Homeಮುಖಪುಟಇಂದು ವಿಶ್ವ ಗುಬ್ಬಚ್ಚಿ ದಿನ : ನಾವು ಮಾತ್ರ ಆ ಪುಟ್ಟ ಹಕ್ಕಿಯ ಭರವಸೆಗೆ ಮೋಸ...

ಇಂದು ವಿಶ್ವ ಗುಬ್ಬಚ್ಚಿ ದಿನ : ನಾವು ಮಾತ್ರ ಆ ಪುಟ್ಟ ಹಕ್ಕಿಯ ಭರವಸೆಗೆ ಮೋಸ ಮಾಡುತ್ತಿದ್ದೇವೆ.

ಸುಮಾರು ಹತ್ತು ವರ್ಷಗಳ ಹಿಂದೆ ಗುಬ್ಬಚ್ಚಿ ಗೂಡಿರದ ಮನೆಗಳೇ ಇರಲಿಲ್ಲ ಎನ್ನುವಷ್ಟರ ಮಟ್ಟಿಗೆ ಅವುಗಳು ಮಾನವನ ಜೊತೆ ನಿಕಟವಾಗಿ ಬದುಕುತ್ತಿತ್ತು. ಆದರೆ ಇಂದು??

- Advertisement -
- Advertisement -

ಮಾರ್ಚ್ ಇಪ್ಪತ್ತನೇ ದಿನಾಂಕವನ್ನು ವಿಶ್ವ ಗುಬ್ಬಚ್ಚಿಗಳ ದಿನವನ್ನಾಗಿ‌ ಆಚರಿಸಲಾಗುತ್ತದೆ.‌ (World house sparrow day) ಪಕ್ಷಿ ಪ್ರೇಮಿಗಳ ಹೊರತಾಗಿ ಹೆಚ್ಚಿನವರು ಇದರ ಬಗ್ಗೆ ಆಸ್ಥೆ ತೋರುವುದೂ ಇಲ್ಲ.

‌ನಿಸ್ಸಂಶಯವಾಗಿಯೂ ಅತ್ಯಂತ ಕ್ಷಿಪ್ರಗತಿಯಲ್ಲಿ ಅಳಿವಿನಂಚಿಗೆ ಸರಿಯುತ್ತಿರುವ ಪ್ರಮುಖ ಪಕ್ಷಿಗಳಲ್ಲಿ ಗುಬ್ಬಚ್ಚಿ ಪ್ರಮುಖವಾದುದು. ಸಾಮಾನ್ಯವಾಗಿ ಚಿಕ್ಕದಾದ ಶರೀರವಿರುವವರ ಬಗ್ಗೆ ಬರೆಯುವಾಗ
ಗುಬ್ಬಚ್ಚಿ ದೇಹದವನು/ಳು ಎಂಬ ಉಪಮೆ ಬಳಸಲಾಗುತ್ತದೆ. ಅದಕ್ಕೆ ಕಾರಣ ಗುಬ್ಬಚ್ಚಿಯ ಪುಟ್ಟ ದೇಹ.
ಗುಬ್ಬಚ್ಚಿಗಳು ಸಾಮಾನ್ಯವಾಗಿ ಜನರ ನಡುವೆಯೇ ಗೂಡು ಕಟ್ಟುವುದರಿಂದಲೇ ಅವನ್ನು ಮನೆ ಗುಬ್ಬಚ್ಚಿ ಎನ್ನುತ್ತಾರೆ.

ಗುಬ್ಬಚ್ಚಿಗಳನ್ನು ಹುಡುಕಲು ಗುಡ್ಡ, ಬೆಟ್ಟ, ತೋಟ, ಕಾಡು,ಹಳ್ಳಿಗಳಿಗೆ ಹೋಗಬೇಕಾಗಿದ್ದಿರಲಿಲ್ಲ. ಅದು ಅತ್ಯಂತ ಸರಳ ಮತ್ತು ಕಲಾತ್ಮಕ ಗೂಡುಗಳನ್ನು ಹಂಚಿನ ಕಟ್ಟಡದ ಮೇಲ್ಚಾವಣಿಯ ಒಳಭಾಗದ ಪಕ್ಕಾಸು, ರೀಪುಗಳನ್ನು ಆಧಾರವಾಗಿಟ್ಟುಕೊಂಡು ಕಟ್ಟುತ್ತವೆ. ಅವು ಕಸಗಳ ರಾಶಿಯನ್ನೇ ತಂದು ಹಾಕುತ್ತವೆಂದು, ಹಿಕ್ಕೆ ಹಾಕುತ್ತವೆಂದೂ ನಾವೆಲ್ಲಾ ಅವುಗಳನ್ನು ಓಡಿಸುತ್ತೇವೆ. ನಾವೆಷ್ಟೇ ಓಡಿಸಿದರೂ ಅದು ಒಂದು ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದರೆ ಅದು ಅಷ್ಟು ಸುಲಭವಾಗಿ ಆ ಸ್ಥಳವನ್ನು ಬಿಟ್ಟು ಹೋಗುವುದಿಲ್ಲ. ನಾವು ಮತ್ತೆ ಮತ್ತೆ ಅದರ ಗೂಡನ್ನು ಕಿತ್ತೆಸೆದರೆ ಅಪಾಯದ ಮುನ್ಸೂಚನೆಯರಿತು ಅದು ಬೇರೆ ಸ್ಥಳ ಹುಡುಕುತ್ತದೆ.

