸ್‌ ವೇಣುಗೋಪಾಲ್‌

ಭಾರತದ ವ್ಯಾಪಾರ ಮುಂದಿನ 21 ದಿನ ಬಂದಾಗಿದೆ. ಇದು ಸಾಕಾಗದಿದ್ದರೆ ಇನ್ನಷ್ಟು ದಿನ ಮುಂದುವರಿಯುತ್ತದೆ. ಪ್ರತಿಯೊಬ್ಬರು ಮನೆಯಲ್ಲಿ ಉಳಿಯಬೇಕು. ಇದರರ್ಥ ನಿಜವಾಗಿ ಏನು ಅಂತ ಅರ್ಥಮಾಡಿಕೊಳ್ಳಲು ಹೆಣಗುತ್ತಿದ್ದೇವೆ. ಕಟ್ಟಡ ನಿರ್ಮಿಸುವ ವಲಸೆ ಕಾರ್ಮಿಕರು ಈಗ ಮುಚ್ಚಿರುವ ಕೆಲಸದ ಸ್ಥಳಗಳಲ್ಲಿ, ನಿರ್ಮಾಣದ ಸಮಯದಲ್ಲಿ ಕಟ್ಟಿಕೊಂಡಿದ್ದ ತಾತ್ಕಾಲಿಕ ಮನೆಗಳಲ್ಲಿ ಹೇಗೆ ಉಳಿಯುತ್ತಾರೆ? ಅಥವಾ ಈಗ ಅವರೆಲ್ಲಾ ಮನೆಗೆ ಹಿಂತಿರುಗಿ ಹೋಗಬೇಕಾ? ಈಗ ರೈಲುಗಳು ಬೇರೆ ಸಂಚರಿಸುತ್ತಿಲ್ಲ. ನೂರಾರು ಜನ ದೆಹಲಿಯಿಂದ ಬಿಹಾರಿಗೆ ನಡೆದುಕೊಂಡೇ ಹೋಗುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ. ಅವರೆಲ್ಲಾ ದಾರಿಯಲ್ಲಿ ರಾತ್ರಿಯ ಹೊತ್ತು ಎಲ್ಲೋ ಗೊತ್ತಿಲ್ಲದ ಪುಟ್ಟ ಅನಧಿಕೃತ ಜಾಗದಲ್ಲಿ, ಇಕ್ಕಟ್ಟಿನಲ್ಲಿ ಮಲಗುತ್ತಾರೆ. ಆಗ ಅವರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತಾರೆ ಅಂತ ಭಾವಿಸಿಕೊಳ್ಳಬೇಕಾ? ದೆಹಲಿಯಿಂದ ಧರ್ಭಂಗಾಕ್ಕೆ 25 ಚದುರ ಅಡಿ ಜಾಗವಿರುವ ಟ್ರಕ್ಕಿನಲ್ಲಿ 25 ಜನ ಕುಳಿತುಕೊಂಡು ಹೋಗುವ ಬದಲು ನಡೆದುಕೊಂಡು ಹೋದರಲ್ಲಾ ಎಂದು ಅವರನ್ನು ದೂಷಿಸಬೇಕಾ?

ಮುಂಬೈನಲ್ಲಿ ಬಿಸಿಲು ಈಗಾಗಲೇ 30 ಡಿಗ್ರಿ ದಾಟಿದೆ, ಇನ್ನೂ ಏರುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಅವರಿರುವ ಹತ್ತು ಅಡಿ ಅಗಲದ ಟಿನ್ ಗೂಡಿನಲ್ಲಿ 6 ಜನ ಒಟ್ಟೊಟ್ಟಿಗೆ ಮಲಗುವುದಕ್ಕೆ ಸಾಧ್ಯವೇ? ಅಷ್ಟರಲ್ಲೇ ಅವರು ಅಡುಗೆ ಮಾಡಿಕೊಳ್ಳಬೇಕು, ಅಲ್ಲೇ ಮಲಗಬೇಕು? ಸಂಜೆ ತಂಪಾದ ಮೇಲೆ ಹತ್ತಿರದ ಪಾರ್ಕಿಗೆ ಹೋಗುವ ಅವಕಾಶವೂ ಇಲ್ಲ, ಅಥವಾ ಫೋನ್ ಬಂದಾಗ ಹತ್ತಿರವಿರುವ ಮರದ ನೆರಳಿನಲ್ಲಿ ನಿಂತು ಮಾತನಾಡುತ್ತಿದ್ದ ಸುಖವೂ ಇಲ್ಲದಿರುವ ಈ ಹೊತ್ತಿನಲ್ಲಿ ಮುಂಬಯಿನಲ್ಲಿ ಧಾರವಿಯ ನಿವಾಸಿಗಳು ಊರಿಗೆ ಹೋಗಬೇಕೆಂದುಕೊಂಡರೆ ತಪ್ಪಾ?

