Homeಅಂತರಾಷ್ಟ್ರೀಯರಾಜಕಾರಣದಲ್ಲಿ ನಲುಗಿದ ನಾವು: ಸ್ಟಾನ್ ಫೋರ್ಡ್ ಪ್ರಿಸನ್ ಎಕ್ಸ್‍ಪೆರಿಮೆಂಟ್

ರಾಜಕಾರಣದಲ್ಲಿ ನಲುಗಿದ ನಾವು: ಸ್ಟಾನ್ ಫೋರ್ಡ್ ಪ್ರಿಸನ್ ಎಕ್ಸ್‍ಪೆರಿಮೆಂಟ್

ಈ ಪ್ರಯೋಗದ ಬಗ್ಗೆ ಹಲವಾರು ಟೀಕೆ ವಿಮರ್ಶೆಗಳೆದುರು ಸಹ ಅಧಿಕಾರ ಮತ್ತು ‘ಪ್ರಭುತ್ವ’ವನ್ನು ಅರ್ಥ ಮಾಡಿಕೊಳ್ಳಲು ಇದು ಸ್ಪಷ್ಟವಾದ ನಿದರ್ಶನವಾಗಿದೆ.

- Advertisement -
- Advertisement -

| ಆರ್.ಜಗನ್ನಾಥ್ |

ಮನಶಾಸ್ತ್ರದ ಬಗ್ಗೆ ಪಾಠ ಮಾಡುವ ಪ್ರೊಫೆಸರ್ ಫಿಲಿಪ್ ಜಿಂಬರ್‍ಡೊ ಒಂದು ಅಸಾಧರಿವಾದ ಪ್ರಯೋಗವನ್ನು ದಿನಾಂಕ 1971 ಆಗಸ್ಟ್ 14 ರಿಂದ 21ರ ವರೆಗೆ ನಡೆಸಿದ್ದು ಇದಕ್ಕೆ (Stanford Prison Experiment) ಸ್ಟಾನ್‍ಫೋರ್ಡ್ ಪ್ರಿಸನ್ ಎಕ್ಸ್‍ಪೆರಿಮೆಂಟ್(ಎಸ್‍ಪಿಇ) ಎಂದು ಕರೆದಿರುತ್ತಾರೆ.

ಅಮೇರಿಕಾದ ನೌಕಾಪಡೆಯ ಸಂಶೋಧನೆಗಾಗಿ ನಡೆದ ಪ್ರಯೋಗದಲ್ಲಿ ಪ್ರೊ.ಫಿಲಿಪ್ ಜಿಂಬರ್‍ಡೊ ಪ್ರಯೋಗಕ್ಕಾಗಿ ಸೇರಿಸಿಕೊಂಡದ್ದು ತನ್ನ ಇಪ್ಪತ್ತನಾಲ್ಕು ಜನ ವಿದ್ಯಾರ್ಥಿಗಳನ್ನು. ಈ ಇಪ್ಪತ್ತನಾಲ್ಕು ಜನರನ್ನು ಆಯ್ಕೆ ಮಾಡಿಕೊಳ್ಳುವಾಗ ಆರೋಗ್ಯ ಸಮಸ್ಯೆ ಇಲ್ಲದ ಕ್ರಿಮಿನಲ್ ಹಿನ್ನೆಲೆಯಿಲ್ಲದ, ಮಾನಸಿಕ ಸಮಸ್ಯೆ ಇಲ್ಲದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿರುತ್ತದೆ.

ಇಪ್ಪತ್ನಾಲ್ಕು ಜನರನ್ನು ತಲಾ ಎರಡು ತಂಡಗಳಾಗಿ ವಿಭಜಿಸಿ 12 ಜನರ ಒಂದು ತಂಡವನ್ನು ಸೆರೆವಾಸಿಗಳಾಗಿ, ಮತ್ತೊಂದು 12 ಜನರ ತಂಡವನ್ನು ಜೈಲರ್‍ಗಳಾಗಿ ವಿಭಾಗಿಸಲಾಗುತ್ತದೆ. ಯೂನಿವರ್ಸಿಟಿಯ ಸೆಲ್ಲರ್‍ನ್ನು ನಿಜವಾದ ಜೈಲಿನ ರೀತಿಯಲ್ಲಿ ಪರಿವರ್ತಿಸಿ ಸದರಿ ಪ್ರಯೋಗಕ್ಕೆ ಬಳಸಿಕೊಳ್ಳಲಾಗುತ್ತದೆ.

ಹನ್ನೆರಡು ಜನರ ಸೆರೆವಾಸಿಗಳಿಗೆ ಹೆಸರಿನ ಬದಲಾಗಿ ನಂಬರ್‍ಗಳನ್ನು, ಸೆರೆವಾಸಿಗಳ ಯೂನಿಫಾರಂನ್ನು ನೀಡಲಾಗಿರುತ್ತದೆ. ಅದೇ ರೀತಿ ಜೈಲರ್‍ಗಳಿಗೂ ಸಹ ನಿಜವಾದ ಜೈಲರ್‍ಗಳಿಗೆ ನೀಡಲಾಗುವ ಸಮವಸ್ತ್ರ ಮತ್ತು ಪರಿಕರಗಳನ್ನು ನೀಡಲಾಗುತ್ತದೆ.

