Homeಸಾಮಾಜಿಕಶೂನ್ಯ ಬಂಡವಾಳ-ಶೂನ್ಯ ಸರಕು-ಅಪಾರ ಲಾಭ!

ಶೂನ್ಯ ಬಂಡವಾಳ-ಶೂನ್ಯ ಸರಕು-ಅಪಾರ ಲಾಭ!

- Advertisement -
- Advertisement -

ಮಾನವ ಸಮಾಜದಲ್ಲಿ ಆರ್ಥಿಕ ವ್ಯವಸ್ಥೆ ಬೆಳೆದುಬಂದಂತೆಲ್ಲಾ ಬಂಡವಾಳ ಶಾಹಿ ವ್ಯವಸ್ಥೆ ಬಂತು. ಆಧುನಿಕ ವ್ಯಾಪಾರ ಸಂಸ್ಥೆಯೂ ಬಂತು. ನಾವು ಉದಾಹರಣೆಗೆ ಎಕ್ಸ್ ಎಂಬ ಒಂದು ಸಾರ್ವಜನಿಕ ಬಂಡವಾಳದ ಒಂದು ಕಂಪೆನಿಯನ್ನು ಊಹಿಸಿಕೊಳ್ಳೋಣ. ಅದರಲ್ಲಿ ಸಾವಿರಾರು ಹೂಡಿಕೆದಾರರ ಬಂಡವಾಳ ಇರುತ್ತದೆ. ಒಬ್ಬರಿಗೆ ಇನ್ನೊಬ್ಬರ ಪರಿಚಯ ಇರುವುದಿಲ್ಲ. ಅದಕ್ಕೆ ಅಧ್ಯಕ್ಷರಾಗಿ ಒಂದು ಆಡಳಿತ ಮಂಡಳಿ ಇರುತ್ತದೆ. ಅದರ ಮೇಲಿನ ನಂಬಿಕೆಯಿಂದ ಜನರು ಹಣ ಹೂಡುತ್ತಾರೆ. ಆದರೆ ಅದಕ್ಕೆ ಇರುವುದು ಕಾಲ್ಪನಿಕ ಕಾನೂನು ಬದ್ಧ ಅಸ್ತಿತ್ವ ಮಾತ್ರ ಇರುವುದು ದೈಹಿಕ ಅಸ್ತಿತ್ವ ಇರುವುದಿಲ್ಲ. ನಮ್ಮ ಈ ‘ಎಕ್ಸ್’ ಕಂಪೆನಿ ಕಾರು ಉತ್ಪಾದಿಸುತ್ತದೆ ಎನ್ನೋಣ. ನೀವು ಕೊಂಡ ಕಾರು ಸರಿಯಿಲ್ಲವಾದರೆ ನೀವು ಕಂಪೆನಿಯ ಮೇಲೆ ಕೇಸು ಹಾಕಬಹುದು ಅದರ ಅಧ್ಯಕ್ಷ ಅದಾನಿಯೋ, ಅಂಬಾನಿಯ ಮೇಲಲ್ಲ. ಆದರೆ ಅದಕ್ಕೆ ಕಾನೂನಿನ ಅಸ್ತಿತ್ವ ಮಾತ್ರ ಇರುವುದು!
ಉದಾಹರಣೆಗೆ ಈ ‘ಎಕ್ಸ್’ ಕಂಪೆನಿಯ ಎಲ್ಲಾ ಕಾರುಗಳು, ಕಾರ್ಖಾನೆಗಳು ನಾಶವಾದರೂ ‘ಎಕ್ಸ್’ ಕಂಪೆನಿ ಕಾನೂನು ಬದ್ಧವಾಗಿ ಅಸ್ತಿತ್ವದಲ್ಲಿ ಇರುತ್ತದೆ. ಅದೇ ಹೆಸರಲ್ಲಿ ಮುಂದೆ ಕಾರ್ಖಾನೆ ಸ್ಥಾಪಿಸಿ, ಕಾರುಗಳನ್ನು ಉತ್ಪಾದನೆ ಮಾಡಿ ಮಾರಲು ಸಾಧ್ಯವಿದೆ! ಅದನ್ನು ಸೂಕ್ಷ್ಮವಾಗಿ ಯೋಚಿಸೋಣ. ನಮ್ಮ ದೇವರು ಮತ್ತು ಧರ್ಮಗಳಿಗೂ ಇರುವುದು ‘ಸಾಮೂಹಿಕ ಕಲ್ಪನೆಯ ಅಸ್ತಿತ್ವ’ ಮಾತ್ರ! ಅವುಗಳನ್ನು ಪ್ರತ್ಯಕ್ಷವಾಗಿ ತೋರಿಸಲಾಗದು. ಈ ಸಾಮೂಹಿಕ ಕಾಲ್ಪನಿಕ ಅಸ್ತಿತ್ವ’ವನ್ನೇ ನಮ್ಮ ಜೋಯಿಸರುಗಳು ಬಂಡವಾಳ ಮಾಡಿಕೊಂಡಿದ್ದಾರೆ!
