Homeಮುಖಪುಟಯುದ್ಧದಾಹಿ ಮೀಡಿಯಾಗಳನ್ನು ಸುಳ್ಳುಗಾರರನ್ನಾಗಿಸಿದ ಮೋದಿ ಚುನಾವಣಾ ಪ್ರಚಾರದಲ್ಲಿ!

ಯುದ್ಧದಾಹಿ ಮೀಡಿಯಾಗಳನ್ನು ಸುಳ್ಳುಗಾರರನ್ನಾಗಿಸಿದ ಮೋದಿ ಚುನಾವಣಾ ಪ್ರಚಾರದಲ್ಲಿ!

- Advertisement -
- Advertisement -

`ಯುದ್ಧ ಫಿಕ್ಸ್’, `ಪಾಪಿ ಪಾಕ್.ಗೆ ಯುದ್ಧವೊಂದೇ ಉತ್ತರ’ `ಯುದ್ಧ ಸನ್ನದ್ಧ’…. ಇವು ಪುಲ್ವಾಮಾ ಭಯೋತ್ಪಾದಕ ದಾಳಿ ನಂತರ ದಿನದ ಇಪ್ಪತ್ನಾಲ್ಕು ಗಂಟೆಯೂ ಮೀಡಿಯಾಗಳ ಪರದೆಗಳನ್ನು ಆವರಿಸುತ್ತಿರುವ ರಣೋತ್ಸಾಹದ ಟೈಟಲ್ಲುಗಳು. ಅದರಲ್ಲೂ ಬಾಲಕೋಟ್ ಮೇಲೆ ಭಾರತೀಯ ವಾಯುಸೇನೆ ದಾಳಿ ನಡೆಸಿದ ನಂತರವಂತೂ ಟೀವಿ ಆಂಕರುಗಳು ಕುರ್ಚಿ ಮೇಲೆ ಕೂರಲಾಗದಷ್ಟು ತುದಿಗಾಲಲ್ಲಿ ನಿಂತು ಪಾಕಿಸ್ತಾನದ ಮೇಲೆ ನಿರಂತರ ಯುದ್ಧ ನಡೆಸುತ್ತಿದ್ದಾರೆ! ಅವರ ಪ್ರಕಾರ ದೇಶಕ್ಕೆ ದೇಶವೇ ಯುದ್ಧಕ್ಕೆ ಸಜ್ಜಾಗಿ ಹೈಟೆನ್ಷನ್.ನಲ್ಲಿ ಕಾಯುತ್ತಿದೆ! ಅಂದರೆ ಈ ದೇಶದ ಪ್ರಧಾನಿಗೂ ಅದೇ ಟೆನ್ಷನ್ ಇರಬೇಕಲ್ಲವೇ?

ಆದರೆ, ಮೀಡಿಯಾದವರು ಯುದ್ಧ ಟೆನ್ಷನ್ನಿಂದ ಜನರನ್ನು ಬೆದರಿಸುತ್ತಿರುವ ಸಮಯದಲ್ಲೇ ಪ್ರಧಾನಿ ಮೋದಿಯವರು ಅಂತಹ ಯಾವ ಟೆನ್ಷನ್ನೂ ಇಲ್ಲದೆ ಮುಂಬರುವ ಎಲೆಕ್ಷನ್ನಿನ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ, ಅದೂ ತಮ್ಮ ಮೋದಿ ಆಪ್ ಮೂಲಕ! ಈ ವಿದ್ಯಮಾನ ಎರಡು ಸಾಧ್ಯತೆಗಳನ್ನ ನಮ್ಮ ಮುಂದೆ ತೆರದಿಡುತ್ತೆ. ಒಂದೋ, ಪ್ರಧಾನಿ ಮೋದಿಯವರಿಗೆ ದೇಶದ ಭದ್ರತೆ, ಸುರಕ್ಷತೆಗಿಂತ ಹೆಚ್ಚಾಗಿ ರಾಜಕೀಯವೇ ಮುಖ್ಯವಾಗಿರಬೇಕು. ಅಥವಾ ಅಂಥಾ ಪ್ರಧಾನಿ ಹುದ್ದೆಯಲ್ಲಿ ಕೂತಿರುವ ವ್ಯಕ್ತಿಯೇ ನಿರುಮ್ಮಳರಾಗಿದ್ದಾರೆಂದರೆ `ಯುದ್ಧ ಸನ್ನದ್ದ ಟೆನ್ಷನ್’ ಇದೆಯೆಂದು ಬೊಬ್ಬಿರಿಯುತ್ತಿರುವ ಈ ಮೀಡಿಯಾಗಳೇ ಬೊಗಳೆ ಬಿಡುತ್ತಿರಬೇಕು! ಹಾಗಾದರೆ, ಇವರೆಲ್ಲ ಕಡ್ಡಿಯನ್ನೇ ಗುಡ್ಡ ಮಾಡಿ ತೋರಿಸುತ್ತಿದ್ದಾರೆಯೇ?

