Homeಕರ್ನಾಟಕಸಿ.ಎಂ ಯಡ್ಡಿಗೇಕೆ ಉತ್ತರ ಕನ್ನಡವೆಂದರೆ ತಾತ್ಸಾರ?

ಸಿ.ಎಂ ಯಡ್ಡಿಗೇಕೆ ಉತ್ತರ ಕನ್ನಡವೆಂದರೆ ತಾತ್ಸಾರ?

- Advertisement -
- Advertisement -

ಕರ್ನಾಟಕ ನೆರೆಸಂತ್ರಸ್ತರ ಬಗ್ಗೆ ಪಿ.ಎಂ ಮೋದಿ ಮಾಹಾತ್ಮನಿಗೆಷ್ಟು ತಿರಸ್ಕಾರವೋ ಅಷ್ಟೇ ಅಸಡ್ಡೆ ಉತ್ತರ ಕನ್ನಡದ ಬದುಕು ನಲುಗಿದ ಮಂದಿಯ ಬಗ್ಗೆ ಯಡ್ಡಿಗಿದೆ. ಮೋದಿಗೆ ಯಡ್ಡಿಯ ಪಠಾಲಮ್ ಮೇಲೆ ಪೂರ್ವಾಗ್ರಹವಾದರೆ ಯಡ್ಡಿಗೆ ಉತ್ತರ ಕನ್ನಡದ ಸಂಸದಶಿಖಾಮಣಿ ಅನಂತಕುಮಾರ ಹೆಗಡೆ ಎಂದರೆ ನಿಗಿನಿಗಿ ಕೋಪ. ಒಟ್ಟಿನಲ್ಲಿ ನೊಂದವರಿಗೆ ಇನ್ನಷ್ಟೂ ನೋವು ಅಧಿಕಾರಸ್ಥರಿಗೆ ದ್ವೇಷಾಸೂಯೆಯ ಮೋಜು..

ಉತ್ತರಕನ್ನಡದಲ್ಲಿ ಅಗಸ್ಟ್ 5 ರಿಂದ 10 ರವರಗೆ ಪ್ರಳಯಾಂತಕ ಮಳೆಸುರಿದು ಹೆಚ್ಚು ಕಮ್ಮಿ 750 ಕೋಟಿ ರೂ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಸಮಿಕ್ಷೆ ನೆಡೆಸಿದೆ. ಮೂರ್ನಾಲ್ಕು ಜೀವ ಹರಣವಾಗಿವೆ. ನೂರಾರು ಜಾನುವಾರಗಳು ಸತ್ತು ಹೋಗಿವೆ. ಸಾವಿರಾರು ಎಕೆರೆ ತೋಟ-ಗದ್ದೆ ಕೊಚ್ಚಿಕೊಂಡು ಹೋಗಿವೆ. ಬರೋಬ್ಬರಿ 2,500 ಮನೆಗಳು ಮುರಿದು ಬಿದ್ದಿವೆ. ನೆರೆ ಹಾವಳಿ ಸಂತ್ರಸ್ತರಿಗೆ ಎರಡು ತಿಂಗಳಾದರೂ ಬದುಕು ಕಟ್ಟಿಕೊಳ್ಳಲಾಗದೆ ಒದ್ದಾಡುತ್ತಿದ್ದಾರೆ. ಸಿಎಂ ಸಾಹೇಬರು ಬಂದು ತಮ್ಮ ಕಣ್ಣಿರು ಒರೆಸುತ್ತಾರೆಂಬ ನಿರೀಕ್ಷೆಯಲ್ಲಿದ್ದ ನೆರೆಪಿಡಿತ ಜನತೆಗೆ ಮೂರು ಬಾರಿ ಯಡ್ಡಿ ಮೋಸಮಾಡಿದ್ದಾರೆ.

