Homeಕರ್ನಾಟಕದುಬಾರಿ ಟ್ರಾಫಿಕ್ ದಂಡವೆಂಬ ತುಘಲಕ್ ನಾಮ

ದುಬಾರಿ ಟ್ರಾಫಿಕ್ ದಂಡವೆಂಬ ತುಘಲಕ್ ನಾಮ

- Advertisement -
- Advertisement -

| ಸೋಮಶೇಖರ್ ಚಲ್ಯ |

ದೇಶಾದ್ಯಂತ ಆರ್ಥಿಕ ಹಿಂಜರಿತ ಅಪ್ಪಳಿಸುತ್ತಿದೆ. ಉತ್ಪಾದನಾ ಕ್ಷೇತ್ರ ಸಂಪೂರ್ಣ ಕುಸಿದು ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಕನಿಷ್ಟ ಹತ್ತು ರಾಜ್ಯಗಳಿಗೆ ಪ್ರವಾಹ ಅಪ್ಪಳಿಸಿ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ. ಅಳಿದುಳಿದ ಬೆಳೆಗಳಿಗೆ ಸಮರ್ಪಕ ಬೆಲೆ ಸಿಗದೆ ರೈತರು ಹೈರಾಣಾಗಿದ್ದಾರೆ. 5 ರೂಪಾಯಿಯ ಬಿಸ್ಕೆಟ್ ಸಹ ಕೊಂಡುಕೊಳ್ಳಲು ಜನ ಹಿಂದುಮುಂದು ನೋಡುವಂತಹ ಪರಿಸ್ಥಿತಿ ಬಂದಿದೆ. ನಿರುದ್ಯೋಗ ದಿನೇದಿನೇ ಹೆಚ್ಚುತ್ತಿದೆ. ಜನರ ಕೊಳ್ಳುವ ಶಕ್ತಿ ಸಂಪೂರ್ಣ ಇಲ್ಲವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹಲವು ಕಲ್ಯಾಣ ಕಾರ್ಯಕ್ರಮಗಳ ಮೂಲಕ ಜನರ ಕೈಯಲ್ಲಿ ಹಣ ಚಲಾವಣೆಯಾಗುವಂತಹ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸರ್ಕಾರ ಆರ್ಥಿಕ ಪುನಶ್ಚೇತನಕ್ಕೆ ಮುಂದಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರ ಮಾಡಿದ್ದೇನು ಗೊತ್ತೆ?

ಜನರ ಜೇಬಿನಲ್ಲಿ ಅಳಿದುಳಿದ ಹಣಕ್ಕೂ ಕೇಂದ್ರ ಸರ್ಕಾರ ಕೈಹಾಕಿ ಲೂಟಿ ಹೊಡೆಯಲು ಮುಂದಾಗಿದೆ. ಮೋಟಾರು ವಾಹನ ಕಾಯ್ದೆಯ ತಿದ್ದುಪಡಿಯ ಹೆಸರಿನಲ್ಲಿ ಸಂಚಾರ ನಿಯಮಗಳ ಉಲ್ಲಂಘನೆಗೆ ಒಂದೇ ಬಾರಿಗೆ ದಂಡವನ್ನು ಹತ್ತಿಪ್ಪತ್ತು ಪಟ್ಟು ಹೆಚ್ಚಳ ಮಾಡಿದೆ. ಹೌದು ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಸುರಕ್ಷವಾಗಿ ವಾಹನ ಚಲಾಯಿಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಆ ನೆಪದಲ್ಲಿ 10-15 ಸಾವಿರದವರೆಗೂ ದಂಡ ವಿಧಿಸುವುದು ಯಾವ ನ್ಯಾಯ? ಒಂದೇ ವ್ಯಕ್ತಿಗೆ 23 ಸಾವಿರದಿಂದ 6 ಲಕ್ಷದವರೆಗೂ ದಂಡ ವಿಧಿಸಿದರೆ ಆ ವ್ಯಕ್ತಿಗಳು ಸುಧಾರಿಸಿಕೊಳ್ಳಲು ಸಾಧ್ಯವೇ? ಡ್ರಿಂಕ್ ಅಂಡ್ ಡ್ರೈವ್ ಗೆ 10 ಸಾವಿರ ದಂಡ ಅಂದರೆ ಒಕೆ ಒಪ್ಪಿಕೊಳ್ಳೋಣ, ಆದರೆ ಹೆಲ್ಮೆಟ್ ಇಲ್ಲದ್ದಕ್ಕೆ, ವಿಮೆ ಇಲ್ಲದ್ದಕ್ಕೆ ಸಾವಿರ ರೂ ದಂಡ ಕಟ್ಟಬೇಕೆಂದರೆ ಹೇಗೆ ಸಾಧ್ಯ?

