Homeಸಾಮಾಜಿಕಶೂನ್ಯ ಬಂಡವಾಳ-ಶೂನ್ಯ ಸರಕು-ಅಪಾರ ಲಾಭ!

ಶೂನ್ಯ ಬಂಡವಾಳ-ಶೂನ್ಯ ಸರಕು-ಅಪಾರ ಲಾಭ!

- Advertisement -
- Advertisement -

ಮಾನವ ಸಮಾಜದಲ್ಲಿ ಆರ್ಥಿಕ ವ್ಯವಸ್ಥೆ ಬೆಳೆದುಬಂದಂತೆಲ್ಲಾ ಬಂಡವಾಳ ಶಾಹಿ ವ್ಯವಸ್ಥೆ ಬಂತು. ಆಧುನಿಕ ವ್ಯಾಪಾರ ಸಂಸ್ಥೆಯೂ ಬಂತು. ನಾವು ಉದಾಹರಣೆಗೆ ಎಕ್ಸ್ ಎಂಬ ಒಂದು ಸಾರ್ವಜನಿಕ ಬಂಡವಾಳದ ಒಂದು ಕಂಪೆನಿಯನ್ನು ಊಹಿಸಿಕೊಳ್ಳೋಣ. ಅದರಲ್ಲಿ ಸಾವಿರಾರು ಹೂಡಿಕೆದಾರರ ಬಂಡವಾಳ ಇರುತ್ತದೆ. ಒಬ್ಬರಿಗೆ ಇನ್ನೊಬ್ಬರ ಪರಿಚಯ ಇರುವುದಿಲ್ಲ. ಅದಕ್ಕೆ ಅಧ್ಯಕ್ಷರಾಗಿ ಒಂದು ಆಡಳಿತ ಮಂಡಳಿ ಇರುತ್ತದೆ. ಅದರ ಮೇಲಿನ ನಂಬಿಕೆಯಿಂದ ಜನರು ಹಣ ಹೂಡುತ್ತಾರೆ. ಆದರೆ ಅದಕ್ಕೆ ಇರುವುದು ಕಾಲ್ಪನಿಕ ಕಾನೂನು ಬದ್ಧ ಅಸ್ತಿತ್ವ ಮಾತ್ರ ಇರುವುದು ದೈಹಿಕ ಅಸ್ತಿತ್ವ ಇರುವುದಿಲ್ಲ. ನಮ್ಮ ಈ ‘ಎಕ್ಸ್’ ಕಂಪೆನಿ ಕಾರು ಉತ್ಪಾದಿಸುತ್ತದೆ ಎನ್ನೋಣ. ನೀವು ಕೊಂಡ ಕಾರು ಸರಿಯಿಲ್ಲವಾದರೆ ನೀವು ಕಂಪೆನಿಯ ಮೇಲೆ ಕೇಸು ಹಾಕಬಹುದು ಅದರ ಅಧ್ಯಕ್ಷ ಅದಾನಿಯೋ, ಅಂಬಾನಿಯ ಮೇಲಲ್ಲ. ಆದರೆ ಅದಕ್ಕೆ ಕಾನೂನಿನ ಅಸ್ತಿತ್ವ ಮಾತ್ರ ಇರುವುದು!
ಉದಾಹರಣೆಗೆ ಈ ‘ಎಕ್ಸ್’ ಕಂಪೆನಿಯ ಎಲ್ಲಾ ಕಾರುಗಳು, ಕಾರ್ಖಾನೆಗಳು ನಾಶವಾದರೂ ‘ಎಕ್ಸ್’ ಕಂಪೆನಿ ಕಾನೂನು ಬದ್ಧವಾಗಿ ಅಸ್ತಿತ್ವದಲ್ಲಿ ಇರುತ್ತದೆ. ಅದೇ ಹೆಸರಲ್ಲಿ ಮುಂದೆ ಕಾರ್ಖಾನೆ ಸ್ಥಾಪಿಸಿ, ಕಾರುಗಳನ್ನು ಉತ್ಪಾದನೆ ಮಾಡಿ ಮಾರಲು ಸಾಧ್ಯವಿದೆ! ಅದನ್ನು ಸೂಕ್ಷ್ಮವಾಗಿ ಯೋಚಿಸೋಣ. ನಮ್ಮ ದೇವರು ಮತ್ತು ಧರ್ಮಗಳಿಗೂ ಇರುವುದು ‘ಸಾಮೂಹಿಕ ಕಲ್ಪನೆಯ ಅಸ್ತಿತ್ವ’ ಮಾತ್ರ! ಅವುಗಳನ್ನು ಪ್ರತ್ಯಕ್ಷವಾಗಿ ತೋರಿಸಲಾಗದು. ಈ ಸಾಮೂಹಿಕ ಕಾಲ್ಪನಿಕ ಅಸ್ತಿತ್ವ’ವನ್ನೇ ನಮ್ಮ ಜೋಯಿಸರುಗಳು ಬಂಡವಾಳ ಮಾಡಿಕೊಂಡಿದ್ದಾರೆ!
