Homeಕರ್ನಾಟಕಒಂದು ಬಟನ್ ಒತ್ತಿದ್ರೆ ಇಡೀ ದೇಶವೇ ಅಲ್ಲೋಲ ಕಲ್ಲೋಲ ಆಗುತ್ತೆ ಎಂದು ಬೂಸಿ ಬಿಟ್ಟ ಸುವರ್ಣ...

ಒಂದು ಬಟನ್ ಒತ್ತಿದ್ರೆ ಇಡೀ ದೇಶವೇ ಅಲ್ಲೋಲ ಕಲ್ಲೋಲ ಆಗುತ್ತೆ ಎಂದು ಬೂಸಿ ಬಿಟ್ಟ ಸುವರ್ಣ ಟಿವಿ!

- Advertisement -
| ನಾನುಗೌರಿ ಡೆಸ್ಕ್ |
ಕಳೆದ ನಾಲ್ಕೈದು ವರ್ಷಗಳಿಂದ ಮಾಧ್ಯಮಗಳು ಬಿಜೆಪಿ ವಕ್ತಾರರಂತೆ ಕಾರ್ಯನಿರ್ವಹಿಸುತ್ತಿರುವುದು ಸರ್ವೇಸಾಮಾನ್ಯವಾಗೊ ಜಗಜ್ಜಾಹೀರಾಗಿರುವ ಸಂಗತಿ. ಅದರಲ್ಲೂ ಕನ್ನಡ ಮಾಧ್ಯಮಗಳಂತೂ ತಮಗೆ ಸರಿಸಾಟಿ ಯಾರು ಇಲ್ಲವೆಂಬಂತೆ ಮೋದಿಯ ಗುಣಗಾನ ಮಾಡುವುದಕ್ಕೆ ಪೈಪೋಟಿಗೆ ಬಿದ್ದಿವೆ. ಬೆಳಗ್ಗೆಯ ಸಮಯದಲ್ಲಿ ಸುಪ್ರಭಾತ, ಭಕ್ತಿದೇಗುಲಗಳಂತ ಮೌಢ್ಯತುಂಬುವ ಕಾರ್ಯಕ್ರಮ ಕೊಡುತ್ತಿದ್ದ ಮಾಧ್ಯಮಗಳು ಈಗ ಮೋದಿಯ ಮೌಢ್ಯವನ್ನು ತುಂಬಲು ಶುರುವಿಟ್ಟಿವೆ. ಇದರಲ್ಲಿ ಸುವರ್ಣ ಟಿವಿಯಂತೂ ಮೋದಿಯ ಹೆಸರನೇ ಜಪಿಸುವುದರಲ್ಲಿ ತಲ್ಲೀನವಾಗಿವೆ.
ಅಂದಹಾಗೆ ಮೊನ್ನೆ ಸುವರ್ಣ ನ್ಯೂಸ್‍ನಲ್ಲಿ ರಾತ್ರಿಯ ಸುವರ್ಣ ಫೋಕಸ್ ಕಾರ್ಯಕ್ರಮದ ಬಗ್ಗೆ ಬೆಳಗ್ಗೆ ಇಂದಲೇ ಜಾಹೀರಾತು ನೀಡಲು ಆರಂಭಿಸಿದ್ದರು. ಅಂತದ್ದೇನಿದೆ ಎಂದು ನೋಡಿದ್ರೆ ಅದರ ಟೈಟಲ್ ‘ಬಾಹುಬಲಿ ಮೋದಿ’ ಎಂದಿತ್ತು.
ಅಬ್ಬಾ… ನಮ್ ಪ್ರಧಾನಿ ಮೋದಿ ಏನಾದ್ರು ಬಾಹುಬಲಿ 3 ಸಿನಿಮಾ ಏನಾದ್ರು ಮಾಡಿದ್ದಾರ ಅಥವಾ ಬಂಡೆ ಮೇಲೆ ಮಲಗಿ ಯೋಗ ಮಾಡ್ತಿದ್ದೋರು ಆ ಬಂಡೆನೇನಾದ್ರು ಎತ್ತಿ ಹೆಗಲ ಮೇಲೆ ಇಟ್ಕೊಬಿಟ್ರಾ ಅಂತ ರಾತ್ರಿವರೆಗೆ ಕಾದು ನೋಡಿದ್ವಿ. ಅಲ್ಲಿ ನೋಡಿದ್ರ ಆ ವಿಷ್ಯಕ್ಕೂ ಮೋದಿಗೂ ಸಂಬಂಧನೇ ಇರಲಿಲ್ಲ. ಆದ್ರು ಮೋದಿ ಕಾರ್ಯಕ್ರಮದ ಹೀರೋ ಆಗಿದ್ದು ಸೋಜಿಗ.
