Homeಸಾಮಾಜಿಕಶೂನ್ಯ ಬಂಡವಾಳ-ಶೂನ್ಯ ಸರಕು-ಅಪಾರ ಲಾಭ!

ಶೂನ್ಯ ಬಂಡವಾಳ-ಶೂನ್ಯ ಸರಕು-ಅಪಾರ ಲಾಭ!

- Advertisement -
- Advertisement -

ಮಾನವ ಸಮಾಜದಲ್ಲಿ ಆರ್ಥಿಕ ವ್ಯವಸ್ಥೆ ಬೆಳೆದುಬಂದಂತೆಲ್ಲಾ ಬಂಡವಾಳ ಶಾಹಿ ವ್ಯವಸ್ಥೆ ಬಂತು. ಆಧುನಿಕ ವ್ಯಾಪಾರ ಸಂಸ್ಥೆಯೂ ಬಂತು. ನಾವು ಉದಾಹರಣೆಗೆ ಎಕ್ಸ್ ಎಂಬ ಒಂದು ಸಾರ್ವಜನಿಕ ಬಂಡವಾಳದ ಒಂದು ಕಂಪೆನಿಯನ್ನು ಊಹಿಸಿಕೊಳ್ಳೋಣ. ಅದರಲ್ಲಿ ಸಾವಿರಾರು ಹೂಡಿಕೆದಾರರ ಬಂಡವಾಳ ಇರುತ್ತದೆ. ಒಬ್ಬರಿಗೆ ಇನ್ನೊಬ್ಬರ ಪರಿಚಯ ಇರುವುದಿಲ್ಲ. ಅದಕ್ಕೆ ಅಧ್ಯಕ್ಷರಾಗಿ ಒಂದು ಆಡಳಿತ ಮಂಡಳಿ ಇರುತ್ತದೆ. ಅದರ ಮೇಲಿನ ನಂಬಿಕೆಯಿಂದ ಜನರು ಹಣ ಹೂಡುತ್ತಾರೆ. ಆದರೆ ಅದಕ್ಕೆ ಇರುವುದು ಕಾಲ್ಪನಿಕ ಕಾನೂನು ಬದ್ಧ ಅಸ್ತಿತ್ವ ಮಾತ್ರ ಇರುವುದು ದೈಹಿಕ ಅಸ್ತಿತ್ವ ಇರುವುದಿಲ್ಲ. ನಮ್ಮ ಈ ‘ಎಕ್ಸ್’ ಕಂಪೆನಿ ಕಾರು ಉತ್ಪಾದಿಸುತ್ತದೆ ಎನ್ನೋಣ. ನೀವು ಕೊಂಡ ಕಾರು ಸರಿಯಿಲ್ಲವಾದರೆ ನೀವು ಕಂಪೆನಿಯ ಮೇಲೆ ಕೇಸು ಹಾಕಬಹುದು ಅದರ ಅಧ್ಯಕ್ಷ ಅದಾನಿಯೋ, ಅಂಬಾನಿಯ ಮೇಲಲ್ಲ. ಆದರೆ ಅದಕ್ಕೆ ಕಾನೂನಿನ ಅಸ್ತಿತ್ವ ಮಾತ್ರ ಇರುವುದು!
ಉದಾಹರಣೆಗೆ ಈ ‘ಎಕ್ಸ್’ ಕಂಪೆನಿಯ ಎಲ್ಲಾ ಕಾರುಗಳು, ಕಾರ್ಖಾನೆಗಳು ನಾಶವಾದರೂ ‘ಎಕ್ಸ್’ ಕಂಪೆನಿ ಕಾನೂನು ಬದ್ಧವಾಗಿ ಅಸ್ತಿತ್ವದಲ್ಲಿ ಇರುತ್ತದೆ. ಅದೇ ಹೆಸರಲ್ಲಿ ಮುಂದೆ ಕಾರ್ಖಾನೆ ಸ್ಥಾಪಿಸಿ, ಕಾರುಗಳನ್ನು ಉತ್ಪಾದನೆ ಮಾಡಿ ಮಾರಲು ಸಾಧ್ಯವಿದೆ! ಅದನ್ನು ಸೂಕ್ಷ್ಮವಾಗಿ ಯೋಚಿಸೋಣ. ನಮ್ಮ ದೇವರು ಮತ್ತು ಧರ್ಮಗಳಿಗೂ ಇರುವುದು ‘ಸಾಮೂಹಿಕ ಕಲ್ಪನೆಯ ಅಸ್ತಿತ್ವ’ ಮಾತ್ರ! ಅವುಗಳನ್ನು ಪ್ರತ್ಯಕ್ಷವಾಗಿ ತೋರಿಸಲಾಗದು. ಈ ಸಾಮೂಹಿಕ ಕಾಲ್ಪನಿಕ ಅಸ್ತಿತ್ವ’ವನ್ನೇ ನಮ್ಮ ಜೋಯಿಸರುಗಳು ಬಂಡವಾಳ ಮಾಡಿಕೊಂಡಿದ್ದಾರೆ!
