Homeಮುಖಪುಟಲಾಕ್‌ಡೌನ್‌ ಸಮಯದಲ್ಲಿ ಏನು ಮಾಡಬೇಕು? ಅಭಿಜಿತ್ ಬ್ಯಾನರ್ಜಿ ಹಾಗೂ ಡಫ್ಲೋರವರ 10 ಸಲಹೆಗಳು

ಲಾಕ್‌ಡೌನ್‌ ಸಮಯದಲ್ಲಿ ಏನು ಮಾಡಬೇಕು? ಅಭಿಜಿತ್ ಬ್ಯಾನರ್ಜಿ ಹಾಗೂ ಡಫ್ಲೋರವರ 10 ಸಲಹೆಗಳು

- Advertisement -
- Advertisement -

ಮೂಲ : ಇಂಡಿಯನ್ ಎಕ್ಸ್‌ಪ್ರೆಸ್

ಅನುವಾದ: ಡಾ|ಟಿ.ಎಸ್‌ ವೇಣುಗೋಪಾಲ್‌

ಭಾರತದ ವ್ಯಾಪಾರ ಮುಂದಿನ 21 ದಿನ ಬಂದಾಗಿದೆ. ಇದು ಸಾಕಾಗದಿದ್ದರೆ ಇನ್ನಷ್ಟು ದಿನ ಮುಂದುವರಿಯುತ್ತದೆ. ಪ್ರತಿಯೊಬ್ಬರು ಮನೆಯಲ್ಲಿ ಉಳಿಯಬೇಕು. ಇದರರ್ಥ ನಿಜವಾಗಿ ಏನು ಅಂತ ಅರ್ಥಮಾಡಿಕೊಳ್ಳಲು ಹೆಣಗುತ್ತಿದ್ದೇವೆ. ಕಟ್ಟಡ ನಿರ್ಮಿಸುವ ವಲಸೆ ಕಾರ್ಮಿಕರು ಈಗ ಮುಚ್ಚಿರುವ ಕೆಲಸದ ಸ್ಥಳಗಳಲ್ಲಿ, ನಿರ್ಮಾಣದ ಸಮಯದಲ್ಲಿ ಕಟ್ಟಿಕೊಂಡಿದ್ದ ತಾತ್ಕಾಲಿಕ ಮನೆಗಳಲ್ಲಿ ಹೇಗೆ ಉಳಿಯುತ್ತಾರೆ? ಅಥವಾ ಈಗ ಅವರೆಲ್ಲಾ ಮನೆಗೆ ಹಿಂತಿರುಗಿ ಹೋಗಬೇಕಾ? ಈಗ ರೈಲುಗಳು ಬೇರೆ ಸಂಚರಿಸುತ್ತಿಲ್ಲ. ನೂರಾರು ಜನ ದೆಹಲಿಯಿಂದ ಬಿಹಾರಿಗೆ ನಡೆದುಕೊಂಡೇ ಹೋಗುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ. ಅವರೆಲ್ಲಾ ದಾರಿಯಲ್ಲಿ ರಾತ್ರಿಯ ಹೊತ್ತು ಎಲ್ಲೋ ಗೊತ್ತಿಲ್ಲದ ಪುಟ್ಟ ಅನಧಿಕೃತ ಜಾಗದಲ್ಲಿ, ಇಕ್ಕಟ್ಟಿನಲ್ಲಿ ಮಲಗುತ್ತಾರೆ. ಆಗ ಅವರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತಾರೆ ಅಂತ ಭಾವಿಸಿಕೊಳ್ಳಬೇಕಾ? ದೆಹಲಿಯಿಂದ ಧರ್ಭಂಗಾಕ್ಕೆ 25 ಚದುರ ಅಡಿ ಜಾಗವಿರುವ ಟ್ರಕ್ಕಿನಲ್ಲಿ 25 ಜನ ಕುಳಿತುಕೊಂಡು ಹೋಗುವ ಬದಲು ನಡೆದುಕೊಂಡು ಹೋದರಲ್ಲಾ ಎಂದು ಅವರನ್ನು ದೂಷಿಸಬೇಕಾ?

