Homeಅಂತರಾಷ್ಟ್ರೀಯಇಂಗ್ಲೆಂಡ್‌ : ಜನಾಂಗ ದ್ವೇಷದ ವಿರುದ್ಧ ಫುಟ್ಬಾಲ್‌ ಆಟಗಾರರ ಜೊತೆ ನಿಂತ ಜಗತ್ತು

ಇಂಗ್ಲೆಂಡ್‌ : ಜನಾಂಗ ದ್ವೇಷದ ವಿರುದ್ಧ ಫುಟ್ಬಾಲ್‌ ಆಟಗಾರರ ಜೊತೆ ನಿಂತ ಜಗತ್ತು

ನಿಲ್ಲದ ತಾರತಮ್ಯ. ಜನಾಂಗ ದ್ವೇಷದ ದಳ್ಳುರಿಗೆ ಇಂಗ್ಲೆಂಡ್‌ ಆಟಗಾರರು ಗುರಿ. ಯುರೋ ಸೋಲಿಗೆ ಭುಗಿಲೆದ್ದ ಆಕ್ರೋಶ. ಜನಾಂಗ ದ್ವೇಷ ಖಂಡಿಸಿ ಕಪ್ಪು ವರ್ಣೀಯ ಆಟಗಾರರ ಜೊತೆ ನಿಂತ ಜಗತ್ತು.

- Advertisement -
- Advertisement -

ಯುರೋ ಕಪ್ ಸೋಲಿನ ನಂತರ ಜನಾಂಗೀಯ ನಿಂದನೆಯ ದಳ್ಳುರಿಗೆ ಗುರಿಯಾಗಿದ್ದ ಇಂಗ್ಲೆಂಡ್‌ ತಂಡದ ಆಟಗಾರರ ಬೆಂಬಲಕ್ಕೆ ಇಡೀ ಜಗತ್ತು ಒಂದಾಗಿದೆ. ವಿಶ್ವ ಪ್ರಸಿದ್ಧ ಕ್ರೀಡಾಪಟುಗಳು, ಹೋರಾಟಗಾರರು, ರಾಜಕಾರಣಿಗಳು, ಸಿನೆಮಾ ನಟರು ಜನಾಂಗೀಯ ನಿಂದನೆಯ ಅಮಾನವೀಯ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕಳೆದ ವರ್ಷದ ಬ್ಲಾಕ್‌ ಲೈವ್‌ ಮ್ಯಾಟರ್ಸ್‌ ಅಂದೋಲನ ಮತ್ತೆ ಮುನ್ನೆಲೆಗೆ ಬಂದಿದೆ.

ಯುರೊ ಕಪ್‌ ಫುಟ್ಬಾಲ್‌ ಟೂರ್ನಿ ಜುಲೈ 11ಕ್ಕೆ ತೆರೆ ಕಂಡಿದೆ. ಫೈನಲ್‌ನಲ್ಲಿ ಇಟಲಿ ತಂಡ ಇಂಗ್ಲೆಂಡ್‌ ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ರೋಚಕ ಪೆನಾಲ್ಟಿ ಶೂಟೌಟ್‌ನಲ್ಲಿ ಇಂಗ್ಲೆಂಡ್‌ ತನಗೆ ಸಿಕ್ಕ 5 ಅವಕಾಶಗಳಲ್ಲಿ 2 ಸಾರಿ ಮಾತ್ರ ಗೋಲುಗಳಿಸಲು ಯಶಸ್ವಿಯಾಗಿತ್ತು. ಇಂಗ್ಲೆಂಡ್‌ ಸೋಲಿನ ಬೆನ್ನಲ್ಲೇ ವಿವಾದವೊಂದು ಹುಟ್ಟಿಕೊಂಡಿದೆ. ಇಂಗ್ಲೆಂಡ್ ಸೋಲಿಗೆ 22 ಮಾರ್ಕಸ್‌ ರಷ್‌ಫೋರ್ಡ್‌, ಬುಕಾಯೊ ಸಾಕಾ ಮತ್ತು ಜೇಡೆನ್ ಸ್ಯಾಂಚೊ ಅವರನ್ನು ಹೊಣೆಗಾರನನ್ನಾಗಿ ಮಾಡಿ ಜನಾಂಗೀಯ ನಿಂದನೆಯ ಸಂದೇಶಗಳು ಫೇಸ್‌ಬುಕ್‌, ಟ್ವಿಟ್ಟರ್‌ಗಳಲ್ಲಿ ಹರಿದಾಡುತ್ತಿದೆ.

