Homeಕರ್ನಾಟಕಮೋದಿ-ಶಾರನ್ನು ಬಗ್ಗಿಸಿ ಸಿಎಂ ಆದ ಮೊದಲ ವ್ಯಕ್ತಿ ಯಡಿಯೂರಪ್ಪ

ಮೋದಿ-ಶಾರನ್ನು ಬಗ್ಗಿಸಿ ಸಿಎಂ ಆದ ಮೊದಲ ವ್ಯಕ್ತಿ ಯಡಿಯೂರಪ್ಪ

- Advertisement -
- Advertisement -

ಜುಲೈ 23ರ ಮಂಗಳವಾರ ರಾತ್ರಿ ಎಚ್.ಡಿ ಕುಮಾರಸ್ವಾಮಿ ವಿಶ್ವಾಸಮತ ಸೋತಕೂಡಲೇ ಯಡಿಯೂರಪ್ಪ ನಾಳೆಯಿಂದ ಅಭಿವೃದ್ದಿಪರ್ವ ಎಂದು ಹೇಳಿಕೆ ಕೊಟ್ಟರು. ಅಂದರೆ ನಾಳೆಯೇ ನಾವು ಸರ್ಕಾರ ರಚಿಸುತ್ತೇವೆ ಎಂಬ ಆತ್ಮ ವಿಶ್ವಾಸ ಅವರದ್ದಾಗಿತ್ತು. ಆದರೆ ಜುಲೈ 23ರ ಬುಧವಾರ ಅಂತಹ ಯಾವುದೇ ಘಟನೆಗಳು ನಡೆಯಲಿಲ್ಲ.

ಅಂದರೆ ಸರ್ಕಾರ ರಚನೆಗೆ, ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವುದಕ್ಕೆ ಹೈಕಮಾಂಡ್ ತಡೆವೊಡ್ಡಿತ್ತು. ತಾನು ಮುಖ್ಯಮಂತ್ರಿ ಆಗಿಯೇ ತೀರಬೇಕು ತಾಳ್ಮೆಯಿಂದ ಕಾಯುತ್ತಿದ್ದ ಯಡಿಯೂರಪ್ಪನವರಿಗೆ ಇದು ಪ್ರತಿಕ್ಷಣವೂ ತಾಳಲಾರದ ನೋವಾಗಿತ್ತು. ಕಷ್ಟಪಟ್ಟು ಮೈತ್ರಿ ಸರ್ಕಾರ ಉರುಳಿಸಿದರೂ ತನಗೆ ಹೈಕಮಾಂಡ್ ಪಟ್ಟ ಕಟ್ಟಲು ಹಿಂದೇಟು ಹಾಕುತ್ತಿರುವುದು ಅವರಿಗೆ ಸಿಟ್ಟು ತರಿಸಿತ್ತು.
ಈ ನಡುವೆ ಪೂರ್ಣ ಬಹುಮತ ಇಲ್ಲದ ಕಾರಣಕ್ಕೆ ಈಗಲೇ ಸರ್ಕಾರ ರಚಿಸುವುದು ಬೇಡ, ರಾಷ್ಟ್ರಪತಿ ಆಡಳಿತ ತರೋಣ ಎಂಬ ಚರ್ಚೆಗಳು ಶುರುವಾದವು. ಇದಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮುಖ್ಯ ಕಾರಣರಾಗಿದ್ದರು ಎಂದು ಹೇಳಲಾಗುತ್ತಿತ್ತು.

ನಂತರ ಯಡಿಯೂರಪ್ಪ ಕೋಪಿಸಿಕೊಂಡು ಒಂದು ತಂಡವನ್ನು ದೆಹಲಿಗೆ ಕಳಿಸಿದರು. ಅಮಿತ್ ಶಾರನ್ನು ಭೇಟಿಯಾಗುವುದು ಈ ನಿಯೋಗದ ಕೆಲಸವಾಗಿತ್ತು. ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಮಾಧುಸ್ವಾಮಿ, ವಿಜಯೇಂದ್ರ ಇಷ್ಟು ಜನ ನಿಯೋಗದಲ್ಲಿದ್ದರು. ಅಂದು ಬೆಳಿಗ್ಗೆ ಲೋಕಸಭೆಗೆ ಹೊರಡುವ ಮುನ್ನ ನಿಯೋಗವನ್ನು ಭೇಟಿ ಮಾಡಿದ ಅಮಿತ್ ಶಾ ಯಾವುದೇ ತೀರ್ಮಾನ ತೆಗೆದುಕೊಳ್ಳದೇ ಸಂಜೆ ಬರುತ್ತೇನೆ ಕಾಯಿರಿ ಎಂದು ಹೇಳಿಹೋದವರು ಸಂಜೆ ಬರಲೇ ಇಲ್ಲ.

