Homeಮುಖಪುಟಸಿನಿಮಾಕ್ಕೆ ದಂಗಲ್ ಹುಡುಗಿಯ ವಿದಾಯ... ಧರ್ಮ, ಕಲೆ, ಧಮಾಂಧತೆಗಳ ಸುತ್ತ...

ಸಿನಿಮಾಕ್ಕೆ ದಂಗಲ್ ಹುಡುಗಿಯ ವಿದಾಯ… ಧರ್ಮ, ಕಲೆ, ಧಮಾಂಧತೆಗಳ ಸುತ್ತ…

- Advertisement -
- Advertisement -

ಚೆಲುವು ಮತ್ತು ಪ್ರತಿಭೆಗಳ ಕಣಜದಂತಿರುವ 18 ವರ್ಷದ ಪುಟ್ಟ ನಟಿ ಝೈರಾ ವಾಸೀಮ್ ಸಿನಿಮಾ ಪ್ರಪಂಚಕ್ಕೆ ವಿದಾಯ ಹೇಳಿದಳು. 16 ರ ವಯಸ್ಸಿನಲ್ಲಿ ‘ದಂಗಲ್’ ಸಿನಿಮಾದಲ್ಲಿ ಕುಸ್ತಿಪಟುವಿನ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿ ಬಾಲಿವುಡ್‍ನಲ್ಲಿ ಹೊಸ ಭರವಸೆ ನೀಡಿದ್ದ ಝೈರಾ ವಾಸೀಮ್ ಬಾಲಿವುಡ್‍ಗೆ, ಸಿನಿಮಾ ಪ್ರಪಂಚಕ್ಕೆ ವಿದಾಯ ಹೇಳಿದ್ದಾಳೆ. ತನ್ನ ನಂಬಿಕೆ ಮತ್ತು ಅಲ್ಲಾಹುವಿನ ಎಡೆಗಿನ ತನ್ನ ವಿಶ್ವಾಸಕ್ಕೆ ಈ ವೃತ್ತಿ ಹೊಂದುತ್ತಿಲ್ಲ ಎಂದು ಈ ಯುವತಿ ಕಾರಣ ನೀಡಿದ್ದಾಳೆ.

ಅದು ಆಕೆಯ ವೈಕ್ತಿಕ ನಿರ್ಧಾರವಿರಬಹುದು. ಆದರೆ, ಆಕೆ ಇಲ್ಲಿ ಧಾರ್ಮಿಕ ನಂಬಿಕೆಯ ವಿಷಯವನ್ನು ಮುನ್ನೆಲೆಗೆ ತಂದ ಕಾರಣದ ಹಿಂದೆ ಹಲವು ಸೂಕ್ಷ್ಮಗಳಿವೆ, ಹಲವು ತಪ್ಪು ಕಲ್ಪನೆಗಳಿವೆ.. ಇದೆ ಕೇವಲ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ವಿಷಯವಲ್ಲ, ಹಿಂದೂ ಧರ್ಮಕ್ಕೂ ಸಂಬಂಧಿಸಿದ್ದು. ಧರ್ಮದ ಹೆಸರಲ್ಲಿ ಪುತೃಪ್ರಧಾನ ವ್ಯವಸ್ಥೆ ಈಗಲೂ ಅನುಸರಿಸಿಕೊಂಡಿರುವ ಲಿಂಗ ಅಸಹಿಷ್ಣತೆಯೂ ಇಲ್ಲಿದೆ.

