Homeಅಂಕಣಗಳುಚರ್ಚಿಲ್ ಮಾತು ನಿಜವಾಯಿತು ಎನ್ನುವ ಸ್ಥಿತಿ ಭಾರತಕ್ಕೆ ಬರಬಾರದು..

ಚರ್ಚಿಲ್ ಮಾತು ನಿಜವಾಯಿತು ಎನ್ನುವ ಸ್ಥಿತಿ ಭಾರತಕ್ಕೆ ಬರಬಾರದು..

ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಇಂಗ್ಲೆಂಡಿನ ಮಾಜಿ ಪ್ರಧಾನಿ ಚರ್ಚಿಲ್ ಆಗಿನ ಪ್ರಧಾನಮಂತ್ರಿಯಾಗಿದ್ದ ಲಾರ್ಡ್ ಅಟ್ಲೀ ಅವರಿಗೆ ಹೇಳುವ ಮಾತು ಇದು. ‘ಸ್ಕೌಂಡ್ರಲ್ಸ್ ಮತ್ತು ಥಗ್ಸ್ ಕೈಯಲ್ಲಿ ಭಾರತವನ್ನು ಕೊಟ್ಟು ಬಂದಿದ್ದೀರಿ’ ಎಂದು

- Advertisement -
- Advertisement -

ಬಿಜೆಪಿಯ ಅಧ್ಯಕ್ಷರು ಮತ್ತು ಕೇಂದ್ರ ಗೃಹಮಂತ್ರಿಗಳೂ ಆದ ಅಮಿತ್ ಷಾ ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ಕಾರ್ಯಾಚರಣೆ (Coup) ಒಂದು ರಾಜಕೀಯ ಕ್ರೀಡೆ ಎನ್ನುತ್ತಾರೆ. ರಾಜಕೀಯ ಒಂದು ಚದುರಂಗದಾಟ ಎಂದು ಷಾ ಭಾವಿಸಿರುವಂತಿದೆ. ರಾಜಮಹಾರಾಜರ ಕಾಲದಲ್ಲಿ ರಾಜಕೀಯ ಒಂದು ಚದುರಂಗದಾಟ ಆಗಿತ್ತು. ಷಾ ಇನ್ನೂ ರಾಜರ ಕಾಲದಲ್ಲೆ ಇದ್ದಾರೆ. ಮೋದಿ ಮತ್ತು ಷಾ ಜೋಡಿ ಗುಜರಾತಿನಲ್ಲಿ ಮಾಡಿದ್ದೂ ಅದನ್ನೇ. ಅವರು ಆ ಆಟದಲ್ಲಿ ಗೆಲುವು ಸಾಧಿಸಿದ್ದರಿಂದ ಅದೇ ಚದುರಂಗದಾಟದಿಂದ ಹುರುಪುಗೊಂಡು ಎಲ್ಲಾ ರಾಜ್ಯಗಳಿಗೂ ವಿಸ್ತರಿಸಲು ತೊಡಗಿದ್ದಾರೆ.

ಮಹಾರಾಷ್ಟ್ರದಲ್ಲಿ ಈ ಚದುರಂಗದಾಟ ಆಡಲು ಹೋಗಿ ಪ್ರಥಮ ಚುಂಬನದಲ್ಲೇ ದಂತಭಗ್ನ ಮಾಡಿಕೊಂಡಿದ್ದಾರೆ. ಮೋದಿ ಮತ್ತು ಷಾ ಪ್ರಜಾಪ್ರಭುತ್ವದ ವಿರೋಧಿಗಳು, ಅಧಿಕಾರ ಹಿಡಿಯುವ ಅಮಲಿನಲ್ಲಿ ಅವರು ಮಾಡಬಾರದ್ದನ್ನು ಮಾಡುತ್ತಾರೆ. ರಾಜಕೀಯ ತನ್ನ ಪವಿತ್ರತೆಯನ್ನು ಉಳಿಸಿಕೊಳ್ಳಬೇಕು, ರಾಜ್ಯಾಂಗವನ್ನು ಗೌರವಿಸಬೇಕು. ಅದು ಬಿಟ್ಟು ರಾಜಕೀಯ ಅಪಮಾರ್ಗ ಹಿಡಿಯುವುದು ಆತಂಕಕಾರಿ ವಿಷಯ.

