Homeಅಂಕಣಗಳುಆಪರೇಷನ್ ಕಮಲಕ್ಕೆ ಬಲಿಯಾಗಲಿದೆಯೇ ಮಹಾ ವಿಕಾಸ್ ಅಘಾಡಿ ಸರ್ಕಾರ?

ಆಪರೇಷನ್ ಕಮಲಕ್ಕೆ ಬಲಿಯಾಗಲಿದೆಯೇ ಮಹಾ ವಿಕಾಸ್ ಅಘಾಡಿ ಸರ್ಕಾರ?

- Advertisement -
- Advertisement -

ದೇಶದಾದ್ಯಂತ ವಿರೋಧ ಪಕ್ಷಗಳನ್ನು ಕಳ್ಳ ದಾರಿಯ ಮೂಲಕ ನಿರ್ನಾಮ ಮಾಡುವ ತನ್ನ ಕೆಲಸದಿಂದ ಎಂತಹ ಗಂಭೀರ ಪರಿಣಾಮಗಳು ಉಂಟಾದರೂ ಬಿಜೆಪಿ ಪಕ್ಷ ಅದರಿಂದ ಸಣ್ಣ ಪಾಠವನ್ನೂ ಕಲಿತಂತಿಲ್ಲ. ಕೆಲವು ದಿನಗಳ ಹಿಂದೆ ತನ್ನ ವಕ್ತಾರೆ ಟಿವಿ ಶೋವೊಂದರಲ್ಲಿ ಮಾಡಿದ ಒಂದು ದ್ವೇಷಪೂರಿತ ಕಾಮೆಂಟ್‌ಗೆ ಹಲವು ರಾಷ್ಟ್ರಗಳು ಭಾರತಕ್ಕೆ ’ವಾರ್ನಿಂಗ್’ ಕೊಡುವ ರೀತಿಯಲ್ಲಿ ಮಾತನಾಡಿದಾಗ, ’ಇದು ದೇಶದ ಆಂತರಿಕ ವಿಚಾರ, ಸಾರ್ವಭೌಮ ರಾಷ್ಟ್ರವೊಂದರ ಸಮಸ್ಯೆಗಳಲ್ಲಿ ಮೂಗು ತೂರಿಸುವ ಅವಶ್ಯಕತೆ ಇಲ್ಲ’ ಎಂದು ಕೇಂದ್ರ ಬಿಜೆಪಿ ಸರ್ಕಾರದ ಜೊತೆಗೆ ನಿಲ್ಲಲು ಯಾವುದೇ ಅನ್ಯ ಪಕ್ಷ ಮುಂದೆ ಬರಲಿಲ್ಲ. ಅದರ ಮಿತ್ರ ಪಕ್ಷಗಳೂ ಕೂಡ ಉಸಿರೆತ್ತಲಿಲ್ಲ. ಸದಾ ದ್ವೇಷದ, ಪ್ರತೀಕಾರದ ಭಾಷೆಯನ್ನಾಡುತ್ತಾ ತನ್ನ ವಿರೋಧಿ ಪಕ್ಷಗಳೇಕೆ ತನ್ನ ಮಿತ್ರ ಪಕ್ಷಗಳನ್ನೂ ಜೊತೆಗೆ ಕೊಂಡೊಯ್ಯುವ ಪ್ರಾಮಾಣಿಕತೆಯನ್ನು ತೋರದ ಪಕ್ಷ ಬಿಜೆಪಿ. ಇದೇ ಕಾರಣಕ್ಕೆ ದೀರ್ಘ ಕಾಲದ ಸಂಗಾತಿಯಾಗಿದ್ದ ಶಿವಸೇನೆ 2019ರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವಾಗಿ ಬಿಜೆಪಿ ಜೊತೆಗೆ ಸೆಣೆಸಿದ್ದರೂ, ಚುನಾವಣೆಯ ನಂತರ ಎನ್‌ಡಿಎಯಿಂದ ದೂರವಾಗಿ ಕಾಂಗ್ರೆಸ್ ಹಾಗೂ ಶರದ್ ಪವಾರ್ ಅವರ ಎನ್‌ಸಿಪಿಯೊಂದಿಗೆ ಎಂವಿಎ (ಮಹಾ ವಿಕಾಸ್ ಅಘಾಡಿ) ಮೈತ್ರಿಕೂಟ ರಚಿಸಿಕೊಂಡು, ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಯಾಗಿದ್ದರು.