ಅಂದು ಸಂಜೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಸಭೆ ಸೇರಿ ಅತೃಪ್ತರನ್ನು ಮನವೊಲಿಸುವ ಅಂತಿಮ ಪ್ರಯತ್ನ ಮಾಡುವ ನಿರ್ಣಯವಾಯಿತು. ಆ ಪ್ರಕಾರ ಈಶ್ವರ್ ಖಂಡ್ರೆ ಅತೃಪ್ತರನ್ನು ಭೇಟಿಯಾಗಲು ಅವರು ಪೂನಾದಲ್ಲಿದ್ದಾರೆ ಎಂಬ ಮಾಹಿತಿಯ ಮೇರೆಗೆ ಪೂನಾಗೆ ಹೊರಟರೆ, ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದ್ದ ಅತೃಪ್ತ ಶಾಸಕರನ್ನು ಭೇಟಿ ಮಾಡಿ, ಅವರು ಕೇಸ್ ವಾಪಸ್ ಪಡೆದರೆ ಹೇಗೆ ಎಂದು ಚರ್ಚಿಸುವ ಉದ್ದೇಶದಿಂದ ಡಿ.ಕೆ ಶಿವಕುಮಾರ್ ದೆಹಲಿಗೆ ಹೊರಟರು.

ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್, ಎಂಟಿಬಿ ನಾಗರಾಜ್, ಸುಧಾಕರ್ ಮತ್ತು ಗೋಪಾಲಯ್ಯ ಮತ್ತೆ ವಾಪಸ್ ಮೈತ್ರಿ ಸರ್ಕಾರಕ್ಕೆ ಬರಲು ರೆಡಿ ಇದ್ದಾರೆ ಎನ್ನುವ ಮಾಹಿತಿ ಓಡಾಡಿತು. ಅತೃಪ್ತರ ಪೈಕಿ ಈ ಆರು ಜನರ ಮೇಲೆಯೇ ಬಿಜೆಪಿಗೂ ಡೌಟ್ ಇತ್ತು. ಇವರಲ್ಲಿ ಸುಧಾಕರ್ ಮತ್ತು ಗೋಪಾಲಯ್ಯ ಹಿಂದೆಯೂ ತಮ್ಮ ಪಕ್ಷಗಳ ವಿರುದ್ಧ ಮಾತಾಡಿದ್ದರು. ಉಳಿದ ನಾಲ್ಕು ಜನ ರಾಜೀನಾಮೆ ನೀಡಬಹುದು ಎಂಬ ನಿರೀಕ್ಷೆ ಮೊದಲು ಬಿಜೆಪಿಗೇ ಇರಲಿಲ್ಲ ಇಷ್ಟು ಜನ ಶಾಸಕರಿಗೆ ಕಾಂಗ್ರೆಸ್ ಒಂದು ಆಫರ್ ಸಹ ನೀಡಿತ್ತು. ಅದು ಡಿ.ಕೆ.ಶಿವಕುಮಾರ್ ಅಥವಾ ರಾಮಲಿಂಗಾರೆಡ್ಡಿ ಸಿಎಂ ಆಗುತ್ತಾರೆ ಎನ್ನುವ ಆಫರ್ ಅದಾಗಿತ್ತು. ಇದಕ್ಕೆ ಕೆಲವರಿಗೆ ಸಹಮತ ಸಹ ಇತ್ತು ಎನ್ನಲಾಗುತ್ತಿತ್ತು. ಈ ಸಂದರ್ಭದಲ್ಲಿ ಯಡಿಯೂರಪ್ಪ ಎಚ್ಚೆತ್ತುಕೊಂಡರು.

