Homeಕರ್ನಾಟಕದುಬಾರಿ ಟ್ರಾಫಿಕ್ ದಂಡವೆಂಬ ತುಘಲಕ್ ನಾಮ

ದುಬಾರಿ ಟ್ರಾಫಿಕ್ ದಂಡವೆಂಬ ತುಘಲಕ್ ನಾಮ

- Advertisement -
- Advertisement -

| ಸೋಮಶೇಖರ್ ಚಲ್ಯ |

ದೇಶಾದ್ಯಂತ ಆರ್ಥಿಕ ಹಿಂಜರಿತ ಅಪ್ಪಳಿಸುತ್ತಿದೆ. ಉತ್ಪಾದನಾ ಕ್ಷೇತ್ರ ಸಂಪೂರ್ಣ ಕುಸಿದು ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಕನಿಷ್ಟ ಹತ್ತು ರಾಜ್ಯಗಳಿಗೆ ಪ್ರವಾಹ ಅಪ್ಪಳಿಸಿ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ. ಅಳಿದುಳಿದ ಬೆಳೆಗಳಿಗೆ ಸಮರ್ಪಕ ಬೆಲೆ ಸಿಗದೆ ರೈತರು ಹೈರಾಣಾಗಿದ್ದಾರೆ. 5 ರೂಪಾಯಿಯ ಬಿಸ್ಕೆಟ್ ಸಹ ಕೊಂಡುಕೊಳ್ಳಲು ಜನ ಹಿಂದುಮುಂದು ನೋಡುವಂತಹ ಪರಿಸ್ಥಿತಿ ಬಂದಿದೆ. ನಿರುದ್ಯೋಗ ದಿನೇದಿನೇ ಹೆಚ್ಚುತ್ತಿದೆ. ಜನರ ಕೊಳ್ಳುವ ಶಕ್ತಿ ಸಂಪೂರ್ಣ ಇಲ್ಲವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹಲವು ಕಲ್ಯಾಣ ಕಾರ್ಯಕ್ರಮಗಳ ಮೂಲಕ ಜನರ ಕೈಯಲ್ಲಿ ಹಣ ಚಲಾವಣೆಯಾಗುವಂತಹ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸರ್ಕಾರ ಆರ್ಥಿಕ ಪುನಶ್ಚೇತನಕ್ಕೆ ಮುಂದಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರ ಮಾಡಿದ್ದೇನು ಗೊತ್ತೆ?

ಜನರ ಜೇಬಿನಲ್ಲಿ ಅಳಿದುಳಿದ ಹಣಕ್ಕೂ ಕೇಂದ್ರ ಸರ್ಕಾರ ಕೈಹಾಕಿ ಲೂಟಿ ಹೊಡೆಯಲು ಮುಂದಾಗಿದೆ. ಮೋಟಾರು ವಾಹನ ಕಾಯ್ದೆಯ ತಿದ್ದುಪಡಿಯ ಹೆಸರಿನಲ್ಲಿ ಸಂಚಾರ ನಿಯಮಗಳ ಉಲ್ಲಂಘನೆಗೆ ಒಂದೇ ಬಾರಿಗೆ ದಂಡವನ್ನು ಹತ್ತಿಪ್ಪತ್ತು ಪಟ್ಟು ಹೆಚ್ಚಳ ಮಾಡಿದೆ. ಹೌದು ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಸುರಕ್ಷವಾಗಿ ವಾಹನ ಚಲಾಯಿಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಆ ನೆಪದಲ್ಲಿ 10-15 ಸಾವಿರದವರೆಗೂ ದಂಡ ವಿಧಿಸುವುದು ಯಾವ ನ್ಯಾಯ? ಒಂದೇ ವ್ಯಕ್ತಿಗೆ 23 ಸಾವಿರದಿಂದ 6 ಲಕ್ಷದವರೆಗೂ ದಂಡ ವಿಧಿಸಿದರೆ ಆ ವ್ಯಕ್ತಿಗಳು ಸುಧಾರಿಸಿಕೊಳ್ಳಲು ಸಾಧ್ಯವೇ? ಡ್ರಿಂಕ್ ಅಂಡ್ ಡ್ರೈವ್ ಗೆ 10 ಸಾವಿರ ದಂಡ ಅಂದರೆ ಒಕೆ ಒಪ್ಪಿಕೊಳ್ಳೋಣ, ಆದರೆ ಹೆಲ್ಮೆಟ್ ಇಲ್ಲದ್ದಕ್ಕೆ, ವಿಮೆ ಇಲ್ಲದ್ದಕ್ಕೆ ಸಾವಿರ ರೂ ದಂಡ ಕಟ್ಟಬೇಕೆಂದರೆ ಹೇಗೆ ಸಾಧ್ಯ?

