Homeಮುಖಪುಟ‘ಜೈ ಭೀಮ್‌’ ಚಿತ್ರಕ್ಕೆ ಸ್ಪೂರ್ತಿಯಾದ ವಕೀಲ ‘ಚಂದ್ರು’ ಯಾರು?

‘ಜೈ ಭೀಮ್‌’ ಚಿತ್ರಕ್ಕೆ ಸ್ಪೂರ್ತಿಯಾದ ವಕೀಲ ‘ಚಂದ್ರು’ ಯಾರು?

ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಯಾದ ನಂತರ ಚಂದ್ರುರವರು ಕೇವಲ 6 ವರ್ಷಗಳಲ್ಲಿ ವಿಲೇವಾರಿ ಮಾಡಿರುವ ಪ್ರಕರಣದ ಸಂಖ್ಯೆ ಬರೋಬ್ಬರಿ 96 ಸಾವಿರ!

- Advertisement -
- Advertisement -

‘ಇರುಳ’ ಆದಿವಾಸಿ ಬುಡಕಟ್ಟು ಸಮುದಾಯದ ಮೇಲೆ ನಡೆದ ಪೊಲೀಸರ ದೌರ್ಜನ್ಯವನ್ನು ವಿರೋಧಿಸಿ ಕಾನೂನಾತ್ಮಕವಾಗಿ ನಡೆದ ಹೋರಾಟದ ಎಳೆಯನ್ನು ಇಟ್ಟುಕೊಂಡು ಟಿ. ಜೆ. ಜ್ಞಾನವೇಳ್‌ ನಿರ್ದೇಶಿಸಿದ, ತಮಿಳಿನ ಸೂಪರ್‌ ಸ್ಟಾರ್‌ ಸೂರಿಯಾ ಅವರು ಪ್ರಧಾನ ಪಾತ್ರದಲ್ಲಿರುವ ‘ಜೈಭೀಮ್‌’ ಚಿತ್ರದ ಬಗ್ಗೆ ಇದೀಗ ಎಲ್ಲಾ ಕಡೆಯಲ್ಲಿ ಚರ್ಚೆಯಾಗುತ್ತಿದೆ. ಮದ್ರಾಸ್‌ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಕೆ. ಚಂದ್ರು ಅವರು ತಾನು ವಕೀಲನಾಗಿದ್ದಗ ನಡೆಸಿದ ‘ಒಂದು’ ಹೋರಾಟದ ನೈಜ ಕತೆಯಾಗಿದೆ ಇದು.

ಇಡೀ ಆಡಳಿತ ಯಂತ್ರವನ್ನು ಎದುರು ಹಾಕಿ ಧ್ವನಿಯಿಲ್ಲದ ಸಮುದಾಯದ ಬೆನ್ನಿಗೆ ನಿಲ್ಲುವುದು, ಅವರಿಗೆ ನ್ಯಾಯ ಕೊಡಿಸುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇದಲ್ಲದೆ, ಆದಿವಾಸಿ ಜನರಿಗೆ ಈ ವ್ಯವಸ್ಥೆ ನೀಡುವ ಕಿರುಕುಳ, ಅವರ ಸಂಕಷ್ಟವನ್ನೂ ಈ ಚಿತ್ರದಲ್ಲಿ ಮನಸಿಗೆ ಇಳಿಯುವಂತೆ ಮತ್ತು ಶೋಷಕರಿಗೆ ಇರಿಯುವಂತೆ ಕಟ್ಟಿಕೊಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಧ್ಯದಕ್ಕೆ ‘ಜೈಭೀಮ್‌’ ಬಗ್ಗೆಗಿನ ಚರ್ಚೆ ಮುಗಿಯುವಂತೆ ಕಾಣುತ್ತಿಲ್ಲ.

ಇದನ್ನೂ ಓದಿ: ಹಿಂದಿ ಹೇರಿಕೆಗೆ ಕಪಾಳ ಮೋಕ್ಷ: ’ಜೈ ಭೀಮ್’ ದೃಶ್ಯಕ್ಕೆ ದ್ರಾವಿಡ ಭಾಷಿಗರ ಮೆಚ್ಚುಗೆ

ಚಿತ್ರದ ಪ್ರಧಾನ ಪಾತ್ರವೆಂದು ನಾವು ಒಪ್ಪಿಕೊಳ್ಳಬಹುದಾದರೆ ವಕೀಲ ಚಂದ್ರು ಅವರ ಪಾತ್ರ. ಇದನ್ನು ತಮಿಳಿನ ಸೂಪರ್‌ ಸ್ಟಾರ್‌ ಸೂರಿಯಾ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಚಿತ್ರದ ವಕೀಲ ‘ಚಂದ್ರು’ ಯಾರು?