ಮುಂಬೈನಲ್ಲಿ ಬಿಸಿಲು ಈಗಾಗಲೇ 30 ಡಿಗ್ರಿ ದಾಟಿದೆ, ಇನ್ನೂ ಏರುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಅವರಿರುವ ಹತ್ತು ಅಡಿ ಅಗಲದ ಟಿನ್ ಗೂಡಿನಲ್ಲಿ 6 ಜನ ಒಟ್ಟೊಟ್ಟಿಗೆ ಮಲಗುವುದಕ್ಕೆ ಸಾಧ್ಯವೇ? ಅಷ್ಟರಲ್ಲೇ ಅವರು ಅಡುಗೆ ಮಾಡಿಕೊಳ್ಳಬೇಕು, ಅಲ್ಲೇ ಮಲಗಬೇಕು? ಸಂಜೆ ತಂಪಾದ ಮೇಲೆ ಹತ್ತಿರದ ಪಾರ್ಕಿಗೆ ಹೋಗುವ ಅವಕಾಶವೂ ಇಲ್ಲ, ಅಥವಾ ಫೋನ್ ಬಂದಾಗ ಹತ್ತಿರವಿರುವ ಮರದ ನೆರಳಿನಲ್ಲಿ ನಿಂತು ಮಾತನಾಡುತ್ತಿದ್ದ ಸುಖವೂ ಇಲ್ಲದಿರುವ ಈ ಹೊತ್ತಿನಲ್ಲಿ ಮುಂಬಯಿನಲ್ಲಿ ಧಾರವಿಯ ನಿವಾಸಿಗಳು ಊರಿಗೆ ಹೋಗಬೇಕೆಂದುಕೊಂಡರೆ ತಪ್ಪಾ?

ಇಟ್ಟುಕೊಂಡಿರುವ ಅಲ್ಪಸ್ವಲ್ಪ ಹಣ ಖಾಲಿಯಾದಾಗ ಏನು ಮಾಡುವುದು? ಬಹುಪಾಲು ಭಾರತೀಯರಿಗೆ ಕೆಲಸವಿಲ್ಲದೇ ಹೋದಾಗ ಖಾತರಿಯಾದ ವರಮಾನವಿರುವುದಿಲ್ಲ. ಉಳಿಸಿದ್ದೆಲ್ಲಾ ಖಾಲಿಯಾಗಿಬಿಟ್ಟಾಗಿ ಅವರು ಏನು ಮಾಡಬೇಕು? ಮನೆಯವರಿಗೆ ಊಟದ ಖರ್ಚಿಗಾಗೆ ಒಂದಿಷ್ಟು ಹಣ ಹುಡುಕಿಕೊಂಡು ಮನೆಯಿಂದಾಚೆಗೆ ಹೋದರೆ ಯಾರನ್ನು ಬಯ್ಯೋಣ? ಆಗ ಕೇವಲ ಗೊಂದಲವಷ್ಟೇ ಸಾಧ್ಯ? ಕರ್ನಾಟಕದಲ್ಲಿ ನಡೆಸಿದ ಒಂದು ದಿಢೀರ್ ಸಮೀಕ್ಷೆಯಿಂದ ಖಾಯಿಲೆಯ ಬಗ್ಗೆ ಜನರಿಗೆ ಸಾಕಷ್ಟು ಮಾಹಿತಿ ಇದೆ ಅನ್ನೋದು ತಿಳಿಯಿತು. ಆದರೆ ಏನು ಮಾಡಬಾರದು ಅನ್ನುವುದರ ಬಗ್ಗೆ ಮಾತ್ರ ಒಂದೇ ರೀತಿಯ ತಿಳುವಳಿಕೆ ಇಲ್ಲ. ಇದರರ್ಥ ಈಗ ಅನುಸರಿಸುತ್ತಿರುವ ಕ್ರಮ ತಪ್ಪು ಅಂತಲ್ಲ. ಆದರೆ ಈ ಕ್ರಮಗಳು ಪರಿಪೂರ್ಣವಾಗಿ ಅಥವಾ ಸರಿಯಾಗಿ ಜಾರಿಯಾಗದೇ ಇರಬಹುದು ಅಂತ ಅಷ್ಟೆ.

ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಏನಾಗಬಹುದು, ಅದಕ್ಕೆ ಯಾವ ಕ್ರಮ ತೆಗೆದುಕೊಳ್ಳಬಹುದು ಎನ್ನುವುದಕ್ಕೆ ಸಂಬಂಧಿಸಿದಂತೆ ಆಚರಣೆಯಲ್ಲಿ ಕೆಲವು ಸಮಸ್ಯೆಗಳಿವೆ. ಅದರಿಂದ ಹಲವು ಪ್ರಮುಖ ಪರಿಣಾಮಗಳಾಗುತ್ತವೆ.

ಮೊದಲನೆಯದಾಗಿ ಲಾಕ್‌ಡೌನ್ ಪರಿಣಾಮಕಾರಿಯಾದರೂ ಮತ್ತು ಸೋಂಕಿನ ಏರಿಕೆಯ ರೇಖೆ ಸ್ಥಗಿತಗೊಂಡರೂ, ಖಾಯಿಲೆ ಹರಡುವುದು ನಿಂತರೂ, ಖಾಯಿಲೆ ತನ್ನ ಪರಿಧಿಯನ್ನು ವಿಸ್ತರಿಸುವುದು ನಿಲ್ಲುವುದಿಲ್ಲ. ಯಾಕೆಂದರೆ ನಮಗೆ ಗೊತ್ತಿಲ್ಲದ ಸೋಂಕಿಗೆ ಒಳಗಾದವರು ಇದ್ದಾರೆ. ಅವರು ಅದನ್ನು ಹೊಸಬರಿಗೆ ತಗಲಿಸುವ ಸಾಧ್ಯತೆ ಇದೆ. ಖಾಯಿಲೆ ಸುಮಾರು ಎರಡು ವಾರ ಸುಪ್ತವಾಗಿಯೇ (ಡಾರ್ಮೆಂಟ್) ಉಳಿದಿರಬಹುದೆಂಬ ಅಂದಾಜಿದೆ. ಖಾಯಿಲೆಯ ನೇರ ಸಂಪರ್ಕವಿರುವವರನ್ನು ಮಾತ್ರ ಪರೀಕ್ಷಿಸಲಾಗುತ್ತಿದೆ. ಅಗೋಚರ ವಾಹಕರನ್ನು ಗುರುತಿಸುವುದು ಸುಲಭವಲ್ಲ. ಹೀಗೆ ಅಗೋಚರವಾಗಿ ಉಳಿದಿರುವ ವಾಹಕರು ಹೆಚ್ಚಾಗಿಯೇ ಇರಬಹುದು. ದೆಹಲಿಯಿಂದ ಊರಿಗೆ ಬಂದವನಿಗೆ ಅದು ಇದೆ ಎಂದು ಗೊತ್ತಾಗುವ ಮೊದಲೇ ಮನೆಯವರಿಗೆಲ್ಲಾ ಹರಡಿಬಿಡಬಹುದು.

