Homeಮುಖಪುಟಗಂಭೀರ ಸವಾಲುಗಳತ್ತ ದೃಷ್ಟಿಹರಿಸದ ಬಜೆಟ್

ಗಂಭೀರ ಸವಾಲುಗಳತ್ತ ದೃಷ್ಟಿಹರಿಸದ ಬಜೆಟ್

- Advertisement -
- Advertisement -

| ಪ್ರಭಾತ್ ಪಟ್ನಾಯಕ್ |
ವಿಶ್ರಾಂತ ಅರ್ಥಶಾಸ್ತ್ರ ಪ್ರಾಧ್ಯಾಪಕರು
ಜೆಎನ್‍ಯೂ, ದೆಹಲಿ

ಕನ್ನಡಕ್ಕೆ: | ಅನಿಲ್ ಚಿಕ್ಕದಾಳವಟ್ಟ |
ಕೃಪೆ -ಸಾಕ್ಷಿ ದಿನ ಪತ್ರಿಕೆ

ಅರ್ಥಶಾಸ್ತ್ರವನ್ನು ಎನ್‍ಡಿಎ ಸರ್ಕಾರ ಎಂದಿಗೂ ಪ್ರಬಲವಾದ ಅಂಶವಾಗಿ ಭಾವಿಸಿಯೇ ಇಲ್ಲ. ಮೊದಲ ಸಲ ಆಡಳಿತದಲ್ಲಿ ಅದು ತಂದ ನಿರ್ಣಾಯಕ ಆವೃತ್ತಿಗಳು ನೋಟುರದ್ದತಿ, ಜಿಎಸ್ಟಿ ಎಷ್ಟು ವಿನಾಶಕಾರಿಯಾಗಿ ಪರಿಣಮಿಸಿವೆಯೋ ಎಲ್ಲರಿಗೂ ಗೊತ್ತಿದೆ. ಆದ್ದರಿಂದ 2019-20 ಕೇಂದ್ರ ಬಡ್ಜೆಟ್ ನಮಗೆ ಏನೋ ತಂದುಕೊಡುತ್ತದೆಂದು ಭಾವಿಸುವುದು ಅರ್ಥರಹಿತ. ಇಂತಹ ಸಂದರ್ಭದಲ್ಲಿಯೂ ಸಹ ದೇಶದ ಅರ್ಥವ್ಯವಸ್ಥೆ ಎದುರಿಸುತ್ತಿರುವ ತೀವ್ರ ಸಮಸ್ಯೆಗಳನ್ನು ಹೇಗೆ ಪರಿಷ್ಕರಿಸಬೇಕು ಎನ್ನುವ ಸ್ಪೂರ್ತಿಯೂ ಸಹ ಕೇಂದ್ರ ಬಡ್ಜೆಟ್‍ನಲ್ಲಿ ಕೊರತೆಯಾಗಿರುವುದು ನೋಡಿದರೆ ಆಶ್ಚರ್ಯವಾಗುತ್ತಿದೆ. ಆರ್ಥಿಕ ಚಟುವಟಿಕೆ ನಿಧಾನಿಸಿರುವುದು, ವ್ಯವಸಾಯರಂಗದ ಬಿಕ್ಕಟ್ಟು, ತೀವ್ರಸ್ಥಾಯಿಯ ನಿರುದ್ಯೋಗ, ವಿದೇಶಿ ಮೌಲ್ಯಮಾಪನಗಳ ಹೊರೆಯಂತಹ ಗಂಭೀರ ಸಮಸ್ಯೆಗಳ ಮೇಲೆ ಕೂಡ ಬಡ್ಜೆಟ್ ದೊಡ್ಡದಾಗಿ ದೃಷ್ಟಿ ಕೇಂದ್ರಿಕರಿಸಿದ ಹಾಗಿಲ್ಲ.