ಕಲೆ, ಧರ್ಮ ಮತ್ತು ಹೆಣ್ಣು
ಯಾವ ಧರ್ಮವೂ ವಿಧಿಸದ ಕಟ್ಟುಪಾಡುಗಳನ್ನು ಆಯಾ ಧರ್ಮದ ಪಿತೃ ವ್ಯವಸ್ಥೆ ಸ್ತ್ರೀಯರ ಮೇಲೆ ವಿಧಿಸುತ್ತಲೇ ಬಂದಿದೆ. ಅದು ಕಾಲಕ್ರಮೇಣ ಕಡಿಮೆಯಾಗುತ್ತ ಬಂದರೂ ಈ ಆಧುನಿಕ ಜಗತ್ತಲ್ಲೂ ಅದು ಹೊಸ ರೂಪಗಳಲ್ಲಿ ವನಿತಾ ಸಮೂಹವನ್ನು ಕಾಡುತ್ತಲೇ ಇದೆ.
ಸದ್ಯ ಝೈರಾ ವಿಷಯದಲ್ಲಿ ಇಲ್ಲಿ ನಿರ್ದಿಷ್ಠ ಕಾರಣಗಳು ಉಲ್ಲೀಖಿಸಲ್ಪಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಮತ್ತೆ ಚರ್ಚೆಗೆ ಬರುವ ಇಸ್ಲಾಂ ಮೂಲಭೂತವಾದದ ವಾದಕ್ಕೆ ಸಂಬಂಧಿಸಿದಂತೆ ಕೆಲವು ಅಪರಿಚಿತ ಸತ್ಯಗಳನ್ನು ನಾವು ಮರೆಯುತ್ತಿದ್ದೇವೆ.

ಇಸ್ಲಾಂ ಎಂದೂ ಕಲೆ ವಿರುದ್ಧವಾಗಿಲ್ಲ, ಅದರಲ್ಲೂ ಮೂಲಭೂತವಾದಿಗಳೂ ಹಬ್ಬಿಸಿದಂತೆ ಅದು ಸಂಗೀತದ ನಿರಾಕರಣೆಯನ್ನೂ ಎಂದೂ ಮಾಡಿಲ್ಲ. ಈ ದೇಶದ ಇತಿಹಾಸದತ್ತ ಇತಿಹಾಸದತ್ತ ಗಮನ ಹರಿಸದರೆ ಈ ನೆಲಕ್ಕೆ ಇಸ್ಲಾಂ ನೀಡಿರುವ ಸಾಂಸ್ಕೃತಿಕ ಕೊಡುಗೆ ಅನನ್ಯವಾದುದು. ಸೃಷ್ಟಿತ ಕಟ್ಟುಪಾಡುಗಳನ್ನು ಮುರಿದು ಇಸ್ಲಾಂ ಕಲಾವಿದರು ತಮ್ಮ ಪ್ರತಿಭೆಯನ್ನು ಧಾರೆ ಎರಯುತ್ತಲೇ ಬಂದಿದ್ದಾರೆ. ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದಲ್ಲೂ ಅವರ ಕೊಡುಗೆ ಅಪಾರ.

ಬಾಲಿವುಡ್ ಖಾನ್‍ಗಳ ಪ್ರತಿಭೆಯನ್ನು ಮೆಚ್ಚುವ ಈ ದೇಶದಲ್ಲಿ ಝೈರಾಳಂತಹ ಹೊಸ ಹುಡುಗಿ ನಂಬುಗೆ ಕಾರಣಕ್ಕೆ ತನ್ನ ಮನದಾಳದ ಕಲೆಯನ್ನು ತೊರೆದಿರುವುದು ನೋವಿನ ಸಂಗತಿಯಷ್ಟೇ. ಕೋಮುವಾದ ಮತ್ತು ಮೂಲಭೂತವಾದಿ ಮನಸ್ಸುಗಳ ಆಳದಲ್ಲಿರುವ ಲಿಂಗ ಅಸಹಿಷ್ಣುತೆ ಈಗ ವಿಭಿನ್ನ ರೂಪದಲ್ಲಿ ಆಕ್ರಮಣ ಮಾಡುತ್ತಿರುವ ಹೊತ್ತಿನಲ್ಲಿ ಎಲ್ಲ ಧರ್ಮಗಳ ಪ್ರಾಮಾಣಿಕರು, ಸಮಾನತಾವಾದಿಗಳು ವಾಸ್ತವದ ಅರಿವು ಮೂಡಿಸುವುದು ಈಗಿನ ಅಗತ್ಯವಾಗಿದೆ. ನಮ್ಮ ಶಿಕ್ಷಣದ ಪಠ್ಯಗಳಲ್ಲೇ ಇಂತಹ ಚಿಂತನೆಗಳನ್ನು ಸೇರಿಸಬೇಕಾದ ಜರೈರತ್ತು ಇಂದು ಎಂದಿಗಿಂತ ಹೆಚ್ಚಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...