ಜೈಭೀಮ್ ಚಿತ್ರದ ವಕೀಲ ಚಂದ್ರು, ಮದ್ರಾಸ್‌ನ ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರು ಅವರಾಗಿದ್ದಾರೆ. ಈ ಚಿತ್ರ ಜಸ್ಟೀಸ್ ಕೆ. ಚಂದ್ರು ಅವರ ಬಯೋಪಿಕ್ ಅಲ್ಲದಿದ್ದರೂ, 1995 ರಲ್ಲಿ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಇರುಳ ಬುಡಕಟ್ಟು ಜನಾಂಗದವರ ಮೇಲೆ ನಡೆದ ಕಸ್ಟೋಡಿಯಲ್ ಟಾರ್ಚರ್‌ ಮತ್ತು ಅವರ ಪರವಾಗಿ ಮಾನವ ಹಕ್ಕುಗಳ ವಕೀಲ ಚಂದ್ರು ಅವರು ನಡೆಸಿದ ಕಾನೂನು ಹೋರಾಟದ ನೈಜ ಜೀವನದ ನಿದರ್ಶನಗಳಾಗಿವೆ.

ಮಾರ್ಚ್ 1951 ರಲ್ಲಿ ಶ್ರೀರಂಗಂನಲ್ಲಿ ಜನಿಸಿದ ನ್ಯಾಯಮೂರ್ತಿ ಚಂದ್ರು 16 ನೇ ವಯಸ್ಸಿನಿಂದಲೂ ಹೋರಾಟ ರಂಗದಲ್ಲಿದ್ದಾರೆ. ತಮಿಳುನಾಡಿನಲ್ಲಿ ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆಯಾದ ಭಾರತ ವಿದ್ಯಾರ್ಥಿ ಫೆಡರೇಷನ್‌(ಎಸ್‌ಎಫ್‌ಐ) ಕಟ್ಟಿ ಬೆಳೆಸಿದವರಲ್ಲಿ ಅವರು ಒಬ್ಬರು. ಹಲವಾರು ಹೋರಾಟಗಳಿಗೆ ನೇತೃತ್ವ ನೀಡಿದವರು. ವಕೀಲರಾಗಿ ಮಾನವ ಹಕ್ಕುಗಳಿಗಾಗಿ ನಿರಂತರ ಹೋರಾಡಿದವರಾಗಿದ್ದು, ನಂತರ ನ್ಯಾಯಾಧೀಶರಾಗಿಯೂ ತಮ್ಮ ಅನನ್ಯ ಸೇವೆಯನ್ನು ಸಲ್ಲಿಸಿದ್ದಾರೆ.

ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಯಾದ ನಂತರ ಅವರು ವಿಲೇವಾರಿ ಮಾಡಿರುವ ಪ್ರಕರಣದ ಸಂಖ್ಯೆ ಬರೋಬ್ಬರಿ 96 ಸಾವಿರ!. ಇದನ್ನು ಅವರು ತಮ್ಮ ಸೇವೆಯ ಕೇವಲ 6 ವರ್ಷಗಳಲ್ಲಿ ಮಾಡಿದ್ದರು. ಸಾಮಾನ್ಯವಾಗಿ ನ್ಯಾಯಮೂರ್ತಿಗಳು ಇದರ 50% ದಷ್ಟೂ ಮುಟ್ಟುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ.

ಇದನ್ನೂ ಓದಿ: ‘ಜೈ ಭೀಮ್’ಗೆ ಪ್ರಶಂಸೆಯ ಮಹಾಪೂರ: ಇಲ್ಲಿದೆ ಜನರ ಅಭಿಪ್ರಾಯ

ಕೇವಲ ದೊಡ್ಡ ಸಂಖ್ಯೆ ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಲ್ಲದೆ, ಹಲವು ಮಹತ್ವದ ತೀರ್ಪುಗಳನ್ನು ತನ್ನ ಕಾಲಾವಧಿಯಲ್ಲಿ ನೀಡಿದ್ದರು. “ಮಹಿಳೆಯರು ದೇವಸ್ಥಾನಗಳಲ್ಲಿ ಅರ್ಚಕರಾಗಬಹುದು. ಜಾತಿ ಭೇದವಿಲ್ಲದೆ, ಎಲ್ಲರಿಗೂ ಸಾಮಾನ್ಯವಾದ ಸ್ಮಶಾನ ಇರಬೇಕು. ನಾಟಕಗಳನ್ನು ಪ್ರದರ್ಶಿಸಲು, ಪೊಲೀಸ್ ಅನುಮತಿ ಅಗತ್ಯವಿಲ್ಲ. ಮಧ್ಯಾಹ್ನದ ಬಿಸಿಯೂಟದ ಕೆಲಸಗಳಲ್ಲಿ ಸಮುದಾಯ ಆಧಾರಿತ ಮೀಸಲಾತಿ ನೀಡಬೇಕು” ಎಂಬಂತಹ ಹಲವು ತೀರ್ಪುಗಳನ್ನು ಅವರು ನೀಡಿದ್ದರು.