ಮುಖ್ಯವಾಗಿ ಆದಾಯ ಬೆಳವಣಿಗೆಯ ದರ ಕಡಿಮೆಯಾಗುತ್ತಿದೆ. ಆರ್ಥಿಕ ಚಟುವಟಿಕೆ ಕಡಿಮೆಯಾಗಿರುವುದು ಒಂದು ಕಾರಣವಾಗಿಯೂ, ಕಳಪೆಮಟ್ಟದ ಜಿಎಸ್ಟಿ ವಸೂಲಿಗಳು ಪ್ರಧಾನ ಕಾರಣ. 2018-19ಕ್ಕಾಗಿ ತಿದ್ದುಪಡಿಯ ಸಂಗ್ರಹ ಅಂದಾಜನ್ನು ಪ್ರಸ್ತುತ ಆರ್ಥಿಕ ಮಂತ್ರಿ ಉಲ್ಲೇಖಿಸಿದ್ದಾರೆ. ಇವು ಕಳೆದ ವರ್ಷದ ಬಡ್ಜೆಟ್ ಅಂದಾಜಿಗೆ ಹತ್ತಿರದಲ್ಲಿವೆ. ಆದರೆ ಹೊಸದಾಗಿ ಸಿಎಜಿ ಪ್ರಕಟಿಸಿದ ಅಂಕಿಅಂಶಗಳಿಗಿಂತ ಇವು ಸ್ವಲ್ಪ ಹೆಚ್ಚಾಗಿ ಇರುವುದು ಗಮನಾರ್ಹ. ಸಿಎಜಿ ವರದಿಯ ಪ್ರಕಾರ 2018-19 ವರ್ಷದಲ್ಲಿ ಕೇಂದ್ರ ಸರ್ಕಾರ ಬಡ್ಜೆಟ್ ಅಂದಾಜನ್ನು ಹೋಲಿಸಿದರೆ ಜಿಎಸ್‍ಟಿ ಆದಾಯದಲ್ಲಿ ರೂ1.6 ಲಕ್ಷ ಕೋಟಿ ಕಡಿಮೆ ನಮೂದಾಗಿದೆ. ಇನ್ನು 1019-20 ಆರ್ಥಿಕ ವರ್ಷದಲ್ಲಿ ಪರಿಸ್ಥಿತಿ ಇನ್ನೂ ಉತ್ತಮವಾಗಿ ಇರುತ್ತದೆಂದು ಆಶಾಭಾವನೆ ವ್ಯಕ್ತಪಡಿಸಿದರೂ ಸಹ ವಾಸ್ತವದಲ್ಲಿ ಹಾಗೆ ಕಾಣಿಸುತ್ತಿಲ್ಲ.

ಬಡ್ಜೆಟ್ ಪ್ರಕಾರ ಮಾಡಿದ ವೆಚ್ಚದಲ್ಲಿಯೂ ಸಹ ಬೆಳವಣಿಗೆ ಕಾಣಿಸುತ್ತಿಲ್ಲ. ಒಟ್ಟು ವೆಚ್ಚ, ಪ್ರಜೆಗಳ ಮೇಲೆ ಪ್ರಭಾವಿಸುತ್ತಿರುವ ವಲಯಗಳಲ್ಲಿ ಇಟ್ಟಂತಹ ವೆಚ್ಚದ ವಿಷಯದಲ್ಲಿಯೂ ಸಹ ಬೆಳವಣಿಗೆ ಕಾಣಿಸುತ್ತಿಲ್ಲ. ಬಹಳಷ್ಟು ಬೆಳೆದ ವೆಚ್ಚಗಳು ಸಾಧಾರಣ ಜಿಡಿಪಿಯಲ್ಲಿ ಅಂದಾಜು ಮಾಡಿದ ದರದ ಪ್ರಕಾರವಾಗಿಯೇ ನಡೆಯುತ್ತಾ ಬಂದಿವೆ. ಮತ್ತಷ್ಟು ಆಸಕ್ತಿಕರವಾದ ವಿಷಯವೇನೆಂದರೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಕ್ಕೆ ಆಹಾರ ಯೋಜನೆ ವಿಷಯದಲ್ಲಿ 2018-19ಕ್ಕಾಗಿ ಮಾರ್ಪಡಿಸಿದ ನಿರಿಕ್ಷೆಗಳಿಂದ ಹೋಲಿಸಿದರೆ ಇಳಿಮುಖವಾಗಿದೆ. ದೇಶವ್ಯಾಪ್ತಿಯಾಗಿ ತೀವ್ರವಾದ ನಿರುದ್ಯೋಗ ಸಮಸ್ಯೆ ಆವರಿಸಿರುವ ಸಮಯದಲ್ಲಿಯೇ ಉದ್ಯೋಗಕ್ಕೆ ಆಹಾರ ಯೋಜನೆ ಹಿಮ್ಮುಖಗೊಳಿಸುವುದು ಪ್ರಮಾದದ ಘಂಟೆ ಮೊಳಗುಸುತ್ತಿದೆ.

