Homeಮುಖಪುಟಅಸಾಧಾರಣ ಫಲಿತಾಂಶ: ನಾಲ್ಕು ಪಾಠಗಳು, ಅಪಾಯ ಮತ್ತ ಪರ್ಯಾಯದ ಅಗತ್ಯ

ಅಸಾಧಾರಣ ಫಲಿತಾಂಶ: ನಾಲ್ಕು ಪಾಠಗಳು, ಅಪಾಯ ಮತ್ತ ಪರ್ಯಾಯದ ಅಗತ್ಯ

ಸತ್ಯವೇನೆಂದರೆ, ನರೇಂದ್ರ ಮೋದಿಯವರಿಂದ ಮೋಹಭಂಗದ ಪ್ರಕ್ರಿಯೆ ಶುರುವಾಗಿತ್ತು. ಆದರೆ ಅವರ ಪರ್ಯಾಯವಾಗಿ ಯಾವುದೇ ವಿಶ್ವಾಸಾರ್ಹ ಮುಖ ಕಾಣಿಸಲಿಲ್ಲ.

- Advertisement -
- Advertisement -

| ಯೋಗೇಂದ್ರ ಯಾದವ್ |

ಒಂದು ಅಸಾಮಾನ್ಯ ಅಸಾಧಾರಣ ಚುನಾವಣೆಯ ಅಸಾಧಾರಣ ಫಲಿತಾಂಶ ನಮ್ಮೆದುರಿಗಿದೆ. ಬಿಜೆಪಿಯ ಗೆಲುವಿನ ಅಂತರ ಎಲ್ಲರನ್ನೂ ಚಕಿತಗೊಳಿಸಿದೆ ಎನ್ನುವ ಕಾರಣಕ್ಕಷ್ಟೇ ಈ ಚುನಾವಣೆ ಅಸಾಧಾರಣವಾಗಿಲ್ಲ. ಮೊದಲ ಬಾರಿ ಕಾಂಗ್ರೆಸ್ಸೇತರ ಸರಕಾರವು ಬಹುಮತದಿಂದ ಆಯ್ಕೆಗೊಂಡಿದ್ದಕ್ಕೂ ಈ ಚುನಾವಣೆ ಅಸಾಧಾರಣವಾಗಿಲ್ಲ. ಈ ಚುನಾವಣೆಯ ಪರಿಣಾಮಗಳು ನಮ್ಮ ಪ್ರಜಾಪ್ರಭುತ್ವದ ದೀರ್ಘಕಾಲೀನ ಭವಿಷ್ಯವನ್ನು ನಿರ್ಧರಿಸಲಿವೆ ಎನ್ನುವ ಕಾರಣಕ್ಕೆ ಈ ಚುನಾವಣೆ ಅಸಾಧಾರಣವಾಗಿದೆ.

ಒಂದಂತೂ ಸುಸ್ಪಷ್ಟ – ಈ ಚುನಾವಣೆಯಲ್ಲಿ ಬಿಜೆಪಿಗಿಂತ ನರೇಂದ್ರ ಮೋದಿಯವರಿಗೆ ಸ್ಪಷ್ಟ ಜನಾದೇಶ ಸಿಕ್ಕಿದೆ. ನಿಸ್ಸಂದೇಹವಾಗಿ ಈ ಚುನಾವಣೆಯಲ್ಲಿ ಬಹಳಷ್ಟು ತಾರತಮ್ಯವಾಗಿದೆ, ನಿಸ್ಸಂದೇಹವಾಗಿಯೂ ಚುನಾವಣಾ ಆಯೋಗವು ಅಂಪೈರ್ ಆಗಿರಬೇಕಾದ ಸಮಯದಲ್ಲಿ ಆಟಗಾರನಾಗಿ ನಿಂತಿದ್ದಿದೆ. ಆದರೆ ಬಿಜೆಪಿಯ ಗೆಲುವಿಗೆ ಈ ನೆಪಗಳನ್ನಷ್ಟೇ ಹೇಳಲಾಗದು. ವಾಸ್ತವವೇನೆಂದರೆ, ಮೋದಿ ಗೆದ್ದಿದ್ದು ಈ ಜನತೆ ಅವರಿಗೆ ಇನ್ನೊಂದು ಅವಕಾಶ ನೀಡಲಿಚ್ಛಿಸುತ್ತಾರೆ ಎನ್ನುವ ಕಾರಣದಿಂದ. ಈ ಜನಾದೇಶ ಕಲಿಸಿದ ಪಾಠಗಳ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಿದೆ ಅದರೊಂದಿಗೆ ಇದರಿಂದ ಆಗುವ ಅಪಾಯಗಳನ್ನೂ ನೋಡಬೇಕಿದೆ.