ಎರಡನೆಯದಾಗಿ ಕೆಲವು ಕಡೆಗಳಲ್ಲಿ ಒಮ್ಮೆ ಸೋಂಕು ಬಂದುಬಿಟ್ಟರೆ ಅದು ಹರಡುವುದನ್ನು ತಪ್ಪಿಸುವುದು ತುಂಬಾ ಕಷ್ಟವಾಗಬಹುದು. ಪರಿಣಾಮಕಾರಿಯಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಾಗಲಿ, ಸಂಪೂರ್ಣ ಲಾಕ್‌ಡೌನ್ ಆಗಲಿ ಸಾಧಿಸುವುದು ಕಠಿಣವಾಗುತ್ತದೆ. ಉದಾಹರಣೆಗೆ ನಗರದಲ್ಲಿನ ಸ್ಲಮ್ಮುಗಳು.
ಮೂರನೆಯದಾಗಿ ಸೋಂಕು ಹಲವರಿಗೆ ತಗಲುವ ಮೊದಲೇ ಲಾಕ್‌ಡೌನ್ ಪ್ರಾರಂಭವಾಗಿರುವುದರಿಂದ ಹೆಚ್ಚು ಕಮ್ಮಿ ಯಾರಿಗೂ ಇಮ್ಯೂನಿಟಿ ಬೆಳೆದಿರುವ ಸಾಧ್ಯತೆ ಕಡಿಮೆ. ಅಂದರೆ ಮುಂದಿನ ಮೂರು ವಾರಗಳಲ್ಲಿ ಸೋಂಕನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡದೇ ಹೋದರೆ ಕರ್ಫ್ಯೂ ತೆಗೆದ ತಕ್ಷಣ ಸೋಂಕು ವೇಗವಾಗಿ ಹರಡುವ ಸಾಧ್ಯತೆ ಹೆಚ್ಚು. ಅಂದರೆ ಕರ್ಫ್ಯೂ ಉಪಯೋಗವಿಲ್ಲ ಅಂತ ಅರ್ಥವಲ್ಲ. ಇದರಿಂದ ಸರಿಯಾಗಿ ಯೋಜನೆ ಮಾಡಿಕೊಳ್ಳುವುದಕ್ಕೆ ಸಮಯಾಕಾಶ ಸಿಕ್ಕಿದೆ. ಮುಂದಿನ ಕೆಲವು ವಾರ ಸೋಂಕಿನ ಸಂಖ್ಯೆಯನ್ನು ಮಿತಗೊಳಿಸುವುದಕ್ಕೆ ಸಹಾಯವಾಗಿದೆ. ಆದರೆ ಸಮಸ್ಯೆ 21ದಿನವೂ ನಮ್ಮೊಂದಿಗೇ ಇರುತ್ತದೆ. ಅದರಿಂದ ನಾವು ಮುಂದಿನ ಕೆಲತಿಂಗಳಲ್ಲಿ ದೂರದ ಗ್ರಾಮೀಣ ಪ್ರದೇಶಗಳು ಸೇರಿದಂತೆ ದೇಶದ ಎಲ್ಲಾ ಕಡೆಗಳಲ್ಲಿ ಸೊಂಕು ಸ್ಪೋಟಗೊಳ್ಳುವ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಿರಬೇಕು. ಅದಕ್ಕಿಂತ ಹೆಚ್ಚಾಗಿ ಸೋಂಕು ಹರಡುವ ಸಾಧ್ಯತೆ ಇರುವ ಈ ಅಪಾಯಕಾರಿ ಪ್ರದೇಶಗಳೆಲ್ಲವೂ ಆರೋಗ್ಯ ವ್ಯವಸ್ಥೆ ತುಂಬಾ ದುರ್ಬಲವಾಗಿರುವ ಪ್ರದೇಶಗಳು. ಚೀನಾಗೆ ಹೋಲಿಸಿದರೆ ನಮ್ಮಲ್ಲಿ ಸರಾಸರಿ ತಲಾ 1/8 ಆಸ್ಪತ್ರೆಗಳಿವೆ. ಅದೇ ತುಂಬಾ ಆತಂಕಕಾರಿಯಾಗಿರುವ ವಿಷಯ. ಆದರೆ ಈ ಆರೋಗ್ಯ ಕೇಂದ್ರಗಳು ಕೂಡ ಮುಂದುವರಿದ ಪ್ರದೇಶಗಳಲ್ಲೇ ಕೇಂದೀಕೃತವಾಗಿವೆ.

