Homeಅಂಕಣಗಳುಇಲಿ ಇಕ್ಕಳದಲ್ಲಿ ಇಡಬಾರದನ್ನ ಇಟ್ಟೋರು

ಇಲಿ ಇಕ್ಕಳದಲ್ಲಿ ಇಡಬಾರದನ್ನ ಇಟ್ಟೋರು

- Advertisement -
- Advertisement -

ಆಘಾತವಾಣಿ |

ನಮಸ್ಕಾರ ಆಘಾತವಾಣಿಗೆ ಸ್ವಾಗತ, ವಾರ್ತೆಗಳು ಓದುತ್ತಿರುವವರು ಅಟ್ಯಾಕ್ ಹನ್ಮಂತ.
ಕರ್ನಾಟಕಕ್ಕೆ ಬಂದಿದ್ದ ಸುಳ್ ಫ್ಯಾಕ್ಟರಿ ಪಕೋಡೇಂದ್ರನು ಉಡುಪಿಯಲ್ಲಿ ಭಾಷಣ ಜಡಿದು ಉಡುಪಿ ಕೃಷ್ಣಮಠಕ್ಕೆ ಹೋಗದೆ ಇದ್ದುದರ ಬಗ್ಗೆ ನಾನಾರೀತಿಯ ಊಹಾಪೋಹಗಳು ಹರಿದಾಡುತ್ತಿವೆ. ಇವೆಲ್ಲ ಗಾಳಿಸುದ್ದಿಗಳಿಗೆ ತೆರೆ ಎಳೆದಿರುವ ಶ್ರೀಮತಿ ಶೋಭಕ್ಕನವರು “ಕೃಷ್ಣಮಠದೊಳಗೆ ಪಕೋಡೇಂದ್ರನಿಗೆ ಜೀವಭಯ ಇದ್ದುದರಿಂದ ಅವರು ಮಠಕ್ಕೆ ಎಡಗಾಲನ್ನೂ ಇಡದೆ ಹಂಗೇ ವಾಪಸ್ ಹೋಗಿದ್ದಾರೆಂದು’’ ತಿಳಿಸಿದ್ದಾರೆ. ಈ ಸುದ್ದಿ ಕೇಳಿದ ಕೃಷ್ಣಮಠದ ಪಿಂಚಣಿಸ್ವಾಮಿಗಳಾದ ‘ತೇಜಾವರ ಶ್ರಿ’ಗಳು “ತನ್ನಂಥ ಕುಪೋಷಣೆ ಪೀಡಿತ ಬಡಕಲು ದೇಹಿಯನ್ನು ಪಕೋಡೇಂದ್ರ ಅವರು ಟೆರರಿಸ್ಟ್ ಎಂದು ಭಯಬಿದ್ದಿರುವುದು ತನಗೆ ಅತ್ಯಂತ ಖೇದವುಂಟಾಗಿದೆ, ಈ ಖೇದವನ್ನು ಹೋಗಲಾಡಿಸಲು ನಾನು ಮುತಾಲಿಕನ ಅರೆಬರೆ ಮೀಸೆಯನ್ನು ತುಟಿಯಿಂದ ಕಿತ್ತು ಯಜ್ಞಕುಂಡಕ್ಕೆ ಹವಿಸ್ಸಾಗಿ ಹಾಕುವ ಮೂಲಕ ದೇವರಿಗೆ ವಿನಂತಿ ಮಾಡುತ್ತೇನೆ ಎಂದು ಇನ್ನೂ ಹೇಳಿಲ್ಲವೆಂದು ವರದಿಯಾಗಿದೆ.
