Homeಅಂಕಣಗಳುಅಂಬೇಡ್ಕರ್, ಸಂಸ್ಕøತ ಮತ್ತು ಮನುವಾದಿಗಳು

ಅಂಬೇಡ್ಕರ್, ಸಂಸ್ಕøತ ಮತ್ತು ಮನುವಾದಿಗಳು

- Advertisement -
- Advertisement -

ಗೌರಿ ಲಂಕೇಶ್
25 ಏಪ್ರಿಲ್ , 2007 (`ಕಂಡಹಾಗೆ’ ಸಂಪಾದಕೀಯದಿಂದ)|

ಮೊನ್ನೆ ಬೆಂಗಳೂರಿನಲ್ಲಿ ಕುತೂಹಲಕಾರಿ ಕಾರ್ಯಕ್ರಮವೊಂದು ನಡೆಯಿತು. ಸಂಘ ಪರಿವಾರದವರು ಏರ್ಪಡಿಸಿದ್ದ “ಅಂಬೇಡ್ಕರ್ ಸಂಸ್ಕøತಿ ಶೋಭಾಯಾತ್ರೆ” ಎಂಬ ಆ ಕಾರ್ಯಕ್ರಮದಲ್ಲಿ ಒಂದು ಕರಪತ್ರವನ್ನೂ ಹಂಚಿದ್ದರು. ಯಾರಿಗೂ ಬಾರದ ಸಂಸ್ಕøತ ಭಾಷೆಯಲ್ಲೇ ಬರೆಯಲಾಗಿದ್ದ ಆ ಕರಪತ್ರದಲ್ಲಿ ಒಂದೇ ಒಂದು ಸಾಲು ಕನ್ನಡದಲ್ಲಿದ್ದು, ಅದು ಹೀಗಿತ್ತು. “1949ರ ಸೆಪ್ಟೆಂಬರ್ 10ರಂದು ನಡೆದ ಸಂವಿಧಾನ ರಚನಾ ಸಭೆಯಲ್ಲಿ ಅಂಬೇಡ್ಕರ್‍ರವರು ಸಂಸ್ಕøತವೇ ರಾಷ್ಟ್ರಭಾಷೆ ಆಗಬೇಕೆಂದಿದ್ದರಲ್ಲದೆ, ತಮ್ಮ ಈ ಅಭಿಪ್ರಾಯವನ್ನು ಸಂಸ್ಕøತದಲ್ಲೇ ಮಂಡಿಸಿದ್ದರು.”
ಅಂಬೇಡ್ಕರ್ ಸಂಸ್ಕøತ ಭಾಷೆಯನ್ನು ಚೆನ್ನಾಗಿ ಕಲಿತಿದ್ದರು ಅನ್ನೋದು ಗೊತ್ತಿತ್ತು. ಅವರು ಅದನ್ನು ಕಲಿತದ್ದು ಸ್ವ-ಇಚ್ಛೆ ಮತ್ತು ಶ್ರದ್ಧೆಯಿಂದ. ಅಂಬೇಡ್ಕರ್ ದಲಿತರಾಗಿದ್ದರಿಂದ ಅವರಿಗೆ ಶಾಲೆಯಲ್ಲಿ ಸಂಸ್ಕøತ ಹೇಳಿಕೊಡುವುದಿಲ್ಲ ಎಂದು ಮಾಸ್ತರರು ಹೇಳಿದ್ದರು. ಜನರ ಶೋಷಣೆಯ ಭಾಷೆಯೇ ಆಗಿದ್ದ ಸಂಸ್ಕøತದಲ್ಲಿ ಮತ್ತು ಸಂಸ್ಕøತದಲ್ಲೇ ರಚಿಸಿದ್ದ ಪುಸ್ತಕಗಳಲ್ಲಿ ಏನಿರಬಹುದು ಎಂದು ಅರಿಯಲಿಕ್ಕೇ ಅವರು ಆ ಭಾಷೆಯನ್ನು ಕಲಿತಿದ್ದರು. ಅಂದಮಾತ್ರಕ್ಕೆ ಅವರು ಸಂಸ್ಕøತವೇ ರಾಷ್ಟ್ರಭಾಷೆಯಾಗಲಿ ಎಂದು ಸಂಸ್ಕøತದಲ್ಲೇ ವಾದ ಮಂಡಿಸಿದ್ದರೆ?
