Homeಕರ್ನಾಟಕಉದ್ಯೋಗಿಗಳ ಶೋಷಣೆ ಮಾಡುತ್ತಿದೆಯೇ ಮಂಗಳೂರಿನ "ಝೊಮೆಟೊ"?

ಉದ್ಯೋಗಿಗಳ ಶೋಷಣೆ ಮಾಡುತ್ತಿದೆಯೇ ಮಂಗಳೂರಿನ “ಝೊಮೆಟೊ”?

ಆರಂಭದಲ್ಲಿ ಉತ್ತಮ ಉದ್ಯೋಗದಾತನಾಗಿ ಕಂಡಿದ್ದ ಈ ಕಂಪನಿ ಈಗ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಬೇಕು. ಖುಷಿಯಿಂದ ಹೊಟ್ಟೆ ತುಂಬಿಸಿಕೊಳ್ಳುವ ಗ್ರಾಹಕರೂ ಕೂಡ ನಮಗೆ ಆಹಾರ ತಲುಪಿಸುವ ಉದ್ಯೋಗಿಗಳ ಪರ ದನಿ ಎತ್ತಬೇಕಿದೆ.

- Advertisement -
- Advertisement -

ಮನೆ ಮನೆಗೆ ಆಹಾರ ಪೂರೈಕೆಯ ಕಂಪನಿಗಳಾದ ಸ್ವಿಗ್ಗಿ, ಝೊಮೆಟೊ ಮತ್ತು ಉಬರ್‌ ಈಟ್ಸ್‌ ದೇಶಾದ್ಯಂತ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿವೆ. ಜೊತೆಗೆ ಕುಳಿತಲ್ಲಿಗೆ ಬಯಸಿದ ಆಹಾರ ಸಿಗುವುದರಿಂದ ಗ್ರಾಹಕರು ಸಹ ಖುಷಿಗೊಂಡಿದ್ದರು. ಆರಂಭದಲ್ಲಿ ಉತ್ತಮ ಸೇವೆ ನೀಡಿದ್ದರಿಂದ ಗ್ರಾಹಕರು ಮತ್ತು ಉದ್ಯೋಗಿಗಳು ಇಬ್ಬರೂ ಸಂಭ್ರಮಪಟ್ಟಿದ್ದು ಸುಳ್ಳಲ್ಲ. ಆದರೆ ಬರುಬರುತ್ತಾ ಈ ಕಂಪನಿಗಳು ಲಾಭದ ದಾಹಕ್ಕೆ ಬಿದ್ದು ಉದ್ಯೋಗಿಗಳನ್ನು ಕಡೆಗಣಿಸುತ್ತಿದ್ದಾರೆ, ಅವರ ಶೋಷಣೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ತಮ್ಮ ಮೇಲಿನ ಶೋಷಣೆಯ ವಿರುದ್ಧ ಪ್ರತಿಭಟಿಸಲು ಉದ್ಯೋಗಿಗಳು ಹಿಂದೇಟು ಹಾಕುತ್ತಾರೆ. ಅದಕ್ಕೆ ಮೊದಲ ಕಾರಣ ಅವರನ್ನು ನೇಮಿಸಿಕೊಳ್ಳುವಾಗಲೇ ಉದ್ಯೋಗಿಗಳು ಅಥವಾ ಕಾರ್ಮಿಕರು ಎಂದು ಕರೆಯದೇ ಪಾಲುದಾರರು (ಪಾರ್ಟನರ್‍ಸ್‌) ಎಂದು ನೇಮಿಸಿಕೊಳ್ಳಲಾಗುತ್ತದೆ. ಹಾಗಾಗಿ ಹೋರಾಟ ಮಾಡುವುದು ಅವರ ಹಕ್ಕಾಗಿರುವುದಿಲ್ಲ ಎಂದು ಬೆದರಿಸಲಾಗುತ್ತದೆ.

