Homeಕರ್ನಾಟಕಉದ್ಯೋಗಿಗಳ ಶೋಷಣೆ ಮಾಡುತ್ತಿದೆಯೇ ಮಂಗಳೂರಿನ "ಝೊಮೆಟೊ"?

ಉದ್ಯೋಗಿಗಳ ಶೋಷಣೆ ಮಾಡುತ್ತಿದೆಯೇ ಮಂಗಳೂರಿನ “ಝೊಮೆಟೊ”?

ಆರಂಭದಲ್ಲಿ ಉತ್ತಮ ಉದ್ಯೋಗದಾತನಾಗಿ ಕಂಡಿದ್ದ ಈ ಕಂಪನಿ ಈಗ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಬೇಕು. ಖುಷಿಯಿಂದ ಹೊಟ್ಟೆ ತುಂಬಿಸಿಕೊಳ್ಳುವ ಗ್ರಾಹಕರೂ ಕೂಡ ನಮಗೆ ಆಹಾರ ತಲುಪಿಸುವ ಉದ್ಯೋಗಿಗಳ ಪರ ದನಿ ಎತ್ತಬೇಕಿದೆ.

- Advertisement -
- Advertisement -

ಮನೆ ಮನೆಗೆ ಆಹಾರ ಪೂರೈಕೆಯ ಕಂಪನಿಗಳಾದ ಸ್ವಿಗ್ಗಿ, ಝೊಮೆಟೊ ಮತ್ತು ಉಬರ್‌ ಈಟ್ಸ್‌ ದೇಶಾದ್ಯಂತ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿವೆ. ಜೊತೆಗೆ ಕುಳಿತಲ್ಲಿಗೆ ಬಯಸಿದ ಆಹಾರ ಸಿಗುವುದರಿಂದ ಗ್ರಾಹಕರು ಸಹ ಖುಷಿಗೊಂಡಿದ್ದರು. ಆರಂಭದಲ್ಲಿ ಉತ್ತಮ ಸೇವೆ ನೀಡಿದ್ದರಿಂದ ಗ್ರಾಹಕರು ಮತ್ತು ಉದ್ಯೋಗಿಗಳು ಇಬ್ಬರೂ ಸಂಭ್ರಮಪಟ್ಟಿದ್ದು ಸುಳ್ಳಲ್ಲ. ಆದರೆ ಬರುಬರುತ್ತಾ ಈ ಕಂಪನಿಗಳು ಲಾಭದ ದಾಹಕ್ಕೆ ಬಿದ್ದು ಉದ್ಯೋಗಿಗಳನ್ನು ಕಡೆಗಣಿಸುತ್ತಿದ್ದಾರೆ, ಅವರ ಶೋಷಣೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ತಮ್ಮ ಮೇಲಿನ ಶೋಷಣೆಯ ವಿರುದ್ಧ ಪ್ರತಿಭಟಿಸಲು ಉದ್ಯೋಗಿಗಳು ಹಿಂದೇಟು ಹಾಕುತ್ತಾರೆ. ಅದಕ್ಕೆ ಮೊದಲ ಕಾರಣ ಅವರನ್ನು ನೇಮಿಸಿಕೊಳ್ಳುವಾಗಲೇ ಉದ್ಯೋಗಿಗಳು ಅಥವಾ ಕಾರ್ಮಿಕರು ಎಂದು ಕರೆಯದೇ ಪಾಲುದಾರರು (ಪಾರ್ಟನರ್‍ಸ್‌) ಎಂದು ನೇಮಿಸಿಕೊಳ್ಳಲಾಗುತ್ತದೆ. ಹಾಗಾಗಿ ಹೋರಾಟ ಮಾಡುವುದು ಅವರ ಹಕ್ಕಾಗಿರುವುದಿಲ್ಲ ಎಂದು ಬೆದರಿಸಲಾಗುತ್ತದೆ.

