Homeರಾಜಕೀಯಅನಂತಕುಮಾರ್ ಏಕೆ ಎಲ್ಲರ ಶ್ರದ್ಧಾಂಜಲಿ ಪಡೆದರು?

ಅನಂತಕುಮಾರ್ ಏಕೆ ಎಲ್ಲರ ಶ್ರದ್ಧಾಂಜಲಿ ಪಡೆದರು?

- Advertisement -
- Advertisement -

ಕೇಂದ್ರ ಸಚಿವ, ಕರ್ನಾಟಕದ ಭಾಜಪ ನಾಯಕ ಅನಂತಕುಮಾರ್ ಅವರು ಅಕಾಲಿಕ ನಿಧನ ಹೊಂದಿದ್ದಾರೆ. ಅವರ ಸಾವಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ, ಶ್ರದ್ಧಾಂಜಲಿಗಳ ಮಹಾಪೂರವೇ ಹರಿದು ಬರುತ್ತಿದೆ. ಅಚ್ಚರಿ ಎಂದರೆ ಅವರ ಭಾಜಪ ಅಭಿಮಾನಿಗಳಷ್ಟೆÃ ಅವರ ತಾತ್ವಿಕ ವಿರೋಧಿಗಳೂ ನಮನ ಸಲ್ಲಿಸುತ್ತಿದ್ದಾರೆ. ಸಾವಿನ ಸಂದರ್ಭದಲ್ಲಿ ಕುಹಕದ ವಿಕೃತಿಗಳು ಇರಕೂಡದು ಎಂಬ ನಡವಳಿಕೆ ಎಲ್ಲಾ ನಾಗರಿಕತೆಗಳಲ್ಲೂ ಇದೆ. ನಮ್ಮಲ್ಲೂ ಅಳಿದಿಲ್ಲ ಎಂಬುದು ಗಮನಾರ್ಹ.
ಈ ಗೌರವ ಸಲ್ಲಿಕೆ ಅನಂತಕುಮಾರ್ ಅವರ ರಾಜಕೀಯ, ತಾತ್ವಿಕ ವಿರೋಧಿಗಳಿಂದ ಬಂದಿದೆ ಎಂಬುದು ಈ ಮಂದಿಯ ಸಾಂಸದಿಕ ನಡವಳಿಕೆಯನ್ನು ತೋರಿಸುತ್ತದೆ. ಹಲವರು ಗಮನಿಸಿದಂತೆ, ಇದೇ ಕಾಂಗ್ರೆಸ್‌ನ ಯಾರಾದರೂ ಸತ್ತಿದ್ದರೆ, ಭಾಜಪ/ ಹಿಂದುತ್ವ ಬಳಗದ ವಿಕೃತರ ಪೈಶಾಚಿಕ ಪೋಸ್ಟ್ಗಳು ಹೇಗಿರುತ್ತಿದ್ದವು ಎಂದು ಊಹಿಸಲೂ ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಈ ಸಂತಾಪ ತೋರಿದ ಭಾಜಪ ವಿರೋಧಿಗಳೇ ಈ ದೇಶದ ಪ್ರಜಾಸತ್ತೆಯನ್ನು ಉಳಿಸುವ ಶಕ್ತಿ.
ಅನಂತಕುಮಾರ್ ಅವರಿಗೆ ಈ ಶ್ರದ್ಧಾಂಜಲಿ ಹೇಗೆ ಹರಿದುಬಂತು? ಕಾಟಾಚಾರಕ್ಕೊÃ, ಹಿಂದುತ್ವದ ವಿಕೃತರ ಎದುರು, ‘ನಾವು ನೋಡಿ ಎಷ್ಟು ಶಿಷ್ಟವಾಗಿ ಪ್ರತಿಕ್ರಿಯಿಸುತ್ತಿದ್ದೆÃವೆ’ ಎಂಬ ತೋರುಗಾಣಿಕೆ ಈ ಪೋಸ್ಟುಗಳಲ್ಲಿ ಕಾಣಿಸಲಿಲ್ಲ. ಇದರರ್ಥ ಅನಂತಕುಮಾರ್ ವ್ಯಕ್ತಿತ್ವ ಯಾವುದೋ ಬಗೆಯಲ್ಲಿ ನಮ್ಮನ್ನು ತಟ್ಟಿದೆ.
