Homeಕರ್ನಾಟಕಮೈಸೂರಿನಲ್ಲಿ ಒಕ್ಕಲಿಗರ ಶಾಸಕರನ್ನು ಟಾರ್ಗೆಟ್ ಮಾಡಿ ನಡೆಯುತ್ತಿದೆ ಆಪರೇಷನ್ ಗಪ್‍ಚುಪ್!

ಮೈಸೂರಿನಲ್ಲಿ ಒಕ್ಕಲಿಗರ ಶಾಸಕರನ್ನು ಟಾರ್ಗೆಟ್ ಮಾಡಿ ನಡೆಯುತ್ತಿದೆ ಆಪರೇಷನ್ ಗಪ್‍ಚುಪ್!

- Advertisement -
- Advertisement -

ಸಿಎಂ ಕುಮಾರಸ್ವಾಮಿ ಅತ್ತ ಅಮೆರಿಕಾ ಕಾಳಭೈರವನ ಸನ್ನಿದಿಯಲ್ಲಿ ಕೂತಿರುವ ಸಂದರ್ಭದಲ್ಲಿ ಇತ್ತ ಆನಂದ್‍ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟದ್ದು ದೊಡ್ಡ ಕೋಲಾಹಲವನ್ನೇ ಉಂಟುಮಾಡಿದೆ. ಮೋದಿಯವರ ಪ್ರಮಾಣ ವಚನಕ್ಕೆಂದು ಹೋಗಿದ್ದ ಯಡ್ಯೂರಪ್ಪನವರು ವಾಪಾಸು ಬಂದು ಹೇಳಿದ ಮೊದಲ ಸುದ್ದಿಯೇ `ನಾವಿನ್ನು ಆಪರೇಷನ್ ಕಮಲ ಮಾಡೋದಿಲ್ಲ. ವಿರೋಧಪಕ್ಷವಾಗಿ ಮೈತ್ರಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ತೆರೆದಿಡುತ್ತೇವೆ’ ಎಂದು. ಅಲ್ಲಿಗೆ ಆಪರೇಷನ್ ಕಮಲದ ಕಥೆ ಮುಗಿದಹೋಯ್ತು ಅಂತ ಸುಮಾರಷ್ಟು ಜನ ಭಾವಿಸಿದ್ದಿರಬಹುದು. ಆದರೆ ಅದರ ಅಸಲೀ ಹಕೀಕತ್ತು ಈಗ ಈ ಇಬ್ಬರ ರಾಜೀನಾಮೆಯಿಂದ ಬಯಲಾಗಿದೆ.

ಅವತ್ತು ದಿಲ್ಲಿಗೆ ಹೋದ ಯಡ್ಯೂರಪ್ಪನವರಿಗೆ ಅಮಿತ್ ಷಾ ಕೊಟ್ಟ ಸೂಚನೆ ಸ್ಪಷ್ಟವಾಗಿತ್ತು. ಯಾವ ಕಾರಣಕ್ಕೂ ಆಪರೇಷನ್ ಕಮಲ ನಿಲ್ಲಿಸಬೇಡಿ, ಸರ್ಕಾರವನ್ನು ಬೀಳಿಸಿ ಬಿಜೆಪಿ ಸರ್ಕಾರ ರಚನೆ ಮಾಡಿ ನೀವೇ ಸಿಎಂ ಆಗಿ, ಆದ್ರೆ ಯಾವ ಕಾರಣಕ್ಕೂ ಬಿಜೆಪಿಯೇ ಸರ್ಕಾರ ಬೀಳಿಸಿತು ಎಂಬ ಅಪಖ್ಯಾತಿ ತಟ್ಟಬಾರದು. ಅದಕ್ಕಾಗಿ ಬಹಿರಂಗವಾಗಿ ಕದನ ವಿರಾಮ ಘೋಷಿಸಿ ಒಳಗೊಳಗೇ ಮಸಲತ್ತು ಮುಂದುವರೆಸಿ ಎಂಬ ಬುದ್ದಿಮಾತು ಹೇಳಿ ಕಳಿಸಿದ್ದರು. ಹಾಗಾಗಿಯೇ ಯಡ್ಯೂರಪ್ಪನವರು ಆಪರೇಷನ್ ಕಮಲ ಮಾಡಲ್ಲ ಅನ್ನೋ ಹೇಳಿಕೆ ಕೊಟ್ಟಿದ್ದು.