ಆ ಕಾರ್ಯಕ್ರಮದ ವಿಷಯ ಬಾಹ್ಯಾಕಾಶ ಸಮರದ ಬಗ್ಗೆ ಇತ್ತು. ಒಂದು ಬಟನ್ ಒತ್ತಿದ್ರೆ ಇಡೀ ದೇಶವೇ ಅಲ್ಲೋಲ ಕಲ್ಲೋಲ ಆಗುತ್ತೆ. ಸೂಪರ್ ಸುಪ್ರಿಂ ರಾಷ್ಟ್ರಗಳಿಗೆ ಮೋದಿ ಹಾಕ್ತಿದ್ದಾರೆ ಚಾಲೆಂಜ್ ಎಂದೆಲ್ಲಾ ಬಿಲ್ಡಪ್ ಕೊಡಲಾಗುತ್ತಿತ್ತು. ನೋಡುಗರಲ್ಲಿ ಅದೆಂತಾ ಬಟನ್ ಇರಬಹುದು ಅದು, ಮೋದಿ ಏನಾದ್ರು ಕಂಡುಹಿಡಿದ್ರಾ ಎಂಬ ಕುತೂಹಲ ಕೆರಳಿಸಿತ್ತು.
ಮೊದಲನೆಯದಾಗಿ ಇಂದು ಎಲ್ಲಾ ದೇಶಗಳು ಯುದ್ಧ ಸಾಮಗ್ರಿಗಳಿಗೆ ಹೆಚ್ಚು ಹಣವನ್ನು ವ್ಯಯಿಸುತ್ತಿರುವುದು ಗೊತ್ತೇ ಇದೆ. ಅದರಲ್ಲಿ ಭಾರತವೂ ಒಂದು. ಭಾರತವು ಪ್ರಾನ್ಸ್, ರಷ್ಯಾದಂತಹ ದೇಶಗಳಿಂದ ಯುದ್ಧ ವಿಮಾನಗಳು, ತಂತ್ರಜ್ಞಾನಗಳನ್ನು ಪಡೆದುಕೊಳ್ಳುತ್ತಿದೆ. ಅಂತದ್ದೇ ವಿಮಾನ ಖರೀದಿಯ ಡೀಲ್‍ನಲ್ಲಿ ಮೋದಿ ಸಾಹೇಬರ ಪಾತ್ರ ಎಂತದ್ದು ಅಂತ ಇಡೀ ಜಗತ್ತೇ ನೋಡಿದೆ.
ಇತ್ತೀಚೆಗೆ ಯುದ್ದ ತಂತ್ರಜ್ಞಾನಗಳಲ್ಲೂ ಸಾಕಷ್ಟು ಬದಲಾವಣೆಗಳಾಗಿದ್ದು ಸಾವಿರಾರು ಕಿಲೋ ಮೀಟರ್ ದೂರದ ಸ್ಥಳಗಳಿಗೆ ತಾವಿರುವ ಜಾಗದಿಂದಲೇ ಬಾಂಬ್ ಉಡಾಯಿಸುವ ತಂತ್ರಜ್ಞಾನ ಬಂದು ವರ್ಷಗಳೇ ಕಳೆದಿವೆ. ಅಂತಹ ತಂತ್ರಜ್ಞಾನವನ್ನು ಭಾರತ ಕೂಡ ಪಡೆದುಕೊಂಡಿದೆ. ಇದರಲ್ಲಿ ಅಂತಹ ತಂತ್ರಜ್ಞಾನವನ್ನು ಕಂಡುಹಿಡಿದವರಿಗೆ ಅದರ ಕ್ರೆಡಿಟ್ ಕೊಡುವುದು ಸಾಮಾನ್ಯ. ಆದರೆ ಒಂದು ಬಟನ್ ಒತ್ತಿದ್ರೆ ಸಾಕು ಅಂತ ಹೇಳುವಾಗ ಅಲ್ಲಿ ಮೋದಿಯ ಪಾತ್ರವೇನೂ ಇಲ್ಲ. ಅದರ ಕ್ರೆಡಿಟ್ ಅಂತಹ ತಂತ್ರ ಸಂಶೋಧಿಸಿದವರಿಗೆ ಸೇರಿದ್ದು.