ಮಾಡಿದ ವ್ಯಯಗಳಿಗೆ ಸಂಬಂಧಿಸಿದ ಅಂಕಿಅಂಶಗಳು ಕೂಡ 2018-19ಕ್ಕಾಗಿ ತಿದ್ದುಪಡಿ ಮಾಡಿದ ಅಂದಾಜುಗಳ ಆಧಾರದ ಮೇಲೆ ಎಂಬೆಂಡಿಂಗ್ ಮಾಡಲಾಗಿದೆ. ಮಾರ್ಪಡಿಸಿದ ಅಂದಾಜುಗಳಿಗಿಂತ ವಾಸ್ತವ ಅಂದಾಜು ಇಳಿಮುಖ ಹಿಡಿದಿದ್ದರಿಂದ 2019-20ರಲ್ಲಿ ಕೂಡ ಈ ಪತನ ಮುಂದುವರೆಯುತ್ತಿದೆ ಎಂದು ಸ್ಪಷ್ಟವಾಗುತ್ತಿದೆ. ಜಾಗತೀಕರಣದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ವಿತ್ತಿಯ ವ್ಯವಸ್ಥೆಯ ಒತ್ತಡಗಳನ್ನು ಸಂತೃಪ್ತಿಗೊಳಿಸಬೇಕಿದೆ ಎಂದು ಎನ್‍ಡಿಎ ಭಾವಿಸುತ್ತಿರುವುದರಿಂದ ಅಂದಾಜು ಮಾಡಿದ ಈ ವ್ಯಯಗಳನ್ನಾದರೂ ಕೇಂದ್ರಸರ್ಕಾರ ಖರ್ಚುಮಾಡಲಾಗುತ್ತದೆಯಾ ಎನ್ನುವುದೇ ಸಂದೇಹ. ಜೋರಾಗುತ್ತಿರುವ ನಿರುತ್ಸಾಹ ಕಾರ್ಮೋಡಗಳ ಪರಿಸ್ಥಿತಿಗಳಲ್ಲಿ ವ್ಯಯಕ್ಕೆ ಸಂಬಂಧಿಸಿದಂತೆ ಹಾಕಿಕೊಂಡಿರುವ ಗುರಿಗಳನ್ನೂ ಸಹ ಮುಂದುವರೆಸಬೇಕಿರುವದು ಕಷ್ಟವೇ ಆಗಬಹುದು.

ಈ ಪರಿಸ್ಥಿತಿಯಲ್ಲಿ ದೇಶಕ್ಕೆ ಅವಶ್ಯಕತೆ ಇರುವುದು ಆದಾಯ, ಖರ್ಚುಗಳ ಅಂಕಿ ಅಂಶಗಳನ್ನು ತೋರಿಸುವ ಬಡ್ಜೆಟ್ ಮೇಲೆ ಕೇವಲ ಚರ್ಚೆಯಲ್ಲ. ಹಣಕಾಸು ವ್ಯವಸ್ಥೆಯನ್ನು ತ್ವರಿತಗೊಳಿಸಿ ಹೆಚ್ಚುವರಿ ಆದಾಯ ಮೂಲಗಳನ್ನು ತಕ್ಷಣವೇ ದೃಷ್ಟಿ ಸಾಧಿಸಬೇಕಿದೆ. ಆದರೆ ಈ ಧಾಟಿಯಲ್ಲಿ ಎಂತಹ ಸೃಜನಾತ್ಮಕ ಆಲೋಚನೆಗಳನ್ನು ತೆಗೆದುಕೊಳ್ಳಲು ಎನ್‍ಡಿಎ ಸರ್ಕಾರ ತಿರಸ್ಕರಿಸುವುದು ಗಮನಾರ್ಹ. ಪ್ರಸ್ತುತ ಕೇಂದ್ರಕ್ಕೆ ಬರುತ್ತಿರುವ ಆದಾಯದ ಟ್ರೆಂಡ್ಸಿಯನ್ನು ಭವಿಷ್ಯತ್ತಿಗೂ ಕೂಡ ಮುನ್ಸೂಚನೆಯಾಗಿ ಹಾಗೇ ಪ್ರಸ್ತಾಪಿಸುವುದು ಹೊರತುಪಡಿಸಿದರೆ ಹೊಸ ಬಡ್ಜೆಟ್ ದೊಡ್ಡದಾಗಿ ಮಾಡಿದ್ದೇನಿಲ್ಲ.

