Homeಕರೋನಾ ತಲ್ಲಣ2,250 ಕೋಟಿ ರೂ ಖರ್ಚು ಮಾಡಿ ಮೋದಿ ಸರ್ಕಾರ ಖರೀದಿಸಿದ ವೆಂಟಿಲೇಟರ್‌ಗಳು ಕೆಲಸ ಮಾಡುತ್ತಿಲ್ಲವೇಕೆ?

2,250 ಕೋಟಿ ರೂ ಖರ್ಚು ಮಾಡಿ ಮೋದಿ ಸರ್ಕಾರ ಖರೀದಿಸಿದ ವೆಂಟಿಲೇಟರ್‌ಗಳು ಕೆಲಸ ಮಾಡುತ್ತಿಲ್ಲವೇಕೆ?

- Advertisement -
- Advertisement -

ದೋಷಪೂರಿತ ಖರೀದಿ ಪ್ರಕ್ರಿಯೆಯಿಂದಾಗಿ ಆಸ್ಪತ್ರೆಗಳು ಅಗ್ಗದ ವೆಂಟಿಲೇಟರ್‌ಗಳನ್ನು ಪಡೆಯುತ್ತಿವೆ. ಅವುಗಳಲ್ಲಿ ಹಲವು ನಿರುಪಯುಕ್ತವಾಗಿವೆ ಎಂದು ಬಿಜೆಪಿ ಆಡಳಿತದ ರಾಜ್ಯಗಳಲ್ಲಿಯೂ ವೈದ್ಯರು ಹೇಳುತ್ತಿದ್ದಾರೆ ಎಂದು ದಿ ಸ್ಕ್ರೋಲ್ ಪೋರ್ಟಲ್ ತನಿಖಾ ವರದಿ ಹೇಳುತ್ತಿದೆ.

ಕೋವಿಡ್ ಪ್ರಕರಣಗಳು ಮತ್ತು ಸಾವುಗಳಲ್ಲಿ ಮಹಾರಾಷ್ಟ್ರವು ಭೀಕರ ಏರಿಕೆ ಕಂಡ ಏಪ್ರಿಲ್ ಮೂರನೇ ವಾರದಲ್ಲಿ ಔರಂಗಾಬಾದ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ 150 ವೆಂಟಿಲೇಟರ್‌ಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಕಳಿಸಿತ್ತು.

ಆಸ್ಪತ್ರೆಯು ಯಂತ್ರಗಳನ್ನು ಮರಾಠವಾಡ ಪ್ರದೇಶದ ಇತರ ಜಿಲ್ಲಾ ಮತ್ತು ಖಾಸಗಿ ಆಸ್ಪತ್ರೆಗಳಿಗೆ ವಿತರಿಸಿತು. ಆದರೆ ಕೆಲವೇ ದಿನಗಳಲ್ಲಿ, ಅನೇಕ ಆಸ್ಪತ್ರೆಗಳು ಅವನ್ನು ವಾಪಸ್ ಕಳುಹಿಸಿದವು. ವೆಂಟಿಲೇಟರ್‌ಗಳು ಕೆಲಸ ಮಾಡುತ್ತಿಲ್ಲ, ಕಳಪೆಯಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

