Homeಮುಖಪುಟಈ ಮುಂಗಾರಿಗೆ ಯಾವ ರೀತಿಯ ವೈವಿಧ್ಯ ಆಹಾರ ಉತ್ತಮ?: ಕೆ.ಸಿ ರಘು

ಈ ಮುಂಗಾರಿಗೆ ಯಾವ ರೀತಿಯ ವೈವಿಧ್ಯ ಆಹಾರ ಉತ್ತಮ?: ಕೆ.ಸಿ ರಘು

ಈಗಲೂ ಸಹ ಆಹಾರದ ಬಗ್ಗೆ ಕೊಂಚ ಆಸಕ್ತಿಯುಳ್ಳವರು ಹಿರಿಯರ ಅನುಭವವನ್ನು ಬಳಸಿಕೊಂಡು ಆಧುನಿಕ ವಿಜ್ಞಾನದ ಕೊಡುಗೆಯನ್ನು ಬೆಸೆದರೆ ಉತ್ತಮ ಆಹಾರ, ರಸ ಮತ್ತು ರುಚಿಯೂ ಮುಂಗಾರು ಮಳೆಯ ನಾದಕ್ಕೆ ಜುಗಲ್‍ಬಂದಿ ಆಗಬಹುದು.

- Advertisement -
- Advertisement -

ನಮ್ಮ ನಿತ್ಯ ಆಹಾರ ಹೊರ ಜಗತ್ತನ್ನು ಒಳಜಗತ್ತನ್ನಾಗಿ ಪರಿವರ್ತಿಸುವ ನಿರಂತರ ಪ್ರಕ್ರಿಯೆ. ಹೊರ ಜಗತ್ತು ಎಷ್ಟು ವೈವಿಧ್ಯಮಯವೋ, ಒಳಜಗತ್ತು ಸಹ ವೈವಿಧ್ಯತೆಯ ಆಗರವೇ. ನಾವೆಂಬ ನಾವು ಕೇವಲ ನಾವೇ ಅಲ್ಲ. ನಮ್ಮ ದೇಹವೂ ಲಕ್ಷಾಂತರ ಸೂಕ್ಷ್ಮ ಜೀವಿಗಳಿಗೆ ಸೂರು ಹೌದು. ಇತ್ತೀಚಿನ ವಿಜ್ಞಾನ ಹೇಳುವಂತೆ ನಮ್ಮ ದೇಹದಲ್ಲಿ ನಾವೇ ಅತಿಥಿಗಳು. ಅಲನಾ ಕೋಲನ್ ಅವರು ಈ ಬಗೆಗೆ ಬರೆದಿರುವ ಪುಸ್ತಕದ ಹೆಸರೇ “10 ಪರ್ಸೆಂಟ್ ಹ್ಯೂಮನ್”.

ಸೂಕ್ಷ್ಮ ಜೀವಿಗಳ ಜಗತ್ತು ನಮ್ಮ ಇರುವಿಕೆಯ ಜೊತೆಗೇ ಹೆಣೆದುಕೊಂಡಿದೆ. ಬಳ್ಳಿಯಿಂದ ಮರ ನಿಂತಿದೆಯೋ ಅಥವಾ ಮರದಿಂದ ಬಳ್ಳಿ ನಿಂತಿದೆಯೋ ಹೇಳಲಾಗದು. ನಮ್ಮ 23 ಸಾವಿರ ಗುಣಾಣುಗಳಲ್ಲಿ ಸುಮಾರು 10ಸಾವಿರ ಗುಣಾಣುಗಳು ವೈರಸ್‍ಗಳಿಂದ ಮಾಡಲ್ಪಟ್ಟವು ಎನ್ನುತ್ತಾರೆ. ಹಾಗಾಗಿ ನಮ್ಮ ಆಹಾರ ನಮಗಾಗಿ ಎನ್ನುವಂತಿಲ್ಲ. ಅತಿಥಿ ಅತಿಥೇಯರ ಸರ್ವಾಂಗೀಣ ಒಳಿತಿಗಾಗಿ ನಾವು ಆಹಾರವನ್ನು ಸೇವಿಸಬೇಕು. ಇದು ಕೇವಲ ನಾಲಿಗೆಯ ರುಚಿಗೆ ಜೋತು ಬೀಳುವ ಕ್ಷುಲ್ಲಕ ವಿಷಯವಲ್ಲ. ಯಾವುದೋ ಕೆಟ್ಟ ಆಹಾರವನ್ನು ಒಗ್ಗಿಸಿಕೊಂಡುಬಿಟ್ಟರೆ ಮಾದಕ ವಸ್ತುವಿಗೆ ನಮ್ಮನ್ನೇ ನಾವು ಮಾರಿಕೊಂಡಂತೆ. ಹೀಗಾಗದೆ ವೈವಿಧ್ಯಮಯ ಆಹಾರ ಪದ್ಧತಿಯನ್ನು ಅಷ್ಟೇ ವೈವಿಧ್ಯಮಯವಾದ ನಮ್ಮ ದೇಹವೆನ್ನುವ ಜೀವರಾಶಿಗೆ ಒದಗಿಸತಕ್ಕದ್ದು. ಈ ರೀತಿಯಲ್ಲಿ ನಮ್ಮ ದೇಹವೆನ್ನುವುದು ಒಂದು ಪೃಕೃತಿ ಪಂಜರವೇ ಸರಿ.