ಭಾರತದಲ್ಲಿ ಇಂದಿಗೂ ಹೆಚ್ಚಿನಂಶ ಸೂಕ್ತ ವೈದ್ಯಕೀಯ ಶಿಕ್ಷಣವಿಲ್ಲದ ವೈದ್ಯರೇ ದಿನನಿತ್ಯದ ಆರೋಗ್ಯ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರಿಗೆ ಕನಿಷ್ಠ ಕೆಲವು ಪರಿಚಿತ ಖಾಯಿಲೆಗಳಿಗೆ ಏನು ಮಾಡಬೇಕೆಂಬುದು ಗೊತ್ತಿದೆ. ಕೋವಿಡ್-೧೯ ಇರುವ ರೋಗಿಗಳು ಅವರ ಬಳಿಗೆ ಹೋಗುತ್ತಾರೆ. ಅವರಿಗೆ ಅದನ್ನು ಗುರುತಿಸುವುದಕ್ಕೇ ಆಗಲಿ ಅಥವಾ ಅದಕ್ಕೆ ಚಿಕಿತ್ಸೆಯಾಗಲೀ  ಗೊತ್ತಿರುವುದಿಲ್ಲ. ಕೊನೆಗೆ ಅವರು ಆಸ್ಪತ್ರೆಗಳಿಗೆ ಹೋಗುತ್ತಾರೆ. ಹೋಗುವಾಗ ದಾರಿಯಲ್ಲಿ ಹಲವರಿಗೆ ಖಾಯಿಲೆ ಹರಡಿರುತ್ತಾರೆ.

ದುರಂತವನ್ನು ತಪ್ಪಿಸುವುದಕ್ಕೆ ಏನು ಮಾಡಬಹುದು? ಹತ್ತು ಅಂಶಗಳು

ಮೊದಲನೆಯದಾಗಿ ಕುಟುಂಬದಲ್ಲಿ ಒಬ್ಬನಿಗಾದರೂ ಖಾಯಿಲೆಯ ಲಕ್ಷಣಗಳು ಗೊತ್ತಿರುವಂತೆ ನೋಡಿಕೊಳ್ಳಬೇಕು.

ಎರಡನೆಯದಾಗಿ ಎಲ್ಲಾ ರೀತಿಯ ಕ್ರಮಗಳನ್ನೂ, ಎಚ್ಚರಿಕೆಗಳನ್ನೂ ತೆಗೆದುಕೊಂಡರೂ ಕೆಲವರಿಗೆ ಸೋಂಕು ತಗುಲಬಹುದು ಎಂಬ ತಿಳುವಳಿಕೆ ಎಲ್ಲರಲ್ಲೂ ಮೂಡಬೇಕು. ಅವರನ್ನು ಹೊರಗಿಡುವುದಾಗಲಿ, ಮುಚ್ಚಿಡುವುದಾಗಲಿ ಆಗಬಾರದು. ಈಗ ಮುಖ್ಯವಾಗಿ ಬೇಕಾಗಿರುವುದು ನಿಷ್ಠಾವಂತ ವರದಿ.

ಮೂರನೆಯದಾಗಿ ವರದಿ ಮಾಡುವುದಕ್ಕೆ ವಿಭಿನ್ನ ದಾರಿಗಳು ಇರಬೇಕು. ಉದಾಹರಣೆಗೆ ಹಾಟ್‌ಲೈನ್, ಆಶಾ ಹೀಗೆ ಹಲವು ದಾರಿಗಳನ್ನು ಕಂಡುಕೊಳ್ಳಬೇಕು.

ನಾಲ್ಕನೆಯದಾಗಿ, ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ ರೋಗಲಕ್ಷಣ ಗುರುತಿಸುವುದಕ್ಕೆ ತರಬೇತಿ ನೀಡಬೇಕು. ಮತ್ತು ಸೋಂಕಿನ ಸೂಚನೆಗಳು ಕಂಡೊಡನೆ ಅವರು ಸೂಕ್ತ ಅಧಿಕಾರಿಗಳಿಗೆ ವರದಿ ಮಾಡಬೇಕು.