2018ರಲ್ಲಿ ತೆಲುಗು ಭಾಷೆಯ ‘ಭರತ್ ಅನೆ ನೇನು’ ಸಿನಿಮಾ ತೆರೆಕಂಡಿತು. ವಿದೇಶಿ ಬದುಕಿನ ಅನುಭವ ಪಡೆದು ಭಾರತಕ್ಕೆ ಮರಳುವ ಭರತ್ (ಮಹೇಶ್ ಬಾಬು) ಇಲ್ಲಿನ ಸಂಚಾರದ ರೀತಿನೀತಿಗಳನ್ನು ನೋಡಿ ಬೇಸತ್ತು ತಾವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ಜಾರಿಗೆ ತರುವುದೇ ಮೋಟಾರು ವಾಹನ ಕಾಯ್ದೆಗೆ ಪರಿಷ್ಕರಣೆ. ಕಡಿಮೆ ಇದ್ದ ಸಂಚಾರ ನಿಯಮ ಉಲ್ಲಂಘನೆ ಶುಲ್ಕವನ್ನು ಅದರ ಹತ್ತು ಹಲವು ಪಟ್ಟು ಹೆಚ್ಚಿಸುತ್ತಾನೆ. ಅಂದರೆ ಜನರು ದಂಡದ ಶುಲ್ಕಕ್ಕೆ ಹೆದರಿ ನಿಯಮ ಪಾಲಿಸುತ್ತಾರೆ ಎಂಬುದು ಆ ಸಿನಿಮಾದ ನಾಯಕ ಭರತ್ ವಿವರಣೆ. ಆ ಸೀನ್ ನೋಡುತ್ತಿದ್ದಂತೆ ಜನ ನಗಲಿಕ್ಕೆ ಶುರು ಮಾಡುತ್ತಾರೆ. ಕಾಮಿಡಿ ಸೀನ್ ಥರ ಇರುವ ಅಷ್ಟು ನಾನ್‍ಸೆನ್ಸ್ ಆಗಿ ಆ ಸಿನಿಮಾ ಇದ್ದರೆ ನಮ್ಮ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಥೇಟ್ ಅದೇ ಮಾದರಿಯಲ್ಲಿ ಮೋಟಾರು ವಾಹನ ಕಾಯ್ದೆ (ಎಂವಿಎ) ಯನ್ನು ಜಾರಿಗೆ ತಂದಿದ್ದಾರೆ!