ಕಂಪೆನಿಗೆ ಭೌತಿಕ ಅಸ್ತಿತ್ವ ಇಲ್ಲದಿದ್ದರೂ ಅದರ ಕಾರ್ಖಾನೆಗಳು ಭೌತಿಕ ಉತ್ಪಾದನೆಗಳನ್ನು ತಯಾರಿಸುತ್ತವೆ, ಮಾರುತ್ತವೆ, ಮಾರುಕಟ್ಟೆಯ ಪರಿಸ್ಥಿತಿಯನ್ನು ಆಧರಿಸಿ ಲಾಭ ಮಾಡುತ್ತವೆ; ಇಲ್ಲವೇ ನಷ್ಟ ಭರಿಸುತ್ತವೆ. ಇದು ಆಹಾರ ನಿತ್ಯೋಪಯೋಗಿ ವಸ್ತುಗಳಿಗೆ ಅನ್ವಯಿಸುತ್ತದೆ. ಈಗ ಭೌತಿಕ ಅಸ್ತಿತ್ವ ಇಲ್ಲದ ಸೇವೆಗಳು ಹುಟ್ಟಿಕೊಂಡಿವೆ.
ಆದರೆ ಈ ಪುರೋಹಿತರು ನೋಡಿ-ವರ್ಷಾಂತರಗಳಿಂದ ಭೌತಿಕ ಅಸ್ತಿತ್ವವೇ ಇಲ್ಲದ ಕಾಲ್ಪನಿಕ ಸರಕುಗಳನ್ನು ಮಾರಿ ಲಾಭಗಳಿಸುತ್ತಿದ್ದಾರೆ. ಅದಕ್ಕೆ ಬಂಡವಾಳವನ್ನೂ ಅಂದರೆ ಸಾಮಗ್ರಿಗಳು, ದಕ್ಷಿಣೆ, ಫೀಸು ಇತರ ವೆಚ್ಚಗಳನ್ನು ಭಕ್ತರೇ ಭರಿಸಬೇಕು! ಪ್ರತೀ ಕಾರ್ಖಾನೆಯಲ್ಲಿ ಏನಾದರೂ ಉತ್ಪನ್ನ ಹುಟ್ಟುತ್ತದೆ. ಇವರ ಉತ್ಪನನ್ ಅಸ್ತಿತ್ವದಲ್ಲೇ ಇಲ್ಲದ ಪಾಪ, ಪುಣ್ಯ, ಪರಿಹಾರ, ಶ್ರೇಯಸ್ಸು ಮುಂತಾದ ಕಾಲ್ಪನಿಕ ಸರಕುಗಳೇ! ಇವನ್ನು ಅವರಿಗೆ ತೋರಿಸಲಾಗುವುದಿಲ್ಲ! ನಿಮಗೆ ನೋಡಲು ಆಗುವುದಿಲ್ಲ! ಕೇವಲ ಭ್ರಮಿಸಬಹುದು ಅಷ್ಟೇ!
ಉದಾಹರಣೆಗೆ ಯಾವುದೋ ಜೋಯಿಸರ ಮಾತು ಕೇಳಿ ನೀವು ಪೂಜೆ ಮಾಡಿಸಿದರೆನ್ನಿ. ಎಲ್ಲಾ ಸಾಮಗ್ರಿ, ವೆಚ್ಚ ನೀವೇ ಭರಿಸಬೇಕು. ಉತ್ಪನ್ನ? ನಿಮಗೆ ಏನು ಸಿಕ್ಕಿತು ಎಂಬುದನ್ನು ನೀವು ನೋಡಲು ಸಾಧ್ಯವೆ? ಆದರೆ ಜೋಯಿಸರಿಗೆ ಮಾತ್ರ ಭೌತಿಕವಾಗಿ ‘ಗಂಟು’ ಸಿಗುತ್ತದೆ.
