Homeಕರ್ನಾಟಕದೆಹಲಿಯ ಐತಿಹಾಸಿಕ ರೈತ ಹೋರಾಟದಲ್ಲಿ ಭಾಗಿಯಾಗಿರುವ ಕರ್ನಾಟಕದ ರೈತ ಮುಖಂಡರು ಹೇಳಿದ್ದೇನು?

ದೆಹಲಿಯ ಐತಿಹಾಸಿಕ ರೈತ ಹೋರಾಟದಲ್ಲಿ ಭಾಗಿಯಾಗಿರುವ ಕರ್ನಾಟಕದ ರೈತ ಮುಖಂಡರು ಹೇಳಿದ್ದೇನು?

'ಸರ್ಕಾರ ಪ್ರತಿಭಟನಾಕಾರರನ್ನು ಭಯೋತ್ಪಾದಕರು, ಖಾಲಿಸ್ತಾನಿಗಳು ಎಂದು ಅಪಪ್ರಚಾರ ಮಾಡುತ್ತಿದೆ. ಅಷ್ಟಕ್ಕೂ ಅವರು ಭಯೋತ್ಪಾದಕರಾದರೆ ಸರ್ಕಾರವೇಕೆ ಪ್ರತಿಭಟನಾಕಾರರನ್ನು ಎರೆಡೆರಡು ಬಾರಿ ಮಾತುಕತೆಗೆ ಕರೆದಿದೆ?'

- Advertisement -
- Advertisement -

ಸುಗ್ರೀವಾಜ್ಞೆಗಳ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾನೂನುಗಳ ವಿರುದ್ಧ ದೇಶದ ರಾಜಧಾನಿಯಲ್ಲಿ ನಡೆಯುತ್ತಿರುವ ದೆಹಲಿ ಚಲೋ ಆಂದೋಲನ ಇಂದಿಗೆ 6ನೇ ದಿನಕ್ಕೆ ಕಾಲಿಟ್ಟಿದೆ. ಲಕ್ಷಾಂತರ ರೈತರು ದೆಹಲಿಯ ಐದು ಪ್ರಮುಖ ಗಡಿಗಳಲ್ಲಿ ಜಮಾಯಿಸಿದ್ದು ಇವರನ್ನು ಸೇರಲು ಇನ್ನಷ್ಟು ರೈತರು ಹಲವು ರಾಜ್ಯದಿಂದ ಹೊರಟಿದ್ದಾರೆ. ಪ್ರತಿಭಟನಾಕಾರರು ಸರ್ಕಾರ ಜಾರಿಗೆ ತಂದಿರುವ ಮೂರು ಕಾನೂನುಗಳನ್ನು ವಾಪಾಸು ಪಡೆಯಬೇಕು ಇಲ್ಲವಾದಲ್ಲಿ ಪ್ರತಿಭಟನೆಯಿಂದ ಕದಲುವ ಮಾತೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ರಾಷ್ಟ್ರದ ರಾಜಧಾನಿ ದೆಹಲಿಗೆ ನಿಕಟದಲ್ಲಿರುವ ರಾಜ್ಯಗಳ ರೈತರಿಗೆ ಹೋಲಿಸಿದರೆ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರೈತರು ಭಾರಿ ಸಂಖ್ಯೆಯಲ್ಲಿ ಭಾಗಿಯಾಗಿಲ್ಲವಾದರೂ, ಈ ಐತಿಹಾಸಿಕ ಹೋರಾಟದಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಭಾಗಿಯಾಗಿದ್ದಾರೆ ಮತ್ತು ಇನ್ನೂ ಸೇರಿಕೊಳ್ಳುತ್ತಿದ್ದಾರೆ. ಕರ್ನಾಟಕವೊಂದರಿಂದಲೇ 9 ಪ್ರಮುಖ ರೈತ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿವೆ.