ಮೊದಲ ಪಾಠ ವಿರೋಧಪಕ್ಷಗಳಿಗಾಗಿ ಇದೆ. ಪ್ರಶ್ನೆ ಇರುವುದು, ಜನರು ಮೋದಿಗೆ ಇನ್ನೊಂದು ಅವಕಾಶ ಕೋಡಬೇಕೆಂದು ಯಾವ ಕಾರಣಕ್ಕೆ ಇಚ್ಛಿಸಿದರು? ಗೆಲುವಿನ ಅಂತರ ನೋಡಿದರೆ ಈ ಜನಾದೇಶ ಮೋದಿ ಸರಕಾರದ 5 ವರ್ಷಗಳ ರೆಕಾರ್ಡ್ ಮೇಲೆ ಸ್ವೀಕೃತಿಯ ಮೊಹರ್ ಹಾಕಿದಂತೆ ಎಂಬ ಭ್ರಮೆ ಉಂಟಾಗಬಹುದು. ಆದರೆ ಇದು ಸತ್ಯವಲ್ಲ. 2014 ಮತ್ತು 2019ರ ಗೆಲುವುಗಳು ಒಂದೆ ತರಹದ್ದು ಅನಿಸುತ್ತವೆ. ಆದರೆ ಈ ಎರಡೂ ಚುನಾವಣೆಗಳ ಇತಿಹಾಸದಲ್ಲಿ ಬಹಳ ದೊಡ್ಡ ಅಂತರವಿದೆ. 2014ರಲ್ಲಿ ಜನರ ಮನಸ್ಸಿನಲ್ಲಿ ಮತ್ತೊಂದು ಕಾಂಗ್ರೆಸ್‍ನ ಭ್ರಷ್ಟ ಮತ್ತು ನಿರುಪಯುಕ್ತ ಸರಕಾರದ ಬಗ್ಗೆ ಆಕ್ರೋಶವಿತ್ತು. ಹಾಗೂ ಎರಡನೆಯದಾಗಿ, ಮೋದಿಯವರ ಬಗ್ಗೆ ಆಶಾಭಾವನೆ ಇತ್ತು. ಈ ಸಲ ಮೋದಿ ಸರಕಾರದೊಂದಿಗೆ ಆಶಾಭಂಗ ಶುರು ಆಗಿತ್ತು, ಸಂದೇಹಗಳಿದ್ದವು, ಆತಂಕಗಳೂ ಇದ್ದವು. ಆದರೆ ಮತದಾರರು ವಿರೋಧಪಕ್ಷಗಳ ಕಡೆ ನೋಡಿದಾಗ ಅಲ್ಲಿ ಯಾವ ಭರವಸೆಯೂ ಕಂಡುಬರುತ್ತಿಲ್ಲ.

ಕೊನೆಗೆ ಮೋದಿ ವಿರುದ್ಧದ ಅಸಂತೋಷ ಮುಚ್ಚಿಹೋಯಿತು ಹಾಗೂ ವಿರೋಧಪಕ್ಷಗಳ ಮೇಲಿನ ಅವಿಶ್ವಾಸ ಕೆಲಸ ಮಾಡಿತು. ಈ ಜನಾದೇಶ ಎಷ್ಟು ಮೋದಿಯವರದ್ದಾಗಿದೆಯೋ ಅಷ್ಟೇ ವಿರೋಧಪಕ್ಷಗಳ ನಿರುಪಯುಕ್ತತೆಯ ವಿರುದ್ಧದ್ದೂ ಆಗಿದೆ.

