Homeಅಂಕಣಗಳುನಿಮ್ಮ ಖಾತೆಗಳನ್ನ ಬುಟ್ಟುಕೊಟ್ರೆ ಸರಕಾರ ಉಳಿತದಂತೆ ಸಾ...

ನಿಮ್ಮ ಖಾತೆಗಳನ್ನ ಬುಟ್ಟುಕೊಟ್ರೆ ಸರಕಾರ ಉಳಿತದಂತೆ ಸಾ…

- Advertisement -
- Advertisement -

| ಯಾಹೂ |

ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವುಂಟಾದರೂ ಕೊಲ್ಲೂರು ಪ್ರಾಂತ್ಯದ ಮೂಕಾಂಬಿಕೆ ಸನ್ನಿಧಿಯಲ್ಲಿ ವಿಹರಿಸುತ್ತಿರುವ ರೇವಣ್ಣನವರನ್ನು ಮಾತನಾಡಿಸಿ, ಮನಸ್ಸನ್ನು ಹಗುರ ಮಾಡಿಕೊಳ್ಳಬೇಕೆನಿಸಿತಲ್ಲಾ, ಆ ಕೂಡಲೇ ಪೋನ್ ಮಾಡಲಾಗಿ ರಿಂಗಾಯ್ತು.

ರಿಂಗ್‍ಟೋನ್: “ಕೊಲ್ಲೂರು ಸಿರಿದೇವಿ ಮೂಕಾಂಬಿಕೇ, ನಿನ್ನ ದರುಶನಕೆ ಬಂದಿಹೆನು ಕಾಪಾಡಮ್ಮ.”
“ಹಲೋ ಯಾರ್ರಿ.”
“ನಾನು ಸರ್ ಯಾಹೂ.”
“ಏನ್ರಿ”
“ಎಲ್ಲಿದ್ದಿರಿ ಸಾರ್.”
“ನಾನೆಲ್ಲಿದ್ರೆ ನಿಮಗೇನ್ರಿ.”
“ಅಲ್ಲ ಸಾರ್. ರೇವಣ್ಣ ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಡ್ತಾ ಅವುರೆ ಅಂದ್ರು, ಅದಕೆ ಫೋನ್ ಮಾಡಿದೆ ಸಾರ್.”
“ಕೊಲ್ಲೂರು ಮೂಕಾಂಬಿಕೆ, ಆನೆಗುಡ್ಡದ ಆಂಜನೇಯ, ಕಟೀಲು, ಧರ್ಮಸ್ಥಳ, ಇಲ್ಯಲ್ಲ ಹೋಗಿ ಬಂದೆ ಕಂಡ್ರಿ.”
“ದೇವರು ಸರಕಾರ ಉಳುಸ್ತವ ಸಾರ್.”
“ಉಳುಸ್ತವೆ ಕಂಡ್ರಿ.”
“ಹ್ಯಂಗೆ ಸಾರ್.”
“ಯಾರ್ಯಾರಿಗೆ ಮನಿಯಾಳು ಬುದ್ದಿ ಇರತದೊ ಅವುರಿಗ್ಯಲ್ಲ ವಳ್ಳೆ ಬುದ್ದಿ ಕೊಡು ಅಂತ ನಾವು ದೇವರ ಕೇಳಿಕೊಂಡು ಪೂಜೆ ಮಾಡುಸ್ತಿವಿ, ಹೋಮ ಮಾಡುಸ್ತಿವಿ.”
“ಆಗ ದೇವುರು ಅವುರಿಗ್ಯಲ್ಲ ವಳ್ಳೆ ಬುದ್ದಿ ಕೊಡ್ತದ ಸಾರ್.”
“ಕೊಡ್ತದೊ ಬುಡ್ತದೊ ನಾವು ಮಾಡೊ ಕ್ಯಲಸ ಮಾಡಬೇಕಲ್ವೇನ್ರಿ”
“ನಿಜ ಸಾರ್.”
“ಅದ್ಕೆ ನಾನು ಮದ್ಲು ಹೋಗಿ ಕೇಳಿಕಂಡಿದ್ದು ಮೈಸೂರು ಚಾಮುಂಡೇಶ್ವರಿಯ. ಅವುಳು ಮೈಸೂರು ಮಾರಾಜನ್ನ ಕಾಪಾಡಿದಂಗೆ ನಮ್ಮ ಕುಮಾರನ ಸರಕಾರನೂ ಉಳುಸ್ತಾಳೆ.”
