Homeಕವನನೀನೂ ಅಲ್ಲಿರಲಿಲ್ಲ: ಕಾಶ್ಮೀರದ ಜನರ ಸಂಕಟ, ತಲ್ಲಣ, ಅತಂತ್ರ-ಅನಿಶ್ಚಿತತೆಯನ್ನು ಕಟ್ಟಿಕೊಡುವ ಕವಿತೆ

ನೀನೂ ಅಲ್ಲಿರಲಿಲ್ಲ: ಕಾಶ್ಮೀರದ ಜನರ ಸಂಕಟ, ತಲ್ಲಣ, ಅತಂತ್ರ-ಅನಿಶ್ಚಿತತೆಯನ್ನು ಕಟ್ಟಿಕೊಡುವ ಕವಿತೆ

- Advertisement -
- Advertisement -

ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡಿದ್ದ 370 ವಿಧಿಯನ್ನು ರದ್ದುಗೊಳಿಸಿ ಆಗಸ್ಟ್ 5ಕ್ಕೆ ಒಂದು ವರ್ಷ. ಹಲವು ತಿಂಗಳುಗಳ ಕಾಲ ಹೇರಿದ್ದ ಕರ್ಫ್ಯೂ ಸಂದರ್ಭದಲ್ಲಿ ಕಾಶ್ಮೀರದ ಸಾಮಾನ್ಯ ಜನರ ಸಂಕಟ, ತಲ್ಲಣ, ಅತಂತ್ರ-ಅನಿಶ್ಚಿತತೆಯನ್ನು ಕಟ್ಟಿಕೊಡುವ ಈ ಕಾಶ್ಮೀರಿ ಕವಿತೆಗಳನ್ನು ಸಂವರ್ಥ ಸಾಹಿಲ್ ಕನ್ನಡಕ್ಕೆ ಅನುವಾದಿಸಿದ್ದಾರೆ.

ನಾವು ಮುಷ್ಠಿ ಬಿಚ್ಚಿದರೆ

ಅದು ಮತ್ತೊಂದು ಯುದ್ಧವನ್ನು

ಬಿಗಿಹಿಡಿಯಲು.

ಬೇಲಿಯ ಮೇಲೆ ಬಿದ್ದು ಸಾಯುತ್ತಾರೆ

ನಮ್ಮ ಜನ ಬಾಗಿಲ ಹಿಂದುಗಡೆ

ನೇತುಹಾಕಿದ ಬಟ್ಟೆಯಂತೆ.

ಬೆಚ್ಚಗಿನ ವಸ್ತ್ರ ತೊಟ್ಟು ಮಕ್ಕಳು

ಮಂದ ಬೆಳಕಿನ ಓಣಿಯಲ್ಲಿ

ಆಟದ ಗನ್ ಹಿಡಿದು

ಒಬ್ಬರನ್ನೊಬ್ಬರು ಎದುರಾಗುತ್ತಾರೆ.

“ಘನತೆಯ ಸಾವಾಗಿರಲಿ”

ಎಂದು ಒಬ್ಬ ಬೊಬ್ಬಿಡುತ್ತಾನೆ

ಮತ್ತೊಬ್ಬ ನೆಲಕ್ಕುರುಳುವ

ನಟನೆ ಮಾಡುತ್ತಾನೆ.

ಸದಾ ಯುದ್ಧದಲ್ಲಿರುವ

ಮಕ್ಕಳು ನಾವು

ಯುದ್ಧದ ಮಕ್ಕಳು ನಾವು.

ಮುಯಿನ್ ಮೆಹ್ರಾಜ್

***

 