ಈ ಕಾನೂನು ಜಾರಿಯಾದ ಮೊದಲ ದಿನವೇ ಬೆಂಗಳೂರು ನಗರ ಒಂದರಲ್ಲೇ 42.5 ಲಕ್ಷ ದಂಡದ ಶುಲ್ಕ ವಸೂಲಿ ಮಾಡಲಾಗಿದ್ದು, ಒಂದು ವಾರದಲ್ಲಿ 1.10 ಕೋಟಿ ದಂಡವನ್ನು ಸಂಗ್ರಹಿಸಲಾಗಿದೆ. ಜನರು ದಂಡದ ಮೊತ್ತವನ್ನು ಭರಿಸಲಾಗದೆ ಹೈರಾಣಾಗಿದ್ದು, ಆಕ್ರೋಶಗೊಂಡು ಸಂಚಾರಿ ಪೊಲೀಸರೊಂದಿಗೆ ಜಗಳಕ್ಕಿಳಿಯುತ್ತಿದ್ದಾರೆ. ಆ ಜಗಳವನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದರೆ ಸಾವಿರ ಸಾವಿರ ಷೇರ್ ಆಗುತ್ತಿವೆ. ಸೃಜನಶೀಲ್ ಟ್ರೋಲ್‍ಗಳು ಮುಗಿಲುಮುಟ್ಟಿವೆ. ಅಲ್ಲಿಗೆ ಜನರ ಕೋಪವೂ ತಣಿಯುತ್ತಿದೆಯೇ ಹೊರತು ಇದೊಂದು ಹೋರಾಟವಾಗುವ, ಚಳವಳಿಯಾಗುವ ಲಕ್ಷಣಗಳಿಲ್ಲ. ಆದರೆ ಈ ರೀತಿಯಲ್ಲಿ ದಂಡ ವಿಧಿಸುವುದರಿಂದ ಜನರು ನಿಯಮವನ್ನು ಪಾಲಿಸುತ್ತಾರೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆಯನ್ನು ನಿಯಂತ್ರಿಸಲು ಇದೊಂದೇ ಮಾರ್ಗವೇ? ಬಹುಶಃ ಇದೂ ಒಂದು ಮಾರ್ಗವಿರಬಹುದು. ಆದರೆ ಇಂತಹ ಕಾನೂನುಗಳನ್ನು ಜಾರಿ ಮಾಡುವ ಮುನ್ನ ಸರ್ಕಾರಗಳು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ.

ಪ್ರತಿವರ್ಷ 1.50 ಲಕ್ಷ ಜನರು ರಸ್ತೆ ಅಪಘಾತದಿಂದ ಸಾವಿಗೀಡಾಗುತ್ತಿದ್ದಾರೆ. ಜನರ ಸಾವಿನ ಬಗ್ಗೆ ನಿಮಗೆ ಚಿಂತೆ ಇಲ್ಲವೇ? ಹಾಗಾಗಿ ದಂಡ ಹೆಚ್ಚಿಸಿದ್ದೇವೆ ಎಂಬುದು ಅವರ ಪ್ರಶ್ನೆ. ನಿಯಮ ಉಲ್ಲಂಘನೆಗೆ ದಂಡ ವಿಧಿಸುವುದರಿಂದ ಜನರನ್ನು ಪ್ರಾಣಾಪಾಯದಿಂದ ರಕ್ಷಿಸಿಬಿಡಬಹುದು ಎಂಬುದು ಸುಳ್ಳು. ಇಂದಿಗೂ ದೇಶದ ಶೇ.80ಕ್ಕೂ ಹೆಚ್ಚು ರಸ್ತೆಗಳು ಗುಂಡಿ ಬಿದ್ದಿವೆ. ಬಹಳ ಕೆಟ್ಟ ಪರಿಸ್ಥಿತಿಯಲ್ಲಿವೆ. ರಸ್ತೆಗಳ ತಿರುವುಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ರಸ್ತೆಗಳ ಮಧ್ಯೆ ಹಾಕಲಾಗಿರುವ ವೇಗ ನಿಯಂತ್ರಕ(ಹಂಪ್)ಗಳಂತೂ ರಾತ್ರಿಯ ವೇಳೆ ಇರಲಿ ಬಿರುಬಿಸಿಲಿರುವ ಮಧ್ಯಾಹ್ನದ ವೇಳೆಯೇ ಕಾಣುವುದಿಲ್ಲ. ಇನ್ನೂ ಹಲವಾರು ರಸ್ತೆಗಳ ಡಾಂಬರನ್ನೇ ಕಂಡಿಲ್ಲ. ರಸ್ತೆಗಳಲ್ಲಿ ಅಳವಡಿಸಲಾದ ಸಿಗ್ನಲ್‍ಗಳಂತೂ ಬಹುತೇಕ ಪಟ್ಟಣಗಳಲ್ಲಿ ಕೆಲಸಕ್ಕೆ ಬಾರದಂತಾಗಿವೆ. ಈ ಅಧ್ವಾನಗಳನ್ನು ಕುರಿತೇ ಮೈಸೂರಿನ ಖ್ಯಾತ ಕಲಾವಿದ ಬಾದಲ್ ನಂಜುಂಡಸ್ವಾಮಿ ಬೆಂಗಳೂರಿನಲ್ಲಿ ಗಗನಯಾತ್ರಿ ರೀತಿ ಮಾಡಿದ ವಿಡಿಯೋ ಕೋಟ್ಯಾಂತರ ಜನಕ್ಕೆ ತಲುಪಿ ಮೆಚ್ಚುಗೆ ಗಳಿಸಿತ್ತು. ಜೊತೆಜೊತೆಗೆ ಸರ್ಕಾರಗಳಿಗೆ ಬಿಸಿಮುಟ್ಟಿಸಿತ್ತು.