“ಹೆಣ್ಣು ದೇವರಿಗೆ ಇಷ್ಟು ಗೌರವ ಕೊಡೋ ನೀವು ಆ ಸುಮಲತನ್ನ ಬೈದರಲ್ಲ ಸಾರ್.”
“ನಾನೆಲ್ಲಿ ಬೋದೆ. ವಟ್ಟಿಗೇನು ತಿಂತೀರಿ ನೀವು ನಿಮ್ಮಂಥೊರಿಂದ್ಲೆ ಹಿಂಗಾಗಿರದು.”
“ಸಾರಿ ಸರ್ ಬೈಲಿಲ್ಲ ಟೀಕೆ ಮಾಡಿದ್ರಿ.”
“ಟೀಕೆ ಎಲ್ಲಿ ಮಾಡಿದೇರೀ? ಪಾಪ ಗಂಡ ಸತ್ತು ತಿಂಗಳಾಗಿಲ್ಲ ಯಲಕ್ಷನ್ನಿಗೆ ಬಂದವುಳೆ ಅಂದೆ ಇದು ತೆಪ್ಪ.”
“ತೆಪ್ಪಲ್ಲ ಸಾರ್, ಅಕಸ್ಮಾತ್ ನೀವು ಅಂಬರೀಶನಂಗಾಗಿ…..”
“ಥೂ ಬುಡ್ತು ಅನ್ರಿ.”
“ಸಾರಿ ಸ, ನಿಮ್ಮ ನಂತ್ರ ಭವಾನಕ್ಕನಿಗೆ ಟಿಕೆಟ್ ಕೊಟ್ರೆ ನೀವು ಅಂಗನ್ನಕ್ಕಾಯ್ತದ.”
“ಭವಾನಿ ನಾನಿಲ್ದಾಗ ರಾಜಕಾರಣ ಮಾಡದಕ್ಕಿಂತ ಈಗ್ಲೆ ಅವುಳು ರಾಜಕಾರಣಿ ಕಂಡ್ರಿ, ಅವುಳ ಕ್ಯಲಸ ನಿಮಗೇನು ಗೊತ್ತು.”
“ಗೊತ್ತಾಗಲಿಲ್ಲ ಸಾರ್.”
“ಹಾಸನ ಜಿಲ್ಲೆ ಇಸಗೂಲುಡುಗ್ರ್ಯಲ್ಲ ಪಾಸಾಗ್ಯವೆ ಅಂಗೆ ಮಾಡಿದ್ಲು.”
“ರಿಯಲ್ಲಿ ಗ್ರೇಟ್ ಸಾ, ಅಂಗಿದ್ರೆ ಅವುರ ಎಮ್ಮೆಲ್ಸಿ ಮಾಡಿ ಶಿಕ್ಷಣ ಸಚಿವರನ್ನಾಗಿ ಮಾಡಿದ್ರೆ, ಇಡೀ ಕರ್ನಾಟಕದ ಸ್ಕೂಲು ಮಕ್ಕಳ್ಯಲ್ಲ ಪಾಸಾಯ್ತವಲ್ಲವ ಸಾ.”
“ಆಯ್ತವೆ ಸರಿ, ಆದ್ರೆ ಅವುಳ ಎಮ್ಮೆಲ್ಸಿ ಮಾಡಕ್ಕೆ ಬುಡ್ತಾರೇನ್ರಿ. ಈಗ್ಲೆ, ದ್ಯಾವೇಗೌಡ್ರು ಮಕ್ಕಳದೆ ಸರಕಾರ ಅಂತ ವಟ್ಟೆಕಿಚ್ಚು ಮಾಡೋರು ಆಗ ಬುಡ್ತಾರಾ.”
“ವಟ್ಟೆಕಿಚ್ಚು, ರಾಜಕಾರಣಿಗಳ ಹುಟ್ಟುಗುಣ ಸಾ. ವಟ್ಟೆಕಿಚ್ಚು, ಕರುಬುತನ, ಕಿಜ್ಜರತನ, ಸಣ್ಣತನ ಇವ್ಯಲ್ಲ ನಿಮ್ಮಂತವರ ಹುಟ್ಟುಗುಣ.”