ನಿರ್ಣಾಯಕ ಆರೈಕೆ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ಮತ್ತು ಈ ಯಂತ್ರಗಳನ್ನು ನಿರ್ವಹಿಸುವ ಈ ಆಸ್ಪತ್ರೆಗಳ ಎಂಟು ವೈದ್ಯರ ತಂಡವು ಸಿದ್ಧಪಡಿಸಿದ ವರದಿಯ ಪ್ರಕಾರ, “ವೆಂಟಿಲೇಟರ್‌ಗಳನ್ನು ಸ್ವಿಚ್ ಆನ್ ಮಾಡಿದ ಕೆಲವೇ ಗಂಟೆಗಳಲ್ಲಿ ರೋಗಿಗಳು ಉಸಿರಾಟದ ತೊಂದರೆ ಮತ್ತು ಸಂಬಂಧಿತ ರೋಗಲಕ್ಷಣಗಳ ಬಗ್ಗೆ ದೂರು ನೀಡಲು ಪ್ರಾರಂಭಿಸಿದರು….’
ಅವುಗಳನ್ನು ತಯಾರಿಸಿದ ಜ್ಯೋತಿ ಸಿಎನ್‌ಸಿಯ ಎಂಜಿನಿಯರ್‌ಗಳ ತಂಡವು ಮೇ 14 ರಂದು ಕೆಲವು ಯಂತ್ರಗಳ ಸರ್ವಿಸ್ ಮಾಡಿತು. ಆದರೆ ವೈದ್ಯರ ವರದಿಯನ್ನು ಉಲ್ಲೇಖಿಸಿ ಮೇ 28ರಂದು ಬಾಂಬೆ ಹೈಕೋರ್ಟ್ “ಈ ವೆಂಟಿಲೇಟರ್‌ಗಳು ರಾತ್ರಿಯಿಡೀ ಚೆನ್ನಾಗಿ ಕೆಲಸ ಮಾಡಿದವು. ಆದರೆ ಮರುದಿನ ಮಧ್ಯಾಹ್ನದ ಹೊತ್ತಿಗೆ ರೋಗಿಗಳು ಕಳಪೆ ಆಮ್ಲಜನಕದ ಬಗ್ಗೆ ದೂರು ನೀಡಿದರು ಮತ್ತು ಚಡಪಡಿಕೆಯ ಲಕ್ಷಣಗಳನ್ನು ತೋರಿಸಿದರು…..’ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

ಇಲ್ಲಿವರೆಗೆ, ತಲುಪಿದ 150 ವೆಂಟಿಲೇಟರ್‌ಗಳಲ್ಲಿ 117 ಬಳಕೆಯಾಗುತ್ತಿಲ್ಲ ಎಂದು ಔರಂಗಾಬಾದ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧಿಕಾರಿಗಳು ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದು, ಉಳಿದ 33 ವೆಂಟಿಲೇಟರ್‌ಗಳನ್ನು ಬಳಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ತಿಳಿಸಿದೆ.

ಮಂಡ್ಯ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಬಳಕೆಯಾಗದೆ ನಿಂತಿರುವ ವೆಂಟಿಲೇಟರ್‌ಗಳು

“ಅವುಗಳನ್ನು ಬಳಸುವುದು ತುಂಬಾ ಅಪಾಯಕಾರಿ” ಎಂದು ಔರಂಗಾಬಾದ್‌ನಿಂದ 25 ವೆಂಟಿಲೇಟರ್‌ಗಳನ್ನು ಪಡೆದ ಬೀಡ್ ಜಿಲ್ಲೆಯ ಸುಕ್ರೆಸ್ವಾಮಿ ರಾಮಾನಂದ್ ತೀರ್ಥ್ ಗ್ರಾಮೀಣ ವೈದ್ಯಕೀಯ ಕಾಲೇಜಿನ ಡೀನ್ ಡಾ.ಶಿವಾಜಿ ಹೇಳಿದರು..

ಕಳೆದ ವರ್ಷ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ, 60,000 ಕ್ಕೂ ಹೆಚ್ಚು ವೆಂಟಿಲೇಟರ್‌ಗಳಿಗೆ ಕೇಂದ್ರವು ಸುಮಾರು 2,350 ಕೋಟಿ ರೂ.ಗಳ ಆದೇಶಗಳನ್ನು ನೀಡಿತ್ತು, ಈ ಪೈಕಿ 2,000 ಕೋಟಿ ರೂ. ವೆಚ್ಚದ 50,000 ವೆಂಟಿಲೇಟರ್‌ಗಳಿಗೆ ಪಿಎಂ-ಕೇರ್ಸ್ ನಿಧಿ ಮೂಲಕ ಹಣ ನೀಡಲಾಯಿತು.

ಮಹಾರಾಷ್ಟ್ರದ ಹೊರತಾಗಿ, ರಾಜಸ್ಥಾನ, ಪಂಜಾಬ್, ಜಾರ್ಖಂಡ್ ಮತ್ತು ಛತ್ತೀಸಗಡ ರಾಜ್ಯಗಳು ಈ ವೆಂಟಿಲೇಟರ್‌ಗಳ ಬಗ್ಗೆ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿವೆ.