ಸುಮಾರು ಹತ್ತು ವರ್ಷಗಳ ಹಿಂದೆ ಗುಬ್ಬಚ್ಚಿ ಗೂಡಿರದ ಮನೆಗಳೇ ಇರಲಿಲ್ಲ ಎನ್ನುವಷ್ಟರ ಮಟ್ಟಿಗೆ ಅವುಗಳು ಮಾನವನ ಜೊತೆ ನಿಕಟವಾಗಿ ಬದುಕುತ್ತಿತ್ತು. ಅದು ಮನುಷ್ಯನಿಂದ ತನಗೆ ಮತ್ತು ತನ್ನ ಸಂತಾನಕ್ಕೆ ಅಪಾಯವಿಲ್ಲ ಎಂಬ ಕಾರಣಕ್ಕೂ ಮನುಷ್ಯನ ವಾಸಸ್ಥಾನವನ್ನೇ ಹೆಚ್ಚು ಇಷ್ಟಪಡುತ್ತದೆ. ಆದರೆ ನಾವು ಮಾತ್ರ ಆ ಪುಟ್ಟ ಹಕ್ಕಿಯ ಭರವಸೆಗೆ ಮೋಸ ಮಾಡುತ್ತಿದ್ದೇವೆ.

ಪ್ರಸ್ತುತ ಗುಬ್ಬಚ್ಚಿಗಳ ಸಂತಾನ ಶೀಘ್ರಗತಿಯಲ್ಲಿ ಅಳಿವಿನಂಚಿಗೆ ಸಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಗುಬ್ಬಚ್ಚಿಗಳನ್ನು ಚಿತ್ರದಲ್ಲೋ, ಟಿ.ವಿ.ಪರದೆಯ ಮೇಲೋ ನಮ್ಮ ಮಕ್ಕಳಿಗೆ ತೋರಿಸಬೇಕಾದ ದಿನಗಳು ಬೇಗನೇ ಬರಬಹುದು.

ಸುಮಾರು ಹದಿನೈದಿಪ್ಪತ್ತು ವರ್ಷಗಳ ಹಿಂದೆ ಸಾಮಾನ್ಯರಲ್ಲಿ ಸಾಮಾನ್ಯರಿಗೆ, ಎಳೆಯ ಮಕ್ಕಳಿಗೆಲ್ಲಾ ಗುಬ್ಬಚ್ಚಿಗಳ ಬಗ್ಗೆ ಒಳ್ಳೆಯ ತಿಳುವಳಿಕೆ ಇತ್ತು. ಇಂದು ಗುಬ್ಬಚ್ಚಿಗಳ ಬಗ್ಗೆ ಪಕ್ಷಿ ಶಾಸ್ತ್ರಜ್ಞರು, ಪರಿಸರ ತಜ್ಞರು ಮಾತ್ರ ಅಧಿಕೃತವಾಗಿ ಮಾತನಾಡಬಲ್ಲರೇನೋ ಎಂಬಷ್ಟರ ಮಟ್ಟಿಗೆ ಅದರ ಸಂತತಿಯೂ ವಿರಳವಾಗುತ್ತಿದೆ ಮತ್ತು ಸ್ವತಃ ಅದೂ ಮಾನವನಿಂದ ದೂರವಾಗುತ್ತಿದೆ.