ಗುರುವಾರ ರಾತ್ರಿ ಅತೃಪ್ತರ ಜೊತೆ ಮಾತನಾಡಿದ ಯಡಿಯೂರಪ್ಪ ಒಂದು ಹೊಸ ದಾಳ ಉರುಳಿಸಿದರು. ಅತೃಪ್ತರ ಹತ್ತಿರ ‘ಸ್ಪೀಕರ್ ನಮ್ಮನ್ನು ಯಾವಾಗ ಅನರ್ಹಗೊಳಿಸುತ್ತಾರೆ ಹೇಳಲಿಕ್ಕೆ ಬರುವುದಿಲ್ಲ. ಹಾಗಾಗಿ ಅದಕ್ಕೂ ಮುಂಚೆ ಹೊಸ ಸರ್ಕಾರ ರಚಿಸಿಬಿಡಬೇಕು, ಇಲ್ಲದಿದ್ದರೆ ನಮ್ಮ ಪಾಡನ್ನು ನಾವು ನೋಡಿಕೊಳ್ಳುತ್ತೇವೆ’ ಎಂದು ಹೇಳಿಸಿದರು. ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಯಡಿಯೂರಪ್ಪನವರ ಪರವಾದ ನಿಯೋಗ ಜೆ.ಪಿ ನಡ್ಡಾ ಮನೆಗೆ ಹೋಯಿತು. ಶೆಟ್ಟರ್ ಮೂಲಕ ಅತೃಪ್ತ ಶಾಸಕರು ಜೆ.ಪಿ ನಡ್ಡಾರನ್ನು ಬ್ಲಾಕ್‍ಮೇಲ್ ಮಾಡಿದರು. ನಾಳೆ ಬೆಳಿಗ್ಗೆ ಒಳಗೆ ಯಡಿಯೂರಪ್ಪನವರು ಸಿಎಂ ಆಗಿಬಿಡಬೇಕು ಇಲ್ಲದಿದ್ದರೆ ನಾವು ವಾಪಸ್ ಹೋಗುತ್ತೇವೆ ಎಂದು ಬೆದರಿಕೆ ಹಾಕಿದರು.
ತದನಂತರವಷ್ಟೇ ಹೆದರಿದ ಬಿಜೆಪಿ ಹೈಕಮಾಂಡ್ ಶುಕ್ರವಾರ ಮಧ್ಯಾಹ್ನದ ವೇಳೆಗೆ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಘೋಷಿಸಬೇಕಾಯ್ತು. ಅಂದರೆ ಮೊದಲ ಬಾರಿಗೆ ಹೈಕಮಾಂಡ್ ಅನ್ನು ಬಗ್ಗಿಸಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು.

ಕ್ಯಾಬಿನೆಟ್ ವಿಸ್ತರಣೆ ಮಾತ್ರ ಹೈಕಮಾಂಡ್ ಕೈಯಲ್ಲಿದೆ.

ಇದುವರೆಗೂ ಮೋದಿ-ಅಮಿತ್ ಶಾರನ್ನು ಬಗ್ಗಿಸಿ ಸಿಎಂ ಆದವರು ಯಾರು ಇರಲಿಲ್ಲ. ಮಾಸ್ ಫಾಲೋವರ್ಸ್ ಇಲ್ಲದವರನ್ನು ಮೋದಿ ಅಮಿತ್ ಶಾ ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದರು. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್, ಗುಜರಾತಿನಲ್ಲಿ ವಿಜಯ್ ರೂಪಾಣಿ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್, ಜಾರ್ಖಂಡ್‍ನಲ್ಲಿ ಆದಿವಾಸಿಯಲ್ಲದವರು ಸಿಎಂ, ಹರಿಯಾಣದಲ್ಲಿ ಪಂಜಾಬ್‍ನ ವ್ಯಕ್ತಿಯೊಬ್ಬನನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಿತ್ತು, ಆದರೆ ಈಗ ಯಡಿಯೂರಪ್ಪ ಮಾತ್ರ ಅದಕ್ಕೆ ಬಗ್ಗಿಲ್ಲ.