ಕಂಪೆನಿಗೆ ಭೌತಿಕ ಅಸ್ತಿತ್ವ ಇಲ್ಲದಿದ್ದರೂ ಅದರ ಕಾರ್ಖಾನೆಗಳು ಭೌತಿಕ ಉತ್ಪಾದನೆಗಳನ್ನು ತಯಾರಿಸುತ್ತವೆ, ಮಾರುತ್ತವೆ, ಮಾರುಕಟ್ಟೆಯ ಪರಿಸ್ಥಿತಿಯನ್ನು ಆಧರಿಸಿ ಲಾಭ ಮಾಡುತ್ತವೆ; ಇಲ್ಲವೇ ನಷ್ಟ ಭರಿಸುತ್ತವೆ. ಇದು ಆಹಾರ ನಿತ್ಯೋಪಯೋಗಿ ವಸ್ತುಗಳಿಗೆ ಅನ್ವಯಿಸುತ್ತದೆ. ಈಗ ಭೌತಿಕ ಅಸ್ತಿತ್ವ ಇಲ್ಲದ ಸೇವೆಗಳು ಹುಟ್ಟಿಕೊಂಡಿವೆ.
ಆದರೆ ಈ ಪುರೋಹಿತರು ನೋಡಿ-ವರ್ಷಾಂತರಗಳಿಂದ ಭೌತಿಕ ಅಸ್ತಿತ್ವವೇ ಇಲ್ಲದ ಕಾಲ್ಪನಿಕ ಸರಕುಗಳನ್ನು ಮಾರಿ ಲಾಭಗಳಿಸುತ್ತಿದ್ದಾರೆ. ಅದಕ್ಕೆ ಬಂಡವಾಳವನ್ನೂ ಅಂದರೆ ಸಾಮಗ್ರಿಗಳು, ದಕ್ಷಿಣೆ, ಫೀಸು ಇತರ ವೆಚ್ಚಗಳನ್ನು ಭಕ್ತರೇ ಭರಿಸಬೇಕು! ಪ್ರತೀ ಕಾರ್ಖಾನೆಯಲ್ಲಿ ಏನಾದರೂ ಉತ್ಪನ್ನ ಹುಟ್ಟುತ್ತದೆ. ಇವರ ಉತ್ಪನನ್ ಅಸ್ತಿತ್ವದಲ್ಲೇ ಇಲ್ಲದ ಪಾಪ, ಪುಣ್ಯ, ಪರಿಹಾರ, ಶ್ರೇಯಸ್ಸು ಮುಂತಾದ ಕಾಲ್ಪನಿಕ ಸರಕುಗಳೇ! ಇವನ್ನು ಅವರಿಗೆ ತೋರಿಸಲಾಗುವುದಿಲ್ಲ! ನಿಮಗೆ ನೋಡಲು ಆಗುವುದಿಲ್ಲ! ಕೇವಲ ಭ್ರಮಿಸಬಹುದು ಅಷ್ಟೇ!
ಉದಾಹರಣೆಗೆ ಯಾವುದೋ ಜೋಯಿಸರ ಮಾತು ಕೇಳಿ ನೀವು ಪೂಜೆ ಮಾಡಿಸಿದರೆನ್ನಿ. ಎಲ್ಲಾ ಸಾಮಗ್ರಿ, ವೆಚ್ಚ ನೀವೇ ಭರಿಸಬೇಕು. ಉತ್ಪನ್ನ? ನಿಮಗೆ ಏನು ಸಿಕ್ಕಿತು ಎಂಬುದನ್ನು ನೀವು ನೋಡಲು ಸಾಧ್ಯವೆ? ಆದರೆ ಜೋಯಿಸರಿಗೆ ಮಾತ್ರ ಭೌತಿಕವಾಗಿ ‘ಗಂಟು’ ಸಿಗುತ್ತದೆ.