ಇಟ್ಟುಕೊಂಡಿರುವ ಅಲ್ಪಸ್ವಲ್ಪ ಹಣ ಖಾಲಿಯಾದಾಗ ಏನು ಮಾಡುವುದು? ಬಹುಪಾಲು ಭಾರತೀಯರಿಗೆ ಕೆಲಸವಿಲ್ಲದೇ ಹೋದಾಗ ಖಾತರಿಯಾದ ವರಮಾನವಿರುವುದಿಲ್ಲ. ಉಳಿಸಿದ್ದೆಲ್ಲಾ ಖಾಲಿಯಾಗಿಬಿಟ್ಟಾಗಿ ಅವರು ಏನು ಮಾಡಬೇಕು? ಮನೆಯವರಿಗೆ ಊಟದ ಖರ್ಚಿಗಾಗೆ ಒಂದಿಷ್ಟು ಹಣ ಹುಡುಕಿಕೊಂಡು ಮನೆಯಿಂದಾಚೆಗೆ ಹೋದರೆ ಯಾರನ್ನು ಬಯ್ಯೋಣ? ಆಗ ಕೇವಲ ಗೊಂದಲವಷ್ಟೇ ಸಾಧ್ಯ? ಕರ್ನಾಟಕದಲ್ಲಿ ನಡೆಸಿದ ಒಂದು ದಿಢೀರ್ ಸಮೀಕ್ಷೆಯಿಂದ ಖಾಯಿಲೆಯ ಬಗ್ಗೆ ಜನರಿಗೆ ಸಾಕಷ್ಟು ಮಾಹಿತಿ ಇದೆ ಅನ್ನೋದು ತಿಳಿಯಿತು. ಆದರೆ ಏನು ಮಾಡಬಾರದು ಅನ್ನುವುದರ ಬಗ್ಗೆ ಮಾತ್ರ ಒಂದೇ ರೀತಿಯ ತಿಳುವಳಿಕೆ ಇಲ್ಲ. ಇದರರ್ಥ ಈಗ ಅನುಸರಿಸುತ್ತಿರುವ ಕ್ರಮ ತಪ್ಪು ಅಂತಲ್ಲ. ಆದರೆ ಈ ಕ್ರಮಗಳು ಪರಿಪೂರ್ಣವಾಗಿ ಅಥವಾ ಸರಿಯಾಗಿ ಜಾರಿಯಾಗದೇ ಇರಬಹುದು ಅಂತ ಅಷ್ಟೆ.

ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಏನಾಗಬಹುದು, ಅದಕ್ಕೆ ಯಾವ ಕ್ರಮ ತೆಗೆದುಕೊಳ್ಳಬಹುದು ಎನ್ನುವುದಕ್ಕೆ ಸಂಬಂಧಿಸಿದಂತೆ ಆಚರಣೆಯಲ್ಲಿ ಕೆಲವು ಸಮಸ್ಯೆಗಳಿವೆ. ಅದರಿಂದ ಹಲವು ಪ್ರಮುಖ ಪರಿಣಾಮಗಳಾಗುತ್ತವೆ.