ಗುಬ್ಬಚ್ಚಿ, ಪಾರಿವಾಳ, ಕಾಗೆಗಳ ಹೊರತಾದ ಹೆಚ್ಚಿನೆಲ್ಲಾ ಪಕ್ಷಿಗಳ ಜೀವನ ಶೈಲಿಯ ಬಗ್ಗೆ ಆಳವಾದ ಮಾಹಿತಿಯಿರುವುದು ಪಕ್ಷಿ ತಜ್ಞರಿಗೆ ಮತ್ತು ಕಾಡುಗಳಲ್ಲಿ ವಾಸಿಸುವ ಬುಡಕಟ್ಟು ಜನರಿಗೆ ಮಾತ್ರ. ಆದರೆ ಗುಬ್ಬಚ್ಚಿಯ ಜೀವನ ಶೈಲಿ, ಮೊಟ್ಟೆ ಇಡುವ ಸಮಯ ಮತ್ತು ಕ್ರಮ, ಮೊಟ್ಟೆಗೆ ಕಾವು ಕೊಡಲು ಬೇಕಾಗುವ ಸಮಯ, ಅವುಗಳ ಆಹಾರ, ಗೂಡು ಕಟ್ಟುವ ಕ್ರಮ ಇತ್ಯಾದಿಗಳ ಬಗೆಗೆಲ್ಲಾ ನಮ್ಮ ಹಿರಿಯರು ಅಧಿಕೃತವಾಗಿ ಮಾತನಾಡಬಲ್ಲಷ್ಟು ಮಾಹಿತಿ ಕೊಡುತ್ತಿದ್ದರು.ಅಷ್ಟರ ಮಟ್ಟಿಗೆ ಗುಬ್ಬಚ್ಚಿಗಳು ಮನುಷ್ಯರೊಂದಿಗೆ ನಿಕಟ ಸಂಪರ್ಕ ಹೊಂದಿತ್ತು.

ಯಾವುದೇ ವೈವಿಧ್ಯಮಯ ಪಕ್ಷಿ ಸಂಕುಲವನ್ನು ನೋಡಬೇಕಾದರೆ ಹಳ್ಳಿಗಳಿಗೆ ಹೋಗಬೇಕಾಗುತ್ತದೆ. ಬೆಟ್ಟ, ಗುಡ್ಡ, ತೋಟ, ಕಾಡು ಮುಂತಾದ ಹಸಿರಾಗಿರುವ ಪ್ರಕೃತಿಯ ಮಡಿಲನ್ನೇ ಹೆಚ್ಚಿನ ಪಕ್ಷಿ ಸಂಕುಲ ಆಯ್ದುಕೊಳ್ಳುತ್ತವೆ. ಆದರೆ ಗುಬ್ಬಚ್ಚಿ ಮಾತ್ರ ಸರ್ವವ್ಯಾಪಿ. ಅವು ನಗರ,ಪಟ್ಟಣ, ಹಳ್ಳಿಗಳ ಗಡಿಗಳಿಲ್ಲದೇ ಎಲ್ಲೆಂದರಲ್ಲಿ ಕಾಣಸಿಗುತ್ತಿತ್ತು. ಗುಬ್ಬಚ್ಚಿ ಸಂತತಿ ವಿನಾಶದಂಚಿಗೆ ಸರಿದುದರ ಹಿಂದಿನ ಕಾರಣಗಳನ್ನು ಪಕ್ಷಿ-ಪರಿಸರ ತಜ್ಞರಷ್ಟೇ ಕರಾರುವಾಕ್ಕಾಗಿ ನಮ್ಮ ಹಿರಿಯರೂ ನೀಡಬಲ್ಲರು. ಅದಕ್ಕೆ ಕಾರಣ ಗುಬ್ಬಚ್ಚಿ ಮತ್ತು ಮನುಷ್ಯನ ನಿಕಟತೆ.

ಕಾರಣಗಳು 

ಹೆಂಚಿನ ಮನೆ-ಕಟ್ಟಡಗಳು ಕಡಿಮೆಯಾಗಿ ಆರ್.ಸಿ.ಸಿ. ಕಟ್ಟಡಗಳು ಹೆಚ್ಚಿದ್ದರಿಂದ ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು ಅನನುಕೂಲವುಂಟಾಗಿದೆ. ಆರ್.ಸಿ.ಸಿ. ಮನೆಗಳಲ್ಲಿ ಪಕ್ಕಾಸು, ರೀಪುಗಳು ಇಲ್ಲದ್ದರಿಂದ ಅವುಗಳಲ್ಲಿ ಗೂಡು ಕಟ್ಟಲು ಆಧಾರಗಳಿಲ್ಲ.