ಈ ಕಾಲ್ಪನಿಕ ಸರಕುಗಳನ್ನು ನಮ್ಮ ಜೋಯಿಸರುಗಳು ಹೇಗೆ ಮಾರ್ಕೆಟ್ ಮಾಡುತ್ತಿದ್ದಾರೆ ನೋಡಿ. ನಮ್ಮ ನಂಬಿಕೆಯೇ ಇದಕ್ಕೆ ಆಧಾರ. ಪ್ರಧಾನಮಂತ್ರಿ ಬೇರೆಬೇರೆ ಖಾತೆಗಳನ್ನು ಬೇರೆಬೇರೆಯವರಿಗೆ ಹಂಚುವಂತೆ ಬೇರೆಬೇರೆ ದೇವರಿಗೆ ಹಂಚಿಬಿಟ್ಟಿದ್ದಾರೆ. ಸೃಷ್ಟಿ, ಪಾಲನೆ, ಲಯ ಒತ್ತಟ್ಟಿಗಿರಲಿ- ಧನ, ವಿದ್ಯೆ, ಸಂತಾನ ಇತ್ಯಾದಿಯಾಗಿ ನಿತ್ಯ ಜೀವನದ ವಿಷಯಗಳಿಗೂ ಒಬ್ಬೊಬ್ಬ ದೇವರು! ಹಣಕ್ಕೆ ಲಕ್ಷ್ಮಿ, ವಿದ್ಯೆಗೆ ಸರಸ್ವತಿ ಹೀಗೆ! ಇವರಲ್ಲಿ ಲಕ್ಷ್ಮಿಗಂತೂ ಹಲವಾರು ಖಾತೆಗಳು. ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ವಿದ್ಯಾಲಕ್ಷ್ಮೀ, ಗೃಹಲಕ್ಷ್ಮೀ, ಸಂತಾನಲಕ್ಷ್ಮೀ ಮುಂತಾದ ಹೆಸರುಗಳಲ್ಲೇ ಇದು ಸ್ಪಷ್ಟವಾಗುತ್ತದೆ. ಆಸ್ತಿಕರ ಪಾಲಿಗೆ ದೇವರೊಬ್ಬನೆ-ಆತ ಪರಮಾತ್ಮ ಎಂದು ಘೋಷಿಸಿ, ದೇವರನ್ನು ನಿರಾಕಾರ-ನಿರ್ಗುಣ’ ಎಂದು ಸಾರಿದ ಧರ್ಮವೊಂದರಲ್ಲಿ ಲೆಕ್ಕಕ್ಕೆ ಸಿಗದಷ್ಟು ದೇವರನ್ನು ಸೃಷ್ಟಿಸಿ, ಅವರಿಗೆ ತಾವೇ ಒಂದೊಂದು ಕರ್ತವ್ಯವನ್ನು ಹೇರಿ, ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪೂಜೆಗಳನ್ನು ಆವಿಷ್ಕರಿಸಿದ ಪುರೋಹಿತರಷ್ಟು ಬುದ್ಧಿವಂತರು, ಮಹಾ ವಿಜ್ಞಾನಿಗಳು ಪ್ರಪಂಚದಲ್ಲಿ ಬೇರಾರೂ ಇಲ್ಲ!