ಅಂದಿನಿಂದಲೂ ಎಂವಿಎ ಸರ್ಕಾರವನ್ನು ಒಂದಲ್ಲ ಒಂದು ರೀತಿಯಲ್ಲಿ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದರೂ ಸಫಲವಾಗಿರಲಿಲ್ಲ. ಸೈದ್ಧಾಂತಿಕವಾಗಿ ಒಂದೇ ಗರಡಿಯಲ್ಲಿ ಬಿಜೆಪಿ ಮತ್ತು ಶಿವಸೇನೆ ಎರಡೂ ಪಕ್ಷಗಳು ಪಳಗಿದ್ದರೂ, ಪ್ರಾದೇಶಿಕ ಅಸ್ಮಿತೆ ಮತ್ತು ಮರಾಠಿ ಗರ್ವ ಶಿವಸೇನೆಗೆ ವಿಶಿಷ್ಟವಾದದ್ದು. ಆ ನಿಟ್ಟಿನಲ್ಲಿ ತೀವ್ರ ಕೇಂದ್ರೀಕರಣದ ಮತ್ತು ರಾಜ್ಯಗಳ ಅಧಿಕಾರವನ್ನು ಕಸಿಯುವ ಬಿಜೆಪಿ ಸಿದ್ಧಾಂತದ ಜೊತೆಗೆ ಸಣ್ಣ ಮಟ್ಟದ ಭಿನ್ನಮತವನ್ನು ಉಳಿಸಿಕೊಂಡ ಪಕ್ಷ ಅದು. ಆದರೆ ಎರಡೂ ಪಕ್ಷಗಳು ಸಾಮಾನ್ಯ ತಳಹದಿಯಲ್ಲಿ ಹಂಚಿಕೊಂಡಿದ್ದ ಹಿಂದುತ್ವ ಸಿದ್ಧಾಂತದ ಕಾರಣಕ್ಕೆ, ಶಿವಸೇನೆಯ ಹಲವು ಶಾಸಕರಿಗೆ ’ಅಕ್ಕಿ ಮೇಲೆ ಆಸೆ, ನಂಟನ ಮೇಲೆ ಪ್ರೀತಿ’ ಎಂಬಂತಾಗಿತ್ತು. ಈ ಸಂಗತಿಯನ್ನು ಬಳಸಿಕೊಂಡು ಯಾವ ದಾರಿ ಹಿಡಿದರೂ ಸರಿ ಅಧಿಕಾರ ಹಿಡಿಯದೆ ಬಿಡುವುದಿಲ್ಲ ಎಂದು ಕಾದಿದ್ದ ಬಿಜೆಪಿಗೆ, ಜೂನ್ ನಾಲ್ಕನೇ ವಾರದ ಮಂಗಳವಾರ ಕಾಲ ಕೂಡಿಬಂದಿದೆ ಎಂಬಂತಾಗಿದೆ. ಸಂಘ ಪರಿವಾರದ ಜೊತೆಗೆ ನಂಟು ಬೆಳೆಸಿಕೊಂಡಿರುವ ಮಾರಿಕೊಂಡ ಮಾಧ್ಯಮಗಳು ತಾವೇ ಜಗತ್ತು ಗೆದ್ದವರಂತೆ ಆಗಲೇ ಸಂಭ್ರಮಿಸಲು ಆರಂಭಿಸಿವೆ.

ಸೋಮವಾರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಐದು ಸ್ಥಾನಗಳನ್ನು ಗೆದ್ದಿತ್ತು. ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ 106 ಇದ್ದು ಲೆಕ್ಕಾಚಾರದ ಪ್ರಕಾರ ನಾಲ್ಕು ಸ್ಥಾನಗಳನ್ನಷ್ಟೇ ಗೆಲ್ಲಬಹುದಿತ್ತು. ಕೆಲವು ಸ್ವತಂತ್ರ ಶಾಸಕರಲ್ಲದೆ, ಶಿವಸೇನೆಯ ಕೆಲವು ಶಾಸಕರೂ ಅಡ್ಡ ಮತದಾನ ಮಾಡಿರುವ ಶಂಕೆ ಇದರಿಂದ ವ್ಯಕ್ತವಾಗಿತ್ತು. ಎಂವಿಎ ತಾನು ನಿಲ್ಲಿಸಿದ್ದ ಆರು ಅಭ್ಯರ್ಥಿಗಳಲ್ಲಿ ಒಬ್ಬರು ಸೋತಿದ್ದರು. ಸಣ್ಣ ಪುಟ್ಟ ಪಕ್ಷಗಳು ಮತ್ತು ಸ್ವತಂತ್ರ ಶಾಸಕನ್ನೂ ಸೇರಿಸಿ 169 ಶಾಸಕರ ಬೆಂಬಲವನ್ನು ಪ್ರತಿಪಾದಿಸುವ ಎಂವಿಎಗೆ ಈ ಆಘಾತದ ಜೊತೆಗೆ ಮುಂದಿನ ದಿನ ಸೂರತ್‌ನ ಐಶಾರಾಮಿ ಹೋಟೆಲ್‌ನಲ್ಲಿ ಶಿವಸೇನೆಯ ಸುಮಾರು 30 ಶಾಸಕರು, ಆ ಪಕ್ಷದ ಮುಖಂಡ ಏಕನಾಥ ಶಿಂಧೆ ಜೊತೆಗೆ ಬಿಡಾರ ಹೂಡಿ, ಬಿಜೆಪಿ ಬೆಂಬಲಕ್ಕೆ ನಿಂತಿರುವ ಸುದ್ದಿ ಬರಸಿಡಿಲಿನಿಂತೆ ಬಂದಪ್ಪಳಿಸಿತು. ಅಲ್ಲಿಂದ ರಾತ್ರೋರಾತ್ರಿ ಬಿಜೆಪಿ ಆಡಳಿತದ ಅಸ್ಸಾಂನ ಗೌಹಾತಿಗೆ ಹಾರಿರುವ ಬಂಡಾಯ ಶಾಸಕರು ತಮ್ಮ ಸಂಖ್ಯಾಬಲವನ್ನು 46 ಎಂದು ಹೇಳಿಕೊಂಡಿದ್ದಾರೆ. 287 ಬಲಾಬಲದ ವಿಧಾನಸಭೆಯಲ್ಲಿ 144 ಮ್ಯಾಜಿಕ್ ಸಂಖ್ಯೆ (ಒಬ್ಬ ಶಿವಸೇನೆಯ ಶಾಸಕರು ತೀರಿಕೊಂಡಿದ್ದಾರೆ) ಆಗಿದ್ದರೂ ವಿಶ್ವಾಸಮತ ನಿರ್ಣಯಕ್ಕೆ ರಾಜ್ಯಪಾಲರು ನಿರ್ದೇಶಿಸಿದರೆ ಸರ್ಕಾರದ ಗತಿ ಏನಾಗುತ್ತದೆಂದು ಎಲ್ಲರಿಗೂ ತಿಳಿದಿದ್ದೆ.