ಅಡ್ಡಾದಿಡ್ಡಿಯಾಗಿ ನಿರ್ಮಿಸಲಾಗಿರುವ ರಸ್ತೆಗಳಿಂದಾಗಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವುದು ಒಂದೆಡೆಯಾದರೆ, ವಾಹನಗಳ ಪಾರ್ಕಿಂಗ್ ಮಾಡಲು ಪಾರ್ಕಿಂಗ್ ವ್ಯವಸ್ಥೆಯೇ ಬಹುತೇಕ ವಲಯಗಳಲಿಲ್ಲ. ಎಲ್ಲಿ ನೋಡಿದರೂ ‘ನೋ ಪಾರ್ಕಿಂಗ್’ ಬೋರ್ಡುಗಳು ರಾರಾಜಿಸುತ್ತಿದ್ದು, ಜನರು ಪಾರ್ಕಿಂಗ್‍ಗಾಗಿಯೇ ಅಲೆದಾಡುತ್ತಿದ್ದಾರೆ. ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಬೇಕಾದ ಪೊಲೀಸರು ಎಲ್ಲೆಂದರಲ್ಲಿ ನೋ ಪಾರ್ಕಿಂಗ್ ಬೋರ್ಡ್‍ಗಳನ್ನು ನಿಲ್ಲಿಸಿ, ಜನರಿಂದ ದಂಡದ ಸುಲಿಗೆ ಮಾಡಲು ಮುಂದಾಗಿದ್ದಾರೆ. ದಂಡದ ಮೊತ್ತ ಹೆಚ್ಚಾದ ಮೇಲಂತೂ ಎಲ್ಲಾ ರಸ್ತೆಗಳಲ್ಲೂ ಪೊಲೀಸರ ದಂಡು ದಂಡವಸೂಲಿಯ ಕಾರ್ಯಾಚರಣೆಯಲ್ಲಿಯೇ ನಿರತವಾಗಿದೆ.