ಈ ಬಾರಿ ಬಡ್ಜೆಟ್ಟಿನಲ್ಲಿ ಗಮನಾರ್ಹವಾಗಿ ಗುರುತಿಸಬೇಕಾದ ವಿಷಯವೇನೆಂದರೆ ಸಂಪತ್ತಿನ ಮೇಲಿನ ತೆರಿಗೆ ಏರಿಸಿದ್ದು. ದೇಶದಲ್ಲಿನ ಬಿಲೇನಿಯರ್‍ಗಳ ಒಟ್ಟು ಆದಾಯ ರೂ.560 ಲಕ್ಷ ಕೋಟಿ ಎಂದು ಅಂದಾಜು. ಇವರ ಮೇಲೆ ಕನಿಷ್ಟ 1%ರಷ್ಟು ಸಂಪತ್ತಿನ ಮೇಲಿನ ತೆರಿಗೆ ಏರಿಸಿದರೂ ಸರಿ ಕೇಂದ್ರ ಸರ್ಕಾರಕ್ಕೆ ರೂ.5.6 ಲಕ್ಷ ಕೋಟಿ ಆದಾಯ ಬರುವ ಅವಕಾಶ ಇದೆ. ಇನ್ನು ಅವರ ಉತ್ತರಾಧಿಕಾರ ಆಸ್ತಿಗಳ ಮೇಲೆ ಕೂಡ ತೆರೆಗೆ ಹೆಚ್ಚಿಸಿದ್ದಾರೆ ಮತ್ತೂ ರೂ.9.3 ಲಕ್ಷ ಕೋಟಿ ಆದಾಯ ಬರುವ ಅವಕಾಶವಿದೆ. ಈ ಎರಡು ರೀತಿಯ ತೆರಿಗೆಗಳನ್ನು ದೇಶಿಯ ಬಿಲೇನಿಯರ್‍ಗಳ ಮೇಲೆ ವಿಧಿಸಿದ್ದಾದರೆ ರೂ.15 ಲಕ್ಷ ಕೋಟಿ ಆದಾಯ ಕೇಂದ್ರ ಖಜಾನೆಗೆ ಬಂದು ಸೇರಲಿದೆ. ದೇಶದಲ್ಲಿ ಕಣ್ಮರೆಯಾಗುತ್ತಿರುವ ಕಲ್ಯಾಣ ಯೋಜನೆಗಳಿಗೆ ಈ ಭಾರಿ ಮೊತ್ತ ಸ್ವಲ್ಪ ಜೀವ ನೀಡುವ ಅವಕಾಶವಿದೆ. ಇಷ್ಟು ಆದಾಯ ಬಂದಿದ್ದೇ ಆದರೆ, ಪ್ರತಿ ಭಾರತಿಯನಿಗೆ ಐದು ಪ್ರಾಥಮಿಕ ಹಕ್ಕುಗಳನ್ನು ಖಾತರಿಪಡಿಸಬಹುದು. ಅವು ಏನೆಂದರೆ ಆಹಾರ ಹಕ್ಕು, ಉದ್ಯೋಗ ಹಕ್ಕು , ಪದವಿ ಪೂರ್ವ ತರಗತಿಗಳ ವರೆಗೂ ಗುಣಮಟ್ಟದ ಶಿಕ್ಷಣವನ್ನು ಹೊಂದುವ ಹಕ್ಕು, ಸರ್ಕಾರ ನಿರ್ವಹಿಸುವ ರಾಷ್ಟ್ರೀಯ ಅರೋಗ್ಯ ಸೇವೆಯ ಮೂಲಕ ಗುಣಮಟ್ಟದ ಆರೋಗ್ಯ ಸಂರಕ್ಷಣೆಯ ಹಕ್ಕು, ವೃದ್ಯಾಪ್ಯದಲ್ಲಿ ಇರುವ ಪ್ರತಿಯೊಬ್ಬರಿಗೂ ತಿಂಗಳಿಗೆ 2000 ರೂಪಾಯಿಗಳ ವೃದ್ಧಾಪ್ಯ ವೇತನ (ಈಗ ತಿಂಗಳಿಗೆ ಕೇವಲ 200ರೂ ಮಾತ್ರವೇ ಕೊಡುತ್ತಿದ್ದಾರೆ) ಹಕ್ಕಿನೊಂದಿಗೆ ಅಂಗವಿಕಲರಿಗೆ ಪ್ರಯೋಜನಗಳು ಸಹ ಕಲ್ಪಿಸಬಹದು.

