Homeಮುಖಪುಟಇವರ ಹೋರಾಟದ ಬದುಕಿಗೆ ನಮ್ಮದೊಂದು ಸಲಾಮ್

ಇವರ ಹೋರಾಟದ ಬದುಕಿಗೆ ನಮ್ಮದೊಂದು ಸಲಾಮ್

- Advertisement -
- Advertisement -

ನೀವೆಲ್ಲರೂ ಹಿಜಡಾ ಸಮುದಾಯದವರನ್ನು ಬಹಳ ಸಲ ನೋಡಿರುತ್ತೀರಿ. ಆದಾಗ್ಯೂ ನಮ್ಮ ಬಹುತೇಕ ಜನ ಈ ಲೆಸ್ಬಿಯನ್, ಗೇ, ಬೈಸೆಕ್ಷುವಲ್, ಟ್ರಾನ್ಸ್‍ಜೆಂಡರ್, ಕ್ವೀರ್ (LGBTQ) ನಂತಹ ಪದಗಳು ಪಾಶ್ಚಾತ್ಯದಿಂದ ಈಗತಾನೇ ಭಾರತದ ಸಂಸ್ಕøತಿಯೊಳಕ್ಕೆ ಕಾಲಿಡುತ್ತಿರುವ ಹೊಸ ಪರಿಕಲ್ಪನೆಗಳು ಅಂತಲೇ ಭಾವಿಸಿದ್ದಾರೆ.
ನನ್ನ ಈ ಲೇಖನಗಳ ಸರಣಿಯಲ್ಲಿ ಜಾಗತಿಕ ಮಟ್ಟದ ಐಉಃಖಿಕಿ ಸಮುದಾಯಗಳಿಗೂ, ನಮ್ಮದೇ ನೆಲದ ಸಾಂಸ್ಕøತಿಕ ರಚನೆಗಳಾದ ಹಿಜಡಾ ಬಳಗಗಳಿಗೂ ಇರುವ ರಾಜಕೀಯ ವ್ಯತ್ಯಾಸ ಹಾಗೂ ಸಂಬಂಧಗಳ ಬಗ್ಗೆ ವಿವರಿಸಲು ಪ್ರಯತ್ನಿಸುತ್ತೇನೆ. ಇವುಗಳ ನಡುವಿನ ಸಂಬಂಧ ಏನು ಅಂತಂದ್ರೆ, ಈ ಪರ್ಯಾಯ ಲಿಂಗಿಗಳನ್ನು ವಿವರಿಸಲು ನಮ್ಮಲ್ಲಿ ಬಳಸುವ ಬಹಳಷ್ಟು ಪದಗಳು ಇಂಗ್ಲಿಷ್‍ನಲ್ಲಿ ಇದೇ ಉದ್ದೇಶಕ್ಕೆ ಬಳಸಲಾಗುವ ಪದಗಳು ನೀಡುವ ಅರ್ಥವನ್ನೇ ಪ್ರತಿಫಲಿಸುತ್ತವೆ. ಇನ್ನು ಆ ವಿದೇಶಿ ಸಮುದಾಯಗಳಿಗೂ ನಮ್ಮ ಹಿಜಡಾ ಬಳಗಗಳಿಗೂ ಇರುವ ರಾಜಕೀಯ ವ್ಯತ್ಯಾಸ ಅಂದ್ರೆ, ನಮ್ಮ ಭಾರತೀಯ ಸಂಸ್ಕøತಿಯು ಈ ಜಗತ್ತನ್ನು ಲೈಂಗಿಕ ಅಭಿವ್ಯಕ್ತಿಯ ಚೌಕಟ್ಟಿನಲ್ಲಿ ನೋಡದೇ ಲಿಂಗತ್ವದ ಆಧಾರದಲ್ಲೇ ನೋಡುವುದಾಗಿದೆ. ಇದನ್ನು ಮುಂದಿನ ಬರಹಗಳಲ್ಲಿ ಚರ್ಚಿಸುತ್ತೇನೆ. ಸದ್ಯ ಈಗ ನಾನು ಹೇಳೋದಿಷ್ಟೆ; ಒಬ್ಬ ವ್ಯಕ್ತಿಯ ಜೈವಿಕ ಲಿಂಗ (ದೇಹ), ಲಿಂಗತ್ವ (ಲಿಂಗಕ್ಕೆ ಅನುಗುಣವಾದ ಸಾಮಾಜಿಕ ಪಾತ್ರ) ಮತ್ತು ಲೈಂಗಿಕತೆ (ಆ ವ್ಯಕ್ತಿ ಆಕರ್ಷಣೆಗೊಳ್ಳುವ ಲಿಂಗ/ಗಳು) ಇವೆಲ್ಲವುಗಳು ಒಂದೇ ಅಲ್ಲ! ಇವುಗಳ ನಡುವೆ ಅಪಾರ ವ್ಯತ್ಯಾಸವಿದೆ.