“ನಮ್ಮಂತವುರು ಅಂತ ಯಾಕಂತೀರಿ ಹಲ್ಲಿಡುದು ಮಾತಾಡಿ.”
“ನೀವು ದೇವೇಗೌಡ್ರ ಮಕ್ಕಳಲ್ಲವ ಸಾರ್.”
“ಅದ್ಕೆ ಅಂಗಂದುಬುಡದಾ. ನಮ್ಮ ತಂದೆ ಈ ವಯಸ್ಸಿನಲ್ಲಿ ಎಷ್ಟು ಕಷ್ಟಪಡ್ತರೆ ಅಂತ ನಿಮಗೇನ್ರಿ ಗೊತ್ತು”
“ನಿಜ ಸಾ, ಗೌಡ್ರು ಅನ್ನ ನಿದ್ದೆ ಬುಟ್ಟು ಬರೀ ಮುದ್ದೆ ತಿನ್ನಕಂಡು ನೋವಿನ ಕಣ್ಣಲ್ಲಿ ಕುಂತಿರದ ನೋಡಿದ್ರೆ ವಟ್ಟೆ ಉರಿತದೆ. ಈ ಹಾಳು ಎಮ್ಮೆಲ್ಲೆಗಳು ಅದ ತಿಳಕಳ್ಳಿಲ್ಲ.”
“ತಿಳಕಳಕ್ಕೆ ಯಂಗಾಯ್ತದ್ರಿ, ಆ ಬಿಜೆಪಿಗಳು ಕೋಟಿ ಕೋಟಿ ಕೊಡ್ತೀವಿ ಅಂತ ಆಸೆ ತೋರಿಸಿಬುಟ್ಟವುರೆ, ಅದ್ಕೆ ಅಂಗಾಡದು.”
“ನೀವು ತೋರಬೇಕಾಗಿತ್ತು.”
“ಎಲ್ಲಿಂದ ತರದ್ರಿ ಅಷ್ಟೊಂದು ದುಡ್ಡ.”
“ಸರಕಾರದ ಖಜಾನೇನೆ ನಿಮ್ಮದಲವಾ ಸಾ.”
“ಸರಕಾರದ ಖಜಾನೆ ನಮ್ಮದು ಅಂತ ಈ ಮುಂಡೆ ಮಕ್ಕಳಿಗ್ಯಲ್ಲ ಕೇಳಿ ಕೇಳಿದಂಗೆ ಕೊಡಕ್ಕಾಯ್ತದೇನ್ರಿ.”
“ಅದ್ಕೆ ಅಲವ ಸಾ, ಬಂಡಾಯ.”
“ಬಂಡಾಯ ಏಳ್ಳಿಬುಡಿ, ಕುಮಾರನ ಸರಕಾರವ ಏನು ಮಾಡಕ್ಕಾಗದಿಲ್ಲ. ನಾನೀಗಾಗ್ಲೆ ಯಲ್ಲಾ ದೇವರನೂ ನೋಡಿ ಪೂಜೆ ಮಾಡಿ ಬಂದಿದ್ದಿನಿ. ನಮ್ಮ ಕಡೆ ದೇವುರಿದಾನೆ.”
“ಒಂದು ಡವುಟು ಸಾರ್.”
“ಏನ್ರಿ ಅದು.”
“ನೀವು ಈಗಾಗ್ಲೆ ಒಂದು ಡಜನ್ ದೇವುರಿಗೆ ನಿಮ್ಮ ಕಷ್ಟ ಹೇಳಕಂಡಿದ್ದಿರಿ, ಇದರಲ್ಲಿ ಯಾವ ದೇವರು ನಿಮ್ಮ ಕೈ ಹಿಡಿತವೆ.”
“ಯಲ್ಲಾ ದೇವರೂ ಹಿಡಿತವೆ.”
“ಹಿಡಿಲಿಲ್ಲ ಅಂದ್ರೆ.”