ಮೊದಲನೆಯದಾಗಿ ಲಾಕ್‌ಡೌನ್ ಪರಿಣಾಮಕಾರಿಯಾದರೂ ಮತ್ತು ಸೋಂಕಿನ ಏರಿಕೆಯ ರೇಖೆ ಸ್ಥಗಿತಗೊಂಡರೂ, ಖಾಯಿಲೆ ಹರಡುವುದು ನಿಂತರೂ, ಖಾಯಿಲೆ ತನ್ನ ಪರಿಧಿಯನ್ನು ವಿಸ್ತರಿಸುವುದು ನಿಲ್ಲುವುದಿಲ್ಲ. ಯಾಕೆಂದರೆ ನಮಗೆ ಗೊತ್ತಿಲ್ಲದ ಸೋಂಕಿಗೆ ಒಳಗಾದವರು ಇದ್ದಾರೆ. ಅವರು ಅದನ್ನು ಹೊಸಬರಿಗೆ ತಗಲಿಸುವ ಸಾಧ್ಯತೆ ಇದೆ. ಖಾಯಿಲೆ ಸುಮಾರು ಎರಡು ವಾರ ಸುಪ್ತವಾಗಿಯೇ (ಡಾರ್ಮೆಂಟ್) ಉಳಿದಿರಬಹುದೆಂಬ ಅಂದಾಜಿದೆ. ಖಾಯಿಲೆಯ ನೇರ ಸಂಪರ್ಕವಿರುವವರನ್ನು ಮಾತ್ರ ಪರೀಕ್ಷಿಸಲಾಗುತ್ತಿದೆ. ಅಗೋಚರ ವಾಹಕರನ್ನು ಗುರುತಿಸುವುದು ಸುಲಭವಲ್ಲ. ಹೀಗೆ ಅಗೋಚರವಾಗಿ ಉಳಿದಿರುವ ವಾಹಕರು ಹೆಚ್ಚಾಗಿಯೇ ಇರಬಹುದು. ದೆಹಲಿಯಿಂದ ಊರಿಗೆ ಬಂದವನಿಗೆ ಅದು ಇದೆ ಎಂದು ಗೊತ್ತಾಗುವ ಮೊದಲೇ ಮನೆಯವರಿಗೆಲ್ಲಾ ಹರಡಿಬಿಡಬಹುದು.