< < < <
ಬಿಜೆಪಿ ಪಕ್ಷದಲ್ಲಿ ನೆಪಕ್ಕೊಂದು ಅಧ್ಯಕ್ಷನಿರಲಿ ಎಂದು ಇಟ್ಟುಕೊಳ್ಳದ ‘ಧಡಿಯೂರಪ್ಪ’ನನ್ನು ನಂಬಿಕೊಂಡರೆ ತಮ್ಮ ಕೈಗೆ ಮಟನ್ ಬಿರಿಯಾನಿ ಬೇಯಿಸುವ ಹಂಡೆ ಮಾತ್ರ ಸಿಗಲು ಸಾಧ್ಯ ಎಂದು ಚಿಂತೆಗೊಳಗಾಗಿರುವ ‘ಹಮೀದ್ ಷಾ’ ಇದಕ್ಕೊಂದು ಹೊಸ ಪ್ಲಾನು ರೆಡಿ ಮಾಡಿದ್ದಾರೆಂದು ಗೊತ್ತಾಗಿದೆ. ಎಲ್ಲೇ ಬಿಜೆಪಿ ಪಕ್ಷದ ಪ್ರಚಾರವಿರಲಿ ಅಲ್ಲಿ ಈ ಬುಡ್ಡಾಗಿರಾಕಿಯನ್ನು ಶೋಕೇಸ್ ಪೀಸಿನಂತೆ ಬಳಸಿಕೊಂಡು ಆಕಾಶ ಪಾತಾಳವಾಗಿ, ಪಾತಾಳ ಆಕಾಶವೇನಾದರೂ ಆಗಿ ಬಿಜೆಪಿ ಅಧಿಕಾರಕ್ಕೆ ಬಂದರೆ ‘ಹಾರೆಸ್ಸೆಸ್’ ವಯೋವೃದ್ಧರ ಕೊಂಪೆಯಿಂದ ‘ಚಂತೋಷ್ ಜೀ’ಯನ್ನು ದರದರನೆ ಕರೆತಂದು ಸಿಎಂ ಮಾಡುವುದಾಗಿ ‘ಹಮೀದ್ ಷಾ’ ಅವರು ನಿದ್ದೆಗಣ್ಣಿನಲ್ಲಿ ಕನವರಿಸಿಕೊಳ್ಳುತ್ತಿದ್ದರು ಎಂಬ ಸುದ್ದಿ ಬಹಿರಂಗವಾಗಿದೆ.
< < < <
ಕಾಂಗ್ರೆಸ್ ಪಕ್ಷದ ‘ಲಾಹುಲ್ ಗಾಂಧಿ’ ಬಸವಣ್ಣನವರ ವಚನವನ್ನು ಉಚ್ಚರಿಸಲು ಹೋಗಿ ಇವನರ್ವ, ಇವನರ್ವ ಎಂದು ತೆದ್ದೊದ್ದೊ ಬೊದ್ದೊದ್ದೊ ಮಾಡಿದ ಮೇಲೆ ಕಾಂಗ್ರೆಸ್ಸಿಗರನ್ನು ಬಿಜೆಪಿಗರು ಹುರಿದು ಉಪ್ಪಾಕಿಕೊಂಡು ನುಂಗಿ ನೆಕ್ಕಿದ್ದ ವಿಷಯ ತಮಗೆ ತಿಳಿದಿರಬಹುದು. ಅದೇ ಬಗೆಯಲ್ಲಿ ಉತ್ತರದ ಹಿಂದಿಗರ ಮನೆಯ ಜೀತದಾಳಾದ ‘ಪಕೋಡೇಂದ್ರ’ನು ತಾನೇನೋ ಕನ್ನಡ ಪಂಡಿತನೆಂಬಂತೆ ಪೋಸು ಕೊಡಲು ಹೋಗಿ ‘ಇಲಿ ಇಕ್ಕಳದೊಳಗೆ ಇಡಬಾರದ್ದನ್ನು ಇಟ್ಟಂತೆ’ ಕೊಯಯೊ ಪಯಯೋ ಎಂದು ವದರಿಬಿಟ್ಟಿದ್ದಾನೆ. ‘ಭಗವಾನ್ ಮಂತೆಸಾಮಿ, ದೇವಿ ಮಾರವಬ್ಯಾ, ಮಲ ಮೇವದೇಶ್ವರ್, ಬಿಲ್ಲಿಗಿರಿ ರಂಗ, ಚಾಮರಾಜೇಶ್ವರ್, ಹಿಮ್ಮದ್ ಗೋಪಾಲ್ ಸಾಮಿ’ ಅಂತೆಲ್ಲ ದೇವರುಗಳ ಹೆಸರು ಹೇಳಿದ್ದನ್ನು ಕೇಳಿದ ಜನ.. ಇವನೇನು ದೇವರ ಹೆಸರು ಹೇಳುತ್ತಿದ್ದಾನೋ, ಈಗಾಗಲೇ ಪರಲೋಕಕ್ಕೆ ಪಾರ್ಸೆಲ್ ಆಗಿರೋ ಇವನ ಚಿಕ್ಕಪ್ಪ-ದೊಡ್ಡಪ್ಪಂದಿರ ಹೆಸರು ಹೇಳುತ್ತಿದ್ದಾರೆ ಎಂದು ಗಾಬರಿಯಾಗಿರುವ ಸುದ್ದಿ ಇದೀಗ ತಾನೇ ಬಂದಿದೆ.
