Homeಅಂಕಣಗಳುನಿಮ್ಮ ಖಾತೆಗಳನ್ನ ಬುಟ್ಟುಕೊಟ್ರೆ ಸರಕಾರ ಉಳಿತದಂತೆ ಸಾ...

ನಿಮ್ಮ ಖಾತೆಗಳನ್ನ ಬುಟ್ಟುಕೊಟ್ರೆ ಸರಕಾರ ಉಳಿತದಂತೆ ಸಾ…

- Advertisement -
- Advertisement -

| ಯಾಹೂ |

ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವುಂಟಾದರೂ ಕೊಲ್ಲೂರು ಪ್ರಾಂತ್ಯದ ಮೂಕಾಂಬಿಕೆ ಸನ್ನಿಧಿಯಲ್ಲಿ ವಿಹರಿಸುತ್ತಿರುವ ರೇವಣ್ಣನವರನ್ನು ಮಾತನಾಡಿಸಿ, ಮನಸ್ಸನ್ನು ಹಗುರ ಮಾಡಿಕೊಳ್ಳಬೇಕೆನಿಸಿತಲ್ಲಾ, ಆ ಕೂಡಲೇ ಪೋನ್ ಮಾಡಲಾಗಿ ರಿಂಗಾಯ್ತು.

ರಿಂಗ್‍ಟೋನ್: “ಕೊಲ್ಲೂರು ಸಿರಿದೇವಿ ಮೂಕಾಂಬಿಕೇ, ನಿನ್ನ ದರುಶನಕೆ ಬಂದಿಹೆನು ಕಾಪಾಡಮ್ಮ.”
“ಹಲೋ ಯಾರ್ರಿ.”
“ನಾನು ಸರ್ ಯಾಹೂ.”
“ಏನ್ರಿ”
“ಎಲ್ಲಿದ್ದಿರಿ ಸಾರ್.”
“ನಾನೆಲ್ಲಿದ್ರೆ ನಿಮಗೇನ್ರಿ.”
“ಅಲ್ಲ ಸಾರ್. ರೇವಣ್ಣ ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಡ್ತಾ ಅವುರೆ ಅಂದ್ರು, ಅದಕೆ ಫೋನ್ ಮಾಡಿದೆ ಸಾರ್.”
“ಕೊಲ್ಲೂರು ಮೂಕಾಂಬಿಕೆ, ಆನೆಗುಡ್ಡದ ಆಂಜನೇಯ, ಕಟೀಲು, ಧರ್ಮಸ್ಥಳ, ಇಲ್ಯಲ್ಲ ಹೋಗಿ ಬಂದೆ ಕಂಡ್ರಿ.”
“ದೇವರು ಸರಕಾರ ಉಳುಸ್ತವ ಸಾರ್.”
“ಉಳುಸ್ತವೆ ಕಂಡ್ರಿ.”
“ಹ್ಯಂಗೆ ಸಾರ್.”
“ಯಾರ್ಯಾರಿಗೆ ಮನಿಯಾಳು ಬುದ್ದಿ ಇರತದೊ ಅವುರಿಗ್ಯಲ್ಲ ವಳ್ಳೆ ಬುದ್ದಿ ಕೊಡು ಅಂತ ನಾವು ದೇವರ ಕೇಳಿಕೊಂಡು ಪೂಜೆ ಮಾಡುಸ್ತಿವಿ, ಹೋಮ ಮಾಡುಸ್ತಿವಿ.”
“ಆಗ ದೇವುರು ಅವುರಿಗ್ಯಲ್ಲ ವಳ್ಳೆ ಬುದ್ದಿ ಕೊಡ್ತದ ಸಾರ್.”
“ಕೊಡ್ತದೊ ಬುಡ್ತದೊ ನಾವು ಮಾಡೊ ಕ್ಯಲಸ ಮಾಡಬೇಕಲ್ವೇನ್ರಿ”
“ನಿಜ ಸಾರ್.”
“ಅದ್ಕೆ ನಾನು ಮದ್ಲು ಹೋಗಿ ಕೇಳಿಕಂಡಿದ್ದು ಮೈಸೂರು ಚಾಮುಂಡೇಶ್ವರಿಯ. ಅವುಳು ಮೈಸೂರು ಮಾರಾಜನ್ನ ಕಾಪಾಡಿದಂಗೆ ನಮ್ಮ ಕುಮಾರನ ಸರಕಾರನೂ ಉಳುಸ್ತಾಳೆ.”