ಸಂಶಯಿಸಬೇಡ ಪ್ರಶ್ನಿಸಬೇಡ ನನ್ನನು

ಹೇಳುತೇನೆ ಕೇಳು ನನ್ನ ಕಾವ್ಯದ ಶಕ್ತಿಯ

ನನ್ನ ಕಾವ್ಯವೊಂದು ಜಾದೂ ಅಲ್ಲವೇ ಅಲ್ಲ

ಅದನ್ನು ಮೀರಿದ

ಪವಾಡವನ್ನೇ ತನ್ನೊಳಗೆ ಇರಿಸಿಕೂಂಡ

ಕಾವ್ಯ ನನ್ನದು

ನಿನ್ನ ಬಾಂಬುಗಳನ್ನು ಹಕ್ಕಿಯಾಗಿಸಬಲ್ಲದು

ನಿನ್ನ ಕಾಡತೂಸುಗಳನ್ನು ಪ್ರಾಸವಾಗಿಸಬಲ್ಲದು

ನಿನ್ನ ಚಿತ್ರಹಿಂಸೆಯನ್ನು ಸ್ವರಸಮ್ಮೇಳನವಾಗಿಸಬಲ್ಲದು

ನಿನಗೆಂದೂ ಅರ್ಥವಾಗದು ನನ್ನ ಕಾವ್ಯ

ಆದರೂ ನಾನು ಹಾಡುವುದನ್ನು ನಿಲ್ಲಿಸುವುದಿಲ್ಲ

ಯಾಕೆಂದರದು ನಿನ್ನ ವಿಷವನ್ನು ನಿಷ್ಕ್ರಿಯಗೊಳಿಸಬಲ್ಲದು

ನಿನ್ನ ಸಂಸತ್ತನ್ನು ಬುಡಸಮೇತ ನಡುಗಿಸಬಲ್ಲದು

ನನ್ನ ಕಾವ್ಯ ನಿನ್ನ ಚರ್ಮವನ್ನು ಸಿಗಿದು

ನೀ ಬಚ್ಚಿಡುವ ನಿನ್ನ ಘೋರ ವಿಕಾರವನ್ನು ಬಿಚ್ಚಿಡಬಲ್ಲದು

ಕಣ್ಣೀರನ್ನು ಪ್ರವಾಹವಾಗಿಸಬಲ್ಲದು ನನ್ನ ಕಾವ್ಯ

ಪ್ರವಾಹವನ್ನು ಚಂಡಮಾರುತವಾಗಿಸಬಲ್ಲದು

ಚಂಡಮಾರುತವನ್ನು ಹೊಸ ಮುಂಜಾವಿನ

ಸ್ವಾತಂತ್ರ ಮತ್ತು ಭರವಸೆಯಾಗಿಸಬಲ್ಲದು

ನಿನ್ನ ನಾಲಿಗೆಗೆ ರುಚಿಸದೆ ಹೋಗಬಹುದು ನನ್ನ ಕಾವ್ಯ

ಆದರೆ ನನ್ನ ಹೃದಯಕ್ಕೆ ಅದರ ಕಹಿಯೇ ಔಷದ

ನಿನ್ನ ಕಿವಿಗಳಿಗೆ ಹಾಯಾಗಿ ಕೇಳಿಸದೆ ಇರಬಹುದು

ಆದರೆ ಅವುಗಳ ತಪ್ಪಿದ ಪ್ರಾಸ ತಪ್ಪಿದ ಛಂದಸ್ಸು

ನನ್ನ ಎದೆಯ ಬಡಿತವನ್ನು ಧ್ವನಿಸುತ್ತದೆ

ಅದು ನನ್ನ ಕನಸನ್ನು ಜೀವಂತವಾಗಿರಿಸುತ್ತದೆ

ಸ್ವಾತಂತ್ರದ ಕನಸು

ಎಚ್ಚರ!

ನನ್ನ ಕಾವ್ಯ ಸುಡಬಲ್ಲದು ನಿನ್ನನು

ಹಾಗಾಗಿ ಓದು

ಗಮನವಿಟ್ಟು ಓದು

ಆಸ್ವಾದಿಸು

ನಿನ್ನ ದಬ್ಬಾಳಿಕೆಯ ಫಿರಂಗಿಯಿಂದ ಹೊರಮ್ಮಲಾರದ್ದು

ನನ್ನ ಬೇಗುದಿಯ ಗರ್ಭದಿಂದ ಹೊರಹೊಮ್ಮುವುದು.

ತನ್ನ ಹೆಸರನ್ನು ಬಹಿರಂಗಪಡಿಸಲು ಇಚ್ಚಿಸದ ಕಾಶ್ಮೀರದ ಕವಯತ್ರಿ

***

ನಾನು

ವ್ಯಕ್ತಪಡಿಸುವ ಪ್ರತಿ ಆಲೋಚನೆಗೆ, ಸಂದಾಯ ಪಡೆಯುತ್ತೇನೆ

ಬರೆಯುವ ಪ್ರತಿ ಅಕ್ಷರಕ್ಕೆ, ಸಂದಾಯ ಪಡೆಯುತ್ತೇನೆ

ಕೂಗುವ ಪ್ರತಿ ಘೋಷಣೆಗೆ, ಸಂದಾಯ ಪಡೆಯುತ್ತೇನೆ

ಎಸೆಯುವ ಪ್ರತಿ ಕಲ್ಲಿಗೂ, ಸಂದಾಯ ಪಡೆಯುತ್ತೇನೆ

ನಾನು

ದೋಚಿದ ಬಂದೂಕಿಗೆ ಸಂದಾಯ ಪಡೆಯುತ್ತೇನೆ

ನನ್ನೆದೆ ಸೀಳಿದ ಗುಂಡಿಗೆ ಸಂದಾಯ ಪಡೆಯುತ್ತೇನೆ

ಅಂತ್ಯಕ್ರಿಯೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ಸಂದಾಯ ಪಡೆಯುತ್ತೇನೆ