ದೊಡ್ಡ ದೊಡ್ಡ ಕಂಪೆನಿಗಳಿಗೆ ತನ್ನ ಉದ್ಯೋಗಿಗಳೆಂದರೆ ಯಾವತ್ತಿಗೂ ಅಷ್ಟಕ್ಕಷ್ಟೇ. ಉದ್ಯೋಗಿಗಳ ಅಳಲನ್ನು ಅವು ಕೇಳುವುದೇ ಇಲ್ಲ. ತನ್ನ ಉದ್ಯೋಗಿಗಳನ್ನು ಆದಷ್ಟು ದುಡಿಸಿ ತನ್ನ ಜೇಬನ್ನು ತುಂಬಿಕೊಳ್ಳುವ ಆಲೋಚನೆಯನ್ನೇ ಹೆಚ್ಚಿನ ಕಂಪೆನಿಗಳು ಹೊಂದಿವೆ. ದಿನವಿಡೀ ದುಡಿದರೂ ತನ್ನ ಕುಟುಂಬದ ಹೊಟ್ಟೆಗೆ ಆಹಾರ ನೀಡುವಷ್ಟು ಹಣ ಉಳಿಯುವುದಿಲ್ಲ ಎಂದರೆ ಅಂತಹ ಉದ್ಯೋಗಿಗಳ ಪಾಡನ್ನು ನೀವೇ ಆಲೋಚಿಸಿ. ಇಂತಹುದೇ ಆರೋಪದಲ್ಲಿ ಆಹಾರ ಪೂರೈಕೆಯ ದಿಗ್ಗಜ ಎನಿಸಿಕೊಂಡ “ಝೊಮೆಟೊ” ಸಿಲುಕಿಕೊಂಡಿದೆ. ಉದ್ಯೋಗಿಗಳು ರಕ್ತ ಬಸಿದು ದುಡಿದರೂ ಅವರಿಗೆ ನ್ಯಾಯಯುತ ಪಾಲನ್ನು ಕಂಪೆನಿ ನೀಡದೆ ಅನ್ಯಾಯ ಮಾಡುತ್ತಿದೆ ಎಂಬ ಆರೋಪ ದಟ್ಟವಾಗಿ ಕೇಳಿಬಂದಿದೆ.

ಮೋಸ ಎಲ್ಲಿ?

ಈ ಮೊದಲು ಒಂದು ಆರ್ಡರ್‌ಗೆ 35 ರೂಗಳು ಮತ್ತು ಉತ್ತಮ ರೇಟಿಂಗ್‌ಗೆ 10ರೂ ಕೊಡಲಾಗುತ್ತಿತ್ತು. ಆನಂತರ ಒಂದು ಆರ್ಡರ್‌ಗೆ 30 ರೂಗಳು ಮತ್ತು ಉತ್ತಮ ರೇಟಿಂಗ್‌ಗೆ 10ರೂ ಇತ್ತು. ಈಗ ಒಂದು ಆರ್ಡರ್‌ಗೆ 20 ರೂಗಳು ಮತ್ತು ಉತ್ತಮ ರೇಟಿಂಗ್‌ಗೆ 5 ರೂ ಇಳಿಸಲಾಗಿದೆ. ಮಾರ್ಚ್‌ನಿಂದ ಆರ್ಡರ್‌ವೊಂದಕ್ಕೆ 16ರೂಗಿಳಿಸಲು ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.

ಮೊದಲು 10 ಆರ್ಡರ್‌ಗಳನ್ನು ಪೂರೈಸಿದರೆ 200-300ರೂ ಇನ್ಸೆಂಟೀವ್‌ ಸಿಗುತ್ತಿತ್ತು. ಈಗ ಅಷ್ಟು ಸಿಗಬೇಕಾದರೆ ದಿನಕ್ಕೆ 20 ಆರ್ಡರ್‌ಗಳನ್ನು ಪೂರೈಸಬೇಕು ಮತ್ತು ಕನಿಷ್ಠ ದಿನದಲ್ಲಿ 10:30 ಗಂಟೆಗಳ ಕಾಲ ಆನ್‌ಲೈನ್‌‌ನಲ್ಲಿ ಇರಬೇಕು ಎಂಬ ನಿಯಮ ಹೇರಲಾಗಿದೆ.