ಎರಡನೆಯದಾಗಿ ಕೆಲವು ಕಡೆಗಳಲ್ಲಿ ಒಮ್ಮೆ ಸೋಂಕು ಬಂದುಬಿಟ್ಟರೆ ಅದು ಹರಡುವುದನ್ನು ತಪ್ಪಿಸುವುದು ತುಂಬಾ ಕಷ್ಟವಾಗಬಹುದು. ಪರಿಣಾಮಕಾರಿಯಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಾಗಲಿ, ಸಂಪೂರ್ಣ ಲಾಕ್‌ಡೌನ್ ಆಗಲಿ ಸಾಧಿಸುವುದು ಕಠಿಣವಾಗುತ್ತದೆ. ಉದಾಹರಣೆಗೆ ನಗರದಲ್ಲಿನ ಸ್ಲಮ್ಮುಗಳು.
ಮೂರನೆಯದಾಗಿ ಸೋಂಕು ಹಲವರಿಗೆ ತಗಲುವ ಮೊದಲೇ ಲಾಕ್‌ಡೌನ್ ಪ್ರಾರಂಭವಾಗಿರುವುದರಿಂದ ಹೆಚ್ಚು ಕಮ್ಮಿ ಯಾರಿಗೂ ಇಮ್ಯೂನಿಟಿ ಬೆಳೆದಿರುವ ಸಾಧ್ಯತೆ ಕಡಿಮೆ. ಅಂದರೆ ಮುಂದಿನ ಮೂರು ವಾರಗಳಲ್ಲಿ ಸೋಂಕನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡದೇ ಹೋದರೆ ಕರ್ಫ್ಯೂ ತೆಗೆದ ತಕ್ಷಣ ಸೋಂಕು ವೇಗವಾಗಿ ಹರಡುವ ಸಾಧ್ಯತೆ ಹೆಚ್ಚು. ಅಂದರೆ ಕರ್ಫ್ಯೂ ಉಪಯೋಗವಿಲ್ಲ ಅಂತ ಅರ್ಥವಲ್ಲ. ಇದರಿಂದ ಸರಿಯಾಗಿ ಯೋಜನೆ ಮಾಡಿಕೊಳ್ಳುವುದಕ್ಕೆ ಸಮಯಾಕಾಶ ಸಿಕ್ಕಿದೆ. ಮುಂದಿನ ಕೆಲವು ವಾರ ಸೋಂಕಿನ ಸಂಖ್ಯೆಯನ್ನು ಮಿತಗೊಳಿಸುವುದಕ್ಕೆ ಸಹಾಯವಾಗಿದೆ. ಆದರೆ ಸಮಸ್ಯೆ 21ದಿನವೂ ನಮ್ಮೊಂದಿಗೇ ಇರುತ್ತದೆ. ಅದರಿಂದ ನಾವು ಮುಂದಿನ ಕೆಲತಿಂಗಳಲ್ಲಿ ದೂರದ ಗ್ರಾಮೀಣ ಪ್ರದೇಶಗಳು ಸೇರಿದಂತೆ ದೇಶದ ಎಲ್ಲಾ ಕಡೆಗಳಲ್ಲಿ ಸೊಂಕು ಸ್ಪೋಟಗೊಳ್ಳುವ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಿರಬೇಕು. ಅದಕ್ಕಿಂತ ಹೆಚ್ಚಾಗಿ ಸೋಂಕು ಹರಡುವ ಸಾಧ್ಯತೆ ಇರುವ ಈ ಅಪಾಯಕಾರಿ ಪ್ರದೇಶಗಳೆಲ್ಲವೂ ಆರೋಗ್ಯ ವ್ಯವಸ್ಥೆ ತುಂಬಾ ದುರ್ಬಲವಾಗಿರುವ ಪ್ರದೇಶಗಳು. ಚೀನಾಗೆ ಹೋಲಿಸಿದರೆ ನಮ್ಮಲ್ಲಿ ಸರಾಸರಿ ತಲಾ 1/8 ಆಸ್ಪತ್ರೆಗಳಿವೆ. ಅದೇ ತುಂಬಾ ಆತಂಕಕಾರಿಯಾಗಿರುವ ವಿಷಯ. ಆದರೆ ಈ ಆರೋಗ್ಯ ಕೇಂದ್ರಗಳು ಕೂಡ ಮುಂದುವರಿದ ಪ್ರದೇಶಗಳಲ್ಲೇ ಕೇಂದೀಕೃತವಾಗಿವೆ.

ಭಾರತದಲ್ಲಿ ಇಂದಿಗೂ ಹೆಚ್ಚಿನಂಶ ಸೂಕ್ತ ವೈದ್ಯಕೀಯ ಶಿಕ್ಷಣವಿಲ್ಲದ ವೈದ್ಯರೇ ದಿನನಿತ್ಯದ ಆರೋಗ್ಯ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರಿಗೆ ಕನಿಷ್ಠ ಕೆಲವು ಪರಿಚಿತ ಖಾಯಿಲೆಗಳಿಗೆ ಏನು ಮಾಡಬೇಕೆಂಬುದು ಗೊತ್ತಿದೆ. ಕೋವಿಡ್-೧೯ ಇರುವ ರೋಗಿಗಳು ಅವರ ಬಳಿಗೆ ಹೋಗುತ್ತಾರೆ. ಅವರಿಗೆ ಅದನ್ನು ಗುರುತಿಸುವುದಕ್ಕೇ ಆಗಲಿ ಅಥವಾ ಅದಕ್ಕೆ ಚಿಕಿತ್ಸೆಯಾಗಲೀ  ಗೊತ್ತಿರುವುದಿಲ್ಲ. ಕೊನೆಗೆ ಅವರು ಆಸ್ಪತ್ರೆಗಳಿಗೆ ಹೋಗುತ್ತಾರೆ. ಹೋಗುವಾಗ ದಾರಿಯಲ್ಲಿ ಹಲವರಿಗೆ ಖಾಯಿಲೆ ಹರಡಿರುತ್ತಾರೆ.