< < < <
ಕರ್ನಾಟಕದ ಚುನಾವಣೆಯ ಖರ್ಚಿಗೆ ಕಾಸು ಪೀಕಲೆಂದು ಗಣಿರೆಡ್ಡಿಗಳನ್ನೆಲ್ಲ ಸಿಬಿಐ ಕೋರ್ಟಿನ ನೇಣಿನ ಕುಣಿಕೆಯಿಂದ ಬಿಡಿಸಿ ಕರೆತಂದು ಪ್ರಚಾರ ಕಾರ್ಯದಲ್ಲಿ ತೊಡಗಿಸಿರುವ ‘ಭಾರತೀಯ ಜನಾರ್ದನರೆಡ್ಡಿ ಪಾರ್ಟಿಯು’ ಮಿನಿಮಂ ಲೆವೆಲ್ ನಾಚಿಕೆ ಮಾನಮರ್ಯಾದೆಯಿಲ್ಲದೆ ಬಳ್ಳಾರಿ ಅದಿರಿನ ಭೂದರೋಡೆಯ ದುಡ್ಡಿನಲ್ಲಿ ಮಜಾ ಉಡಾಯಿಸುತ್ತಿದೆ ಎಂದು ತಿಳಿದುಬಂದಿದೆ. ಪಕ್ಷದ ಅಧ್ಯಕ್ಷರೂ ಸೇರಿದಂತೆ ಜನಾರ್ದನ ರೆಡ್ಡಿ ಪಕ್ಷದ ಶಾಸಕರೆಲ್ಲರಿಗೂ ಗಣಿರೆಡ್ಡಿಗಳು ಶರ್ಟುಪ್ಯಾಂಟು ಅಂದ್ರುವೇರು ಹೊಲಿಸಿಕೊಟ್ಟು ಅವರ ಪತ್ನಿಯರಿಗೆ ಲಂಗಜಾಕೀಟನ್ನೂ ಹೊಲಿಸಿಕೊಟ್ಟಿದ್ದಾರೆಂದು ಇನ್ನೂ ವರದಿಯಾಗಿಲ್ಲ. ಈ ಸುದ್ದಿ ತಿಳಿದ ಬ್ಲೂಜೆಪಿ ಶಾಸಕರ ಪತ್ನಿಯರು ತಮ್ಮ ಮನೆಯ ಬಟ್ಟೆ ಬೀರುವಿನ ಕದ ತೆರೆದು ಅಯ್ಯೋ ನನ್ನತ್ರ ಒಂದು ಸೀರೇನೂ ಇಲ್ಲ ಎಂದು ಗೋಳಾಡುತ್ತಿಲ್ಲವೆಂದು ಬಲ್ಲ ಮೂಲಗಳು ತಿಳಿಸಿವೆ.
