Homeಮುಖಪುಟದೆಹಲಿಯಾದ್ಯಂತ ಬೆಂಕಿಯೇ ಕಾಣುವಾಗ ಇಲ್ಲಿನ ಬಿಜೆಪಿ ಎಲ್ಲಿ?: ಆರ್‌ಎಸ್‌ಎಸ್ ಮುಖಂಡರೊಬ್ಬರ ಆಕ್ರೋಶ

ದೆಹಲಿಯಾದ್ಯಂತ ಬೆಂಕಿಯೇ ಕಾಣುವಾಗ ಇಲ್ಲಿನ ಬಿಜೆಪಿ ಎಲ್ಲಿ?: ಆರ್‌ಎಸ್‌ಎಸ್ ಮುಖಂಡರೊಬ್ಬರ ಆಕ್ರೋಶ

- Advertisement -
- Advertisement -

‘ಇಡೀ ದೆಹಲಿಯಲ್ಲಿ ಬೆಂಕಿಯೇ ಕಾಣುತ್ತಿದೆ. ಶವಗಳನ್ನು ಪಾಳೆ ಹಚ್ಚಿ ಸುಡಲಾಗುತ್ತಿದೆ. ಯಾರಾದರೂ ದಿಲ್ಲಿವಾಲಾ ದೆಹಲಿ ಬಿಜೆಪಿಯವರನ್ನು ಎಲ್ಲಿಯಾದರೂ ಕಂಡಿರಾ?’ ಎಂದು ಆರ್‌ಎಸ್‌ಎಸ್‌ನ ದೆಹಲಿ ರಾಜ್ಯ ಕಾರ್ಯನಿರ್ವಾಹಕ ಸದಸ್ಯ ರಾಜೀವ್ ಟುಲಿ ಟ್ವೀಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೇಗವಾಗಿ ಏರುತ್ತಿರುವ ಕೋವಿಡ್ ಪ್ರಕರಣಗಳು ಮತ್ತು ಬಿಕ್ಕಟ್ಟನ್ನು ಪರಿಹರಿಸಲು ಆಡಳಿತದ ವಿಫಲತೆಯಿಂದಾಗಿ ದೆಹಲಿಯು ಉಸಿರುಗಟ್ಟುತ್ತಲೇ ಇರುವುದರಿಂದ, ಆರ್‌ಎಸ್‌ಎಸ್ ಕಾರ್ಯಕಾರಿಣಿ ರಾಜೀವ್ ಅವರು ದೆಹಲಿ ಬಿಜೆಪಿಯ ಅನುಪಸ್ಥಿತಿ ಕುರಿತು ಟೀಕೆ ಮಾಡಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ದೆಹಲಿಯ ಬಿಜೆಪಿ ಎಲ್ಲಿದೆ? ಅಥವಾ ರಾಜ್ಯ ಘಟಕವನ್ನು ವಿಸರ್ಜಿಸಲಾಗಿದೆಯೇ ಎಂದು ಆರ್‌ಎಸ್‌ಎಸ್ ದೆಹಲಿ ಘಟಕದ ಮಾಜಿ ಪ್ರಾಂತ್ ಪ್ರಚಾರ್ ಪ್ರಮುಖ್ ರಾಜೀವ್ ಟುಲಿ ಕಿಡಿ ಕಾರಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.

ರಾಜೀವ್ ಟುಲಿಯವರ ಈ ಟ್ವೀಟ್, ಕೋವಿಡ್ ಎರಡನೇ ಅಲೆ ನಿರ್ವಹಿಸುವುದರಲ್ಲಿ ಸಂಪೂರ್ಣ ವಿಫಲವಾದ ಮೋದಿ ಸರಕಾರದ ಬಗ್ಗೆ ಸಂಘ ಪರಿವಾರದಲ್ಲಿ ಹೆಚ್ಚುತ್ತಿರುವ ಅಸಹನೆ ಮತ್ತು ಅಸಹಾಯಕತೆಯ ಪ್ರತಿಬಿಂಬವಾಗಿದೆ ಎನ್ನಲಾಗಿದೆ.

“ದೆಹಲಿಯಲ್ಲಿಯೂ ಸಹ, ನಾವು ಸಂಘಟನೆಯಾಗಿ ಸಹಾಯ ಮಾಡುವುದು ಕಾಣಿಸುತ್ತಿಲ್ಲ… ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರವನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸಿದೆ’ ಎಂದು ದೆಹಲಿಯ ಬಿಜೆಪಿ ಮುಖಂಡರೊಬ್ಬರನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ತಿಳಿಸಿದೆ.

ರಾಜೀವ್ ಅವರ ಟ್ವೀಟ್ ಹೇಳಿಕೆ ಬಗ್ಗೆ ಸಂಘದ ರಾಷ್ಟ್ರೀಯ ಪ್ರಚಾರದ ಉಸ್ತುವಾರಿ ಸುನಿಲ್ ಅಂಬೇಕರ್ ಅವರನ್ನು ಪ್ರಶ್ನಿಸಿದಾಗ, “ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿರಬಹುದು. ಆದರೆ ಇದು ಸಂಘದ ಅಧಿಕೃತ ಹೇಳಿಕೆ ಅಲ್ಲ” ಎಂದು ತಿಳಿಸಿದರು ಎಂದು ಪಿಟಿಐ ಉಲ್ಲೇಖಿಸಿದೆ.

