Homeನ್ಯಾಯ ಪಥಇಂದಿನ ಸಮಾಜದ ತಲ್ಲಣಗಳು: ಎಚ್.ಎಸ್ ದೊರೆಸ್ವಾಮಿರವರ ಲೇಖನ

ಇಂದಿನ ಸಮಾಜದ ತಲ್ಲಣಗಳು: ಎಚ್.ಎಸ್ ದೊರೆಸ್ವಾಮಿರವರ ಲೇಖನ

- Advertisement -
- Advertisement -

| ಎಚ್.ಎಸ್ ದೊರೆಸ್ವಾಮಿ |

ಇಂದಿನ ಸಮಾಜ ಸಮಾಜವೇ ಅಲ್ಲ. ಒಂದು Human Jungle. ಪ್ರತಿಯೊಬ್ಬನೂ ತನಗಾಗಿ ಬದುಕುವವನು. ಯಾರಿಗೂ ಸಾಮಾಜಿಕ ಪ್ರಜ್ಞೆ ಇಲ್ಲ. ಸಮಾಜದಲ್ಲಿ ಬಡವ-ಬಲ್ಲಿದ, ಈ ಜಾತಿ-ಆ ಜಾತಿ, ಶೋಷಕರು-ಶೋಷಿತರು, ವಿದ್ಯಾವಂತ, ಕೋಟ್ಯಾಧಿಪತಿ, ಭಿಕ್ಷುಕ ಹೀಗೆ ಭೇದಾಸುರನ ಹಾವಳಿ ಇದೆ.

ಸಮಾಜದ ಜನ ಜೇಡಿಮಣ್ಣಿನಂತಿರಬೇಕು. ಜೇಡಿಮಣ್ಣಿನಲ್ಲಿ ಕಣಕಣಕ್ಕೆ ಘರಿಷ್ಠ ತಾಗಿ ಅಂಟಿಕೊಂಡಿರುತ್ತದೆ. ಆದರೆ ನಮ್ಮ ಸಮಾಜ ಮರಳು ದಿಬ್ಬದಂತಿದೆ. ನೋಡುವುದಕ್ಕೆ ಮರಳ ಕಣಗಳು ಒಂದಕ್ಕೊಂದು ಅಂಟಿಕೊಂಡಂತೆ ಕಂಡುಬಂದರೂ ಒಂದು ಬಿರುಗಾಳಿ ಬೀಸಿದಾಗ ಪ್ರತಿ ಕಣವೂ ಒಂದೊಂದು ದಿಕ್ಕಿಗೆ ಚದುರಿಹೋಗುತ್ತದೆ. ಜೇಡಿಮಣ್ಣಿನಲ್ಲಿ ಕಣಕಣವೂ ಗಟ್ಟಿಯಾಗಿ ಅಂಟಿಕೊಂಡಿರುವಂತೆ ನಮ್ಮ ಸಮಾಜ ಇರಬೇಕು. ನೆಹರೂ ಅವರ ಕಾಲದಲ್ಲಿ ಚೀನಾ, ಭಾರತ ಯುದ್ಧ ನಡೆಯಿತು. ಭಾರತ ಪೂರ್ವ ರಾಜ್ಯಗಳ ಟೀ ತೋಟದ ಮಾಲೀಕರು ಹಣ, ಒಡವೆ, ತೆಗೆದುಕೊಂಡು ಪ್ರಾಣ ರಕ್ಷಣೆಗೋಸ್ಕರ ತಮ್ಮ ಮನೆಮಂದಿಯನ್ನು ಕಟ್ಟಿಕೊಂಡು ಪಟ್ಟಣಗಳಿಗೆ ಓಡಿಹೋದರು. ಅವರಿಗೆ ತಮಗಾಗಿ ದುಡಿಯುತ್ತಿದ್ದ ಜನರನ್ನು ರಕ್ಷಿಸಬೇಕೆಂದು ಅನ್ನಿಸಲೇ ಇಲ್ಲ.