< < < <
ದಲಿತರ ಮನೆಗಳಿಗೆ ಹೋಗಿ ಎಮ್ಮೆ ಮೇದಂತೆ ಮೇಯ್ದು ಬರುವುದನ್ನು ರೂಢಿ ಮಾಡಿಕೊಂಡಿರುವ ‘ಭಾರತೀಯ ಜಲ್ಸಾ ಪಾರ್ಟಿ’ಯ ಉತ್ತರ ಪ್ರದೇಶ ಸರ್ಕಾರದಿಂದ ಹೊಸ ನ್ಯೂಸೊಂದು ಓಡೋಡಿ ಬಂದಿದೆ. ಬ್ಲೂಜೆಪಿ ಪಕ್ಷದ ಶಾಸಕರು ದಲಿತರ ಮನೆಗಳಿಗೆ ಶ್ರೀರಾಮಚಂದ್ರನಂತೆ ಹೋಗಿ ಅಲ್ಲೇ ಕೂಳುಬಾಕರಂತೆ ಗಡದ್ದಾಗಿ ಉಂಡು, ದಲಿತರಿಗೆ ಆಶೀರ್ವಾದ ಮಾಡಿ ಬರುತ್ತಿದ್ದಾರೆ ಎಂದಿದ್ದಾನೆ ಶಾಸಕ. ಈ ಸುದ್ದಿ ಕೇಳಿದ ಉತ್ತರಪ್ರದೇಶದ ದಲಿತರು, ಇನ್ನೊಂದ್ಸಲ ಯಾವೋನಾದ್ರೂ ‘ಉಣ್ಣಕ್ಕೆ ಏನಾರ ಐತಾ’ ಅಂತ ‘ಉಣ್ಣಲು’ ಬಂದರೆ ಬರ್ರಿ ಊಟ ಮಾಡ್ರಿ ಅಂತ ಒಳಗೆ ಕರೆದು ಅಗುಣಿ ಹಾಕಿ ಆ ಬ್ಲೂಜೆಪಿ ಶಾಸಕರನ್ನು ಕಚಪಚ ಪಚಪಚ ಎಂದು ತುಳಿದು ಕಾಲು ಹಿಡಿದು ತಿಪ್ಪೆಗೆಸೆಯಬೇಕೆಂದು ಇನ್ನೂ ಪ್ರತಿಜ್ಞೆ ಮಾಡಿಲ್ಲವೆಂದು ವರದಿಯಾಗಿದೆ.
< < < <
ಹೋದಲ್ಲಿ ಬಂದಲ್ಲಿ ಹಾರೆಕೋಲು ಹಿಡಿದುಕೊಂಡು ಓಡಾಡುತ್ತ ಬ್ಲೂಜೆಪಿ ಪಕ್ಷದವರ ಪೃಷ್ಟಕ್ಕೆ ಹೆಟ್ಟಿಕೊಂಡು ಓಡಾಡುತ್ತಿರುವ ಪ್ರಕಾಶ್ ರೈ ಅವರು ಪಕ್ಷಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿದ್ದಾರೆಂದು ಬ್ಲೂಜೆಪಿ ಮೂಲಗಳು ತಿಳಿಸಿವೆ. ರೈ ಅವರ ಮೇಲೆ ಪಕ್ಷವು ಸಾಕಿಕೊಂಡಿರುವ ಅಲ್ಸೇಷಿಯನ್ ನಾಯಿ ಪ್ರುತಾಪ್ ತಿಮ್ಮನನ್ನು ಛೂ ಬಿಟ್ಟರೂ ರೈ ಪ್ರುತಾಪನಿಗೇ ಹಾರೆಕೋಲು ಹೆಟ್ಟಿ ಎಸೆದಿರುವುದು ಆಘಾತಕಾರಿಯೆಂದು ಧಡಿಯೂರಪ್ಪನವರು ತಮ್ಮ ಮನೆದೇವರು ‘ಬಂದಿದೆಲ್ಲ ಬಳ್ಕೊಳೇ ಬಂಡಿಭಾಗ್ಯಮ್ಮ’ನ ಬಳಿ ಕಷ್ಟ ತೋಡಿಕೊಂಡಿದ್ದಾರೆ. ಈ ಬಗ್ಗೆ ತುರ್ತಾಗಿ ಗಮನ ಹರಿಸಿ ತಮ್ಮದೇ ಪಾರ್ಟಿಯ ಪ್ರೊಡ್ಯೂಸರ್ ಒಬ್ಬನ ಕೈಲಿ ಹಾಲಿವುಡ್ ಚಿತ್ರವನ್ನು ಬೇರೆ ದೇಶದಲ್ಲಿ ಪ್ರೊಡ್ಯೂಸ್ ಮಾಡಲು ಹೇಳಿ ಪ್ರಕಾಶ್ ರೈಗೆ ಶೂಟಿಂಗ್ ನೆಪದಲ್ಲಾದರೂ ಬೇರೆ ದೇಶಕ್ಕೆ ರವಾನೆ ಮಾಡಿದರೆ ತಾನು ನೆಮ್ಮದಿಯಾಗಿ ಜಶೋಧಹೆನ್ ಸವಿನೆನಪಿನಲ್ಲಿ ಮಲಗುತ್ತೇನೆಂದು ಪಕೋಡೇಂದ್ರನು ಧಡಿಯೂರಪ್ಪನಿಗೆ ವಾಟ್ಸಾಪ್ ಮೆಸೇಜ್ ಕಳಿಸಿದ್ದಾರೆಂದು ಖಚಿತ ಮಾಹಿತಿಗಳು ತಿಳಿಸಿವೆ.