ಸೈನಿಕರ ಬಲಿದಾನವನ್ನು ರಾಜಕೀಯಗೊಳಿಸಬಾರದು ಎನ್ನುವುದು ಯಾವುದೇ ದೇಶದಲ್ಲಿ ಪಾಲಿಸಬೇಕಾದ ಕನಿಷ್ಠ ನೈತಿಕ ನಿಯಮ. ಪುಲ್ವಾನಾ ದಾಳಿಯ ನಂತರ ಹಲವಾರು ರಾಜಕೀಯ ಪಕ್ಷಗಳವರು ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಸೈನಿಕರ ಹೆಸರಿನಲ್ಲಿ ಮತ್ತವರ ಸಾವಿನಲ್ಲಿ ಅತಿ ಹೆಚ್ಚು ರಾಜಕೀಯ ಮಾಡಿದವರು ಬಿಜೆಪಿಯವರೇ ಎನ್ನುವುದರಲ್ಲಿ ಯಾರಿಗೂ ಅನುಮಾನವಿಲ್ಲ. 2014ಕ್ಕೂ ಮೊದಲೂ ಸೈನಿಕರ ಬಲಿದಾನದ ಸಂದರ್ಭವನ್ನು ರಾಜಕೀಯಕ್ಕೆ ಬಳಸಿಕೊಂಡ ಮೋದಿಯವರ ಸಾಕಷ್ಟು ಭಾಷಣದ ವಿಡಿಯೋಗಳು ಇಂದಿಗೂ ಲಭ್ಯವಿದೆ. ಇನ್ನು ಪುಲ್ವಾಮ ದಾಳಿಯ ನಂತರದ ಬಿಜೆಪಿಯ ಪ್ರಚಾರ ನಾಚಿಕೆಯಿಲ್ಲದೆ ನಡೆಯುತ್ತಿದೆ.

ಇಂದು (ಫೆಬ್ರವರಿ 28) ಮೋದಿಯವರು ತಮ್ಮ ಮೋದಿ ಆಪ್ ಮೂಲಕ ದೇಶದ ಕೋಟ್ಯಾಂತರ ಜನರನ್ನು (ಸುಮಾರು 15 ಸಾವಿರ ಬೇರೆ ಬೇರೆ ಸ್ಥಳಗಳಲ್ಲಿ ಎಂದು ಬಿಜೆಪಿ ಪ್ರಚಾರದ ವೇಳೆ ಹೇಳಿಕೊಂಡಿದೆ) ಮುಂಬರುವ 2019ರ ಲೋಕಸಭಾ ಚುನಾವಣೆಗೆ ಆಡಳಿತಾರೂಢ ಪಕ್ಷದ ಪ್ರಚಾರಕ್ಕಾಗಿ ಜಗತ್ತಿನ ಅತ್ಯಂತ ದೊಡ್ಡ ವಿಡಿಯೋ ಕಾನ್ಫರೆನ್ಸ್ ಅನ್ನು ಬಿಜೆಪಿ ಪಕ್ಷದ ಕಾರ್ಯಕರ್ತರ ಜೊತೆ ನಡೆಸಿದ್ದಾರೆ. ಭಾರತದ ಗಡಿಯಲ್ಲಿ ಆತಂಕದ ವಾತಾವರಣವಿದ್ದು ಹಾಗೂ ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಭಾರತದ ಏರ್ ವಿಂಗ್ ಕಮಾಂಡರ್ ಅಭಿನಂದನ್ ಇನ್ನೂ ಬಿಡುಗಡೆಯಾಗಿ ಭಾರತಕ್ಕೆ ವಾಪಾಸ್ ಆಗದೇ ಇರುವ ಪರಿಸ್ಥಿತಿಯಲ್ಲಿ ತಮ್ಮ ಪಕ್ಷದ ಪರ ಪ್ರಚಾರ ಮಾಡುವ ಅವಶ್ಯಕತೆಯಿದೆಯೇ ಎಂದು ಟಿವಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜನಾಕ್ರೋಶ ವ್ಯಕ್ತವಾಗಿದೆ.