ಬಿಜೆಪಿ ತನ್ನ ಎಂದಿನ ಚಾಳಿಯಂತೆ ಪ್ರತಿ ಪಕ್ಷಗಳ ಶಾಸಕರನ್ನು ಸೆಳೆಯುವ ಆಪರೇಷನ್ ಕಮಲಕ್ಕೆ ಮುನ್ನುಗ್ಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. 2015ರಲ್ಲಿ ಆರ್‌ಜೆಡಿ ಜೊತೆಗೂಡಿ ಸರ್ಕಾರ ರಚಿಸಿದ್ದ ಜೆಡಿಯುವಿನ ನಿತೀಶ್ ಕುಮಾರ್ ಅವರನ್ನು 2017ರಲ್ಲಿ ಅಕ್ರಮವಾಗಿ ಸೆಳೆದು ಅವರ ಜತೆಗೆ ಬಿಜೆಪಿ ಸರ್ಕಾರ ರಚಿಸಿತ್ತು. ಜಯಲಲಿತಾ ಅವರ ನಿಧನದ ನಂತರ ತಮಿಳುನಾಡಿನ ಎಐಎಡಿಎಂಕೆ ಸರ್ಕಾರವನ್ನು ಆ ರಾಜ್ಯದಲ್ಲಿ ನೆಲೆಯೇ ಇಲ್ಲದ ಬಿಜೆಪಿ ತನ್ನ ತೆಕ್ಕೆಯಲ್ಲಿಟ್ಟುಕೊಂಡು ಆಡಳಿತ ನಡೆಸಿತ್ತು. ಕರ್ನಾಟಕದಲ್ಲಿ ಆಪರೇಶನ್ ಕಮಲದಿಂದ ಜೆಡಿಎಸ್-ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿತು. (ಈ ಹಿಂದಿನ ಅವಧಿಯಲ್ಲಿ ಆದ ಆಪರೇಷನ್ ಕಮಲ ಬೇರೆಯದ್ದು!) ಮಧ್ಯಪ್ರದೇಶದಲ್ಲಿ ಆಮಿಷಗಳನ್ನು ಒಡ್ಡಿ ಕಾಂಗ್ರೆಸ್ ಶಾಸಕರನ್ನು ಸೆಳೆದು ಕಮಲನಾಥ್ ಸರ್ಕಾರವನ್ನು ಮುಳುಗಿಸಿತ್ತು. ಗೋವಾ, ಮೇಘಾಲಯ, ಮಣಿಪುರ, ಅರುಣಾಚಲ ಪ್ರದೇಶ ಹೀಗೆ ದೇಶದ ಉದ್ದಗಲಕ್ಕೆ ಒಂದಲ್ಲ ಒಂದು ಕುತಂತ್ರ ಬಳಸಿ ಅಧಿಕಾರ ಹಿಡಿಯುವುದನ್ನು ಕರಗತ ಮಾಡಿಕೊಂಡಿರುವ ಬಿಜೆಪಿ ಮಹಾರಾಷ್ಟ್ರದಲ್ಲಿಯೂ ತನ್ನ ದಾಳವನ್ನು ಈಗ ಪರಿಣಾಮಕಾರಿಯಾಗಿ ಬೀಸಿದೆ. ಅಲ್ಲದೆ ತನ್ನ ಶಾಸಕರನ್ನು ಶಿವಸೇನೆ ಸೆಳೆಯದಂತೆ ನೋಡಿಕೊಳ್ಳಲು ಅವರನ್ನೆಲ್ಲಾ ಒಟ್ಟಿಗೆ ಕೂಡಿಹಾಕಿಕೊಂಡು ರೆಸಾರ್ಟ್ ಯಾತ್ರೆ ಬೆಳೆಸಿದೆ. ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷಗಳೂ ತಮ್ಮ ಶಾಸಕರನ್ನು ಜೋಪಾನ ಮಾಡಿಕೊಳ್ಳಲು ದಾರಿ ಬೆಳೆಸಿವೆ.