ಆದರೆ, ಕೇಂದ್ರವು ಈ ವೆಂಟಿಲೇಟರ್‌ಗಳನ್ನು ಮತ್ತೆ ಮತ್ತೆ ಸಮರ್ಥಿಸಿಕೊಂಡಿದೆ. ಈ ಸಮಸ್ಯೆ ಸಾಧನಗಳಲ್ಲಿಲ್ಲ, ರಾಜ್ಯಗಳು ನಿರ್ವಹಿಸುವಲ್ಲಿ ವಿಫಲವಾಗಿವೆ ಎಂದು ಅದು ಹೇಳುತ್ತ ಬಂದಿದೆ.
ಟೀಕೆಗಳು ಜೋರಾಗಿ ಬರುತ್ತಿದ್ದಂತೆ, ಮೇ 15 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವೆಂಟಿಲೇಟರ್‌ಗಳ ಲೆಕ್ಕಪರಿಶೋಧನೆಗೆ ಆದೇಶಿಸಿದರು. ಆದರೆ ಅವರ ಹೇಳಿಕೆ, ಆರೋಗ್ಯ ಕಾರ್ಯಕರ್ತರಿಗೆ ವೆಂಟಿಲೇಟರ್‌ಗಳನ್ನು ನಿರ್ವಹಿಸುವ ತರಬೇತಿ ನೀಡಬೇಕು’ ಎಂಬ ಅರ್ಥದಲ್ಲಿದೆ.

ಸ್ಕ್ರೋಲ್.ಇನ್ ಹಲವಾರು ವೈದ್ಯರು, ಸರ್ಕಾರಿ ಅಧಿಕಾರಿಗಳು ಮತ್ತು ವೆಂಟಿಲೇಟರ್ ತಯಾರಕರೊಂದಿಗೆ ಮಾತನಾಡಿದೆ. ನಮಗೆ ದೊರೆತ ಮಾಹಿತಿ ಇಲ್ಲಿದೆ:

ಮೊದಲನೆಯದಾಗಿ, ವೆಂಟಿಲೇಟರ್ ಸಮಸ್ಯೆ ಪ್ರತಿಪಕ್ಷಗಳು ನಡೆಸುವ ರಾಜ್ಯಗಳಿಗೆ ಸೀಮಿತವಾಗಿಲ್ಲ. ಭಾರತೀಯ ಜನತಾ ಪಕ್ಷದ ಆಡಳಿತದಲ್ಲಿರುವ ರಾಜ್ಯಗಳಲ್ಲೂ ಇದೆ. ಆದರೆ ಅವು ಬಹಿರಂಗವಾಗಿ ಇದನ್ನು ಹೇಳುತ್ತಿಲ್ಲ. ಆದರೆ ಅಲ್ಲಿನ ವೈದ್ಯರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಆಡಳಿತದಲ್ಲಿರುವ ಮೂರು ರಾಜ್ಯಗಳಾದ ಉತ್ತರ ಪ್ರದೇಶ, ಗುಜರಾತ್ ಮತ್ತು ಗೋವಾ, ತಮ್ಮ ಆಸ್ಪತ್ರೆಗಳಿಗೆ ಸರಬರಾಜು ಮಾಡಿದ ಕೆಲವು ವೆಂಟಿಲೇಟರ್‌ಗಳು ಯಾವುದೇ ಉದ್ದೇಶವನ್ನು ಪೂರೈಸಲಿಲ್ಲ ಎಂದು ಸ್ಕ್ರೋಲ್.ಇನ್‌ಗೆ ತಿಳಿಸಿವೆ.

ಎರಡನೆಯದಾಗಿ, ವೆಂಟಿಲೇಟರ್‌ಗಳ ಕಾರ್ಯಕ್ಷಮತೆ ಒಂದು ಉತ್ಪಾದಕರಿಂದ ಇನ್ನೊಂದಕ್ಕೆ ಹೆಚ್ಚು ಬದಲಾಗುತ್ತದೆ ಎಂದು ಅವುಗಳನ್ನು ನಿರ್ವಹಿಸಿದ ವೈದ್ಯರು ಹೇಳಿದರು. ಎರಡು ಖಾಸಗಿ ಕಂಪನಿಗಳ ಮಾದರಿಗಳು ವಿಶೇಷವಾಗಿ ಟೀಕೆಗೆ ಗುರುಯಾಗಿವೆ.