ಸಿಂಧೂ ಸ್ವಾಮಿ

ಕಳೆದ ಹಲವಾರು ವರ್ಷಗಳಿಂದ ರೈತ ಹೋರಾಟದ ಭಾಗವಾಗಿರುವ ತುಮಕೂರಿನ ಜ್ಞಾನ ಸಿಂಧೂ ಸ್ವಾಮಿ ಅವರು ಹೇಳುವಂತೆ, “ಇದೊಂದು ಐತಿಹಾಸಿಕ ಹೋರಾಟವಾಗಿದೆ. ನವೆಂಬರ್ 22ರಂದು ಕರ್ನಾಟಕದ ಹಲವು ಪ್ರಮುಖ ರೈತ ಸಂಘಟನೆಗಳ ಜೊತೆಗೂಡಿ, ನಾವೆಲ್ಲಾ ದೆಹಲಿಗೆ ಹೊರಟಿದ್ದೆವು. ನಮ್ಮ ಪ್ರಯಾಣದ ನಡುವೆ ಆಂಧ್ರ ಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ ಸೇರಿದಂತೆ ಪ್ರತಿದಿನವು ನಮ್ಮ ತಂಡ ಪತ್ರಿಕಾಗೋಷ್ಠಿ, ಸಭೆಗಳನ್ನು ನಡೆಸಿದ್ದೇವೆ. ಜೊತೆಗೆ ಪ್ರತಿ ರಾಜ್ಯದಲ್ಲೂ ನಮಗೆ ಭಾರಿ ಜನಸ್ಪಂದನೆ ದೊರೆತಿದ್ದಲ್ಲದೆ, ಅಲ್ಲಿನ ರೈತರ ಜಾಥಾ ಕೂಡಾ ನಮ್ಮನ್ನು ಸೇರಿಕೊಂಡು ನಾವು ರಾಜಸ್ತಾನದವರೆಗೂ ಯಾವುದೇ ತೊಂದರೆಯಿಲ್ಲದೆ ತಲುಪಿದೆವು.

“ಆದರೆ ರಾಜಸ್ತಾನ-ಉತ್ತರ ಪ್ರದೇಶ ಗಡಿಯಲ್ಲಿ ನಮಗೆ ತೊಂದರೆಗಳಾಯಿತು. ಗಡಿಯಲ್ಲಿ ನಿಂತಿದ್ದ ಉತ್ತರ ಪ್ರದೇಶ ಪೊಲೀಸರು ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಮಧ್ಯಪ್ರದೇಶದಲ್ಲಿ ನಮ್ಮ ಜೊತೆ ಸೇರಿಕೊಂಡಿದ್ದ ನರ್ಮದಾ ಬಚಾವೋ ಆಂದೋಲನದ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರನ್ನು ಬಂಧಿಸಿದ್ದರಲ್ಲದೆ, ನಮ್ಮನ್ನು ಮುಂದುವರೆಯಲು ತಡೆಯೊಡ್ಡಿದರು. ಇದರ ವಿರುದ್ದ ನವೆಂಬರ್ 25ರಿಂದ ನಾವು ಎರಡು ದಿನ ಹೆದ್ದಾರಿಯನ್ನು ತಡೆದು ಪ್ರತಿಭಟನೆ ಮಾಡಿದೆವು. ಈ ಹೊತ್ತಿನಲ್ಲಿ ಯುಪಿ ಪೊಲೀಸರು ನಿರಂತವಾಗಿ ಎರಡು ದಿನ ನಮಗೆ ತೊಂದರೆಗಳನ್ನು ಕೊಟ್ಟಿದ್ದಾರೆ” ಎಂದು ಹೇಳಿದರು.

“ಈ ಪ್ರತಿಭಟನೆಯ ನಂತರ ಯುಪಿ ಪೊಲೀಸರು ನಮ್ಮನ್ನು ದೆಹಲಿಗೆ ಪ್ರಯಾಣಿಸಲು ಅನುಮತಿ ನೀಡಿದರಾದರೂ, ಅವರ ಎಸ್ಕಾರ್ಟ್ ಮುಖಾಂತರ ದೆಹಲಿಯ ಬರಾರಿ ನಿರಂಕರಿ ಮೈದಾನಕ್ಕೆ ಕರೆದುಕೊಂಡು ಬಂದರು. ಈ ಹೊತ್ತಿಗೆ ಟಿಕ್ರಿ ಗಡಿಯಿಂದ ರೈತರನ್ನು ಅಲ್ಲಿಗೆ ಕರೆತರಲಾಗಿತ್ತು. ಆದರೆ ರೈತರನ್ನು ಬಂಧಿಸಲು ಬೇಕಾಗಿಯೇ ಈ ಮೈದಾನವನ್ನು ಬಳಸಲು ದೆಹಲಿ ಸರ್ಕಾರವನ್ನು ಕೇಂದ್ರ ಸರ್ಕಾರ ಕೇಳಿತ್ತು ಎಂದು ನಮಗೆ ನಂತರವೇ ಅರಿವಾಗಿದ್ದು. ಪ್ರತಿಭಟನಾಕಾರರನ್ನು ಬೇರೆ ಬೇರೆ ಕಡೆಗೆ ಸೇರಿಸಿ ಅಲ್ಲಿ ಬಂಧಿಸಿಡುವ ಕುತಂತ್ರವನ್ನು ಕೇಂದ್ರ ಸರ್ಕಾರ ಹೂಡಿತ್ತು. ಇದು ತಿಳಿದ ನಂತರ ರೈತರು ಅಲ್ಲಿಗೆ ಬರಲು ನಿರಾಕರಿಸಿದರು. ಇದರ ನಂತರ ರೈತರು ನಿರಂಕರಿ ಕ್ರೀಡಾಂಗಣಕ್ಕೆ ಬರದೆ ಗಡಿಯಲ್ಲೇ ಪ್ರತಿಭಟನೆಯನ್ನು ಮುಂದುವರೆಸಿದ್ದು, ದೆಹಲಿಯನ್ನು ಸಂಪರ್ಕಿಸುವ ಐದು ಗಡಿಯಲ್ಲಿ ಜಮಾಯಿಸಿರುವ ಕಾರಣಕ್ಕೆ ರಸ್ತೆಗಳು ಬಂದಾಗಿದೆ. ನಮ್ಮ ಹೋರಾಟದ ಗುರಿ ಒಂದೇ ಆಗಿದ್ದು, ಕೇಂದ್ರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನನ್ನು ವಾಪಾಸು ಪಡೆಯಬೇಕು ಎಂದಷ್ಟೇ” ಎಂದು ಜ್ಞಾನ ಸಿಂಧು ಸ್ವಾಮಿ ಹೇಳಿದರು.