ವಿಜ್ಞಾನದ ಆವಿಷ್ಕಾರಗಳು! ‘ವರ್ಚುವಲ್ ವಲ್ರ್ಡ್’! ವಾವ್ ನಾವು, ನಮ್ಮ ಮಕ್ಕಳು ಮೊಬೈಲ್ ಫೋನಿನಲ್ಲಿ, ತಲೆಗೆ ಕಿರೀಟದಂತಹ ಕಿರೀಟ ಹಾಕ್ಕೊಂಡು, ಎಂತೆಂತೆಲ್ಲವನ್ನು ಅನುಭವಿಸಬಹುದು ಈ ಪ್ರಪಂಚವನ್ನೇ ಡ್ರಗ್ ಸೇವಕದಂತೆ ಮರೆಯಬಹುದು. ನಿಜವನ್ನು ಭ್ರಮೆಯಲ್ಲಿ ಕಾಣಬಹುದು. ಕಾರ್ಲ್‍ಮಾಕ್ರ್ಸ್ ಧರ್ಮವನ್ನು ಅಫೀಮು ಎಂದು ಕರೆದಾಗ ಅವನಿಗೆ ಏನಾದರೂ ಈ ರೀತಿ ಮುಂದಾಲೋಚನೆ ಇದ್ದಿರಬಹುದೆ? ಭಾರತದಲ್ಲಿ ಜಾತಿಪಾತಿ-ಚಪಾತಿ ಭಾರತದಲ್ಲಿ ಬಂಡವಾಳ ಇಲ್ಲದೆ, ಅವನ ಕಾಲಕ್ಕೇ ಬೆಳೆದಿರದ ಬಂಡವಾಳ ರಹಿತ ಶೋಷಣೆ ವ್ಯವಸ್ಥೆ ಇಲ್ಲಿ ಆಳವಾಗಿ ಬೇರೂರಿದೆ ಎಂದು ಕಾರ್ಲ್‍ಮಾಕ್ರ್ಸ್‍ಗೆ ಗೊತ್ತಿರಬಹುದೆ? ಹಾಂ! ಇಲ್ಲ!! ಅದಕ್ಕೆ ಹೇಳುವುದು-ಬ್ರಹ್ಮಜ್ಞಾನ-ಬ್ರಾಹ್ಮಣ ಸಂಜಾತರಿಗೆ(ಗೆಳೆಯರು ಕ್ಷಮಿಸಿ) ಮಾತ್ರ ಸಿಗುವಂತದ್ದು! ಅದರಿಂದಲೇ ಅವರು ಅತ್ಯಾಧುನಿಕ ವೈಜ್ಞಾನಿಕ, ಆರ್ಥಿಕ, ಪಾರಮಾರ್ಥಿಕ ಆವಿಷ್ಕಾರಗಳನ್ನು ಮಾಡಿದ್ದಾರೆ! ಅದನ್ನು ಶಿವನ ಸರ್ಜರಿ, ಅಣುಬಾಂಬ್-ಬ್ರಹ್ಮಾಸ್ತ್ರ-ಇತ್ಯಾದಿಯಾಗಿ ಸಾವಿರಾರು ರೀತಿಯಲ್ಲಿ ನಂಬಿದ್ದಾರೆ! ಯಾವುದೇ ರಾಕೆಟ್ ಹಾರಿಸಲು ಫ್ಯುಯೆಲ್-ಇಂಧನ ಬೇಕು. ಬಾಂಬ್ ತಯಾರಿಸಲೂ ಕೆಲವು ಮೂಲವಸ್ತುಗಳು-ಅಣುಬಾಂಬಿಗೆ ಕಾಲ್ಪನಿಕ ದೋಷಗಳೇ ಸಾಕು! ಬಂಡವಾಳ ನಿಮ್ಮದೇ! ಹೂವು-ಗೀವು-ಅದೂ-ಇದು! ನೀವು ಪ್ರಾನ್ಸ್-ಅಮೆರಿಕಾದ ಗುಲಾಮರಾಗಿರಬೇಕಾಗಿಲ್ಲ! ಅವರೇ ನಿಮಗೆ ರಿಡಕ್ಷನ್-ಕಮೀಷನ್ ಕೊಡುತ್ತಾರೆ! ಇಸ್ರೇಲನ್ನು ಮರೆಯದಿರಿ! ಕೇರಳ ಮಂತ್ರವಾದಿಗಳಂತೆ ಅವರೇ ಎಲ್ಲವನ್ನೂ ಮಾಡುತ್ತಾರೆ! ನೀವು ಸೂಟುಹಾಕಿ ಪೂಜೆಗೆ ಕುಳಿತರೆ ಪಡು! ನಾವು ಪೂಜೆಯಿಂದ ಮಳೆ ಬರಿಸಬಲ್ಲೆವು! ವಿನಾಶ ಮಾಡಬಲ್ಲೆವು! ದೇಶವನ್ನು ಬರೇ ಮಂತ್ರ ಯಾಗ ಹೋಮ ಹವನಗಳಿಂದ ನಿವಾರಿಸಬಲ್ಲೆವು! ಹೀಗೆ ಹೇಳುವ ಇವರಿಗೇ ನಮ್ಮ ಎಲ್ಲಾ ರಕ್ಷಣಾ ಬಜೆಟ್ ಕೊಟ್ಟುಬಿಡಿ! ಇವೆಲ್ಲವನ್ನೂ ನಂಬುವ ದೇಶ ರಾಜಕೀಯವಗಿ ಎಷ್ಟು ಪ್ರಬುದ್ಧವಾಗಿರಬಹುದು?