ಕಂಪೆನಿಗೆ ಭೌತಿಕ ಅಸ್ತಿತ್ವ ಇಲ್ಲದಿದ್ದರೂ ಅದರ ಕಾರ್ಖಾನೆಗಳು ಭೌತಿಕ ಉತ್ಪಾದನೆಗಳನ್ನು ತಯಾರಿಸುತ್ತವೆ, ಮಾರುತ್ತವೆ, ಮಾರುಕಟ್ಟೆಯ ಪರಿಸ್ಥಿತಿಯನ್ನು ಆಧರಿಸಿ ಲಾಭ ಮಾಡುತ್ತವೆ; ಇಲ್ಲವೇ ನಷ್ಟ ಭರಿಸುತ್ತವೆ. ಇದು ಆಹಾರ ನಿತ್ಯೋಪಯೋಗಿ ವಸ್ತುಗಳಿಗೆ ಅನ್ವಯಿಸುತ್ತದೆ. ಈಗ ಭೌತಿಕ ಅಸ್ತಿತ್ವ ಇಲ್ಲದ ಸೇವೆಗಳು ಹುಟ್ಟಿಕೊಂಡಿವೆ.
ಆದರೆ ಈ ಪುರೋಹಿತರು ನೋಡಿ-ವರ್ಷಾಂತರಗಳಿಂದ ಭೌತಿಕ ಅಸ್ತಿತ್ವವೇ ಇಲ್ಲದ ಕಾಲ್ಪನಿಕ ಸರಕುಗಳನ್ನು ಮಾರಿ ಲಾಭಗಳಿಸುತ್ತಿದ್ದಾರೆ. ಅದಕ್ಕೆ ಬಂಡವಾಳವನ್ನೂ ಅಂದರೆ ಸಾಮಗ್ರಿಗಳು, ದಕ್ಷಿಣೆ, ಫೀಸು ಇತರ ವೆಚ್ಚಗಳನ್ನು ಭಕ್ತರೇ ಭರಿಸಬೇಕು! ಪ್ರತೀ ಕಾರ್ಖಾನೆಯಲ್ಲಿ ಏನಾದರೂ ಉತ್ಪನ್ನ ಹುಟ್ಟುತ್ತದೆ. ಇವರ ಉತ್ಪನನ್ ಅಸ್ತಿತ್ವದಲ್ಲೇ ಇಲ್ಲದ ಪಾಪ, ಪುಣ್ಯ, ಪರಿಹಾರ, ಶ್ರೇಯಸ್ಸು ಮುಂತಾದ ಕಾಲ್ಪನಿಕ ಸರಕುಗಳೇ! ಇವನ್ನು ಅವರಿಗೆ ತೋರಿಸಲಾಗುವುದಿಲ್ಲ! ನಿಮಗೆ ನೋಡಲು ಆಗುವುದಿಲ್ಲ! ಕೇವಲ ಭ್ರಮಿಸಬಹುದು ಅಷ್ಟೇ!
ಉದಾಹರಣೆಗೆ ಯಾವುದೋ ಜೋಯಿಸರ ಮಾತು ಕೇಳಿ ನೀವು ಪೂಜೆ ಮಾಡಿಸಿದರೆನ್ನಿ. ಎಲ್ಲಾ ಸಾಮಗ್ರಿ, ವೆಚ್ಚ ನೀವೇ ಭರಿಸಬೇಕು. ಉತ್ಪನ್ನ? ನಿಮಗೆ ಏನು ಸಿಕ್ಕಿತು ಎಂಬುದನ್ನು ನೀವು ನೋಡಲು ಸಾಧ್ಯವೆ? ಆದರೆ ಜೋಯಿಸರಿಗೆ ಮಾತ್ರ ಭೌತಿಕವಾಗಿ ‘ಗಂಟು’ ಸಿಗುತ್ತದೆ.