ಐದನೆಯದಾಗಿ, ಹಾಗೆ ವರದಿಯಾದ ಪ್ರಕರಣಗಳನ್ನು ತಕ್ಷಣ ಕ್ರೋಢೀಕರಿಸಬೇಕು. ಆಗ ನಮಗೆ ಹೊಸ ಆಪಾಯಕಾರಿ ಸ್ಥಳಗಳು ಯಾವುವು ಎಂಬುದು ತಿಳಿಯುತ್ತದೆ. ದೇಶಾದ್ಯಂತ ದೊರೆತ ಅಂತಹ ಪುರಾವೆಗಳನ್ನು ಕ್ರೋಢೀಕರಿಸಿದಾಗ ಒಟ್ಟಾರೆ ಸೋಂಕು ಯಾವ ಹಾದಿಯಲ್ಲಿ ಸಾಗುತ್ತಿದೆ ಎಂಬುದು ತಿಳಿಯುತ್ತದೆ.

ಆರನೆಯದಾಗಿ, ಪ್ರತಿ ರಾಜ್ಯದಲ್ಲೂ ಆರೋಗ್ಯ ವೃತ್ತಿನಿರತರ, ವೈದ್ಯರ ಹಾಗೂ ನರ್ಸುಗಳ ಒಂದು ತಂಡವನ್ನು ಕಟ್ಟಬೇಕು. ಪ್ರತಿಯೊಂದು ತಂಡದಲ್ಲೂ ಸಾಕಷ್ಟು ಪರೀಕ್ಷೆಯ ಕಿಟ್ಟುಗಳು, ಸಾಧ್ಯವಾದರೆ ವೆಂಟಿಲೇಟರುಗಳು ಮತ್ತು ಇತರ ಉಪಕರಣಗಳು ಇರಬೇಕು. ಇದರ ಉದ್ದೇಶವೆಂದರೆ ಪಕ್ಕದ ಪ್ರದೇಶಗಳು ಮತ್ತು ರಾಜ್ಯಗಳು ಸೇರಿದಂತೆ ಎಲ್ಲಿ ಸೋಂಕು ಹೆಚ್ಚು ವೇಗವಾಗಿ ಹರಡುತ್ತಿದೆ ಎಂಬ ವರದಿ ಬರುತ್ತದೆಯೋ ಅಲ್ಲೆಲ್ಲಾ ತಕ್ಷಣ ಈ ತಂಡದ ಒಂದು ಭಾಗವನ್ನು ಕಳಿಸಿಕೊಡುವುದಕ್ಕೆ ನೇಮಿಸುವುದಕ್ಕೆ ಸಾಧ್ಯವಾಗಬೇಕು. ಈಗಿನ ಲಾಕ್‌ಡೌನ್ ಯಶಸ್ವಿಯಾದರೆ, ಒಂದು ದೊಡ್ಡ ದುರಂತ ಸಂಭವಿಸದೇ ಹೋಗಬಹುದು. ಅದರ ಬದಲು ಬೇರೆ ಬೇರೆ ಸಮಯದಲ್ಲಿ ಸಣ್ಣ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಳ್ಳಬಹುದು. ಈ ಸಾಧ್ಯತೆ ತುಂಬಾ ಹೆಚ್ಚು. ಈ ಸಮಯದಲ್ಲಿ ಒಂದೇ ತಂಡವನ್ನು ವಿಭಿನ್ನ ಸ್ಥಳಗಳಲ್ಲಿ ಬಳಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಏಳನೆಯದಾಗಿ, ಇಂತಹ ಒಂದು ತಂಡವನ್ನು ಕಟ್ಟುವುದಕ್ಕೆ, ಮತ್ತು ಅದರಲ್ಲಿ ಎಲ್ಲಾ ಅವಶ್ಯಕ ಸಾಧನಗಳನ್ನು ಇರುವಂತೆ ವ್ಯವಸ್ಥೆ ಮಾಡುವುದಕ್ಕೆ ಸಾಧ್ಯವಾಗಬೇಕಾದರೆ ಎಲ್ಲಾ ಆರೋಗ್ಯ ವೃತ್ತಿನಿರತರನ್ನು ಸೇರಿಸಿಕೊಳ್ಳಬೇಕು. ಕೇವಲ ಸರ್ಕಾರದ ಸೇವೆಯಲ್ಲಿ ಇರುವವರು ಮಾತ್ರವಲ್ಲ. ಅವಶ್ಯಕತೆಗೆ ತಕ್ಕಂತೆ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳನ್ನು ಬಳಸಿಕೊಳ್ಳುವ ಹಕ್ಕು ಆ ತಂಡಕ್ಕೆ ಇರಬೇಕು.