ವಾರದಲ್ಲಿ ಎರಡು ಮೂರು ಬಾರಿ ಸಿಎಂ ನೆರೆ ಪೀಡಿತ ಪ್ರದೇಶಗಳಿಗೆ ಬರುತ್ತಾರೆಂದು ಜಿಲ್ಲಾಡಳಿತ ಎಲ್ಲಾ ಸಿದ್ದತೆ ಮಾಡಿತ್ತು. ಕಳೆದ ತಿಂಗಳು ಸಿಎಂ ಬರುವುದು ಗ್ಯಾರಂಟಿಯೆಂದು ನೆರೆ ಸಂತ್ರಸ್ತರು ಕಾದು ಕುಳಿತ್ತಿದ್ದರು. ಎಂಮ್ಮೆಲ್ಲೆಗಳು, ಸಂಸದರು ಯಡ್ಡಿ ಸ್ವಾಗತಿಸಲು ಅಲ್ಲಿ ನೆರದಿದ್ದರು. ಅಧಿಕಾರಿಗಳ ದಂಡಂತು ನಡುವತ್ತಿಗೆ ಬಂದಿತ್ತು. ಆದರೆ ಪಕ್ಕದ ಶಿವಮೊಗ್ಗದಲ್ಲಿದ ಯಡ್ಡಿ ಧಿಡೀರ್ ಉತ್ತರಕನ್ನಡಕ್ಕೆ ಬರಲಾರೇನೆಂದು ಸಂದೇಶ ಕಳುಹಿಸಿದರು. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ತನ್ನ ಹಿತಶತ್ರುವೂ ಆದ ಈಶ್ವರಪ್ಪ ಕರೆದಿದ್ದ ಅಧಿಕಾರಿಗಳ ಸಭೆಗೆ ನುಗ್ಗಿ ನಿಭಾಯಿಸಿದ್ದರು. ಶಿವಮೊಗ್ಗೆಯ ಚೆಡ್ಡಿ ರಾಜಕಾರಣದ ಮೇಲಾಟಕ್ಕೆ ಉತ್ತರಕನ್ನಡ ಕಡೆಗಣಿಸ ಬೇಕಾಯಿತು.

ನೆರೆ ಹಾನಿಯ ಪರಿಶೀಲನೆಗೆಂದು ಪಕ್ಕದ ಧಾರವಾಡದ ಮಂತ್ರಿ ಜಗದೀಶ್ ಶೆಟ್ಟರ್ ಜಿಲ್ಲೆಗೊಮ್ಮೆ ಬಂದು ಹಾಗೆ ಹೋಗಿದ್ದರು. ಜಿಲ್ಲಾ ಉಸ್ತುವಾರಿ ಮಂತ್ರಿ ಶಶಿಕಲಾ ಜೊಲ್ಲೆ ಮೊನ್ನೆ ಬಂದು ಬೈ ಹೇಳಿದ್ದಾರೆ. ಜಿಲ್ಲೆಯ ಭೌಗೋಳಿಕ, ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಒಂಚೂರು ಗೊತ್ತಿಲ್ಲದ ಈ ಮಂತ್ರಿ, ಅಧಿಕಾರಿ ಹೇಳಿದ್ದಕೆ ಗೋಣು ಆಡಿಸಿದ್ದಾರೆ. ತಾವು ಬಂದಿದ್ದು ಬರೀ ಮಾಹಿತಿಯನ್ನು ಬಾಯಲ್ಲಿ ಸಿಎಂಗೆ ತಲುಪಿಸುವ ಪೋಸ್ಟ್ ಮ್ಯಾನ್ ಚಾಕರಿಗಷ್ಟೇ ಎಂಬಂತೆ ಹೊಣಗೆಡಿ ಮಾತನಾಡಿದ್ದಾರೆ. ಸಿಎಂ ಜೊತೆ ಚರ್ಚಿಸುತೇನೆಂದು ಮಂತ್ರಿಗಳು ಹೇಳಿದ್ದಾರೆಯೇ ಹೊರತು ಇಂತಿಷ್ಟು ಪರಿಹಾರಕ್ಕೆ ಬೇಡಿಕೆ ಇಡುತ್ತೇವೆಂದಾಗಲಿ, ನೊಂದವರಿಗೆ ಸೂಕ್ತ ಪರಿಹಾರ ಕೊಡುತ್ತೇವೆ ಎಂದಾಲಿ ಧೈರ್ಯದಿಂದ ಹೇಳಿಲ್ಲ. ಈ ಮಂತ್ರಿಗಳ ದಂಡಿನ “ದಂಡ” ಯಾತ್ರೆಗೆ ಮತ್ತು ಸಿಎಂ ಬರ್‍ತಾರೆಂದು ಮಾಡಿದ ಸಿದ್ದತೆಗೆ ಲಕ್ಷಾಂತರ ಹಾನಿಯಾಗಿದೆ ಹೊರತು ನೆರೆ ಪಿಡಿತರಿಗೆ ಪೈಸೆ ಫಾಯ್ದೆ ಆಗಿಲ್ಲ.