ಎರಡನೆಯ ಪಾಠ, ಚುನಾವಣೆ ಗೆಲ್ಲುವ ಹಳೆಯ ತಂತ್ರಗಳು ಈಗ ಕೆಲಸ ಮಾಡುವುದಿಲ್ಲ. ಬರೀ ಮೋದಿ ವಿರೋಧದ ರಾಜಕೀಯ ಜನತೆ ಸ್ವೀಕರಿಸುವುದಿಲ್ಲ. ಇದರಿಂದ ನರೇಂದ್ರ ಮೋದಿಯವರಿಗಿಂತ ಮೋದಿ ವಿರೋಧಗಳಿಗೇ ಹೆಚ್ಚಿನ ನಷ್ಟವಿದೆ. ಅತ್ತ ಉತ್ತರಪ್ರದೇಶದ ಫಲಿತಾಂಶದಿಂದ ಸ್ಪಷ್ಟವಾಗಿದ್ದೇನೆಂದರೆ, ಜಾತಿಯ ಲೆಕ್ಕಾಚಾರಗಳನ್ನು ಮಾಡಿ ಜನರ ವಿಶ್ವಾಸವನ್ನು ಗಳಿಸುವುದು ಅಸಾಧ್ಯ. ಕೇವಲ ದಲಿತ, ಮುಸ್ಲಿಮ್ ಹಾಗೂ ಯಾದವ್ ಸಮೀಕರಣದ ಮಾತುಗಳನ್ನಾಡಿದರೆ ಈ ಜಾತಿಗಳ ಮತಗಳೂ ದಕ್ಕುವುದಿಲ್ಲ. ಪಕ್ಷಗಳ ಮೈತ್ರಿ ಉಪಯುಕ್ತ ಹಾಗೂ ಅವಶ್ಯಕವೂ ಇದೆ, ಆದರೆ ಬರೀ ಮೈತ್ರಿ ರಚಿಸುವುದರಿಂದ ಸಾಕಾಗುವುದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಹಾಳೆಯ ಮೇಲೆ ಎಷ್ಟು ಬಲಶಾಲಿಯಾಗಿ ತೋರುತ್ತಿತ್ತು, ಮಹಾರಾಷ್ಟ್ರದ ಮೈತ್ರಿಯೂ ಗಟ್ಟಿಯಾಗಿತ್ತು, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿಯ ಮೈತ್ರಿಗಳೂ ತುಂಬಾ ದೊಡ್ಡವು, ಆದರೆ ಇವ್ಯಾವೂ ಕೆಲಸ ಮಾಡಲಿಲ್ಲ.

ಮೂರನೇ ಪಾಠ, ಜನಾದೇಶದ ನಿರ್ಮಾಣ ಮಾಡಬೇಕೆಂದರೆ, ಜನತೆಯನ್ನು ದೇಶದೊಂದಿಗೆ ಬೆಸೆಯುವುದು ಅತ್ಯವಶ್ಯಕ. ಮೋದಿಯವರು ದೇಶದ ಸರಾಸರಿ ನಾಗರಿಕನೊಂದಿಗೆ ಸಂವಾದ ಮಾಡಿದರು. ನಿಸ್ಸಂದೇಹವಾಗಿಯೂ ಅವರ ಸಂವಾದದಲ್ಲಿ ಸುಳ್ಳೇ ಹೆಚ್ಚಿತ್ತು. ನಿಸ್ಸಂದೇಹವಾಗಿಯೂ ಸಕಾರಾತ್ಮಕ ಅಂಶಗಳಿಗಿಂತ ನಕಾರಾತ್ಮಕ ಮಾತುಗಳೇ ಹೆಚ್ಚಿದ್ದವು. ಈ ಸಲ ಅವರ ಮಾತುಗಳಲ್ಲಿ ನಿರೀಕ್ಷೆಗಳಿಗಿಂತ ಆತಂಕವನ್ನು ಸೃಷ್ಟಿಸುವ ಪ್ರಯತ್ನವೇ ಹೆಚ್ಚಿತ್ತು, ಒಡೆದು ಆಳುವ ನೀತಿಯೂ ಇತ್ತು. ಪ್ರಧಾನ ಮಂತ್ರಿಯವರು ನಿಸ್ಸಂದೇಹವಾಗಿಯೂ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯ ಹುದ್ದೆಗೆ ಶೋಭೆಗೆ ತಕ್ಕದ್ದಲ್ಲದ್ದ ಬಹಳಷ್ಟು ಮಾತುಗಳನ್ನಾಡಿದರು. ನಿಸ್ಸಂದೇಹವಾಗಿಯೂ ದೇಶದ ಹೆಚ್ಚಿನ ಮಾಧ್ಯಮಗಳು ಮೋದಿಯವರ ಪರವಾಗಿ ಕೆಲಸ ಮಾಡಿದ್ದವು. ಆದರೆ ಈ ಎಲ್ಲವುಗಳ ಸಹಾಯದಿಂದ ಮೋದಿಯವರು ಒಬ್ಬ ಸರಾಸರಿ ಮತದಾರನಿಗೆ ಅವನು/ಳು ತನ್ನ ಲಾಭ-ನಷ್ಟಗಳಿಗಾಗಿ ಅಲ್ಲದೇ, ದೇಶಕ್ಕಾಗಿ ಮತ ನೀಡುತ್ತಿದ್ದಾರೆ ಎಂದು ಭಾವಿಸುವಂತೆ ಮಾಡಿದರು. ವಿರೋಧಪಕ್ಷಗಳ ಬಳಿ ಮತದಾರರ ಸಲುವಾಗಿ ಇಂತಹ ಯಾವುದೇ ದೊಡ್ಡ ಸಂದೇಶವೂ ಇದ್ದಿಲ್ಲ, ಯಾವ ದೊಡ್ಡ ಕನಸೂ ಇದ್ದಿಲ್ಲ ಮತ್ತು ಯಾವ ನಿರೀಕ್ಷೆಯೂ ಇದ್ದಿಲ್ಲ.

