Homeಅಂಕಣಗಳುಆಪರೇಷನ್ ಕಮಲಕ್ಕೆ ಬಲಿಯಾಗಲಿದೆಯೇ ಮಹಾ ವಿಕಾಸ್ ಅಘಾಡಿ ಸರ್ಕಾರ?

ಆಪರೇಷನ್ ಕಮಲಕ್ಕೆ ಬಲಿಯಾಗಲಿದೆಯೇ ಮಹಾ ವಿಕಾಸ್ ಅಘಾಡಿ ಸರ್ಕಾರ?

- Advertisement -
- Advertisement -

ದೇಶದಾದ್ಯಂತ ವಿರೋಧ ಪಕ್ಷಗಳನ್ನು ಕಳ್ಳ ದಾರಿಯ ಮೂಲಕ ನಿರ್ನಾಮ ಮಾಡುವ ತನ್ನ ಕೆಲಸದಿಂದ ಎಂತಹ ಗಂಭೀರ ಪರಿಣಾಮಗಳು ಉಂಟಾದರೂ ಬಿಜೆಪಿ ಪಕ್ಷ ಅದರಿಂದ ಸಣ್ಣ ಪಾಠವನ್ನೂ ಕಲಿತಂತಿಲ್ಲ. ಕೆಲವು ದಿನಗಳ ಹಿಂದೆ ತನ್ನ ವಕ್ತಾರೆ ಟಿವಿ ಶೋವೊಂದರಲ್ಲಿ ಮಾಡಿದ ಒಂದು ದ್ವೇಷಪೂರಿತ ಕಾಮೆಂಟ್‌ಗೆ ಹಲವು ರಾಷ್ಟ್ರಗಳು ಭಾರತಕ್ಕೆ ’ವಾರ್ನಿಂಗ್’ ಕೊಡುವ ರೀತಿಯಲ್ಲಿ ಮಾತನಾಡಿದಾಗ, ’ಇದು ದೇಶದ ಆಂತರಿಕ ವಿಚಾರ, ಸಾರ್ವಭೌಮ ರಾಷ್ಟ್ರವೊಂದರ ಸಮಸ್ಯೆಗಳಲ್ಲಿ ಮೂಗು ತೂರಿಸುವ ಅವಶ್ಯಕತೆ ಇಲ್ಲ’ ಎಂದು ಕೇಂದ್ರ ಬಿಜೆಪಿ ಸರ್ಕಾರದ ಜೊತೆಗೆ ನಿಲ್ಲಲು ಯಾವುದೇ ಅನ್ಯ ಪಕ್ಷ ಮುಂದೆ ಬರಲಿಲ್ಲ. ಅದರ ಮಿತ್ರ ಪಕ್ಷಗಳೂ ಕೂಡ ಉಸಿರೆತ್ತಲಿಲ್ಲ. ಸದಾ ದ್ವೇಷದ, ಪ್ರತೀಕಾರದ ಭಾಷೆಯನ್ನಾಡುತ್ತಾ ತನ್ನ ವಿರೋಧಿ ಪಕ್ಷಗಳೇಕೆ ತನ್ನ ಮಿತ್ರ ಪಕ್ಷಗಳನ್ನೂ ಜೊತೆಗೆ ಕೊಂಡೊಯ್ಯುವ ಪ್ರಾಮಾಣಿಕತೆಯನ್ನು ತೋರದ ಪಕ್ಷ ಬಿಜೆಪಿ. ಇದೇ ಕಾರಣಕ್ಕೆ ದೀರ್ಘ ಕಾಲದ ಸಂಗಾತಿಯಾಗಿದ್ದ ಶಿವಸೇನೆ 2019ರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವಾಗಿ ಬಿಜೆಪಿ ಜೊತೆಗೆ ಸೆಣೆಸಿದ್ದರೂ, ಚುನಾವಣೆಯ ನಂತರ ಎನ್‌ಡಿಎಯಿಂದ ದೂರವಾಗಿ ಕಾಂಗ್ರೆಸ್ ಹಾಗೂ ಶರದ್ ಪವಾರ್ ಅವರ ಎನ್‌ಸಿಪಿಯೊಂದಿಗೆ ಎಂವಿಎ (ಮಹಾ ವಿಕಾಸ್ ಅಘಾಡಿ) ಮೈತ್ರಿಕೂಟ ರಚಿಸಿಕೊಂಡು, ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಯಾಗಿದ್ದರು.