ಚುನಾವಣೆ ಒಂದು ಆಟ ಅಲ್ಲ. ಹುಡುಗಾಟ ಅಲ್ಲವೇ ಅಲ್ಲ. ದೇಶದ ಭವಿಷ್ಯವನ್ನು ರೂಪಿಸುವ ಜನಪ್ರತಿನಿಧಿಗಳನ್ನು ಮುತುವರ್ಜಿಯಿಂದ ಆಯ್ಕೆ ಮಾಡುವ ಸಾಧನ ಚುನಾವಣೆ. ಅದು ಹುಡುಗಾಟವಾದರೆ ಗೂಂಡಾಗಳು, ಸಮಯಸಾಧಕರು, ಪಟ್ಟಭದ್ರರು ಸರ್ಕಾರವನ್ನು ಕಬ್ಜಾ ಮಾಡುತ್ತಾರೆ. ಅವರು ಈ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಈಗ ಮಹಾರಾಷ್ಟ್ರದಲ್ಲಿ ಆ ಪ್ರಯೋಗವನ್ನು ಮೋದಿ, ಷಾಗಳು ರೂಪಿಸಿದರು.

ಈ ಸಾರಿಯ ಚುನಾವಣೆಯಲ್ಲಿ, ಬಿಜೆಪಿ ಬಹುಮತ ಪಡೆಯಲಿಲ್ಲ. ಶರದ್ ಪವಾರರ ಎನ್.ಸಿ.ಪಿ., ಶಿವಸೇನೆ ಯಾವುದಕ್ಕೂ ಬಹುಮತ ಬರಲಿಲ್ಲ. ಎಂದಿನಂತೆ ಬಿಜೆಪಿ ಶಿವಸೇನಾ ಜೊತೆ ಸೇರಿಕೊಂಡು ಮಂತ್ರಿಮಂಡಲ ರಚಿಸುವ ನಿರೀಕ್ಷೆ ಇತ್ತು. ಆದರೆ ಶಿವಸೇನೆ ತನಗೆ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿ ಪದವಿ ಬಿಟ್ಟು ಕೊಡಬೇಕೆಂದು ಷರತ್ತು ಹಾಕಿತು. ಬಿಜೆಪಿಯು ಶಿವಸೇನೆಯ ಈ ಡಿಮ್ಯಾಂಡನ್ನು ಒಪ್ಪಿಕೊಳ್ಳಲಿಲ್ಲ. ಆಗ ಶಿವಸೇನಾ, ಎನ್.ಸಿ.ಪಿ ಮತ್ತು ಕಾಂಗ್ರೆಸ್ ಬೆಂಬಲದಿಂದ ಸರ್ಕಾರ ರಚಿಸುವ ಪ್ರಸ್ತಾವನೆಯನ್ನು ಶರದ್ ಪವಾರ್ ಮುಂದೆ ಇಟ್ಟಿತು.

ಶರದ್ ಪವಾರ್, ಶಿವಸೇನೆಯೊಡನೆ ಕೈಜೋಡಿಸಲು ಒಪ್ಪಿ ಕಾಂಗ್ರೆಸ್‍ನ ನೆರವನ್ನು ಪಡೆಯಲು ಮುಂದಾದರು. ಆದರೆ ಕಾಂಗ್ರೆಸ್ಸಿಗೆ, ಶಿವಸೇನೆಯೊಡನೆ ಕೂಡಿಕೊಂಡು ಸರ್ಕಾರ ನಡೆಸುವುದು ಕಷ್ಟಸಾಧ್ಯವೆನಿಸಿತು. ಏಕೆಂದರೆ ಶಿವಸೇನೆ ಬಿಜೆಪಿಯಂತೆಯೇ ಕೋಮುವಾದಿ ಪಕ್ಷ. ಬಿಜೆಪಿ ಜೊತೆಗೆ ಇದ್ದುಕೊಂಡು ಸಮಸ್ಯೆಗಳನ್ನೂ ಸೃಷ್ಟಿಸಿ ಸದಾ ಗುದ್ದಾಡುತ್ತಲೇ ಕಾಲಕಳೆಯುವ ಪಕ್ಷ. ಈ ಪಕ್ಷದೊಡನೆ ಹೊಂದಾಣಿಕೆ ಮಾಡಿಕೊಳ್ಳುವುದು ಅಸಾಧ್ಯ ಎಂಬುದು ಕಾಂಗ್ರೆಸ್ಸಿನ ನಿಲುವು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ಮಹಾರಾಷ್ಟ್ರದಲ್ಲಿ ಅಧಿಕಾರದಿಂದ ದೂರ ಇಡಲು ಇದು ಸದವಕಾಶ ಎಂಬ ದೃಷ್ಟಿಯಿಂದ ಕಾಂಗ್ರೆಸ್ ಶರದ್ ಪವಾರ್ ಜೊತೆಗೂಡಲು ನಿರ್ಧರಿಸಿತು. ಇದನ್ನರಿತ ಮೋದಿ, ಷಾದ್ವಯರು ಎನ್.ಸಿ.ಪಿಯಲ್ಲಿ ಒಂದು ಕ್ಷಿಪ್ರ ಕಾರ್ಯಾಚರಣೆ (Coup) ನಡೆಸಲು ಮುಂದಾದರು.