ಇದು ಪಟ್ಟಭದ್ರ ಹಿತಾಸಕ್ತಿಗಳ ಸಾಮಾಜಿಕ ನಡವಳಿಕೆ. ನನಗಾಗಿ ಸಮಾಜ, ಸಮಾಜಕ್ಕಾಗಿ ನಾನು ಎಂಬ ಭಾವನೆ ಜನರಲ್ಲಿ ಬೆಳೆಯಬೇಕು ಎಂದು ಸರ್ವೋದಯ ಬಯಸುತ್ತದೆ. ಸ್ವಾರ್ಥಕ್ಕಾಗಿ ಸಮಷ್ಠಿಯನ್ನು ಬಲಿಕೊಡುವ ಸಮಾಜ ಇದು. ಸಮಾಜವನ್ನು ಅಹಿಂಸೆ, ಸತ್ಯ, ಸಮಾನತೆ, ದಯೆ, ಇವುಗಳ ಆಧಾರದ ಮೇಲೆ ಕಟ್ಟಬೇಕು. ಹಸಿವು, ನೋವು, ರೋಗರುಜಿನ ಮತ್ತು ಬಡತನ ನಿರ್ಮೂಲನೆಯ ಮೂಲಕ ಎಲ್ಲರಲ್ಲೂ ಸಂತೋಷ, ಸಮಾಧಾನಗಳನ್ನು ಬೆಳೆಸಿ ಈ ದುಷ್ಟ ಸಮಾಜವನ್ನು ಅಹಿಂಸಾತ್ಮಕ ಮಾರ್ಗಗಳಿಂದ ಬದಲಾವಣೆಗೊಳಿಸಿ ಎಂದು ಗಾಂಧೀಜಿ ಹೇಳುತ್ತಾರೆ.

ಗಾಂಧೀಜಿಗೆ ಗುರಿಯಷ್ಟೇ, ಗುರಿ ತಲುಪುವ ಮಾರ್ಗವೂ ಮುಖ್ಯವಾಗಿತ್ತು. ಗುರಿಯನ್ನು ಅಪಮಾರ್ಗದಲ್ಲಿ ತಲುಪುವುದು ಕೂಡದು. ಅಹಿಂಸಕ ಸಮಾಜವನ್ನು ಹಿಂಸೆಯ ಮೂಲಕ ಕಟ್ಟಲು ಸಾಧ್ಯವಾಗುವುದಿಲ್ಲ ಎಂಬುದು ಗಾಂಧೀಜಿಯವರ ದೃಢ ನಿಲುವು.