ಇಂಟರ್‍ನೆಟ್‍ನಲ್ಲಿ ಹುಡುಕಾಡಿದಾಗ 1949ರ ಸೆಪ್ಟೆಂಬರ್ 10ರಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಸಂಸ್ಥೆಯು “ಸಂವಿಧಾನ ರಚನಾ ಸಭೆಯಲ್ಲಿ ಅಂಬೇಡ್ಕರ್‍ರವರು ಈ ಪ್ರಸ್ತಾವನೆಯನ್ನು ಮಂಡಿಸಿದರು” ಎಂದು ತಳಬುಡವಿಲ್ಲದ ವರದಿ ಸಿಕ್ಕಿತೇ ವಿನಾಃ ನಿಖರ ಮಾಹಿತಿ ಸಿಗಲಿಲ್ಲ. ಅದನ್ನೇ ಆಧಾರವಾಗಿಟ್ಟುಕೊಂಡು ಈ ರೀತಿ ಅಪಪ್ರಚಾರ ಮಾಡುತ್ತಿರೋದು ಖಾತ್ರಿಯಾಯ್ತು.
ಯಾವುದಕ್ಕೂ ಇರಲಿ ಎಂದು ನಮ್ಮ ಬಳಗದ, ತುಂಬಾ ಜಾಣೆ ರಾಜಲಕ್ಷ್ಮಿ ಅಂಕಲಗಿ ಎಂಬ ಯುವ ವಕೀಲೆಗೆ ಫೋನ್ ಮಾಡಿ ವಿಷಯ ತಿಳಿಸಿದೆ. “ಸಂವಿಧಾನ ರಚನಾ ಸಭೆಯ ಚರ್ಚೆಗಳನ್ನು ಕುರಿತ ಐದು ಪುಸ್ತಕಗಳೂ ನಮ್ಮ ಆಫೀಸಿನಲ್ಲಿವೆ. ಅವನ್ನು ನೋಡಿ ನಿಮಗೆ ತಿಳಿಸುತ್ತೇನೆ” ಎಂದಳು ಆಕೆ. ಅರ್ಧ ಗಂಟೆಯ ನಂತರ ಆಕೆ ನೀಡಿದ ಮಾಹಿತಿ ಹೀಗಿತ್ತು:
“1949ರ ಸೆಪ್ಟೆಂಬರ್ ಎಂಟನೇ ಮತ್ತು ಒಂಬತ್ತನೇ ತಾರೀಖು ನಡೆದ ಸಂವಿಧಾನ ರಚನಾ ಸಭೆಯಲ್ಲಿ ತೆರಿಗೆ ಕುರಿತ ಚರ್ಚೆಗಳು ಶುರುವಾಗಿ 10ನೇ ತಾರೀಖಿನವರೆಗೂ ಸಾಗಿದವು. 10ನೇ ತಾರೀಖು ಆಸ್ತಿ ಹೊಂದುವ ನೀತಿಗಳನ್ನು ಕುರಿತಂತೆ ಆರ್ಟಿಕಲ್ 24ರ ಬಗ್ಗೆ ಚರ್ಚೆಗಳಾದವು. ಅಂದು ಶನಿವಾರವಾದ್ದರಿಂದ ಸಭೆ ಮಧ್ಯಾಹ್ನ ನಿಂತಿತು. 11ನೇ ತಾರೀಖು ಭಾನುವಾರವಾದ್ದರಿಂದ ಸಭೆ ಮತ್ತೆ 12ನೇ ತಾರೀಖಿನಂದು ಸೇರುತ್ತದೆ. ಅವತ್ತೂ ಸಂಜೆ ನಾಲ್ಕು ಗಂಟೆಯ ತನಕ ಆಸ್ತಿ ಕುರಿತಂತೆ ಚರ್ಚೆ ನಡೆಯುತ್ತದೆ. ಆನಂತರ ಪ್ರಾದೇಶಿಕ ಭಾಷೆಗಳನ್ನು ಕುರಿತ ಚರ್ಚೆ ಆರಂಭವಾಗಿ ಅದು 13 ಮತ್ತು 14ನೇ ತಾರೀಖಿನವರೆಗೂ ನಡೆಯುತ್ತದೆ. ಆಗಲೂ ಹೇಗೆ ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ಕೊಡಬೇಕು ಮತ್ತು ಹಿಂದಿಯನ್ನು ಯಾಕೆ ಹೇರಬಾರದು ಎಂಬುದರ ಬಗ್ಗೆಯೇ ಚರ್ಚೆ ನಡೆಯುತ್ತದೆ. 