ಒಂದು ಪಕ್ಷ, ಪಕ್ಷಾಂತರ ಕಾಯ್ದೆ ಅನ್ವಯವಾಗದೆ ಶಾಸಕರನ್ನು ಅಸಿಂಧುಗೊಳಿಸದಂತೆ ಆಟ ಆಡಬೇಕಾದರೆ ಶಿವಸೇನೆಯ ಮೂರರ ಎರಡನೇ ಭಾಗದಷ್ಟು ಶಾಸಕರು ಏಕನಾಥ ಶಿಂಧೆ ಜೊತೆಗೆ ಹೋಗಬೇಕಾಗುತ್ತದೆ.
ಅಂದರೆ ಶಿವಸೇನೆಯ 55 ಶಾಸಕರಲ್ಲಿ 37 ಜನ ಪಕ್ಷದಿಂದ ಹೊರಹೋಗಬೇಕಾಗುತ್ತದೆ. ಈಗಾಗಲೇ 40 ಶಿವಸೇನೆ ಶಾಸಕರು ಅವರ ಜೊತೆ ಇದ್ದಾರೆ ಎನ್ನಲಾಗುತ್ತಿದೆ. ಈಗ ಅವರು ಪಕ್ಷಾಂತರ ನಿಷೇಧ ಕಾಯ್ದೆಯಿಂದ ಬಚಾವ್ ಆಗಿ ಸ್ವತಂತ್ರ ಪಕ್ಷ ಘೋಷಿಸಬಹುದು. ಹಣ, ಇಡಿ-ಸಿಬಿಐ ಮುಂತಾದ ಏಜೆನ್ಸಿಗಳ ಅಧಿಕಾರವನ್ನು ಮನಸೋಇಚ್ಛೆ ಬಳಸಿದ್ದರಿಂದ ಇದು ಸಾಧ್ಯಾವಾಯಿತೆ? ಈಗಿನ ಸದ್ಯದ ಸುದ್ದಿಗಳಂತೆ ಹಲವು ಶಿವಸೇನೆ ಶಾಸಕರು ವಿಶ್ವಾಸಮತ ಸಂದರ್ಭದಲ್ಲಿ ವಿಪ್ ಉಲ್ಲಂಘಿಸಿ ಬಿಜೆಪಿ ಬೆಂಬಲಿಸಿದರೆ ಮತ್ತು ಅವರ ಶಾಸಕ ಸ್ಥಾನ ಅಸಿಂಧುವಾದರೆ ಕುಸಿಯುವ ವಿಧಾನಸಭಾ ಬಲಾಬಲದಲ್ಲಿ ಬಿಜೆಪಿಗೂ ಸರ್ಕಾರ ರಚಿಸುವುದು ಸುಲಭವೇನಲ್ಲ. ಸ್ವತಂತ್ರ ಶಾಸಕರ ಬೆಂಬಲ ತಪ್ಪಿ ಮತ್ತು ಕಾಂಗ್ರೆಸ್ ಹಾಗೂ ಎನ್‌ಸಿಪಿಯ ಒಂದಷ್ಟು ಶಾಸಕರು ಪಕ್ಷಾಂತರ ಮಾಡಿ ಶಿವಸೇನೆ-ಎಂವಿಎ ಅಧಿಕಾರ ಕಳೆದುಕೊಂಡರೆ ರಾಷ್ಟ್ರಪತಿ ಆಳ್ವಿಕೆ ಮಹಾರಾಷ್ಟ್ರಕ್ಕೆ ಅನಿವಾರ್ಯವಾಗಬಹುದು. ಒಟ್ಟಿನಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು, ಜನರು ಕೊಟ್ಟ ಮ್ಯಾಂಡೇಟ್‌ಗೆ ಕಿಂಚಿತ್ತೂ ಗೌರವ ನೀಡದೆ ಹಿಂಬಾಗಿಲಿನಿಂದಾದರೂ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿಗೆ ಈ ಬಾರಿ ’ಗೆಲುವು’ ಒಲಿಯುವುದೇ? ಇದು ಶಿವಸೇನೆಯನ್ನು ಎಲ್ಲಿಗೆ ತಳ್ಳಬಹುದು?
ಒಂದು ಕಡೆ ಅಶಾಂತಿಗೆ ಮತ್ತೊಂದು ಕಡೆ ರಾಜಕೀಯ ಅಸ್ಥಿರತೆಯ ಕಡೆಗೆ ರಾಜ್ಯಗಳನ್ನು ನೂಕಲು ಸದಾ ಸನ್ನದ್ಧವಾಗಿರುವ ಬಿಜೆಪಿಯ ನಿಜ ಬಣ್ಣವನ್ನು ಜನರು ಅರಿತು ಪ್ರಜಾತಾಂತ್ರಿಕವಾಗಿ ಅದಕ್ಕೆ ಪಾಠ ಕಲಿಸಬೇಕಿದೆ.


ಇದನ್ನೂ ಓದಿ: ಮಹಾರಾಷ್ಟ್ರ: ಅಧಿಕಾರಕ್ಕಾಗಿ ನಾನು ಎಂದಿಗೂ ಮೋಸ ಮಾಡುವುದಿಲ್ಲ ಎಂದ ಏಕನಾಥ್‌ ಶಿಂಧೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಲ್ಕತ್ತಾ| ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆ ವಿರೋಧಿಸಿ ಅಹೋರಾತ್ರಿ ಧರಣಿ ಮುಂದುವರೆಸಿದ ಮಮತಾ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಸತತ ಎರಡನೇ ದಿನವಾದ ಶನಿವಾರವೂ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ, ಅವರು ಅಹೋರಾತ್ರಿ ಧರಣಿ ಸ್ಥಳದಲ್ಲಿ ರಾತ್ರಿ ಕಳೆದರು. ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ "ಬಂಗಾಳದ ಮತದಾರರ...