“ಹೆಣ್ಣು ದೇವರಿಗೆ ಇಷ್ಟು ಗೌರವ ಕೊಡೋ ನೀವು ಆ ಸುಮಲತನ್ನ ಬೈದರಲ್ಲ ಸಾರ್.”
“ನಾನೆಲ್ಲಿ ಬೋದೆ. ವಟ್ಟಿಗೇನು ತಿಂತೀರಿ ನೀವು ನಿಮ್ಮಂಥೊರಿಂದ್ಲೆ ಹಿಂಗಾಗಿರದು.”
“ಸಾರಿ ಸರ್ ಬೈಲಿಲ್ಲ ಟೀಕೆ ಮಾಡಿದ್ರಿ.”
“ಟೀಕೆ ಎಲ್ಲಿ ಮಾಡಿದೇರೀ? ಪಾಪ ಗಂಡ ಸತ್ತು ತಿಂಗಳಾಗಿಲ್ಲ ಯಲಕ್ಷನ್ನಿಗೆ ಬಂದವುಳೆ ಅಂದೆ ಇದು ತೆಪ್ಪ.”
“ತೆಪ್ಪಲ್ಲ ಸಾರ್, ಅಕಸ್ಮಾತ್ ನೀವು ಅಂಬರೀಶನಂಗಾಗಿ…..”
“ಥೂ ಬುಡ್ತು ಅನ್ರಿ.”
“ಸಾರಿ ಸ, ನಿಮ್ಮ ನಂತ್ರ ಭವಾನಕ್ಕನಿಗೆ ಟಿಕೆಟ್ ಕೊಟ್ರೆ ನೀವು ಅಂಗನ್ನಕ್ಕಾಯ್ತದ.”
“ಭವಾನಿ ನಾನಿಲ್ದಾಗ ರಾಜಕಾರಣ ಮಾಡದಕ್ಕಿಂತ ಈಗ್ಲೆ ಅವುಳು ರಾಜಕಾರಣಿ ಕಂಡ್ರಿ, ಅವುಳ ಕ್ಯಲಸ ನಿಮಗೇನು ಗೊತ್ತು.”
“ಗೊತ್ತಾಗಲಿಲ್ಲ ಸಾರ್.”
“ಹಾಸನ ಜಿಲ್ಲೆ ಇಸಗೂಲುಡುಗ್ರ್ಯಲ್ಲ ಪಾಸಾಗ್ಯವೆ ಅಂಗೆ ಮಾಡಿದ್ಲು.”
“ರಿಯಲ್ಲಿ ಗ್ರೇಟ್ ಸಾ, ಅಂಗಿದ್ರೆ ಅವುರ ಎಮ್ಮೆಲ್ಸಿ ಮಾಡಿ ಶಿಕ್ಷಣ ಸಚಿವರನ್ನಾಗಿ ಮಾಡಿದ್ರೆ, ಇಡೀ ಕರ್ನಾಟಕದ ಸ್ಕೂಲು ಮಕ್ಕಳ್ಯಲ್ಲ ಪಾಸಾಯ್ತವಲ್ಲವ ಸಾ.”
“ಆಯ್ತವೆ ಸರಿ, ಆದ್ರೆ ಅವುಳ ಎಮ್ಮೆಲ್ಸಿ ಮಾಡಕ್ಕೆ ಬುಡ್ತಾರೇನ್ರಿ. ಈಗ್ಲೆ, ದ್ಯಾವೇಗೌಡ್ರು ಮಕ್ಕಳದೆ ಸರಕಾರ ಅಂತ ವಟ್ಟೆಕಿಚ್ಚು ಮಾಡೋರು ಆಗ ಬುಡ್ತಾರಾ.”
“ವಟ್ಟೆಕಿಚ್ಚು, ರಾಜಕಾರಣಿಗಳ ಹುಟ್ಟುಗುಣ ಸಾ. ವಟ್ಟೆಕಿಚ್ಚು, ಕರುಬುತನ, ಕಿಜ್ಜರತನ, ಸಣ್ಣತನ ಇವ್ಯಲ್ಲ ನಿಮ್ಮಂತವರ ಹುಟ್ಟುಗುಣ.”
