Homeಅಂತರಾಷ್ಟ್ರೀಯಈ ವರ್ಷ ದಿಟ್ಟ ಗೆಲುವು ಸಾಧಿಸಿದ ಪ್ರಪಂಚದ ಈ ಹತ್ತು ಅತಿದೊಡ್ಡ ಚಳವಳಿಗಳ ಬಗ್ಗೆ ನಿಮಗೆ...

ಈ ವರ್ಷ ದಿಟ್ಟ ಗೆಲುವು ಸಾಧಿಸಿದ ಪ್ರಪಂಚದ ಈ ಹತ್ತು ಅತಿದೊಡ್ಡ ಚಳವಳಿಗಳ ಬಗ್ಗೆ ನಿಮಗೆ ಗೊತ್ತೆ?

"ಚಿಲಿಯಲ್ಲಿ ನವ ಉದಾರೀಕರಣ ಪ್ರಾರಂಭವಾಯಿತು ಮತ್ತು ಚಿಲಿಯಲ್ಲಿಯೇ ನವ ಉದಾರೀಕರಣವನ್ನು ಕೊನೆಗೊಳಿಸುತ್ತೇವೆ" ಎಂಬ ಘೋಷಣೆ ಇಲ್ಲಿ ಮುನ್ನಲೆಗೆ ಬಂದಿದೆ

- Advertisement -
- Advertisement -

2019 ರ ಆರಂಭದಿಂದಲೂ ಜಾಗತೀಕರಣ ಮತ್ತು ನವ-ಉದಾರವಾದಿ ಆರ್ಥಿಕ ನೀತಿಗಳ ವಿರುದ್ಧ ಜಗತ್ತಿನಾದ್ಯಂತ ಪ್ರತಿಭಟನೆಗಳ ಸರಣಿಗಳು ನಡೆಯುತ್ತಿವೆ. ಈ ಪ್ರತಿಭಟನೆಗಳು ಆರ್ಥಿಕ ನೀತಿಗಳ ನೇರ ಪರಿಣಾಮದಿಂದಾಗಿ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುವ ಮತ್ತು ಬಡವರನ್ನು ಬಡವರನ್ನಾಗಿ ಮಾಡುವ ಅಸಮಾನತೆ ಮತ್ತು ಅನ್ಯಾಯವನ್ನು ಪ್ರಶ್ನಿಸುತ್ತಿವೆ. ಅವುಗಳ ಕುರಿತು ನಾವು ತಿಳಿದುಕೊಳ್ಳಬೇಕಿರುವುದು ಅಗತ್ಯ.

To Read in English click here

ಫ್ರಾನ್ಸ್
ಕಳೆದ ನವೆಂಬರ್ 2018 ರಿಂದ ಫ್ರಾನ್ಸ್‌ನ ಅತಿದೊಡ್ಡ ದಂಗೆಯೊಂದು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ರ ಆರ್ಥಿಕ ನೀತಿಗಳ ವಿರುದ್ಧ ಪ್ರತಿಭಟಿಸಲು ಪ್ರಾರಂಭಿಸಿತು. ಪ್ರತಿಭಟನೆಯನ್ನು “ಹಳದಿ ಅಂಗಿಗಳು” ಎಂದು ಕರೆಯಲಾಗುತ್ತಿತ್ತು. ಇದು ಟ್ರಕ್ ಚಾಲಕರ ಸುರಕ್ಷತಾ ಜಾಕೆಟ್‌ಗಳನ್ನು ಸಂಕೇತಿಸುತ್ತದೆ (ಸಾಮಾನ್ಯ ಜನರ ಕಲ್ಯಾಣ ರಾಜ್ಯ ನೀತಿಗಳನ್ನು) ಫ್ರೆಂಚ್ ಸರ್ಕಾರವು ಅದನ್ನು ಬಲವಂತವಾಗಿ ಹತ್ತಿಕ್ಕುವ ಮೊದಲು ದೇಶಾದ್ಯಂತ ಹರಡಿತು.