ಮನುಷ್ಯನಿಂದ ಮನುಷ್ಯನ ಅಭ್ಯುದಯವೇ ಗಾಂಧೀಜಿಯವರ ಪರಮ ಧ್ಯೇಯ. ಎಲ್ಲಾ ಅಭಿವೃದ್ಧಿಯ ಕಾರ್ಯಕ್ರಮವೂ ಮಾನವನ ಉತ್ಕರ್ಷಕ್ಕೆ ಸಹ ಅನುಕೂಲಕರವಾಗಿರಬೇಕು. ಅಭಿವೃದ್ಧಿಯ ಮುಖ್ಯ ಗುರಿ ಸಮಾಜದಿಂದ ತಿರಸ್ಕøತನಾದ ಬಡವನ ಬಡತನ ನೀಗುವುದು. ವಿಚಾರಹೀನ ಅಭಿವೃದ್ಧಿಯ ಕಾರಣದಿಂದ ಮನುಷ್ಯನ ಭೌತಿಕ, ಮಾನಸಿಕ ಮತ್ತು ನೈತಿಕ ಜೀವನದ ಅವನತಿ ಆಗಿದೆ. ತಂತ್ರಜ್ಞಾನದ ಬೆಳವಣಿಗೆಯನ್ನು 3 ಕಾರಣಗಳಿಗಾಗಿ ವಿರೋಧಿಸುತ್ತಾರೆ. ಜಟಿಲ ಮತ್ತು ಬೃಹತ್ ಯಂತ್ರೋದ್ಯಮ, ಕೇಂದ್ರೀಕೃತ ವ್ಯವಸ್ಥೆಗೆ ತೆರೆದುಕೊಳ್ಳುತ್ತದೆ. ಹಾಗೆಯೇ ಅದು ಸಣ್ಣ ಪ್ರಮಾಣದ ಉದ್ಯಮಗಳನ್ನು ನುಂಗಿ ಹಾಕುತ್ತದೆ. ಮನುಷ್ಯನ ಕಷ್ಟಕರ ದುಡಿಮೆಯನ್ನು ಹಗುರಗೊಳಿಸಲು ಯಂತ್ರದ ಅಗತ್ಯವಿದೆ. ಆದರೆ ಈ ಬೃಹತ್ ಯಂತ್ರಗಳು ಕಾರ್ಮಿಕನನ್ನು ನಿರುದ್ಯೋಗಿ ಮಾಡಿ ಬೀದಿಗೆಸೆಯುತ್ತದೆ ಅಥವಾ ಅವನನ್ನು ತನ್ನ ಗುಲಾಮನನ್ನಾಗಿ ಮಾಡಿಕೊಳ್ಳುತ್ತದೆ.

ಭ್ರಷ್ಟಮುಕ್ತ ಆಡಳಿತ ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುವ ಒಂದು ಸಾಧನ. ಮಾನವೀಯತೆ ಕಳೆದುಕೊಂಡವರು ಮಾನವ ಹಕ್ಕುಗಳ ಕಡು ವೈರಿಗಳು. ಮಾನವ ಹಕ್ಕುಗಳ ಪಾಲನೆಗಿಂತಲೂ ಮಾನವ ಹಕ್ಕುಗಳ ಉಲ್ಲಂಘನೆಯೂ ಈಗ ಸಮಾಜದಲ್ಲಿ ಹೆಚ್ಚಾಗಿ ನಡೆಯುತ್ತಿದೆ. ನಕ್ಸಲ್‍ಬಾರಿಗಳನ್ನು ಹುಟ್ಟಿಹಾಕಿದ್ದು ದುಷ್ಟ ಆಡಳಿತ ಮತ್ತು ದೇಶದ ಕಡು ಬಡತನ.
ಪೊಲೀಸ್ ಠಾಣೆಗಳು, ನ್ಯಾಯಾಲಯಗಳು ಹೆಚ್ಚುತ್ತಿರುವುದು ಅಭಿವೃದ್ಧಿಯ ಲಕ್ಷಣಗಳಲ್ಲ. ಹೆಚ್ಚಿನ ಕಾನೂನುಗಳನ್ನು ಜನರ ಮೇಲೆ ಹೇರುವುದು ಪ್ರಗತಿಯ ಲಕ್ಷಣವಲ್ಲ. ಈ ಕಾನೂನುಗಳನ್ನು ಸರ್ಕಾರ ನಡೆಸುವವರನ್ನು ಟೀಕೆ ಮಾಡಿದವರ ಮೇಲೆ, ದುರಾಡಳಿತ ನಡೆಸುವುದನ್ನು ತಡೆಗಟ್ಟಲು ಹೋರಾಟ ಮಾಡುವವರ ಮೇಲೆ ಸೇಡು ತೀರಿಸಿಕೊಳ್ಳಲೇಬೇಕೆಂದು ಬಯಸುವುದು ಫ್ಯಾಸಿಸ್ಟ್ ರಾಷ್ಟ್ರಗಳಲ್ಲಿ ಮಾತ್ರ.

