Homeಮುಖಪುಟಈ ಮುಂಗಾರಿಗೆ ಯಾವ ರೀತಿಯ ವೈವಿಧ್ಯ ಆಹಾರ ಉತ್ತಮ?: ಕೆ.ಸಿ ರಘು

ಈ ಮುಂಗಾರಿಗೆ ಯಾವ ರೀತಿಯ ವೈವಿಧ್ಯ ಆಹಾರ ಉತ್ತಮ?: ಕೆ.ಸಿ ರಘು

ಈಗಲೂ ಸಹ ಆಹಾರದ ಬಗ್ಗೆ ಕೊಂಚ ಆಸಕ್ತಿಯುಳ್ಳವರು ಹಿರಿಯರ ಅನುಭವವನ್ನು ಬಳಸಿಕೊಂಡು ಆಧುನಿಕ ವಿಜ್ಞಾನದ ಕೊಡುಗೆಯನ್ನು ಬೆಸೆದರೆ ಉತ್ತಮ ಆಹಾರ, ರಸ ಮತ್ತು ರುಚಿಯೂ ಮುಂಗಾರು ಮಳೆಯ ನಾದಕ್ಕೆ ಜುಗಲ್‍ಬಂದಿ ಆಗಬಹುದು.

- Advertisement -
- Advertisement -

ನಮ್ಮ ನಿತ್ಯ ಆಹಾರ ಹೊರ ಜಗತ್ತನ್ನು ಒಳಜಗತ್ತನ್ನಾಗಿ ಪರಿವರ್ತಿಸುವ ನಿರಂತರ ಪ್ರಕ್ರಿಯೆ. ಹೊರ ಜಗತ್ತು ಎಷ್ಟು ವೈವಿಧ್ಯಮಯವೋ, ಒಳಜಗತ್ತು ಸಹ ವೈವಿಧ್ಯತೆಯ ಆಗರವೇ. ನಾವೆಂಬ ನಾವು ಕೇವಲ ನಾವೇ ಅಲ್ಲ. ನಮ್ಮ ದೇಹವೂ ಲಕ್ಷಾಂತರ ಸೂಕ್ಷ್ಮ ಜೀವಿಗಳಿಗೆ ಸೂರು ಹೌದು. ಇತ್ತೀಚಿನ ವಿಜ್ಞಾನ ಹೇಳುವಂತೆ ನಮ್ಮ ದೇಹದಲ್ಲಿ ನಾವೇ ಅತಿಥಿಗಳು. ಅಲನಾ ಕೋಲನ್ ಅವರು ಈ ಬಗೆಗೆ ಬರೆದಿರುವ ಪುಸ್ತಕದ ಹೆಸರೇ “10 ಪರ್ಸೆಂಟ್ ಹ್ಯೂಮನ್”.

ಸೂಕ್ಷ್ಮ ಜೀವಿಗಳ ಜಗತ್ತು ನಮ್ಮ ಇರುವಿಕೆಯ ಜೊತೆಗೇ ಹೆಣೆದುಕೊಂಡಿದೆ. ಬಳ್ಳಿಯಿಂದ ಮರ ನಿಂತಿದೆಯೋ ಅಥವಾ ಮರದಿಂದ ಬಳ್ಳಿ ನಿಂತಿದೆಯೋ ಹೇಳಲಾಗದು. ನಮ್ಮ 23 ಸಾವಿರ ಗುಣಾಣುಗಳಲ್ಲಿ ಸುಮಾರು 10ಸಾವಿರ ಗುಣಾಣುಗಳು ವೈರಸ್‍ಗಳಿಂದ ಮಾಡಲ್ಪಟ್ಟವು ಎನ್ನುತ್ತಾರೆ. ಹಾಗಾಗಿ ನಮ್ಮ ಆಹಾರ ನಮಗಾಗಿ ಎನ್ನುವಂತಿಲ್ಲ. ಅತಿಥಿ ಅತಿಥೇಯರ ಸರ್ವಾಂಗೀಣ ಒಳಿತಿಗಾಗಿ ನಾವು ಆಹಾರವನ್ನು ಸೇವಿಸಬೇಕು. ಇದು ಕೇವಲ ನಾಲಿಗೆಯ ರುಚಿಗೆ ಜೋತು ಬೀಳುವ ಕ್ಷುಲ್ಲಕ ವಿಷಯವಲ್ಲ. ಯಾವುದೋ ಕೆಟ್ಟ ಆಹಾರವನ್ನು ಒಗ್ಗಿಸಿಕೊಂಡುಬಿಟ್ಟರೆ ಮಾದಕ ವಸ್ತುವಿಗೆ ನಮ್ಮನ್ನೇ ನಾವು ಮಾರಿಕೊಂಡಂತೆ. ಹೀಗಾಗದೆ ವೈವಿಧ್ಯಮಯ ಆಹಾರ ಪದ್ಧತಿಯನ್ನು ಅಷ್ಟೇ ವೈವಿಧ್ಯಮಯವಾದ ನಮ್ಮ ದೇಹವೆನ್ನುವ ಜೀವರಾಶಿಗೆ ಒದಗಿಸತಕ್ಕದ್ದು. ಈ ರೀತಿಯಲ್ಲಿ ನಮ್ಮ ದೇಹವೆನ್ನುವುದು ಒಂದು ಪೃಕೃತಿ ಪಂಜರವೇ ಸರಿ.