ಹನ್ನೊಂದು ಸಾವಿರಕ್ಕೂ ಹೆಚ್ಚು ಮಂದಿ ಪರಿಹಾರ ಕೇಂದ್ರಗಳನ್ನು ಸೇರಿದ್ದರು. ಇದಕ್ಕಿಂತಲು ಹೆಚ್ಚು ಮಂದಿ ನೆರೆಯಿಂದ ದಿಕ್ಕೆಟ್ಟು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದರು. ಕೆಲವರಿಗೆ ಪಂಚಕಜ್ಜಾಯ ಕೊಟ್ಟಂತೆ ಹನಿ ಹನಿ ಹಣ ‘ಪರಿಹಾರ’ ಹಂಚಿದ್ದಾರೆ. ಇದು ಹೊಸ ಬದುಕು ಕಟ್ಟಿಕೊಳ್ಳಲು ನೆರವಾಗಿಲ್ಲ. ರಸ್ತೆ, ಕಾಲು ಸುಂಕ, ಬ್ರಿಡ್ಜ್, ವಿದ್ಯುತ್ ಕಂಬ, ಡ್ಯಾಮು, ಕೆರೆ, ಬಾವಿ ಕೊಚ್ಚಿ ಹೋಗಿವೆ. ನೆರೆಬಂದ ಪ್ರದೇಶಗಳಂತೂ ನರಕವಾಗಿವೆ. ಜನರಿಗಾದ ಆಘಾತವನ್ನು ಆಳುವವರ ಎದುರು ಸಮರ್ಥವಾಗಿ ಮಂಡಿಸಿ ಪರಿಹಾರ ತರುವ ನಾಯಕತ್ವ ಉತ್ತರಕನ್ನಡದಲ್ಲಿ ಇಲ್ಲ. ಬಿಜೆಪಿಯಿಂದ ಆರರಲ್ಲಿ ನಾಲ್ಕುಜನ ಶಾಸಕರಾಗಿದ್ದಾರೆ. ಒಬ್ಬ ಅನರ್ಹನು ಬಿಜೆಪಿ ಪಾಲಾಗಿದ್ದಾನೆ. ತಾನು ಹುಟ್ಟಿದೇ ದೇಶಉದ್ದಾರಕೆಂದು ಎಂಬಂತೆ ನಾಲಿಗೆ ಹರಿಬಿಡುವ ಸಂಸದ ಆರನೇ ಭಾರಿ ಪಾರ್ಲಿಮೆಂಟಿನ ಕುರ್ಚಿ ಬಿಸಿ ಮಾಡಲು ಆಯ್ಕೆಯಾಗಿದ್ದಾನೆ.

