ಬಾಲಿವುಡ್ ನಟಿ ಕಂಗನಾ ರಾಣಾವತ್ ಮತ್ತು ಶಿವಸೇನೆ ನಡುವಿನ ವಿವಾದದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅಧ್ಯಕ್ಷೆ ಸೋನಿಯಾ ಗಾಂಧಿ ತಟಸ್ಥ ನಿಲುವು ತಳೆದಿದ್ದಾರೆ. ಆದರೂ ಸೋನಿಯಾ ವಿರುದ್ಧ ಕಂಗನಾ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರದಲ್ಲಿರುವ ನಿಮ್ಮ ಸರ್ಕಾರ ನನಗೆ ಕಿರುಕುಳ ನೀಡುತ್ತಿದ್ದರೂ, ಈ ಬಗ್ಗೆ ನಿಮಗೆ ಸಂಕಟವಾಗುತ್ತಿಲ್ಲವೇ ?‘ ಎಂದು ಕಂಗನಾ ಪ್ರಶ್ನಿಸಿದ್ದಾರೆ.
ನಟಿ ಕಂಗನಾ ಬಾಲಿವುಡ್ನಲ್ಲಿ ಡ್ರಗ್ ಮಾಫಿಯಾ ಇದೆ ಎಂಬ ಆರೋಪ ಮತ್ತು ನಟ ಸುಶಾಂತ್ ಸಿಂಗ್ ರಜಪೂತ್ ಅಸಹಜ ಸಾವಿನ ಬಗ್ಗೆ ಮುಂಬೈ ಪೊಲೀಸರಿಗೆ ಸಂಬಂಧಿಸಿದಂತೆ ಟ್ವೀಟ್ಗಳನ್ನು ಮಾಡುವ ಮೂಲಕ ವಿವಾದವನ್ನು ಆರಂಭಿಸಿದ್ದರು. ನಾನು ಮುಂಬೈ ಪೊಲೀಸರಿಗೆ ಹೆದರುತ್ತಿದ್ದೆ. ಮುಂಬೈ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಕಾಣುತ್ತಿದೆ ಎಂಬಂತ ಟ್ವೀಟ್ ಮಾಡಿದ್ದರು.
ಶಿವಸೇನಾ ಆಡಳಿತವಿರುವ ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರದ ಜನರು, ಬಾಲಿವುಡ್ ನಟಿ-ನಟಿಯರು, ಸರ್ಕಾರದ ಸಚಿವರು ಆಕೆಯ ಹೇಳಿಕೆಗಳ ಬಗ್ಗೆ ಅಸಮಾಧಾನ, ಆಕ್ರೋಶ ಹೊರಹಾಕಿದ್ದರು. ಬಿಎಂಸಿ ಆಕೆಯ ಮಣಿಕರ್ಣಿಕಾ ಫಿಲ್ಮಂ ಕಚೇರಿಯಲ್ಲಿ ಅಕ್ರಮ ನಿರ್ಮಾಣಗಳನ್ನು ಮಾಡಲಾಗಿದೆ ಎಂದು ಮುಂಬೈ ಪ್ರದೇಶದಲ್ಲಿನ ರನೌತ್ ಕಚೇರಿಯ ಭಾಗವನ್ನು ಧ್ವಂಸಗೊಳಿಸಿತು. ಈ ಪ್ರಕರಣ ಈ ಬಾಂಬೆ ಹೈಕೋಟ್ನಲ್ಲಿದ್ದು, ವಿಚಾರಣೆ ಸೆ.22ಕ್ಕೆ ನಡೆಯಲಿದೆ.
ಇದನ್ನೂ ಓದಿ: ಬಿಹಾರ ಚುನಾವಣೆವರೆಗೂ ಮುಂದುವರೆಯಲಿದೆ ಸುಶಾಂತ್ ಸಿಂಗ್- ಕಂಗನಾ ವಿವಾದಗಳು
ಈ ನಡುವೆ ವಿವಾದದಲ್ಲಿ ಕೇಂದ್ರ ಕಾಂಗ್ರೆಸ್ ವಲಯ ಯಾವುದೇ ಹೇಳಿಕೆ ನೀಡದೆ ತಟಸ್ಥವಾಗಿತ್ತು. ನಾವು ಗಮನಹರಿಸಬೇಕಾದ ಇದಕ್ಕಿಂತ ಮುಖ್ಯ ವಿಷಯಗಳಿವೆ ಎಂದು ಘಟನೆಯಿಂದ ದೂರ ಉಳಿಯುವ ಪ್ರಯತ್ನ ನಡೆಸಿತ್ತು. ಆದರೆ ನಟಿ ಕಂಗನಾ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ವಿವಾದದಲ್ಲಿ ಎಳೆತಂದಿದ್ದು, ಅವರ ವಿರುದ್ಧ ಪ್ರಶ್ನೆಗಳ ಸುರಿಮಳೆ ಸುರಿದು, ವಾಗ್ದಾಳಿ ನಡೆಸಿದ್ದಾರೆ.