ಅಮಿತ್ ಶಾ ಕೂಡಾ ಅಷ್ಟು ಸ್ಪಷ್ಟವಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಕ್ಕೆ ಒಂದು ಕಾರಣವಿತ್ತು. ಮೊನ್ನೆಯಷ್ಟೆ ಮುಗಿದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಯೇನು ಪ್ರಚಂಡ ಕಟಾವು ಮಾಡಿಕೊಂಡಿತಲ್ಲ, ಅದಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಮೈತ್ರಿ ಪಾಳೆಯದ ಮೂವತ್ತು ಶಾಸಕರು ನೆರವಾಗಿದ್ದರು. ಬಿಜೆಪಿಗೆ ಹೋಗಿಬಿಡಬೇಕು ಎಂಬ ಕಾರಣಕ್ಕೇ ಅಲ್ಲದಿದ್ದರು, ತಮ್ಮೊಳಗಿನ ಆಂತರಿಕ ಕಚ್ಚಾಟದ ಮುಯ್ಯಿ ತೀರಿಸಿಕೊಳ್ಳುವುದಕ್ಕೂ ಅದರಲ್ಲಿ ಕೆಲವರು ಬಿಜೆಪಿಗೆ ಸಾಥ್ ಕೊಟ್ಟದ್ದು ಸುಳ್ಳಲ್ಲ. ಈ ಮೂವತ್ತರಲ್ಲಿ ಕನಿಷ್ಠ ಅರ್ಧದಷ್ಟು ಮಂದೆಯನ್ನಾದರು ತಮ್ಮ ಕಡೆ ತಿರುಗಿಸಿಕೊಳ್ಳೋದು ಕಷ್ಟವಲ್ಲ ಎಂಬುದನ್ನು ಯಡ್ಯೂರಪ್ಪನವರು ಮನವರಿಕೆ ಮಾಡಿಕೊಟ್ಟಿದ್ದರಿಂದ ಅಮಿತ್ ಶಾ ಗ್ರೀನ್ ಸಿಗ್ನಲ್ ಕೊಟ್ಟದ್ದು, ಜೊತೆಗೆ ಬಿಜೆಪಿಗೆ ಅಪಖ್ಯಾತಿ ಬರಬಾರದೆಂಬ ಎಚ್ಚರಿಕೆಯನ್ನೂ ಇತ್ತದ್ದು.

ಈ ತೆರೆಮರೆ ಆಪರೇಷನ್‍ನ ಫಲವಾಗಿಯೇ ಈ ಇಬ್ಬರು ರಾಜೀನಾಮೆಗೆ ಮುಂದಾಗಿರುವ ಬಗ್ಗೆ ಸಂಶಯಗಳು ಕ್ಷಣದಿಂದ ಕ್ಷಣಕ್ಕೆ ದಟ್ಟವಾಗುತ್ತಿವೆ. ಆ ರಾಜೀನಾಮೆಗಳು ಅಂಗೀಕರವಾಗುವುದೇ ಡೌಟು ಎಂಬ ಅನುಮಾನಗಳೂ ಮೂಡುತ್ತಿವೆ. ಅದೇನೆ ಇರಲಿ, ಈ ಸಲ ಬಿಜೆಪಿ ಅಧಿಕಾರಕ್ಕಾಗಿ ಆಪರೇಷನ್ ಕಮಲ ಮಾಡುವುದಷ್ಟೇ ಅಲ್ಲ, ಹಳೇ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ಬಲವನ್ನು ಏಕಾಏಕಿ ಕುಗ್ಗಿಸಿ ಇಡೀ ಕರ್ನಾಟಕದ ಉದ್ದಗಲಕ್ಕು ಕಮಲದ ಬಾವುಟ ಹಾರಾಡಿಸಬೇಕೆಂಬ ಅಜೆಂಡಾ ಇಟ್ಟುಕೊಂಡೇ ಅಖಾಡಕ್ಕಿಳಿದಿದೆ. ಅದು ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಅನ್ನೋದಕ್ಕೆ ಕಾಲವೇ ಉತ್ತರ ಕೊಡಬೇಕು.