ಪ್ರತಿ ಋತುವಿಗೆ ತಕ್ಕಂತೆ ಆಹಾರದ ಬದಲಾವಣೆ ಆಗತಕ್ಕದ್ದು ವಾಡಿಕೆ ಎಂಬಂತಿದೆ. ನಮ್ಮ ಹಿಂದಿನವರು ಋತು ಬುಕ್, ಹಿತ ಬುಕ್ ಮತ್ತು ಮಿತ ಬುಕ್ ಎಂದು ಹೇಳುತ್ತಿದ್ದರು. ಅಂದರೆ ಕಾಲಕ್ಕೆ ತಕ್ಕಂತೆ ಹಿತಮಿತವಾದ ಆಹಾರವನ್ನು ಬಳಸುವುದರ ಅಗತ್ಯದ ಬಗೆಗಿನ ಮಾತು ಅದು. ಅಧ್ಯಯನದ ಪ್ರಕಾರ ಕಾಡಿನಲ್ಲೇ ವಾಸಿಸುವ ಅನೇಕ ಬುಡಕಟ್ಟು ಜನಾಂಗದವರ ದೇಹ ಪೃಕೃತಿಯನ್ನು ಅಧ್ಯಯನ ಮಾಡಿದಾಗ ಕಂಡು ಬರುವುದೇನೆಂದರೆ ಪ್ರತಿ ಋತುವಿಗೂ ಅವರ ದೇಹದ ಸೂಕ್ಷ್ಮ ಜೀವ ಜಗತ್ತು ಸಂಪೂರ್ಣವಾಗಿ ಬದಲಾಗುತ್ತದೆ. ಅಂದರೆ ಬ್ಯಾಕ್ಟೀರಿಯಾ, ಪ್ರೊಟೊಜೋವಾ ಮತ್ತು ವೈರಸ್‍ಗಳ ಜಗತ್ತು ಋತುವಿಂದ ಋತುವಿಗೆ ಕಾಲಕ್ಕೆ ತಕ್ಕಂತೆ ಆಹಾರ ಪದ್ಧತಿ ಬದಲಾಗುವುದರಿಂದ ಬದಲಾಗುತ್ತವೆ. ತನ್ನ ದೇಹದಲ್ಲಿರುವ ಜೀವ ಜಗತ್ತು ನಿಂತ ನೀರಾಗದೇ, ನಿರಂತರವಾಗಿ ಪೃಕೃತಿ ಜೊತೆಗೆ ಹೆಣೆದು ಬೆಸೆದುಕೊಂಡು ಬದಲಾಗುತ್ತಾ ಇರುತ್ತದೆ. ಆರೋಗ್ಯವೆಂದರೆ ಹೀಗೂ ವ್ಯಾಖ್ಯಾನಿಸುವುದುಂಟು” “ನಿರಂತರವಾಗಿ ಬದಲಾಗುವ ಹೊರ ಜಗತ್ತಿನೊಂದಿಗೆ ಸದಾ ಹೊಂದಿಕೊಳ್ಳುವ ಪೃಕ್ರಿಯೆ” ಎಂದು. ಈ ರೀತಿ ನಮ್ಮ ದೇಹ ಪೃಕೃತಿಯೂ ಸಹ ನಮ್ಮ ಆಹಾರ ಪದ್ಧತಿಯ ಮೂಲಕ ನಿರಂತರವಾಗಿ ಹೊಂದಿಕೊಳ್ಳುತ್ತ ಸಾಗಿದಾಗ ದೇಹ ಮತ್ತು ಪರಿಸರದ ಮಧ್ಯೆ ಒಂದು ಸಾವಯವ ಸಂಬಂಧ ಏರ್ಪಡುತ್ತದೆ. ಉಪನಿಷತ್ತಿನಲ್ಲಿ ನೀವು ಬಳಸುವ ಆಹಾರ ನಿಮ್ಮನ್ನು ಬಳಸುತ್ತದೆ ಎನ್ನುವ ಮಾತಿದೆ. ಇತ್ತೀಚಿನ ಜಾಗತೀಕರಣದ ಆಹಾರ ಸಂಸ್ಕೃತಿಯನ್ನು ಮ್ಯಾಕ್‍ಡೊನಾಲ್ಡ್‍ಡೈಸೇಶನ್ ಅಥವಾ ಕೊಕಾಕೊಲೊನೈಸೇಶನ್ ಎನ್ನುತ್ತಾರೆ. ಅಂದರೆ ಇಡೀ ಜಗತ್ತಿನ ಆಹಾರ ಸಂಸ್ಕೃತಿಯನ್ನು ಬಹು ಸಂಸ್ಕೃತಿಯಿಂದ ಅತ್ಯಂತ ಇಕ್ಕಟ್ಟಾದ ಏಕಸಂಸ್ಕೃತಿತಿಗೆ ತಂದು ನಿಲ್ಲಿಸಿರುವುದು. ಈ ಮ್ಯಾಕ್ಡೊನಾಲ್ಡ್‍ಡೈಸೇಶನ್ ಎನ್ನುವುದು ಸಮಾಜ ಶಾಸ್ತ್ರದಲ್ಲಿ ಒಂದು ವಿಶೇಷ ಅಧ್ಯಾಯನ ಆಗಿದೆ. ಇದು ಕೇವಲ ಆಹಾರದಲ್ಲಿ ಮಾತ್ರವಲ್ಲ ಎಲ್ಲ ರೀತಿಯ ವೈವಿಧ್ಯಮಯ ಸಂಸ್ಕೃತಿಯನ್ನು ಮಾರಣಹೋಮ ಮಾಡಿ ಏಕಮಯ ಸಂಸ್ಕೃತಿಗೆ ತಂದು ನಿಲ್ಲಿಸುವಂತದ್ದಾಗಿದೆ.