ಪ್ರಾದೇಶಿಕವಾಗಿ ಪ್ರಬಲ ಮಾಸ್ ಲೀಡರ್ ಇರಬಾರದು ಎಂಬುದು ಸಾಮಾನ್ಯವಾಗಿ ದೆಹಲಿ ನಾಯಕರುಗಳ ಇರಾದೆಯಾಗಿರುತ್ತದೆ. ಈ ಸದ್ಯ ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ಕಾಂಗ್ರೆಸ್ ಸರ್ಕಾರಗಳನ್ನು ಉರುಳಿಸುವುದು ಬಿಜೆಪಿಗೆ ಕಷ್ಟವೇನಲ್ಲ. ಅದರಲ್ಲೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಸರಳ ಬಹುಮತವೂ ಇಲ್ಲ. ಆದರೆ, ಇಂತಹ ಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ, ಪ್ರಾದೇಶಿಕವಾಗಿ ಪ್ರಬಲವಾಗಿರುವ ನರೇಂದ್ರ ಮೋದಿ ಮತ್ತು ಅಮಿತ್‍ಶಾ ಸಮಕಾಲೀನರಾಗಿರುವ ಶಿವರಾಜ್ ಚೌಹಾಣ್ ಮತ್ತು ವಸುಂದರರಾಜೇ ಸಿಂಧಿಯಾ ಅವರನ್ನೇ ಸಿಎಂಗಳನ್ನಾಗಿಸಬೇಕಾಗುತ್ತದೆ. ಅದು ಬೇಡ ಎಂಬ ಕಾರಣಕ್ಕೂ ಅಲ್ಲಿ ಸರ್ಕಾರ ಉರುಳಿಸುವ ಕೆಲಸಕ್ಕೆ ಕೈ ಹಾಕುತ್ತಿಲ್ಲ.

ಕರ್ನಾಟಕದಲ್ಲಿ ಯಡಿಯೂರಪ್ಪನವರು ಅಷ್ಟು ಕಾಯಲು ಸಿದ್ಧರಿಲ್ಲ. ಜೊತೆಗೆ ದಕ್ಷಿಣ ಭಾರತದ ಒಂದು ರಾಜ್ಯದಲ್ಲಾದರೂ ಸರ್ಕಾರ ಇರುವುದು ಬಿಜೆಪಿಗೂ ಬೇಕು. ಹೀಗಾಗಿ ಕರ್ನಾಟಕ ಸರ್ಕಾರ ಉರುಳಿಸಿ ಚುನಾವಣೆಗೆ ಹೋಗೋಣ ಎಂಬ ಬಗ್ಗೆ ದೆಹಲಿ ನಾಯಕರು ಯೋಚಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಅತೃಪ್ತರ ಮೂಲಕ ಯಡಿಯೂರಪ್ಪನವರು ಒಂದು ಷಾಕ್ ಟ್ರೀಟ್‍ಮೆಂಟ್ ಕೊಟ್ಟಿದ್ದಲ್ಲದೇ ಇನ್ನೂ ಖಚಿತವಾದ ಸಂದೇಶವನ್ನೂ ನೀಡಿದರು ಎನ್ನಲಾಗುತ್ತದೆ.

ಅಲ್ಲಿಂದಾಚೆಗೆ ಅಮಿತ್ ಶಾಗೆ ಹೆಚ್ಚಿನ ಸಾಧ್ಯತೆಗಳಿರಲಿಲ್ಲ. ಗವರ್ನರ್ ಮತ್ತು ಯಡಿಯೂರಪ್ಪ ಇಬ್ಬರಿಗೂ ಗೋ ಅಹೆಡ್ ಎಂಬ ಸೂಚನೆಯನ್ನು ರವಾನಿಸಿದರು. ಆದರೆ, ಅಲ್ಲಿಂದ ಮುಂದಕ್ಕೆ ಎಲ್ಲಾ ವಿಚಾರಗಳೂ ಯಡಿಯೂರಪ್ಪ ಹೇಳಿದಂತೆ ನಡೆಯಲು ಬಿಡಬಾರದು ಅಂತಲೂ ತೀರ್ಮಾನಿಸಿದರು. ಹಾಗಾಗಿಯೇ ಯಡ್ಡಿ ಒಬ್ಬರನ್ನೇ ಪ್ರಮಾಣವಚನ ಸ್ವೀಕರಿಸಲು ಹೇಳಿದರು. ಸ್ಪೀಕರ್ ರಮೇಶ್‍ಕುಮಾರ್ ರಾಜೀನಾಮೆ ನೀಡಿದ ನಂತರ, ಆ ಸ್ಥಾನಕ್ಕೆ ಬೋಪಯ್ಯನವರನ್ನು ತರಬೇಕು ಎಂಬ ಯಡಿಯೂರಪ್ಪನವರ ಇರಾದೆಗೂ ಸೊಪ್ಪು ಹಾಕಲಿಲ್ಲ. ಸಂಘಪರಿವಾರಕ್ಕೆ ನಿಷ್ಠರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಯಡಿಯೂರಪ್ಪನವರ ಆಯ್ಕೆಯಾಗಿರಲಿಲ್ಲ.