ಈ ಸಲ ಪಕ್ಕಾ ಪ್ಲ್ಯಾನ್ ಮಾಡಿಕೊಂಡಿರುವ ಬಿಜೆಪಿ ಸಿಲಿಕಾನ್ ಸಿಟಿಯ ಬದಲಿಗೆ ಮೈಸೂರು ನಗರಿಯಿಂದ ಆಪರೇಟ್ ಮಾಡುತ್ತಿದೆ ಅನ್ನೋದು ಲೇಟೆಸ್ಟ್ ಸುದ್ದಿ. ಇದಕ್ಕೂ ಕಾರಣವಿದೆ. ಒಕ್ಕಲಿಗ ಮುಖ್ಯಮಂತ್ರಿಯ ಸರ್ಕಾರ ಕೆಡವಿದ ಅಪಖ್ಯಾತಿ ಬರಬಾರದು ಎಂಬ ಕಾರಣಕ್ಕೆ ಎಸ್.ಎಂ.ಕೃಷ್ಣರ ಮನೆಯಿಂದ ದಾಳ ಉರುಳಿಸಿದ್ದ ಬಿಜೆಪಿ ಆ ವಿಚಾರದಲ್ಲಿ ಈಗ ಮತ್ತಷ್ಟೂ ಸೆನ್ಸಿಬಲ್ ಆಗಿದೆ. ಅತ್ತ ಅಧಿಕಾರವೂ ಸಿಗಬೇಕು, ಇತ್ತ ಒಕ್ಕಲಿಗ ಮತಗಳ ಮೇಲೆ ಹಿಡಿತವೂ ಸಾಧ್ಯವಾಗಬೇಕು ಎಂಬ ಯೋಜನೆ ಹಾಕಿಕೊಂಡು, ಈ ಸಲ ಆಪರೇಷನ್ ಕಮಲಕ್ಕೆ ಹೆಚ್ಚೆಚ್ಚು ಒಕ್ಕಲಿಗ ಶಾಸಕರನ್ನೇ, ಅದರಲ್ಲೂ ಜೆಡಿಎಸ್ ಶಾಸಕರನ್ನೇ ಸೆಳೆಯುವ ಸಾಹಸಕ್ಕೆ ಅದು ಕೈಹಾಕಿದೆ. ಒಕ್ಕಲಿಗ ಶಾಸಕರೇ ಕೈಕೊಟ್ಟು ಕುಮಾರಸ್ವಾಮಿಯ ಸರ್ಕಾರ ಬೀಳಿಸಿದರೆ ಒಕ್ಕಲಿಗರು ಜಾತಿಯ ಕಾರಣಕ್ಕೆ ದೇವೇಗೌಡರತ್ತ ದೃವೀಕರಣವಾಗಲಾರರು ಎಂಬುದು ಇದರ ಹಿಂದಿರುವ ಲೆಕ್ಕಾಚಾರ. ಅಲ್ಲದೇ ಹಾಗೆ ಬರುವ ಅಷ್ಟೂ ಒಕ್ಕಲಿಗ ಶಾಸಕರ ಮೂಲಕ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಬಾವುಟ ಹಾರಾಡಿಸಿ, ತಳ ಗಟ್ಟಿಮಾಡಿಕೊಳ್ಳುವ ಯೋಜನೆಯೂ ಇದರಲ್ಲಿದೆ. ಈ ಕಾರಣಕ್ಕೇ ಸಿಎಂ ಕುಮಾರಸ್ವಾಮಿ ಅಮೆರಿಕಾಕ್ಕೆ ಹೋಗಿರುವ ಸಂದರ್ಭವನ್ನೇ ಸರಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಇದರ ಸಂಪೂರ್ಣ ಹೊಣೆಯನ್ನು ಬಿಜೆಪಿಯ ಒಕ್ಕಲಿಗ ಲೀಡರುಗಳಾದ ಸಿ.ಟಿ.ರವಿ ಮತ್ತು ಆರ್.ಅಶೋಕ್ ಹೆಗಲಿಗೆ ವಹಿಸಲಾಗಿದೆ. ಈ ಇಬ್ಬರೂ ಮೈಸೂರಿನಲ್ಲಿ ಮುಕ್ಕಾಂ ಹೂಡಿ ಗಾಳ ಹಾಕಿ ಕೂತಿದ್ದಾರೆ. ಪತ್ರಿಕೆ ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿರುವ ಮಾಹಿತಿ ಪ್ರಕಾರ ಆಪರೇಷನ್‍ಗೆ ಒಳಗಾಗುವ ಒಕ್ಕಲಿಗ ಶಾಸಕರಿಗೆ ತಲಾ ಮೂವತ್ತು ಕೋಟಿ ಹಣ, ಉಪಚುನಾವಣೆಯಲ್ಲಿ ಟಿಕೆಟ್, ಗೆಲ್ಲಿಸಿಕೊಂಡು ಬರುವ ಭರವಸೆ ಮತ್ತು ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಪದವಿಯ ಬಲ್ಕ್ ಪ್ಯಾಕೇಜ್ ನೀಡಲಾಗುತ್ತಿದೆಯಂತೆ. ಅದರಲ್ಲು ಮಂತ್ರಿ ಪದವಿ ಬೇಡವೆಂದವರಿಗೆ ಮೊತ್ತದಲ್ಲಿ ಅಡ್ಜಸ್ಟ್‍ಮೆಂಟ್ ಮಾಡುವ ಖಾತ್ರಿಯನ್ನೂ ನೀಡಲಾಗುತ್ತಿದೆ.