ವಕೀಲರಾಗಿದ್ದಾಗ ಚಂದ್ರು ಅವರು ಮಹಿಳೆಯರ ಪರವಾಗಿ, ವಿಶೇಷವಾಗಿ ಸಣ್ಣ ಪಟ್ಟಣಗಳು, ಕಡಿಮೆ ಆರ್ಥಿಕ ಹಿನ್ನೆಲೆ ಮತ್ತು ಅಂಚಿನಲ್ಲಿರುವ ಸಮುದಾಯಗಳ ಪರವಾಗಿ ಒಂದು ರೂಪಾಯಿ ಶುಲ್ಕವಿಲ್ಲದೆ ಅನೇಕ ಪ್ರಕರಣಗಳನ್ನು ಕೈಗಿತ್ತಿಕೊಂಡು ಹೋರಾಟ ನಡೆಸಿದ್ದರು.

ಸರಳತೆಗೆ ಹೆಸರುವಾಸಿಯಾಗಿದ್ದ ಅವರು ಸಾಮಾನ್ಯವಾಗಿ ನ್ಯಾಯಾಧೀಶರಿಗೆ ಸಿಗುತ್ತಿದ್ದ ಸೌಕರ್ಯಗಳಿಂದ ದೂರವಿರುತ್ತಿದ್ದರು ಹಾಗೂ ಆಡಂಬರ ಮತ್ತು ವೈಭವವನ್ನು ಇಷ್ಟಪಡುತ್ತಿರಲಿಲ್ಲ. ನ್ಯಾಯಮೂರ್ತಿಯಾಗಿದ್ದಾಗ ತನ್ನ ಆಗಮನವನ್ನು ಘೋಷಿಸಲು ಕೆಂಪು ಟೋಪಿಯ, ಬೆಳ್ಳಿಯ ಗದೆಯನ್ನು ಹೊಂದಿರುವ “ದಾವಳಿ” ಇರಬೇಕಿಲ್ಲ, ಇದು ಅಧಿಕಾರಶಾಹಿಯ ಸಂಕೇತ ಎಂಬುವುದು ಅವರ ನಿಲುವಾಗಿತ್ತು. ಜೊತೆಗೆ ತನ್ನ ಪಕ್ಕದಲ್ಲಿ ಬಂದೂಕು ಹಿಡಿದ ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್‌ಒ)ಯನ್ನು ಇರಿಸುತ್ತಿರಲಿಲ್ಲ. ಅವರ ಮನೆಯಲ್ಲಿ ಅಧಿಕೃತ ಸೇವಕರು ಇರಲಿಲ್ಲ. ನ್ಯಾಯಾಲಯದಲ್ಲಿ ವಕೀಲರು ಅವರನ್ನು “ಮೈ ಲಾರ್ಡ್” ಎಂದು ಕರೆಯುವುದನ್ನು ಅವರು ಒಪ್ಪಿಕೊಳ್ಳುತ್ತಿರಲಿಲ್ಲ.

ಇದನ್ನೂ ಓದಿ: ‘ಜೈ ಭೀಮ್‌’ ನಂತಹ ಮತ್ತಷ್ಟು ಚಿತ್ರಗಳು ಬರಲಿ: ಚಿತ್ರತಂಡಕ್ಕೆ ತಮಿಳುನಾಡು ಸಿಎಂ ಸ್ಟಾಲಿನ್ ಶ್ಲಾಘನೆ

ತನ್ನ ನಿವೃತ್ತಿಯ ದಿನ ಅವರು ತಮ್ಮ ಸರ್ಕಾರಿ ಕಾರನ್ನು ಸರ್ಕಾರಕ್ಕೆ ಒಪ್ಪಿಸಿದ್ದರು ಮತ್ತು ಅಂದು ಮನೆಗೆ ರೈಲಿನ ಮೂಲಕ ಹಿಂದಿರುಗಿದ್ದರು ಎಂದು ವರದಿಗಳು ಹೇಳುತ್ತವೆ. ಅವರು ನಿವೃತ್ತಿಯ ಭರ್ಜರಿ ವಿದಾಯವನ್ನು ಒಪ್ಪಿಕೊಂಡಿರಲಿಲ್ಲ. ಸೇವೆಗೆ ಸೇರುವಾಗ ಮತ್ತು ಸೇವೆಯಿಂದ ನಿವೃತ್ತಿಯಾದಾಗ ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದರು.