‘ಗೌರವಾನ್ವಿತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿಯವರೇ, ಒಬ್ಬ ಮಹಿಳೆ ಎಂಬ ಕಾರಣಕ್ಕೆ ನಿಮ್ಮ ಮಹಾರಾಷ್ಟ್ರ ಸರ್ಕಾರ ನನಗೆ ಕಿರುಕುಳ ನೀಡುತ್ತಿರುವುದು ನಿಮಗೆ ಸಂಕಟ ತರುತ್ತಿಲ್ಲವೇ? ಡಾ. ಅಂಬೇಡ್ಕರ್ ಅವರು ನಮಗೆ ನೀಡಿರುವ ಸಂವಿಧಾನದ ತತ್ವಗಳನ್ನು ಎತ್ತಿ ಹಿಡಿಯುವಂತೆ ಆ ನಿಮ್ಮ ಸರ್ಕಾರಕ್ಕೆ ಮನವಿ ಮಾಡಲು ಸಾಧ್ಯವಿಲ್ಲವೇ?‘ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.
ಸರಣಿ ಟ್ವೀಟ್ಗಳನ್ನು ಮಾಡಿರುವ ನಟಿ ಇನ್ನೊಂದು ಟ್ವೀಟ್ನಲ್ಲಿ, ನೀವು ಪಾಶ್ಚಿಮಾತ್ಯ ದೇಶದಲ್ಲಿ ಬೆಳೆದವರು, ಈಗ ಭಾರತದಲ್ಲಿ ನೆಲೆಸಿದ್ದೀರಿ. ಮಹಿಳೆಯರ ಸಂಕಷ್ಟಗಳ ಬಗ್ಗೆ ನಿಮಗೆ ಅರಿವಿರಬಹುದು. ನಿಮ್ಮ ಸರ್ಕಾರ ಮಹಿಳೆಯರ ಮೇಲೆ ದೌರ್ಜನ್ಯವೆಸಗುತ್ತಿರುವಾಗ ನೀವು ಮೌನ ವಹಿಸಿರುವುದು ಹಾಗೂ ನಿರ್ಲಕ್ಷ್ಯ ತೋರುತ್ತಿರುವುದನ್ನ ಇತಿಹಾಸವೇ ನಿರ್ಣಯಿಸುತ್ತದೆ ಎಂದು ಕಟುವಾದ ಸಾಲುಗಳನ್ನು ಅವರು ತಮ್ಮ ಟ್ವಿಟರ್ ಪೋಸ್ಟ್ನಲ್ಲಿ ಸೇರಿಸಿದ್ದಾರೆ.
ಇದನ್ನೂ ಓದಿ: ಸೇನಾ V/s ಕಂಗನಾ ವಿವಾದ: ದೂರ ಉಳಿಯಲು ಕಾಂಗ್ರೆಸ್ ಯತ್ನ
You have grown up in the west and lived here in India. You may be aware of the struggles of women. History will judge your silence and indifference when your own Government is harassing women and ensuring a total mockery of law and order. I hope you will intervene ?@INCIndia
— Kangana Ranaut (@KanganaTeam) September 11, 2020
ನಟಿಯ ಅಸಮಾಧಾನ, ಆಕ್ರೋಶ ನಿಜವಿರಬಹುದು, ಆಕೆಗೆ ಅನ್ಯಾಯವಾಗಿದ್ದರೆ ಅದನ್ನು ಪ್ರಶ್ನಿಸುವುದು, ಹೋರಾಡುವುದು ಆಕೆಯ ಹಕ್ಕು. ಹಾಗೆಂದ ಮಾತ್ರಕ್ಕೆ ಅದಕ್ಕೆ ಸಂಬಂಧವೇ ಇಲ್ಲದ ಮತ್ತೊಬ್ಬ ಮಹಿಳೆಯನ್ನೇ ಅವರು ಟಾರ್ಗೆಟ್ ಮಾಡುವ ಅವಶ್ಯಕತೆ ಖಂಡಿತ ಇಲ್ಲ. ಮಹಾರಾಷ್ಟ್ರದಲ್ಲಿ ಕಾಂಗ್ರಸ್ ಪಕ್ಷ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡ ಮಾತ್ರಕ್ಕೆ ನಿಮ್ಮ ಮುಂಬೈ ಪೊಲೀಸರ ಮತ್ತು ಮಹಾರಾಷ್ಟ್ರದ ಬಗೆಗಿನ ಹೇಳಿಕೆಗಳನ್ನು ಅವರು ಸಮರ್ಥಿಸಿಕೊಳ್ಳಬೇಕೆ?