ಫೈನಲ್‌ ಪಂದ್ಯದ ಅಂತಿಮ ಕ್ಷಣದಲ್ಲಿ ಮಾರ್ಕಸ್‌ ರಷ್‌ಫೋರ್ಡ್‌ ಒದ್ದ ಪೆನಾಲ್ಟಿ ಶೂಟೌಟ್‌ ಗೋಲು    ಗೋಲು ಪೆಟ್ಟಿಗೆಯ ಕಂಬಕ್ಕೆ ಬಡಿದು ಹೊರ ನಡೆದಿತ್ತು. ರಷ್‌ಫೋರ್ಡ್‌ ಸೇರಿದಂತೆ ಬುಕಾಯೊ ಸಾಕಾ ಮತ್ತು ಜೇಡೆನ್ ಸ್ಯಾಂಚೊ ಕೂಡ ಗೋಲುಗಳಿಸಲು ಸಾಧ್ಯವಾಗಿರಲಿಲ್ಲ. ಈ ಆಟಗಾರರನ್ನು ಜನಾಂಗೀಯ ಕಾರಣಕ್ಕೆ ಟೀಕಿಸುವ ಸಂದೇಶಗಳು ಇಂಗ್ಲೆಂಡ್‌ ದೇಶದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಮಾರ್ಕಸ್‌ ರಷ್‌ಫೋರ್ಡ್‌, ಬುಕಾಯೊ ಸಾಕಾ ಮತ್ತು ಜೇಡೆನ್ ಸ್ಯಾಂಚೊ

ಇದನ್ನೂ ಓದಿ: ಯುರೋ ಕಪ್‌ ಫೈನಲ್‌: ರೋಚಕ ಪೆನಾಲ್ಟಿ ಶೂಟೌಟ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಇಟಲಿ ತಂಡ

ರಷ್‌ಫೋರ್ಡ್‌ ಗೋಲು ಗಳಿಸಲು ವಿಫಲವಾಗಿದ್ದಕ್ಕೆ ಭಾವನಾತ್ಮಕ ಟ್ವೀಟ್‌ ಮಾಡಿ ಇಂಗ್ಲೆಂಡ್‌ ಜನತೆಯ ಕ್ಷಮೆ ಕೋರಿದ್ದಾರೆ. 55 ವರ್ಷಗಳ ನಂತರ ಫೈನಲ್ ಪ್ರವೇಶ. ಗೆಲುವಿಗೆ ಒಂದು ಪೆನಾಲ್ಟಿ ಗೆಲುವನ್ನು ನಮ್ಮಿಂದ ಕಸಿದುಕೊಂಡಿತು. ಇದಕ್ಕಾಗಿ ಕ್ಷಮೆ ಕೋರುತ್ತೇನೆ” ಎಂದು ರಾಷ್‌ಫೋರ್ಡ್‌ ಟ್ವೀಟ್‌ ಮಾಡಿದ್ದಾರೆ.

ಗೋಲು ಗಳಿಸಲು ವಿಫಲವಾಗಿದ್ದಕ್ಕೆ ವಿಷಾದವಿದೆ. ನಾನು ನಾನಾಗಿರುವುದಕ್ಕೆ ಮತ್ತು ನಾನು ಬಂದಿರುವ ಪ್ರದೇಶದ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ರಾಷ್‌ಫೋರ್ಡ್‌ ತಮ್ಮ ವಿರುದ್ಧ ಕೆಳಿಬರುತ್ತಿರುವ ಜನಾಂಗೀಯ ನಿಂದನೆಗೆ ಭಾವನಾತ್ಮಕ ಸಂದೇಶದ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಧರ್ಮದ ಹೆಸರಿನ ತಾರತಮ್ಯ ಕೂಡಾ ಜನಾಂಗೀಯ ನಿಂದನೆ ಆಗಿದೆ: ಇರ್ಫಾನ್ ಪಠಾಣ್

ಜಗತ್ತಿನ ಸುಪ್ರಸಿದ್ಧ ಕ್ರೀಡಾಪಟುಗಳು ಇಂಗ್ಲೆಂಡ್‌ ಆಟಗಾರರಿಗೆ ಬೆಂಬಲಿಸಿ ಜನಾಂಗೀಯ ನಿಂದನೆಯನ್ನು ಖಂಡಿಸಿದ್ದಾರೆ. ವರ್ಣ ತಾರತಮ್ಯದ ಮನೋಭಾವನೆ ಮನುಷ್ಯತ್ವಕ್ಕೆ ವಿರುದ್ಧವಾದದ್ದು ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಜನಾಂಗೀಯ ನಿಂದನೆಯಿಂದಾಗಿ ಬ್ರಿಟನ್‌ ತಲೆ ತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಜಕುಮಾರ ಪ್ರಿನ್ಸ್‌ ವಿಲಿಯಮ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಬ್ರಿಟನ್ ಅಧ್ಯಕ್ಷ ಬೋರಿಸ್‌ ಜಾನ್ಸನ್‌ ಜನಾಂಗೀಯ ನಿಂದನೆಯನ್ನು ಖಂಡಿಸಿದ್ದು ಬ್ರಿಟನ್ ನೆಲ ಜಗತ್ತಿನ ಎಲ್ಲಾ ಧರ್ಮ, ಜನಾಂಗಗಳನ್ನು ಒಳಗೊಂಡಿದ್ದು ಎಲ್ಲರ ಪರವಾಗಿ ನಿಲ್ಲುತ್ತದೆ. ರಷ್‌ಫೋರ್ಡ್ ವಿರುದ್ಧದ ನಿಂದನೆಯನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಘಟನೆಗಳಿಗೆ ಬ್ರಿಟನ್‌ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಬ್ರಿಟನ್‌ ಗೃಹ ಸಚಿವೆ ಪ್ರೀತಿ ಪಟೇಲ್ ಕೂಡ ಈ ಘಟನೆಯನ್ನು ಖಂಡಿಸಿದ್ದು, ತಾರತಮ್ಯವನ್ನು ಸಹಿಸಲು ಸಾಧ್ಯವಿಲ್ಲವೆಂದಿದ್ದಾರೆ.