ಸಂಘ ಮತ್ತು ಅದರ ಅಂಗಸಂಸ್ಥೆ ಸೇವಾ ಭಾರತಿಯವರು ಸಂತ್ರಸ್ತ ಪ್ರದೇಶಗಳಲ್ಲಿ ಕುಟುಂಬಗಳಿಗೆ ಪರಿಹಾರ ಒದಗಿಸಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ ಎಂದು ಅಂಬೇಕರ್ ಹೇಳಿದ್ದಾರೆ.

ದೆಹಲಿ ಬಿಜೆಪಿ ಮುಖಂಡರೊಬ್ಬರು, ಬಿಜೆಪಿ ಸಂಸದರು ಮತ್ತು ಅದರ ಯುವ ಕಾರ್ಯಕರ್ತರು ಬಿಡಿಬಿಡಿಯಾಗಿ ಜನರಿಗೆ ಸಹಾಯ ಮಾಡುತ್ತಿದ್ದರೂ, ಒಂದು ಘಟಕವಾಗಿ ಕಾರ್ಯನಿರ್ವಹಿಸಲು ಸಮನ್ವಯತೆ ಇರಬೇಕಿತ್ತು’ ಎಂದಿದ್ದು, ಹಿಂದಿನ ಸಲ ಮೊದಲ ಅಲೆ ಸಂದರ್ಭದಲ್ಲಿ, ಜನರಿಗೆ ಆಹಾರ ಮತ್ತು ಪಡಿತರ ಅಗತ್ಯವಿತ್ತು, ಈ ಸಮಯದಲ್ಲಿ ಆಮ್ಲಜನಕ, ಆಸ್ಪತ್ರೆ ಹಾಸಿಗೆಗಳು ಮತ್ತು ರಿಮೆಡೆಸಿವಿರ್ ಕೊರತೆಯಿದೆ, ಇದನ್ನು ಆಡಳಿತ ಮಾತ್ರ ಪೂರೈಸಬಲ್ಲದು. ಆದ್ದರಿಂದ, ವಿರೋಧ ಪಕ್ಷವು ದೊಡ್ಡ ಸಂಖ್ಯೆಯಲ್ಲಿ ವ್ಯವಸ್ಥೆ ಮಾಡಬೇಕೆಂದು ನಿರೀಕ್ಷಿಸುವುದು ತಪ್ಪು ಎಂದಿದ್ದಾರೆ.

ರಾಜೀವ್ ಟುಲಿಯವರ ಟ್ವೀಟ್‌ಗಳಿಗೆ ಪ್ರತಿಕ್ರಿಯಿಸಿದ ಮತ್ತೊಬ್ಬ ಬಿಜೆಪಿ ನಾಯಕ, ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದಲ್ಲಿರುವ ನಮ್ಮ ಪಕ್ಷವು (ಬಿಜೆಪಿ), ಮನೆಯಲ್ಲಿ ಕ್ಯಾರೆಂಟೈನ್ ಮಾಡಲು ಸಾಧ್ಯವಾಗದ ಜನರಿಗೆ ಕಲ್ಯಾಣ ಮಂಟಪಗಳು ಅಥವಾ ಶಾಲೆಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಬಹುದಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಆದರೆ, ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ, ರಾಜೀವ್ ಟುಲಿಯವರ ಟ್ವೀಟ್‌ಗಳ ಬಗ್ಗೆ ಕೇಳಿದಾಗ, ಈ ಟುಲಿ ಎಂಬುವವರು ಯಾರೆಂಬುದೇ ಗೊತ್ತಿಲ್ಲ ಮತ್ತು ಅವರ ಟ್ವೀಟ್‌ಗಳ ಬಗ್ಗೆ ತಿಳಿದಿಲ್ಲ ಎಂದು ಹೇಳಿದರು.

ಬಿಜೆಪಿಯ ದೆಹಲಿ ಘಟಕದ ಪ್ರಧಾನ ಕಾರ್ಯದರ್ಶಿ ಹರ್ಷ್ ಮಲ್ಹೋತ್ರಾ ಅವರು ಟುಲಿಯವರ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ಹೇಳಿದರು. “ಏಪ್ರಿಲ್ 21 ರಿಂದ ಮೂರು ಸಹಾಯವಾಣಿ ಸಂಖ್ಯೆಗಳು 24*7 ಚಾಲನೆಯಲ್ಲಿವೆ. ಜನರಿಗೆ ವೈದ್ಯಕೀಯ ಸಲಹೆ ಮತ್ತು ಆಹಾರದ ವ್ಯವಸ್ತೆ ಮಾಡಲು ಈ ಸಹಯವಾಣಿ ಆರಂಭಿಸಲಾಗಿದೆ” ಎಂದಿದ್ದಾರೆ.


ಇದನ್ನೂ ಓದಿ: ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಯುವನಾಯಕ ತೇಜಸ್ವಿ ಸೂರ್ಯ ಕಾಣೆಯಾದರೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಸರ್ಕಾರ 5ಜಿ ಮೆಗಾ ಹಗರಣವನ್ನು ರೂಪಿಸುತ್ತಿದೆ: ಎಎಪಿ ಮುಖಂಡ ಸಂಜಯ್ ಸಿಂಗ್

0
2ಜಿ ಸ್ಪೆಕ್ಟ್ರಮ್ ಪ್ರಕರಣದಲ್ಲಿ 2012ರ ತೀರ್ಪನ್ನು ಮಾರ್ಪಾಡು ಮಾಡುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ ನಂತರ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ಅವರು ಪ್ರಧಾನಿ ನರೇಂದ್ರ...