ಇಂಡೋನೇಷ್ಯಾ | ನಾಲ್ವರು ಪ್ರಮುಖ ಹೋರಾಟಗಾರರು ಖುಲಾಸೆ : ಪ್ರತಿಭಟನೆಯ ಹಕ್ಕಿಗೆ ಹೊಸ ಭರವಸೆ ಎಂದ ಆಮ್ನೆಸ್ಟಿ

2025ರ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಡೆದ ಹಿಂಸಾತ್ಮಕ ವಿದ್ಯಾರ್ಥಿ ಪ್ರತಿಭಟನೆಗಳಿಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ನಾಲ್ವರು ಪ್ರಮುಖ ಹೋರಾಟಗಾರರನ್ನು ಇಂಡೋನೇಷ್ಯಾದ ಕೇಂದ್ರ ಜಕಾರ್ತಾ ಜಿಲ್ಲಾ ನ್ಯಾಯಾಲಯವು ಶುಕ್ರವಾರ (ಮಾ.6) ಖುಲಾಸೆಗೊಳಿಸಿದೆ. ದೇಶದಲ್ಲಿ ನಾಗರಿಕ ಸ್ವಾತಂತ್ರ್ಯಕ್ಕೆ...

‘ಆಕ್ರಮಣ ಮಾಡುವ ಉದ್ದೇಶವಿಲ್ಲ..’; ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಗೆ ಕ್ಷಮೆಯಾಚಿಸಿದ ಇರಾನ್ ಅಧ್ಯಕ್ಷರು

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ನೆರೆಯ ರಾಷ್ಟ್ರಗಳಿಗೆ ಶನಿವಾರ ಕ್ಷಮೆಯಾಚಿಸಿದ್ದಾರೆ. ಉಲ್ಬಣಗೊಳ್ಳುತ್ತಿರುವ ಪ್ರಾದೇಶಿಕ ಸಂಘರ್ಷಕ್ಕೆ ಸಂಬಂಧಿಸಿದ ಇತ್ತೀಚಿನ ದಾಳಿಗಳಿಗೆ ಟೆಹ್ರಾನ್ ಇತರ ರಾಷ್ಟ್ರಗಳನ್ನು ಆಕ್ರಮಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಇರಾನ್ ಸಾರ್ವಜನಿಕರನ್ನು...

ತೈಲ ಆಮದು ವಿಚಾರದಲ್ಲಿ ಅಮೆರಿಕದ ಒಪ್ಪಿಗೆ ಪಡೆಯುವುದು ‘ಅತಿರೇಕದ’ ಸಂಗತಿ: ಪಿಣರಾಯಿ ವಿಜಯನ್

ತೈಲ ಆಮದುಗಳಂತಹ ನಿರ್ಧಾರಗಳಿಗೆ ಭಾರತವು ಅಮೆರಿಕದ ಅನುಮೋದನೆಯನ್ನು ಪಡೆಯುವಂತೆ ಬಿಂಬಿತವಾಗುತ್ತಿರುವುದು 'ಅತಿರೇಕದ' ಸಂಗತಿ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಹೇಳಿದ್ದಾರೆ. ಭಾರತದ ಸಾರ್ವಭೌಮತ್ವವು ವಿದೇಶಿ ಅನುಮತಿಗೆ ಒಳಪಡುವುದಿಲ್ಲ ಎಂದು ವಿಜಯನ್ ಸಾಮಾಜಿಕ...

ಪತ್ರಕರ್ತನ ಹತ್ಯೆ ಪ್ರಕರಣ : ಡೇರಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ಖುಲಾಸೆ

ಪತ್ರಕರ್ತ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಸಿರ್ಸಾದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಅನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶನಿವಾರ (ಮಾ.7) ಖುಲಾಸೆಗೊಳಿಸಿರುವುದಾಗಿ livelaw.in ಎಂದು ವರದಿ...

ಗೃಹ ಬಳಕೆಯ ಎಲ್‌ಪಿಜಿ ದರ 60 ರೂ. ಹೆಚ್ಚಳ : 11 ತಿಂಗಳಲ್ಲಿ ಎರಡನೇ ಬಾರಿ ಬೆಲೆ ಏರಿಕೆ

ತೈಲ ಮಾರುಕಟ್ಟೆ ಕಂಪನಿಗಳು ಶನಿವಾರ (ಮಾ.7) ದೇಶದಲ್ಲಿ ಗೃಹ ಬಳಕೆಯ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕ್ರಮವಾಗಿ ರೂ. 60 ಮತ್ತು ರೂ. 115 ಹೆಚ್ಚಿಸಿವೆ. ಈ ಹೆಚ್ಚಳದ ನಂತರ ರಾಷ್ಟ್ರ ರಾಜಧಾನಿ...