ಇಡೀ ವ್ಯವಸ್ಥೆಯೇ ಭ್ರಷ್ಟರ ಸಂತೆಯಾಗಿರುವ ಸಂದರ್ಭದಲ್ಲಿ ಡ್ರೈವಿಂಗ್ ಲೈಸನ್ಸ್(ಡಿಎಲ್), ವಾಹನ ಇನ್ಸುರೆನ್ಸ್ ಮಾಡಿಸಲು ಸರ್ಕಾರಿ ಶುಲ್ಕಕ್ಕಿಂತ ಐದಾರು ಪಟ್ಟು ಹೆಚ್ಚು ಲಂಚವನ್ನೇ ಕೊಡಬೇಕು. ಆ ಪ್ರಮಾಣದ ಲಂಚವನ್ನು ಕೊಡಲಾಗದೆ ಹಲವಾರು ಜನರು ಡಿಎಲ್, ಇನ್ಸುರೆನ್ಸ್‍ಗಳನ್ನು ಮಾಡಿಸದೇ ಉಳಿದ್ದಾರೆ. ಹಾಗಾಗಿ ಪ್ರಾದೇಶಿಕ ಸಾರಿಕೆ ಕಚೇರಿ (ಆರ್‍ಟಿಓ)ಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಜನರಿಗೆ ಪರವಾನಗಿಗಳು ಸುಲಭವಾಗಿ ಸಿಗುವಂತೆ ಮಾಡಬೇಕಾದ ಕರ್ತವ್ಯ ಸರ್ಕಾರಗಳದ್ದು, ಆದರೆ ಅವು ತಮ್ಮ ಕರ್ತವ್ಯಗಳನ್ನು ನಿರ್ವಹಿಸದೇ ಜನರ ಮೇಲೆ ಸವಾರಿ ಮಾಡುತ್ತಿವೆ.

ಇಷ್ಟೆಲ್ಲಾ ಸಮಸ್ಯೆಗಳು ರಸ್ತೆಗಳಲ್ಲಿರುವಾಗ ಜನರಿಗೆ ದಂಡವಿಧಿಸುವುದರಿಂದ ಜನರ ಪ್ರಾಣ ಕಾಪಾಡಲು ಸಾಧ್ಯವೇ? ಇನ್ನು ಈ ಹೊಸ ಕಾಯ್ದೆಯನ್ನು ಜಾರಿಗೊಳಿಸುವ ವಿವೇಚನೆಯನ್ನು ರಾಜ್ಯ ಸರ್ಕಾರಗಳಿಗೆ ಬಿಡಲಾಗಿದೆ. ಹಾಗಾಗಿಯೇ ಗೋವಾದ ಸಾರಿಗೆ ಸಚಿವ ಮೌವಿನ್ ಗೊಡಿನ್ಹೋರವರು ಗೋವಾ ರಾಜ್ಯದ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಿ ರಸ್ತೆಗಳನ್ನು ಸರಿಪಡಿಸಿ ನಂತರದಲ್ಲಿ ಎಂವಿಎ ನಿಯಮಗಳನ್ನು ಜಾರಿ ಮಾಡುವುದಾಗಿ ಘೋಷಿಸಿ, 2020ರ ಜನವರಿಯವರೆಗೆ ಕಾಲಾವಕಾಶ ಕೇಳಿದ್ದಾರೆ. ಇದು ಒಬ್ಬ ಸಚಿವನಿಗಿರಬೇಕಾದ ಸಾಮಾನ್ಯ ಜ್ಞಾನ. ಆದರೆ ಈ ಜ್ಞಾನ ನಿತಿನ್ ಗಡ್ಕರಿಯವರಿಗೂ, ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಇದ್ದಂತಿಲ್ಲ.