ಹೊಸ ಮುಖ್ಯಮಂತ್ರಿಗೆ ಇನ್ನು ಮುಂದೆ ಅಡಿಗಡಿಗೂ ತೊಡಕುಂಟಾಗಲಿರುವುದು ವಿರೋಧ ಪಕ್ಷಗಳಲ್ಲ. ಬದಲಿಗೆ ಬಿಜೆಪಿ ಹೈಕಮಾಂಡ್ ಮತ್ತು ಅದರ ದಾಳಗಳಾಗಿ ಕರ್ನಾಟಕದಲ್ಲಿ ಬಳಕೆಯಾಗಲಿರುವ ಬಿಜೆಪಿ ನಾಯಕರುಗಳು. ಇದನ್ನು ಬಲ್ಲ ಯಡ್ಡಿ, ಅಗತ್ಯಕ್ಕಿಂತಲೂ ಹೆಚ್ಚೇ ವಿರೋಧ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುವ ಮಾತುಗಳನ್ನು ವಿಶ್ವಾಸಮತಯಾಚನೆಯ ಸಂದರ್ಭದಲ್ಲಿ ಆಡಿದರು. ದ್ವೇಷದ ಕ್ರಮಗಳಿಗೆ ತಾನು ಮುಂದಾಗುವುದಿಲ್ಲ ಎಂತಲೂ ಹೇಳಿದರು.

ಆದರೆ ಅವರು ತೆಗೆದುಕೊಳ್ಳುತ್ತಿರುವ ಕ್ರಮಗಳು ಮಾತ್ರ ವಿರೋಧ ಪಕ್ಷಗಳ ಹಿತಾಸಕ್ತಿಗಳನ್ನು ಸಿಟ್ಟಿಗೇಳಿಸುವ ರೀತಿಯೇ ಇದೆ. ಇನ್ನೂ ನಿಯೋಜಿತ ಮುಖ್ಯಮಂತ್ರಿಯಾಗಿದ್ದಾಗಲೇ, ಹಿಂದಿನ ಸರ್ಕಾರದ ಆದೇಶಗಳನ್ನು ಪೆಂಡಿಂಗ್ ಇರಿಸಿದರು; ಕುಮಾರಸ್ವಾಮಿಯವರ ಬಜೆಟ್‍ಗೆ ಮೂರು ತಿಂಗಳ ಲೇಖಾನುದಾನ ಮಾತ್ರ ಪಡೆದುಕೊಂಡು, ಇನ್ನೊಂದು ಬಜೆಟ್ ಮಂಡಿಸುವ ಸುಳಿವು ನೀಡಿದ್ದಾರೆ. ಇನ್ನೂ ಸಚಿವ ಸಂಪುಟ ರಚನೆಯಾಗುವ ಮೊದಲೇ, ಸಚಿವ ಸಂಪುಟದ ತೀರ್ಮಾನವಾಗಿ ಟಿಪ್ಪು ಜಯಂತಿಯನ್ನು ರದ್ದು ಮಾಡಿದ್ದಾರೆ. ಕೆಜೆಪಿಗೆ ಹೋದಾಗ ಟಿಪ್ಪು ಟೋಪಿಯನ್ನು ಹಾಕಿಕೊಂಡು, ಖಡ್ಗ ಹಿಡಿದುಕೊಂಡು ಮಿಂಚಿದ್ದ ಯಡಿಯೂರಪ್ಪನವರ ಮೇಲೆ ಬಿಜೆಪಿಯ ಬೇರೆ ಶಕ್ತಿಗಳ ಒತ್ತಡದ ಪರಿಣಾಮವೂ ಇವಾಗಿರುವ ಸಾಧ್ಯತೆ ಇದೆ.