ಅಂದಿನಿಂದಲೂ ಎಂವಿಎ ಸರ್ಕಾರವನ್ನು ಒಂದಲ್ಲ ಒಂದು ರೀತಿಯಲ್ಲಿ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದರೂ ಸಫಲವಾಗಿರಲಿಲ್ಲ. ಸೈದ್ಧಾಂತಿಕವಾಗಿ ಒಂದೇ ಗರಡಿಯಲ್ಲಿ ಬಿಜೆಪಿ ಮತ್ತು ಶಿವಸೇನೆ ಎರಡೂ ಪಕ್ಷಗಳು ಪಳಗಿದ್ದರೂ, ಪ್ರಾದೇಶಿಕ ಅಸ್ಮಿತೆ ಮತ್ತು ಮರಾಠಿ ಗರ್ವ ಶಿವಸೇನೆಗೆ ವಿಶಿಷ್ಟವಾದದ್ದು. ಆ ನಿಟ್ಟಿನಲ್ಲಿ ತೀವ್ರ ಕೇಂದ್ರೀಕರಣದ ಮತ್ತು ರಾಜ್ಯಗಳ ಅಧಿಕಾರವನ್ನು ಕಸಿಯುವ ಬಿಜೆಪಿ ಸಿದ್ಧಾಂತದ ಜೊತೆಗೆ ಸಣ್ಣ ಮಟ್ಟದ ಭಿನ್ನಮತವನ್ನು ಉಳಿಸಿಕೊಂಡ ಪಕ್ಷ ಅದು. ಆದರೆ ಎರಡೂ ಪಕ್ಷಗಳು ಸಾಮಾನ್ಯ ತಳಹದಿಯಲ್ಲಿ ಹಂಚಿಕೊಂಡಿದ್ದ ಹಿಂದುತ್ವ ಸಿದ್ಧಾಂತದ ಕಾರಣಕ್ಕೆ, ಶಿವಸೇನೆಯ ಹಲವು ಶಾಸಕರಿಗೆ ’ಅಕ್ಕಿ ಮೇಲೆ ಆಸೆ, ನಂಟನ ಮೇಲೆ ಪ್ರೀತಿ’ ಎಂಬಂತಾಗಿತ್ತು. ಈ ಸಂಗತಿಯನ್ನು ಬಳಸಿಕೊಂಡು ಯಾವ ದಾರಿ ಹಿಡಿದರೂ ಸರಿ ಅಧಿಕಾರ ಹಿಡಿಯದೆ ಬಿಡುವುದಿಲ್ಲ ಎಂದು ಕಾದಿದ್ದ ಬಿಜೆಪಿಗೆ, ಜೂನ್ ನಾಲ್ಕನೇ ವಾರದ ಮಂಗಳವಾರ ಕಾಲ ಕೂಡಿಬಂದಿದೆ ಎಂಬಂತಾಗಿದೆ. ಸಂಘ ಪರಿವಾರದ ಜೊತೆಗೆ ನಂಟು ಬೆಳೆಸಿಕೊಂಡಿರುವ ಮಾರಿಕೊಂಡ ಮಾಧ್ಯಮಗಳು ತಾವೇ ಜಗತ್ತು ಗೆದ್ದವರಂತೆ ಆಗಲೇ ಸಂಭ್ರಮಿಸಲು ಆರಂಭಿಸಿವೆ.

ಸೋಮವಾರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಐದು ಸ್ಥಾನಗಳನ್ನು ಗೆದ್ದಿತ್ತು. ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ 106 ಇದ್ದು ಲೆಕ್ಕಾಚಾರದ ಪ್ರಕಾರ ನಾಲ್ಕು ಸ್ಥಾನಗಳನ್ನಷ್ಟೇ ಗೆಲ್ಲಬಹುದಿತ್ತು. ಕೆಲವು ಸ್ವತಂತ್ರ ಶಾಸಕರಲ್ಲದೆ, ಶಿವಸೇನೆಯ ಕೆಲವು ಶಾಸಕರೂ ಅಡ್ಡ ಮತದಾನ ಮಾಡಿರುವ ಶಂಕೆ ಇದರಿಂದ ವ್ಯಕ್ತವಾಗಿತ್ತು. ಎಂವಿಎ ತಾನು ನಿಲ್ಲಿಸಿದ್ದ ಆರು ಅಭ್ಯರ್ಥಿಗಳಲ್ಲಿ ಒಬ್ಬರು ಸೋತಿದ್ದರು. ಸಣ್ಣ ಪುಟ್ಟ ಪಕ್ಷಗಳು ಮತ್ತು ಸ್ವತಂತ್ರ ಶಾಸಕನ್ನೂ ಸೇರಿಸಿ 169 ಶಾಸಕರ ಬೆಂಬಲವನ್ನು ಪ್ರತಿಪಾದಿಸುವ ಎಂವಿಎಗೆ ಈ ಆಘಾತದ ಜೊತೆಗೆ ಮುಂದಿನ ದಿನ ಸೂರತ್‌ನ ಐಶಾರಾಮಿ ಹೋಟೆಲ್‌ನಲ್ಲಿ ಶಿವಸೇನೆಯ ಸುಮಾರು 30 ಶಾಸಕರು, ಆ ಪಕ್ಷದ ಮುಖಂಡ ಏಕನಾಥ ಶಿಂಧೆ ಜೊತೆಗೆ ಬಿಡಾರ ಹೂಡಿ, ಬಿಜೆಪಿ ಬೆಂಬಲಕ್ಕೆ ನಿಂತಿರುವ ಸುದ್ದಿ ಬರಸಿಡಿಲಿನಿಂತೆ ಬಂದಪ್ಪಳಿಸಿತು. ಅಲ್ಲಿಂದ ರಾತ್ರೋರಾತ್ರಿ ಬಿಜೆಪಿ ಆಡಳಿತದ ಅಸ್ಸಾಂನ ಗೌಹಾತಿಗೆ ಹಾರಿರುವ ಬಂಡಾಯ ಶಾಸಕರು ತಮ್ಮ ಸಂಖ್ಯಾಬಲವನ್ನು 46 ಎಂದು ಹೇಳಿಕೊಂಡಿದ್ದಾರೆ. 287 ಬಲಾಬಲದ ವಿಧಾನಸಭೆಯಲ್ಲಿ 144 ಮ್ಯಾಜಿಕ್ ಸಂಖ್ಯೆ (ಒಬ್ಬ ಶಿವಸೇನೆಯ ಶಾಸಕರು ತೀರಿಕೊಂಡಿದ್ದಾರೆ) ಆಗಿದ್ದರೂ ವಿಶ್ವಾಸಮತ ನಿರ್ಣಯಕ್ಕೆ ರಾಜ್ಯಪಾಲರು ನಿರ್ದೇಶಿಸಿದರೆ ಸರ್ಕಾರದ ಗತಿ ಏನಾಗುತ್ತದೆಂದು ಎಲ್ಲರಿಗೂ ತಿಳಿದಿದ್ದೆ.