ಕಾನೂನು ಎಷ್ಟಿರಬೇಕು ಎಂದರೆ ಶರೀರದಲ್ಲಿ ಮಲವಿದ್ದಷ್ಟು ಮಾತ್ರ ಇರಬೇಕು. ಶರೀರವೆಲ್ಲವೂ ಮಲದಿಂದ ತುಂಬಿಕೊಂಡರೆ ಅದು ರೋಗರುಜಿನಗಳಿಗೆ, ಸಾವಿಗೆ ಕಾರಣವಾಗುತ್ತದೆ. ಕಾನೂನುಗಳನ್ನು ಬೆಳೆಸಿದಷ್ಟೂ ದೇಶದ ಸ್ವಾಸ್ಥ್ಯ ಕೆಟ್ಟು ಹೋಗುತ್ತದೆ ಎನ್ನುತ್ತಾರೆ ಪೂಜ್ಯ ವಿನೋಬಾ ಭಾವೆಯವರು.

ಈಗ ನಡೆಯುತ್ತಿರುವ ರಾಜಕೀಯ ಸಮರ ಸಮಾಜವನ್ನು ಒಡೆಯುತ್ತದೆ. ವಿಷಬೀಜ ಬಿತ್ತುತ್ತದೆ. ಸಿವಿಲ್ ವಾರ್‍ಗೆ ದಾರಿ ಮಾಡುತ್ತದೆ. ಧರ್ಮವನ್ನು, ಜಾತಿಗಳನ್ನೂ ರಾಜಕೀಯಕ್ಕೆ ಬೆರೆಸುವ ಕೆಲಸ ಎಲ್ಲ್ಲ ರಾಜಕೀಯ ಪಕ್ಷಗಳಲ್ಲೂ ನಡೆಯುತ್ತಿದೆ.

ಮೌಲ್ಯಗಳ ಅಧಃಪತನವೇ ನಮ್ಮ ಈ ಅಧೋಗತಿಗೆ ಕಾರಣ. ಮಾನವೀಯ ಮೌಲ್ಯಗಳಿಂದ ಕೂಡಿದ ಹೊಸ ಸಮಾಜವನ್ನು ಸೃಷ್ಠಿಸುವುದು ನಮ್ಮ ಗುರಿಯಾಗಬೇಕು.

ನಮ್ಮದು ಶ್ರೇಣೀಕೃತ ಸಮಾಜ. ನಮ್ಮ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಮೌಲ್ಯಗಳೆಲ್ಲout of date ಆಗಿದೆ. ಈ ಮೌಲ್ಯಗಳೆಲ್ಲ ಆಮೂಲಾಗ್ರವಾಗಿ ಬದಲಾವಣೆಯಾಗಬೇಕಿದೆ. ಇದನ್ನು ವೈಜ್ಞಾನಿಕ ಕ್ರಾಂತಿಯ ಮೂಲಕ ಪರಿವರ್ತನೆ ಮಾಡಬೇಕು.

Rule of Law ಪ್ರಕಾರ ರಾಜ್ಯಾಡಳಿತ ನಡೆಸಬೇಕು. ಆಡಳಿತಗಾರರ ದುರಹಂಕಾರದ ವಿರುದ್ಧ ಜನ ಸಿಡಿದೇಳಬೇಕು. ಹಿಂಸಾಚಾರದ ವಿರುದ್ಧವಾಗಿ ಜನ ಸಂಘಟನೆ ಆಗಬೇಕು. ಪ್ರತಿಯೊಬ್ಬ ಪ್ರಜೆಯೂ ಪರಾವಲಂಬಿಯಾಗದೇ ತನ್ನ ದುಡಿಮೆಯಿಂದ ಗೌರವಯುತ ಜೀವನ ನಡೆಸುವ ಸನ್ನಿವೇಶ ಸೃಷ್ಟಿಯಾಗಬೇಕು. ಸರ್ಕಾರ ಕೊಡುವ ಭಿಕ್ಷೆಗಾಗಿ ಕಾಯುವ ದುಸ್ಥಿತಿ ತೊಲಗಬೇಕು.