ಹೌದು, ಈ ದೇಶದಲ್ಲಿ ಅತಿ ಹೆಚ್ಚು ಅವಮಾನ, ಅಪಹಾಸ್ಯ, ಟೀಕೆಗಳು, ಕೀಳುಮಟ್ಟದ ಕಾಮೆಂಟ್ಗಳು, ಕೆಟ್ಟ ಮೀಮ್ಸ್ಗಳಿಗೆ ಗುರಿಯಾದ ಏಕೈಕ ಮಹಿಳೆ ಸೋನಿಯಾ ಗಾಂಧಿ. ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿರುವ ಆಕೆಯ ಬಗ್ಗೆ, ಆಕೆಯ ದೇಶಾಭಿಮಾನ, ಆಕೆಯ ಪೌರತ್ವದ ಬಗ್ಗೆ, ವಿದೇಶಿ ಮಹಿಳೆ ಎಂಬ ಬಗ್ಗೆ ಸಂಘಪರಿವಾರ, ವಿಶ್ವ ಹಿಂದೂ ಪರಿಷತ್ನಂತಹ ಸಂಘಟನೆಗಳು, ಭಾರತೀಯ ಜನತಾ ಪಾರ್ಟಿಯಂತಹ ಪಕ್ಷಗಳು ಅಪಹಾಸ್ಯ ಮಾಡಿವೆ ಮತ್ತು ಮಾಡುತ್ತಲೇ ಇವೆ.
ರಾಜಕೀಯದಲ್ಲಿ ಎಲ್ಲಾ ಪಕ್ಷಗಳಲ್ಲೂ ಮಹಿಳೆಯರಿದ್ದಾರೆ. ಇಷ್ಟು ದಿನಗಳ ಕಾಲ ಯಾವ ಮಹಿಳೆಯ ಹೆಸರನ್ನೂ ಉಲ್ಲೇಖಿಸದ ಕಂಗನಾ ಇಂದು ಸೋನಿಯಾ ಗಾಂಧಿ ಒಬ್ಬರನ್ನೇ ಎಳೆದುತಂದಿದ್ದೇಕೆ..? ಕಂಗನಾ ಮಾತ್ರವಲ್ಲದೇ ರಿಪಬ್ಲಿಕ್ ಟಿವಿಯ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಸಹ ಪದೇ ಪದೇ ಎಲ್ಲ ವಿವಾದಗಳಿಗೂ ಸೋನಿಯಾ ಗಾಂಧಿಯನ್ನು ದೂರುತ್ತಾರೆ. ಪಾಲ್ಘಾರ್ ಲಿಂಚಿಂಗ್ ಪ್ರಕರಣ ನಡೆದಾಗಿನಿಂದಲೂ ಸೋನಿಯಾ ಗಾಂಧಿಯವರನ್ನು ಕೆಟ್ಟದಾಗ ನಿಂದಿಸಲು ಪ್ರಾರಂಭಿಸಿದ್ದಾರೆ. ಇವುಗಳನ್ನು ನೋಡಿದಾಗ ಸೋನಿಯಾ ಗಾಂಧಿ ಹೆಸರು ತರುವ ಹಿಂದೆ ಹುನ್ನಾರವಿದೆ ಎನ್ನಿಸುವುದಿಲ್ಲವೆ..?