ಎಂಟನೆಯದಾಗಿ, ಸಾಮಾಜಿಕ ವರ್ಗಾವಣೆ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಹೆಚ್ಚೆಚ್ಚು ಧೈರ್ಯ ತೋರಬೇಕು. ಇಲ್ಲದೇ ಹೋದರೆ ಬೇಡಿಕೆಯ ಬಿಕ್ಕಟ್ಟು ಒಂದು ದೊಡ್ಡ ಆರ್ಥಿಕ ಪ್ರಪಾತಕ್ಕೆ ನಮ್ಮನ್ನು ತಳ್ಳುತ್ತದೆ. ಆಗ ಜನರಿಗೆ ಆಜ್ಞೆಗಳನ್ನು ಮೀರುವುದನ್ನು ಬಿಟ್ಟು ಬೇರೆ ದಾರಿಯೇ ಉಳಿಯುವುದಿಲ್ಲ. ಈಗ ಸರ್ಕಾರ ನೀಡುತ್ತಿರುವ ಧನಸಹಾಯ ತೀರಾ ಕಡಿಮೆ. ಹೆಚ್ಚೆಂದರೆ ಕೆಲವು ಸಾವಿರ ರೂಪಾಯಿಗಳು. ಆ ಜನ ಈಗಾಗಲೇ ಅದಕ್ಕಿಂತ ಹೆಚ್ಚನ್ನು ಕೆಲವೇ ದಿನಗಳಲ್ಲಿ ಖರ್ಚು ಮಾಡಿದ್ದಾರೆ. ಅವರು ಕೆಲಸಕ್ಕೆ ಹೊರಗೆ ಹೋಗದಂತೆ ಮಾಡಲು ಮತ್ತು ಆ ಮೂಲಕ ಖಾಯಿಲೆ ಹರಡುವುದನ್ನು ತಪ್ಪಿಸಬೇಕಾದರೆ ಬಹುಶಃ ಅವರಿಗೆ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ.

ಒಂಭತ್ತೆನೆಯದಾಗಿ ಯೋಜನೆಗಳಿಗೆ ಸಂಬಂಧಿಸಿದಂತೆ ಹಲವು ಗೊಂದಲಗಳಿವೆ (ರೈತರು ಅಂದರೆ ಯಾರು?), ಬಿಸಿನೆಸ್ ಆಸ್ ಯೂಷುವಲ್ ಯೋಜನೆಗೆ, ಅರ್ಹತೆಗೆ ಸಂಬಂದಿಸಿದಂತೆ ಹಲವು ಸಮಸ್ಯೆಗಳಿವೆ. ಯೋಜನೆಗಳನ್ನು ಕೆಲವರಿಗಷ್ಟೇ ಸೀಮಿತಗೊಳಿಸದೆ ಸಾರ್ವತ್ರಿಕವಾಗಿ ಎಲ್ಲರಿಗೂ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು. ದುರುಪಯೋಗ ಆಗುವುದನ್ನು ತಪ್ಪಿಸಬೇಕು. (ಹಾಗೆ ಅನುಕೂಲ ಪಡೆದುಕೊಂಡವರ ಪಟ್ಟಿಯನ್ನು ಪ್ರಕಟಿಸಬೇಕು. ಆಗ ಫಲಾನುಭವಿಗಳು ಯಾರು ಎಂದು ಎಲ್ಲರಿಗೂ ತಿಳಿಯುತ್ತದೆ.). ಸರ್ಕಾರ ಹೆಮ್ಮೆ ಪಡುವ ಜಾಮ್ (ಜನ್ ಧನ್, ಆಧಾರ್, ಮೊಬೈಲ್) ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕೆ ಇದು ಖಂಡಿತವಾಗಿಯೂ ಸಕಾಲ. ನಗದನ್ನು ನೇರವಾಗಿ ಜನರ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು. ಅದರ ಮಾಹಿತಿ ಪಡೆದವರಿಗೆ ತಲುಪಬೇಕು.