ನಮ್ಮ ಸಾಮಾಜಿಕ ,ರಾಜಕೀಯ ಬದುಕಿನಲ್ಲಿ ದಿನಗಳೆದಂತೆ ಕೆಡುತ್ತಿದೆ, ಮೌಲ್ಯಗಳು ಶಿಥಿಲವಾಗುತ್ತಿದೆ ಎಂಬ ನಂಬಿಕೆ ದೃಢವಾಗುವಂಥಾ ಪುರಾವೆಗಳು ಹಿಡಿಯುತ್ತಲೇ ಇವೆ. ಇದನ್ನು ಠಿಡಿogಡಿessive ಆegeಟಿeಡಿಚಿಣioಟಿ ಅಂತ ಕರೆಯುವುದಿದೆ. ಅಂದರೆ ಒಂದು ನಾಗರಿಕತೆ ವಿಕಾಸಗೊಂಡು ಉತ್ತಮವಾಗುವ ಬದಲು ದಿನೇ ದಿನೇ ಇನ್ನಷ್ಟು ಕೆಡುತ್ತಾ, ಕೊಳೆಯುತ್ತಾ ಹೋಗುತ್ತಿದೆ ಎಂಬ ಹತಾಶೆ ಇದು. ಹಿಂದಿನ ಕಾಲ ಎಷ್ಟು ಚೆನ್ನಾಗಿತ್ತು ಎಂಬ ಹಿನ್ನೊÃಟದ ಹಳಹಳಿಕೆ ಎಲ್ಲಾ ತಲೆಮಾರಿಗೂ ಇದೆ. ಆದರೆ ಈ ದುಗುಡ ಅದಕ್ಕಿಂತ ಗುಣಾತ್ಮಕವಾಗಿ ಭಿನ್ನ. ಅಂದರೆ ಹಿಂದಿನದ್ದಕ್ಕಿಂತ ಈಗಿರುವುದು ಇನ್ನಷ್ಟು ಕೆಡುಕಾಗಿ ತೋರುವ ಬಗೆ. ಗುಂಡೂರಾವ್ ಬಂದಾಗ ಅರಸು ಬೆಟರ್ ಅನ್ನಿಸುತ್ತೆ. ಮೋದಿ ಕಂಡಾಗ ಇಂದಿರಾ ಕೊಡುಗೆ ಕಾಡುತ್ತದೆ. ಹೀಗೆ.. (ಸ್ವತಃ ಮೋದಿಯಂಥವರಿಗೆ ಈ ಚಾರಿತ್ರಿಕ ಗ್ರಹಿಕೆ ಅರ್ಥವಾಗುವುದಿಲ್ಲ, ಅದು ಬೇರೆ ಮಾತು.)
ನಾಗರಿಕತೆಯ ಮಾನದಂಡದಲ್ಲಿ ಹಿಂದಿನದ್ದು ಉತ್ತಮ ಎಂಬ ಗ್ರಹಿಕೆಗೆ ಇಂಬು ನೀಡುವಂಥಾ ನಡಾವಳಿಗಳು ಜರುಗಿದಷ್ಟೂ ಸಾಮೂಹಿಕ ಸ್ಮೃತಿಯಲ್ಲಿ ಇದು ಗಟ್ಟಿಯಾಗುತ್ತಾ ಹೋಗುತ್ತದೆ. ಈ ಮಾನದಂಡವನ್ನು ಪ್ರಜೆಗಳು ನಿರ್ವಚಿಸುವ ರೀತಿ ಸುಲಭ ಅಕಡೆಮಿಕ್ ಗ್ರಹಿಕೆಗೆ ನಿಲುಕುವಂಥಾದ್ದಲ್ಲ.