ಈ ಸಾರಿ ಆಪರೇಷನ್ ಮಾಡಿದ್ದು ಯಡ್ಡಿಯೇ
ಸ್ಥಳೀಯ ಬಿಜೆಪಿಗೆ ಗೊತ್ತಿಲ್ಲದೆಯೇ ಡೀಲ್ ನಡೆದಿದೆಯಂತೆ, ಹೈಕಮಾಂಡೇ ಎಲ್ಲರನ್ನೂ ಸಂಪರ್ಕಿಸಿ ಬುಟ್ಟಿಗೆ ಹಾಕಿಕೊಂಡಿದೆಯಂತೆ ಎಂಬ ವದಂತಿಗಳು ಸಾಕಷ್ಟು ಹರಿದಾಡಿದ್ದವು. ಆದರೆ ಇದು ಯಡಿಯೂರಪ್ಪ ಮತ್ತು ಹೈಕಮಾಂಡ್ ಜೊತೆ ಸೇರಿ ನಡೆಸಿದ ಆಪರೇಷನ್ ಆಗಿತ್ತು. ಅರವಿಂದ ಲಿಂಬಾವಳಿ, ಯಡ್ಡಿ ಪಿ.ಎ. ಸಂತೋಷ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಯೋಗೇಶ್ವರ್ ಮತ್ತು ಆರ್.ಅಶೋಕ್ ಅವರುಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಫೈನಾನ್ಸ್ ಡೀಲ್ ಮಾಡಿದ್ದು ಪಿಯೂಷ್ ಗೋಯೆಲ್ ಎಂದು ಬಿಜೆಪಿ ಮೂಲಗಳು ಹೇಳುತ್ತವೆ.

ಹೈಕಮಾಂಡ್ ನೇರವಾಗಿ ಇಳಿದು ಕಾರ್ಯಾಚರಣೆ ನಡೆಸಲಾರಂಭಿಸಿದ್ದು, ರಾಜೀನಾಮೆಗಳ ನಂತರವೇ. ರಾಜೀನಾಮೆಯ ನಂತರ ಮಹಾರಾಷ್ಟ್ರಕ್ಕೆ ಬರುವುದು ಮತ್ತು ಅಲ್ಲಿ ಬೇಕಾದ ರಕ್ಷಣೆಯ ವ್ಯವಸ್ಥೆಯನ್ನು ಮಾಡಿದ್ದು ಕೇಂದ್ರ ಬಿಜೆಪಿ – ಸ್ಥಳೀಯ ಸರ್ಕಾರದ ನೆರವಿನೊಂದಿಗೆ. ಅಲ್ಲಿಂದಾಚೆಗೆ ಆ ಎಲ್ಲಾ ಶಾಸಕರೂ ಗಟ್ಟಿಯಾಗಿ ಉಳಿಯುತ್ತಾರೆ ಎಂಬ ಭರವಸೆ ಬಿಜೆಪಿಗೇ ಇರಲಿಲ್ಲ. ಆಗ ಶಾಸಕರಿಗೆ ಪರೋಕ್ಷವಾಗಿ ಇಡಿ-ಐಟಿಯ ಭಯವನ್ನು ಹುಟ್ಟಿಸಲಾಯಿತು. ಅದರಲ್ಲೂ ಹೈಕಮಾಂಡ್‍ನ ನೇರ ಭಾಗವಹಿಸುವಿಕೆ ಇತ್ತು. ಎಂಟಿಬಿ ನಾಗರಾಜ್‍ರ ವಿಚಾರದಲ್ಲೂ ಬಿಜೆಪಿಯ ಕೇಂದ್ರ ನಾಯಕರ ಪಾತ್ರವಿತ್ತು (ಕಳೆದ ಸಂಚಿಕೆಯಲ್ಲಿ ಈ ಕುರಿತು ಬರೆಯಲಾಗಿದೆ)
ಇದೆಲ್ಲಾ ಏನೇ ಇದ್ದರೂ, ಈ ಸಾರಿಯ ಆಪರೇಷನ್‍ನ ಮೂಲ ಸೂತ್ರಧಾರಿ ಸ್ವತಃ ಯಡಿಯೂರಪ್ಪನವರೇ ಆಗಿದ್ದರು. ಆಪರೇಷನ್ ನಡೆಯಲಿ ಎಂಬ ಅಭಿಪ್ರಾಯ ಬಿಜೆಪಿ ಹೈಕಮಾಂಡ್‍ದಾಗಿತ್ತಾದರೂ, ಕೂಡಲೇ ಬಿಜೆಪಿ ಸರ್ಕಾರ ರಚಿಸಬೇಕೇ ಎಂಬ ಕುರಿತು ಅಂತಿಮ ತೀರ್ಮಾನ ತೆಗೆದುಕೊಂಡಿರಲಿಲ್ಲ. ಯಡಿಯೂರಪ್ಪನವರನ್ನು ಈಗಲೇ ಪಕ್ಕಕ್ಕೆ ಸರಿಸುವುದು ಕಷ್ಟ; ಆದರೆ ಅವರನ್ನೇ ಕರ್ನಾಟಕದ ಬಲಿಷ್ಠ ನಾಯಕನನ್ನಾಗಿ ಬಿಂಬಿಸಬಾರದು ಎಂಬುದು ಅವರ ಲೆಕ್ಕಾಚಾರವಿದ್ದಂತೆ ತೋರುತ್ತದೆ.