ಟಿವಿ ನ್ಯೂಸ್ ಚಾನೆಲ್‌ಗಳಲ್ಲಿ ಅನಗತ್ಯ ಯುದ್ಧೋನ್ಮಾದ, ಸುಳ್ಳು ವರದಿ : ನಾಲ್ಕು ವಾರ TRP ಸ್ಥಗಿತಕ್ಕೆ ಕೇಂದ್ರ ಆದೇಶ

ಅಮೆರಿಕ, ಇಸ್ರೇಲ್, ಇರಾನ್ ಮತ್ತು ಗಲ್ಫ್ ರಾಷ್ಟ್ರಗಳ ಸಂಘರ್ಷದ ಕುರಿತು ಟಿವಿ ನ್ಯೂಸ್‌ ಚಾನೆಲ್‌ಗಳು ಅನಗತ್ಯ ಯುದ್ಧೋನ್ಮಾದ ಸೃಷ್ಟಿಸುತ್ತಿರುವ ಹಾಗೂ ಸುಳ್ಳು ವರದಿಗಳನ್ನು ಪ್ರಸಾರ ಮಾಡುತ್ತಿರುವ ಹಿನ್ನೆಲೆ, ಮುಂದಿನ ನಾಲ್ಕು ವಾರಗಳ ಕಾಲ...

‘ಮಿಯಾ ಮುಸ್ಲಿಮರು ನಮ್ಮ ಶತ್ರುಗಳಲ್ಲ..’; ಚುನಾವಣೆ ಸನಿಹದಲ್ಲಿ ಮಾತು ಬದಲಿಸಿದ ಅಸ್ಸಾಂ ಸಿಎಂ

ಭಾರತೀಯ ಜನತಾ ಪಕ್ಷವು (ಬಿಜೆಪಿ) ಅಸ್ಸಾಂನಲ್ಲಿರುವ ಬಂಗಾಳಿ ಮೂಲದ ಮುಸ್ಲಿಂ ಸಮುದಾಯವಾದ ಮಿಯಾ ಮುಸ್ಲಿಮರನ್ನು ತನ್ನ ಶತ್ರುಗಳೆಂದು ಪರಿಗಣಿಸುವುದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ಹೇಳಿದ್ದಾರೆ. ಇದೇ ವರ್ಷದ...

ಜೈಲಿನಲ್ಲಿರುವ ಪಿಎಫ್‌ಐ ನಾಯಕ ಇ ಅಬೂಬಕರ್ ಆರೋಗ್ಯ ಸ್ಥಿತಿ ಗಂಭೀರ

ಸುಮಾರು ನಾಲ್ಕು ವರ್ಷಗಳ ಕಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸ್ಥಾಪಕ ಅಧ್ಯಕ್ಷ ಎರಪ್ಪುಂಗಲ್ ಅಬೂಬಕರ್ ಅವರ ಆರೋಗ್ಯ ಹದಗೆಟ್ಟ ನಂತರ ಬುಧವಾರದಿಂದ ಆಸ್ಪತ್ರೆಯಲ್ಲಿ ತೀವ್ರ ನಿಗಾ...

‘ಭಾರತ ನಮ್ಮನ್ನು ಹಿಂದುಕ್ಕುವುದಕ್ಕೆ ಬಿಡಲ್ಲ; ಅಮೆರಿಕದ ಹಿತಾಸಕ್ತಿಗಳಿಗೆ ಮೊದಲ ಆದ್ಯತೆ..’; ಕ್ರಿಸ್ಟೋಫರ್ ಲ್ಯಾಂಡೌ

ನಮ್ಮ ಪ್ರಮುಖ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಲು ಚೀನಾಗೆ ಮಾಡಿಕೊಟ್ಟ ಆರ್ಥಿಕ ಅನುಕೂಲಗಳನ್ನು ನಾವು ಭಾರತಕ್ಕೆ ನೀಡುವುದಿಲ್ಲ ಎಂದು ಯುನೈಟೆಡ್ ಸ್ಟೇಟ್ಸ್‌ (ಯುಎಸ್‌) ಉಪ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ ಗುರುವಾರ ಹೇಳಿದ್ದಾರೆ. ಅಮೆರಿಕ ಮತ್ತು ಭಾರತ...