ಮೊದಲು ನಮ್ಮ ಹಿಜಡಾ ಸಮುದಾಯವನ್ನು ಅರ್ಥ ಮಾಡಿಕೊಳ್ಳೋಣ. ಸಾಮಾನ್ಯ ಗ್ರಹಿಕೆಯಲ್ಲಿ ಹಿಜಡಾ ವ್ಯಕ್ತಿಗಳನ್ನು ಅನೇಕ ಸಲ `ತೃತೀಯ ಲಿಂಗಿಗಳು’ ಎಂದು ಪರಿಗಣಿಸಲಾಗುತ್ತೆ. ಒಂದು ಮಗು ಹುಟ್ಟಿದಾಗ ವೈದ್ಯರು ಆ ಮಗುವನ್ನು ಗಂಡು ಅಥವಾ ಹೆಣ್ಣು ಎಂದು ಗುರುತಿಸುತ್ತಾರೆ. ಎಲ್ಲಾ ಹಿಜಡಾ ಸದಸ್ಯರ ದೇಹಗಳು ಹುಟ್ಟುವ ಸಂದರ್ಭದಲ್ಲೆ ಅತ್ತ ಗಂಡೂ ಅಲ್ಲದ, ಇತ್ತ ಹೆಣ್ಣೂ ಅಲ್ಲದಂತಹ ದೇಹ ರಚನೆಯನ್ನು ಹೊಂದಿರುತ್ತಾರೆ ಅನ್ನೋದು ಸಾಮಾನ್ಯವಾಗಿ ನಾವೆಲ್ಲರು ತಿಳಿದಿರುವ ತಪ್ಪು ಕಲ್ಪನೆ. ಇಂತಹ ದೇಹರಚನೆಯನ್ನು ವಿವರಿಸಲು ಇಂಗ್ಲಿಷಿನಲ್ಲಿ `Iಟಿಣeಡಿsex’ ಎಂಬ ಪದವಿದೆ. ಈ `ಇಂಟರ್‍ಸೆಕ್ಸ್’ ಬಗೆಯವರು ಮಾತ್ರ ಗಂಡಿನ ಅಥವಾ ಹೆಣ್ಣಿನ, ನಿರ್ದಿಷ್ಟ ಲಿಂಗದ ದೇಹ ಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ ಬಹಳಷ್ಟು ಹಿಜಡಾ ಸದಸ್ಯರು `ಇಂಟರ್‍ಸೆಕ್ಸ್’ ಬಗೆಗೆ ಸೇರುವವರಲ್ಲ! ಅಂದರೆ, ಅವರು ಹುಟ್ಟಿದಾಗಿನ ದೇಹ ಲಕ್ಷಣಗಳನ್ನು ಗಮನಿಸುವ ಸ್ವತಃ ವೈದ್ಯರೇ ಆ ಮಗುವನ್ನು `ಗಂಡು ಮಗು’ ಎಂದೇ ಘೋಷಿಸುತ್ತಾರೆ. ಅವರ ಹುಟ್ಟು ಅಷ್ಟು ಸಹಜವಾಗಿರುತ್ತೆ. ಹುಟ್ಟಿದಾಗ ಗಂಡು ಮಗು ಅಂತಲೇ ಗುರುತಿಸಿರಲಿ ಅಥವಾ ಇಂಟರ್‍ಸೆಕ್ಸ್ ಎಂದೇ ಐಡೆಂಟಿಫೈ ಮಾಡಿರಲಿ, ಪ್ರಪಂಚದ ಯಾವುದೇ ಭಾಗದ ಹಿಜಡಾ ಸದಸ್ಯರು `ಲಿಂಗಪರಿವರ್ತಿತ ಮಹಿಳೆ’ (Transgender woman)ಯ ಬದುಕನ್ನು ಹಾದು ಬರಲೇಬೇಕಾಗುತ್ತದೆ.