ಇವರ್‍ಯಾರಿಗೂ ಸಿಎಂ ಎದುರು ನಿಂತು ಸಮಸ್ಯ ವಿವರಿಸುವ ಧೈರ್ಯವಿಲ್ಲ. ಕಾರವಾರ ಶಾಸಕಿ ರೂಪಾಲಿ ನಾಯ್ಕಳಂತೂ ಹೆಜ್ಜೆ-ಹೆಜ್ಜೆಗೆ ಶೋ ಮಾಡುವುದೆ ಶಾಸಕಿಯ ಕರ್ತವ್ಯ ಎಂದುಕೊಂಡಿದ್ದಾಳೆ. ನೆರೆ ಬಂದಾಗ ಸಮ್ಮಿಶ್ರ ಸರ್ಕಾರ ಉರುಳಿಸುವ ಬಿಜೆಪಿ ರೆಸಾರ್ಟ್‌ ಸರ್ಕಸ್‍ನಲ್ಲಿದ ಈಕೆ ತಾನು ಅನಿವಾರ್ಯವಾಗಿ ರೆಸಾರ್ಟ್ ಸೇರಿದ್ಧೇನೆ… ನೊಂದ ನೆರೆ ಪೀಡಿತರ ಬಳಿ ಬರಲಾಗುತ್ತಿಲ್ಲವೆಂದು ಜಾಹಿರಾತು ಪತ್ರಿಕೆಗಳಿಗೆ ಕೊಟ್ಟು ತಾನೆಂತಹ ನಾಲಾಯಕ್ ಜನಪ್ರತಿನಿಧಿ ಎಂದು ತೋರಿಸಿಕೊಂಡಿದ್ದಾಳೆ. ಬಟ್ಕಳದ ಬಚ್ಚಾ ಶಾಸಕ ಸುನಿಲನಾಯ್ಕ್ ಸಿಎಂ ಇರಲಿ ಸಂಸರ ಮುಂದೆನಿಂತು ಮಾತನಾಡುವ ಧೈರ್ಯವಿಲ್ಲ. ಕುಮುಟೆಯ ಶಾಸಕ ದಿನಕರ್ ಶೆಟ್ಟಿಗೆ ಕಿಕ್‌ಬ್ಯಾಕ್‌ ಕಮಾಯಿಯೇ ನೆರೆ ಪೀಡಿತರ ಸೇವೆ ಎಂಬ ಭಾವನೆ.

ಈಗ ಎರಡನೆ ಸುತ್ತಿನ ನೆರೆ ವಿಕ್ಷಣೆಗೆ ಸಿಎಂ ಯಡ್ಡಿ ರೆಡಿಯಾಗಿದ್ದಾರೆ. ಬೀದರ್, ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತಿತರ ಕಡೆ ಸಿಎಂ ಸಂಚಾರ ಮಾಡುತ್ತಿದ್ದಾರೆ. ಆದರೆ ಆತನ ಟೂರ್ ಲಿಸ್ಟ್ ನಲ್ಲಿ ಉತ್ತರಕನ್ನಡ ಇಲ್ಲ.!! ಸಿಎಂ ಕಾಲರ್ ಹಿಡಿದು ಜಿಲ್ಲೆಗೆ ಕರೆತಬೇಕಿದ್ದ ಶಾಸಕರಿಗೆ ಆ ತಾಕತು ಇಲ್ಲ. ಸಿಎಂ ಕೆಂಗಣ್ಣಿಗೆ ಸಿಲುಕಿದರೆ ನಿಗಮ ಮಂಡಳಿ, ಗೂಟದ ಕಾರಿಗೆ ಸಂಚಕಾರ ಎಂಬ ಅಂಜಿಕೆ. ಸಿಎಂ ಮುಂದೆ ವಿರಾವೇಷದ ಮಾತಾಡುವ ಸಂಸದ ಅನಂತ್ಮಾಣಿಗೆ ಜನರೆಂದರೆ ಯಾವಾಗಲೂ ಅಲರ್ಜಿ. ಅತನಿಗೆ ಹಿಂದುತ್ವ ಗೊಂದಲಗಳಿಗಷ್ಟೆ ಕಾಲಾಳುಗಳು ಬೇಕು.

ಒಟ್ಟಿನಲ್ಲಿ ಉತ್ತರಕನ್ನಡದ ಸಮಸ್ಯಗಂತೂ ಉತ್ತರವಿಲ್ಲ.!!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...