ಬಿಜೆಪಿ ತನ್ನ ಎಂದಿನ ಚಾಳಿಯಂತೆ ಪ್ರತಿ ಪಕ್ಷಗಳ ಶಾಸಕರನ್ನು ಸೆಳೆಯುವ ಆಪರೇಷನ್ ಕಮಲಕ್ಕೆ ಮುನ್ನುಗ್ಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. 2015ರಲ್ಲಿ ಆರ್‌ಜೆಡಿ ಜೊತೆಗೂಡಿ ಸರ್ಕಾರ ರಚಿಸಿದ್ದ ಜೆಡಿಯುವಿನ ನಿತೀಶ್ ಕುಮಾರ್ ಅವರನ್ನು 2017ರಲ್ಲಿ ಅಕ್ರಮವಾಗಿ ಸೆಳೆದು ಅವರ ಜತೆಗೆ ಬಿಜೆಪಿ ಸರ್ಕಾರ ರಚಿಸಿತ್ತು. ಜಯಲಲಿತಾ ಅವರ ನಿಧನದ ನಂತರ ತಮಿಳುನಾಡಿನ ಎಐಎಡಿಎಂಕೆ ಸರ್ಕಾರವನ್ನು ಆ ರಾಜ್ಯದಲ್ಲಿ ನೆಲೆಯೇ ಇಲ್ಲದ ಬಿಜೆಪಿ ತನ್ನ ತೆಕ್ಕೆಯಲ್ಲಿಟ್ಟುಕೊಂಡು ಆಡಳಿತ ನಡೆಸಿತ್ತು. ಕರ್ನಾಟಕದಲ್ಲಿ ಆಪರೇಶನ್ ಕಮಲದಿಂದ ಜೆಡಿಎಸ್-ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿತು. (ಈ ಹಿಂದಿನ ಅವಧಿಯಲ್ಲಿ ಆದ ಆಪರೇಷನ್ ಕಮಲ ಬೇರೆಯದ್ದು!) ಮಧ್ಯಪ್ರದೇಶದಲ್ಲಿ ಆಮಿಷಗಳನ್ನು ಒಡ್ಡಿ ಕಾಂಗ್ರೆಸ್ ಶಾಸಕರನ್ನು ಸೆಳೆದು ಕಮಲನಾಥ್ ಸರ್ಕಾರವನ್ನು ಮುಳುಗಿಸಿತ್ತು. ಗೋವಾ, ಮೇಘಾಲಯ, ಮಣಿಪುರ, ಅರುಣಾಚಲ ಪ್ರದೇಶ ಹೀಗೆ ದೇಶದ ಉದ್ದಗಲಕ್ಕೆ ಒಂದಲ್ಲ ಒಂದು ಕುತಂತ್ರ ಬಳಸಿ ಅಧಿಕಾರ ಹಿಡಿಯುವುದನ್ನು ಕರಗತ ಮಾಡಿಕೊಂಡಿರುವ ಬಿಜೆಪಿ ಮಹಾರಾಷ್ಟ್ರದಲ್ಲಿಯೂ ತನ್ನ ದಾಳವನ್ನು ಈಗ ಪರಿಣಾಮಕಾರಿಯಾಗಿ ಬೀಸಿದೆ. ಅಲ್ಲದೆ ತನ್ನ ಶಾಸಕರನ್ನು ಶಿವಸೇನೆ ಸೆಳೆಯದಂತೆ ನೋಡಿಕೊಳ್ಳಲು ಅವರನ್ನೆಲ್ಲಾ ಒಟ್ಟಿಗೆ ಕೂಡಿಹಾಕಿಕೊಂಡು ರೆಸಾರ್ಟ್ ಯಾತ್ರೆ ಬೆಳೆಸಿದೆ. ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷಗಳೂ ತಮ್ಮ ಶಾಸಕರನ್ನು ಜೋಪಾನ ಮಾಡಿಕೊಳ್ಳಲು ದಾರಿ ಬೆಳೆಸಿವೆ.

ಒಂದು ಪಕ್ಷ, ಪಕ್ಷಾಂತರ ಕಾಯ್ದೆ ಅನ್ವಯವಾಗದೆ ಶಾಸಕರನ್ನು ಅಸಿಂಧುಗೊಳಿಸದಂತೆ ಆಟ ಆಡಬೇಕಾದರೆ ಶಿವಸೇನೆಯ ಮೂರರ ಎರಡನೇ ಭಾಗದಷ್ಟು ಶಾಸಕರು ಏಕನಾಥ ಶಿಂಧೆ ಜೊತೆಗೆ ಹೋಗಬೇಕಾಗುತ್ತದೆ.