ಪ್ರತಿ ಋತುವಿಗೆ ತಕ್ಕಂತೆ ಆಹಾರದ ಬದಲಾವಣೆ ಆಗತಕ್ಕದ್ದು ವಾಡಿಕೆ ಎಂಬಂತಿದೆ. ನಮ್ಮ ಹಿಂದಿನವರು ಋತು ಬುಕ್, ಹಿತ ಬುಕ್ ಮತ್ತು ಮಿತ ಬುಕ್ ಎಂದು ಹೇಳುತ್ತಿದ್ದರು. ಅಂದರೆ ಕಾಲಕ್ಕೆ ತಕ್ಕಂತೆ ಹಿತಮಿತವಾದ ಆಹಾರವನ್ನು ಬಳಸುವುದರ ಅಗತ್ಯದ ಬಗೆಗಿನ ಮಾತು ಅದು. ಅಧ್ಯಯನದ ಪ್ರಕಾರ ಕಾಡಿನಲ್ಲೇ ವಾಸಿಸುವ ಅನೇಕ ಬುಡಕಟ್ಟು ಜನಾಂಗದವರ ದೇಹ ಪೃಕೃತಿಯನ್ನು ಅಧ್ಯಯನ ಮಾಡಿದಾಗ ಕಂಡು ಬರುವುದೇನೆಂದರೆ ಪ್ರತಿ ಋತುವಿಗೂ ಅವರ ದೇಹದ ಸೂಕ್ಷ್ಮ ಜೀವ ಜಗತ್ತು ಸಂಪೂರ್ಣವಾಗಿ ಬದಲಾಗುತ್ತದೆ. ಅಂದರೆ ಬ್ಯಾಕ್ಟೀರಿಯಾ, ಪ್ರೊಟೊಜೋವಾ ಮತ್ತು ವೈರಸ್‍ಗಳ ಜಗತ್ತು ಋತುವಿಂದ ಋತುವಿಗೆ ಕಾಲಕ್ಕೆ ತಕ್ಕಂತೆ ಆಹಾರ ಪದ್ಧತಿ ಬದಲಾಗುವುದರಿಂದ ಬದಲಾಗುತ್ತವೆ. ತನ್ನ ದೇಹದಲ್ಲಿರುವ ಜೀವ ಜಗತ್ತು ನಿಂತ ನೀರಾಗದೇ, ನಿರಂತರವಾಗಿ ಪೃಕೃತಿ ಜೊತೆಗೆ ಹೆಣೆದು ಬೆಸೆದುಕೊಂಡು ಬದಲಾಗುತ್ತಾ ಇರುತ್ತದೆ. ಆರೋಗ್ಯವೆಂದರೆ ಹೀಗೂ ವ್ಯಾಖ್ಯಾನಿಸುವುದುಂಟು” “ನಿರಂತರವಾಗಿ ಬದಲಾಗುವ ಹೊರ ಜಗತ್ತಿನೊಂದಿಗೆ ಸದಾ ಹೊಂದಿಕೊಳ್ಳುವ ಪೃಕ್ರಿಯೆ” ಎಂದು. ಈ ರೀತಿ ನಮ್ಮ ದೇಹ ಪೃಕೃತಿಯೂ ಸಹ ನಮ್ಮ ಆಹಾರ ಪದ್ಧತಿಯ ಮೂಲಕ ನಿರಂತರವಾಗಿ ಹೊಂದಿಕೊಳ್ಳುತ್ತ ಸಾಗಿದಾಗ ದೇಹ ಮತ್ತು ಪರಿಸರದ ಮಧ್ಯೆ ಒಂದು ಸಾವಯವ ಸಂಬಂಧ ಏರ್ಪಡುತ್ತದೆ. ಉಪನಿಷತ್ತಿನಲ್ಲಿ ನೀವು ಬಳಸುವ ಆಹಾರ ನಿಮ್ಮನ್ನು ಬಳಸುತ್ತದೆ ಎನ್ನುವ ಮಾತಿದೆ. ಇತ್ತೀಚಿನ ಜಾಗತೀಕರಣದ ಆಹಾರ ಸಂಸ್ಕೃತಿಯನ್ನು ಮ್ಯಾಕ್‍ಡೊನಾಲ್ಡ್‍ಡೈಸೇಶನ್ ಅಥವಾ ಕೊಕಾಕೊಲೊನೈಸೇಶನ್ ಎನ್ನುತ್ತಾರೆ. ಅಂದರೆ ಇಡೀ ಜಗತ್ತಿನ ಆಹಾರ ಸಂಸ್ಕೃತಿಯನ್ನು ಬಹು ಸಂಸ್ಕೃತಿಯಿಂದ ಅತ್ಯಂತ ಇಕ್ಕಟ್ಟಾದ ಏಕಸಂಸ್ಕೃತಿತಿಗೆ ತಂದು ನಿಲ್ಲಿಸಿರುವುದು. ಈ ಮ್ಯಾಕ್ಡೊನಾಲ್ಡ್‍ಡೈಸೇಶನ್ ಎನ್ನುವುದು ಸಮಾಜ ಶಾಸ್ತ್ರದಲ್ಲಿ ಒಂದು ವಿಶೇಷ ಅಧ್ಯಾಯನ ಆಗಿದೆ. ಇದು ಕೇವಲ ಆಹಾರದಲ್ಲಿ ಮಾತ್ರವಲ್ಲ ಎಲ್ಲ ರೀತಿಯ ವೈವಿಧ್ಯಮಯ ಸಂಸ್ಕೃತಿಯನ್ನು ಮಾರಣಹೋಮ ಮಾಡಿ ಏಕಮಯ ಸಂಸ್ಕೃತಿಗೆ ತಂದು ನಿಲ್ಲಿಸುವಂತದ್ದಾಗಿದೆ.