ದುರಂತವನ್ನು ತಪ್ಪಿಸುವುದಕ್ಕೆ ಏನು ಮಾಡಬಹುದು? ಹತ್ತು ಅಂಶಗಳು

ಮೊದಲನೆಯದಾಗಿ ಕುಟುಂಬದಲ್ಲಿ ಒಬ್ಬನಿಗಾದರೂ ಖಾಯಿಲೆಯ ಲಕ್ಷಣಗಳು ಗೊತ್ತಿರುವಂತೆ ನೋಡಿಕೊಳ್ಳಬೇಕು.

ಎರಡನೆಯದಾಗಿ ಎಲ್ಲಾ ರೀತಿಯ ಕ್ರಮಗಳನ್ನೂ, ಎಚ್ಚರಿಕೆಗಳನ್ನೂ ತೆಗೆದುಕೊಂಡರೂ ಕೆಲವರಿಗೆ ಸೋಂಕು ತಗುಲಬಹುದು ಎಂಬ ತಿಳುವಳಿಕೆ ಎಲ್ಲರಲ್ಲೂ ಮೂಡಬೇಕು. ಅವರನ್ನು ಹೊರಗಿಡುವುದಾಗಲಿ, ಮುಚ್ಚಿಡುವುದಾಗಲಿ ಆಗಬಾರದು. ಈಗ ಮುಖ್ಯವಾಗಿ ಬೇಕಾಗಿರುವುದು ನಿಷ್ಠಾವಂತ ವರದಿ.

ಮೂರನೆಯದಾಗಿ ವರದಿ ಮಾಡುವುದಕ್ಕೆ ವಿಭಿನ್ನ ದಾರಿಗಳು ಇರಬೇಕು. ಉದಾಹರಣೆಗೆ ಹಾಟ್‌ಲೈನ್, ಆಶಾ ಹೀಗೆ ಹಲವು ದಾರಿಗಳನ್ನು ಕಂಡುಕೊಳ್ಳಬೇಕು.

ನಾಲ್ಕನೆಯದಾಗಿ, ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ ರೋಗಲಕ್ಷಣ ಗುರುತಿಸುವುದಕ್ಕೆ ತರಬೇತಿ ನೀಡಬೇಕು. ಮತ್ತು ಸೋಂಕಿನ ಸೂಚನೆಗಳು ಕಂಡೊಡನೆ ಅವರು ಸೂಕ್ತ ಅಧಿಕಾರಿಗಳಿಗೆ ವರದಿ ಮಾಡಬೇಕು.

ಐದನೆಯದಾಗಿ, ಹಾಗೆ ವರದಿಯಾದ ಪ್ರಕರಣಗಳನ್ನು ತಕ್ಷಣ ಕ್ರೋಢೀಕರಿಸಬೇಕು. ಆಗ ನಮಗೆ ಹೊಸ ಆಪಾಯಕಾರಿ ಸ್ಥಳಗಳು ಯಾವುವು ಎಂಬುದು ತಿಳಿಯುತ್ತದೆ. ದೇಶಾದ್ಯಂತ ದೊರೆತ ಅಂತಹ ಪುರಾವೆಗಳನ್ನು ಕ್ರೋಢೀಕರಿಸಿದಾಗ ಒಟ್ಟಾರೆ ಸೋಂಕು ಯಾವ ಹಾದಿಯಲ್ಲಿ ಸಾಗುತ್ತಿದೆ ಎಂಬುದು ತಿಳಿಯುತ್ತದೆ.