ಈ ಕಾಲ್ಪನಿಕ ಸರಕುಗಳನ್ನು ನಮ್ಮ ಜೋಯಿಸರುಗಳು ಹೇಗೆ ಮಾರ್ಕೆಟ್ ಮಾಡುತ್ತಿದ್ದಾರೆ ನೋಡಿ. ನಮ್ಮ ನಂಬಿಕೆಯೇ ಇದಕ್ಕೆ ಆಧಾರ. ಪ್ರಧಾನಮಂತ್ರಿ ಬೇರೆಬೇರೆ ಖಾತೆಗಳನ್ನು ಬೇರೆಬೇರೆಯವರಿಗೆ ಹಂಚುವಂತೆ ಬೇರೆಬೇರೆ ದೇವರಿಗೆ ಹಂಚಿಬಿಟ್ಟಿದ್ದಾರೆ. ಸೃಷ್ಟಿ, ಪಾಲನೆ, ಲಯ ಒತ್ತಟ್ಟಿಗಿರಲಿ- ಧನ, ವಿದ್ಯೆ, ಸಂತಾನ ಇತ್ಯಾದಿಯಾಗಿ ನಿತ್ಯ ಜೀವನದ ವಿಷಯಗಳಿಗೂ ಒಬ್ಬೊಬ್ಬ ದೇವರು! ಹಣಕ್ಕೆ ಲಕ್ಷ್ಮಿ, ವಿದ್ಯೆಗೆ ಸರಸ್ವತಿ ಹೀಗೆ! ಇವರಲ್ಲಿ ಲಕ್ಷ್ಮಿಗಂತೂ ಹಲವಾರು ಖಾತೆಗಳು. ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ವಿದ್ಯಾಲಕ್ಷ್ಮೀ, ಗೃಹಲಕ್ಷ್ಮೀ, ಸಂತಾನಲಕ್ಷ್ಮೀ ಮುಂತಾದ ಹೆಸರುಗಳಲ್ಲೇ ಇದು ಸ್ಪಷ್ಟವಾಗುತ್ತದೆ. ಆಸ್ತಿಕರ ಪಾಲಿಗೆ ದೇವರೊಬ್ಬನೆ-ಆತ ಪರಮಾತ್ಮ ಎಂದು ಘೋಷಿಸಿ, ದೇವರನ್ನು ನಿರಾಕಾರ-ನಿರ್ಗುಣ’ ಎಂದು ಸಾರಿದ ಧರ್ಮವೊಂದರಲ್ಲಿ ಲೆಕ್ಕಕ್ಕೆ ಸಿಗದಷ್ಟು ದೇವರನ್ನು ಸೃಷ್ಟಿಸಿ, ಅವರಿಗೆ ತಾವೇ ಒಂದೊಂದು ಕರ್ತವ್ಯವನ್ನು ಹೇರಿ, ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪೂಜೆಗಳನ್ನು ಆವಿಷ್ಕರಿಸಿದ ಪುರೋಹಿತರಷ್ಟು ಬುದ್ಧಿವಂತರು, ಮಹಾ ವಿಜ್ಞಾನಿಗಳು ಪ್ರಪಂಚದಲ್ಲಿ ಬೇರಾರೂ ಇಲ್ಲ!