ಎನ್.ಸಿ.ಪಿಯ ಅಧ್ಯಕ್ಷ ಶರದ್ ಪವಾರ್ ಅವರ ಅಣ್ಣನ ಮಗ ಅಜಿತ್‍ಪವಾರರನ್ನು ಬಳಸಿಕೊಂಡು ಎನ್.ಸಿ.ಪಿಯನ್ನು ಒಡೆಯುವ ಯತ್ನ ನಡೆಯಿತು. ಫಡ್ನವಿಸ್‍ಗೆ ಮುಖ್ಯಮಂತ್ರಿ ಅಜಿತ್ ಪವಾರ್‍ಗೆ ಉಪಮುಖ್ಯಮಂತ್ರಿ ಪದವಿ ನೀಡುವ ಹುನ್ನಾರಕ್ಕೆ ಕೈ ಹಾಕಿತು, ರಾಜಕೀಯ ಒಂದು ಚದುರಂಗದಾಟ ಎನ್ನುವ ಅಮಿತ್ ಷಾ ಈ ‘ಕ್ಷಿಪ್ರ ಕಾರ್ಯಾಚರಣೆ’ಗೆ ಅಧ್ವರ್ಯುವಾಗಿ ನಿಂತರು.

ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್, ಕಾಂಗ್ರೆಸ್ಸಿನೊಡನೆ ಸಂಧಾನ ನಡೆಸುತ್ತಿದ್ದಾಗಲೇ ರಾತ್ರೋರಾತ್ರಿ ರಾಷ್ಟ್ರಾಧ್ಯಕ್ಷರ ಆಡಳಿತ ರದ್ದುಗೊಳಿಸಿ, ಬಿಜೆಪಿಯ ಫಡ್ನವೀಸರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಎಂದೂ ಅಜಿತ್ ಪವಾರರನ್ನು ಉಪಮುಖ್ಯಮಂತ್ರಿಯೆಂದೂ ಹೆಸರಿಸಿ ಅವರಿಗೆ ಬೆಳಗಿನ ಜಾವ ಪಟ್ಟ ಕಟ್ಟಿಯೇ ಬಿಟ್ಟರು. ಈ ಸುದ್ದಿ ತಿಳಿದ ಶರದ್ ಪವಾರ್‍ಗೆ ಶಾಕ್ ಆಯಿತು.

ಶರದ್ ಪವಾರ್ ತಡಮಾಡದೆ ತನ್ನ ಪಕ್ಷದ ಶಾಸಕರನ್ನು ತನ್ನೊಂದಿಗಿಟ್ಟುಕೊಳ್ಳಲು ತೊಡಗಿದರು. ಶಿವಸೇನೆ ಎನ್.ಸಿ.ಪಿ. ಕಾಂಗ್ರೆಸ್ ಒಟ್ಟುಗೂಡಿ ಸರ್ವೋಚ್ಚ ನ್ಯಾಯಾಲಯಕ್ಕೆ ಇದರ ಕುರಿತು ತನಿಖೆ ಮಾಡಲು ಅರ್ಜಿ ಸಲ್ಲಿಸಿದರು. 24 ಗಂಟೆಯೊಳಗೆ ಶಾಸನಸಭೆ ಕರೆದು ತಮಗೆ ಬಹುಮತ ಇದೆಯೆಂದು ಸಾಬೀತು ಮಾಡಬೇಕೆಂದು ನ್ಯಾಯಾಲಯ ತೀರ್ಮಾನಿಸಿತು. ಫಡ್ನವಿಸ್ ತನಗೆ ಬಹುಮತವಿಲ್ಲವೆಂದು ಅರಿತು ಶಾಸನಸಭೆ ಕರೆಯದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಇತ್ತರು.