ಈ ಕಾಲ್ಪನಿಕ ಸರಕುಗಳನ್ನು ನಮ್ಮ ಜೋಯಿಸರುಗಳು ಹೇಗೆ ಮಾರ್ಕೆಟ್ ಮಾಡುತ್ತಿದ್ದಾರೆ ನೋಡಿ. ನಮ್ಮ ನಂಬಿಕೆಯೇ ಇದಕ್ಕೆ ಆಧಾರ. ಪ್ರಧಾನಮಂತ್ರಿ ಬೇರೆಬೇರೆ ಖಾತೆಗಳನ್ನು ಬೇರೆಬೇರೆಯವರಿಗೆ ಹಂಚುವಂತೆ ಬೇರೆಬೇರೆ ದೇವರಿಗೆ ಹಂಚಿಬಿಟ್ಟಿದ್ದಾರೆ. ಸೃಷ್ಟಿ, ಪಾಲನೆ, ಲಯ ಒತ್ತಟ್ಟಿಗಿರಲಿ- ಧನ, ವಿದ್ಯೆ, ಸಂತಾನ ಇತ್ಯಾದಿಯಾಗಿ ನಿತ್ಯ ಜೀವನದ ವಿಷಯಗಳಿಗೂ ಒಬ್ಬೊಬ್ಬ ದೇವರು! ಹಣಕ್ಕೆ ಲಕ್ಷ್ಮಿ, ವಿದ್ಯೆಗೆ ಸರಸ್ವತಿ ಹೀಗೆ! ಇವರಲ್ಲಿ ಲಕ್ಷ್ಮಿಗಂತೂ ಹಲವಾರು ಖಾತೆಗಳು. ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ವಿದ್ಯಾಲಕ್ಷ್ಮೀ, ಗೃಹಲಕ್ಷ್ಮೀ, ಸಂತಾನಲಕ್ಷ್ಮೀ ಮುಂತಾದ ಹೆಸರುಗಳಲ್ಲೇ ಇದು ಸ್ಪಷ್ಟವಾಗುತ್ತದೆ. ಆಸ್ತಿಕರ ಪಾಲಿಗೆ ದೇವರೊಬ್ಬನೆ-ಆತ ಪರಮಾತ್ಮ ಎಂದು ಘೋಷಿಸಿ, ದೇವರನ್ನು ನಿರಾಕಾರ-ನಿರ್ಗುಣ’ ಎಂದು ಸಾರಿದ ಧರ್ಮವೊಂದರಲ್ಲಿ ಲೆಕ್ಕಕ್ಕೆ ಸಿಗದಷ್ಟು ದೇವರನ್ನು ಸೃಷ್ಟಿಸಿ, ಅವರಿಗೆ ತಾವೇ ಒಂದೊಂದು ಕರ್ತವ್ಯವನ್ನು ಹೇರಿ, ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪೂಜೆಗಳನ್ನು ಆವಿಷ್ಕರಿಸಿದ ಪುರೋಹಿತರಷ್ಟು ಬುದ್ಧಿವಂತರು, ಮಹಾ ವಿಜ್ಞಾನಿಗಳು ಪ್ರಪಂಚದಲ್ಲಿ ಬೇರಾರೂ ಇಲ್ಲ!
