Homeಅಂಕಣಗಳುಸ್ವಾಮೀಜಿಗಳ ಅವಾಂತರಗಳು ಇನ್ನೂ ಮುಂದಿವೆಯಂತಲ್ಲಾ!

ಸ್ವಾಮೀಜಿಗಳ ಅವಾಂತರಗಳು ಇನ್ನೂ ಮುಂದಿವೆಯಂತಲ್ಲಾ!

- Advertisement -
- Advertisement -

| ಯಾಹೂ |

ಹಿಂದೂ ಧರ್ಮಕ್ಕಂಟಿದ ಜಾತಿ ಎಂಬ ಶಾಪದ ಕಾಯಿಲೆ ಉಲ್ಬಣಿಸಿದೆಯಂತಲ್ಲಾ. ಒಂದು ಕಲಸಿದ ಪದಾರ್ಥ ಶೇಖರಗೊಂಡ ತುದಿ, ಕುತುರೆ ಎನ್ನಿಸಿಕೊಳ್ಳುತ್ತದೆ. ಜಾತಿಗಳ ಮೇಲೆ ಕುಳಿತ ಸ್ವಾಮಿಗಳೂ ಈ ಕುತುರೆಯೇ, ಅದಕ್ಕೆ ಯಾವಾಗಲೂ ಊಧ್ರ್ವ ಮುಖವಿರಬೇಕು. ಒಳ್ಳೆ ಭಾಷೆ, ನಡವಳಿಕೆ ಬಹಳ ಮುಖ್ಯ. ಅದರಲ್ಲೂ ಭಾಷೆ ಬಸವಣ್ಣ ಹೇಳಿದಂತೆ ಸ್ಪಟಿಕದ ಸಲಾಕೆಯಂತಿರಬೇಕು. ಕಬ್ಬಿಣದ ರಾಡು ಅಥವಾ ಚೂರಿಯಂತಿರಬಾರದು. ಆದರೆ, ಈ ಆಧುನಿಕ ಯುಗದ ಸ್ವಾಮಿಗಳನ್ನು ನೋಡಿದರೆ, ಬಗಲಲ್ಲಿ ಚೂರಿ ಇಟ್ಟುಕೊಂಡವರಂತೆ ಕಾಣುತ್ತಾರಲ್ಲಾ. ಈಚೆಗೆ ವಾಲ್ಮೀಕಿ ಜನಾಂಗ ಮೀಸಲಾತಿ ಬೇಡಿಕೆಗಾಗಿ ಸಂಘಟಿತಗೊಂಡು, ನೂರಾರು ಮೈಲಿ ಕಾಲ್ನಡಿಗೆ ಮಾಡಿ ಬೆಂಗಳೂರು ತಲುಪಿತು. ಸಾವಿರಾರು ಜನರ ತಲೆ ನೋಡಿದ ಪ್ರಸನ್ನಾನಂದ ಪುರಿಯವರ ತಲೆ ತಿರುಗಿತು. ನಾಲಿಗೆ ಹೊರಳಿತು, “ನಮ್ಮ ಜನಾಂಗದ 17 ಶಾಸಕರು ಕೈಕೊಟ್ಟರೆ ಕುಮಾರಸ್ವಾಮಿ ಗೊಟಕ್ ಅಂತಾರೆ, ಇಲ್ಲಿಗೆ ಕುಮಾರಸ್ವಾಮಿನೂ ಬರಬೇಕು, ಅವರಪ್ಪನೂ ಬರಬೇಕು ಎಂದರು”. ಅಲ್ಲಿಗೆ ಪಾದಯಾತ್ರೆಯ ಸಾಧನೆ ಗೊಟಕ್ ಅಂತು. ಕುಂಬಾರನಿಗೆ ನೂರು ದಿವಸ, ದೊಣ್ಣೆ ನಾಯಕನಿಗೆ ಮೂರು ನಿಮಿಷ ಎಂಬಂತೆ ಮಾಡಿದ ಪ್ರಸನ್ನಾನಂದ ಪುರಿ ಸ್ವಾಮಿಗೆ ಯಾರಾದರೂ `ಪ್ರಸನ್ನ’ ಅಂದರೇನೆಂದು ಹೇಳಿಕೊಡಬೇಕಾಗಿದೆಯಲ್ಲಾ, ಥೂತ್ತೇರಿ!