2018ರಲ್ಲಿ ತೆಲುಗು ಭಾಷೆಯ ‘ಭರತ್ ಅನೆ ನೇನು’ ಸಿನಿಮಾ ತೆರೆಕಂಡಿತು. ವಿದೇಶಿ ಬದುಕಿನ ಅನುಭವ ಪಡೆದು ಭಾರತಕ್ಕೆ ಮರಳುವ ಭರತ್ (ಮಹೇಶ್ ಬಾಬು) ಇಲ್ಲಿನ ಸಂಚಾರದ ರೀತಿನೀತಿಗಳನ್ನು ನೋಡಿ ಬೇಸತ್ತು ತಾವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ಜಾರಿಗೆ ತರುವುದೇ ಮೋಟಾರು ವಾಹನ ಕಾಯ್ದೆಗೆ ಪರಿಷ್ಕರಣೆ. ಕಡಿಮೆ ಇದ್ದ ಸಂಚಾರ ನಿಯಮ ಉಲ್ಲಂಘನೆ ಶುಲ್ಕವನ್ನು ಅದರ ಹತ್ತು ಹಲವು ಪಟ್ಟು ಹೆಚ್ಚಿಸುತ್ತಾನೆ. ಅಂದರೆ ಜನರು ದಂಡದ ಶುಲ್ಕಕ್ಕೆ ಹೆದರಿ ನಿಯಮ ಪಾಲಿಸುತ್ತಾರೆ ಎಂಬುದು ಆ ಸಿನಿಮಾದ ನಾಯಕ ಭರತ್ ವಿವರಣೆ. ಆ ಸೀನ್ ನೋಡುತ್ತಿದ್ದಂತೆ ಜನ ನಗಲಿಕ್ಕೆ ಶುರು ಮಾಡುತ್ತಾರೆ. ಕಾಮಿಡಿ ಸೀನ್ ಥರ ಇರುವ ಅಷ್ಟು ನಾನ್‍ಸೆನ್ಸ್ ಆಗಿ ಆ ಸಿನಿಮಾ ಇದ್ದರೆ ನಮ್ಮ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಥೇಟ್ ಅದೇ ಮಾದರಿಯಲ್ಲಿ ಮೋಟಾರು ವಾಹನ ಕಾಯ್ದೆ (ಎಂವಿಎ) ಯನ್ನು ಜಾರಿಗೆ ತಂದಿದ್ದಾರೆ!