ದೊಡ್ಡ ದೊಡ್ಡ ಕಂಪೆನಿಗಳಿಗೆ ತನ್ನ ಉದ್ಯೋಗಿಗಳೆಂದರೆ ಯಾವತ್ತಿಗೂ ಅಷ್ಟಕ್ಕಷ್ಟೇ. ಉದ್ಯೋಗಿಗಳ ಅಳಲನ್ನು ಅವು ಕೇಳುವುದೇ ಇಲ್ಲ. ತನ್ನ ಉದ್ಯೋಗಿಗಳನ್ನು ಆದಷ್ಟು ದುಡಿಸಿ ತನ್ನ ಜೇಬನ್ನು ತುಂಬಿಕೊಳ್ಳುವ ಆಲೋಚನೆಯನ್ನೇ ಹೆಚ್ಚಿನ ಕಂಪೆನಿಗಳು ಹೊಂದಿವೆ. ದಿನವಿಡೀ ದುಡಿದರೂ ತನ್ನ ಕುಟುಂಬದ ಹೊಟ್ಟೆಗೆ ಆಹಾರ ನೀಡುವಷ್ಟು ಹಣ ಉಳಿಯುವುದಿಲ್ಲ ಎಂದರೆ ಅಂತಹ ಉದ್ಯೋಗಿಗಳ ಪಾಡನ್ನು ನೀವೇ ಆಲೋಚಿಸಿ. ಇಂತಹುದೇ ಆರೋಪದಲ್ಲಿ ಆಹಾರ ಪೂರೈಕೆಯ ದಿಗ್ಗಜ ಎನಿಸಿಕೊಂಡ “ಝೊಮೆಟೊ” ಸಿಲುಕಿಕೊಂಡಿದೆ. ಉದ್ಯೋಗಿಗಳು ರಕ್ತ ಬಸಿದು ದುಡಿದರೂ ಅವರಿಗೆ ನ್ಯಾಯಯುತ ಪಾಲನ್ನು ಕಂಪೆನಿ ನೀಡದೆ ಅನ್ಯಾಯ ಮಾಡುತ್ತಿದೆ ಎಂಬ ಆರೋಪ ದಟ್ಟವಾಗಿ ಕೇಳಿಬಂದಿದೆ.

ಮೋಸ ಎಲ್ಲಿ?

ಈ ಮೊದಲು ಒಂದು ಆರ್ಡರ್‌ಗೆ 35 ರೂಗಳು ಮತ್ತು ಉತ್ತಮ ರೇಟಿಂಗ್‌ಗೆ 10ರೂ ಕೊಡಲಾಗುತ್ತಿತ್ತು. ಆನಂತರ ಒಂದು ಆರ್ಡರ್‌ಗೆ 30 ರೂಗಳು ಮತ್ತು ಉತ್ತಮ ರೇಟಿಂಗ್‌ಗೆ 10ರೂ ಇತ್ತು. ಈಗ ಒಂದು ಆರ್ಡರ್‌ಗೆ 20 ರೂಗಳು ಮತ್ತು ಉತ್ತಮ ರೇಟಿಂಗ್‌ಗೆ 5 ರೂ ಇಳಿಸಲಾಗಿದೆ. ಮಾರ್ಚ್‌ನಿಂದ ಆರ್ಡರ್‌ವೊಂದಕ್ಕೆ 16ರೂಗಿಳಿಸಲು ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.

ಮೊದಲು 10 ಆರ್ಡರ್‌ಗಳನ್ನು ಪೂರೈಸಿದರೆ 200-300ರೂ ಇನ್ಸೆಂಟೀವ್‌ ಸಿಗುತ್ತಿತ್ತು. ಈಗ ಅಷ್ಟು ಸಿಗಬೇಕಾದರೆ ದಿನಕ್ಕೆ 20 ಆರ್ಡರ್‌ಗಳನ್ನು ಪೂರೈಸಬೇಕು ಮತ್ತು ಕನಿಷ್ಠ ದಿನದಲ್ಲಿ 10:30 ಗಂಟೆಗಳ ಕಾಲ ಆನ್‌ಲೈನ್‌‌ನಲ್ಲಿ ಇರಬೇಕು ಎಂಬ ನಿಯಮ ಹೇರಲಾಗಿದೆ.

