Homeಅಂತರಾಷ್ಟ್ರೀಯಈ ವರ್ಷ ದಿಟ್ಟ ಗೆಲುವು ಸಾಧಿಸಿದ ಪ್ರಪಂಚದ ಈ ಹತ್ತು ಅತಿದೊಡ್ಡ ಚಳವಳಿಗಳ ಬಗ್ಗೆ ನಿಮಗೆ...

ಈ ವರ್ಷ ದಿಟ್ಟ ಗೆಲುವು ಸಾಧಿಸಿದ ಪ್ರಪಂಚದ ಈ ಹತ್ತು ಅತಿದೊಡ್ಡ ಚಳವಳಿಗಳ ಬಗ್ಗೆ ನಿಮಗೆ ಗೊತ್ತೆ?

"ಚಿಲಿಯಲ್ಲಿ ನವ ಉದಾರೀಕರಣ ಪ್ರಾರಂಭವಾಯಿತು ಮತ್ತು ಚಿಲಿಯಲ್ಲಿಯೇ ನವ ಉದಾರೀಕರಣವನ್ನು ಕೊನೆಗೊಳಿಸುತ್ತೇವೆ" ಎಂಬ ಘೋಷಣೆ ಇಲ್ಲಿ ಮುನ್ನಲೆಗೆ ಬಂದಿದೆ

- Advertisement -
- Advertisement -

2019 ರ ಆರಂಭದಿಂದಲೂ ಜಾಗತೀಕರಣ ಮತ್ತು ನವ-ಉದಾರವಾದಿ ಆರ್ಥಿಕ ನೀತಿಗಳ ವಿರುದ್ಧ ಜಗತ್ತಿನಾದ್ಯಂತ ಪ್ರತಿಭಟನೆಗಳ ಸರಣಿಗಳು ನಡೆಯುತ್ತಿವೆ. ಈ ಪ್ರತಿಭಟನೆಗಳು ಆರ್ಥಿಕ ನೀತಿಗಳ ನೇರ ಪರಿಣಾಮದಿಂದಾಗಿ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುವ ಮತ್ತು ಬಡವರನ್ನು ಬಡವರನ್ನಾಗಿ ಮಾಡುವ ಅಸಮಾನತೆ ಮತ್ತು ಅನ್ಯಾಯವನ್ನು ಪ್ರಶ್ನಿಸುತ್ತಿವೆ. ಅವುಗಳ ಕುರಿತು ನಾವು ತಿಳಿದುಕೊಳ್ಳಬೇಕಿರುವುದು ಅಗತ್ಯ.

To Read in English click here

ಫ್ರಾನ್ಸ್
ಕಳೆದ ನವೆಂಬರ್ 2018 ರಿಂದ ಫ್ರಾನ್ಸ್‌ನ ಅತಿದೊಡ್ಡ ದಂಗೆಯೊಂದು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ರ ಆರ್ಥಿಕ ನೀತಿಗಳ ವಿರುದ್ಧ ಪ್ರತಿಭಟಿಸಲು ಪ್ರಾರಂಭಿಸಿತು. ಪ್ರತಿಭಟನೆಯನ್ನು “ಹಳದಿ ಅಂಗಿಗಳು” ಎಂದು ಕರೆಯಲಾಗುತ್ತಿತ್ತು. ಇದು ಟ್ರಕ್ ಚಾಲಕರ ಸುರಕ್ಷತಾ ಜಾಕೆಟ್‌ಗಳನ್ನು ಸಂಕೇತಿಸುತ್ತದೆ (ಸಾಮಾನ್ಯ ಜನರ ಕಲ್ಯಾಣ ರಾಜ್ಯ ನೀತಿಗಳನ್ನು) ಫ್ರೆಂಚ್ ಸರ್ಕಾರವು ಅದನ್ನು ಬಲವಂತವಾಗಿ ಹತ್ತಿಕ್ಕುವ ಮೊದಲು ದೇಶಾದ್ಯಂತ ಹರಡಿತು.