ಈ ಸ್ವಾಮಿಗಳ ಅವಾಂತರಗಳು ಇನ್ನ ಭವಿಷ್ಯದಲ್ಲಿ ಭೀಕರವಾಗಿವೆಯಂತಲ್ಲಾ. ಹವ್ಯಕ ಜನಾಂಗದ ವಿದ್ವಾಂಸರನ್ನ ಕೇಳಿದರೆ, ನಮ್ಮ ಜನಾಂಗದ ಗುರುಗಳ ಸಾಧನೆ ಯಾರಿಂದಲೂ ಸಾಧ್ಯವಿಲ್ಲ ಬಿಡಿ. ಅವರು ಮಾಡಿದ್ದು ರೇಪಲ್ಲ ಒಪ್ಪಿತ ಸಂಭೋಗ ಎಂಬ ಕೋರ್ಟ್ ತೀರ್ಪನ್ನೇ ಮಠೋಪಜೀವಿಗಳು “ಹುರ್ರೇ ನಮ್ಮ ಸ್ವಾಮಿಗಳು ರೇಪು ಮಾಡಿಲ್ಲವಂತೆ ಬರೀ ಸಂಭೋಗವಂತೆ” ಎಂದು ಪಟಾಕಿ ಸಿಡಿಸಿ ಮಲೆನಾಡೇ ಮಾರ್ದನಿಗೊಳ್ಳುವಂತೆ ಮಾಡಿದರು. ಅದಷ್ಟೇ ಅಲ್ಲ, ಸ್ವಾಮಿಗಳಾದವರಿಗೆ ಸಂಭೋಗ ಕಡ್ಡಾಯ; ಅದರಲ್ಲಿ ಯಾವ ಅಪಮಾನವೂ ಇಲ್ಲ, ಅಂಜಿಕೆಯೂ ಇಲ್ಲ ಎಂಬಂತೆ ಕುಣಿದು ಕುಪ್ಪಳಿಸಿವೆ. ಸ್ವಾಮಿಗಳ ಹಿಂಬಾಲಕರ ಎದುರು ನೈತಿಕತೆ ಉಳಿಸಿಕೊಂಡ ಜನ ನೆಮ್ಮದಿಯಿಂದ ಬದುಕುವುದೇ ದುಸ್ತರವಾಗಿದೆ. ಅಂತೂ ನಮ್ಮ ರಘುಪತಿ ರಾಘವನ ಸಾಧನೆ ಸರಿಗಟ್ಟುವ ಸ್ವಾಮಿ ಇನ್ನು ಬರಲಾರ ಎಂದರಲ್ಲಾ. “ಸ್ವಲ್ಪ ಇರಿ ಉಡುಪಿಯ ಮಠೋಪಜೀವಿಗಳ ಬಗ್ಗೆ ಏನು ಹೇಳತ್ತೀರಿ” ಎಂದಾಗ, ಉಡುಪಿ ಬಿಡಿ ಅಲ್ಲಿ ವ್ಯಭಿಚಾರ ಕಡ್ಡಾಯ, ಮಕ್ಕಳಾದರೆ ಅಲ್ಲಿ ಇಲ್ಲಿ ಬಿಟ್ಟು ಓದಿಸಬಹುದು. ಇಂತದೊಂದು ಆಪಾದನೆಗೆ ಬಲರಾಮನ ಗೋವಿನಂತಹ ಪೇಜಾವರರೇ ಗುರಿಯಾಗಿರುವಾಗ ಉಳಿದವರ ಬಗ್ಗೆ ಮಾತನಾಡುವುದೇ ಮಹಾಪರಾಧ ಎಂದರಲ್ಲಾ, ಥೂತ್ತೇರಿ!!

ಇನ್ನ ಸಿದ್ದರಾಮಯ್ಯನ ಅಭಿಮಾನಿ ಸ್ವಾಮಿಯೊಬ್ಬರು ಆಗಾಗ್ಗೆ ಸುದ್ದಿ ಮಾಡುತ್ತಲೇ ಇರುತ್ತಾರೆ. ಅದಕ್ಕೂ ಮೊದಲು `ಆ ಸಿದ್ದರಾಮಯ್ಯ ನನಗೆ ಬರೀ ನಮಸ್ಕಾರ ಮಾಡುತ್ತಾನೆಯೇ ಹೊರತು, ಕಾಲಿಗೆ ಬೀಳುವುದಿಲ್ಲ’ ಎಂದು ಗುಟುರು ಹಾಕಿದ್ದ ಆ ಗುರುಗಳು, `ಸಿದ್ದು ಮತ್ತೆ ಮುಖ್ಯಮಂತ್ರಿಯಾಗಬೇಕು. ನನ್ನ ಆಶೀರ್ವಾದ ಸದಾ ಅವರ ಜೊತೆಯಲ್ಲಿರುತ್ತದೆ’ ಎಂದಿದ್ದರು. ಈ ಆಶೀರ್ವಾದ ಅಂದರೇನು, ಅದು ಸದಾ ಜೊತೆಯಲ್ಲಿರಬೇಕಾದರೆ ಅದರ ಆಕಾರ ಏನು ಎಂಬುದನ್ನು ಗುರುಗಳು ವಿವರಿಸಿಲ್ಲ. ಏಕೆಂದರೆ ಅವರಾಡಿದ ಮಾತನ್ನೇ ಭಕ್ತಾದಿಗಳು ತಮಗೆ ತಿಳಿದಂತೆ ಅರ್ಥೈಸಿಕೊಳ್ಳಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ಸದರಿ ಗುರುಗಳು ಕುರಿ ರಾಷ್ಟ್ರೀಯ ಪ್ರಾಣಿ. ಅದರ ಹತ್ಯೆ ನಿಲ್ಲಿಸಿ ಗೌರವ ಸಲ್ಲಿಸಬೇಕೆಂದು ಕರೆಕೊಟ್ಟಿದ್ದರು. ಈ ವಿಷಯವಾಗಿ ಕುರಿಗಳ ಕಡೆಯಿಂದ ಯಾವ ಬೆಂಬಲ ಬರದಿದ್ದರೂ, ಕುರಿ ಕೂದು ಧರ್ಮ ಸುಲಿದು ದುಗ್ಗಾಣಿಗೆ ತೆಗೆದುಕೊಂಡು ಹೋಗುವ ಸಾಬರು, ಬೋಟಿಪ್ರಿಯರು, ಚಾಪೀಸ್ ಭಕ್ಷುಗಳು, ಕೈಮಾಕಾಂಕ್ಷಿಗಳು ಮತ್ತೆ ತಲೆಕಾಲು ಸೂಪಿನ ವ್ಯಸನಿಗಳು ಒಕ್ಕೊರಲಿನಿಂದ ಪ್ರತಿಭಟಿಸಿದಾಗ ಕುರಿಗಳೇ ತಲೆಯಲ್ಲಾಡಿಸಿ ಬೆಂಬಲ ಸೂಚಿಸಿದವಲ್ಲಾ, ಥೂತ್ತೇರಿ!!!