ಸ್ಥಳೀಯವಾಗಿ ಬೆಳೆದ ಮತ್ತು ಸಾಂಸ್ಕೃತಿಕವಾಗಿ ಬೆಳೆದು ಬಂದು ಬಳಸುವ ನಮ್ಮ ಆಹಾರ ಪದ್ಧತಿ ಸಾಮಾನ್ಯವಾಗಿ ಹೀಗೆ ಇದ್ದದ್ದಾಗಿತ್ತು. ಮಳೆಗಾಲ ಬಂತೆಂದರೆ ಮಲೆನಾಡಿನಲ್ಲಿ ಕಾಡು ಬಳುವಳಿಯಾಗಿ ನೀಡುವ ಅಣಬೆ, ಕಳಲಿ, ಗೆಡ್ಡೆ-ಗೆಣಸುಗಳು, ತರತರದ ಬೇಲಿ ಸೊಪ್ಪುಗಳು, ಹಳ್ಳ-ಕೊಳ್ಳದಿಂದ ಸಿಗುವ ಏಡಿ ಮೀನುಗಳು ಕಾಲಕ್ಕೆ ತಕ್ಕಂತೆ ಲಭ್ಯವಾಗುತ್ತಿದ್ದವು. ಈ ರೀತಿಯ ಆಹಾರ ಬಳಕೆಯಿಂದ, ಎಷ್ಟೋ ಜನ ವಿಜ್ಞಾನದ ಮಾಹಿತಿ ತಿಳಿಯದೇ ವೈಜ್ಞಾನಿಕವಾದ ಆಧಾರದಲ್ಲಿಯೇ ಬದುಕು ಕಟ್ಟಿಕೊಳ್ಳುವುದ್ದಾಗಿದೆ. ಇಂದು ಆಹಾರ ಭದ್ರತೆ ಹಿಂದಿಗಿಂತ ಅತ್ಯಂತ ಉನ್ನತ ಸ್ಥಿತಿಯಲ್ಲಿರುವುದು ಸತ್ಯ. ಆದರೆ ಜಗತ್ತಿನ ಶೇಕಡ 80ರಷ್ಟು ಆಹಾರ ಧಾನ್ಯ ಕೇವಲ 5 ಧಾನ್ಯಗಳಾಗಿವೆ. ಅಕ್ಕಿ, ಗೋಧಿ, ಮೆಕ್ಕೆಜೋಳ, ಸೋಯಾಬೀನ್, ಆಲೂಗಡ್ಡೆ ಎನ್ನಬಹುದು. ಇದರಲ್ಲಿ ಮೆಕ್ಕೆಜೋಳ ಮತ್ತು ಸೋಯಾಬೀನ್‍ಗಳನ್ನು ಪ್ರಾಣಿಗಳಿಗೆ ತಿನ್ನಲು ಕೊಟ್ಟರೆ ನಮಗೆ ಉಳಿಯುವ ಆಹಾರ ವೈವಿಧ್ಯತೆ ಮೂರು ಅಥವಾ ನಾಲ್ಕು ಮಾತ್ರವಾಗಿವೆ. ಅದರಲ್ಲಿಯೂ ಸಹ ಭತ್ತ ಮತ್ತು ಗೋಧಿಯ ವೈವಿಧ್ಯಮಯ ತಳಿಗಳು ಇಂದು ಲಭ್ಯವಿಲ್ಲ. ಉದಾಹರಣೆಗೆ ರಕ್ತಶಾಲಿ ಎನ್ನುವ ಅಕ್ಕಿ ಗರ್ಭಿಣಿಯರಿಗೆ ಉತ್ತಮವಾದ ಅಕ್ಕಿ ಎನ್ನುತ್ತದೆ ಆಯುರ್ವೇದ. ಕೇರಳದ ನವರಾ ಅಕ್ಕಿ ಔಷಧಿಗೆ ಬಹಳ ಹಿಂದಿನಿಂದಿಲೂ ಬಳಸಿಕೊಂಡು ಬಂದ ಅಕ್ಕಿಯಾಗಿದೆ. ಮೂಳೆ ಸವೆತಕ್ಕೆ ಲೇಪಿಸುವ ಆಯುರ್ವೇದ ಚಿಕಿತ್ಸೆಯಲ್ಲಿ ಇದನ್ನು ಬಳಸುತ್ತಾರೆ. ಮೆಕ್ಕೆಜೋಳ ಕಾಮನ ಬಿಲ್ಲಿನ ಎಲ್ಲ ಬಣ್ಣಗಳನ್ನು ಒಳಗೊಂಡ ಏಕದಳ ಧಾನ್ಯ. ಆದರೆ ಇಂದು ನಮಗೆ ಅವು ಕಾಣಸಿಗುವುದಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿಗೂ ಸುಮಾರು 100 ರೀತಿಯ ಭತ್ತದ ತಳಿಗಳನ್ನು ಬೆರಳೆಣಿಕಿಯಷ್ಟು ರೈತರು ಬಳಸುತ್ತಿದ್ದಾರೆ.