ಸ್ಪೇನ್
ಕ್ಯಾಟಲಾನ್ ಸ್ವಾತಂತ್ರ್ಯ ಚಳವಳಿಯ ಪ್ರತಿಭಟನಾಕಾರರು ಸ್ಪ್ಯಾನಿಷ್ ರಾಜ್ಯ ದಬ್ಬಾಳಿಕೆಯನ್ನು ವಿರೋಧಿಸಿ 2019 ರ ಅಕ್ಟೋಬರ್‌ನಲ್ಲಿ ಸ್ಪೇನ್‌ನಲ್ಲಿ ಮ್ಯಾಡ್ರಿಡ್‌ನಲ್ಲಿ ಬೀದಿಗಿಳಿದಿದ್ದಾರೆ. ಕ್ಯಾಟಲಾನ್‌ಗೆ ಸ್ಪೇನ್‌ನಿಂದ ಸ್ವಾತಂತ್ಯ ದೊರೆಯಬೇಕೆಂಬುದು ಅವರ ಹಕ್ಕೊತ್ತಾಯ. ಕ್ಯಾಟಲಾನ್ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿದ್ದ 9 ರಾಜಕಾರಣಿಗಳು ಮತ್ತು ಕಾರ್ಯಕರ್ತರಿಗೆ 13 ವರ್ಷ ಜೈಲು ಶಿಕ್ಷೆ ವಿಧಿಸಿರುವುದನ್ನು ವಿರೋಧಿಸಿ ಒಂದು ಲಕ್ಷಕ್ಕೂ ಹೆಚ್ಚು ಪ್ರತಿಭಟನಾಕಾರರು ನಿಯಮಿತವಾಗಿ ಪ್ರತಿಭಟಿಸುತ್ತಿದ್ದಾರೆ. ಆದರೂ ಸ್ಪೇನ್‌ ಪ್ರಭುತ್ವ ಅಮಾನವೀಯವಾಗಿ ಹೋರಾಟವನ್ನು ಹತ್ತಿಕ್ಕುತ್ತಿದೆ.

ಪ್ಯಾಲೆಸ್ಟೈನ್
ಇಸ್ರೇಲ್‌ ಗಾಜಾ ಪಟ್ಟಿ ಮೇಲೆ ದಿಗ್ಬಂಧನ ವಿಧಿಸಿರುವುದನ್ನು ವಿರೋಧಿಸಿ ಪ್ಯಾಲೆಸ್ಟೀನಿಯರು 12 ವರ್ಷಗಳಿಂದ ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನಾಕಾರರು ಗಾಜಾದ ತಮ್ಮ ಭೂಮಿಗೆ ಮರಳುವ ಹಕ್ಕನ್ನು ಕೋರಿದ್ದಾರೆ. ಗಾಜಾ ಪಟ್ಟಿಯು ಕಳೆದ 10 ವರ್ಷಗಳಿಂದ ತೀವ್ರ ಬಾಂಬ್ ಸ್ಫೋಟವನ್ನು ಕಂಡಿದೆ ಮತ್ತು ಅತಿದೊಡ್ಡ ಮಾನವೀಯ ಬಿಕ್ಕಟ್ಟಿನ ಅಂಚಿನಲ್ಲಿದೆ..

ಲೆಬನಾನ್
ಹೆಚ್ಚುತ್ತಿರುವ ತೆರಿಗೆ ಮತ್ತು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಲೆಬನಾನ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ವಾಟ್ಸಾಪ್, ಸ್ಕೈಪ್ ಮತ್ತು ಇತರ ಸಾಮಾಜಿಕ ಜಾಲತಾಣ ಸೇವೆಗಳ ಬಳಕೆಯ ಮೇಲೆ ಯೋಜಿತ ದೈನಂದಿನ ತೆರಿಗೆಯನ್ನು ಸರ್ಕಾರ ಘೋಷಿಸಿದ ನಂತರ ಪ್ರತಿಭಟನೆಗಳು ತೀವ್ರಗೊಂಡಿವೆ ಎಂದು ಹೇಳಲಾಗುತ್ತದೆ. ಆದರೆ ಆಳವಾದ ಆರ್ಥಿಕ ಬಿಕ್ಕಟ್ಟು ಬೆಲೆಏರಿಕೆ, ನಿರುದ್ಯೋಗ ಮತ್ತು ಕಳಪೆ ಸೇವೆಗಳಿಗೆ ಕಾರಣವಾಗಿದೆ. ಇದು ದೀರ್ಘಕಾಲದಿಂದ ಪ್ರಾಬಲ್ಯವಿರುವ ಸ್ಥಾಪಿತ ರಾಜವಂಶಗಳ ವ್ಯವಸ್ಥೆಗಳಿಗೆ ರಾಜಕೀಯ ಸವಾಲು ಹಾಕುತ್ತಿದೆ. ಪ್ರತಿಭಟನಾಕಾರರು ಕ್ಯಾಪಿಟಲ್ ಬೈರುತ್ ಮೂಲಕ ಉತ್ತರದಿಂದ ದಕ್ಷಿಣಕ್ಕೆ 105 ಕಿಲೋಮೀಟರ್ ಮಾನವ ಸರಪಳಿಯನ್ನು ರಚಿಸಿದ್ದಾರೆ.