ಆರನೆಯದಾಗಿ, ಪ್ರತಿ ರಾಜ್ಯದಲ್ಲೂ ಆರೋಗ್ಯ ವೃತ್ತಿನಿರತರ, ವೈದ್ಯರ ಹಾಗೂ ನರ್ಸುಗಳ ಒಂದು ತಂಡವನ್ನು ಕಟ್ಟಬೇಕು. ಪ್ರತಿಯೊಂದು ತಂಡದಲ್ಲೂ ಸಾಕಷ್ಟು ಪರೀಕ್ಷೆಯ ಕಿಟ್ಟುಗಳು, ಸಾಧ್ಯವಾದರೆ ವೆಂಟಿಲೇಟರುಗಳು ಮತ್ತು ಇತರ ಉಪಕರಣಗಳು ಇರಬೇಕು. ಇದರ ಉದ್ದೇಶವೆಂದರೆ ಪಕ್ಕದ ಪ್ರದೇಶಗಳು ಮತ್ತು ರಾಜ್ಯಗಳು ಸೇರಿದಂತೆ ಎಲ್ಲಿ ಸೋಂಕು ಹೆಚ್ಚು ವೇಗವಾಗಿ ಹರಡುತ್ತಿದೆ ಎಂಬ ವರದಿ ಬರುತ್ತದೆಯೋ ಅಲ್ಲೆಲ್ಲಾ ತಕ್ಷಣ ಈ ತಂಡದ ಒಂದು ಭಾಗವನ್ನು ಕಳಿಸಿಕೊಡುವುದಕ್ಕೆ ನೇಮಿಸುವುದಕ್ಕೆ ಸಾಧ್ಯವಾಗಬೇಕು. ಈಗಿನ ಲಾಕ್‌ಡೌನ್ ಯಶಸ್ವಿಯಾದರೆ, ಒಂದು ದೊಡ್ಡ ದುರಂತ ಸಂಭವಿಸದೇ ಹೋಗಬಹುದು. ಅದರ ಬದಲು ಬೇರೆ ಬೇರೆ ಸಮಯದಲ್ಲಿ ಸಣ್ಣ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಳ್ಳಬಹುದು. ಈ ಸಾಧ್ಯತೆ ತುಂಬಾ ಹೆಚ್ಚು. ಈ ಸಮಯದಲ್ಲಿ ಒಂದೇ ತಂಡವನ್ನು ವಿಭಿನ್ನ ಸ್ಥಳಗಳಲ್ಲಿ ಬಳಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಏಳನೆಯದಾಗಿ, ಇಂತಹ ಒಂದು ತಂಡವನ್ನು ಕಟ್ಟುವುದಕ್ಕೆ, ಮತ್ತು ಅದರಲ್ಲಿ ಎಲ್ಲಾ ಅವಶ್ಯಕ ಸಾಧನಗಳನ್ನು ಇರುವಂತೆ ವ್ಯವಸ್ಥೆ ಮಾಡುವುದಕ್ಕೆ ಸಾಧ್ಯವಾಗಬೇಕಾದರೆ ಎಲ್ಲಾ ಆರೋಗ್ಯ ವೃತ್ತಿನಿರತರನ್ನು ಸೇರಿಸಿಕೊಳ್ಳಬೇಕು. ಕೇವಲ ಸರ್ಕಾರದ ಸೇವೆಯಲ್ಲಿ ಇರುವವರು ಮಾತ್ರವಲ್ಲ. ಅವಶ್ಯಕತೆಗೆ ತಕ್ಕಂತೆ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳನ್ನು ಬಳಸಿಕೊಳ್ಳುವ ಹಕ್ಕು ಆ ತಂಡಕ್ಕೆ ಇರಬೇಕು.