ಒಂದು ನೋಯ್ಡಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಆಗ್ವಾ. ಇನ್ನೊಂದು, ರಾಜ್‌ಕೋಟ್ ಮೂಲದ ಜ್ಯೋತಿ ಸಿಎನ್‌ಸಿ. 2019ರವರೆಗೆ, ಈ ಕಂಪನಿ ಪ್ರಮುಖ ಷೇರುದಾರರಲ್ಲಿ ಒಬ್ಬರಾಗಿದ್ದ ಉದ್ಯಮಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರಿನೊಂದಿಗೆ ಮೊನೊಗ್ರಾಮ್ ಮಾಡಿದ ದುಬಾರಿ ಸ್ಯೂಟ್ ಅನ್ನು ಉಡುಗೊರೆಯಾಗಿ ನೀಡಿದ್ದರು.

ಮೂರನೆಯದಾಗಿ, ಕೇಂದ್ರ ಸರ್ಕಾರಕ್ಕೆ ವೆಂಟಿಲೇಟರ್‌ಗಳನ್ನು ಪೂರೈಸಿದ ಏಳು ಕಂಪನಿಗಳಲ್ಲಿ, ಹೆಚ್ಚು ಅನುಭವವನ್ನು ಹೊಂದಿರುವ ಕಂಪನಿಯು –(ಇದು ಎರಡು ದಶಕಗಳಿಂದ ವೆಂಟಿಲೇಟರ್‌ಗಳನ್ನು ತಯಾರಿಸುತ್ತಿದೆ) – ಕನಿಷ್ಠ ಆರ್ಡರ್‌ಗಳನ್ನು ಪಡೆದಿದೆ.

ಪ್ರಸ್ತುತ ಬಿಕ್ಕಟ್ಟು ಕೇಂದ್ರ ಸರ್ಕಾರ ಕಳೆದ ವರ್ಷ ತೆಗೆದುಕೊಂಡ ನಿರ್ಧಾರಗಳಲ್ಲಿ ಬೇರೂರಿದೆ.
ವೆಂಟಿಲೇಟರ್‌ಗಳನ್ನು ತಯಾರಿಸುವಲ್ಲಿ ಪೂರ್ವ ಅನುಭವವಿಲ್ಲದ ಕಂಪನಿಗಳಿಗೆ ಆರ್ಡರ್ ನೀಡಿತು. ಏಳು ಕಂಪೆನಿಗಳಲ್ಲಿ ಎರಡು – ಸರ್ಕಾರ ನಿರ್ವಹಿಸುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಅಲೈಡ್ ಮೆಡಿಕಲ್ ಲಿಮಿಟೆಡ್ ಸಹಭಾಗಿತ್ವ ಹೊಂದಿರುವ ಸ್ಕನ್ರೆ- ವೆಂಟಿಲೇಟರ್‌ಗಳನ್ನು ತಯಾರಿಸುವ ಬಗ್ಗೆ ಯಾವುದೇ ಗಮನಾರ್ಹ ದಾಖಲೆಯನ್ನು ಹೊಂದಿಲ್ಲ.

ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಅದರಲ್ಲಿ ಭಾಗವಹಿಸಿದ ಕಂಪನಿಗಳ ಅಧಿಕಾರಿಗಳು ಹೇಳುತ್ತಾರೆ. ಉದಾಹರಣೆಗೆ, ಅಲೈಡ್ ಮೆಡಿಕಲ್ ಲಿಮಿಟೆಡ್‌ಗೆ ಹೆಚ್ಚಿನ ಅನುಭವವಿದ್ದರೂ ಸಹ, ಒಂದು ಸಣ್ಣ ಪರಿಮಾಣವನ್ನು ನೀಡಲಾಯಿತು. ಕೇವಲ 350 ವೆಂಟಿಲೇಟರ್‌ಗಳ ಆರ್ಡರ್ ನೀಡಲಾಗಿತು. ಇದಕ್ಕೆ ವ್ಯತಿರಿಕ್ತವಾಗಿ, ವೆಂಟಿಲೇಟರ್ ತಯಾರಿಕೆಯಲ್ಲಿ ಯಾವುದೇ ಅನುಭವ ಇಲ್ಲದ ಅಗ್ವಾ ಮತ್ತು ಜ್ಯೋತಿ ಸಿಎನ್‌ಸಿ ಕಂಪನಿಗಳಿಗೆ ಕ್ರಮವಾಗಿ 10,000 ಮತ್ತು 5,000 ಯುನಿಟ್‌ಗಳ ಆರ್ಡರ್‌ಗಳನ್ನು ನೀಡಲಾಗಿತು!