ಚಿಲಿ

ಈ ದಶಕದಲ್ಲಿಯೇ ಅತಿ ಹೆಚ್ಚು ಜನರು ಬೀದಿಗಿಳಿದು ಹೋರಾಡಿದ ಚಳವಳಿಗೆ ಚಿಲಿ ಸಾಕ್ಷಿಯಾಗಿದೆ. ಸರ್ಕಾರದ ನವ-ಉದಾರವಾದಿ ನೀತಿಗಳಿಂದ ಹೆಚ್ಚುತ್ತಿರುವ ಅಸಮಾನತೆಯನ್ನು ವಿರೋಧಿಸಿ ಹತ್ತು ಲಕ್ಷಕ್ಕೂ ಹೆಚ್ಚ ಚಿಲಿಯರು ಧೀರೋಧಾತ್ತ ಹೋರಾಟ ನಡೆಸುತ್ತಿದ್ದಾರೆ. ಪ್ರತಿಭಟನೆಗಳಿಗೆ ಪ್ರಚೋದನೆಯು ಮೆಟ್ರೊ ರೈಲು ಶುಲ್ಕದಲ್ಲಿ ಹೆಚ್ಚಾಗಿದ್ದು ಎಂದು ಹೇಳಲಾಗಿದ್ದರೂ, ಬಡತನ, ಅಸಮಾನತೆ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚದ ಬಗ್ಗೆ ಜನರಲ್ಲಿ ತೀವ್ರ ಅಸಮಾಧಾನವು ಸರ್ಕಾರದ ವಿರುದ್ಧ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗಿಳಿಯಲು ಕಾರಣವಾಗಿದೆ. ಇದುವರೆಗಿನ ಹೋರಾಟದಲ್ಲಿ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಸೇರಿದಂತೆ ಪೊಲೀಸ್ ದೌರ್ಜನ್ಯದಿಂದ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ. “ಚಿಲಿಯಲ್ಲಿ ನವ ಉದಾರೀಕರಣ ಪ್ರಾರಂಭವಾಯಿತು ಮತ್ತು ಚಿಲಿಯಲ್ಲಿಯೇ ನವ ಉದಾರೀಕರಣವನ್ನು ಕೊನೆಗೊಳಿಸುತ್ತೇವೆ” ಎಂಬ ಘೋಷಣೆ ಇಲ್ಲಿ ಮುನ್ನಲೆಗೆ ಬಂದಿದೆ.

ಕೊಲಂಬಿಯಾ
ಕೊಲಂಬಿಯಾದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳಲ್ಲಿ ಉತ್ತಮ ಧನಸಹಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ಭ್ರಷ್ಟಾಚಾರದ ಆರ್ಥಿಕ ನೀತಿಗಳನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ನಡೆದ ಸರಣಿ ಪ್ರತಿಭಟನೆಗಳಿಗೆ ಕೊಲಂಬಿಯಾದ ರಾಜಧಾನಿ ಬೊಗೋಟಾ ಸಾಕ್ಷಿಯಾಗಿದೆ. ಸಂಪತ್ತು ಕೆಲವೇ ವ್ಯಕ್ತಿಗಳಲ್ಲಿ ಶೇಖರಣೆಯಾಗುತ್ತಿದ್ದು ಲಕ್ಷಾಂತರ ಕೊಲಂಬಿಯನ್ನರು ಬಡತನದಲ್ಲಿ ನರಳುತ್ತಿರುವುದರ ವಿರುದ್ಧ ದನಿ ಜೋರಾಗಿದೆ.