ಈ ಕಾನೂನು ಜಾರಿಯಾದ ಮೊದಲ ದಿನವೇ ಬೆಂಗಳೂರು ನಗರ ಒಂದರಲ್ಲೇ 42.5 ಲಕ್ಷ ದಂಡದ ಶುಲ್ಕ ವಸೂಲಿ ಮಾಡಲಾಗಿದ್ದು, ಒಂದು ವಾರದಲ್ಲಿ 1.10 ಕೋಟಿ ದಂಡವನ್ನು ಸಂಗ್ರಹಿಸಲಾಗಿದೆ. ಜನರು ದಂಡದ ಮೊತ್ತವನ್ನು ಭರಿಸಲಾಗದೆ ಹೈರಾಣಾಗಿದ್ದು, ಆಕ್ರೋಶಗೊಂಡು ಸಂಚಾರಿ ಪೊಲೀಸರೊಂದಿಗೆ ಜಗಳಕ್ಕಿಳಿಯುತ್ತಿದ್ದಾರೆ. ಆ ಜಗಳವನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದರೆ ಸಾವಿರ ಸಾವಿರ ಷೇರ್ ಆಗುತ್ತಿವೆ. ಸೃಜನಶೀಲ್ ಟ್ರೋಲ್‍ಗಳು ಮುಗಿಲುಮುಟ್ಟಿವೆ. ಅಲ್ಲಿಗೆ ಜನರ ಕೋಪವೂ ತಣಿಯುತ್ತಿದೆಯೇ ಹೊರತು ಇದೊಂದು ಹೋರಾಟವಾಗುವ, ಚಳವಳಿಯಾಗುವ ಲಕ್ಷಣಗಳಿಲ್ಲ. ಆದರೆ ಈ ರೀತಿಯಲ್ಲಿ ದಂಡ ವಿಧಿಸುವುದರಿಂದ ಜನರು ನಿಯಮವನ್ನು ಪಾಲಿಸುತ್ತಾರೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆಯನ್ನು ನಿಯಂತ್ರಿಸಲು ಇದೊಂದೇ ಮಾರ್ಗವೇ? ಬಹುಶಃ ಇದೂ ಒಂದು ಮಾರ್ಗವಿರಬಹುದು. ಆದರೆ ಇಂತಹ ಕಾನೂನುಗಳನ್ನು ಜಾರಿ ಮಾಡುವ ಮುನ್ನ ಸರ್ಕಾರಗಳು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ.

ಪ್ರತಿವರ್ಷ 1.50 ಲಕ್ಷ ಜನರು ರಸ್ತೆ ಅಪಘಾತದಿಂದ ಸಾವಿಗೀಡಾಗುತ್ತಿದ್ದಾರೆ. ಜನರ ಸಾವಿನ ಬಗ್ಗೆ ನಿಮಗೆ ಚಿಂತೆ ಇಲ್ಲವೇ? ಹಾಗಾಗಿ ದಂಡ ಹೆಚ್ಚಿಸಿದ್ದೇವೆ ಎಂಬುದು ಅವರ ಪ್ರಶ್ನೆ. ನಿಯಮ ಉಲ್ಲಂಘನೆಗೆ ದಂಡ ವಿಧಿಸುವುದರಿಂದ ಜನರನ್ನು ಪ್ರಾಣಾಪಾಯದಿಂದ ರಕ್ಷಿಸಿಬಿಡಬಹುದು ಎಂಬುದು ಸುಳ್ಳು. ಇಂದಿಗೂ ದೇಶದ ಶೇ.80ಕ್ಕೂ ಹೆಚ್ಚು ರಸ್ತೆಗಳು ಗುಂಡಿ ಬಿದ್ದಿವೆ. ಬಹಳ ಕೆಟ್ಟ ಪರಿಸ್ಥಿತಿಯಲ್ಲಿವೆ. ರಸ್ತೆಗಳ ತಿರುವುಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ರಸ್ತೆಗಳ ಮಧ್ಯೆ ಹಾಕಲಾಗಿರುವ ವೇಗ ನಿಯಂತ್ರಕ(ಹಂಪ್)ಗಳಂತೂ ರಾತ್ರಿಯ ವೇಳೆ ಇರಲಿ ಬಿರುಬಿಸಿಲಿರುವ ಮಧ್ಯಾಹ್ನದ ವೇಳೆಯೇ ಕಾಣುವುದಿಲ್ಲ. ಇನ್ನೂ ಹಲವಾರು ರಸ್ತೆಗಳ ಡಾಂಬರನ್ನೇ ಕಂಡಿಲ್ಲ. ರಸ್ತೆಗಳಲ್ಲಿ ಅಳವಡಿಸಲಾದ ಸಿಗ್ನಲ್‍ಗಳಂತೂ ಬಹುತೇಕ ಪಟ್ಟಣಗಳಲ್ಲಿ ಕೆಲಸಕ್ಕೆ ಬಾರದಂತಾಗಿವೆ. ಈ ಅಧ್ವಾನಗಳನ್ನು ಕುರಿತೇ ಮೈಸೂರಿನ ಖ್ಯಾತ ಕಲಾವಿದ ಬಾದಲ್ ನಂಜುಂಡಸ್ವಾಮಿ ಬೆಂಗಳೂರಿನಲ್ಲಿ ಗಗನಯಾತ್ರಿ ರೀತಿ ಮಾಡಿದ ವಿಡಿಯೋ ಕೋಟ್ಯಾಂತರ ಜನಕ್ಕೆ ತಲುಪಿ ಮೆಚ್ಚುಗೆ ಗಳಿಸಿತ್ತು. ಜೊತೆಜೊತೆಗೆ ಸರ್ಕಾರಗಳಿಗೆ ಬಿಸಿಮುಟ್ಟಿಸಿತ್ತು.