ವಿಜ್ಞಾನಿಗಳೇ ಜನಿವಾರಧಾರಿಗಳಾಗಿ-ಒಂದು ತಾವೇ ಸೃಷ್ಟಿಸಿದ ರಾಕೆಟನ್ನು ಉಡಾಯಿಸುವಾಗ ಒಂದು ಸರಳ ಪ್ರಾರ್ಥನೆ ಅಥವಾ ವಿಶ್ ಬಿಟ್ಟು, ಹೋಮ ಹವನಗಳನ್ನು ಮಾಡುವುದಾದರೆ, ಪುರಾಣಗಳ ಎಲ್ಲಾ ಆಗ್ನೇಯಾಸ್ತ್ರ ಬ್ರಹ್ಮಾಸ್ತ್ರಗಳನ್ನು ಹುಡುಕಲು ಬೊಮ್ಮನ್ ವಿಶ್ವವಿದ್ಯಾನಿಲಯ ತೆರೆಯಬಹುದು! ಸಂಶೋಧನೆಯ ಹಣ ವಿಜ್ಞಾನಿಗಳಿಗೆ ಯಾಕೆ ಹೋಗಬೇಕು? ಅದು ನಮ್ಮ ಜ್ಯೋತಿಷ್ಯದವರ ಪಾಲಲ್ಲವೇ? ಕರ್ನಾಟಕ ಸರಕಾರ ಇದಕ್ಕೆ ಮುಂದಾಗಬೇಕು!
ಎಲ್ಲಾ ಜ್ಯೋತಿಷಿಗಳನ್ನು ಒಟ್ಟು ಸೇರಿಸಿ ಒಂದು ಸವೇಶನ ಮಾಡಿಸಿ! ಭಾಗವಹಿಸಿದವರಿಗೆಲ್ಲಾ ಒಂದೊಂದು ಪಾರ್ಟಿಯ ಸರ್ಟಿಫಿಕೇಟ್ ಕೊಡಿ! ಲೈಸನ್ಸ್ ಅದತ್ಯವಿಲ್ಲ! ರಾಜ್ಯಕ್ಕೆ ದೇಶಕ್ಕೆ ಬೇಕಾದ ಎಲ್ಲಾ ಜ್ಯೋತಿಷ್ಯ ಕೇಳಿಕೊಳ್ಳಿ! ಎದಕ್ಕೆ ಯಡ್ಡಿ,ಚಡ್ಡಿ, ಸಿದ್ದು, ಕುಮ್ಮಿ, ಮೊದ್ದು, ಪಪ್ಪು, ಚಾ ಎಂದೇನೂ ಇಲ್ಲ! ಎಲ್ಲರೂ ಬಂದು ದೇವರ ಸರಕಾರವನ್ನು ‘ಜನರ ಸರಕಾರ’ ಮಾಡಿ!
ಇಷ್ಟೆಲ್ಲಾ ಹೇಳಿದರೂ ಜ್ಯೋತಿಷ್ಯವನ್ನು ನಂಬುವವರು ನಂಬುತ್ತಲೇ ಇರಲಿ! ಸರಕಾರವೇ ಈ ಬರವಣಿಗೆಯ ವಿರುದ್ಧ ನಿಂತು ಪೋಷಿಸುತ್ತಿರುವಾಗ-ಓಟು ಕೊಟ್ಟು ಗೆಲ್ಲಿಸುವ ಜನಸಾಮಾನ್ಯರು ಬದಲಾಗುತ್ತಾರೋ ನನಗೆ ಸಂಶಯ! ಈ ತನಕ ನನ್ನ ಪ್ರವರ ಓದಿದ್ದಕ್ಕೆ ಧನ್ಯವಾದ!
ಮುಂದೆ ‘ನ್ಯಾಯಪಥ’ ಅವಕಾಶ ಕೊಟ್ಟರೆ ಮತ್ತೆ ಭೇಟಿ!

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...