ಹೈಟಿ
ಇಂಧನ ಕೊರತೆ ಮತ್ತು ವ್ಯಾಪಕ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಹೈಟಿ ಅಧ್ಯಕ್ಷ ಜೊವೆನೆಲ್ ಮೊಯೆಸ್ ಅವರ ರಾಜಿನಾಮೆಗೆ ಒತ್ತಾಯಿಸಿ ಹೈಟಿಯ ಜನರು ಬೀದಿಗಿಳಿದಿದ್ದಾರೆ. ಜನರ ಜೀವನ ಮಟ್ಟವು ಕುಸಿಯುತ್ತಿದ್ದು, ಸರ್ಕಾರದ ಭ್ರಷ್ಟಾಚಾರ ಮಿತಿ ಮೀರಿದೆ. ಇದರ ವಿರುದ್ಧದ ಜನಾಕ್ರೋಶ ಹೈಟಿಯನ್ನು ಅಲುಗಾಡಿಸಿದೆ. ಇಲ್ಲಿಯವರೆಗೆ 9 ಪ್ರತಿಭಟನಾಕಾರರನ್ನು ಪೊಲೀಸರು ಕೊಂದಿದ್ದಾರೆ.  ಅಧ್ಯಕ್ಷ ಸೇರಿದಂತೆ  ಒಂದು ಡಜನ್ಗೂ ಹೆಚ್ಚು ಜನರು ಗಾಯಗೊಂಡರೂ ಸಹ ಆತ ರಾಜೀನಾಮೆ ನೀಡಲು ನಿರಾಕರಿಸಿದ್ದಾನೆ.

ಈಕ್ವೆಡಾರ್
ಐಎಂಎಫ್ ಕಠಿಣ ಕ್ರಮಗಳನ್ನು ವಿಧಿಸಿದ ನಂತರ ಇಂಧನ ಸಬ್ಸಿಡಿಗಳನ್ನು ಕಡಿತಗೊಳಿಸಿದ್ದರಿಮದ ಈಕ್ವೆಡಾರ್ ಜನರು ಅಲ್ಲಿನ ಅಧ್ಯಕ್ಷ ಲೆನಿನ್ ಮೊರೆನೊ ಅವರ ಆರ್ಥಿಕ ನೀತಿಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಅಕ್ಟೋಬರ್ 2 ರಂದು ನಡೆದ ಸಾರ್ವತ್ರಿಕ ಮುಷ್ಕರವು ಸರ್ಕಾರದ ವಿರುದ್ಧದ ಅತಿದೊಡ್ಡ ಪ್ರತಿಭಟನೆಗೆ ಕಾರಣವಾಯಿತು, ಈ ಕಾರ್ಯಕ್ರಮದಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಪ್ರತಿಭಟನಾಕಾರರು ಭಾಗವಹಿಸಿದ್ದರು. ಜನರ ಹೋರಾಟಕ್ಕೆ ಬೆದರಿದ ಸರ್ಕಾರವು ಅಂದಿನಿಂದ ಕಠಿಣ ಕ್ರಮಗಳನ್ನು ಹಿಂತೆಗೆದುಕೊಂಡಿದೆ.

ಇರಾಕ್
ಇರಾಕಿನ ಯುವಕರು ಒಂದು ತಿಂಗಳಿಗೂ ಹೆಚ್ಚು ಕಾಲ ನಿರುದ್ಯೋಗ ಮತ್ತು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಈವರೆಗೆ 250 ಕ್ಕೂ ಹೆಚ್ಚು ಪ್ರತಿಭಟನಾಕಾರರು ಸರ್ಕಾರ ವಿರೋಧಿ ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಯುದ್ಧ ಪೀಡಿತ ದೇಶದಲ್ಲಿ ಸದ್ದಾಂ ಹುಸೇನ್ ನಂತರದ ಕಾಲಘಟ್ಟದಲ್ಲಿ ಬೆಳೆದ ಯುವಕರು ಭ್ರಷ್ಟ ಧಾರ್ಮಿಕ ಜನತಂತ್ರ, ಭ್ರಷ್ಟ ಇರಾಕಿನ ಆಡಳಿತ ಮತ್ತು ಅಧ್ಯಕ್ಷ ಆದಿಲ್-ಅಬ್ದುಲ್ ಮಹ್ದಿ ಅವರ ಸುಳ್ಳು ಭರವಸೆಗಳ ವಿರುದ್ಧ ಬೀದಿಗಿಳಿದಿದ್ದಾರೆ.