ಅಡ್ಡಾದಿಡ್ಡಿಯಾಗಿ ನಿರ್ಮಿಸಲಾಗಿರುವ ರಸ್ತೆಗಳಿಂದಾಗಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವುದು ಒಂದೆಡೆಯಾದರೆ, ವಾಹನಗಳ ಪಾರ್ಕಿಂಗ್ ಮಾಡಲು ಪಾರ್ಕಿಂಗ್ ವ್ಯವಸ್ಥೆಯೇ ಬಹುತೇಕ ವಲಯಗಳಲಿಲ್ಲ. ಎಲ್ಲಿ ನೋಡಿದರೂ ‘ನೋ ಪಾರ್ಕಿಂಗ್’ ಬೋರ್ಡುಗಳು ರಾರಾಜಿಸುತ್ತಿದ್ದು, ಜನರು ಪಾರ್ಕಿಂಗ್‍ಗಾಗಿಯೇ ಅಲೆದಾಡುತ್ತಿದ್ದಾರೆ. ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಬೇಕಾದ ಪೊಲೀಸರು ಎಲ್ಲೆಂದರಲ್ಲಿ ನೋ ಪಾರ್ಕಿಂಗ್ ಬೋರ್ಡ್‍ಗಳನ್ನು ನಿಲ್ಲಿಸಿ, ಜನರಿಂದ ದಂಡದ ಸುಲಿಗೆ ಮಾಡಲು ಮುಂದಾಗಿದ್ದಾರೆ. ದಂಡದ ಮೊತ್ತ ಹೆಚ್ಚಾದ ಮೇಲಂತೂ ಎಲ್ಲಾ ರಸ್ತೆಗಳಲ್ಲೂ ಪೊಲೀಸರ ದಂಡು ದಂಡವಸೂಲಿಯ ಕಾರ್ಯಾಚರಣೆಯಲ್ಲಿಯೇ ನಿರತವಾಗಿದೆ.