ಈ ಮೊದಲ 160 ಗಂಟೆಗಳು ಕೆಲಸ ನಿರ್ವಹಿಸಿದ್ದರೆ ಕೊಡುತ್ತಿದ್ದ ಇನ್ಸೆಂಟೀವ್‌ ಅನ್ನು ಈಗ 190 ಗಂಟೆಗಳಿಗೆ ಏರಿಸಲಾಗಿದೆ.

ಸ್ವಿಗ್ಗಿ ಕಂಪನಿ
ಝೊಮೆಟೊ

ಒಟ್ಟಾರೆ ದಿನೇ ದಿನೇ ಉದ್ಯೋಗಿಗಳಿಗೆ ಸಿಗುತ್ತಿದ್ದ ಹಣದಲ್ಲಿ ಕಡಿತವಾಗುತ್ತಿದೆ. ಮೊದಲು ಒಂದೇ ರೆಸ್ಟೋರೆಂಟ್‌ನಿಂದ ಆಹಾರ ತೆಗೆದುಕೊಂಡು ಹೋಗುತ್ತಿದ್ದವರು ಈಗ ಒಂದೇ ಆರ್ಡರ್‌ಗೆ ಎರಡು ರೆಸ್ಟೋರೆಂಟ್‌ಗಳಿಂದ ತೆಗೆದುಕೊಂಡುಹೋಗಬೇಕಾಗಿದೆ. ಪೆಟ್ರೊಲ್‌ ಖರ್ಚು ಕಳೆದು ದಿನಕ್ಕೆ 500 ರೂ ಉಳಿಸಿ ತಿಂಗಳಿಗೆ 15000 ರೂ ಸಂಪಾದಿಸುತ್ತಿದ್ದ ಉದ್ಯೋಗಿಗಳು ಈಗ ತಿಂಗಳಿಗೆ 10000 ಉಳಿಸುವುದೇ ಕಷ್ಟ ಎನ್ನುತ್ತಿದ್ದಾರೆ. ಮೊದಲು ಪಾರ್ಟ್ ಟೈಂ ಆಗಿ ಕೆಲಸ ಮಾಡುತ್ತಿದ್ದವರಿಗೆ ಈಗ ಹೊಸ ನಿಯಮಗಳ ಬಳಿಕ ಅವಕಾಶವೇ ಇಲ್ಲದಂತಾಗಿದೆ.

ಮಂಗಳೂರಿನ ಝೊಮೆಟೊ ಸಂಸ್ಥೆಯಲ್ಲಿನ ಡೆಲಿವರಿ ಬಾಯ್‌ಗಳು ಕಳೆದ ಮೂರು ದಿನದಿಂದ ಕೆಲಸಕ್ಕೆ  ಹೋಗದೆ ತನ್ನ ಕಂಪೆನಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಕಂಪೆನಿ ತಮ್ಮ ಬೆವರಿನ ಪಾಲನ್ನು ನೀಡುತ್ತಿಲ್ಲ ಎಂದು ಉದ್ಯೋಗಿಗಳು ಆರೋಪಿಸುತ್ತಿದ್ದಾರೆ‌. ಆದರೂ ಕಂಪೆನಿಯು ಅವರನ್ನು ಮಾತನಾಡಿಸದೇ ಕೆಲಸದಿಂದ ಕಿತ್ತೊಗೆಯುವ ಬೆದರಿಕೆಯ ಜೊತೆಗೆ, ತಮ್ಮ ವಿರುದ್ಧ ಮಾತನಾಡಿದ ಉದ್ಯೋಗಿಗಳಿಗೆ ಆರ್ಡರ್ ಸಿಗದಂತೆ ಅವರ ಮೊಬೈಲನ್ನು ಬ್ಲಾಕ್ ಮಾಡಿದೆ ಎಂಬ ಆರೋಪಗಳಿವೆ.