ಮುಂಗಾರಿಗೆ ತಕ್ಕಂತೆ ಅನೇಕ ವೈವಿದ್ಯಮಯ ಆಹಾರ ಪದ್ಧತಿ ನಮ್ಮಲ್ಲಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರಿಗೂ ಮುನ್ನ ನೂರಾರು ರೀತಿಯ ಕಾಡು ಎಲೆಯ ಕುಡಿಗಳನ್ನು ತಂದು ಗಸಿ ಮಾಡಿ ಆರು ತಿಂಗಳಿಗೆ ಬಳಸುತ್ತಾರೆ. ಅವು ಬಹು ಪೋಷಕಾಂಶಗಳ ಮತ್ತು ಖನಿಜಗಳ ಸಂಪತ್ತೆ ಸರಿ. ಹಾಗೆಯೇ ತರತರದ ಹಪ್ಪಳ ಸಂಡಿಗೆ, ಚಟ್ನಿ ಪುಡಿಗಳು, ಉಪ್ಪಿನಕಾಯಿಗಳು, ಹಲಸಿನ ಹಲವು ಬಗೆಯ ಪದಾರ್ಥಗಳು, ಕೆಸು ಎಲೆ, ತಜಂಕ್ ಸೊಪ್ಪಿನ ಪತ್ರೊಡೆ ನಮಗೆ ತಿಳಿದೆ ಇದೆ. ಚಟ್ನಿ ಪುಡಿಗಳ ಜಗತ್ತೆ ಅತ್ಯಂತ ವಿಸ್ತಾರವಾದುದು. ಏಕದಳ ಧಾನ್ಯ, ದ್ವಿದಳ ಧಾನ್ಯ, ಎಣ್ಣೆ ಕಾಳುಗಳು, ಸಾಂಬಾರ ಪದಾರ್ಥಗಳು ಹೀಗೆ ಆಧುನಿಕ ಪೌಷ್ಟಿಕಾಂಶ ತಜ್ಞರ ಸಂಶೋಧನೆಗ ಕನ್ನಡಿ ಹಿಡಿಯುವ ಹಾಗಿವೆ. ಈ ಪುಡಿಗಳು ಅನ್ನಕ್ಕೂ ಸೈ ರೊಟ್ಟಿಗೂ ಕೈ ಜೋಡಿಸುತ್ತವೆ. ಎಲ್ಲ ಕಾಲಕ್ಕೂ ಎಲ್ಲ ಪದಾರ್ಥಗಳಿಗೂ ಮಿಲನವಾಗುವ ಮಿಕ್ಷರ್‍ಗಳು ಇವು.