ಸುಳ್ಳು ಹೇಳಿಕೆಗಳನ್ನು ನೀಡುವ ಪೊಳ್ಳು ಘೋಷಣೆಗಳನ್ನು ಕೂಗುವ ಗೋಮುಖ ವ್ಯಾಘ್ರಗಳನ್ನು ಪರಿಣಾಮಕಾರಿಯಾಗಿ ಬಯಲಿಗೆಳೆಯಬೇಕು. ರಾಜಕೀಯ ಮತ್ತು ಉತ್ಪ್ರೇಕ್ಷೆ ಎರಡೂ ಹೆಣೆದುಕೊಂಡಿವೆ. ಅದನ್ನು ಬಯಲು ಮಾಡಬೇಕು. ಪಾರ್ಲಿಮೆಂಟ್ ಮತ್ತು ಅಸೆಂಬ್ಲಿಗಳು ಅಸಹ್ಯ ರೀತಿಯಲ್ಲಿ ನಡೆಯುತ್ತಿವೆ. ಈ ಹೊಣೆಗೇಡಿ ಸದಸ್ಯರ ಹುಚ್ಚಾಟಗಳನ್ನು ಪ್ರಜೆಗಳಿಗೆ ಮನವರಿಕೆ ಮಾಡಿಕೊಟ್ಟು, ಎಲ್ಲ ಶಾಸಕರ ಮತ್ತು ಪಾರ್ಲಿಮೆಂಟ್ ಸದಸ್ಯರ ಮನೆಯ ಮುಂದೆ ಧರಣಿ ಮಾಡುವುದಾಗಬೇಕು. ಕುಟಿಲ ರಾಜಕೀಯ ಈಗ ವಿಜೃಂಭಿಸುತ್ತಿದೆ. ಇದಕ್ಕೆ ಇತಿಶ್ರೀ ಹಾಡಲು ಜನರು ಜಾಗೃತರಾಗುವುದು ಮಾತ್ರ ನಮ್ಮ ಇಂದಿನ ಸಾಮಾಜಿಕ ತಲ್ಲಣಗಳಿಗೆ ಪರಿಹಾರ ಒದಗಿಸಿಕೊಡಬಲ್ಲದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ಪೊಲೀಸರಿಂದ ಬೈಕ್ ಸೀಝ್‌; ಠಾಣೆ ಮುಂದೆ ಬೆಂಕಿ ಹಚ್ಚಿಕೊಂಡ ‘ಗಿಗ್’ ಕಾರ್ಮಿಕ

ಪೊಲೀಸರು ತನ್ನ ಬೈಕ್‌ ವಶಪಡಿಸಿಕೊಂಡ ನಂತರ 32 ವರ್ಷದ ಗಿಗ್ ಕಾರ್ಮಿಕನೊಬ್ಬ ಠಾಣೆಯ ಹೊರಗೆ ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಅಕ್ಷಯ್ ಕಶ್ಯಪ್ ಎಂದು ಗುರುತಿಸಲ್ಪಟ್ಟ ಯುವಕನಿಗೆ ದೇಹದ...

ಎಪ್‌ಸ್ಟೀನ್ ಫೈಲ್ಸ್ ನಲ್ಲಿ ಹೆಸರು ಪ್ರಸ್ತಾಪ; ಗೇಟ್ಸ್ ಫೌಂಡೇಶನ್ ಸಿಬ್ಬಂದಿಗೆ ಕ್ಷಮೆಯಾಚಿಸಿದ ಬಿಲ್ ಗೇಟ್ಸ್: ವರದಿ 

ನ್ಯೂಯಾರ್ಕ್: ಅಮೆರಿಕದ ತಂತ್ರಜ್ಞಾನ ಉದ್ಯಮಿ ಬಿಲ್ ಗೇಟ್ಸ್, ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್‌ನೊಂದಿಗಿನ ಹಳೆಯ ಸಂಪರ್ಕಕ್ಕಾಗಿ ಗೇಟ್ಸ್ ಫೌಂಡೇಶನ್ ಸಿಬ್ಬಂದಿಗೆ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ. ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಫೌಂಡೇಶನ್‌ನ ಟೌನ್...