ವಿರೋಧ ಪಕ್ಷದ ನಾಯಕ ಯಾರು?
ಯಡಿಯೂರಪ್ಪನವರು ವಿಶ್ವಾಸಮತ ಯಾಚನೆ ಮಾಡುವಾಗ, ಉಪಸಭಾಧ್ಯಕ್ಷರ ಪಕ್ಕದ ಸೀಟು – ಅಂದರೆ ವಿರೋಧ ಪಕ್ಷದ ನಾಯಕರ ಸೀಟು – ಯಾರಿಗೆ ಎಂಬುದು ನಿರ್ಧಾರವಾಗಿರಲಿಲ್ಲ. ಸಮ್ಮಿಶ್ರ ಸರ್ಕಾರವಿದ್ದಾಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಅದು ತನಗೇ ಮೀಸಲಾದದ್ದು ಎಂಬ ರೀತಿಯಲ್ಲಿ ಅಲ್ಲಿ ಕೂತರು. ವಿರೋಧ ಪಕ್ಷದ ನಾಯಕನಿಗಿಂತಲೂ ತಾನೇ ಮುಖ್ಯಮಂತ್ರಿ ಎಂಬ ರೀತಿಯಲ್ಲಿ ಸಿದ್ದರಾಮಯ್ಯನವರ ಬಾಡಿ ಲಾಂಗ್ವೇಜ್ ಮತ್ತು ನಡವಳಿಕೆ ಇತ್ತು. ಒಮ್ಮೆ ಯಡಿಯೂರಪ್ಪನವೂ ಬಾಯಿ ತಪ್ಪಿ, ‘ಮಾನ್ಯ ಮುಖ್ಯಮಂತ್ರಿಗಳೇ’ ಎಂದು ಸಿದ್ದರಾಮಯ್ಯನವರನ್ನು ಸಂಬೋಧಿಸಿದರು.

ಸರ್ಕಾರ ಉಳಿಯುವವರೆಗೆ ಸಿದ್ದರಾಮಯ್ಯನವರನ್ನು ವಿರೋಧಿಸದಿದ್ದ, ಇತರ ಕಾಂಗ್ರೆಸ್ ನಾಯಕರು ಇದೀಗ ‘ಸರ್ಕಾರ ಉರುಳಲು ಸಿದ್ದರಾಮಯ್ಯನವರು ತಮ್ಮ ಆಪ್ತರನ್ನು ಹಿಡಿದಿಟ್ಟುಕೊಳ್ಳದಿದ್ದುದೂ ಕಾರಣ’ ಎಂದು ಪಕ್ಷದ ವಲಯಗಳೊಳಗೆ ಮಾತಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಈಗಾಗಲೇ ‘ಪಕ್ಷ ಹೇಳಿದರೆ, ಸದನದಲ್ಲಿ ಪಕ್ಷವನ್ನು ಮುನ್ನಡೆಸುತ್ತೇನೆ’ ಎಂದೂ ಹೇಳಿಯಾಗಿದೆ.

ಶಾಸಕರು ರಾಜೀನಾಮೆ ಕೊಟ್ಟ ನಂತರ, ಸರ್ಕಾರ ಬೀಳುವವರೆಗೆ ಅಪೂರ್ವ ಒಗ್ಗಟ್ಟು ಪ್ರದರ್ಶಿಸಿದ್ದ ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್-ಜೆಡಿಎಸ್ ನಾಯಕರ ಮುಂದಿನ ನಡವಳಿಕೆ ಹೇಗಿರುತ್ತದೆ ಎಂಬುದನ್ನು ಈಗಲೇ ಹೇಳಲಾಗದು. ಆದರೆ, ಆ ಒಂದು ವಾರದ ಒಗ್ಗಟ್ಟಂತೂ ಉಳಿಯುವುದಿಲ್ಲ ಎಂಬುದಕ್ಕೆ ಸೂಚನೆಗಳು ಈಗಾಗಲೇ ಸಿಕ್ಕಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...