ಹುತಾತ್ಮರ ಮನೆಗೆ ಭೇಟಿ ನೀಡುವುದಕ್ಕೆ ಸಂದಾಯ ಪಡೆಯುತ್ತೇನೆ

ನೀನು

ನಮ್ಮ ಕಣಿವೆಗೆ ನುಗ್ಗಿದಾಗ, ಸಂದಾಯ ಪಡೆದಿರುವೆ

ಇಲ್ಲಿ ಕಳೆಯುವ ಪ್ರತಿ ದಿನಕ್ಕೂ ಸಂದಾಯ ಪಡೆದಿರುವೆ

ನಿನ್ನಿಂದಾದ ಪೀಡನೆ, ಚಿತ್ರಹಿಂಸೆ, ಕೊಲೆ, ದಹನಕ್ಕೆ ಸಂದಾಯ ಪಡೆದಿರುವೆ

ನಾನು ಸಂದಾಯ ಪಡೆಯುತ್ತೇನೆ ಎನ್ನುವುದಕ್ಕೂ ಸಂದಾಯ ಪಡೆದಿರುವೆ

ನನ್ನ ಪ್ರತಿಭಟನೆಯ ಪ್ರತಿ ರೂಪವೂ ಸಂದಾಯ ಪಡೆದಿದ್ದರೆ

ನಿನ್ನ ಆಕ್ರಮಣವೂ ಸಂದಾಯ ಪಡೆದಿದೆ

ವ್ಯತ್ಯಾಸವಿಷ್ಟೆ:

ಹಣ ಮತ್ತು ಭಡ್ತಿಯ ಮೂಲಕ ನೀ ಸಂದಾಯ ಪಡೆದರೆ

ನಾನು ನಿನ್ನ ಅತಿಕ್ರಮಣವನ್ನು ಅಂತ್ಯಗೊಳಿಸುವ

ಭರವಸೆಯನ್ನು ಸಂದಾಯವಾಗಿ ಪಡೆಯುತ್ತೇನೆ.

ನಾಸಿರ್ ಪಟಿಗರು

***

ನೀನು ಅಲ್ಲಿರಲಿಲ್ಲ

ಹೌದು, ನೀನು ಅಲ್ಲಿರಲಿಲ್ಲ

ನನ್ನ ತಲೆಯ ಮೇಲಿನ ಸ್ಕಾರ್ಫ್

ಅವರು ಹಿಡಿದೆಳೆದು ವಶಪಡಿಸಿಕೊಂಡಾಗ

ಕಂಡಿಲ್ಲ ನೀನು

ಕಗ್ಗತ್ತಲ ರಾತ್ರಿಯಲ್ಲಿ ಅವರು

ನಮ್ಮ ಮನೆಯನ್ನು ನುಗ್ಗುವುದನ್ನು

ಉದ್ದೇಶಪೂರ್ವಕವಾಗಿಯೇ

ನಮ್ಮ ಉಗ್ರಾಣವನ್ನೇ ಆಯ್ದು

ಚಹಾದ ಸೊಪ್ಪಿಗೆ ಅರಶಿಣ ಬೆರಸುತ್ತಿದ್ದರು

ಅಲ್ಲಿ ಸಣ್ಣ ಸಂದೊಂದರಿಂದ

ಇಣುಕಿ ನೋಡುತ್ತಿದ್ದೆ ನಾನು

ಗಂಟೆಗಟ್ಟಲೆ

ನನ್ನಮ್ಮನ ಅಳುವನ್ನು, ಚೀರನ್ನು

ಆಕೆ ಮರಗಟ್ಟುವತನಕ

ಅವರು ಒದೆಯುತ್ತಿದ್ದದ್ದನ್ನು

ನೀನು ಕೇಳಿಲ್ಲ

ಅವರು ವಾಚಾಮಗೋಚರವಾಗಿ

ನನ್ನ ಬಯ್ಯುವುದನ್ನು

ಸುತ್ತಲಿನ ಹೊಲಸಿಗಾಗಿ

ಅವರನ್ನು ನಾ ದುರುಗುಟ್ಟಿ ನೋಡಿದಾಗ

ಹೇಗನ್ನಿಸಬೇಡ

ಏಕಕಾಲಕ್ಕೆ ನೂರಾರು ಕಲ್ಲುಗಳನ್ನು

ಅವರು ಎಸೆದಾಗ

ಕಿಟಕಿಯ ಗಾಜನ್ನಲ್ಲ

ಇರುಳಿನ ನಿಶಬ್ದತೆಯನ್ನು ಒಡೆಯಲು

ಒಂದೇ ಏಟಿಗೆ ಇಲ್ಲವಾಗಿಸಿದಾಗ

ಮನೆಯ ಒಬ್ಬೇಒಬ್ಬ ದುಡಿಯುವವನನ್ನು

ನೀನು ಇರಲಿಲ್ಲ

ಇವಕ್ಕೆಲ್ಲ ಸಾಕ್ಷಿಯಾಗಲು.