ಈ ಮೊದಲ 160 ಗಂಟೆಗಳು ಕೆಲಸ ನಿರ್ವಹಿಸಿದ್ದರೆ ಕೊಡುತ್ತಿದ್ದ ಇನ್ಸೆಂಟೀವ್‌ ಅನ್ನು ಈಗ 190 ಗಂಟೆಗಳಿಗೆ ಏರಿಸಲಾಗಿದೆ.

ಸ್ವಿಗ್ಗಿ ಕಂಪನಿ
ಝೊಮೆಟೊ

ಒಟ್ಟಾರೆ ದಿನೇ ದಿನೇ ಉದ್ಯೋಗಿಗಳಿಗೆ ಸಿಗುತ್ತಿದ್ದ ಹಣದಲ್ಲಿ ಕಡಿತವಾಗುತ್ತಿದೆ. ಮೊದಲು ಒಂದೇ ರೆಸ್ಟೋರೆಂಟ್‌ನಿಂದ ಆಹಾರ ತೆಗೆದುಕೊಂಡು ಹೋಗುತ್ತಿದ್ದವರು ಈಗ ಒಂದೇ ಆರ್ಡರ್‌ಗೆ ಎರಡು ರೆಸ್ಟೋರೆಂಟ್‌ಗಳಿಂದ ತೆಗೆದುಕೊಂಡುಹೋಗಬೇಕಾಗಿದೆ. ಪೆಟ್ರೊಲ್‌ ಖರ್ಚು ಕಳೆದು ದಿನಕ್ಕೆ 500 ರೂ ಉಳಿಸಿ ತಿಂಗಳಿಗೆ 15000 ರೂ ಸಂಪಾದಿಸುತ್ತಿದ್ದ ಉದ್ಯೋಗಿಗಳು ಈಗ ತಿಂಗಳಿಗೆ 10000 ಉಳಿಸುವುದೇ ಕಷ್ಟ ಎನ್ನುತ್ತಿದ್ದಾರೆ. ಮೊದಲು ಪಾರ್ಟ್ ಟೈಂ ಆಗಿ ಕೆಲಸ ಮಾಡುತ್ತಿದ್ದವರಿಗೆ ಈಗ ಹೊಸ ನಿಯಮಗಳ ಬಳಿಕ ಅವಕಾಶವೇ ಇಲ್ಲದಂತಾಗಿದೆ.

ಮಂಗಳೂರಿನ ಝೊಮೆಟೊ ಸಂಸ್ಥೆಯಲ್ಲಿನ ಡೆಲಿವರಿ ಬಾಯ್‌ಗಳು ಕಳೆದ ಮೂರು ದಿನದಿಂದ ಕೆಲಸಕ್ಕೆ  ಹೋಗದೆ ತನ್ನ ಕಂಪೆನಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಕಂಪೆನಿ ತಮ್ಮ ಬೆವರಿನ ಪಾಲನ್ನು ನೀಡುತ್ತಿಲ್ಲ ಎಂದು ಉದ್ಯೋಗಿಗಳು ಆರೋಪಿಸುತ್ತಿದ್ದಾರೆ‌. ಆದರೂ ಕಂಪೆನಿಯು ಅವರನ್ನು ಮಾತನಾಡಿಸದೇ ಕೆಲಸದಿಂದ ಕಿತ್ತೊಗೆಯುವ ಬೆದರಿಕೆಯ ಜೊತೆಗೆ, ತಮ್ಮ ವಿರುದ್ಧ ಮಾತನಾಡಿದ ಉದ್ಯೋಗಿಗಳಿಗೆ ಆರ್ಡರ್ ಸಿಗದಂತೆ ಅವರ ಮೊಬೈಲನ್ನು ಬ್ಲಾಕ್ ಮಾಡಿದೆ ಎಂಬ ಆರೋಪಗಳಿವೆ.