ಸ್ಪೇನ್
ಕ್ಯಾಟಲಾನ್ ಸ್ವಾತಂತ್ರ್ಯ ಚಳವಳಿಯ ಪ್ರತಿಭಟನಾಕಾರರು ಸ್ಪ್ಯಾನಿಷ್ ರಾಜ್ಯ ದಬ್ಬಾಳಿಕೆಯನ್ನು ವಿರೋಧಿಸಿ 2019 ರ ಅಕ್ಟೋಬರ್‌ನಲ್ಲಿ ಸ್ಪೇನ್‌ನಲ್ಲಿ ಮ್ಯಾಡ್ರಿಡ್‌ನಲ್ಲಿ ಬೀದಿಗಿಳಿದಿದ್ದಾರೆ. ಕ್ಯಾಟಲಾನ್‌ಗೆ ಸ್ಪೇನ್‌ನಿಂದ ಸ್ವಾತಂತ್ಯ ದೊರೆಯಬೇಕೆಂಬುದು ಅವರ ಹಕ್ಕೊತ್ತಾಯ. ಕ್ಯಾಟಲಾನ್ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿದ್ದ 9 ರಾಜಕಾರಣಿಗಳು ಮತ್ತು ಕಾರ್ಯಕರ್ತರಿಗೆ 13 ವರ್ಷ ಜೈಲು ಶಿಕ್ಷೆ ವಿಧಿಸಿರುವುದನ್ನು ವಿರೋಧಿಸಿ ಒಂದು ಲಕ್ಷಕ್ಕೂ ಹೆಚ್ಚು ಪ್ರತಿಭಟನಾಕಾರರು ನಿಯಮಿತವಾಗಿ ಪ್ರತಿಭಟಿಸುತ್ತಿದ್ದಾರೆ. ಆದರೂ ಸ್ಪೇನ್‌ ಪ್ರಭುತ್ವ ಅಮಾನವೀಯವಾಗಿ ಹೋರಾಟವನ್ನು ಹತ್ತಿಕ್ಕುತ್ತಿದೆ.

ಪ್ಯಾಲೆಸ್ಟೈನ್
ಇಸ್ರೇಲ್‌ ಗಾಜಾ ಪಟ್ಟಿ ಮೇಲೆ ದಿಗ್ಬಂಧನ ವಿಧಿಸಿರುವುದನ್ನು ವಿರೋಧಿಸಿ ಪ್ಯಾಲೆಸ್ಟೀನಿಯರು 12 ವರ್ಷಗಳಿಂದ ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನಾಕಾರರು ಗಾಜಾದ ತಮ್ಮ ಭೂಮಿಗೆ ಮರಳುವ ಹಕ್ಕನ್ನು ಕೋರಿದ್ದಾರೆ. ಗಾಜಾ ಪಟ್ಟಿಯು ಕಳೆದ 10 ವರ್ಷಗಳಿಂದ ತೀವ್ರ ಬಾಂಬ್ ಸ್ಫೋಟವನ್ನು ಕಂಡಿದೆ ಮತ್ತು ಅತಿದೊಡ್ಡ ಮಾನವೀಯ ಬಿಕ್ಕಟ್ಟಿನ ಅಂಚಿನಲ್ಲಿದೆ..

ಲೆಬನಾನ್
ಹೆಚ್ಚುತ್ತಿರುವ ತೆರಿಗೆ ಮತ್ತು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಲೆಬನಾನ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ವಾಟ್ಸಾಪ್, ಸ್ಕೈಪ್ ಮತ್ತು ಇತರ ಸಾಮಾಜಿಕ ಜಾಲತಾಣ ಸೇವೆಗಳ ಬಳಕೆಯ ಮೇಲೆ ಯೋಜಿತ ದೈನಂದಿನ ತೆರಿಗೆಯನ್ನು ಸರ್ಕಾರ ಘೋಷಿಸಿದ ನಂತರ ಪ್ರತಿಭಟನೆಗಳು ತೀವ್ರಗೊಂಡಿವೆ ಎಂದು ಹೇಳಲಾಗುತ್ತದೆ. ಆದರೆ ಆಳವಾದ ಆರ್ಥಿಕ ಬಿಕ್ಕಟ್ಟು ಬೆಲೆಏರಿಕೆ, ನಿರುದ್ಯೋಗ ಮತ್ತು ಕಳಪೆ ಸೇವೆಗಳಿಗೆ ಕಾರಣವಾಗಿದೆ. ಇದು ದೀರ್ಘಕಾಲದಿಂದ ಪ್ರಾಬಲ್ಯವಿರುವ ಸ್ಥಾಪಿತ ರಾಜವಂಶಗಳ ವ್ಯವಸ್ಥೆಗಳಿಗೆ ರಾಜಕೀಯ ಸವಾಲು ಹಾಕುತ್ತಿದೆ. ಪ್ರತಿಭಟನಾಕಾರರು ಕ್ಯಾಪಿಟಲ್ ಬೈರುತ್ ಮೂಲಕ ಉತ್ತರದಿಂದ ದಕ್ಷಿಣಕ್ಕೆ 105 ಕಿಲೋಮೀಟರ್ ಮಾನವ ಸರಪಳಿಯನ್ನು ರಚಿಸಿದ್ದಾರೆ.