ಇಡೀ ವ್ಯವಸ್ಥೆಯೇ ಭ್ರಷ್ಟರ ಸಂತೆಯಾಗಿರುವ ಸಂದರ್ಭದಲ್ಲಿ ಡ್ರೈವಿಂಗ್ ಲೈಸನ್ಸ್(ಡಿಎಲ್), ವಾಹನ ಇನ್ಸುರೆನ್ಸ್ ಮಾಡಿಸಲು ಸರ್ಕಾರಿ ಶುಲ್ಕಕ್ಕಿಂತ ಐದಾರು ಪಟ್ಟು ಹೆಚ್ಚು ಲಂಚವನ್ನೇ ಕೊಡಬೇಕು. ಆ ಪ್ರಮಾಣದ ಲಂಚವನ್ನು ಕೊಡಲಾಗದೆ ಹಲವಾರು ಜನರು ಡಿಎಲ್, ಇನ್ಸುರೆನ್ಸ್‍ಗಳನ್ನು ಮಾಡಿಸದೇ ಉಳಿದ್ದಾರೆ. ಹಾಗಾಗಿ ಪ್ರಾದೇಶಿಕ ಸಾರಿಕೆ ಕಚೇರಿ (ಆರ್‍ಟಿಓ)ಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಜನರಿಗೆ ಪರವಾನಗಿಗಳು ಸುಲಭವಾಗಿ ಸಿಗುವಂತೆ ಮಾಡಬೇಕಾದ ಕರ್ತವ್ಯ ಸರ್ಕಾರಗಳದ್ದು, ಆದರೆ ಅವು ತಮ್ಮ ಕರ್ತವ್ಯಗಳನ್ನು ನಿರ್ವಹಿಸದೇ ಜನರ ಮೇಲೆ ಸವಾರಿ ಮಾಡುತ್ತಿವೆ.

ಇಷ್ಟೆಲ್ಲಾ ಸಮಸ್ಯೆಗಳು ರಸ್ತೆಗಳಲ್ಲಿರುವಾಗ ಜನರಿಗೆ ದಂಡವಿಧಿಸುವುದರಿಂದ ಜನರ ಪ್ರಾಣ ಕಾಪಾಡಲು ಸಾಧ್ಯವೇ? ಇನ್ನು ಈ ಹೊಸ ಕಾಯ್ದೆಯನ್ನು ಜಾರಿಗೊಳಿಸುವ ವಿವೇಚನೆಯನ್ನು ರಾಜ್ಯ ಸರ್ಕಾರಗಳಿಗೆ ಬಿಡಲಾಗಿದೆ. ಹಾಗಾಗಿಯೇ ಗೋವಾದ ಸಾರಿಗೆ ಸಚಿವ ಮೌವಿನ್ ಗೊಡಿನ್ಹೋರವರು ಗೋವಾ ರಾಜ್ಯದ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಿ ರಸ್ತೆಗಳನ್ನು ಸರಿಪಡಿಸಿ ನಂತರದಲ್ಲಿ ಎಂವಿಎ ನಿಯಮಗಳನ್ನು ಜಾರಿ ಮಾಡುವುದಾಗಿ ಘೋಷಿಸಿ, 2020ರ ಜನವರಿಯವರೆಗೆ ಕಾಲಾವಕಾಶ ಕೇಳಿದ್ದಾರೆ. ಇದು ಒಬ್ಬ ಸಚಿವನಿಗಿರಬೇಕಾದ ಸಾಮಾನ್ಯ ಜ್ಞಾನ. ಆದರೆ ಈ ಜ್ಞಾನ ನಿತಿನ್ ಗಡ್ಕರಿಯವರಿಗೂ, ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಇದ್ದಂತಿಲ್ಲ.