ವರ್ಷಗಳಿಂದಲೂ ಝೊಮೆಟೊ ಸಂಸ್ಥೆಯಲ್ಲಿ ದುಡಿಯುತ್ತಿರುವ ಹೆಸರು ಹೇಳಲು ಇಚ್ಚಿಸದ ಉದ್ಯೋಗಿಯೊಬ್ಬರ ಪ್ರಕಾರ “ನಾವು ಕಳೆದ ಮೂರು ದಿನದಿಂದ ಸುಮಾರು ಇನ್ನೂರರಷ್ಟು ಉದ್ಯೋಗಿಗಳು ಪ್ರತಿಭಟನೆ ಮಾಡುತ್ತಿದ್ದೇವೆ. ಆದರೆ ಕಂಪೆನಿಯು ಸೌಜನ್ಯಕ್ಕಾದರೂ ನಮ್ಮೊಂದಿಗೆ ಮಾತುಕತೆ ನಡೆಸುತ್ತಿಲ್ಲ. ಅವರ ವಿರುದ್ಧ ಮಾತಾನಾಡಿದ ಸುಮಾರು ಆರು ಜನರ ಮೊಬೈಲಿನ ಆರ್ಡರನ್ನು ಕಂಪೆನಿ ಬ್ಲಾಕ್ ಮಾಡಿದೆ. ಕಳೆದ ಒಂದು ವರ್ಷದಿಂದ ಈ ಕಂಪೆನಿಯಲ್ಲಿ ದುಡಿಯುತ್ತಾ ಇದ್ದೇವೆ. ಈಗ ಸತತವಾಗಿ ನಮ್ಮ ‌ದುಡಿಮೆಯ ಹಣವನ್ನು ಇಳಿಕೆ ಮಾಡುತ್ತಿದ್ದಾರೆ. ಈಗಲೇ ನೋಡಿ ಎಂಟು ಗಂಟೆಯಿಂದ ಕರ್ತವ್ಯದಲ್ಲಿ ಇದ್ದೇನೆ ಆದರೂ ನೂರೈವತ್ತು ರುಪಾಯಿಗಳ ದುಡಿಮೆಯೂ ಆಗಿಲ್ಲ” ಎಂದು ಅಳಲು ತೋಡಿಕೊಂಡರು.

ಅವರ ದುಡಿಮೆಯನ್ನು ತಿಳಿಸುವ ಸ್ಕ್ರೀನ್‌ ಶಾಟ್‌ ಹೀಗಿದೆ.

ಹೆಸರು ಹೇಳಲು ಇಚ್ಛಿಸದ ಮತ್ತೊಬ್ಬ ಉದ್ಯೋಗಿ “ಝೊಮೆಟೊ ಕಂಪೆನಿಯು ಸತತವಾಗಿ ರೇಟ್ ಕಾರ್ಡ್ ಇಳಿಸುತ್ತಿದೆ. ಹಿಂದೆಯೆಲ್ಲ ಒಂದು ಆರ್ಡರ್ ಸುಮಾರು ಇಪ್ಪತ್ತು ‌ನಿಮಿಷದಲ್ಲಿ ಮುಗಿಯುತ್ತಿತ್ತು. ಈಗ ಕಂಪನಿಯೂ ಎರೆಡೆರೆಡು ರೆಸ್ಟೊರೆಂಟಿನ ಆರ್ಡರ್ ನೀಡುತ್ತಿದೆ. ಇದರಿಂದ ಒಂದು ಆರ್ಡರ್‌ನ ಆಹಾರವನ್ನು ತಲುಪಿಸಲು ಸುಮಾರು ಒಂದರಿಂದ ಒಂದುವರೆ ಗಂಟೆಗಳು ತಗುಲುತ್ತದೆ. ಅಲ್ಲದೆ ಹಿಂದೆಯೆಲ್ಲ ನಮ್ಮ ಟಾರ್ಗೆಟ್‌ ಮುಗಿಸಿ ಯಾವಾಗ ಬೇಕಾದರೂ ನಾವು ಮನೆಗೆ ಹೋಗಬಹುದಾಗಿತ್ತು. ಆದರೆ ಈಗ ರಾತ್ರಿ ಹತ್ತರಿಂದ ಹನ್ನೊಂದು ಗಂಟೆಯವರೆಗೂ ಕೆಲಸ ನಿರ್ವಹಿಸಬೇಕು ಇಲ್ಲವೆಂದರೆ ನಮ್ಮ ಇನ್ಸೆಂಟಿವ್ ಕಡಿತಗೊಳಿಸುತ್ತಾರೆ” ಎಂದು ಹೇಳುತ್ತಾರೆ.