ಅಂದರೆ ಶಿವಸೇನೆಯ 55 ಶಾಸಕರಲ್ಲಿ 37 ಜನ ಪಕ್ಷದಿಂದ ಹೊರಹೋಗಬೇಕಾಗುತ್ತದೆ. ಈಗಾಗಲೇ 40 ಶಿವಸೇನೆ ಶಾಸಕರು ಅವರ ಜೊತೆ ಇದ್ದಾರೆ ಎನ್ನಲಾಗುತ್ತಿದೆ. ಈಗ ಅವರು ಪಕ್ಷಾಂತರ ನಿಷೇಧ ಕಾಯ್ದೆಯಿಂದ ಬಚಾವ್ ಆಗಿ ಸ್ವತಂತ್ರ ಪಕ್ಷ ಘೋಷಿಸಬಹುದು. ಹಣ, ಇಡಿ-ಸಿಬಿಐ ಮುಂತಾದ ಏಜೆನ್ಸಿಗಳ ಅಧಿಕಾರವನ್ನು ಮನಸೋಇಚ್ಛೆ ಬಳಸಿದ್ದರಿಂದ ಇದು ಸಾಧ್ಯಾವಾಯಿತೆ? ಈಗಿನ ಸದ್ಯದ ಸುದ್ದಿಗಳಂತೆ ಹಲವು ಶಿವಸೇನೆ ಶಾಸಕರು ವಿಶ್ವಾಸಮತ ಸಂದರ್ಭದಲ್ಲಿ ವಿಪ್ ಉಲ್ಲಂಘಿಸಿ ಬಿಜೆಪಿ ಬೆಂಬಲಿಸಿದರೆ ಮತ್ತು ಅವರ ಶಾಸಕ ಸ್ಥಾನ ಅಸಿಂಧುವಾದರೆ ಕುಸಿಯುವ ವಿಧಾನಸಭಾ ಬಲಾಬಲದಲ್ಲಿ ಬಿಜೆಪಿಗೂ ಸರ್ಕಾರ ರಚಿಸುವುದು ಸುಲಭವೇನಲ್ಲ. ಸ್ವತಂತ್ರ ಶಾಸಕರ ಬೆಂಬಲ ತಪ್ಪಿ ಮತ್ತು ಕಾಂಗ್ರೆಸ್ ಹಾಗೂ ಎನ್‌ಸಿಪಿಯ ಒಂದಷ್ಟು ಶಾಸಕರು ಪಕ್ಷಾಂತರ ಮಾಡಿ ಶಿವಸೇನೆ-ಎಂವಿಎ ಅಧಿಕಾರ ಕಳೆದುಕೊಂಡರೆ ರಾಷ್ಟ್ರಪತಿ ಆಳ್ವಿಕೆ ಮಹಾರಾಷ್ಟ್ರಕ್ಕೆ ಅನಿವಾರ್ಯವಾಗಬಹುದು. ಒಟ್ಟಿನಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು, ಜನರು ಕೊಟ್ಟ ಮ್ಯಾಂಡೇಟ್‌ಗೆ ಕಿಂಚಿತ್ತೂ ಗೌರವ ನೀಡದೆ ಹಿಂಬಾಗಿಲಿನಿಂದಾದರೂ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿಗೆ ಈ ಬಾರಿ ’ಗೆಲುವು’ ಒಲಿಯುವುದೇ? ಇದು ಶಿವಸೇನೆಯನ್ನು ಎಲ್ಲಿಗೆ ತಳ್ಳಬಹುದು?
ಒಂದು ಕಡೆ ಅಶಾಂತಿಗೆ ಮತ್ತೊಂದು ಕಡೆ ರಾಜಕೀಯ ಅಸ್ಥಿರತೆಯ ಕಡೆಗೆ ರಾಜ್ಯಗಳನ್ನು ನೂಕಲು ಸದಾ ಸನ್ನದ್ಧವಾಗಿರುವ ಬಿಜೆಪಿಯ ನಿಜ ಬಣ್ಣವನ್ನು ಜನರು ಅರಿತು ಪ್ರಜಾತಾಂತ್ರಿಕವಾಗಿ ಅದಕ್ಕೆ ಪಾಠ ಕಲಿಸಬೇಕಿದೆ.


ಇದನ್ನೂ ಓದಿ: ಮಹಾರಾಷ್ಟ್ರ: ಅಧಿಕಾರಕ್ಕಾಗಿ ನಾನು ಎಂದಿಗೂ ಮೋಸ ಮಾಡುವುದಿಲ್ಲ ಎಂದ ಏಕನಾಥ್‌ ಶಿಂಧೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...