ನಾಲ್ಕನೇ ದೊಡ್ಡ ಪಾಠವೆಂದರೆ, ಜನರು ಇಂತಹ ಆಸೆಯ, ನಿರೀಕ್ಷೆಗಳ ಒಂದು ಸಗುಣ ಮುಖವನ್ನು ನೋಡಲಿಚ್ಛಿಸುತ್ತಾರೆ. ತಾವು ಭರವಸೆ ಇಡಬಲ್ಲಂತಹ ಒಬ್ಬ ನಾಯಕನನ್ನು ಬಯಸುತ್ತಾರೆ. ಜನರು ಒಂದು ವೇಳೆ ನರೇಂದ್ರ ಮೋದಿ ಅವರನ್ನು ಇಂತಹ ಮುಖದ ರೂಪದಲ್ಲಿ ಸ್ವೀಕರಿಸುತ್ತಾರೆ ಎಂದರೆ ಅದಕ್ಕೆ ಕಾರಣ ಅವರ ಕೆಲಸ ಜನರಿಗೆ ಇಷ್ಟ ಎಂದು ಇಲ್ಲ. ಸತ್ಯವೇನೆಂದರೆ, ನರೇಂದ್ರ ಮೋದಿಯವರಿಂದ ಮೋಹಭಂಗದ ಪ್ರಕ್ರಿಯೆ ಶುರುವಾಗಿತ್ತು. ಆದರೆ ಅವರ ಪರ್ಯಾಯವಾಗಿ ಯಾವುದೇ ವಿಶ್ವಾಸಾರ್ಹ ಮುಖ ಕಾಣಿಸಲಿಲ್ಲ. ಮೋದಿಯಿಂದ ನಿರಾಸೆಗೊಂಡ ಜನರು ರಾಹುಲ್ ಗಾಂಧಿಯ ಕಡೆ ನೋಡಿದಾಗ ಹೆದರಿಕೊಂಡು ಮತ್ತೇ ಮೋದಿಯವರಲ್ಲೇ ಸದ್ಗುಣಗಳನ್ನು ಹುಡುಕತೊಡಗುತ್ತಾರೆ. ಅಲ್ಲಿ ಸತ್ಯ ಕಾಣದಿದ್ದರೂ ಗಟ್ಟಿತನವಂತೂ ಅವರಿಗೆ ಕಾಣಿಸುತ್ತದೆ. ವಿರೋಧಪಕ್ಷಗಳ ಬಳಿ ಸಂದೇಶವೂ ಇರಲಿಲ್ಲ, ಸಂದೇಶಕಾರರೂ ಇರಲಿಲ್ಲ. ನಾವು ನೀವು ಇಷ್ಟಪಡಬಹುದು ಅಥವಾ ಬಿಡಬಹುದು ಆದರೆ, ವಿಶ್ವಾದ್ಯಂತ ನೇರವಾಗಿ ವ್ಯಕ್ತಿತ್ವಗಳ ಸ್ಪರ್ಧೆ ಆಗುತ್ತಿವೆ. ಹಾಗೂ ಇಂದು ದೇಶವು ಒಂದು ವಿಶ್ವಾಸಾರ್ಹ ಮುಖದ ಹುಡುಕಾಟದಲ್ಲಿದೆ.