ಸ್ಥಳೀಯವಾಗಿ ಬೆಳೆದ ಮತ್ತು ಸಾಂಸ್ಕೃತಿಕವಾಗಿ ಬೆಳೆದು ಬಂದು ಬಳಸುವ ನಮ್ಮ ಆಹಾರ ಪದ್ಧತಿ ಸಾಮಾನ್ಯವಾಗಿ ಹೀಗೆ ಇದ್ದದ್ದಾಗಿತ್ತು. ಮಳೆಗಾಲ ಬಂತೆಂದರೆ ಮಲೆನಾಡಿನಲ್ಲಿ ಕಾಡು ಬಳುವಳಿಯಾಗಿ ನೀಡುವ ಅಣಬೆ, ಕಳಲಿ, ಗೆಡ್ಡೆ-ಗೆಣಸುಗಳು, ತರತರದ ಬೇಲಿ ಸೊಪ್ಪುಗಳು, ಹಳ್ಳ-ಕೊಳ್ಳದಿಂದ ಸಿಗುವ ಏಡಿ ಮೀನುಗಳು ಕಾಲಕ್ಕೆ ತಕ್ಕಂತೆ ಲಭ್ಯವಾಗುತ್ತಿದ್ದವು. ಈ ರೀತಿಯ ಆಹಾರ ಬಳಕೆಯಿಂದ, ಎಷ್ಟೋ ಜನ ವಿಜ್ಞಾನದ ಮಾಹಿತಿ ತಿಳಿಯದೇ ವೈಜ್ಞಾನಿಕವಾದ ಆಧಾರದಲ್ಲಿಯೇ ಬದುಕು ಕಟ್ಟಿಕೊಳ್ಳುವುದ್ದಾಗಿದೆ. ಇಂದು ಆಹಾರ ಭದ್ರತೆ ಹಿಂದಿಗಿಂತ ಅತ್ಯಂತ ಉನ್ನತ ಸ್ಥಿತಿಯಲ್ಲಿರುವುದು ಸತ್ಯ. ಆದರೆ ಜಗತ್ತಿನ ಶೇಕಡ 80ರಷ್ಟು ಆಹಾರ ಧಾನ್ಯ ಕೇವಲ 5 ಧಾನ್ಯಗಳಾಗಿವೆ. ಅಕ್ಕಿ, ಗೋಧಿ, ಮೆಕ್ಕೆಜೋಳ, ಸೋಯಾಬೀನ್, ಆಲೂಗಡ್ಡೆ ಎನ್ನಬಹುದು. ಇದರಲ್ಲಿ ಮೆಕ್ಕೆಜೋಳ ಮತ್ತು ಸೋಯಾಬೀನ್‍ಗಳನ್ನು ಪ್ರಾಣಿಗಳಿಗೆ ತಿನ್ನಲು ಕೊಟ್ಟರೆ ನಮಗೆ ಉಳಿಯುವ ಆಹಾರ ವೈವಿಧ್ಯತೆ ಮೂರು ಅಥವಾ ನಾಲ್ಕು ಮಾತ್ರವಾಗಿವೆ. ಅದರಲ್ಲಿಯೂ ಸಹ ಭತ್ತ ಮತ್ತು ಗೋಧಿಯ ವೈವಿಧ್ಯಮಯ ತಳಿಗಳು ಇಂದು ಲಭ್ಯವಿಲ್ಲ. ಉದಾಹರಣೆಗೆ ರಕ್ತಶಾಲಿ ಎನ್ನುವ ಅಕ್ಕಿ ಗರ್ಭಿಣಿಯರಿಗೆ ಉತ್ತಮವಾದ ಅಕ್ಕಿ ಎನ್ನುತ್ತದೆ ಆಯುರ್ವೇದ. ಕೇರಳದ ನವರಾ ಅಕ್ಕಿ ಔಷಧಿಗೆ ಬಹಳ ಹಿಂದಿನಿಂದಿಲೂ ಬಳಸಿಕೊಂಡು ಬಂದ ಅಕ್ಕಿಯಾಗಿದೆ. ಮೂಳೆ ಸವೆತಕ್ಕೆ ಲೇಪಿಸುವ ಆಯುರ್ವೇದ ಚಿಕಿತ್ಸೆಯಲ್ಲಿ ಇದನ್ನು ಬಳಸುತ್ತಾರೆ. ಮೆಕ್ಕೆಜೋಳ ಕಾಮನ ಬಿಲ್ಲಿನ ಎಲ್ಲ ಬಣ್ಣಗಳನ್ನು ಒಳಗೊಂಡ ಏಕದಳ ಧಾನ್ಯ. ಆದರೆ ಇಂದು ನಮಗೆ ಅವು ಕಾಣಸಿಗುವುದಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿಗೂ ಸುಮಾರು 100 ರೀತಿಯ ಭತ್ತದ ತಳಿಗಳನ್ನು ಬೆರಳೆಣಿಕಿಯಷ್ಟು ರೈತರು ಬಳಸುತ್ತಿದ್ದಾರೆ.