ಕೆಎಸ್‌ಯು-ಐಯುಎಂಎಲ್ ಪ್ರತಿಭಟನೆಯಲ್ಲಿ ಘರ್ಷಣೆ; ಗಾಯಗೊಂಡ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್

ಕಣ್ಣೂರು ರೈಲ್ವೆ ನಿಲ್ದಾಣದಲ್ಲಿ ಬುಧವಾರ ಪೊಲೀಸರು ಮತ್ತು ಕೇರಳ ವಿದ್ಯಾರ್ಥಿ ಸಂಘ (ಕೆಎಸ್‌ಯು)-ಐಯುಎಂಎಲ್ ಯುವ ಘಟಕದ ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ಕುತ್ತಿಗೆ ಮತ್ತು ಕೈಗೆ ಗಾಯಗಳಾಗಿದೆ. ಕಾಂಗ್ರೆಸ್-ಕೆಎಸ್‌ಯು...

ಉತ್ತರಾಖಂಡ| ದೇವಸ್ಥಾನದ ಸಮೀಪ ಖಾಲಿ ಜಾಗದಲ್ಲಿ ನಮಾಜ್; ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ

ಉತ್ತರಾಖಂಡದ ಜಗತ್ಪುರದ ಅತ್ರಿಯ ದೇವಸ್ಥಾನದ ಮುಂಭಾಗದಲ್ಲಿರುವ ಖಾಲಿ ಜಾಗದಲ್ಲಿ ನಮಾಜ್ ಮಾಡಿದ ನಂತರ ಶಾಹಿದ್ ಎಂದು ಗುರುತಿಸಲಾದ ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಧಾರ್ಮಿಕ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು...

ಮುಝಫ್ಫರ್‌ನಗರ ಗಲಭೆ ಪ್ರಕರಣ : 37 ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ಉತ್ತರ ಪ್ರದೇಶದ ಮುಝಫ್ಫರ್‌ನಗರದ ನ್ಯಾಯಾಲಯ 2013ರ ಕೋಮು ಗಲಭೆಗೆ ಸಂಬಂಧಿಸಿದ ಎಂಟು ಜನರ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯಗಳ ಕೊರತೆಯನ್ನು ಉಲ್ಲೇಖಿಸಿ 37 ಆರೋಪಿಗಳನ್ನು ಮಂಗಳವಾರ (ಫೆ.25) ಖುಲಾಸೆಗೊಳಿಸಿದೆ ಎಂದು ವರದಿಯಾಗಿದೆ. ತೀರ್ಪು ಪ್ರಕಟಿಸಿದ ಹೆಚ್ಚುವರಿ...

ಇಸ್ರೇಲ್ ಸಂಸತ್ತಿನಲ್ಲಿ ಭಾಷಣದ ವೇಳೆ ಪ್ರಧಾನಿ ಮೋದಿ ಗಾಝಾ ನರಮೇಧ ಉಲ್ಲೇಖಿಸಲಿ : ಪ್ರಿಯಾಂಕಾ ಗಾಂಧಿ ಆಗ್ರಹ

ಇಸ್ರೇಲ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಸಂಸತ್ತಾದ ನೆಸೆಟ್ ಅನ್ನು ಉದ್ದೇಶಿಸಿ ಮಾತನಾಡುವಾಗ ಗಾಝಾ ನರಮೇಧವನ್ನು ಉಲ್ಲೇಖಿಸಿ ನ್ಯಾಯಕ್ಕಾಗಿ ಆಗ್ರಹಿಸಬೇಕು ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ...