ಇನ್ನು ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ತೆಲಂಗಾಣ, ಚತ್ತೀಸ್‍ಘಡ, ಕೇರಳ, ಓಡಿಸ್ಸಾ ಸರ್ಕಾರಗಳು ನಾವು ಜನಸಾಮಾನ್ಯರ ಹಿತರಕ್ಷಣೆಯ ದೃಷ್ಟಿಯಿಂದ ಈ ನಿಯಮಗಳನ್ನು ಜಾರಿಗೆ ತರುವುದಿಲ್ಲ ಎಂದು ಘಂಟಾಘೋಷವಾಗಿ ಸಾರಿವೆ. ಜನಸಾಮಾನ್ಯರು ದುಬಾರಿ ದಂಡದ ವಿರುದ್ಧ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಆಳ್ವಿಕೆಯಲ್ಲಿರುವ ಮೋದಿಯವರ ತವರು ರಾಜ್ಯ ಗುಜರಾತ್‍ನಲ್ಲಿಯೇ ಕೇಂದ್ರ ಸರ್ಕಾರ ಘೋಷಿಸಿರುವ ದಂಡ ಮೊತ್ತಗಳಲ್ಲಿ ಅರ್ಧದಷ್ಟನ್ನು ಇಳಿಸುತ್ತೇವೆಂದು ಹೇಳಿದ್ದಾರೆ. ಇದು ಸಹ ದೊಡ್ಡ ಅನ್ಯಾಯವೇ. ಹೇಗೆಂದರೆ 100 ರೂ ಇದ್ದ ದಂಡವನ್ನು ಕೇಂದ್ರ 1000ಕ್ಕೆ ಏರಿಸಿದರೆ ನಂತರ ಅದರ ಅರ್ಧ ಇಳಿಸಿ 500 ನಿಗದಿ ಮಾಡುವುದು ಲೂಟಿಯಲ್ಲವೇ? ಹೋಗಲಿ ಬಿಡಿ ಅಷ್ಟಾದರೂ ಮಾಡಿದರಲ್ಲ ಎಂದು ಜನ ಸುಮ್ಮನಾಗುತ್ತಿದ್ದಾರೆ.

ಇನ್ನು ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ಸೆ.9ರಂದು ದಂಡದ ಅರ್ಧದಷ್ಟನ್ನು ಇಳಿಸುವುದಾಗಿ ಹೇಳಿದ್ದರು. ಒಂದು ವಾರ ಕಳೆದರೂ ಇನ್ನೂ ಟ್ರಾಫಿಕ್ ದಂಡ ಮಾತ್ರ ಕಡಿಮೆಯಾಗಿಲ್ಲ. ಈ ಕುರಿತು ಬೆಂಗಳೂರು ಕಮಿಷನರ್ ಭಾಸ್ಕರ್‍ರಾವ್‍ರವರು ನಮಗೆ ಆ ರೀತಿಯ ಯಾವುದೇ ಆದೇಶ ಬಂದಿಲ್ಲ ಎಂದಿದ್ದಾರೆ. ಒಬ್ಬ ಮುಖ್ಯಮಂತ್ರಿ ಮಾತಿಗೂ ಬೆಲೆ ಇಲ್ಲ ಅಂದರೆ ಯಡಿಯೂರಪ್ಪನವರಿನ್ನು ಬಿಜೆಪಿಯ ಹೈಕಮಾಂಡ್ ಹೇಳಿದಂತೆಯೇ ಕೇಳಿಕೊಂಡು ಬಿದ್ದಿದ್ದಾರೆ ಎಂದರ್ಥ ಅಲ್ಲವೇ? ಇದನ್ನು ತನ್ನ ರಾಜ್ಯದ ಪ್ರಜೆಗಳ ಹಿತಾಸಕ್ತಿಗಾಗಿ ಕೇಂದ್ರ ಸರ್ಕಾರದ ನೀತಿಯೊಂದನ್ನು ಅವಕಾಶವಿದ್ದರೂ ಸಹ ತಡೆಹಿಡಿಯುವಷ್ಟು ಅಧಿಕಾರವಿಲ್ಲದೇ ಗುಲಾಮಿ ಸರ್ಕಾರ ಅನ್ನದೇ ವಿಧಿಯಿಲ್ಲ. ಮುಖ್ಯಮಂತ್ರಿಗಳು ದಂಡ ಕಡಿಮೆ ಮಾಡುವ ಮಾತನ್ನಾಡಿದ್ದಾರೆ ಅಂತ ಜನ ಸ್ವಲ್ಪ ತಣ್ಣಗಾಗಿ ಕಾಯುತ್ತಾ ಕೂತು ದಿನಗಳು ಉರುಳಿದಂತೆ ಎಲ್ಲವೂ ತಣ್ಣಗಾಗುತ್ತೆ. ಆಗ ಜನ ಎಲ್ಲಾ ಮರೆತು ದುಬಾರಿ ದಂಡಕ್ಕೆ ಒಗ್ಗಿ ಹೋಗಿಬಿಡುತ್ತಾರೆ ಎಂಬ ಹುನ್ನಾದರಿಂದಲೂ ಜನರ ಸದ್ಯದ ಆಕ್ರೋಶ ತಗ್ಗಿಸಲು ಯಡಿಯೂರಪ್ಪ ಹೀಗೆ ಹೇಳಿದ್ದರೂ ಅಚ್ಚರಿಯಿಲ್ಲ. ಹೀಗಿರುವಾಗ ಯಡಿಯೂರಪ್ಪನಿಂದ ಜನರು ದಂಡ ವಿನಾಯತಿಯನ್ನು ನಿರೀಕ್ಷಿಸುವುದು ಬತ್ತಿಹೋದ ಬಾವಿಗೆ ಬಿಂದಿಗೆ ಬಿಟ್ಟು ನೀರಿಗಾಗಿ ಕಾದುಕುಳಿತಂತಾಗಿದೆ.