ವರ್ಷಗಳಿಂದಲೂ ಝೊಮೆಟೊ ಸಂಸ್ಥೆಯಲ್ಲಿ ದುಡಿಯುತ್ತಿರುವ ಹೆಸರು ಹೇಳಲು ಇಚ್ಚಿಸದ ಉದ್ಯೋಗಿಯೊಬ್ಬರ ಪ್ರಕಾರ “ನಾವು ಕಳೆದ ಮೂರು ದಿನದಿಂದ ಸುಮಾರು ಇನ್ನೂರರಷ್ಟು ಉದ್ಯೋಗಿಗಳು ಪ್ರತಿಭಟನೆ ಮಾಡುತ್ತಿದ್ದೇವೆ. ಆದರೆ ಕಂಪೆನಿಯು ಸೌಜನ್ಯಕ್ಕಾದರೂ ನಮ್ಮೊಂದಿಗೆ ಮಾತುಕತೆ ನಡೆಸುತ್ತಿಲ್ಲ. ಅವರ ವಿರುದ್ಧ ಮಾತಾನಾಡಿದ ಸುಮಾರು ಆರು ಜನರ ಮೊಬೈಲಿನ ಆರ್ಡರನ್ನು ಕಂಪೆನಿ ಬ್ಲಾಕ್ ಮಾಡಿದೆ. ಕಳೆದ ಒಂದು ವರ್ಷದಿಂದ ಈ ಕಂಪೆನಿಯಲ್ಲಿ ದುಡಿಯುತ್ತಾ ಇದ್ದೇವೆ. ಈಗ ಸತತವಾಗಿ ನಮ್ಮ ‌ದುಡಿಮೆಯ ಹಣವನ್ನು ಇಳಿಕೆ ಮಾಡುತ್ತಿದ್ದಾರೆ. ಈಗಲೇ ನೋಡಿ ಎಂಟು ಗಂಟೆಯಿಂದ ಕರ್ತವ್ಯದಲ್ಲಿ ಇದ್ದೇನೆ ಆದರೂ ನೂರೈವತ್ತು ರುಪಾಯಿಗಳ ದುಡಿಮೆಯೂ ಆಗಿಲ್ಲ” ಎಂದು ಅಳಲು ತೋಡಿಕೊಂಡರು.

ಅವರ ದುಡಿಮೆಯನ್ನು ತಿಳಿಸುವ ಸ್ಕ್ರೀನ್‌ ಶಾಟ್‌ ಹೀಗಿದೆ.

ಹೆಸರು ಹೇಳಲು ಇಚ್ಛಿಸದ ಮತ್ತೊಬ್ಬ ಉದ್ಯೋಗಿ “ಝೊಮೆಟೊ ಕಂಪೆನಿಯು ಸತತವಾಗಿ ರೇಟ್ ಕಾರ್ಡ್ ಇಳಿಸುತ್ತಿದೆ. ಹಿಂದೆಯೆಲ್ಲ ಒಂದು ಆರ್ಡರ್ ಸುಮಾರು ಇಪ್ಪತ್ತು ‌ನಿಮಿಷದಲ್ಲಿ ಮುಗಿಯುತ್ತಿತ್ತು. ಈಗ ಕಂಪನಿಯೂ ಎರೆಡೆರೆಡು ರೆಸ್ಟೊರೆಂಟಿನ ಆರ್ಡರ್ ನೀಡುತ್ತಿದೆ. ಇದರಿಂದ ಒಂದು ಆರ್ಡರ್‌ನ ಆಹಾರವನ್ನು ತಲುಪಿಸಲು ಸುಮಾರು ಒಂದರಿಂದ ಒಂದುವರೆ ಗಂಟೆಗಳು ತಗುಲುತ್ತದೆ. ಅಲ್ಲದೆ ಹಿಂದೆಯೆಲ್ಲ ನಮ್ಮ ಟಾರ್ಗೆಟ್‌ ಮುಗಿಸಿ ಯಾವಾಗ ಬೇಕಾದರೂ ನಾವು ಮನೆಗೆ ಹೋಗಬಹುದಾಗಿತ್ತು. ಆದರೆ ಈಗ ರಾತ್ರಿ ಹತ್ತರಿಂದ ಹನ್ನೊಂದು ಗಂಟೆಯವರೆಗೂ ಕೆಲಸ ನಿರ್ವಹಿಸಬೇಕು ಇಲ್ಲವೆಂದರೆ ನಮ್ಮ ಇನ್ಸೆಂಟಿವ್ ಕಡಿತಗೊಳಿಸುತ್ತಾರೆ” ಎಂದು ಹೇಳುತ್ತಾರೆ.