ಕೇಂದ್ರ ಸಚಿವರ ಸಮ್ಮುಖದಲ್ಲಿ ‘ಮುಸ್ಲಿಂ ವಿರೋಧಿ ಹೇಳಿಕೆ’ ನೀಡಿದ ಹಿಂದುತ್ವವಾದಿ ವ್ಯಕ್ತಿ

ಉತ್ತರಾಖಂಡದಲ್ಲಿ ನಡೆದ ಸಾರ್ವಜನಿಕ ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ, ಕೇಂದ್ರ ಸಚಿವರ ಸಮ್ಮುಖದಲ್ಲಿಯೇ ಹಿಂದುತ್ವವಾದಿ ಮುಖಂಡನೊಬ್ಬ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದು ರಾಜಕೀಯ ಮತ್ತು ಸಾಮಾಜಿಕ ವಿವಾದಕ್ಕೆ ಕಾರಣವಾಗಿದೆ. ಇದು ಪೊಲೀಸ್ ಕ್ರಮ...

ಎನ್‌ಸಿಇಆರ್‌ಟಿ ಪಠ್ಯಪುಸ್ತಕದ ‘ನ್ಯಾಯಾಂಗದಲ್ಲಿನ ಭ್ರಷ್ಟಾಚಾರ’ ವಿಷಯಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪ್ರಕಟಿಸಿದ 8ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ "ನ್ಯಾಯಾಂಗದಲ್ಲಿನ ಭ್ರಷ್ಟಾಚಾರ" ಎಂಬ ವಿಷಯ ಉಲ್ಲೇಖಿಸಿರುವುದಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಫೆ.25) ತೀವ್ರ...

ಮಧ್ಯಪ್ರದೇಶ: ಡಾ. ಹರಿಸಿಂಗ್ ಗೌರ್ ವಿವಿಯಲ್ಲಿ ಎಬಿವಿಪಿ-ಆರ್‌ಎಸ್‌ಎಸ್‌ ದುಷ್ಕರ್ಮಿಗಳಿಂದ ವಿದ್ಯಾರ್ಥಿಗಳ ಮೇಲೆ ದಾಳಿ, ಜೀವಬೆದರಿಕೆ;  ಎಫ್‌ಐಆರ್ ದಾಖಲು

ಮಧ್ಯಪ್ರದೇಶದ ಸಾಗರ್‌ನಲ್ಲಿರುವ ಡಾ. ಹರಿ ಸಿಂಗ್ ಗೌರ್ ವಿಶ್ವವಿದ್ಯಾಲಯದಲ್ಲಿ ನಡೆದ ಸರಣಿ ಹಿಂಸಾತ್ಮಕ ಘಟನೆಗಳು ಕ್ಯಾಂಪಸ್ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಉಂಟುಮಾಡಿವೆ. ಐದು ದಿನಗಳಲ್ಲಿ ಎಬಿವಿಪಿ-ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ವ್ಯಕ್ತಿಗಳಿಂದ ಎರಡು ಜೀವ...

ಅಜೀಂ ಪ್ರೇಮ್‌ ಜಿ ವಿವಿಯಲ್ಲಿ ದಾಂಧಲೆ : ಎಬಿವಿಪಿ ಸದಸ್ಯರ ವಿರುದ್ಧ ಕಠಿಣ ಕ್ರಮಕ್ಕೆ ಕೆವಿಎಸ್‌ ಆಗ್ರಹ

ಅಜೀಂ ಪ್ರೇಮ್‌ ಜಿ ವಿಶ್ವವಿದ್ಯಾಲಯಕ್ಕೆ ನುಗ್ಗಿ ದಾಂಧಲೆ ನಡೆಸಿದ ಎಬಿವಿಪಿ ಸದಸ್ಯರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್‌) ಆಗ್ರಹಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ರಾಜ್ಯ...