ಅವರ ಕಚೇರಿಯ ಕೊಠಡಿಯ ಪ್ರವೇಶದ್ವಾರದಲ್ಲಿ ಇದ್ದ ಸೂಚನಾಫಲಕದಲ್ಲಿ

“ಇಲ್ಲಿ ಯಾರೂ ದೇವರಲ್ಲ – ಆದ್ದರಿಂದ ಹೂವುಗಳು ಬೇಕಿಲ್ಲ
ಇಲ್ಲಿ ಯಾರೂ ಹಸಿದಿಲ್ಲ – ಆದ್ದರಿಂದ ಹಣ್ಣುಗಳ ಅಗತ್ಯವಿಲ್ಲ
ಇಲ್ಲಿ ಯಾರೂ ಚಳಿಯಿಂದ ನಡುಗುತ್ತಿಲ್ಲ- ಆದ್ದರಿಂದ ಶಾಲುಗಳ ಅಗತ್ಯವಿಲ್ಲ
ನಮಗೆ ಶುಭ ಹಾರೈಕೆಗಳು ಮಾತ್ರ ಬೇಕಾಗಿದೆ” ಎಂದು ಬರೆಸಿದ್ದರು.

ಜೈ ಭೀಮ್‌ ಚಿತ್ರಕ್ಕೂ ಮುಂಚೆ ಅವರ ಬಗ್ಗೆ ಸಾಕ್ಷ್ಯಚಿತ್ರ ಮಾಡುವುದಾಗಿ ಹೇಳಿದಾಗ ಈ ಬಗ್ಗೆ ಅವರು ನಿರಾಕರಿಸಿದ್ದರು. ತನ್ನನ್ನು ಶ್ಲಾಘಿಸಲು ಮಾಡುವ ಸಾಕ್ಷ್ಯಚಿತ್ರದ ಬಗ್ಗೆ ಅವರಿಗೆ ಒಪ್ಪಿಗೆಯಿರಲಿಲ್ಲ. ಸಾಕ್ಷಿಚಿತ್ರ ನಿರ್ಮಿಸಿ ನನ್ನನ್ನು ಹೊಗಳುವುದರ ಬದಲು ಇರುಳ ಬುಡಕಟ್ಟು ಜನಾಂಗದಂತಹ ಸಮುದಾಯದ ಬಗ್ಗೆ ಚಲನಚಿತ್ರವನ್ನು ನಿರ್ಮಿಸಿ ಎಂಬುವುದ ಅವರ ಅಭಿಪ್ರಾಯವಾಗಿತ್ತು. ಇದು ಅವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಕಾರಣವಾಗಿ, ಅವರಿಗೆ ಸಹಾಯ ಮಾಡುತ್ತದೆ ಎಂಬುವುದು ಅವರ ನಿಲುವಾಗಿತ್ತು.

“ನ್ಯಾಯಮೂರ್ತಿ ಚಂದ್ರು ಅವರು ಅನೇಕ ವಿಷಯಗಳ ಬಗ್ಗೆ ಹೋರಾಡಿದ್ದರು. ಅವುಗಳಲ್ಲಿ ಒಂದನ್ನಾದರೂ ಚಿತ್ರಿಸಲು ಸಾಧ್ಯವಾಗುವ ಅವಕಾಶವನ್ನು ನಾನು ಪಡೆದುಕೊಂಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ಚಿತ್ರದಲ್ಲಿ ಜಸ್ಟಿಸ್ ಚಂದ್ರು ಪಾತ್ರವನ್ನು ಮಾಡಲು ಸಾಧ್ಯವಾಗಿದ್ದು ವೈಯಕ್ತಿಕವಾಗಿ ನನಗೆ ದೊಡ್ಡ ಮನ್ನಣೆ.” ಎಂದು ಚಿತ್ರದ ನಿರ್ಮಾಪಕ ಮತ್ತು ನಟ ಸೂರಿಯಾ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಕನ್ನಡದಲ್ಲೂ ’ಜೈ ಭೀಮ್’ ಎಂದ ತಮಿಳು ನಟ ಸೂರ್ಯ: ಹೊಸ ಚಿತ್ರಕ್ಕೆ ಕನ್ನಡಿಗರ ಸ್ವಾಗತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...