ಅಂತಿಮವಾಗಿ ಈ ಸಮರದ ಪ್ರಯತ್ನವನ್ನು ಸೂಕ್ತವಾದ ಒಂದು ವ್ಯಾಕ್ಸಿನ್ ದೊರೆಯುವ ತನಕ ಮುಂದುವರಿಸಲು ತಯಾರಿರಬೇಕು. ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಉತ್ತಮಗೊಳಿಸುವುದಕ್ಕೆ ಪ್ರಾರಂಭಿಸೋಣ. ಆಗ ಮುಂದಿನ ಸಲ ಇದನ್ನು ಎದುರಿಸುವುದಕ್ಕೆ ಹೆಚ್ಚು ಸಿದ್ಧರಿರುತ್ತೇವೆ.

*****

(ಬ್ಯಾನರ್ಜಿ ಮತ್ತು ಡಫ್ಲೋ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...

ಒಳಮೀಸಲಾತಿ ನಾಡು ಕಂಡ ಸುದೀರ್ಘ ಹೋರಾಟದ ಕಥೆ

ಇದು ಬೆವರು ನಿಟ್ಟುಸಿರುಗಳ ಚಳವಳಿ. ತಮ್ಮ ಅನ್ನದ ಬಟ್ಟಲಿಗಾಗಿ ದಶಕಗಳ ಕಾಲ ಹಸಿವು, ಬಾಯಾರಿಕೆ, ನಿದ್ರೆ ಎಲ್ಲವನ್ನೂ ಬಿಟ್ಟು ನಡೆಸಿದ ಅಭೂತಪೂರ್ವ ಚಳವಳಿ. ರಾಜಕೀಯ ಚಕ್ರವ್ಯೂಹಗಳನ್ನು ಬೇಧಿಸಿ, ಸಾಂವಿಧಾನಿಕ ಹಕ್ಕನ್ನು ತಮ್ಮದಾಗಿಸಿಕೊಂಡ ಚಳವಳಿ....

‘ಗೋಮಾಂಸ’ ತಂದ ನೆಪ: ಅಸ್ಸಾಂನಲ್ಲಿ ಐವರು ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಕ್ರಮ; ಸುಳ್ಳು ಪ್ರಕರಣದಡಿ ಒಂಟಿ ತಾಯಿ ಮತ್ತು ಅಪ್ರಾಪ್ತ ಮಗನ ಬಂಧನ

ಧಾರ್ಮಿಕ ಭಾವನೆಗೆ ಧಕ್ಕೆ ಎಂಬ ಹೆಸರಿನಲ್ಲಿ ಶಾಲಾ ಆವರಣಗಳೂ ಸಹ ಕೋಮು ರಾಜಕಾರಣದ ಪ್ರಯೋಗಶಾಲೆಗಳಾಗುತ್ತಿರುವುದಕ್ಕೆ ಅಸ್ಸಾಂನಿಂದ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ. ಅಸ್ಸಾಂನ ಗೋಲ್‌ಪಾರ ಜಿಲ್ಲೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯೊಂದರಲ್ಲಿ ಮುಸ್ಲಿಂ...

ಪ್ರಧಾನಿ ನರೇಂದ್ರ ಮೋದಿಯ 12 ವರ್ಷದ ಸಾಧನೆ ಏನು? ಅವರು ಮುರಿದ ದಾಖಲೆಯಾದರೂ ಯಾವುದು?

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2014ರಿಂದ ಸತತ 12ವರ್ಷಗಳು (4,399 ದಿನಗಳು) ಪ್ರಧಾನಿ ಹುದ್ದೆ ಅಲಂಕರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಮೋದಿ ನೇತೃತ್ವದ ಸರ್ಕಾರಕ್ಕೆ 12 ವರ್ಷ ತುಂಬಿದ ಹಿನ್ನೆಲೆ ಬಿಜೆಪಿ...