ಇನ್ನು ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ತೆಲಂಗಾಣ, ಚತ್ತೀಸ್‍ಘಡ, ಕೇರಳ, ಓಡಿಸ್ಸಾ ಸರ್ಕಾರಗಳು ನಾವು ಜನಸಾಮಾನ್ಯರ ಹಿತರಕ್ಷಣೆಯ ದೃಷ್ಟಿಯಿಂದ ಈ ನಿಯಮಗಳನ್ನು ಜಾರಿಗೆ ತರುವುದಿಲ್ಲ ಎಂದು ಘಂಟಾಘೋಷವಾಗಿ ಸಾರಿವೆ. ಜನಸಾಮಾನ್ಯರು ದುಬಾರಿ ದಂಡದ ವಿರುದ್ಧ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಆಳ್ವಿಕೆಯಲ್ಲಿರುವ ಮೋದಿಯವರ ತವರು ರಾಜ್ಯ ಗುಜರಾತ್‍ನಲ್ಲಿಯೇ ಕೇಂದ್ರ ಸರ್ಕಾರ ಘೋಷಿಸಿರುವ ದಂಡ ಮೊತ್ತಗಳಲ್ಲಿ ಅರ್ಧದಷ್ಟನ್ನು ಇಳಿಸುತ್ತೇವೆಂದು ಹೇಳಿದ್ದಾರೆ. ಇದು ಸಹ ದೊಡ್ಡ ಅನ್ಯಾಯವೇ. ಹೇಗೆಂದರೆ 100 ರೂ ಇದ್ದ ದಂಡವನ್ನು ಕೇಂದ್ರ 1000ಕ್ಕೆ ಏರಿಸಿದರೆ ನಂತರ ಅದರ ಅರ್ಧ ಇಳಿಸಿ 500 ನಿಗದಿ ಮಾಡುವುದು ಲೂಟಿಯಲ್ಲವೇ? ಹೋಗಲಿ ಬಿಡಿ ಅಷ್ಟಾದರೂ ಮಾಡಿದರಲ್ಲ ಎಂದು ಜನ ಸುಮ್ಮನಾಗುತ್ತಿದ್ದಾರೆ.

ಇನ್ನು ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ಸೆ.9ರಂದು ದಂಡದ ಅರ್ಧದಷ್ಟನ್ನು ಇಳಿಸುವುದಾಗಿ ಹೇಳಿದ್ದರು. ಒಂದು ವಾರ ಕಳೆದರೂ ಇನ್ನೂ ಟ್ರಾಫಿಕ್ ದಂಡ ಮಾತ್ರ ಕಡಿಮೆಯಾಗಿಲ್ಲ. ಈ ಕುರಿತು ಬೆಂಗಳೂರು ಕಮಿಷನರ್ ಭಾಸ್ಕರ್‍ರಾವ್‍ರವರು ನಮಗೆ ಆ ರೀತಿಯ ಯಾವುದೇ ಆದೇಶ ಬಂದಿಲ್ಲ ಎಂದಿದ್ದಾರೆ. ಒಬ್ಬ ಮುಖ್ಯಮಂತ್ರಿ ಮಾತಿಗೂ ಬೆಲೆ ಇಲ್ಲ ಅಂದರೆ ಯಡಿಯೂರಪ್ಪನವರಿನ್ನು ಬಿಜೆಪಿಯ ಹೈಕಮಾಂಡ್ ಹೇಳಿದಂತೆಯೇ ಕೇಳಿಕೊಂಡು ಬಿದ್ದಿದ್ದಾರೆ ಎಂದರ್ಥ ಅಲ್ಲವೇ? ಇದನ್ನು ತನ್ನ ರಾಜ್ಯದ ಪ್ರಜೆಗಳ ಹಿತಾಸಕ್ತಿಗಾಗಿ ಕೇಂದ್ರ ಸರ್ಕಾರದ ನೀತಿಯೊಂದನ್ನು ಅವಕಾಶವಿದ್ದರೂ ಸಹ ತಡೆಹಿಡಿಯುವಷ್ಟು ಅಧಿಕಾರವಿಲ್ಲದೇ ಗುಲಾಮಿ ಸರ್ಕಾರ ಅನ್ನದೇ ವಿಧಿಯಿಲ್ಲ. ಮುಖ್ಯಮಂತ್ರಿಗಳು ದಂಡ ಕಡಿಮೆ ಮಾಡುವ ಮಾತನ್ನಾಡಿದ್ದಾರೆ ಅಂತ ಜನ ಸ್ವಲ್ಪ ತಣ್ಣಗಾಗಿ ಕಾಯುತ್ತಾ ಕೂತು ದಿನಗಳು ಉರುಳಿದಂತೆ ಎಲ್ಲವೂ ತಣ್ಣಗಾಗುತ್ತೆ. ಆಗ ಜನ ಎಲ್ಲಾ ಮರೆತು ದುಬಾರಿ ದಂಡಕ್ಕೆ ಒಗ್ಗಿ ಹೋಗಿಬಿಡುತ್ತಾರೆ ಎಂಬ ಹುನ್ನಾದರಿಂದಲೂ ಜನರ ಸದ್ಯದ ಆಕ್ರೋಶ ತಗ್ಗಿಸಲು ಯಡಿಯೂರಪ್ಪ ಹೀಗೆ ಹೇಳಿದ್ದರೂ ಅಚ್ಚರಿಯಿಲ್ಲ. ಹೀಗಿರುವಾಗ ಯಡಿಯೂರಪ್ಪನಿಂದ ಜನರು ದಂಡ ವಿನಾಯತಿಯನ್ನು ನಿರೀಕ್ಷಿಸುವುದು ಬತ್ತಿಹೋದ ಬಾವಿಗೆ ಬಿಂದಿಗೆ ಬಿಟ್ಟು ನೀರಿಗಾಗಿ ಕಾದುಕುಳಿತಂತಾಗಿದೆ.