< < < <
ಕತ್ತೆ-ಎಮ್ಮೆಗಳಿಗೆ ಹೂನಾರ ಹಾಕಿ ಮೆರವಣಿಗೆ ಮಾಡುವುದೇ ರಾಜಕೀಯ ಎಂದು ನಂಬಿಕೊಂಡಿರುವ ‘ಪಾಟಾಳ್ ನಾಗರಾಜ್’ ಅವರು ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಕರ್ನಾಟಕದ ಜನರ ಗ್ರಾಚಾರ ಕೆಟ್ಟು ತಮ್ ಪಕ್ಷ ಏನಾದ್ರೂ ಅಪ್ಪಿತಪ್ಪಿ ಅಧಿಕಾರಕ್ಕೆ ಬಂದರೆ ಉಚಿತವಾಗಿ ಕಟಿಂಗ್ ಶೇವಿಂಗ್ ಮಾಡಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ ಪಾಟಾಳ್ ನಾಗರಾಜ್. ಈ ಸುದ್ದಿಯನ್ನು ಸಂಜೆಪತ್ರಿಕೆಯಲ್ಲಿ ಓದಿದ ಧಡಿಯೂರಪ್ಪನವರು ಮುಖವೇ ಕಾಣದಂತೆ ಗಡ್ಡ ಬೆಳೆಸಿಕೊಂಡು ಕಾಡುಮನುಷ್ಯನಂತೆ ಅಂಡಲೆಯುತ್ತಿರುವ ಸ್ತ್ರೀರಾಮುಲುಗೆ ಫೋನ್ ಮಾಡಿ “ನಿನ್ನ ಟಾರ್ಜನ್ ಮುಸುಡಿ ನೋಡಿಯೇ ಪಾಟಾಳ್ ನಾಗರಾಜ್ ಈ ಉಚಿತ ಕಟಿಂಗ್ ಶೇವಿಂಗ್ ಚುನಾವಣಾ ಭರವಸೆ ಕೊಟ್ಟಿದ್ದಾನೆ, ಮೊದಲು ನುಣ್ಣಗೆ ಶೇವಿಂಗ್ ಮಾಡಿಸಿಕೊಂಡು ನಂತರ ಬಂದು ನಿನ್ನ ಮುಖ ಮಾತ್ರ ತೋರಿಸು ಇನ್ನೇನೂ ತೋರಿಸಬೇಡ ಎಂದು ಗದರಿಕೊಂಡಿದ್ದಾರೆ. ಶೇವಿಂಗ್ ಮಾಡಿಸಿಕೊಂಡರೆ ನನ್ನ ಹೆಂಡತಿಯೇ ನನ್ನ ಮುಖ ನೋಡಿ ಕಿಟಾರನೆ ಕಿರುಚುತ್ತಾಳೆಂದು ಸ್ತ್ರೀರಾಮುಲು ಎಷ್ಟು ಸಮಜಾಯಿಷಿ ಕೊಟ್ಟರೂ ಧಡಿಯೂರಪ್ಪನವರು ತಾವು ಕೈಲಿ ಹಿಡಕೊಂಡಿದ್ದ ಧಡಿಯನ್ನು ಕೆಳಗೇ ಇಳಿಸಲಿಲ್ಲವೆಂದು ತಿಳಿದುಬಂದಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಭೇಟಿ ಇದೇ ಜಾಗದಲ್ಲಿ ಇದೇ ವಾರದಲ್ಲಿ. ಇಲ್ಲೇ ಡ್ರಾ, ಇಲ್ಲೇ ಬಹುಮಾನ. ಮೇಯಕ್ಕೆ ಹೋಗಿರೋ ದನಗಳು ಹಟ್ಟಿ ಸೇರ್ಕಳೋ ಹೊತ್ತಾತು, ನಾನಿನ್ನ ಬತ್ತಿನಿ. ಬಾಯ್ ಬಾಯ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...