ಸುಂಟರಗಾಳಿಯಂತೆ ಬಂದು

ಆತನನ್ನು ಅವರು ಗಿರಗಿರ ಸುತ್ತಿಸಿದ

ಆ ಇರುಳು

ಅವರು ನೂಕಿದ ಮತ್ತು ಕಪಾಳಕ್ಕೆ ಹೊಡೆದ ಸದ್ದು

ಇಂದಿಗೂ ನನ್ನ ಕಿವಿಯಲ್ಲಿ ಗುಯ್ಗುಟ್ಟುತ್ತಿದೆ

ದೀರ್ಘವಾದ ‘ಬೀಪ್’ ಸದ್ದನ್ನು ಹಿಂಬಾಲಿಸುವ

ರಭಸದ ಆ ಪ್ರತಿ ತುಳಿತ

ಆಕ್ರಮಣಕ್ಕೆ ಬೆದರಿ

ಕೇಳಲಿಲ್ಲ ನಮ್ಮ ತಪ್ಪೇನೆಂದು

ನಾನು ನೋಡಿದ್ದು, ಮರುಕಪಟ್ಟಿದ್ದು

ಎಲ್ಲವೂ ಮೌನದಲ್ಲಿ

ಶಾಂತ ಸಮುದ್ರ ತೀರದಂತೆ

ಈಗ ನನ್ನಣ್ಣನೂ ಇಲ್ಲ.

ಅಮ್ಮನ ಉಳುಕಿಗೆ ಈಗ

ನೋವಿನ ಅನುಭವವೂ ಆಗುತ್ತಿಲ್ಲ

ಅಪ್ಪ ಅಳುತ್ತಾರೆ

ಕಣ್ಣೀರು ಕೆನ್ನೆಯ ಮೇಲೆ

ಜಾರದ ಹಾಗೆ.

ಈಗ ನಾನು ಬೀದಿಯ ಮೇಲಿದ್ದೇನೆ

ಯಾವುದೇ ಕಿರುಕುಳಕ್ಕೆ ಹೆದರದೆ

ನಮ್ಮ ಮನೆಯ ಮೇಲೆ ನೀನೆಸೆದ

ಅದೇ ಕಲ್ಲುಗಳನ್ನು ಈಗ

ನಾನು ನಿನ್ನತ್ತ ಎಸೆಯುತ್ತೇನೆ

ನೀನು ನನ್ನ ಸಹೋದರರನ್ನು

ಅಟ್ಟಿಸಿದಂತೆ ನಿನ್ನನ್ನು ಅಟ್ಟಾಡಿಸಿ

ಓಡಿ ಹೋಗುವಂತೆ ಮಾಡುತ್ತೇನೆ

ನಿನ್ನಿಂದ ಕಿತ್ತುಕೊಳ್ಳುತೇನೆ

ನಿನ್ನ ಬಂದೂಕನ್ನು

ನೀನು ನನ್ನ ಸ್ಕಾರ್ಫ್ ಅನ್ನು

ನನ್ನಿಂದ ಕಿತ್ತುಕೊಂಡಂತೆ

ನಿನ್ನ ಮೇಲೆ ಮರುಪ್ರಯೋಗಿಸುತ್ತೇನೆ

ನನ್ನ ಮೇಲೆ ನೀ ಪ್ರಯೋಗಿಸಿದ್ದ

ಆ ಎಲ್ಲಾ ಬಯ್ಗುಳಗಳನ್ನು

ನನ್ನ ವಲಯವನ್ನು ನನ್ನಿಂದ ಕಸಿದುಕೊಂಡರೆ

ಏನಾಗಬಹುದೆಂಬುದರ ಸೂಚನೆಯಷ್ಟೆ ಇದು.

ಇಕ್ರಾ ಅಖೂನ್

ಕನ್ನಡಾನುವಾದ: ಸಂವರ್ತ ‘ಸಾಹಿಲ್’

ಇದನ್ನು ಓದಿ: ದೇಗುಲದಲ್ಲಿ ದೇವರಿಲ್ಲ; 120 ವರ್ಷ ಹಳೆಯ ರವೀಂದ್ರನಾಥ ಠಾಕೂರರ ಕವಿತೆ ವೈರಲ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...