ಚಿಲಿ

ಈ ದಶಕದಲ್ಲಿಯೇ ಅತಿ ಹೆಚ್ಚು ಜನರು ಬೀದಿಗಿಳಿದು ಹೋರಾಡಿದ ಚಳವಳಿಗೆ ಚಿಲಿ ಸಾಕ್ಷಿಯಾಗಿದೆ. ಸರ್ಕಾರದ ನವ-ಉದಾರವಾದಿ ನೀತಿಗಳಿಂದ ಹೆಚ್ಚುತ್ತಿರುವ ಅಸಮಾನತೆಯನ್ನು ವಿರೋಧಿಸಿ ಹತ್ತು ಲಕ್ಷಕ್ಕೂ ಹೆಚ್ಚ ಚಿಲಿಯರು ಧೀರೋಧಾತ್ತ ಹೋರಾಟ ನಡೆಸುತ್ತಿದ್ದಾರೆ. ಪ್ರತಿಭಟನೆಗಳಿಗೆ ಪ್ರಚೋದನೆಯು ಮೆಟ್ರೊ ರೈಲು ಶುಲ್ಕದಲ್ಲಿ ಹೆಚ್ಚಾಗಿದ್ದು ಎಂದು ಹೇಳಲಾಗಿದ್ದರೂ, ಬಡತನ, ಅಸಮಾನತೆ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚದ ಬಗ್ಗೆ ಜನರಲ್ಲಿ ತೀವ್ರ ಅಸಮಾಧಾನವು ಸರ್ಕಾರದ ವಿರುದ್ಧ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗಿಳಿಯಲು ಕಾರಣವಾಗಿದೆ. ಇದುವರೆಗಿನ ಹೋರಾಟದಲ್ಲಿ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಸೇರಿದಂತೆ ಪೊಲೀಸ್ ದೌರ್ಜನ್ಯದಿಂದ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ. “ಚಿಲಿಯಲ್ಲಿ ನವ ಉದಾರೀಕರಣ ಪ್ರಾರಂಭವಾಯಿತು ಮತ್ತು ಚಿಲಿಯಲ್ಲಿಯೇ ನವ ಉದಾರೀಕರಣವನ್ನು ಕೊನೆಗೊಳಿಸುತ್ತೇವೆ” ಎಂಬ ಘೋಷಣೆ ಇಲ್ಲಿ ಮುನ್ನಲೆಗೆ ಬಂದಿದೆ.

ಕೊಲಂಬಿಯಾ
ಕೊಲಂಬಿಯಾದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳಲ್ಲಿ ಉತ್ತಮ ಧನಸಹಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ಭ್ರಷ್ಟಾಚಾರದ ಆರ್ಥಿಕ ನೀತಿಗಳನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ನಡೆದ ಸರಣಿ ಪ್ರತಿಭಟನೆಗಳಿಗೆ ಕೊಲಂಬಿಯಾದ ರಾಜಧಾನಿ ಬೊಗೋಟಾ ಸಾಕ್ಷಿಯಾಗಿದೆ. ಸಂಪತ್ತು ಕೆಲವೇ ವ್ಯಕ್ತಿಗಳಲ್ಲಿ ಶೇಖರಣೆಯಾಗುತ್ತಿದ್ದು ಲಕ್ಷಾಂತರ ಕೊಲಂಬಿಯನ್ನರು ಬಡತನದಲ್ಲಿ ನರಳುತ್ತಿರುವುದರ ವಿರುದ್ಧ ದನಿ ಜೋರಾಗಿದೆ.