ಜೊತೆಯಲ್ಲಿ ಊಟ ಮಾಡುತ್ತಿದ್ದ, ಜೊತೆಯಲ್ಲಿ ಪಾಠ ಕೇಳುತ್ತಿದ್ದ, ಜೊತೆಯಲ್ಲಿ ಸಹ ಜೀವನ ನಡೆಸುತ್ತಿದ್ದ ವ್ಯಕ್ತಿಗಳಲ್ಲಿನ ಒಂದು ತಂಡಕ್ಕೆ ‘ಅಧಿಕಾರ’ ಸಿಕ್ಕಕೂಡಲೇ ಯಾವ ರೀತಿಯಲ್ಲಿ ವರ್ತಿಸತೊಡಗುತ್ತಾರೆ ಎಂಬುದೇ ಪ್ರಯೋಗದ ಉದ್ದೇಶ.

ಸ್ವತಃ ಪ್ರೊಫೆಸರ್ ಫಿಲಿಪ್ ಜಿಂಬರ್‍ಡೊ ಜೈಲಿನ ಸೂಪರಿಂಟೆಂಡೆಟ್ ಆಗಿ ಜೈಲರ್‍ಗಳನ್ನು ಮುನ್ನಡೆಸುತ್ತಿರುತ್ತಾನೆ. 15 ದಿನಗಳ ಕಾಲದ ಈ ಪ್ರಯೋಗ ಜೈಲರ್‍ಗಳ ಮಿತಿಮೀರಿದ ಅಧಿಕಾರದ ದುರ್ಬಳಕೆಯ ಕಾರಣ 6ನೇ ದಿವಸಕ್ಕೇ ಕೊನೆಯಾಗಬೇಕಾಗುತ್ತದೆ.

ಈ ಪ್ರಯೋಗದ ಬಗ್ಗೆ ಹಲವಾರು ಟೀಕೆ ವಿಮರ್ಶೆಗಳೆದುರು ಸಹ ಅಧಿಕಾರ ಮತ್ತು ‘ಪ್ರಭುತ್ವ’ವನ್ನು ಅರ್ಥ ಮಾಡಿಕೊಳ್ಳಲು ಇದು ಸ್ಪಷ್ಟವಾದ ನಿದರ್ಶನವಾಗಿದೆ.

ಇವತ್ತು ದೇಶದಲ್ಲಿ ಒಟ್ಟಿಗೆ ಬೆಳೆದ, ಒಟ್ಟಿಗೆ ಆಟವಾಡಿದ, ಒಟ್ಟಿಗೆ ಬದುಕು ಕಟ್ಟಿಕೊಂಡ ಸ್ನೇಹಿತರ ನಡುವೆ ಜೈಲರ್‍ಗಳು ಮತ್ತು ಸೆರೆವಾಸಿಗಳು ಎಂಬ ಸ್ಪಷ್ಟವಾದ ವಿಭಾಗ ಉಂಟಾಗಿದೆ.

ಈ ಸೊಕಾಲ್ಡ್ ಜೈಲರ್‍ಗಳು ತಮ್ಮನ್ನು ತಾವೇ ಅಪರಿಮಿತ ಅಧಿಕಾರವುಳ್ಳ ದೇಶಭಕ್ತರೆಂದು, ಗೋರಕ್ಷಕರೆಂದೂ, ಈ ದೇಶದ ನಿಜವಾದ ರಕ್ಷಕರೆಂದೂ ಬಿಂಬಿಸಿಕೊಂಡಿದ್ದಾರೆ. ವಾಟ್ಸಾಪ್, ಫೇಸ್‍ಬುಕ್, ಸಮಾಜ ಎಲ್ಲಾ ಕಡೆ ತನ್ನ ರಾಜಕೀಯ ವಿರೋಧಿಗಳನ್ನು ತನ್ನ ವಿಚಾರಧಾರೆಯ ವಿರೋಧಿಗಳನ್ನು ಸೆರೆಯಾಳುಗಳ ರೀತಿಯಲ್ಲಿ ಭಾವಿಸಿ ಬಗ್ಗುಬಡಿಯಲೆತ್ನಿಸುತ್ತಿದ್ದಾರೆ. ಅವರುಗಳ ವಿರುದ್ಧ ಸುಳ್ಳುಗಳನ್ನು ಸೃಷ್ಟಿಸಿ ದೇಶವಿರೋಧಿಗಳು, ತುಕಡೆ ತುಕಡೆ ಗ್ಯಾಂಗ್, ಕಾಂಗಿ, ಕಮ್ಮಿ, ಹುಸಿ ಜಾತ್ಯಾತೀತರೆಂದು ಕರೆದು ವಿವಿಧ ರೀತಿಯ ಮಾನಸಿಕ ಹಿಂಸೆ ಮತ್ತು ಒತ್ತಡ ಹೇರುವ ಕೆಲಸದಲ್ಲಿ ನಿರತವಾಗಿದೆ.

ಸ್ಟಾನ್‍ಫೋರ್ಡ್ ಪ್ರಿಸನ್ ಎಕ್ಸ್‍ಪೆರಿಮೆಂಟ್ (ಎಸ್.ಪಿ.ಎ) ಹದಿನೈದು ದಿನ ನಡೆಯಬೇಕಾದ ಪ್ರಯೋಗ ‘ಅಧಿಕಾರ’ದ ಅಪರಿಮಿತ ದುರ್ಬಳಕೆಯ ಕಾರಣ ಆರು ದಿವಸಕ್ಕೆ ಮುಕ್ತಾಯವಾಯಿತು. ಅದೇ ರೀತಿಯಲ್ಲಿ ಇಂದು ದೇಶದಲ್ಲಿ ನಡೆಯುತ್ತಿರುವ ಪ್ರಯೋಗ ಸಹ ಅದಷ್ಟು ಬೇಗ ಮುಕ್ತಾಯಗೊಳ್ಳಲಿ ಎಂಬುದಷ್ಟೇ ಸದ್ಯದ ಆಶಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...