ಮುಂಗಾರಿಗೆ ತಕ್ಕಂತೆ ಅನೇಕ ವೈವಿದ್ಯಮಯ ಆಹಾರ ಪದ್ಧತಿ ನಮ್ಮಲ್ಲಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರಿಗೂ ಮುನ್ನ ನೂರಾರು ರೀತಿಯ ಕಾಡು ಎಲೆಯ ಕುಡಿಗಳನ್ನು ತಂದು ಗಸಿ ಮಾಡಿ ಆರು ತಿಂಗಳಿಗೆ ಬಳಸುತ್ತಾರೆ. ಅವು ಬಹು ಪೋಷಕಾಂಶಗಳ ಮತ್ತು ಖನಿಜಗಳ ಸಂಪತ್ತೆ ಸರಿ. ಹಾಗೆಯೇ ತರತರದ ಹಪ್ಪಳ ಸಂಡಿಗೆ, ಚಟ್ನಿ ಪುಡಿಗಳು, ಉಪ್ಪಿನಕಾಯಿಗಳು, ಹಲಸಿನ ಹಲವು ಬಗೆಯ ಪದಾರ್ಥಗಳು, ಕೆಸು ಎಲೆ, ತಜಂಕ್ ಸೊಪ್ಪಿನ ಪತ್ರೊಡೆ ನಮಗೆ ತಿಳಿದೆ ಇದೆ. ಚಟ್ನಿ ಪುಡಿಗಳ ಜಗತ್ತೆ ಅತ್ಯಂತ ವಿಸ್ತಾರವಾದುದು. ಏಕದಳ ಧಾನ್ಯ, ದ್ವಿದಳ ಧಾನ್ಯ, ಎಣ್ಣೆ ಕಾಳುಗಳು, ಸಾಂಬಾರ ಪದಾರ್ಥಗಳು ಹೀಗೆ ಆಧುನಿಕ ಪೌಷ್ಟಿಕಾಂಶ ತಜ್ಞರ ಸಂಶೋಧನೆಗ ಕನ್ನಡಿ ಹಿಡಿಯುವ ಹಾಗಿವೆ. ಈ ಪುಡಿಗಳು ಅನ್ನಕ್ಕೂ ಸೈ ರೊಟ್ಟಿಗೂ ಕೈ ಜೋಡಿಸುತ್ತವೆ. ಎಲ್ಲ ಕಾಲಕ್ಕೂ ಎಲ್ಲ ಪದಾರ್ಥಗಳಿಗೂ ಮಿಲನವಾಗುವ ಮಿಕ್ಷರ್‍ಗಳು ಇವು.