ಬಿಜೆಪಿಗೆ ಅದರಲ್ಲೂ ಮುಖ್ಯವಾಗಿ ಮೋದಿ ಮತ್ತು ಷಾ ಅವರಿಗೆ ತಮ್ಮ ಆಟ ನಡೆಯದಿದ್ದಕ್ಕೆ ನಿರಾಸೆ ಆಯಿತು. ಅರ್ಥಾತ್ ಷಾ ಮತ್ತು ಮೋದಿಯವರ ಭಾರತೀಯ ಜನತಾ ಪಕ್ಷದ ಮಧ್ಯರಾತ್ರಿಯ ತಂತ್ರಗಾರಿಕೆ ಇಂತಿದೆ. ಕಳೆದ ಭಾನುವಾರ ರಾತ್ರಿ 11.45ಕ್ಕೆ ಬಿಜೆಪಿಯು ಎನ್‍ಸಿಪಿ ಲೀಡರ್ ಅಜಿತ್ ಪವಾರ್ ಜೊತೆಗೆ ಡೀಲ್ ಮಾಡುತ್ತದೆ. 11.55ಕ್ಕೆ ಬಿಜೆಪಿ ನಾಯಕ ಫಡ್ನವೀಸ್ ತನ್ನ ನಾಯಕರಿಗೆ ಬೆಳಗ್ಗೆ ಪ್ರತಿಜ್ಞಾವಿಧಿ ತೆಗೆದುಕೊಳ್ಳುವುದಾಗಿ ಹೇಳುತ್ತಾರೆ. ರಾತ್ರಿ 12.30ಕ್ಕೆ ಗೌರ್ನರ್ ಬಿ.ಎಸ್.ಕೋಶ್ಯಾನಿ ತನ್ನ ಡೆಲ್ಲಿಗೆ ಹೋಗುವ ಪ್ರಯಾಣವನ್ನು ರದ್ದುಗೊಳಿಸುತ್ತಾರೆ.

ಬೆಳಗಿನ ಜಾವ 5.47ಕ್ಕೆ ರಾಷ್ಟ್ರಪತಿ ಆಡಳಿತ ರದ್ದುಗೊಳಿಸುವ ನೋಟಿಫಿಕೇಷನ್ ಜಾರಿಗೊಳಿಸುವಂತೆ ರಾತ್ರಿ 2.10 ರಲ್ಲಿ ಸೂಚನೆ ನೀಡಲಾಗುತ್ತದೆ. ಪ್ರತಿಜ್ಞಾವಿಧಿ ಸ್ವೀಕರಿಸಲು ಬೆಳಗಿನ 7.30ರ ಸಮಯವನ್ನು ನಿಗದಿಮಾಡಿರುವುದಾಗಿ ಕಾರ್ಯದರ್ಶಿ ಬೆಳಗಿನ 2.30ರಲ್ಲಿ ರಾಜ್ಯಪಾಲರಿಗೆ ತಿಳಿಸುತ್ತಾರೆ.

ಫಡ್ನವೀಸ್ ಮತ್ತು ಅಜಿತ್‍ಪವಾರ್ ಬೆಳಗಿನ ಜಾವ 5.30ಕ್ಕೆ ರಾಜಭವನಕ್ಕೆ ಆಗಮಿಸುತ್ತಾರೆ. 5.47ಕ್ಕೆ ಅಧ್ಯಕ್ಷರ ಆಡಳಿತದ ಆಜ್ಞೆಯನ್ನು ಹಿಂಪಡೆಯಲಾಗುತ್ತದೆ. 7.30ಕ್ಕೆ ಫಡ್ನವೀಸ್ ಮುಖ್ಯಮಂತ್ರಿಯಾಗಿ ಅಜಿತ್‍ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸುತ್ತಾರೆ.

ಈ ಎಲ್ಲ ಬೆಳವಣಿಗೆಯನ್ನು ಫಡ್ನವೀಸ್‍ರಿಂದಲೂ ಮುಚ್ಚಿಡಲಾಗಿತ್ತು ದೆಹಲಿಯಲ್ಲೆ ಈ Coup ಜನ್ಮತಳೆದದ್ದು. ಈ ‘ಚಾಣಕ್ಯ ರಾಜಕೀಯ’ ಷಾರವರ ಕೊಡುಗೆ. ಷಾರವರ ಆಪ್ತರೂ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಗಳೂ ಆದ ಭೂಪೇಂದ್ರಯಾದವ್‍ರವರು ಶುಕ್ರವಾರ ರಾತ್ರಿಯೇ ಮುಂಬೈಗೆ ತೆರಳಿ ಈ ಪ್ರಹಸನಕ್ಕೆ ಬೇಕಾದ ಎಲ್ಲಾ ಸಿದ್ಧತೆಯನ್ನು ಮಾಡಿದರು. ಪ್ರಧಾನಿ ಮೋದಿಯವರಿಗೆ ಈ ಹುನ್ನಾರದ ವಿವರಗಳೆಲ್ಲಾ ತಿಳಿದಿತ್ತು.