ಜಗದ್ಗುರುಗಳೇ ದಿಕ್ಕು ತಪ್ಪಿದ ಭಾಷೆ ಬಳಸಿ, ಅಸಂಬದ್ದ ಮಾತನಾಡುತ್ತಿರುವಾಗ, ಇನ್ನ ಅವರ ಕಾಲಿಗೆ ಬೀಳುತ್ತಿರುವ ರಾಜಕಾರಣಿಗಳ ಮಾತು ಕೇಳಬೇಕೆ, ಅದರಲ್ಲೂ ನಮ್ಮ ಈಶ್ವರಪ್ಪನ ನಾಲಿಗೆಯಂತೂ ಬಳ್ಳಾರಿ ಜಾಲಿ ಮುಳ್ಳಿನಂತೆ. ಎಷ್ಟೇ ಆಗಲಿ ಅಲ್ಲಿಂದಲೇ ಶಿವಮೊಗ್ಗದ ಕಡೆ ಹೋದವರಲ್ಲವೇ. ಆದರೂ ಕಲೆ, ಸಾಹಿತ್ಯ, ಸಂಗೀತ, ಸಂಸ್ಕøತಿಗಳನ್ನ ಪೋಷಿಸಿಕೊಂಡು ಬರುತ್ತಿರುವ ಆ ಶಿವಮೊಗ್ಗದ ಸಂಸ್ಕøತಿಯ ಕಿಂಚಿತ್ ಸ್ಪರ್ಶವೂ ತಮ್ಮ ಮೇಲಾಗದಂತೆ ಎಚ್ಚರಿಕೆ ವಹಿಸಿ ಮೇಲೇರಿದ ಈಶ್ವರಪ್ಪನ ಒರಿಜಿನಾಲಿಟಿಯನ್ನ ಮೆಚ್ಚಲೇಬೇಕಂತಲ್ಲಾ. ಯಾರೇ ಆಗಲಿ ತಮ್ಮ ಮೂಲ ಸಂಸ್ಕøತಿ ಬಿಟ್ಟುಕೊಟ್ಟರೆ ವ್ಯಕ್ತಿತ್ವವೇ ನಾಶವಾಗಿ ಹೋದಂತೆ, ಇದನ್ನ ಇಟ್ಟುಕೊಂಡರೆ “ಪಾಪ ಅವನೆಡ್ತಿ ಸರಿಯಿಲ್ಲ ಇನ್ನೇನು ಮಾಡ್ತನೆ” ಎನ್ನುತ್ತಾರೆ. ಯಾರಾದರೂ ಹೆಣ್ಣು ಮಗಳು ರೇಪಿಗೆ ಒಳಗಾದರೆ “ಕೇಳಿದ ಕೂಡ್ಳೆ ಕೊಟ್ಟಿದ್ರೆ ರೇಪ್ಯಾಕಾಗದು” ಎನ್ನುತ್ತಾರೆ. ಹಾಗೆಯೇ “ಮಂತ್ರಿಯಾಗಿ ಇಷ್ಟು ಆಸ್ತಿ ಮಾಡಿಕೊಂಡಿರಲ್ಲಾ” ಎಂದರೆ, ಮಿನಿಸ್ಟರಾಗಿ ಪಾರ್ಟಿ ಜನಗಳನ್ನ ಸಾಕಬೇಕಲ್ಲ ಏಣು ಮಾಡ್ಳಿ ಎಂದು ಇನ್ನ ಅಂದಿಲ್ಲವಂತಲ್ಲಾ, ಥೂತ್ತೇರಿ!!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...