ಹೈಟಿ
ಇಂಧನ ಕೊರತೆ ಮತ್ತು ವ್ಯಾಪಕ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಹೈಟಿ ಅಧ್ಯಕ್ಷ ಜೊವೆನೆಲ್ ಮೊಯೆಸ್ ಅವರ ರಾಜಿನಾಮೆಗೆ ಒತ್ತಾಯಿಸಿ ಹೈಟಿಯ ಜನರು ಬೀದಿಗಿಳಿದಿದ್ದಾರೆ. ಜನರ ಜೀವನ ಮಟ್ಟವು ಕುಸಿಯುತ್ತಿದ್ದು, ಸರ್ಕಾರದ ಭ್ರಷ್ಟಾಚಾರ ಮಿತಿ ಮೀರಿದೆ. ಇದರ ವಿರುದ್ಧದ ಜನಾಕ್ರೋಶ ಹೈಟಿಯನ್ನು ಅಲುಗಾಡಿಸಿದೆ. ಇಲ್ಲಿಯವರೆಗೆ 9 ಪ್ರತಿಭಟನಾಕಾರರನ್ನು ಪೊಲೀಸರು ಕೊಂದಿದ್ದಾರೆ.  ಅಧ್ಯಕ್ಷ ಸೇರಿದಂತೆ  ಒಂದು ಡಜನ್ಗೂ ಹೆಚ್ಚು ಜನರು ಗಾಯಗೊಂಡರೂ ಸಹ ಆತ ರಾಜೀನಾಮೆ ನೀಡಲು ನಿರಾಕರಿಸಿದ್ದಾನೆ.

ಈಕ್ವೆಡಾರ್
ಐಎಂಎಫ್ ಕಠಿಣ ಕ್ರಮಗಳನ್ನು ವಿಧಿಸಿದ ನಂತರ ಇಂಧನ ಸಬ್ಸಿಡಿಗಳನ್ನು ಕಡಿತಗೊಳಿಸಿದ್ದರಿಮದ ಈಕ್ವೆಡಾರ್ ಜನರು ಅಲ್ಲಿನ ಅಧ್ಯಕ್ಷ ಲೆನಿನ್ ಮೊರೆನೊ ಅವರ ಆರ್ಥಿಕ ನೀತಿಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಅಕ್ಟೋಬರ್ 2 ರಂದು ನಡೆದ ಸಾರ್ವತ್ರಿಕ ಮುಷ್ಕರವು ಸರ್ಕಾರದ ವಿರುದ್ಧದ ಅತಿದೊಡ್ಡ ಪ್ರತಿಭಟನೆಗೆ ಕಾರಣವಾಯಿತು, ಈ ಕಾರ್ಯಕ್ರಮದಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಪ್ರತಿಭಟನಾಕಾರರು ಭಾಗವಹಿಸಿದ್ದರು. ಜನರ ಹೋರಾಟಕ್ಕೆ ಬೆದರಿದ ಸರ್ಕಾರವು ಅಂದಿನಿಂದ ಕಠಿಣ ಕ್ರಮಗಳನ್ನು ಹಿಂತೆಗೆದುಕೊಂಡಿದೆ.

ಇರಾಕ್
ಇರಾಕಿನ ಯುವಕರು ಒಂದು ತಿಂಗಳಿಗೂ ಹೆಚ್ಚು ಕಾಲ ನಿರುದ್ಯೋಗ ಮತ್ತು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಈವರೆಗೆ 250 ಕ್ಕೂ ಹೆಚ್ಚು ಪ್ರತಿಭಟನಾಕಾರರು ಸರ್ಕಾರ ವಿರೋಧಿ ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಯುದ್ಧ ಪೀಡಿತ ದೇಶದಲ್ಲಿ ಸದ್ದಾಂ ಹುಸೇನ್ ನಂತರದ ಕಾಲಘಟ್ಟದಲ್ಲಿ ಬೆಳೆದ ಯುವಕರು ಭ್ರಷ್ಟ ಧಾರ್ಮಿಕ ಜನತಂತ್ರ, ಭ್ರಷ್ಟ ಇರಾಕಿನ ಆಡಳಿತ ಮತ್ತು ಅಧ್ಯಕ್ಷ ಆದಿಲ್-ಅಬ್ದುಲ್ ಮಹ್ದಿ ಅವರ ಸುಳ್ಳು ಭರವಸೆಗಳ ವಿರುದ್ಧ ಬೀದಿಗಿಳಿದಿದ್ದಾರೆ.