ಟಿ.ಯಶವಂತ

ನವೆಂಬರ್ 21ರಂದು ಬೆಂಗಳೂರಿನಿಂದ ಹೊರಟು ಇಲ್ಲಿಯತನಕ ದೆಹಲಿ ರೈತ ಹೋರಾಟದಲ್ಲಿ ಪಾಲ್ಗೊಂಡಿರುವ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಟಿ.ಯಶವಂತ ಅವರು ಹೇಳುವಂತೆ, “ರಾಜಸ್ತಾನದ ಗಡಿಯಲ್ಲಿ ಯುಪಿ ಪೊಲೀಸರು ನಮ್ಮನ್ನು ತಡೆದಾಗ ಕೆಲವು ಸಂಘ ಪರಿವಾರದ ಪುಂಡರು ಪ್ರಯಾಣಿಕರ ಸೋಗಿನಲ್ಲಿ ಬಂದು ಮಹಿಳಾ ಹೋರಾಟಗಾರರನ್ನು ಅಶ್ಲೀಲವಾಗಿ ನಿಂದನೆ ಮಾಡಿ ನಮ್ಮನ್ನು ಪ್ರಚೋದಿಸಲು ನೋಡಿದ್ದರು. ಅದೇ ಪ್ರಯತ್ನವನ್ನು ಮರುದಿನ ಬೆಳಿಗ್ಗೆ ಕೂಡಾ ಮುಂದುವರೆಸಿದ್ದರು. ಆದರೆ ಹೋರಾಟಗಾರರು ವಿಚಲಿತರಾಗದೆ ಶಾಂತವಾಗಿ ಇದ್ದುದರಿಂದ ಅವರ ಪ್ರಯತ್ನ ವಿಫಲವಾಯಿತು” ಎನ್ನುತ್ತಾರೆ.

“ದೆಹಲಿಯ ಐದು ಗಡಿಗಳು ಈಗಾಗಲೇ ಬಂದಾಗಿದೆ, ಜೊತೆಗೆ ಅಲ್ಲಿ ಇನ್ನೂ ಹೆಚ್ಚಿನ ರೈತರು ಬಂದು ಸೇರುತ್ತಿದ್ದಾರೆ. ಅಲ್ಲದೆ ಇಂದು ಉತ್ತರ ಪ್ರದೇಶದ ಗಾಝಿಯಾಬಾದ್‍ನಲ್ಲಿ ಇವತ್ತು ಕೂಡ ಹೆಚ್ಚಿನ ಜನರು ಬಂದು ಸೇರುತ್ತಿದ್ದಾರೆ. ಹೋರಾಟ ಇನ್ನೂ ತೀವ್ರಗೊಳ್ಳುತ್ತದೆ.

ಕೇಂದ್ರ ಸರ್ಕಾರ ರೈತ ಸಂಘಟನೆಗಳಲ್ಲಿ ಒಡಕು ತರಲು ಪ್ರಯತ್ನಿಸಿದರೂ ಅವುಗಳನ್ನು ರೈತರು ಹಿಮ್ಮೆಟ್ಟಿಸಿದ್ದಾರೆ. ಇಡೀ ಪ್ರತಿಭಟನೆ ರೈತ ವಿರೋಧಿ ಕಾನೂನುಗಳನ್ನು ವಾಪಾಸು ಪಡೆಯಬೇಕು ಎನ್ನುವುದರ ಬಗ್ಗೆ ಅಚಲವಾಗಿದೆ” ಎಂದರು.