ಅನಂತಕುಮಾರ್ ಅವರ ಸಾವಿನ ಹಿನ್ನೆಲೆಯಲ್ಲಿ ಇದು ಪ್ರಸ್ತುತ. ಸ್ವತಃ ಅನಂತಕುಮಾರ್, ಅಧ್ವಾನಿಯವರು ಕಟ್ಟೆಯೊಡೆದು ಬಿಟ್ಟ ರೂಕ್ಷ ಕೋಮು ಧ್ರುವೀಕರಣದ ಕೂಸು. ಆದರೆ ಅನಂತಕುಮಾರ್ ಈ ಕೋಮು ಕಿರುಚಾಟದ ಭಾಗವಾಗಿರಲಿಲ್ಲ. ಅದರ ಸೂತ್ರಧಾರರಾಗಿದ್ದರು. ಹಲವರು ಗುರುತಿಸಿದಂತೆ ಅವರು ತೆರೆಮರೆಯ ಕೆಲಸಗಾರ. ‘90ರ ದಶಕದಲ್ಲಿ ನಿಷ್ಕರುಣ ಲೆಕ್ಕಾಚಾರದ ರಾಜಕಾರಣದ ಪ್ರತೀಕವಾಗಿ ಕಂಡಿದ್ದ ಅದ್ವಾನಿ ಮೋದಿ ಆಗಮನದ ಬಳಿಕ ಬಸವಳಿದ ಪಾಳೇಗಾರನ ತರ ಕಾಣುತ್ತಿದ್ದಾರೆ. ಅದ್ವಾನಿಯ ಸಂಸದೀಯ ನಡವಳಿಕೆ ಆಪ್ಯಾಯಮಾನವಾಗಿ ಕಾಣುತ್ತಿದೆ. ಅನಂತಕುಮಾರ ಕೂಡಾ ಅಷ್ಟೆÃ. ಬಾಯಿಗೆ ಬಂದ ಹಾಗೆ ಮಾತಾಡುವ, ಬೆಂಕಿ ಇಡುವ ಅಸಭ್ಯ ಮಾತೇ ನಾಯಕತ್ವದ ಲಕ್ಷಣ ಎಂಬಂತೆ ವರ್ತಿಸುವ ಹಿಂದುತ್ವದ ಪಡ್ಡೆ ಸ್ವಭಾವದೆದುರು, ಅನಂತಕುಮಾರ್ ತಾವು ರೂಢಿಸಿಕೊಂಡು ಬಂದಿದ್ದ ತಾಳ್ಮೆ, ಭಾಷೆಯ ಸಂಯಮ, ಸಂವಾದದ ಜಾಣ್ಮೆಯ ಕಾರಣಕ್ಕೆ ಈಗ ಹಿತವಾಗಿ ಕಾಣಿಸುತ್ತಿದ್ದಾರೆ. ನಮ್ಮ ಕಾಲದ ಪ್ರಭಾವ ಇದು. ನಾಲಗೆ ಅಷ್ಟಾಗಿ ಸಡಿಲು ಬಿಡದ ಅನಂತಕುಮಾರ್ ವಿವಾದಾತ್ಮಕ ವಿಷಯಗಳು ಬಂದಾಗ ಮೆತ್ತಗೆ ದೂರ ಉಳಿವ ಜಾಣ್ಮೆ ಉಳ್ಳವರು. ಮೈಕ್ ಕಂಡ ತಕ್ಷಣ ಬೆದೆಗೆ ಬಂದ ಹೋರಿಗಳ ತರ ಆಡುವ ಇತರರ ಎದುರು ಅನಂತಕುಮಾರ್ ಪರವಾಗಿಲ್ಲ ಅನ್ನಿಸುತ್ತದೆ.
ಇನ್ನು ಆಡಳಿತಾತ್ಮಕ ದಕ್ಷತೆ ಇತ್ಯಾದಿಗಳು ಹೀಗೆ ನೀಗಿಕೊಂಡಾಗ ಮುನ್ನೆಲೆಗೆ ಬರುವ ಸಂಗತಿ. ಮೋದಿ ಸರ್ಕಾರದ ದುಸ್ಥಿತಿ ಹೇಗಿದೆಯೆಂದರೆ ಬೆರಳೆಣಿಕೆಯ ಸಚಿವರು ಬಿಟ್ಟರೆ ಉಳಿದವರ ಹೆಸರೂ ಜನರಿಗೆ ಗೊತ್ತಿಲ್ಲ. ಈ ದೃಷ್ಟಿಯಲ್ಲಿ ಅನಂತ್ ಕುಮಾರ್ ಸುಮಾರಾಗಿ ಕೆಲಸ ನಿರ್ವಹಿಸಿದ್ದಾರೆ. ಅದಕ್ಕಿಂತಲೂ ಈಗ ಅವರ ಬಗ್ಗೆ ಸದಭಿಪ್ರಾಯ ಮೂಡಿರುವುದು ದೆಹಲಿಯ ಚಕ್ರವ್ಯೂಹದಲ್ಲಿ ಕನ್ನಡ/ ಕರ್ನಾಟಕದ ಕೆಲಸಗಳ ಬಗ್ಗೆ ವೈಯಕ್ತಿಕ ನೆಲೆಯಲ್ಲಿ ಸ್ಪಂದಿಸಿದ ಬಗ್ಗೆ. ಹಲವಾರು ಹೆಸರಾಂತ ವ್ಯಕ್ತಿಗಳ ಜೊತೆ ಅನಾಮಿಕರೂ ತಮಗೆ ಅನಂತಕುಮಾರ್ ಸ್ಪಂದಿಸಿದ ಬಗ್ಗೆ ಬರೆದಿದ್ದಾರೆ. ಈ ಗುಡ್‌ವಿಲ್ ರಾಜಕಾರಣಿಗೆ ಆಪತ್ಕಾಲದ ಗಂಟು. ಮುಖ್ಯತಃ ಪಕ್ಷ/ ಸೈದ್ಧಾಂತಿಕ ವಿರೋಧಿಗಳ ಜೊತೆಯೂ ಒಂದು ಕಿಂಡಿ ಸದಾ ತೆರೆÀದಿಟ್ಟುಕೊಂಡ ವ್ಯಕ್ತಿ ಅನಂತಕುಮಾರ್.