ಅಲ್ಜೀರಿಯಾ
ನಾಗರಿಕ ಪ್ರಜಾಪ್ರಭುತ್ವಕ್ಕಾಗಿ ಮಿಲಿಟರಿ ಬೆಂಬಲಿತ ಸರ್ಕಾರದ ವಿರುದ್ಧ ಅಲ್ಜೀರಿಯಾ ಪ್ರತಿಭಟನೆ ನಡೆಸುತ್ತಿದೆ. ಅಧ್ಯಕ್ಷ ಅಬ್ದುಲಾ ಅಜೀಜ್ ಬೌಟೆಫ್ಲಿಕಾ ಅವರು 5 ನೇ ಅವಧಿಯ ನಾಮನಿರ್ದೇಶನದ ವಿರುದ್ಧ 2019 ರ ಫೆಬ್ರವರಿಯಿಂದ ಸ್ಮೈಲ್ಸ್ ಕ್ರಾಂತಿಯ ಹಿರಾಕ್ ಚಳುವಳಿ ಅಲ್ಜೀರಿಯಾವನ್ನು ಮುನ್ನಡೆಸಿದೆ. ತರುವಾಯ ಅಧ್ಯಕ್ಷ ನಾಮಪತ್ರವನ್ನು ಹಿಂತೆಗೆದುಕೊಳ್ಳಲಾಗಿದ್ದರೂ ಪ್ರತಿಭಟನಾಕಾರರು ಇನ್ನೂ ಹೆಚ್ಚಿನ ಪ್ರಜಾಪ್ರಭುತ್ವ, ನಾಗರಿಕ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸುತ್ತಿದ್ದಾರೆ.

ಇಂಡೋನೇಷ್ಯಾ
23 ಸೆಪ್ಟೆಂಬರ್ 2019 ರಂದು ಇಂಡೋನೇಷ್ಯಾದಲ್ಲಿ ನಿರುದ್ಯೋಗ ಮತ್ತು ಭ್ರಷ್ಟಾಚಾರ-ವಿರೋಧಿ ಕಾನೂನುಗಳನ್ನು ದುರ್ಬಲಗೊಳಿಸುವುದರ ವಿರುದ್ಧ ವಿದ್ಯಾರ್ಥಿಗಳು ಸಾಮೂಹಿಕ ಪ್ರತಿಭಟನೆ ನಡೆಸಿದರು. 300 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸರ್ಕಾರದಿಂದ ಹೆಚ್ಚು ಪಾರದರ್ಶಕತೆ ‌ಆಡಳಿತಕ್ಕಾಗಿ ಒತ್ತಾಯಿಸಿದರು. ಸುಹಾರ್ಟೊ ಆಡಳಿತದ ವಿರುದ್ಧ 1998 ರ ವಿದ್ಯಾರ್ಥಿಗಳ ಚಳವಳಿಯ ನಂತರದ ಅತಿದೊಡ್ಡ ಪ್ರತಿಭಟನೆ ಇದಾಗಿದೆ.