“ನಮ್ಮಂತವುರು ಅಂತ ಯಾಕಂತೀರಿ ಹಲ್ಲಿಡುದು ಮಾತಾಡಿ.”
“ನೀವು ದೇವೇಗೌಡ್ರ ಮಕ್ಕಳಲ್ಲವ ಸಾರ್.”
“ಅದ್ಕೆ ಅಂಗಂದುಬುಡದಾ. ನಮ್ಮ ತಂದೆ ಈ ವಯಸ್ಸಿನಲ್ಲಿ ಎಷ್ಟು ಕಷ್ಟಪಡ್ತರೆ ಅಂತ ನಿಮಗೇನ್ರಿ ಗೊತ್ತು”
“ನಿಜ ಸಾ, ಗೌಡ್ರು ಅನ್ನ ನಿದ್ದೆ ಬುಟ್ಟು ಬರೀ ಮುದ್ದೆ ತಿನ್ನಕಂಡು ನೋವಿನ ಕಣ್ಣಲ್ಲಿ ಕುಂತಿರದ ನೋಡಿದ್ರೆ ವಟ್ಟೆ ಉರಿತದೆ. ಈ ಹಾಳು ಎಮ್ಮೆಲ್ಲೆಗಳು ಅದ ತಿಳಕಳ್ಳಿಲ್ಲ.”
“ತಿಳಕಳಕ್ಕೆ ಯಂಗಾಯ್ತದ್ರಿ, ಆ ಬಿಜೆಪಿಗಳು ಕೋಟಿ ಕೋಟಿ ಕೊಡ್ತೀವಿ ಅಂತ ಆಸೆ ತೋರಿಸಿಬುಟ್ಟವುರೆ, ಅದ್ಕೆ ಅಂಗಾಡದು.”
“ನೀವು ತೋರಬೇಕಾಗಿತ್ತು.”
“ಎಲ್ಲಿಂದ ತರದ್ರಿ ಅಷ್ಟೊಂದು ದುಡ್ಡ.”
“ಸರಕಾರದ ಖಜಾನೇನೆ ನಿಮ್ಮದಲವಾ ಸಾ.”
“ಸರಕಾರದ ಖಜಾನೆ ನಮ್ಮದು ಅಂತ ಈ ಮುಂಡೆ ಮಕ್ಕಳಿಗ್ಯಲ್ಲ ಕೇಳಿ ಕೇಳಿದಂಗೆ ಕೊಡಕ್ಕಾಯ್ತದೇನ್ರಿ.”
“ಅದ್ಕೆ ಅಲವ ಸಾ, ಬಂಡಾಯ.”
“ಬಂಡಾಯ ಏಳ್ಳಿಬುಡಿ, ಕುಮಾರನ ಸರಕಾರವ ಏನು ಮಾಡಕ್ಕಾಗದಿಲ್ಲ. ನಾನೀಗಾಗ್ಲೆ ಯಲ್ಲಾ ದೇವರನೂ ನೋಡಿ ಪೂಜೆ ಮಾಡಿ ಬಂದಿದ್ದಿನಿ. ನಮ್ಮ ಕಡೆ ದೇವುರಿದಾನೆ.”
“ಒಂದು ಡವುಟು ಸಾರ್.”
“ಏನ್ರಿ ಅದು.”
“ನೀವು ಈಗಾಗ್ಲೆ ಒಂದು ಡಜನ್ ದೇವುರಿಗೆ ನಿಮ್ಮ ಕಷ್ಟ ಹೇಳಕಂಡಿದ್ದಿರಿ, ಇದರಲ್ಲಿ ಯಾವ ದೇವರು ನಿಮ್ಮ ಕೈ ಹಿಡಿತವೆ.”
“ಯಲ್ಲಾ ದೇವರೂ ಹಿಡಿತವೆ.”
“ಹಿಡಿಲಿಲ್ಲ ಅಂದ್ರೆ.”