ಈ ಪ್ಲಾನ್ ಪರಾಭವಗೊಂಡದ್ದರಿಂದ ಮೋದಿ ಮತ್ತು ಷಾರವರು ಇತರ ರಾಜ್ಯಗಳಿಗೂ ಈ ವ್ಯಾಧಿ ಹರಡುವಂತೆ ಮಾಡುವ ಪ್ರಯತ್ನಗಳಿಗೆ ಕಲ್ಲುಬಿದ್ದಂತೆ ಆಗಿದೆ.

ಮಹಾರಾಷ್ಟ್ರದಲ್ಲಿ ಆದ ಈ ಪರಾಭವ, ದೇಶದ ಎಲ್ಲ ಮತದಾರರನ್ನೂ ಬಿಜೆಪಿಯ ನಡವಳಿಕೆಯ ಬಗೆಗೆ ಚಿಂತಿಸುವಂತೆ ಮಾಡಿದೆ. ಮುಂದೆ ನಡೆಯುವ ರಾಜ್ಯಗಳಲ್ಲಿನ ಚುನಾವಣೆಗಳಲ್ಲೂ, 2024ರಲ್ಲಿ ನಡೆಯುವ ಪಾರ್ಲಿಮೆಂಟ್ ಚುನಾವಣೆ ಸಂದರ್ಭದಲ್ಲೂ ಇಂತಹ ಕುತಂತ್ರಿಗಳಿಗೆ ಮತಹಾಕಿ ದೇಶವನ್ನು ಅಧೋಗತಿಗೆ ತರಲು ಸಹಕಾರಿಗಳಾಗಬೇಕೇ ಎಂದು ಚಿಂತಿಸುವ ಹಾಗೆ ಮಾಡಿದೆ.

ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಇಂಗ್ಲೆಂಡಿನ ಮಾಜಿ ಪ್ರಧಾನಿ ಚರ್ಚಿಲ್ ಆಗಿನ ಪ್ರಧಾನಮಂತ್ರಿಯಾಗಿದ್ದ ಲಾರ್ಡ್ ಅಟ್ಲೀ ಅವರಿಗೆ ಹೇಳುವ ಮಾತು ಇದು. ‘ಸ್ಕೌಂಡ್ರಲ್ಸ್ ಮತ್ತು ಥಗ್ಸ್ ಕೈಯಲ್ಲಿ ಭಾರತವನ್ನು ಕೊಟ್ಟು ಬಂದಿದ್ದೀರಿ’ ಎಂದು. ಆದರೆ ಅಂದು ರಾಜಕೀಯದಲ್ಲಿ ಇದ್ದವರು ಸ್ಕೌಂಡ್ರಲ್ಸ್ ಮತ್ತು ಥಗ್ಸ್ ಆಗಿರಲಿಲ್ಲ. ಏನೇ ಕೊರತೆಗಳಿದ್ದರೂ, ಭಾರತವು ಒಂದು ಪ್ರಜಾತಂತ್ರ ದೇಶವಾಗಿ ಸ್ಥಿರಗೊಳ್ಳುತ್ತಾ ಸಾಗಿತ್ತು. ಇಂದಿನ ರಾಜಕೀಯದಲ್ಲಿ ಅಂತಹ ಬದಲಾವಣೆ ಆಗಿದೆಯೆ? ಎಂಬ ಸಂದೇಹ ಮೂಡುತ್ತದೆ. ಅದಕ್ಕೆ ಒಂದು ಕಾರಣ ಮಹಾರಾಷ್ಟ್ರದ ರಾಜಕೀಯದಲ್ಲಿ ಇತ್ತೀಚೆಗೆ ಆಗಿರುವ ರಾಜಕೀಯ ಗೋಲ್ ಮಾಲ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮಹಾರಾಷ್ಟ್ರದಲ್ಲಿ ಮನುವಾದಿಗಳ ಕುತಂತ್ರಕ್ಕೆ ಸೋಲುಂಟಾಗಿರುವುದು ಆಶಾದಾಯಕ ಬೆಳವಣಿಗೆ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...