ಈ ಬಗ್ಗೆ ಪ್ರತಿಕ್ರಿಯೆಗಾಗಿ ಮಂಗಳೂರಿನ ಝೊಮೆಟೊ ಕಛೇರಿಯ ಮೇಲ್ವಿಚಾರಕರಾದ ಹರಿ ಪ್ರಸಾದ್ ಅವರನ್ನು ನಾನುಗೌರಿ.ಕಾಂ ವತಿಯಿಂದ ಸಂಪರ್ಕಿಸಿಲು ಪ್ರಯತ್ನಿಸಿತು. ಆದರೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಮತ್ತೊಬ್ಬ ಮೇಲ್ವಿಚಾರಕರಾದ ಸಿರಾಜ್ ಅವರನ್ನು ಸಂಪರ್ಕಿಸಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸುವುದರಲ್ಲಿ ತಳಮಟ್ಟದ ಉದ್ಯೋಗಿಗಳ ಕೊಡುಗೆ ಮಹತ್ತದ್ದೇ ಆಗಿದೆ. ಕಂಪೆನಿಯು ಏಕಾಏಕಿ ಸತತವಾಗಿ ತಮ್ಮ ರೇಟ್ ಕಾರ್ಡನ್ನು ಇಳಿಕೆ ಮಾಡಿದುದರ ಫಲವಾಗಿ ಉದ್ಯೋಗಿಗಳು ಕಂಗಾಲಾಗಿದ್ದಾರೆ. ರಾತ್ರಿ ಹತ್ತು ಗಂಟೆಯವರೆಗೂ ದುಡಿದರೂ ದುಡಿಮೆಗೆ ಸರಿಯಾದ ಪ್ರತಿಫಲ ಸಿಗುತ್ತಿಲ್ಲ. ಹೊಸ ಉದ್ಯೋಗಿಗಳನ್ನು ಇಟ್ಟು ಅವರನ್ನು ಬೆದರಿಸುತ್ತಾ ದುಡಿಸುತ್ತಿದ್ದಾರೆ ಹಾಗಾಗಿ ನಮ್ಮ ಧ್ವನಿ ಅವರಿಗೆ ಕೇಳುತ್ತಿಲ್ಲ ಎಂದು ಉದ್ಯೋಗಿಗಳು ಆರೋಪಿಸುತ್ತಿದ್ದಾರೆ. ಉದ್ಯೋಗಿಗಳ ಮನವಿಯನ್ನು ಕೇಳದ ಝೊಮೆಟೊ ಸಂಸ್ಥೆಯ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸುವ ಬಗ್ಗೆ ಆಲೋಚಿಸುತ್ತಿರುವುದಾಗಿ ಉದ್ಯೋಗಿಗಳು ತಿಳಿಸಿದ್ದಾರೆ.

ಆದರೆ ಪ್ರತಿಭಟನೆಗೆ ಮುಂದಾದರೆ ಝೊಮೆಟೊ ಕಂಪನಿಯು ಪೊಲೀಸ್‌ ಕೇಸ್‌ ಹಾಕುವ ಬೆದರಿಕೆಯೊಡ್ಡಿದೆ. ಇದು ಕೇವಲ ಮಂಗಳೂರಿನ ಕಥೆ ಮಾತ್ರ ಅಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಈ ಶೋಷಣೆ ಮುಂದುವರೆಯುತ್ತಿದೆ. ಆರಂಭದಲ್ಲಿ ಉತ್ತಮ ಉದ್ಯೋಗದಾತನಾಗಿ ಕಂಡಿದ್ದ ಈ ಕಂಪನಿ ಈಗ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಬೇಕು. ಖುಷಿಯಿಂದ ಹೊಟ್ಟೆ ತುಂಬಿಸಿಕೊಳ್ಳುವ ಗ್ರಾಹಕರೂ ಕೂಡ ನಮಗೆ ಆಹಾರ ತಲುಪಿಸುವ ಉದ್ಯೋಗಿಗಳ ಪರ ದನಿ ಎತ್ತಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...