ಈ ಜನಾದೇಶವು ಹೇಳಿದ ಪಾಠಗಳೊಂದಿಗೆ ಇದರ ಅಪಾಯಗಳನ್ನೂ ತಿಳಿದುಕೊಳ್ಳಬೇಕಿದೆ. ಇಂತಹ ಜನಾದೇಶ ಅಹಂಕಾರ ಹುಟ್ಟಿಸಬಲ್ಲುದು. ಹಿಂದು-ಮುಸ್ಲಿಮ್ ದ್ವೇಷ ಹುಟ್ಟಿಸಿ ಗೆದ್ದುಕೊಂಡ ಚುನಾವಣೆ ಭಯವನ್ನೂ ಹುಟ್ಟಿಸುತ್ತದೆ. ಮುಂದಿನ ಐದು ವರ್ಷಗಳಲ್ಲಿ ದೇಶದ ಸ್ವಧರ್ಮದ ಎರಡು ದೊಡ್ಡ ಆಧಾರಸ್ತಂಭಗಳಾದ ಲೋಕತಂತ್ರ ಮತ್ತು ವಿವಿಧತೆಗಳಿಗೆ ದೊಡ್ಡ ಅಪಾಯವಿದೆ. ಪ್ರಶ್ನೆ ಇರುವುದು ಈ ಪ್ರಶ್ನೆಗಳನ್ನು ಮುಖಾಮುಖಿ ಎದುರಿಸುವವರ್ಯಾರು? ಸದ್ಯದ ವಿರೋಧಪಕ್ಷಗಳು ಈ ಸ್ಪರ್ಧೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿವೆ. ದೇಶದ ಪ್ರಮುಖ ರಾಷ್ಟ್ರೀಯ ವಿರೋಧ ಪಕ್ಷದ ರೂಪದಲ್ಲಿ ಕಾಂಗ್ರೆಸ್ ಅಂತೂ ಈ ಕೆಲಸದಲ್ಲಿ ಅಪ್ರಸ್ತುತವಷ್ಟೇ ಅಲ್ಲ, ಆ ಕಾರ್ಯಕ್ಕೆ ಒಂದು ಅಡ್ಡಿಯಾಗಿದೆ. ಇಂತಹ ಸಂದರ್ಭದಲ್ಲಿ ದೇಶದ ಸ್ವಧರ್ಮದ ರಕ್ಷಣೆಗೆ ಒಂದು ಹೊಸ ಪರ್ಯಾಯದ ಅವಶ್ಯಕತೆ ಇದೆ. ಈ ಪರ್ಯಾಯದ ದಾರಿ ಸುಗಮವಾಗಿರುವುದಿಲ್ಲ. ಅದಕ್ಕೆ ಅಧಿಕಾರ, ಹಣ ಮತ್ತು ಮಾಧ್ಯಮ, ಈ ಮೂರರೊಂದಿಗೂ ಸೆಣಸುವ ಸವಾಲು ಎದುರಾಗುವುದು. ಆದರೆ, ಸ್ವಧರ್ಮದ ರಕ್ಷಣೆಯಲ್ಲಿ ತೊಡಗಿರುವ ಸಿಪಾಯಿಗಳೊಂದಿಗೆ ಈ ದೇಶದ ಮಣ್ಣಿದೆ, ದೇಶದ ಸಂವಿಧಾನವಿದೆ, ರಾಷ್ಟ್ರಪಿತ ಗಾಂಧೀಜಿಯ ಪರಂಪರೆಯಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...