ಇದರ ಬೆನ್ನಿಗೇನೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರು ಮತ್ತ ಉನ್ನತ ಶಿಕ್ಷಣ ಸಚಿವರೂ ಆದ ಜಿ.ಟಿ ದೇವೆಗೌಡರು ಈಗ ಮತ್ತೆ ಮೋದಿ ಮತ್ತು ಅಮಿತ್ ಶಾರನ್ನು ಹೊಗಳಲು ಶುರು ಮಾಡಿದ್ದಾರೆ. ಇದರ ಮರ್ಮವೇನೆಂದು ತಿಳಿಯಲು ಇನ್ನ ಒಂದೆರಡು ದಿನಗಳು ಸಾಕು.

ಬೇರೆಬೇರೆ ಕಾರಣಗಳಿಂದ ದೇವೇಗೌಡರ ಕುಟುಂಬ ಹಾಗೂ ಈ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿರುವ ಹತ್ತು ಮಂದಿ ಒಕ್ಕಲಿಗ ಶಾಸಕರನ್ನು ವಿಚಲಿತಗೊಳಿಸುವುದಕ್ಕೆಂದೆ `ಸ್ಟಾರ್ಟ್ ಅಪ್ ಡೋಸ್’ ಆಗಿ ಆನಂದ್‍ಸಿಂಗ್ ಹಾಗೂ ರಮೇಶ್ ಜಾರಕಿಹೊಳಿಯವರಿಂದ ರಾಜೀನಾಮೆ ಕೊಡಿಸಿದ್ದಾರೆ ಎಂಬುದು ಸುದ್ದಿ. ಆದರೆ ಇದಕ್ಕೆ ಜೆಡಿಎಸ್‍ನ ಇತರ ಶಾಸಕರು ಸೊಪ್ಪು ಹಾಕಿದಂತೆ ಕಾಣುತ್ತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಜ್ವಲ್ ಪ್ರಕರಣ ಮುಂದಿಟ್ಟುಕೊಂಡು ‘ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಅಸಾಧ್ಯ’: ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೊಳೆನರಸೀಪುರ: ಪ್ರಜ್ವಲ್ ರೇವಣ್ಣ ಪ್ರಕರಣದ ನೆಪದಲ್ಲಿ ದೇವೇಗೌಡರ ಕುಟುಂಬದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್‌ ಫೋನ್ ಹಾಗೂ...

ಭೂಮಿ, ಆಕಾಶದ ಬಳಿಕ ಈಗ ಬಾಹ್ಯಾಕಾಶವೇ ಯುದ್ಧಭೂಮಿ: ಕಕ್ಷೆಯಲ್ಲಿ ಶಸ್ತ್ರಾಸ್ತ್ರ ನಿಯೋಜನೆ ಒಪ್ಪಿಕೊಂಡ ಅಮೆರಿಕ

ಭವಿಷ್ಯದಲ್ಲಿ ಬೃಹತ್ ಯುದ್ಧವೇನಾದರೂ ಸಂಭವಿಸಿದರೆ ಅದು ಕೇವಲ ಭೂಮಿ, ಸಮುದ್ರ ಮತ್ತು ವಾಯುಮಾರ್ಗಕ್ಕೆ ಮಾತ್ರ ಸೀಮಿತವಾಗದೆ ಬಾಹ್ಯಾಕಾಶಕ್ಕೂ ವಿಸ್ತರಿಸಲಿದೆ ಎಂಬುದನ್ನು ಸಾಬೀತುಪಡಿಸುವ ರೀತಿಯಲ್ಲಿ ಅಮೆರಿಕ ಹೇಳಿಕೊಂಡಿದೆ. ಭೂಮಿಯ ಕಕ್ಷೆಯಲ್ಲಿ ತಾನು ಮಿಲಿಟರಿ ಶಸ್ತ್ರಾಸ್ತ್ರಗಳನ್ನು...

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...