“ಹಿಡಿದೇ ಹಿಡಿತವೆ ಕಂಡ್ರಿ. ನಮ್ಮ ತಂದೆ ಕನಕಪುರ, ಹೊಳೆನರಸೀಪುರದಲ್ಲಿ ಸೋತು, ಮನಿಗೆ ಬಂದಾಗ ಸುಮ್ಮನೆ ಕೂತಗಳಿಲ್ಲ. ದೇವರ ಪೂಜೆ ಮಾಡಿದ್ರು. ಜಗದ್ಗುರುಗಳ ಕಾಲಿಗೆ ಬಿದ್ರು. ಮುಂದೇನಾಯ್ತು? ಪ್ರಧಾನಿಯಾದ್ರು! ಇದ ನಂಬಕ್ಕಾಯ್ತದೇನ್ರಿ, ಅದ್ಕೆ ನಾವು ಯಾವತ್ತೂ ದೇವರ ಪೂಜೆ, ಪುನಸ್ಕಾರ ಬುಡದಿಲ್ಲ. ಕುಮಾರನ್ನ ಚಾಮುಂಡೇಶ್ವರಿ ಕೈ ಹಿಡಿದೇ ಹಿಡಿತಳೆ.”
“ನಮಗಿರೋ ಮಾಹಿತಿ ಪ್ರಕಾರ ಈ ಒಂದು ವರ್ಷ ನಿಮ್ಮ ಕುಟುಂಬ ಇಡೀ ಸರಕಾರನ ತಿಂದು ಕುಂತದಂತೆ? ಯಾವ ಯಮ್ಮೆಲ್ಲೆಗೂ ಅನುದಾನ ಇಲವಂತೆ.”
“ಅದ್ಯಾವನ್ರಿ ಅಂಗಂದೋನು? ಧರ್ಮಸ್ಥಳಕ್ಕೆ ಬಂದು ಸತ್ಯ ಮಾಡ್ಳಿ, ಕರಕೊಂಡು ಬನ್ರಿ ಅವುರ.”
“ಸರಕಾರ ಉಳಿಬೇಕಾದ್ರೆ ಒಂದು ಸಿಂಪಲ್ ತೀರ್ಮಾನ ಇದ್ದತ್ತಂತೆ ಸಾರ್.”
“ಅದ್ಯಾವುದ್ರಿ ಸಿಂಪಲ್ಲು ತೀರ್ಮಾನ? ಅಂತದು ಇದ್ದತೆ?.”
“ನಿಮ್ಮ ಕೈಲಿ ಅದೆ ಸಾರ್.”
“ನನ್ನ ಕೈಲಿ ನಿಂಬೆಹಣ್ಣವೆ ಕಂಡ್ರಿ.”
“ಆ ಐದು ನಿಂಬೆ ಹಣ್ಣ ನಿಮ್ಮ ಸರಕಾರಕ್ಕೆ ಸಪೋಲ್ಟು ಮಾಡಿರೋ ಸಮರ್ಥರಾದ ಐದು ಜನ ಎಂಎಲ್‍ಎಗಳ ಕೈಗೆ ಕೊಟ್ಟು, ನಿಮ್ಮ ಖಾತೆ, ಕುಮಾರಣ್ಣನತ್ರ ಇರೋ ಖಾತೆ ಹಂಚಿದ್ರೆ, ಸರಕಾರ ಇನ್ನ ನಾಕೊರ್ಸ ಇರತದೆ ಸಾ.”
“ಇದು ಸಿಂಪಲ್ಲು ತೀರ್ಮಾನ ಏನ್ರಿ. ಯಾವನ್ರಿ ನಿಮಗೆ ಇಂಥಾ ಮನಿಯಾಳ ಬುದ್ದಿ ಹೇಳಿಕೊಟ್ಟೋನು. ಸರಕಾರ ಬಿದ್ದೋಗಿ ನಾವು ವಿರೋಧ ಪಕ್ಷದಲ್ಲಿ ಕುತಗಂಡ್ರೂ ಇಂತ ಕ್ಯಲಸ ಮಾಡಕ್ಕಾಯ್ತದೇನ್ರಿ.”
“ಅಂಗಾದ್ರೆ ಸರಕಾರನ ನಿಮ್ಮ ಯಾವ ದೇವರೂ ಉಳಿಸಕ್ಕಾಗಿದಲ್ಲ ಸಾ.”
“ಹೋಗ್ಲಿ ಬುಡ್ರಿ.”
“ಮುಂದಿನ ಚುನಾವಣೆಗೆ ದುಡ್ಡಾಯ್ತಲ್ಲ ಬುಡ್ರಿ.”
“ಏನಂದ್ರಿ.”

“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...