ಅಲ್ಜೀರಿಯಾ
ನಾಗರಿಕ ಪ್ರಜಾಪ್ರಭುತ್ವಕ್ಕಾಗಿ ಮಿಲಿಟರಿ ಬೆಂಬಲಿತ ಸರ್ಕಾರದ ವಿರುದ್ಧ ಅಲ್ಜೀರಿಯಾ ಪ್ರತಿಭಟನೆ ನಡೆಸುತ್ತಿದೆ. ಅಧ್ಯಕ್ಷ ಅಬ್ದುಲಾ ಅಜೀಜ್ ಬೌಟೆಫ್ಲಿಕಾ ಅವರು 5 ನೇ ಅವಧಿಯ ನಾಮನಿರ್ದೇಶನದ ವಿರುದ್ಧ 2019 ರ ಫೆಬ್ರವರಿಯಿಂದ ಸ್ಮೈಲ್ಸ್ ಕ್ರಾಂತಿಯ ಹಿರಾಕ್ ಚಳುವಳಿ ಅಲ್ಜೀರಿಯಾವನ್ನು ಮುನ್ನಡೆಸಿದೆ. ತರುವಾಯ ಅಧ್ಯಕ್ಷ ನಾಮಪತ್ರವನ್ನು ಹಿಂತೆಗೆದುಕೊಳ್ಳಲಾಗಿದ್ದರೂ ಪ್ರತಿಭಟನಾಕಾರರು ಇನ್ನೂ ಹೆಚ್ಚಿನ ಪ್ರಜಾಪ್ರಭುತ್ವ, ನಾಗರಿಕ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸುತ್ತಿದ್ದಾರೆ.

ಇಂಡೋನೇಷ್ಯಾ
23 ಸೆಪ್ಟೆಂಬರ್ 2019 ರಂದು ಇಂಡೋನೇಷ್ಯಾದಲ್ಲಿ ನಿರುದ್ಯೋಗ ಮತ್ತು ಭ್ರಷ್ಟಾಚಾರ-ವಿರೋಧಿ ಕಾನೂನುಗಳನ್ನು ದುರ್ಬಲಗೊಳಿಸುವುದರ ವಿರುದ್ಧ ವಿದ್ಯಾರ್ಥಿಗಳು ಸಾಮೂಹಿಕ ಪ್ರತಿಭಟನೆ ನಡೆಸಿದರು. 300 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸರ್ಕಾರದಿಂದ ಹೆಚ್ಚು ಪಾರದರ್ಶಕತೆ ‌ಆಡಳಿತಕ್ಕಾಗಿ ಒತ್ತಾಯಿಸಿದರು. ಸುಹಾರ್ಟೊ ಆಡಳಿತದ ವಿರುದ್ಧ 1998 ರ ವಿದ್ಯಾರ್ಥಿಗಳ ಚಳವಳಿಯ ನಂತರದ ಅತಿದೊಡ್ಡ ಪ್ರತಿಭಟನೆ ಇದಾಗಿದೆ.