ಇನ್ನು ಸುಪ್ರಿಂ ರಾಷ್ಟ್ರಗಳಿಗೆ ಚಾಲೆಂಜ್ ಹಾಕ್ತಿದ್ದಾರೆ ಮೋದಿ ಎಂದು ಬೇರೆ ಹೇಳಲಾಗಿತ್ತು. ಇಂದಿಗೂ ನೆರೆ ರಾಷ್ಟ್ರಗಳಿಂದ ಯುದ್ದ ಅಸ್ತ್ರಗಳನ್ನ ಕೊಂಡುಕೊಳ್ಳುತ್ತಿರುವಾಗ, ಇಡೀ ವಿಶ್ವಕ್ಕೆ ಯುದ್ದಾಸ್ತ್ರಗಳನ್ನ ಸಪ್ಲೇ ಮಾಡುತ್ತಿರುವ ರಾಷ್ಟ್ರಗಳಲ್ಲಿ ಅಂತಹ ಅಸ್ತ್ರಗಳು ಅದೆಷ್ಟಿರಬಹುದು ಎಂಬ ಅರಿವೂ ಈ ಸುವರ್ಣ ಚಾನೆಲ್‍ನವರಿಗೆ ಇದ್ದಂತಿಲ್ಲ.
ಯುದ್ದ ವಿಚಾರ ನೋಡುವುದಾದರೆ ಅದರಲ್ಲಿ ಸೈನ್ಯದ ಪಾತ್ರದ ಮಹತ್ವದ್ದು, ಯುದ್ದ ಮಾಡಿ ಎಂದು ಹೇಳುವಷ್ಟು ಸುಲಭವಾಗಿ ಯುದ್ದ ಮಾಡಲು ಸಾಧ್ಯವಿಲ್ಲ. ಆದರೆ ಅಂತಹ ಯುದ್ದವನ್ನು ಗೆಲ್ಲುವ ಸೈನಿಕರಿಗೆ ಆ ಕಾರ್ಯಕ್ರಮದಲ್ಲಿ ಯಾವ ಕ್ರೆಡಿಟ್ಟೂ ಇರಲಿಲ್ಲ.
ಇಷ್ಟೆಲ್ಲಾ ಇದ್ದರೂ ಕೂಡ ಸುವರ್ಣ ಚಾನೆಲ್ ಮೋದಿಯೇ ಯುದ್ಧಭೂಮಿಯಲ್ಲಿ ನಿಂತು ಯುದ್ಧ ಮಾಡಿ ಗೆದ್ದಿರುವಂತೆ, ಮೋದಿಯೇ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಂತೆ ಮೋದಿಯ ಬಗ್ಗೆ ಬಿಲ್ಡಪ್ ಕೊಡುತ್ತಿರುವುದು ಸೈನ್ಯಕ್ಕೆ ಮಾಡುವ ಅವಮಾನವೂ ಹೌದು. ವಿಶ್ಲೇಷಣೆ, ಮೌಲ್ಯಮಾಪನ, ಪ್ರತಿಕಾ ನೀತಿಗಳನ್ನೇ ಮರೆತಿರುವ ಇಂತಹ ನ್ಯೂಸ್ ಚಾನೆಲ್‍ಗಳು ಇನ್ನೆಂಥಾ ಸುದ್ದಿಯನ್ನು ಬಿತ್ತರಿಸಲು ಸಾಧ್ಯ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Super news from Nanu gouri it is an excellent news paper and it should cover all district of karnataka because other papers baise papers and TV channels…..

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...