ವಿಜ್ಞಾನದ ಆವಿಷ್ಕಾರಗಳು! ‘ವರ್ಚುವಲ್ ವಲ್ರ್ಡ್’! ವಾವ್ ನಾವು, ನಮ್ಮ ಮಕ್ಕಳು ಮೊಬೈಲ್ ಫೋನಿನಲ್ಲಿ, ತಲೆಗೆ ಕಿರೀಟದಂತಹ ಕಿರೀಟ ಹಾಕ್ಕೊಂಡು, ಎಂತೆಂತೆಲ್ಲವನ್ನು ಅನುಭವಿಸಬಹುದು ಈ ಪ್ರಪಂಚವನ್ನೇ ಡ್ರಗ್ ಸೇವಕದಂತೆ ಮರೆಯಬಹುದು. ನಿಜವನ್ನು ಭ್ರಮೆಯಲ್ಲಿ ಕಾಣಬಹುದು. ಕಾರ್ಲ್‍ಮಾಕ್ರ್ಸ್ ಧರ್ಮವನ್ನು ಅಫೀಮು ಎಂದು ಕರೆದಾಗ ಅವನಿಗೆ ಏನಾದರೂ ಈ ರೀತಿ ಮುಂದಾಲೋಚನೆ ಇದ್ದಿರಬಹುದೆ? ಭಾರತದಲ್ಲಿ ಜಾತಿಪಾತಿ-ಚಪಾತಿ ಭಾರತದಲ್ಲಿ ಬಂಡವಾಳ ಇಲ್ಲದೆ, ಅವನ ಕಾಲಕ್ಕೇ ಬೆಳೆದಿರದ ಬಂಡವಾಳ ರಹಿತ ಶೋಷಣೆ ವ್ಯವಸ್ಥೆ ಇಲ್ಲಿ ಆಳವಾಗಿ ಬೇರೂರಿದೆ ಎಂದು ಕಾರ್ಲ್‍ಮಾಕ್ರ್ಸ್‍ಗೆ ಗೊತ್ತಿರಬಹುದೆ? ಹಾಂ! ಇಲ್ಲ!! ಅದಕ್ಕೆ ಹೇಳುವುದು-ಬ್ರಹ್ಮಜ್ಞಾನ-ಬ್ರಾಹ್ಮಣ ಸಂಜಾತರಿಗೆ(ಗೆಳೆಯರು ಕ್ಷಮಿಸಿ) ಮಾತ್ರ ಸಿಗುವಂತದ್ದು! ಅದರಿಂದಲೇ ಅವರು ಅತ್ಯಾಧುನಿಕ ವೈಜ್ಞಾನಿಕ, ಆರ್ಥಿಕ, ಪಾರಮಾರ್ಥಿಕ ಆವಿಷ್ಕಾರಗಳನ್ನು ಮಾಡಿದ್ದಾರೆ! ಅದನ್ನು ಶಿವನ ಸರ್ಜರಿ, ಅಣುಬಾಂಬ್-ಬ್ರಹ್ಮಾಸ್ತ್ರ-ಇತ್ಯಾದಿಯಾಗಿ ಸಾವಿರಾರು ರೀತಿಯಲ್ಲಿ ನಂಬಿದ್ದಾರೆ! ಯಾವುದೇ ರಾಕೆಟ್ ಹಾರಿಸಲು ಫ್ಯುಯೆಲ್-ಇಂಧನ ಬೇಕು. ಬಾಂಬ್ ತಯಾರಿಸಲೂ ಕೆಲವು ಮೂಲವಸ್ತುಗಳು-ಅಣುಬಾಂಬಿಗೆ ಕಾಲ್ಪನಿಕ ದೋಷಗಳೇ ಸಾಕು! ಬಂಡವಾಳ ನಿಮ್ಮದೇ! ಹೂವು-ಗೀವು-ಅದೂ-ಇದು! ನೀವು ಪ್ರಾನ್ಸ್-ಅಮೆರಿಕಾದ ಗುಲಾಮರಾಗಿರಬೇಕಾಗಿಲ್ಲ! ಅವರೇ ನಿಮಗೆ ರಿಡಕ್ಷನ್-ಕಮೀಷನ್ ಕೊಡುತ್ತಾರೆ! ಇಸ್ರೇಲನ್ನು ಮರೆಯದಿರಿ! ಕೇರಳ ಮಂತ್ರವಾದಿಗಳಂತೆ ಅವರೇ ಎಲ್ಲವನ್ನೂ ಮಾಡುತ್ತಾರೆ! ನೀವು ಸೂಟುಹಾಕಿ ಪೂಜೆಗೆ ಕುಳಿತರೆ ಪಡು! ನಾವು ಪೂಜೆಯಿಂದ ಮಳೆ ಬರಿಸಬಲ್ಲೆವು! ವಿನಾಶ ಮಾಡಬಲ್ಲೆವು! ದೇಶವನ್ನು ಬರೇ ಮಂತ್ರ ಯಾಗ ಹೋಮ ಹವನಗಳಿಂದ ನಿವಾರಿಸಬಲ್ಲೆವು! ಹೀಗೆ ಹೇಳುವ ಇವರಿಗೇ ನಮ್ಮ ಎಲ್ಲಾ ರಕ್ಷಣಾ ಬಜೆಟ್ ಕೊಟ್ಟುಬಿಡಿ! ಇವೆಲ್ಲವನ್ನೂ ನಂಬುವ ದೇಶ ರಾಜಕೀಯವಗಿ ಎಷ್ಟು ಪ್ರಬುದ್ಧವಾಗಿರಬಹುದು?