ಹಾಂಗ್ ಕಾಂಗ್
ಮೈನ್ಲ್ಯಾಂಡ್ ಚೀನಾದ ಹಸ್ತಾಂತರ ಕಾನೂನಿನಿಂದ ಪ್ರಾರಂಭವಾದ ಹಾಂಗ್ ಕಾಂಗ್ ಪ್ರತಿಭಟನೆಗಳು ಸಂಕೀರ್ಣ ಹೈಬ್ರಿಡ್ ಯುದ್ಧವಾಗಿ ಮಾರ್ಪಟ್ಟಿವೆ. ವಿಶ್ವ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಹಾಂಗ್ ಕಾಂಗ್ ಮೂರನೇ ಸ್ಥಾನದಲ್ಲಿದ್ದರೂ, ಅದರ ಸಂಘಟಕರು “ಟ್ರಂಪ್ ನಮ್ಮನ್ನು ಉಳಿಸಿ” ಎಂದು ಮತ್ತು ಬ್ರಿಟಿಷ್ ಧ್ವಜಗಳು  ಹಾರಿಸುವ ಮೂಲಕ ಚೀನಾ ಸರ್ಕಾರದ ವಿರುದ್ಧ ಹೋರಾಡುತ್ತಿದ್ದಾರೆ. ಕುತೂಹಲಕಾರಿಯಾಗಿ, ವಿಶ್ವ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 17 ನೇ ಸ್ಥಾನದಲ್ಲಿರುವ ಯುನೈಟೆಡ್ ಸ್ಟೇಟ್ಸ್‌ನಿಂದ ಹೆಚ್ಚಿನ ಸ್ವಾತಂತ್ರ್ಯ ಕಾನೂನುಗಳನ್ನು ಪರಿಚಯಿಸಲು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ. ಈಗ ಕಪ್ಪು ಬ್ಲಾಕ್ ಎಂದು ಕರೆಯಲ್ಪಡುವ ಹಾಂಗ್ ಕಾಂಗ್ ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿಯನ್ನು ನಾಶಮಾಡುವಂತಹ ಹಾಂಗ್ ಕಾಂಗ್ ಸರ್ಕಾರ ಜಾರಿಗೆ ತಂದಿರುವ ಹಸ್ತಾಂತರ ಕಾನೂನಿನ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸುತ್ತಿದ್ದಾರೆ. ಹಸ್ತಾಂತರ ಕಾನೂನನ್ನು ಸರ್ಕಾರ ಹಿಂತೆಗೆದುಕೊಂಡಿದೆ ಆದರೆ ಪ್ರತಿಭಟನೆ ಮುಂದುವರೆದಿದೆ.

ಇವಿಷ್ಟು ಚಳವಳಿಗಳ ಬಗ್ಗೆ ಓದಿದ ನಂತರ ಭಾರತದಲ್ಲೇನಾಗುತ್ತಿದೆ? ಯಾಕಿಲ್ಲ ಗಟ್ಟಿ ಚಳವಳಿಗಳು ರೂಪುಗೊಳ್ಳುತ್ತಿಲ್ಲ ಎಂದು ಯೋಚಿಸುವ, ಈ ಚಳವಳಿಗಳಿಂದ ಪಾಠ ಕಲಿಯುವ ಕೆಲಸ ನಮ್ಮದಾಗಲಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಜಗತ್ತಿನ ಹೋರಾಟಗಳ ಬಗ್ಗೆ ಕನ್ನಡದ ಓದುಗರಿಗೆ ಮಾಹಿತಿ ನೀಡುತ್ತಿರುವ ಭರತ್ ಹೆಬ್ಬಾಳ್ ರವರಿಗೆ ಧನ್ಯವಾದಗಳು.

  2. ಪ್ರಪಂಚದ ಅತಿ ದೊಡ್ಡ ಚಳುವಳಿಗಳ ಬಗ್ಗೆ ಓದುತ್ತಿದ್ದಾಗ, ಭಾರತದಲ್ಲಿ ಇಷ್ಟೆಲ್ಲಾ ಅಸಮಾನತೆ, ಹೀನ ರಾಜಕಾರಣ, ವ್ಯಕ್ತಿ ಸ್ವಾತಂತ್ರ್ಯದ ಹಾಗೂ ಪ್ರಜಾಪ್ರಭುತ್ವದ ವ್ಯವಸ್ಥಿತ ಹರಣ ನಡೆಯುತ್ತಿದ್ದರೂ ನಾವ್ಯಾಕೆ ಇನ್ನೂ ಬೀದಿಗಿಳಿದಿಲ್ಲ ಎಂಬ ಯೋಚನೆ ಎದುರಾಯಿತು.

LEAVE A REPLY

Please enter your comment!
Please enter your name here

- Advertisment -

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...