ನರೇಂದ್ರ ಮೋದಿ ಸರ್ಕಾರ ಕೃಷಿಯನ್ನು ಕಾರ್ಪೊರೆಟೀಕರಣ ಮಾಡಲು ಹಾಗೂ ಬಹುರಾಷ್ಟ್ರೀಯ ಕಂಪೆನಿಗಳಿಗೆ ಕೊಡಲು ಭಾರಿ ಆತುರಪಡುತ್ತಿದೆ. ಈ ಮಟ್ಟದ ಪ್ರತಿಭಟನೆಗಳನ್ನು ಅವರು ನಿರೀಕ್ಷೆ ಮಾಡಿರಲಿಲ್ಲ. ದೆಹಲಿ ಸುತ್ತ ಕೋಟ್ಯಾಂತರ ರೈತರು ನೆರೆದಿದ್ದರೂ ಕೇಂದ್ರ ಸರ್ಕಾರ ಇನ್ನೂ ಕೃಷಿ ಕಾನೂನನ್ನು ಸಮರ್ಥನೆ ಮಾಡುತ್ತಲೇ ಇದೆ. ಒಂದು ಕಡೆ ರೈತರನ್ನು ಮಾತುಕತೆಗೆ ಕರೆಯುತ್ತಾ ಇನ್ನೊಂದು ಕಡೆ ರೈತರನ್ನು ಅವರು ರೈತರೇ ಅಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆಕ್ಟೋಪಸ್‍ನ ಕಾಲುಗಳು ಬೇರೆಬೇರೆ ಕಡೆ ಹರಡಿ ಬೇರೆ ಬೇರೆ ರೀತಿಯಲ್ಲಿ ವರ್ತಿಸುತ್ತವಾದರೂ ಅವನ್ನು ಕೇವಲ ಒಂದೇ ಮೆದುಳು ಹೇಗೆ ನಿಯಂತ್ರಿಸುತ್ತದೆಯೋ ಹಾಗೆಯೇ ಕೇಂದ್ರ ಸರ್ಕಾರ ವರ್ತಿಸುತ್ತಿದೆ. ಇದರ ಮೆದುಳನ್ನು ಆರ್‌ಎಸ್‍ಎಸ್ ನಿರ್ವಹಿಸುತ್ತಾ ಇದೆ. ಒಟ್ಟಿನಲ್ಲಿ ಇವರು ರೈತರ ಈ ಹೋರಾಟವನ್ನು ಕುಖ್ಯಾತಿಗೊಳಿಸಲು ಹಾಗೂ ರೈತ ಸಂಘಟನೆಗಳ ನಡುವೆ ಒಡಕು ತರಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರು ಅಪಪ್ರಚಾರ ಮಾಡಿದಂತೆ ಇಲ್ಲಿ ರೈತರಲ್ಲಿ ಆಕ್ರೋಶ ಹೆಚ್ಚುತ್ತಿದೆ” ಎನ್ನುತ್ತಾರೆ ಯಶವಂತ್.

“ಈ ಕರಾಳ ಕಾಯದೆಗಳನ್ನು ವಾಪಾಸು ಪಡೆಯುವವರೆಗೂ ಈ ಪ್ರತಿಭಟನೆ ಮುಂದುವರೆಯುತ್ತದೆ, ಇದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಯೇ ರೈತರು ದೆಹಲಿಗೆ ಬಂದಿದ್ದಾರೆ. ಪ್ರತಿಭಟನೆಯಲ್ಲಿ ಪಂಜಾಬ್ ಮತ್ತು ಹರಿಯಾಣದ ರೈತರು ಮುಂಚೂಣಿಯಲ್ಲಿದ್ದಾರೆಂಬುದು ನಿಜವಾದರೂ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಉತ್ತರಪ್ರದೇಶ, ಉತ್ತರಾಖಂಡ ಹಾಗೂ ರಾಜಸ್ತಾನದ ರೈತರು ಕೂಡಾ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ” ಎಂದು ಯಶವಂತ್ ತಿಳಿಸಿದರು.