ಇದನ್ನೂ ಓದಿ: ಜಾತಿ ಮತ್ತು ಮೀಸಲಾತಿ ಬಗ್ಗೆ ನಟಿ ಕಂಗನಾ ರಾಣಾವತ್ಗೊಂದು ಪತ್ರ
ಕಂಗನಾ ಕೂಡ ತಮ್ಮ ನೋವಿಗೆ ದನಿಯಾಗಿ ಎಂದು ಕೇಳಿಲ್ಲ. ಆಕೆ ಕೂಡ ಸೋನಿಯಾ ಗಾಂಧಿಯನ್ನು ಅವಮಾನಿಸಿಯೇ ಟ್ವೀಟ್ ಮಾಡಿರುವು ಕಾಣುತ್ತದೆ. ಪಾಶ್ಚಿಮಾತ್ಯ ದೇಶದವರು, ಇಲ್ಲಿನ ಮಹಿಳೆಯರ ಸಂಕಷ್ಟಗಳ ಅರಿವಿರಲಿ ಎನ್ನುವ ನಟಿಗೆ ಸೋನಿಯಾ ಗಾಂಧಿ ಭಾರತದ ಪ್ರಜೆಯಾಗಿದ್ದಾಗ ಈಕೆ ಇನ್ನೂ ಹುಟ್ಟಿರಲಿಲ್ಲ ಎನ್ನುವ ಅರಿವಿರದೇ ಹೋಗಿದ್ದು ವಿಷಾದ.
ಇನ್ನು ಇದೇ ಸಂದರ್ಭದಲ್ಲಿ ಕಂಗನಾರವರ ತಾಯಿ ಬಿಜೆಪಿ ಪಕ್ಷ ಸೇರುತ್ತಿರುವುದು, ಮಹರಾಷ್ಟ್ರದ ವಿರುದ್ಧ ಹೇಳಿಕೆ ನೀಡಿದರೂ ಸಹ ಬಿಜೆಪಿ ಕಂಗನಾ ಪರ ನಿಂತಿರುವುದಕ್ಕೂ, ಕಂಗನಾ ಕಾಂಗ್ರೆಸ್ ಮತ್ತು ಸೋನಿಯಾ ಗಾಂಧಿ ವಿರುದ್ಧ ಮಾತಾಡುತ್ತಿರುವುದಕ್ಕೂ ಸಂಬಂಧವಿಲ್ಲವೇ ಎಂಬ ಪ್ರಶ್ನೆ ಸಹ ಜೋರಾಗಿ ಕೇಳಿಬಂದಿದೆ.
ಇನ್ನು ಡ್ರಗ್ಸ್ ವಿಚಾರದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಹೆಚ್ಚಾಗಿ ನಟಿಯರನ್ನೇ ಬಂಧಿಸಲಾಗುತ್ತಿದೆ. ಏಕೆ ನಟರು ಯಾರೂ ಡ್ರಗ್ಸ್ ತೆಗೆದುಕೊಳ್ಳುವುದಿಲ್ಲವೇ? ಈ ಬಗ್ಗೆ ಕಂಗನಾ ಏಕೆ ದನಿಯೆತ್ತುತ್ತಿಲ್ಲ ಎಂದರೆ ಅದಕ್ಕೆ ಅವರು ಯಾವ ಉತ್ತರ ಕೊಡುತ್ತಾರೆ?
ಪ್ರತಿ ವ್ಯಕ್ತಿಯ ಮೌನಕ್ಕೆ ಕಾಲವೇ ಉತ್ತರ ನೀಡುತ್ತದೆ ಎನ್ನುವುದಕ್ಕೆ ಸೋನಿಯಾ ಗಾಂಧಿ ನಿದರ್ಶನ. ತಮ್ಮ ಬಗ್ಗೆ ಬರುವ ಟೀಕೆಗಳಿಗೆ ಆಕೆ ಉತ್ತರಿಸಿದ್ದು ಕಡಿಮೆಯೇ. ಬೇರೆಯವರ ಪೊಳ್ಳು ಮಾತುಗಳಿಗೆ, ವಿವಾದಗಳಿಗೆ ಪ್ರಾಮುಖ್ಯತೆ ನೀಡದೇ ತಮ್ಮ ಕೆಲಸದ ಕಡೆಯಷ್ಟೇ ಗಮನ ಕೊಡುತ್ತಾ ಸಾಗಿದ್ದಾರೆ.