-ಹೆಂಚಿನ ಮನೆಗಳಲ್ಲಾದರೂ ಹದಿನೈದಿಪ್ಪತ್ತು ವರ್ಷಗಳ ಹಿಂದೆ ಇಂದಿನಂತೆ ಫ್ಯಾನ್‌ಗಳ ಬಳಕೆ ವ್ಯಾಪಕವಾಗಿರಲಿಲ್ಲ. ಗುಬ್ಬಚ್ಚಿ ಸದಾ ಚಟುವಟಿಕೆಯಲ್ಲಿರುವ ಪಕ್ಷಿಯಾದ್ದರಿಂದ ಒಂದೇ ಕಡೆ ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಸಹಜ ಸ್ವಭಾವದಂತೆ ಆಚೀಚೆ ಹಾರಾಡುತ್ತಿರುತ್ತದೆ. ಫ್ಯಾನ್‌ಗಳು ಚಾಲೂ ಇದ್ದಾಗೆಲ್ಲಾ ಫ್ಯಾನ್ ರೆಕ್ಕೆಗಳಿಗೆ ಸಿಕ್ಕಿ ಗುಬ್ಬಚ್ಚಿಗಳು ಸಾಯುವುದು ಹೆಚ್ಚಾಯಿತು.

-ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು ಬೇಕಾಗುವ ಅನುಕೂಲತೆಗಳು ಕ್ಷೀಣಿಸಿದುದರ ಪರಿಣಾಮ ಅವುಗಳ ಮೊಟ್ಟೆಗಳು ನಾಶವಾಗಿ ಗುಬ್ಬಚ್ಚಿ ಸಂತಾನ ಕ್ಷೀಣಿಸಲಾರಂಭವಾಯಿತು.

-ಮಾನವ ಪರಿಸರದಲ್ಲಿರುವ ಗುಬ್ಬಚ್ಚಿ ಗೂಡುಗಳ ಮೇಲೆ ಮಾನವನ ಕ್ರೌರ್ಯದಿಂದ ಮೊಟ್ಟೆಗಳು ನಾಶಗೊಂಡು ಸಂತತಿ ಕ್ಷೀಣಿಸುತ್ತಿದೆ.

-ಮೊಬೈಲ್ ಫೋನ್ ಬಳಕೆ ವ್ಯಾಪಕವಾದುದರ ಪರಿಣಾಮ ನೆಟ್‌ವರ್ಕ್ ಕವರೇಜ್‌ಗಾಗಿ ಹಳ್ಳಿ ಹಳ್ಳಿಗಳಲ್ಲೂ, ಅರಣ್ಯ ಪ್ರದೇಶಗಳ ಮಧ್ಯೆಯೂ ಮೊಬೈಲ್ ಗೋಪುರಗಳು ಹೆಚ್ಚಾಗುತ್ತಾ ಅದರ ಪರಿಣಾಮ ಗುಬ್ಬಚ್ಚಿ ಸಂತತಿಗಳ ಮೇಲೆ ಬೀರುತ್ತಿದೆ. ಒಟ್ಟಿನಲ್ಲಿ ಹೆಚ್ಚುತ್ತಿರುವ ಸೂಕ್ಷ್ಮ ತರಂಗ ಗೋಪುರಗಳು ಗುಬ್ಬಚ್ಚಿ ಸಂತಾನಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿದೆ.

-ಗುಬ್ಬಚ್ಚಿಗಳ ಮುಖ್ಯ ಆಹಾರ ಹೊಲಗದ್ದೆಗಳಲ್ಲಿರುವ ಚಿಕ್ಕ ಪುಟ್ಟ ಕ್ರಿಮಿ ಕೀಟಗಳು ಮತ್ತು ಕಾಳುಗಳು. ಹೊಲಗದ್ದೆಗಳು ಕಡಿಮೆಯಾಗುತ್ತಾ ಅವುಗಳ ಆಹಾರ ಮೂಲಗಳ ಮೇಲೂ ಪರಿಣಾಮವುಂಟಾಯಿತು.

– ಗುಬ್ಬಚ್ಚಿಗಳು ತಮ್ಮ ಆಹಾರವನ್ನು ಹೊಲಗದ್ದೆಗಳಲ್ಲಿ ಹುಡುಕುವುದರಿಂದ ಹೊಲಗದ್ದೆಗಳಿಗೆ ಸಿಂಪಡಿಸುವ ಕ್ರಿಮಿ, ಕೀಟ ನಾಶಕಗಳು ಗುಬ್ಬಚ್ಚಿಗಳ ಪ್ರಾಣಕ್ಕೂ ಎರವಾಗುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...