ವಿಜ್ಞಾನದ ಆವಿಷ್ಕಾರಗಳು! ‘ವರ್ಚುವಲ್ ವಲ್ರ್ಡ್’! ವಾವ್ ನಾವು, ನಮ್ಮ ಮಕ್ಕಳು ಮೊಬೈಲ್ ಫೋನಿನಲ್ಲಿ, ತಲೆಗೆ ಕಿರೀಟದಂತಹ ಕಿರೀಟ ಹಾಕ್ಕೊಂಡು, ಎಂತೆಂತೆಲ್ಲವನ್ನು ಅನುಭವಿಸಬಹುದು ಈ ಪ್ರಪಂಚವನ್ನೇ ಡ್ರಗ್ ಸೇವಕದಂತೆ ಮರೆಯಬಹುದು. ನಿಜವನ್ನು ಭ್ರಮೆಯಲ್ಲಿ ಕಾಣಬಹುದು. ಕಾರ್ಲ್‍ಮಾಕ್ರ್ಸ್ ಧರ್ಮವನ್ನು ಅಫೀಮು ಎಂದು ಕರೆದಾಗ ಅವನಿಗೆ ಏನಾದರೂ ಈ ರೀತಿ ಮುಂದಾಲೋಚನೆ ಇದ್ದಿರಬಹುದೆ? ಭಾರತದಲ್ಲಿ ಜಾತಿಪಾತಿ-ಚಪಾತಿ ಭಾರತದಲ್ಲಿ ಬಂಡವಾಳ ಇಲ್ಲದೆ, ಅವನ ಕಾಲಕ್ಕೇ ಬೆಳೆದಿರದ ಬಂಡವಾಳ ರಹಿತ ಶೋಷಣೆ ವ್ಯವಸ್ಥೆ ಇಲ್ಲಿ ಆಳವಾಗಿ ಬೇರೂರಿದೆ ಎಂದು ಕಾರ್ಲ್‍ಮಾಕ್ರ್ಸ್‍ಗೆ ಗೊತ್ತಿರಬಹುದೆ? ಹಾಂ! ಇಲ್ಲ!! ಅದಕ್ಕೆ ಹೇಳುವುದು-ಬ್ರಹ್ಮಜ್ಞಾನ-ಬ್ರಾಹ್ಮಣ ಸಂಜಾತರಿಗೆ(ಗೆಳೆಯರು ಕ್ಷಮಿಸಿ) ಮಾತ್ರ ಸಿಗುವಂತದ್ದು! ಅದರಿಂದಲೇ ಅವರು ಅತ್ಯಾಧುನಿಕ ವೈಜ್ಞಾನಿಕ, ಆರ್ಥಿಕ, ಪಾರಮಾರ್ಥಿಕ ಆವಿಷ್ಕಾರಗಳನ್ನು ಮಾಡಿದ್ದಾರೆ! ಅದನ್ನು ಶಿವನ ಸರ್ಜರಿ, ಅಣುಬಾಂಬ್-ಬ್ರಹ್ಮಾಸ್ತ್ರ-ಇತ್ಯಾದಿಯಾಗಿ ಸಾವಿರಾರು ರೀತಿಯಲ್ಲಿ ನಂಬಿದ್ದಾರೆ! ಯಾವುದೇ ರಾಕೆಟ್ ಹಾರಿಸಲು ಫ್ಯುಯೆಲ್-ಇಂಧನ ಬೇಕು. ಬಾಂಬ್ ತಯಾರಿಸಲೂ ಕೆಲವು ಮೂಲವಸ್ತುಗಳು-ಅಣುಬಾಂಬಿಗೆ ಕಾಲ್ಪನಿಕ ದೋಷಗಳೇ ಸಾಕು! ಬಂಡವಾಳ ನಿಮ್ಮದೇ! ಹೂವು-ಗೀವು-ಅದೂ-ಇದು! ನೀವು ಪ್ರಾನ್ಸ್-ಅಮೆರಿಕಾದ ಗುಲಾಮರಾಗಿರಬೇಕಾಗಿಲ್ಲ! ಅವರೇ ನಿಮಗೆ ರಿಡಕ್ಷನ್-ಕಮೀಷನ್ ಕೊಡುತ್ತಾರೆ! ಇಸ್ರೇಲನ್ನು ಮರೆಯದಿರಿ! ಕೇರಳ ಮಂತ್ರವಾದಿಗಳಂತೆ ಅವರೇ ಎಲ್ಲವನ್ನೂ ಮಾಡುತ್ತಾರೆ! ನೀವು ಸೂಟುಹಾಕಿ ಪೂಜೆಗೆ ಕುಳಿತರೆ ಪಡು! ನಾವು ಪೂಜೆಯಿಂದ ಮಳೆ ಬರಿಸಬಲ್ಲೆವು! ವಿನಾಶ ಮಾಡಬಲ್ಲೆವು! ದೇಶವನ್ನು ಬರೇ ಮಂತ್ರ ಯಾಗ ಹೋಮ ಹವನಗಳಿಂದ ನಿವಾರಿಸಬಲ್ಲೆವು! ಹೀಗೆ ಹೇಳುವ ಇವರಿಗೇ ನಮ್ಮ ಎಲ್ಲಾ ರಕ್ಷಣಾ ಬಜೆಟ್ ಕೊಟ್ಟುಬಿಡಿ! ಇವೆಲ್ಲವನ್ನೂ ನಂಬುವ ದೇಶ ರಾಜಕೀಯವಗಿ ಎಷ್ಟು ಪ್ರಬುದ್ಧವಾಗಿರಬಹುದು?