“ಬರಡು ಬಯಲಲ್ಲಿ ತುಂಬೆ ಗಿಡವೂ ಮರವೇ..” ಎಂಬ ಮಾತಿದೆ. ಹಿಂದುತ್ವದ ಅಮಾನುಷ ವಿಕೃತಿಯ ಪ್ರೆÃತಕುಣಿತದ ನಡುವೆ ಸೌಜನ್ಯದ ಸಂವಾದದ ಕಲೆ ರೂಢಿಸಿಕೊಂಡಿದ್ದ ಅನಂತಕುಮಾರ್ ಹೊಂಗೆ ಮರದ ಹಾಗೆ ಕಂಡಿದ್ದು ಅಚ್ಚರಿ ಅಲ್ಲ. ದೊಡ್ಡ ನಾಯಕನ ವಿಶಿಷ್ಟ ಗುಣ ಅವರಲ್ಲಿ ಕಾಣಿಸಲಿಲ್ಲ. ದಿವಾನರ ಶೈಲಿಯ ಪ್ರಭಾವಿ ಗುಣವಷ್ಟೆÃ ಅವರಲ್ಲಿದ್ದದ್ದು. ಯುವಜನರಿಗೆ ಸ್ಪಂದಿಸುವ ಸುವರ್ಣಾವಕಾಶ ತಟ್ಟೆಯಲ್ಲಿಟ್ಟು ಕೊಟ್ಟಾಗಲೂ ಕೆಡವಿ ಕೂತ ಅನಂತಕುಮಾರ ಹೆಗ್ಡೆಯಂಥಾ ಅಪ್ರಬುದ್ಧರನ್ನು ಕಂಡಾಗ ಈ ಸೀನಿಯರ್ ಅನಂತಕುಮಾರ್ ಗಮನ ಸೆಳೆಯುತ್ತಾರೆ!!! ಪುಣ್ಯಕ್ಕೆ ಅವರು ಅಧ್ವಾನಿ, ಯೆಡಿಯೂರಪ್ಪನವರ ತರ ನಿಸ್ತೆÃಜಗೊಂಡು ನಿರ್ಗಮನದ ಸಿದ್ಧತೆಯಲ್ಲಿರುವ ನಾಯಕನ ತರ ಕಾಣಿಸಲಿಲ್ಲ. ಉತ್ತುಂಗದಲ್ಲಿ ನಿರ್ಗಮಿಸಬೇಕು ಎನ್ನುವ ಆಸೆ ಮನುಷ್ಯನಿಗಿರುತ್ತದೆ. ಆದರೆ ಅದು ಕೈಗೂಡುವುದು ಕಡಿಮೆ. ಈ ಕಾಲದಲ್ಲಿ ಹರಿ ಚಿತ್ತವೆಂಬುದು ಪ್ರಜಾ ಚಿತ್ತ. ಆದರೆ ಅನಂತಕುಮಾರ್ ವಿಷಯದಲ್ಲಿ ವಿಧಿ ಕೊಂಚ ಕ್ರೂರವಾಯಿತು.

  • ಕೆ.ಪಿ.ಸುರೇಶ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...