ಎಂಟನೆಯದಾಗಿ, ಸಾಮಾಜಿಕ ವರ್ಗಾವಣೆ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಹೆಚ್ಚೆಚ್ಚು ಧೈರ್ಯ ತೋರಬೇಕು. ಇಲ್ಲದೇ ಹೋದರೆ ಬೇಡಿಕೆಯ ಬಿಕ್ಕಟ್ಟು ಒಂದು ದೊಡ್ಡ ಆರ್ಥಿಕ ಪ್ರಪಾತಕ್ಕೆ ನಮ್ಮನ್ನು ತಳ್ಳುತ್ತದೆ. ಆಗ ಜನರಿಗೆ ಆಜ್ಞೆಗಳನ್ನು ಮೀರುವುದನ್ನು ಬಿಟ್ಟು ಬೇರೆ ದಾರಿಯೇ ಉಳಿಯುವುದಿಲ್ಲ. ಈಗ ಸರ್ಕಾರ ನೀಡುತ್ತಿರುವ ಧನಸಹಾಯ ತೀರಾ ಕಡಿಮೆ. ಹೆಚ್ಚೆಂದರೆ ಕೆಲವು ಸಾವಿರ ರೂಪಾಯಿಗಳು. ಆ ಜನ ಈಗಾಗಲೇ ಅದಕ್ಕಿಂತ ಹೆಚ್ಚನ್ನು ಕೆಲವೇ ದಿನಗಳಲ್ಲಿ ಖರ್ಚು ಮಾಡಿದ್ದಾರೆ. ಅವರು ಕೆಲಸಕ್ಕೆ ಹೊರಗೆ ಹೋಗದಂತೆ ಮಾಡಲು ಮತ್ತು ಆ ಮೂಲಕ ಖಾಯಿಲೆ ಹರಡುವುದನ್ನು ತಪ್ಪಿಸಬೇಕಾದರೆ ಬಹುಶಃ ಅವರಿಗೆ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ.

ಒಂಭತ್ತೆನೆಯದಾಗಿ ಯೋಜನೆಗಳಿಗೆ ಸಂಬಂಧಿಸಿದಂತೆ ಹಲವು ಗೊಂದಲಗಳಿವೆ (ರೈತರು ಅಂದರೆ ಯಾರು?), ಬಿಸಿನೆಸ್ ಆಸ್ ಯೂಷುವಲ್ ಯೋಜನೆಗೆ, ಅರ್ಹತೆಗೆ ಸಂಬಂದಿಸಿದಂತೆ ಹಲವು ಸಮಸ್ಯೆಗಳಿವೆ. ಯೋಜನೆಗಳನ್ನು ಕೆಲವರಿಗಷ್ಟೇ ಸೀಮಿತಗೊಳಿಸದೆ ಸಾರ್ವತ್ರಿಕವಾಗಿ ಎಲ್ಲರಿಗೂ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು. ದುರುಪಯೋಗ ಆಗುವುದನ್ನು ತಪ್ಪಿಸಬೇಕು. (ಹಾಗೆ ಅನುಕೂಲ ಪಡೆದುಕೊಂಡವರ ಪಟ್ಟಿಯನ್ನು ಪ್ರಕಟಿಸಬೇಕು. ಆಗ ಫಲಾನುಭವಿಗಳು ಯಾರು ಎಂದು ಎಲ್ಲರಿಗೂ ತಿಳಿಯುತ್ತದೆ.). ಸರ್ಕಾರ ಹೆಮ್ಮೆ ಪಡುವ ಜಾಮ್ (ಜನ್ ಧನ್, ಆಧಾರ್, ಮೊಬೈಲ್) ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕೆ ಇದು ಖಂಡಿತವಾಗಿಯೂ ಸಕಾಲ. ನಗದನ್ನು ನೇರವಾಗಿ ಜನರ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು. ಅದರ ಮಾಹಿತಿ ಪಡೆದವರಿಗೆ ತಲುಪಬೇಕು.

ಅಂತಿಮವಾಗಿ ಈ ಸಮರದ ಪ್ರಯತ್ನವನ್ನು ಸೂಕ್ತವಾದ ಒಂದು ವ್ಯಾಕ್ಸಿನ್ ದೊರೆಯುವ ತನಕ ಮುಂದುವರಿಸಲು ತಯಾರಿರಬೇಕು. ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಉತ್ತಮಗೊಳಿಸುವುದಕ್ಕೆ ಪ್ರಾರಂಭಿಸೋಣ. ಆಗ ಮುಂದಿನ ಸಲ ಇದನ್ನು ಎದುರಿಸುವುದಕ್ಕೆ ಹೆಚ್ಚು ಸಿದ್ಧರಿರುತ್ತೇವೆ.

*****

(ಬ್ಯಾನರ್ಜಿ ಮತ್ತು ಡಫ್ಲೋ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...