ಈ ಬಗ್ಗೆ ಪ್ರತಿಕ್ರಿಯೆಗಾಗಿ ಮಂಗಳೂರಿನ ಝೊಮೆಟೊ ಕಛೇರಿಯ ಮೇಲ್ವಿಚಾರಕರಾದ ಹರಿ ಪ್ರಸಾದ್ ಅವರನ್ನು ನಾನುಗೌರಿ.ಕಾಂ ವತಿಯಿಂದ ಸಂಪರ್ಕಿಸಿಲು ಪ್ರಯತ್ನಿಸಿತು. ಆದರೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಮತ್ತೊಬ್ಬ ಮೇಲ್ವಿಚಾರಕರಾದ ಸಿರಾಜ್ ಅವರನ್ನು ಸಂಪರ್ಕಿಸಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸುವುದರಲ್ಲಿ ತಳಮಟ್ಟದ ಉದ್ಯೋಗಿಗಳ ಕೊಡುಗೆ ಮಹತ್ತದ್ದೇ ಆಗಿದೆ. ಕಂಪೆನಿಯು ಏಕಾಏಕಿ ಸತತವಾಗಿ ತಮ್ಮ ರೇಟ್ ಕಾರ್ಡನ್ನು ಇಳಿಕೆ ಮಾಡಿದುದರ ಫಲವಾಗಿ ಉದ್ಯೋಗಿಗಳು ಕಂಗಾಲಾಗಿದ್ದಾರೆ. ರಾತ್ರಿ ಹತ್ತು ಗಂಟೆಯವರೆಗೂ ದುಡಿದರೂ ದುಡಿಮೆಗೆ ಸರಿಯಾದ ಪ್ರತಿಫಲ ಸಿಗುತ್ತಿಲ್ಲ. ಹೊಸ ಉದ್ಯೋಗಿಗಳನ್ನು ಇಟ್ಟು ಅವರನ್ನು ಬೆದರಿಸುತ್ತಾ ದುಡಿಸುತ್ತಿದ್ದಾರೆ ಹಾಗಾಗಿ ನಮ್ಮ ಧ್ವನಿ ಅವರಿಗೆ ಕೇಳುತ್ತಿಲ್ಲ ಎಂದು ಉದ್ಯೋಗಿಗಳು ಆರೋಪಿಸುತ್ತಿದ್ದಾರೆ. ಉದ್ಯೋಗಿಗಳ ಮನವಿಯನ್ನು ಕೇಳದ ಝೊಮೆಟೊ ಸಂಸ್ಥೆಯ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸುವ ಬಗ್ಗೆ ಆಲೋಚಿಸುತ್ತಿರುವುದಾಗಿ ಉದ್ಯೋಗಿಗಳು ತಿಳಿಸಿದ್ದಾರೆ.

ಆದರೆ ಪ್ರತಿಭಟನೆಗೆ ಮುಂದಾದರೆ ಝೊಮೆಟೊ ಕಂಪನಿಯು ಪೊಲೀಸ್‌ ಕೇಸ್‌ ಹಾಕುವ ಬೆದರಿಕೆಯೊಡ್ಡಿದೆ. ಇದು ಕೇವಲ ಮಂಗಳೂರಿನ ಕಥೆ ಮಾತ್ರ ಅಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಈ ಶೋಷಣೆ ಮುಂದುವರೆಯುತ್ತಿದೆ. ಆರಂಭದಲ್ಲಿ ಉತ್ತಮ ಉದ್ಯೋಗದಾತನಾಗಿ ಕಂಡಿದ್ದ ಈ ಕಂಪನಿ ಈಗ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಬೇಕು. ಖುಷಿಯಿಂದ ಹೊಟ್ಟೆ ತುಂಬಿಸಿಕೊಳ್ಳುವ ಗ್ರಾಹಕರೂ ಕೂಡ ನಮಗೆ ಆಹಾರ ತಲುಪಿಸುವ ಉದ್ಯೋಗಿಗಳ ಪರ ದನಿ ಎತ್ತಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...