“ಹಿಡಿದೇ ಹಿಡಿತವೆ ಕಂಡ್ರಿ. ನಮ್ಮ ತಂದೆ ಕನಕಪುರ, ಹೊಳೆನರಸೀಪುರದಲ್ಲಿ ಸೋತು, ಮನಿಗೆ ಬಂದಾಗ ಸುಮ್ಮನೆ ಕೂತಗಳಿಲ್ಲ. ದೇವರ ಪೂಜೆ ಮಾಡಿದ್ರು. ಜಗದ್ಗುರುಗಳ ಕಾಲಿಗೆ ಬಿದ್ರು. ಮುಂದೇನಾಯ್ತು? ಪ್ರಧಾನಿಯಾದ್ರು! ಇದ ನಂಬಕ್ಕಾಯ್ತದೇನ್ರಿ, ಅದ್ಕೆ ನಾವು ಯಾವತ್ತೂ ದೇವರ ಪೂಜೆ, ಪುನಸ್ಕಾರ ಬುಡದಿಲ್ಲ. ಕುಮಾರನ್ನ ಚಾಮುಂಡೇಶ್ವರಿ ಕೈ ಹಿಡಿದೇ ಹಿಡಿತಳೆ.”
“ನಮಗಿರೋ ಮಾಹಿತಿ ಪ್ರಕಾರ ಈ ಒಂದು ವರ್ಷ ನಿಮ್ಮ ಕುಟುಂಬ ಇಡೀ ಸರಕಾರನ ತಿಂದು ಕುಂತದಂತೆ? ಯಾವ ಯಮ್ಮೆಲ್ಲೆಗೂ ಅನುದಾನ ಇಲವಂತೆ.”
“ಅದ್ಯಾವನ್ರಿ ಅಂಗಂದೋನು? ಧರ್ಮಸ್ಥಳಕ್ಕೆ ಬಂದು ಸತ್ಯ ಮಾಡ್ಳಿ, ಕರಕೊಂಡು ಬನ್ರಿ ಅವುರ.”
“ಸರಕಾರ ಉಳಿಬೇಕಾದ್ರೆ ಒಂದು ಸಿಂಪಲ್ ತೀರ್ಮಾನ ಇದ್ದತ್ತಂತೆ ಸಾರ್.”
“ಅದ್ಯಾವುದ್ರಿ ಸಿಂಪಲ್ಲು ತೀರ್ಮಾನ? ಅಂತದು ಇದ್ದತೆ?.”
“ನಿಮ್ಮ ಕೈಲಿ ಅದೆ ಸಾರ್.”
“ನನ್ನ ಕೈಲಿ ನಿಂಬೆಹಣ್ಣವೆ ಕಂಡ್ರಿ.”
“ಆ ಐದು ನಿಂಬೆ ಹಣ್ಣ ನಿಮ್ಮ ಸರಕಾರಕ್ಕೆ ಸಪೋಲ್ಟು ಮಾಡಿರೋ ಸಮರ್ಥರಾದ ಐದು ಜನ ಎಂಎಲ್‍ಎಗಳ ಕೈಗೆ ಕೊಟ್ಟು, ನಿಮ್ಮ ಖಾತೆ, ಕುಮಾರಣ್ಣನತ್ರ ಇರೋ ಖಾತೆ ಹಂಚಿದ್ರೆ, ಸರಕಾರ ಇನ್ನ ನಾಕೊರ್ಸ ಇರತದೆ ಸಾ.”
“ಇದು ಸಿಂಪಲ್ಲು ತೀರ್ಮಾನ ಏನ್ರಿ. ಯಾವನ್ರಿ ನಿಮಗೆ ಇಂಥಾ ಮನಿಯಾಳ ಬುದ್ದಿ ಹೇಳಿಕೊಟ್ಟೋನು. ಸರಕಾರ ಬಿದ್ದೋಗಿ ನಾವು ವಿರೋಧ ಪಕ್ಷದಲ್ಲಿ ಕುತಗಂಡ್ರೂ ಇಂತ ಕ್ಯಲಸ ಮಾಡಕ್ಕಾಯ್ತದೇನ್ರಿ.”
“ಅಂಗಾದ್ರೆ ಸರಕಾರನ ನಿಮ್ಮ ಯಾವ ದೇವರೂ ಉಳಿಸಕ್ಕಾಗಿದಲ್ಲ ಸಾ.”
“ಹೋಗ್ಲಿ ಬುಡ್ರಿ.”
“ಮುಂದಿನ ಚುನಾವಣೆಗೆ ದುಡ್ಡಾಯ್ತಲ್ಲ ಬುಡ್ರಿ.”
“ಏನಂದ್ರಿ.”

“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...