ದಂಡ ಹಾಕುವ ನೈತಿಕತೆ ಸರ್ಕಾರಕ್ಕೆ ಇದೆಯೇ?

ಸರ್ಕಾರಕ್ಕೆ ನಿಜಕ್ಕೂ ರಸ್ತೆ ನಿಯಮಗಳನ್ನು ಪಾಲಿಸಬೇಕು, ಅಪಘಾತಗಳನ್ನು ತಡೆಗಟ್ಟಬೇಕು ಎಂಬ ನೈಜ ಕಾಳಜಿಯಿದ್ದರೆ, ಅವರು ಮೊದಲು ಈ ಸಮಸ್ಯೆಯ ಮೂಲಬೇರುಗಳನ್ನು ಶೋಧಿಸಬೇಕಿದೆ. ಇಂದು ಬಹುತೇಕ ಅಪಘಾತಗಳು ನಗರಗಳಲ್ಲಿ, ಹಾಳಾದ ರಸ್ತೆಗಳಲ್ಲಿ ಸಂಭವಿಸುತ್ತಿವೆ. ಅಂದರೆ ನಗರಗಳಲ್ಲಿ ದಟ್ಟಣೆ ಹೆಚ್ಚಾದಷ್ಟು ನಿಯಮ ಉಲ್ಲಂಘನೆಗಳು, ಅಪಘಾತಗಳ ಜೊತೆಗೆ ಮಾಲಿನ್ಯವೂ ಹೆಚ್ಚಾಗುತ್ತಿದೆ. ಹಾಗಾಗಿ ಸರ್ಕಾರ ತನ್ನ ಅಭಿವೃದ್ಧಿ ಮಾದರಿ/ನೀತಿಗಳನ್ನು ಬದಲಿಸಿ ಗ್ರಾಮೀಣ ಪ್ರದೇಶಗಳಲ್ಲಿಯೂ ಕೂಡ ವಿಕೇಂದ್ರೀಕೃತವಾಗಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಿ ಮತ್ತು ಉತ್ತಮ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕಿದೆ. ಆಗ ಬಹುದೊಡ್ಡ ಸಮಸ್ಯೆ ನಗರಗಳಿಗೆ ವಲಸೆ ತಪ್ಪುತ್ತದೆ. ರಸ್ತೆಗಳನ್ನು ಸರಿಪಡಿಸಿದ ನಂತರವಷ್ಟೇ ಸರ್ಕಾರಕ್ಕೂ ದಂಡ ವಿಧಿಸುವ ನೈತಿಕತೆ ಬರುತ್ತದೆ ಅಲ್ಲವೇ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...