ವಿಜ್ಞಾನಿಗಳೇ ಜನಿವಾರಧಾರಿಗಳಾಗಿ-ಒಂದು ತಾವೇ ಸೃಷ್ಟಿಸಿದ ರಾಕೆಟನ್ನು ಉಡಾಯಿಸುವಾಗ ಒಂದು ಸರಳ ಪ್ರಾರ್ಥನೆ ಅಥವಾ ವಿಶ್ ಬಿಟ್ಟು, ಹೋಮ ಹವನಗಳನ್ನು ಮಾಡುವುದಾದರೆ, ಪುರಾಣಗಳ ಎಲ್ಲಾ ಆಗ್ನೇಯಾಸ್ತ್ರ ಬ್ರಹ್ಮಾಸ್ತ್ರಗಳನ್ನು ಹುಡುಕಲು ಬೊಮ್ಮನ್ ವಿಶ್ವವಿದ್ಯಾನಿಲಯ ತೆರೆಯಬಹುದು! ಸಂಶೋಧನೆಯ ಹಣ ವಿಜ್ಞಾನಿಗಳಿಗೆ ಯಾಕೆ ಹೋಗಬೇಕು? ಅದು ನಮ್ಮ ಜ್ಯೋತಿಷ್ಯದವರ ಪಾಲಲ್ಲವೇ? ಕರ್ನಾಟಕ ಸರಕಾರ ಇದಕ್ಕೆ ಮುಂದಾಗಬೇಕು!
ಎಲ್ಲಾ ಜ್ಯೋತಿಷಿಗಳನ್ನು ಒಟ್ಟು ಸೇರಿಸಿ ಒಂದು ಸವೇಶನ ಮಾಡಿಸಿ! ಭಾಗವಹಿಸಿದವರಿಗೆಲ್ಲಾ ಒಂದೊಂದು ಪಾರ್ಟಿಯ ಸರ್ಟಿಫಿಕೇಟ್ ಕೊಡಿ! ಲೈಸನ್ಸ್ ಅದತ್ಯವಿಲ್ಲ! ರಾಜ್ಯಕ್ಕೆ ದೇಶಕ್ಕೆ ಬೇಕಾದ ಎಲ್ಲಾ ಜ್ಯೋತಿಷ್ಯ ಕೇಳಿಕೊಳ್ಳಿ! ಎದಕ್ಕೆ ಯಡ್ಡಿ,ಚಡ್ಡಿ, ಸಿದ್ದು, ಕುಮ್ಮಿ, ಮೊದ್ದು, ಪಪ್ಪು, ಚಾ ಎಂದೇನೂ ಇಲ್ಲ! ಎಲ್ಲರೂ ಬಂದು ದೇವರ ಸರಕಾರವನ್ನು ‘ಜನರ ಸರಕಾರ’ ಮಾಡಿ!
ಇಷ್ಟೆಲ್ಲಾ ಹೇಳಿದರೂ ಜ್ಯೋತಿಷ್ಯವನ್ನು ನಂಬುವವರು ನಂಬುತ್ತಲೇ ಇರಲಿ! ಸರಕಾರವೇ ಈ ಬರವಣಿಗೆಯ ವಿರುದ್ಧ ನಿಂತು ಪೋಷಿಸುತ್ತಿರುವಾಗ-ಓಟು ಕೊಟ್ಟು ಗೆಲ್ಲಿಸುವ ಜನಸಾಮಾನ್ಯರು ಬದಲಾಗುತ್ತಾರೋ ನನಗೆ ಸಂಶಯ! ಈ ತನಕ ನನ್ನ ಪ್ರವರ ಓದಿದ್ದಕ್ಕೆ ಧನ್ಯವಾದ!
ಮುಂದೆ ‘ನ್ಯಾಯಪಥ’ ಅವಕಾಶ ಕೊಟ್ಟರೆ ಮತ್ತೆ ಭೇಟಿ!

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...