ಶಿವಕುಮಾರ್ ಗುಳಘಟ್ಟ

ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಕರ್ನಾಟಕ ಜನಶಕ್ತಿ ಸಂಘಟನೆಯ ಶಿವಕುಮಾರ್ ಗುಳಘಟ್ಟ, “ಪ್ರತಿಭಟನೆಯಲ್ಲಿ ರೈತ ಮಹಿಳೆಯರ ಸಂಖ್ಯೆ ಕಡಿಮೆಯಿರುವುದನ್ನು ಬಿಟ್ಟರೆ ಉಳಿದಂತೆ ಪ್ರತಿಭಟನೆ ಯಶಸ್ವಿಯಾಗಿ ಮುಂದುವರೆಯುತ್ತಿದೆ. ಸರ್ಕಾರ ಪ್ರತಿಭಟನಾಕಾರರನ್ನು ನಕ್ಸಲೈಟ್ ಹಾಗೂ ಖಾಲಿಸ್ತಾನಿಗಳು ಎಂದು ಅಪಪ್ರಚಾರ ಮಾಡುತ್ತಿದೆ. ಅವರ ವೈಫಲ್ಯವನ್ನು ಮುಚ್ಚಿಕೊಳ್ಳಲು ಬೇಕಾಗಿಯೇ ಇಂತಹ ಪದಗಳನ್ನು ಬಳಸುತ್ತಿದ್ದಾರೆ. ಅಷ್ಟಕ್ಕೂ ಅವರು ಭಯೋತ್ಪಾದಕರಾದರೆ ಸರ್ಕಾರವೇಕೆ ಪ್ರತಿಭಟನಾಕಾರರನ್ನು ಎರೆಡೆರಡು ಬಾರಿ ಮಾತುಕತೆಗೆ ಕರೆದಿದೆ?” ಎಂದು ಪ್ರಶ್ನಿಸುತ್ತಾರೆ.

“ಮುಖ್ಯವಾಗಿ ಕೇಂದ್ರ ಸರ್ಕಾರ ಚಳವಳಿಯನ್ನು ಒಡೆಯಲು ಪ್ರಯತ್ನಿಸುತ್ತಿದೆ. ಆದರೆ ರೈತರು ಈಗಾಗಲೇ ತಮ್ಮ ಆರು ತಿಂಗಳ ಆಹಾರವನ್ನು ತಮ್ಮೊಂದಿಗೆ ತಂದಿದ್ದು, ತಮ್ಮ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡೇ ಬನ್ನಿ, ನಾವು ಕಾಯುತ್ತೇವೆ ಎಂದು ಸರ್ಕಾರದೊಂದಿಗೆ ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ಇದೊಂದು ಯಶಸ್ವಿ ಜನಚಳವಳಿಯಾಗಿದ್ದು, ಕಾನೂನನ್ನು ವಾಪಾಸು ಪಡೆಯದೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ರೈತರು ಗಟ್ಟಿಯಾಗಿದ್ದಾರೆ” ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರ ದೆಹಲಿ ಚಲೋ ನಂತರ ರೈತ ಮುಖಂಡರನ್ನು ಡಿಸೆಂಬರ್ 1 ಮತ್ತು 3 ರಂದು ಎರುಡು ಬಾರಿ ಮಾತುಕತೆಗೆ ಕರೆದಿತ್ತಾದರೂ ಅದು ಮುರಿದುಬಿದ್ದಿದೆ. ಹೊಸ ಕಾನೂನಿನ ಬಗ್ಗೆ ಚರ್ಚೆ ಮಾಡಲು ಸರ್ಕಾರ ಹಾಗೂ ರೈತರನ್ನೊಳಗೊಂಡ ಸಮಿತಿಯನ್ನು ರಚಿಸುವುದಾಗಿ ಹೇಳಿದೆಯಾದರೂ ರೈತರು ಅದನ್ನು ಒಪ್ಪದೆ, ರೈತ ವಿರೋಧಿ ಕಾನೂನನ್ನು ವಾಪಾಸು ಪಡೆಯಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹೋರಾಟ ಇನ್ನೂ ಮುಂದುವರೆಯಲಿದ್ದು ಸರ್ವಾಧಿಕಾರಿ ಧೋರಣೆಯ ಸರ್ಕಾರದ ಬುಡಕ್ಕೆ ರೈತನ ನೇಗಿಲು ಆಳವಾಗಿ ಹುದುಗಿದೆ. ಹೋರಾಟ ಮುಂದುವರೆದಿದೆ…


ಇದನ್ನೂ ಓದಿ: ದೆಹಲಿಯಲ್ಲಿ ರೈತರ ಗುಡುಗು: ಇಂದಿನ ಹೋರಾಟದ ಚಿತ್ರಗಳು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...