ನಿಜಕ್ಕೂ, ಬಡ್ಜೆಟ್ ಮಂಡಿಸುವ ಮುನ್ನ, ಸಂಪತ್ತಿನ ಮೇಲೆ ಉತ್ತರಾಧೀಕಾರಿತ್ವದ ತೆರಿಗೆ ವಿಧಿಸುತ್ತಾರೆಂದು ಭಾವಿಸಿದ್ದಾರೆ. ಆಶ್ಚರ್ಯಕರವಾಗಿ ಪ್ರಸ್ತುತ ಬಡ್ಜೆಟ್ ಅದರ ಪ್ರಸ್ತಾವನೆ ಕೂಡ ತರಲಿಲ್ಲ. ಮತ್ತೊಂದು ಕಡೆ, ವಿದೇಶಿ ಪ್ರತ್ಯಕ್ಷ ಹೂಡಿಕೆಗಳ ಬಗ್ಗೆ ಉದುರಿಸುತ್ತಿದ್ದಾರೆ. ಹೊಸ ಬಡ್ಜೆಟ್‍ನಲ್ಲಿ ಏನಾದರೂ ಕಾರ್ಯತಂತ್ರದ ಅಂಶ ಇದೆಯೆಂದರೆ, ದೇಶದಲ್ಲಿನ ಎಪ್.ಡಿ.ಐಗಳನ್ನು ಆಕರ್ಷಿಸುವುದು ಮಾತ್ರವೇ. ಇದು ಸಹ ಕಾರ್ಮಿಕರ ಹಕ್ಕುಗಳನ್ನು ಹತ್ತಿಕ್ಕುವುದು, ಭೂಮಿಯನ್ನು ಇನ್ನಷ್ಟು ಸುಲಭವಾಗಿ ಸ್ವಾಧೀನಪಡಿಸಿಕೊಳ್ಳುವ ಮೂಲಕ ಜಾರಿಯಾಗುತ್ತದೆ. ಈ ರೀತಿಯಾದ ಅಭಿವೃದ್ಧಿ ಸಾಧಿಸುವುದೇ ಆದರೆ ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಾಗಲು ದಾರಿಯಾಗುತ್ತದೆ. ಸರ್ಕಾರ ತಾನೇ ಖರ್ಚು ಮಾಡುವುದು, ಸರ್ಕಾರಿ ಕಲ್ಯಾಣ ಯೋಜನೆಗಳಗೆ ಅನುದಾನ ಭರಿಸುವುದು ಎನ್ನುವ ಅಂಶಗಳನ್ನು ದೇಶದ ಆರ್ಥಿಕ ವ್ಯವಸ್ಥೆ ಚಾಲಕ ಶಕ್ತಿಯಾಗಿ ಬದಲಿಸುವ ಬದಲಾಗಿ ವಿದೇಶಿ ನೇರ ಹೂಡಿಕೆಗಳಿಗೆ ಮತ್ತಷ್ಟು ಬಾಗಿಲು ವಿಶಾಲವಾಗಿ ತೆಗೆಯುವುದು ಎನ್ನುವುದು ಜನಸಾಮಾನ್ಯರ ಮೇಲೆ ಸರ್ಕಾರ ಆಯುಧವಾಗಿ ಮಾರ್ಪಡುತ್ತದೆ. ಜಾಗತಿಕ ಆರ್ಥಿಕ ವ್ಯವಸ್ಥೆ ನಿಧಾನಗತಿಗೆ ಜಾರುತ್ತಿರುವ ವೇಳೆ, ಬಹುರಾಷ್ಟ್ರೀಯಾ ಸಂಸ್ಥೆಗಳು ಆಯಾ ದೇಶಗಳಲ್ಲಿ ಹೂಡಿಕೆ ಮಾಡುವುದಕ್ಕೆ ಆಸಕ್ತಿ ಕಳೆದುಕೊಳ್ಳುತ್ತಿರುವ ಸಮಯದಲ್ಲಿ ಸರ್ಕಾರವೇ ಖರ್ಚುಮಾಡುವುದರ ಮೂಲಕ ಅಭಿವೃದ್ಧಿಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದು ಜನೋಪಯೋಗಿ ಕಾರ್ಯಗಳಿಗೆ ಪ್ರಾಧಾನ್ಯತೆ ಕೊಟ್ಟ ಹಾಗೆ ಆಗುತ್ತದೆ. ನರೇಂದ್ರ ಮೋದಿ ಪ್ರತಿಷ್ಟಾತ್ಮಕವಾಗಿ ತೆಗೆದುಕೊಂಡು ಬಂದ ಮೇಕ್ ಇನ್ ಇಂಡಿಯಾ ನಿನಾದದ ಗುರಿಯೇ ಇದು. ಆದರೆ ಆ ದಾರಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಎಲ್ಲಿಯವರೆಗೂ ನಡೆಯಿತು?