ಕಾಫಿಯಲ್ಲಿ ಮಾನ್ಸೂನ್ ಮಲಬಾರ್ ಎಂಬ ಕಾಫಿ ಇದೆ. ವಿದೇಶದಲ್ಲೂ ಇದಕ್ಕೆ ಅಪಾರವಾದ ಬೇಡಿಕೆ ಇದೆ. ಇದರ ಹುಟ್ಟೇ ಆಕಸ್ಮಿಕ. ರಪ್ತು ಮಾಡಲು ಗೋದಾಮಿನಲ್ಲಿ ತಂದಿಟ್ಟ ಕಾಫಿ ಮಂಗಳೂರಿನಲ್ಲಿ ಸಮಯಕ್ಕೆ ಸರಿಯಾಗಿ ರಫ್ತಾಗದೇ ಮುಂಗಾರಿನಲ್ಲಿ ಗೋದಾಮಿನಲ್ಲಿ ಉಳಿಯಬೇಕಾಯಿತು. ಹೀಗೆ 6 ತಿಂಗಳು ಶೇಖರಿಸಿಟ್ಟಿದ್ದರಿಂದ ಅದಕ್ಕೆ ಬೂಸ್ಟ್ ಬಂದು ಕೆಟ್ಟು ಹೋಗಿತ್ತು. ಆದರೂ ಇದನ್ನೇ ಧೈರ್ಯ ಮಾಡಿ ರಫ್ತು ಮಾಡಿದ ವ್ಯಾಪಾರಿಗೆ ಆಶ್ಚರ್ಯಕರವಾಗಿ ವಿದೇಶದಿಂದ ಇನ್ನು ಮುಂದೆ ನಮಗೆ ಇಂಥದ್ದೇ “ಒಳ್ಳೆಯ” ಕಾಫಿ ಕಳಿಸಿ ಎಂದು ಬೇಡಿಕೆ ಹೆಚ್ಚಾಯಿತು. ಇದು ಮಾನ್ಸೂನ್ ಮಾಡಿದ ಚಮತ್ಕಾರ. ಬೂಸ್ಟ್ ಬಂದ ಕಾಫಿಯಲ್ಲಿ ಯಾವುದೋ ಜೈವಿಕ ಪ್ರಕ್ರಿಯೆಯಾಗಿ ಹೊಸ ರುಚಿಯನ್ನು ತಂದುಕೊಟ್ಟಿತು.

ಈಗಲೂ ಸಹ ಆಹಾರದ ಬಗ್ಗೆ ಕೊಂಚ ಆಸಕ್ತಿಯುಳ್ಳವರು ಹಿರಿಯರ ಅನುಭವವನ್ನು ಬಳಸಿಕೊಂಡು ಆಧುನಿಕ ವಿಜ್ಞಾನದ ಕೊಡುಗೆಯನ್ನು ಬೆಸೆದರೆ ಉತ್ತಮ ಆಹಾರ, ರಸ ಮತ್ತು ರುಚಿಯೂ ಮುಂಗಾರು ಮಳೆಯ ನಾದಕ್ಕೆ ಜುಗಲ್‍ಬಂದಿ ಆಗಬಹುದು.


ಇದನ್ನು ಓದಿ: ಸುಪ್ರೀಂಕೋರ್ಟಿನ ನ್ಯಾಯಾಂಗ ನಿಂದನೆ ನೋಟೀಸಿಗೆ ವಕೀಲ ಪ್ರಶಾಂತ್ ಭೂಷಣ್ ಸ್ಫೋಟಕ ಉತ್ತರ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...