ಕಾಫಿಯಲ್ಲಿ ಮಾನ್ಸೂನ್ ಮಲಬಾರ್ ಎಂಬ ಕಾಫಿ ಇದೆ. ವಿದೇಶದಲ್ಲೂ ಇದಕ್ಕೆ ಅಪಾರವಾದ ಬೇಡಿಕೆ ಇದೆ. ಇದರ ಹುಟ್ಟೇ ಆಕಸ್ಮಿಕ. ರಪ್ತು ಮಾಡಲು ಗೋದಾಮಿನಲ್ಲಿ ತಂದಿಟ್ಟ ಕಾಫಿ ಮಂಗಳೂರಿನಲ್ಲಿ ಸಮಯಕ್ಕೆ ಸರಿಯಾಗಿ ರಫ್ತಾಗದೇ ಮುಂಗಾರಿನಲ್ಲಿ ಗೋದಾಮಿನಲ್ಲಿ ಉಳಿಯಬೇಕಾಯಿತು. ಹೀಗೆ 6 ತಿಂಗಳು ಶೇಖರಿಸಿಟ್ಟಿದ್ದರಿಂದ ಅದಕ್ಕೆ ಬೂಸ್ಟ್ ಬಂದು ಕೆಟ್ಟು ಹೋಗಿತ್ತು. ಆದರೂ ಇದನ್ನೇ ಧೈರ್ಯ ಮಾಡಿ ರಫ್ತು ಮಾಡಿದ ವ್ಯಾಪಾರಿಗೆ ಆಶ್ಚರ್ಯಕರವಾಗಿ ವಿದೇಶದಿಂದ ಇನ್ನು ಮುಂದೆ ನಮಗೆ ಇಂಥದ್ದೇ “ಒಳ್ಳೆಯ” ಕಾಫಿ ಕಳಿಸಿ ಎಂದು ಬೇಡಿಕೆ ಹೆಚ್ಚಾಯಿತು. ಇದು ಮಾನ್ಸೂನ್ ಮಾಡಿದ ಚಮತ್ಕಾರ. ಬೂಸ್ಟ್ ಬಂದ ಕಾಫಿಯಲ್ಲಿ ಯಾವುದೋ ಜೈವಿಕ ಪ್ರಕ್ರಿಯೆಯಾಗಿ ಹೊಸ ರುಚಿಯನ್ನು ತಂದುಕೊಟ್ಟಿತು.

ಈಗಲೂ ಸಹ ಆಹಾರದ ಬಗ್ಗೆ ಕೊಂಚ ಆಸಕ್ತಿಯುಳ್ಳವರು ಹಿರಿಯರ ಅನುಭವವನ್ನು ಬಳಸಿಕೊಂಡು ಆಧುನಿಕ ವಿಜ್ಞಾನದ ಕೊಡುಗೆಯನ್ನು ಬೆಸೆದರೆ ಉತ್ತಮ ಆಹಾರ, ರಸ ಮತ್ತು ರುಚಿಯೂ ಮುಂಗಾರು ಮಳೆಯ ನಾದಕ್ಕೆ ಜುಗಲ್‍ಬಂದಿ ಆಗಬಹುದು.


ಇದನ್ನು ಓದಿ: ಸುಪ್ರೀಂಕೋರ್ಟಿನ ನ್ಯಾಯಾಂಗ ನಿಂದನೆ ನೋಟೀಸಿಗೆ ವಕೀಲ ಪ್ರಶಾಂತ್ ಭೂಷಣ್ ಸ್ಫೋಟಕ ಉತ್ತರ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....