ಕೇಂದ್ರ ಸರ್ಕಾರ ಕೆಲವು ಸಿಹಿ ಮಾತುಗಳನ್ನು ಹೇಳುತ್ತಾ ಸ್ವಲ್ಪಮಟ್ಟಿಗೆ ಹೂಡಿಕೆಗಳನ್ನು ತರಲಾಗಿದೆಯೆಂದು ಹೇಳಿಕೊಳ್ಳುವುದು ನಿಜವೆಂದು ಭಾವಿಸಿದರೂ ಸಹ. ಅದು ಕಳೆದ ಐದು ವರ್ಷಗಳಲ್ಲಿ ಎಷ್ಟು ಉದ್ಯೋಗಗಳನ್ನು ಸೃಷ್ಟಿ ಮಾಡಿದೆ ಎಂಬುದು ಪ್ರಶ್ನೆ. ಒಂದು ಕಡೆ ಬಹುರಾಷ್ಟ್ರೀಯ ಕಂಪನಿಗಳು, ಮತ್ತೊಂದು ಕಡೆ ದೇಸೀಯ ದೊಡ್ಡ ವಾಣಿಜ್ಯೋದ್ಯಮಿಗಳು ಸಾಧಿಸಿದ ಬೆಳವಣಿಗೆಯ ದರ ಅಧಿಕವಾಗಿದೆಯೆಂದು ಪ್ರಚಾರ ನಡೆಯುತ್ತಿದ್ದರೂ, ಏರಿಸಿ ಹೇಳುತ್ತಿರುವ ಇಂತಹ ಭಾರಿ ಜಿಡಿಪಿ ದರಗಳು ಸಹ ದೇಶದ ಶ್ರಮಜೀವಿ ವರ್ಗಕ್ಕೆ ಅವಶ್ಯವಾದ ಸಹಜವಾದ ಉದ್ಯೋಗಗಳನ್ನು ಬೆಳೆಸಲಾಗದಿರುವುದು ಗಮನಾರ್ಹ. ಈ ರೀತಿಯಾದ ಬೆಳವಣಿಗೆಯ ಧೋರಣೆಗಳಿಂದ ದೇಸೀಯ ನಿರುದ್ಯೋಗ ಸಮಸ್ಯೆಯನ್ನು ತೊಲಗಿಸುತ್ತೇವೆಂದು ಹೇಳುವುದು ಸಂಪೂರ್ಣವಾಗಿ ಅವಸ್ತಾವಿಕತೆಯೇ ಆಗುತ್ತದೆ. ಇದೆಲ್ಲಾ ಎಲ್ಲರಿಗೂ ಅನುಭವವೇದ್ಯವಾದ ವಿಷಯವೇ ಆದರೂ ಮೋದಿ ಸರ್ಕಾರವು ಸಹ ಮಧ್ಯಯುಗದ ಪ್ರಾನ್ಸ್ ಬರ್ಬನ್ ರಾಜರುಗಳ ಹಾಗೆ ‘ ಕಲಿತದ್ದೂ ಇಲ್ಲ..ಮರೆತುಹೋಗಿದ್ದು ಇಲ್ಲ’ ಎನ್ನುವ ಧೋರಣೆಯಲ್ಲಿ ನಿಂತಿರುವುದು ವಿಶೇಷ.

ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಹೊಸ ಬಡ್ಜೆಟ್‍ನಲ್ಲಿ ಸೇರಿಸಿರುವ ಎರಡು ಅಂಶಗಳು ಭವಿಷ್ಯತ್ತಿನಲ್ಲಿ ತೀವ್ರ ಪರಿಣಾಮಗಳಿಗೆ ದಾರಿಯಾಗಲಿದೆ. ಒಂದು, ಸರ್ಕಾರ ಸಾಲಗಳಿಗಾಗಿ ಅಂತಾರಾಷ್ಟ್ರೀಯ ದ್ರವ್ಯ ಮಾರುಕಟ್ಟೆಗಳನ್ನು ಸಂಪರ್ಕಿಸಿರುವುದು, ಇದರ ಹಿಂದೆ ಯಾವುದೇ ಅಮೂಲ್ಯವಾದ ಕಾರಣವು ಸಹ ಕಾಣಿಸುತ್ತಿಲ್ಲ. ಏಕೆಂದರೆ ಸರ್ಕಾರದ ಸಾಲಗಳ ಮೇಲೆ ಮಿತಿ ಎನ್ನುವುದು ದ್ರವ್ಯಕೊರತೆಯ ಮೇಲೆ ಸ್ವಯಂ ಉಂಟುಮಾಡಿದ ಸಿಲಿಂಗ್ ಮೇಲೆ ಆಧಾರಪಟ್ಟಿರುತ್ತದೆಯೇ ಹೊರತು ದೇಶದ ಮಾರುಕಟ್ಟೆಯಲ್ಲಿ ಸಾಲಗಳನ್ನು ಸಾಧಿಸದ ಸರ್ಕಾರದ ಅಸಮರ್ಥತೆಯ ಮೇಲೆ ಆಧಾರಪಟ್ಟಿರುವುದಿಲ್ಲ. ಸರ್ಕಾರ ವಿದೇಶಗಳಿಂದ ಸಾಲಗಳಿಗೆ ಪ್ರಯತ್ನಿಸುವ ಬೆಳವಣಿಗೆಯೆಂದರೆ , ಭಾರತ ಸರ್ಕಾರದ ಮೇಲೆ ಅಂತಾರಾಷ್ಟ್ರೀಯ ದ್ರವ್ಯಸಂಸ್ಥೆಗಳ ಹಿಡಿತವನ್ನು ಮತ್ತಷ್ಟು ಹೆಚ್ಚಿಸುವುದೇ ಆಗುತ್ತದೆ ಎಂದು ಮರೆಯುವ ಹಾಗಿಲ್ಲ. ಇಂತಹ ಹಿನ್ನಲೆಯಲ್ಲಿ ಸಾಲಗಳನ್ನು ತರುವುದರಲ್ಲಿ ಅವುಗಳನ್ನು ತೀರಿಸುವುದರಲ್ಲಿ ಏನಾದರೂ ವಿಳಂಬವಾದರೆ ದೇಶದ ಮೇಲೆ ನಿರಂಕುಶವಾಗಿ ಮಿತವ್ಯಯವನ್ನು ಹೇರುವುದಕ್ಕೆ ಅವಕಾಶವಿರುತ್ತದೆ ಮತ್ತು ಬಡ್ಜೆಟ್ ವಿದೇಶಿ ಮಾರಕ ಮಾರುಕಟ್ಟೆಯನ್ನು ದ್ರವ್ಯ ಮಾರುಕಟ್ಟೆಯ ಜೊತೆ ಜೋಡಿಸಲಾಗಿದೆ. ಇದರಿಂದ ರೂಪಾಯಿ ಕುಸಿತ ಮತ್ತಷ್ಟು ಬೆಳೆದು ಸರ್ಕಾರ ಸಾಲದಹೊರೆ ಗಗನ ಮುಟ್ಟುತ್ತದೆ. ಅಂತಿಮವಾಗಿ ಕೇಂದ್ರ ಸರ್ಕಾರ ವಿದೇಶಿ ಒತ್ತಡಗಳಿಗೆ ಪೂರ್ತಿಯಾಗಿ ಒಳಗೊಳ್ಳಬೇಕಾದ ಪರಿಸ್ಥಿತಿ ಏರ್ಪಡದಿರುವುದಿಲ್ಲ.