ಈ ಆರೋಪಗಳಿಗೆ ಪ್ರತಿಕ್ರಿಯೆ ಕೋರುವ ಪ್ರಶ್ನೆಗಳಿಗೆ ಬಹುತೇಕ ಕಂಪನಿಗಳು ಪ್ರತಿಕ್ರಿಯಿಸಲಿಲ್ಲ.

(ಕೃಪೆ: ಸ್ಕ್ರೋಲ್.ಇನ್)


ಇದನ್ನೂ ಓದಿ; ಪಿಎಂ ಕೇರ್ಸ್ ನಿಧಿಯಡಿ ಖರೀದಿಸಿರುವ ವೆಂಟಿಲೇಟರ್ ಬಳಸಬೇಕಾದರೆ ‘ಬ್ಯಾಕಪ್’ ವೆಂಟಿಲೇಟರ್ ಅಗತ್ಯ..!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕಳಪೆ ಗುಣಮಟ್ಟದ Ventilator ಖರೀದಿಯ ಬಗ್ಗೆ ವಿಚಾರಣೆ ಆಗಬೇಕೆಂದು ಯಾರೂ ಒತ್ತಾಯಿಸುತ್ತಿಲ್ಲವಲ್ಲ ಏಕೆ?
    ವಿಷಯ ಇಷ್ಟೊಂದು ಗಂಭೀರವಾಗಿದ್ದರೊ ಸಹ ವಿರೋಧ ಪಕ್ಷದವರಾಗಲೀ, ಬುದ್ಧಿ ಜೀವಿ ಗಳಾಗಲಿ ಅಥವಾ ಪತ್ರಕರ್ತರು ಸುಮ್ಮನಿರುವದು ಯಾಕೆ?
    ಯಾರಾದರೂ ನ್ಯಾಯಾಲಯದ ಕದ ತತ್ತಬೇಕಿತ್ತಲ್ಲವೇ…
    ಇಂತಹ ಕೆಲವೊಂದು ಸರಳ ಸತ್ಯಗಳು ನಮ್ಮಂಥಹ ಜನಸಾಮಾನ್ಯರನ್ನು ಗೊಂದಲಕ್ಕೇ ಈಡು ಮಾಡುತ್ತಾವೆ.

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...

ಜಾರ್ಖಂಡ್| ವಾಮಾಚಾರ ಆಚರಣೆಗೆ ಅಪ್ರಾಪ್ತ ಬಾಲಕಿ ಬಲಿ; ತಾಯಿ ಸೇರಿದಂತೆ ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಬಳಿಕ ಕುಸುಂಭ ಗ್ರಾಮದಲ್ಲಿ ಬಲಿದಾನದ ಆಚರಣೆಯಲ್ಲಿ ಕತ್ತು ಹಿಸುಕಿ ಕೊಂದ ಹದಿಹರೆಯದ ಹುಡುಗಿಯ 35 ವರ್ಷದ ತಾಯಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ, ಮಾಂತ್ರಿಕ ಮತ್ತು ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ...

ಪ. ಬಂಗಾಳ | ಎಸ್‌ಐಆರ್ ಕರ್ತವ್ಯದಲ್ಲಿದ್ದ ನ್ಯಾಯಾಧೀಶರನ್ನು ಒತ್ತೆಯಾಳಾಗಿಟ್ಟುಕೊಂಡ ಆರೋಪ : ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಪಡೆಗಳ ನಿಯೋಜನೆಗೆ ನಿರ್ದೇಶನ

ನಿನ್ನೆ (ಏ.1) ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ....

ಉತ್ತರ ಪ್ರದೇಶ| ಮುಸ್ಲಿಂ ಯುವಕನನ್ನು ಥಳಿಸಿ ದರೋಡೆ ಮಾಡಿದ ಗುಂಪು; ಹಿಂದೂ ಶ್ಲೋಕ ಪಠಿಸುವಂತೆ ಒತ್ತಾಯ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಹಿಂದುತ್ವವಾದಿ ಗುಂಪೊಂದು ಮುಸ್ಲಿಂ ಯುವಕನನ್ನು ನಿರ್ದಯವಾಗಿ ಥಳಿಸಿ, ಅವಮಾನಿಸಿ, ಹಿಂದುತ್ವ ಶ್ಲೋಕಗಳನ್ನು ಪಠಿಸುವಂತೆ ಒತ್ತಾಯಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ 'ಕ್ಲಾರಿಯನ್ ಇಂಡಿಯಾ' ವರದಿ ಮಾಡಿದೆ. ಮಾರ್ಚ್ 28...