ವಿಜ್ಞಾನಿಗಳೇ ಜನಿವಾರಧಾರಿಗಳಾಗಿ-ಒಂದು ತಾವೇ ಸೃಷ್ಟಿಸಿದ ರಾಕೆಟನ್ನು ಉಡಾಯಿಸುವಾಗ ಒಂದು ಸರಳ ಪ್ರಾರ್ಥನೆ ಅಥವಾ ವಿಶ್ ಬಿಟ್ಟು, ಹೋಮ ಹವನಗಳನ್ನು ಮಾಡುವುದಾದರೆ, ಪುರಾಣಗಳ ಎಲ್ಲಾ ಆಗ್ನೇಯಾಸ್ತ್ರ ಬ್ರಹ್ಮಾಸ್ತ್ರಗಳನ್ನು ಹುಡುಕಲು ಬೊಮ್ಮನ್ ವಿಶ್ವವಿದ್ಯಾನಿಲಯ ತೆರೆಯಬಹುದು! ಸಂಶೋಧನೆಯ ಹಣ ವಿಜ್ಞಾನಿಗಳಿಗೆ ಯಾಕೆ ಹೋಗಬೇಕು? ಅದು ನಮ್ಮ ಜ್ಯೋತಿಷ್ಯದವರ ಪಾಲಲ್ಲವೇ? ಕರ್ನಾಟಕ ಸರಕಾರ ಇದಕ್ಕೆ ಮುಂದಾಗಬೇಕು!
ಎಲ್ಲಾ ಜ್ಯೋತಿಷಿಗಳನ್ನು ಒಟ್ಟು ಸೇರಿಸಿ ಒಂದು ಸವೇಶನ ಮಾಡಿಸಿ! ಭಾಗವಹಿಸಿದವರಿಗೆಲ್ಲಾ ಒಂದೊಂದು ಪಾರ್ಟಿಯ ಸರ್ಟಿಫಿಕೇಟ್ ಕೊಡಿ! ಲೈಸನ್ಸ್ ಅದತ್ಯವಿಲ್ಲ! ರಾಜ್ಯಕ್ಕೆ ದೇಶಕ್ಕೆ ಬೇಕಾದ ಎಲ್ಲಾ ಜ್ಯೋತಿಷ್ಯ ಕೇಳಿಕೊಳ್ಳಿ! ಎದಕ್ಕೆ ಯಡ್ಡಿ,ಚಡ್ಡಿ, ಸಿದ್ದು, ಕುಮ್ಮಿ, ಮೊದ್ದು, ಪಪ್ಪು, ಚಾ ಎಂದೇನೂ ಇಲ್ಲ! ಎಲ್ಲರೂ ಬಂದು ದೇವರ ಸರಕಾರವನ್ನು ‘ಜನರ ಸರಕಾರ’ ಮಾಡಿ!
ಇಷ್ಟೆಲ್ಲಾ ಹೇಳಿದರೂ ಜ್ಯೋತಿಷ್ಯವನ್ನು ನಂಬುವವರು ನಂಬುತ್ತಲೇ ಇರಲಿ! ಸರಕಾರವೇ ಈ ಬರವಣಿಗೆಯ ವಿರುದ್ಧ ನಿಂತು ಪೋಷಿಸುತ್ತಿರುವಾಗ-ಓಟು ಕೊಟ್ಟು ಗೆಲ್ಲಿಸುವ ಜನಸಾಮಾನ್ಯರು ಬದಲಾಗುತ್ತಾರೋ ನನಗೆ ಸಂಶಯ! ಈ ತನಕ ನನ್ನ ಪ್ರವರ ಓದಿದ್ದಕ್ಕೆ ಧನ್ಯವಾದ!
ಮುಂದೆ ‘ನ್ಯಾಯಪಥ’ ಅವಕಾಶ ಕೊಟ್ಟರೆ ಮತ್ತೆ ಭೇಟಿ!

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....