8ರಿಂದ 14ನೇ ತಾರೀಖಿನವರೆಗೂ ನಡೆದ ಚರ್ಚೆಗಳಲ್ಲಿ ಎರಡು ಮುಖ್ಯ ಅಂಶಗಳು ಇವೆ: ಮೊದಲನೆಯದಾಗಿ. ಸಂಸ್ಕøತ ಭಾಷೆಯಲ್ಲಿ ಮಾತನಾಡಿದವರು ಬಿಹಾರದ ಗುಪ್ತನಾಥ ಸಿಂಗ್ ಎಂಬುವವರು. ಆಸ್ತಿ ಹೊಂದುವ ವಿಚಾರ ಕುರಿತಂತೆ ಸಮಾಜವಾದಿ ಸಂವಿಧಾನವನ್ನು ನಿರೂಪಿಸುವ ಕಾರ್ಯದಲ್ಲಿ ಎಲ್ಲರೂ ತೊಡಗಿರುವಾಗ ಅವರು ಮನುಶಾಸ್ತ್ರದಲ್ಲಿ ಹೇಗೆ ಬಂಡವಾಳಶಾಹಿ ಪರ ಸಿದ್ಧಾಂತಗಳು ಅಡಗಿವೆ ಎಂದು ವಿವರಿಸುತ್ತಾರೆ. ಎರಡನೆಯದು: ಅಂಬೇಡ್ಕರ್‍ರವರು ಸಂಸ್ಕøತದ ಪರವಾಗಿ ಸಂಸ್ಕøತದಲ್ಲಿ ಮಾತನಾಡುವುದಿರಲಿ, ಪ್ರಾದೇಶಿಕ ಭಾಷೆಗಳನ್ನು ಕುರಿತ ಚರ್ಚಾಸಭೆಗಳಲ್ಲಿ ಅವರು ಭಾಗವಹಿಸಿಯೇ ಇಲ್ಲ!!”
ಇದು ಅಧಿಕೃತವಾಗಿ ದಾಖಲಾಗಿರುವ ಸತ್ಯ! ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿತ್ತೆನ್ನಲಾದ ತಲೆ-ಬುಡವಿಲ್ಲದ ಊಹಾಪೋಹವಲ್ಲ! ಆದರೆ ಚಡ್ಡಿಗಳು ಎಂತಹ ಕುತಂತ್ರಿಗಳು ನೋಡಿ. ಒಂದೆಡೆ ಮನುಸ್ಮøತಿಯೇ ನಮ್ಮ ಸಂವಿಧಾನವಾಗಬೇಕಿತ್ತು ಎಂದು ವಾದಿಸಿದ್ದ ಗೋಲ್ವಾಲ್ಕರ್ ಎಂಬ ದ್ವೇಷದ ಗುರುವಿನ ನೂರನೇ ಜನ್ಮೋತ್ಸವವನ್ನು ‘ಹಿಂದೂ ಸಮಾವೇಶ’ ಎಂದು ಆಚರಿಸುತ್ತಾರೆ. ಇನ್ನೊಂದೆಡೆ ದಲಿತರ ನಾಯಕ ಮತ್ತು ಆತ್ಮಪ್ರಜ್ಞೆಯಾಗಿದ್ದ ಅಂಬೇಡ್ಕರ್ ಅವರೇ ಸ್ವತಃ ಸಂಸ್ಕøತದ ಪರವಾಗಿದ್ದರು ಎಂದು ಕಲ್ಪಿಸಿಕೊಂಡು ಸಭೆ ಏರ್ಪಡಿಸುತ್ತಾರೆ. ಇದನ್ನೆಲ್ಲ ಶೂದ್ರರು, ದಲಿತರು ನಂಬುತ್ತಾರೆ. ಗೋಲ್ವಾಲ್ಕರ್‍ನ ಸಭೆಗಳಲ್ಲಿ ಶೂದ್ರರು ಭಾಗವಹಿಸಿದರೆ, ಚೆಡ್ಡಿಗಳ ಅಂಬೇಡ್ಕರ್ ಕಾರ್ಯಕ್ರಮಗಳಲ್ಲಿ ದಲಿತರು ಪಾಲ್ಗೊಳ್ಳುತ್ತಾರೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...