ಇನ್ನು ಎರಡನೇ ಅಂಶ ಒಕ್ಕೂಟ ತತ್ವಕ್ಕೆ ಸೇರಿದ್ದು. ಜಿಎಸ್ಟಿಯನ್ನು ತನಗೆ ತಾನು ಭಾರತ ಸಂವಿಧಾನದೊಳಗಡೆ ಒಕ್ಕೂಟ ಕಾನೂನಿನ ಮೇಲೆ ಮಾಡಿದ ಭಾರಿ ದಾಳಿಯೆಂದು ಹೇಳಬೇಕು. ರಾಜ್ಯ ಸರ್ಕಾರಗಳು ಯಾವುದೇ ವಿವೇಚನೆ ಇಲ್ಲದೆ ಈ ಒಂದು ದೇಶ ಒಂದೆ ತೆರಿಗೆ ವಿಧಾನವನ್ನು ಕುರುಡಾಗಿ ಅನುಮೋದಿಸಿವೆ. ಆದರೆ ಆಶಿಸಿದ ಆದಾಯದಲ್ಲಿ ಜಿಎಸ್ಟಿ ವಿಫಲವಾಗಿರುವದು ರಾಜ್ಯ ಸರ್ಕಾರದ ಆದಾಯದ ಮೇಲೆ ಧಾರುಣ ಪ್ರಭಾವ ಬೀರಿದೆ. ಇದಕ್ಕೂ ಮಿಗಿಲಾಗಿ ಪ್ರಸ್ತುತ ಕೇಂದ್ರ ಬಡ್ಜೆಟ್‍ನಲ್ಲಿ, ಕೇಂದ್ರಸರ್ಕಾರ ತನ್ನ ಆದಾಯವನ್ನು ಏರಿಸಿಕೊಳ್ಳುವುದಕ್ಕಾಗಿ ಸೆಸ್ಸುಗಳು,ಸರ್ಚಾರ್ಜುಗಳನ್ನು ನವೀಕೃತಗೊಳಿಸಿದೆ. ಅಂದರೆ ಹೀಗೆ ಗಳಿಸಿದ ಆದಾಯದಲ್ಲಿ ರಾಜ್ಯ ಸರ್ಕಾರಗಳಿಗೆ ಮಾತ್ರ ಪಾಲು ಇರುವುದಿಲ್ಲ. ಒಂದು ಮಾತಿನಲ್ಲಿ ಹೇಳುವುದಾದರೆ ಆರ್ಥಿಕ ಮೂಲಗಳನ್ನು ಕೇಂದ್ರ ಸರ್ಕಾರ ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವುದಕ್ಕಾಗಿ ಇದು ಸಲೀಸಾಗಿ ಉಪಯೋಗವಾಗಲಿದೆ. ಇದು ತುಂಬಾ ಅಪಾಯಕರವಾದ ಪರಿಣಾಮ. ಏಕೆಂದರೆ ರಾಜ್ಯಗಳು ಒಂದು ಮೂಲೆಗೆ ತಳ್ಳಲ್ಪಟ್ಟು ಕೇಂದ್ರದ ಸಹಾಯಕ್ಕಾಗಿ ಬೇಡುವಂತಾಗುತ್ತದೆ. ಕೇಂದ್ರವು ಸಹ ತನಗೆ ಅನುಕೂಲಕರವಾಗಿರುವ ರಾಜ್ಯಗಳಿಗೆ ಪ್ರೋತ್ಸಾಹ ನೀಡುವುದು, ವಿರೋಧಿಯಾಗಿರುವ ರಾಜ್ಯ ಸರ್ಕಾರಗಳನ್ನು ಉಪೇಕ್ಷಿಸುವುದು ರೂಢಿ ಮಾಡಿಕೊಳ್ಳುವ ಸ್ಥಿತಿ ಉಂಟಾಗುತ್ತದೆ. ಭಾರತ ಒಕ್ಕೂಟ ತತ್ವಕ್ಕೆ, ಪ್ರಜಾಪ್ರಭುತ್ವಕ್ಕೆ ಇದು ಕೊಡಲಿ ಪೆಟ್ಟಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...