ಮೋದಿಗೆ ಭಾರತ ಮೊದಲಾ, ಇಲ್ಲವೇ ತನ್ನ ಪಕ್ಷದ ಸಂಕುಚಿತ ಹಿತಾಸಕ್ತಿಯೇ ಮೊದಲಾ? ಇದೊಂದು ಲಜ್ಜೆಗೆಟ್ಟ ಕೆಲಸ, ಸೂಕ್ಷ್ಮತೆ ಇಲ್ಲದವರು ಮಾಡುವ ಕೆಲಸ ಇನ್ನಿತ್ಯಾದಿ ಪದಗಳಿಂದ ವೆರಿಫೈಡ್ ಟ್ವಿಟ್ಟರ್ ಖಾತೆಗಳನ್ನೂ ಒಳಗೊಂಡಂತೆ ಸಹಸ್ರಾರು ಜನ ಟೀಕೆ ಮಾಡುತ್ತಿದ್ದಾರೆ. ಅಲ್ಲದೆ ಇದೇ ಫೆಬ್ರವರಿ 27ರಂದು ಖೇಲೋ ಇಂಡಿಯಾ (ಆಟವಾಡಿ ಭಾರತ) ಎನ್ನುವ ಮೊಬೈಲ್ ಆಪ್‌ಅನ್ನು ಉದ್ಘಾಟನೆ ಮಾಡಿದ್ದು, ಅದರಿಂದ ಸಹಾ ಮೋದಿ ಜನರ ಟೀಕೆಗೆ ಗುರಿಯಾಗಿದ್ದಾರೆ. ಈವರೆಗೂ ಒಂದೂ ಪತ್ರಿಕಾಗೋಷ್ಠಿ ನಡೆಸದ ಮೋದಿ ಅವರಿಗೆ ತಮ್ಮದೇ ಪಕ್ಷದ ಕಾರ್ಯಕರ್ತರೊಂದಿಗೆ ಜಗತ್ತಿನ ಅತ್ಯಂತ ಉದ್ದನೆಯ ವಿಡಿಯೋ ಸಂಭಾಷಣೆ ನಡೆಸಲು ಸಮಯ ಹೇಗೆ ಸಿಗುತ್ತದೆ ಎನ್ನುವುದು ಜನರ ಪ್ರಶ್ನೆಯಾಗಿದೆ. ಇದೆಲ್ಲದರ ಜೊತೆಜೊತೆಗೆ ಪುಲ್ವಾಮ ದಾಳಿ ನಂತರದಲ್ಲಿಯೂ ಹಲವು ಚುನಾವಣಾ ಪ್ರಚಾರದಲ್ಲಿ ಪಕ್ಷದ ಪರ ಮತ ಯಾಚನೆ ಮಾಡುವ ಕೆಲಸಗಳಲ್ಲಿ ಮೋದಿ ತೊಡಗಿಸಿಕೊಂಡಿದ್ದಾರೆ. ಇಂಡೋ-ಪಾಕ್ ವಿವಾದದ ಕುರಿತು ಮುಂದಿನ ಹೆಜ್ಜೆಗಳನ್ನು ಚರ್ಚಿಸಲು ಕರೆದಿದ್ದ ಸರ್ವಪಕ್ಷಗಳ ಎರಡೂ ಸಭೆಗೂ ಮೋದಿ ಗೈರು ಹಾಜರಾಗಿದ್ದು ಗಮನಾರ್ಹ! ಮೊದಲನೆಯದ್ದು ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದರೆ, ಮತ್ತೊಂದು ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ನಡೆದಿದೆ. ದೇಶದ ಭದ್ರತೆಗೆ ಎದುರಾಗಿರುವ ಆತಂಕದ ಬಗ್ಗೆ ಚರ್ಚಿಸಲು ಕರೆಯಲಾದ ಸಭೆಯಲ್ಲಿ ಭಾಗವಹಿಸಲು ಸಮಯವಿಲ್ಲದ ಮೋದಿಯವರಿಗೆ ಚುನಾವಣಾ ಪ್ರಚಾರದ ವೀಡಿಯೊ ಕಾನ್ಫರೆನ್ಸ್ ಮಾಡಲು, ಆಪ್ ಬಿಡುಗಡೆ ಮಾಡಲು ಹೇಗೆ ಸಮಯ ಸಿಕ್ಕಿತು? ಇದು ಜನ ಕೇಳುತ್ತಿರುವ ಪ್ರಶ್ನೆ.