ಟೂರ್ನಿಮೆಂಟ್‌ ಆರಂಭದಲ್ಲಿ ತಂಡವನ್ನು ಪ್ರಕಟಿಸಿದಾಗ ಕಪ್ಪು ವರ್ಣೀಯರಿಗೆ ಅವಕಾಶ ನೀಡಿರುವುದು ತೋರಿಕೆಯ ರಾಜಕೀಯ ಎಂದು ನೀವು ಹೇಳಿದ್ದಿರಿ. ಟೂರ್ನಿಯ ಉದ್ದಕ್ಕೂ ಆಟಗಾರರ ವಿರುದ್ಧ ಪ್ರೇಕ್ಷಕರು ನಿಂದಿಸುತ್ತಿದ್ದಾಗ ಪ್ರಧಾನಿಗಳು ಯಾವುದೇ ಖಂಡನೆ ವ್ಯಕ್ತಪಡಿಸಲಿಲ್ಲ. ಎಂದು ಇಂಗ್ಲೆಂಡ್‌ನ ಪ್ರಸಿದ್ಧ ಫುಟ್ಬಾಲ್‌ ಆಟಗಾರ ಬ್ರಿಟನ್‌ ಸರ್ಕಾರದ ಇಬ್ಬಗೆಯ ನೀತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್‌ ಫುಟ್ಬಾಲ್‌ ಅಸೋಸಿಯೇಶನ್‌ ಘಟನೆಯನ್ನು ಖಂಡಿಸಿದ್ದು, ತಾರತಮ್ಯಕ್ಕೆ ಅವಕಾಶವಿಲ್ಲ ಎಂದಿದೆ.

ಈ ಕಷ್ಟದ ಗಳಿಗೆಯಲ್ಲಿ ಇಂಗ್ಲೆಂಡ್‌ ತಂಡ ರಾಷ್‌ಫೋರ್ಡ್‌ ಜೊತೆ ನಿಲ್ಲುತ್ತದೆ. ಇಂಗ್ಲೆಂಡ್‌ ತಂಡ ನಮ್ಮ ಎಲ್ಲಾ ಆಟಗಾರರ ಪರವಾಗಿಯೂ ನಿಲ್ಲುತ್ತದೆ. ಈ ಘಟನೆಯನ್ನು ಕ್ಷಮಿಸಲು ಸಾಧ್ಯವಿಲ್ಲ. ಕ್ರೀಡೆ ಎಲ್ಲರನ್ನು ಒಂದುಗೂಡಿಸುವ ಮಾಧ್ಯಮ. ಇಂಗ್ಲೆಂಡ್‌ ಫುಟ್ಬಾಲ್‌ ತಂಡ ಇದಕ್ಕೆ ಯಾವಾಗಲೂ ಬದ್ಧವಾಗಿರುತ್ತದೆ ಎಂದು ಸೌಥ್‌ಗೇಟ್‌ ಅಂತರ್ಜಾಲ ವಾಹಿನಿಯ ಸಂದರ್ಶನದಲ್ಲಿ ಹೇಳಿದ್ದಾರೆ.

ಫೇಸ್‌ಬುಕ್ ಮತ್ತು ಟ್ವಿಟ್ಟರ್‌ಗಳು ಜನಾಂಗೀಯ ನಿಂದನೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ಡಿಲಿಟ್‌ ಮಾಡುವುದಾಗಿ ಹೇಳಿದ್ದು ಈಗಾಗಲೇ ಸಾವಿರಾರು ಸಂದೇಶಗಳನ್ನು ಟ್ವಿಟ್ಟರ್‌ ಮತ್ತು ಫೇಸ್‌ಬುಕ್‌ಗಳು ಅಳಿಸಿ ಹಾಕಿದ್ದು, ಅಂತಹ ಖಾತೆಗಳನ್ನು ನಿಷ್ಕ್ರಿಯ ಗೊಳಿಸಿವೆ.

– ರಾಜೇಶ್‌ ಹೆಬ್ಬಾರ್‌

ಇದನ್ನೂ ಓದಿ: ಜನಾಂಗೀಯ ತಾರತಮ್ಯದ ಘೋಷಣೆ ಕೂಗುವ ವಿಡಿಯೋ ರಿಟ್ವೀಟ್ ಮಾಡಿದ ಟ್ರಂಪ್!

 

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...