ಹಾಂಗ್ ಕಾಂಗ್
ಮೈನ್ಲ್ಯಾಂಡ್ ಚೀನಾದ ಹಸ್ತಾಂತರ ಕಾನೂನಿನಿಂದ ಪ್ರಾರಂಭವಾದ ಹಾಂಗ್ ಕಾಂಗ್ ಪ್ರತಿಭಟನೆಗಳು ಸಂಕೀರ್ಣ ಹೈಬ್ರಿಡ್ ಯುದ್ಧವಾಗಿ ಮಾರ್ಪಟ್ಟಿವೆ. ವಿಶ್ವ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಹಾಂಗ್ ಕಾಂಗ್ ಮೂರನೇ ಸ್ಥಾನದಲ್ಲಿದ್ದರೂ, ಅದರ ಸಂಘಟಕರು “ಟ್ರಂಪ್ ನಮ್ಮನ್ನು ಉಳಿಸಿ” ಎಂದು ಮತ್ತು ಬ್ರಿಟಿಷ್ ಧ್ವಜಗಳು  ಹಾರಿಸುವ ಮೂಲಕ ಚೀನಾ ಸರ್ಕಾರದ ವಿರುದ್ಧ ಹೋರಾಡುತ್ತಿದ್ದಾರೆ. ಕುತೂಹಲಕಾರಿಯಾಗಿ, ವಿಶ್ವ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 17 ನೇ ಸ್ಥಾನದಲ್ಲಿರುವ ಯುನೈಟೆಡ್ ಸ್ಟೇಟ್ಸ್‌ನಿಂದ ಹೆಚ್ಚಿನ ಸ್ವಾತಂತ್ರ್ಯ ಕಾನೂನುಗಳನ್ನು ಪರಿಚಯಿಸಲು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ. ಈಗ ಕಪ್ಪು ಬ್ಲಾಕ್ ಎಂದು ಕರೆಯಲ್ಪಡುವ ಹಾಂಗ್ ಕಾಂಗ್ ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿಯನ್ನು ನಾಶಮಾಡುವಂತಹ ಹಾಂಗ್ ಕಾಂಗ್ ಸರ್ಕಾರ ಜಾರಿಗೆ ತಂದಿರುವ ಹಸ್ತಾಂತರ ಕಾನೂನಿನ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸುತ್ತಿದ್ದಾರೆ. ಹಸ್ತಾಂತರ ಕಾನೂನನ್ನು ಸರ್ಕಾರ ಹಿಂತೆಗೆದುಕೊಂಡಿದೆ ಆದರೆ ಪ್ರತಿಭಟನೆ ಮುಂದುವರೆದಿದೆ.

ಇವಿಷ್ಟು ಚಳವಳಿಗಳ ಬಗ್ಗೆ ಓದಿದ ನಂತರ ಭಾರತದಲ್ಲೇನಾಗುತ್ತಿದೆ? ಯಾಕಿಲ್ಲ ಗಟ್ಟಿ ಚಳವಳಿಗಳು ರೂಪುಗೊಳ್ಳುತ್ತಿಲ್ಲ ಎಂದು ಯೋಚಿಸುವ, ಈ ಚಳವಳಿಗಳಿಂದ ಪಾಠ ಕಲಿಯುವ ಕೆಲಸ ನಮ್ಮದಾಗಲಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಜಗತ್ತಿನ ಹೋರಾಟಗಳ ಬಗ್ಗೆ ಕನ್ನಡದ ಓದುಗರಿಗೆ ಮಾಹಿತಿ ನೀಡುತ್ತಿರುವ ಭರತ್ ಹೆಬ್ಬಾಳ್ ರವರಿಗೆ ಧನ್ಯವಾದಗಳು.

  2. ಪ್ರಪಂಚದ ಅತಿ ದೊಡ್ಡ ಚಳುವಳಿಗಳ ಬಗ್ಗೆ ಓದುತ್ತಿದ್ದಾಗ, ಭಾರತದಲ್ಲಿ ಇಷ್ಟೆಲ್ಲಾ ಅಸಮಾನತೆ, ಹೀನ ರಾಜಕಾರಣ, ವ್ಯಕ್ತಿ ಸ್ವಾತಂತ್ರ್ಯದ ಹಾಗೂ ಪ್ರಜಾಪ್ರಭುತ್ವದ ವ್ಯವಸ್ಥಿತ ಹರಣ ನಡೆಯುತ್ತಿದ್ದರೂ ನಾವ್ಯಾಕೆ ಇನ್ನೂ ಬೀದಿಗಿಳಿದಿಲ್ಲ ಎಂಬ ಯೋಚನೆ ಎದುರಾಯಿತು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...