ದಂಡ ಹಾಕುವ ನೈತಿಕತೆ ಸರ್ಕಾರಕ್ಕೆ ಇದೆಯೇ?

ಸರ್ಕಾರಕ್ಕೆ ನಿಜಕ್ಕೂ ರಸ್ತೆ ನಿಯಮಗಳನ್ನು ಪಾಲಿಸಬೇಕು, ಅಪಘಾತಗಳನ್ನು ತಡೆಗಟ್ಟಬೇಕು ಎಂಬ ನೈಜ ಕಾಳಜಿಯಿದ್ದರೆ, ಅವರು ಮೊದಲು ಈ ಸಮಸ್ಯೆಯ ಮೂಲಬೇರುಗಳನ್ನು ಶೋಧಿಸಬೇಕಿದೆ. ಇಂದು ಬಹುತೇಕ ಅಪಘಾತಗಳು ನಗರಗಳಲ್ಲಿ, ಹಾಳಾದ ರಸ್ತೆಗಳಲ್ಲಿ ಸಂಭವಿಸುತ್ತಿವೆ. ಅಂದರೆ ನಗರಗಳಲ್ಲಿ ದಟ್ಟಣೆ ಹೆಚ್ಚಾದಷ್ಟು ನಿಯಮ ಉಲ್ಲಂಘನೆಗಳು, ಅಪಘಾತಗಳ ಜೊತೆಗೆ ಮಾಲಿನ್ಯವೂ ಹೆಚ್ಚಾಗುತ್ತಿದೆ. ಹಾಗಾಗಿ ಸರ್ಕಾರ ತನ್ನ ಅಭಿವೃದ್ಧಿ ಮಾದರಿ/ನೀತಿಗಳನ್ನು ಬದಲಿಸಿ ಗ್ರಾಮೀಣ ಪ್ರದೇಶಗಳಲ್ಲಿಯೂ ಕೂಡ ವಿಕೇಂದ್ರೀಕೃತವಾಗಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಿ ಮತ್ತು ಉತ್ತಮ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕಿದೆ. ಆಗ ಬಹುದೊಡ್ಡ ಸಮಸ್ಯೆ ನಗರಗಳಿಗೆ ವಲಸೆ ತಪ್ಪುತ್ತದೆ. ರಸ್ತೆಗಳನ್ನು ಸರಿಪಡಿಸಿದ ನಂತರವಷ್ಟೇ ಸರ್ಕಾರಕ್ಕೂ ದಂಡ ವಿಧಿಸುವ ನೈತಿಕತೆ ಬರುತ್ತದೆ ಅಲ್ಲವೇ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...