ಇನ್ನು ದಾಳಿಯಾದ ದಿನದಿಂದ ಇವತ್ತಿನವರೆಗೂ ಅಮಿತ್ ಶಾ ಸೈನಿಕರ ದಾಳಿಯನ್ನ ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುತ್ತಲೇ ಇದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ದಾಳಿಯಿಂದ ನಮಗೆ ಕರ್ನಾಟಕದಲ್ಲಿ 22 ಸೀಟು ಗೆಲ್ಲುವುದಕ್ಕೆ ಅನೂಕಲವಾಗಲಿದೆ ಎಂದು ಹೇಳಿ ರಾಷ್ಟ್ರ ಮಟ್ಟದಲ್ಲಿ ಟೀಕೆಗೆ ಒಳಗಾಗಿದ್ದಾರೆ. ಒಟ್ಟಾರೆ ಸೈನಿಕರ ಬಲಿದಾನ ದೇಶದ ರಕ್ಷಣೆಯ ವಿಚಾರವಾಗಿ ಕೇವಲ ಖಾಲಿ ಮಾತುಗಳನ್ನು ಇವರೆಲ್ಲಾ ಆಡುತ್ತಿದ್ದಾರೆಯೇ ಹೊರತು ದೇಶಕ್ಕಿಂತ ಚುನಾವಣೆಯಲ್ಲಿ ಅಧಿಕಾರ ಹಿಡಿಯುವುದೇ ಮೊದಲ ಆದ್ಯತೆ ನೀಡುತ್ತಿರುವುದು ವಾಸ್ತವ ಎಂಬುದು ಕೇವಲ ಆರೋಪವಲ್ಲ.

ಈ ಆಟದಲ್ಲಿ ಪ್ರಧಾನಿಯವರನ್ನೂ ಒಳಗೊಂಡಂತೆ ಸಮಸ್ತ ಬಿಜೆಪಿ ಮೀಡಿಯಾಗಳನ್ನು ಸುಳ್ಳುಗಾರರನ್ನಾಗಿ ಮಾಡುತ್ತಿರೋದು ವಿಪರ್ಯಾಸ. ದುರಂತವೆಂದರೆ ಇದು ಹೀಗೇ ಮುಂದುವರೆದರೆ ಜನರ ನಡುವೆ ತಮ್ಮ ಮೂಲಕ ಇಡಿಯಾಗಿ ಪತ್ರಿಕೋದ್ಯಮದ ವಿಶ್ವಾಸಾರ್ಹತೆ ಎಷ್ಟು ಪಾತಾಳಕ್ಕೆ ಕುಸಿಯಲಿದೆ ಎಂಬ ಅಂದಾಜೂ ಇಲ್ಲದ ಮೀಡಿಯಾಗಳು ತಮ್ಮ ಕಾಲ ಮೇಲೆ ತಾವೇ ಕಲ್ಲು ಎತ್ತಿ ಹಾಕಿಕೊಳ್ಳುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...