ಹಾಗಾದ್ರೆ ಈ `ಟ್ರಾನ್ಸ್‍ಜೆಂಡರ್ ಮಹಿಳೆ’ ಅಂದ್ರೆ ಯಾರು? ಹುಟ್ಟಿದಾಗ ಈ ಸಮಾಜ ಮತ್ತು ವೈದ್ಯರು ಯಾವ ಲಿಂಗದವರೆಂದು ನಿಗದಿಪಡಿಸುತ್ತೋ, ಅದೇ ಲಿಂಗದ ರೂಪದಲ್ಲೇ ಬದುಕುವುದಕ್ಕೆ ವಿಪರೀತ ದೈಹಿಕ ಮತ್ತು ಸಾಮಾಜಿಕ ಯಾತನೆ ಅನುಭವಿಸುವವರೇ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳು. ಇನ್ನು ಹುಟ್ಟಿದಾಗ ಗಂಡು ಎಂದೋ ಅಥವಾ `ಇಂಟರ್‍ಸೆಕ್ಸ್’ ಎಂದೋ ಕರೆಯಲ್ಪಟ್ಟು, ಮುಂದೆ ಬೆಳೆಯುತ್ತಾ ಯಾರು ತಮ್ಮನ್ನು ತಾವು ಮಹಿಳೆಯಂತೆ ಉಪಚರಿಸಿಕೊಳ್ಳ ಬಯಸುತ್ತಾರೊ ಅವರೇ ಟ್ರಾನ್ಸ್‍ಜೆಂಡರ್ ಮಹಿಳೆಯರು. ಕೆಲವರು ತಮ್ಮನ್ನು ತಾವು `ಟ್ರಾನ್ಸ್‍ಜೆಂಡರ್ ಮಹಿಳೆ’ ಎಂದು ಕರೆದುಕೊಂಡರೆ ಮತ್ತೆ ಕೆಲವರು ಸಂಪೂರ್ಣವಾಗಿ `ಮಹಿಳೆ’ ಎಂದೂ, ಇನ್ನೂ ಕೆಲವರು `ತೃತೀಯ ಲಿಂಗಿ’ಗಳೆಂದೂ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಕರ್ನಾಟಕದಲ್ಲಿ ಇಂತವರನ್ನು ಮಂಗಳಮುಖಿ ಎಂತಲೂ, ತಮಿಳಿನಲ್ಲಿ ತಿರುನಂಗಾಯಿ ಅಥವಾ ಅರವಾಣಿ ಎಂತಲೂ, ಹಿಂದಿಯಲ್ಲಿ ಕಿನ್ನರ್ ಎಂದೂ ಆಯಾ ಭಾಗದ ಪ್ರಾದೇಶಿಕ ರೂಢಿ ನಾಮದೊಂದಿಗೆ ಗುರುತಿಸಲಾಗುತ್ತೆ.
ಹಾಗಾಗಿ, ಲಿಂಗ ಪರಿವರ್ತಿತರು ಮತ್ತು ಇಂಟರ್‍ಸೆಕ್ಸ್ ಸಮುದಾಯದ ವ್ಯಕ್ತಿಗಳು ಒಟ್ಟಾಗಿ, ಪರಸ್ಪರ ಬೆನ್ನೆಲುಬಾಗಿ ಜೀವಿಸುವ ಒಂದು ಸಾಂಸ್ಕøತಿಕ ಸಮೂಹ ವ್ಯವಸ್ಥೆಯನ್ನೇ ಹಿಜಡಾ ಸಮುದಾಯ ಅಂತ ಕರೆಯಬಹುದು. ಅಲ್ಲಿ ಅವರು ತಮಗಿಷ್ಟವಾದ ಲಿಂಗತ್ವದ ರೂಪದಲ್ಲಿ ಬದುಕುತ್ತಾರೆ, ಮತ್ತು ತಾವೇ ಗುರುತಿಸಿಕೊಳ್ಳಲು ಬಯಸುವ ಲಿಂಗಕ್ಕೆ ಅನುಗುಣವಾಗಿ ತಮ್ಮ ದೇಹವನ್ನು ಸರ್ಜರಿ ಮಾಡಿಕೊಳ್ಳಲೂಬಹುದು. ಇವರು ತಮ್ಮದೇ ಮನೆಯವರಿಂದ, ಈ ಸಮಾಜದಿಂದ ತೀವ್ರ ಹಿಂಸೆ, ಬಹಿಷ್ಕಾರಗಳನ್ನು ಅನುಭವಿಸುತ್ತಾರೆ; ಮನೆ, ಆಸ್ಪತ್ರೆ ಸೌಲಭ್ಯ, ಶಿಕ್ಷಣ, ಉದ್ಯೋಗ ಹೀಗೆ ಎಲ್ಲಾ ಸವಲತ್ತುಗಳಿಂದ ಅವರನ್ನು ವಂಚಿಸಲಾಗುತ್ತೆ. ಕೊನೆಗೆ ತಮ್ಮ ಹೊಟ್ಟೆಪಾಡಿಗಾಗಿ ಸ್ವಯಂ-ಸಂಘಟಿತ ಭಿಕ್ಷಾಟನೆಯನ್ನೋ, ವೇಶ್ಯಾವಾಟಿಕೆಯನ್ನೋ ಅವರು ಅನಿವಾರ್ಯವಾಗಿ ಅವಲಂಭಿಸಬೇಕಾಗುತ್ತೆ. ಬಹಳಷ್ಟು ಲಿಂಗಪರಿವರ್ತಿತ ಮಹಿಳೆಯರು ಮತ್ತು ಇಂಟರ್‍ಸೆಕ್ಸ್ ವ್ಯಕ್ತಿಗಳು ಈ ಹಿಜಡಾ ವ್ಯವಸ್ಥೆಯ ಹೊರಗೂ ತಮ್ಮ ಜೀವನ ನಡೆಸುತ್ತಾರೆ.
ಇನ್ನು ಕೆಲವರು ಹುಟ್ಟಿದಾಗ ಈ ಸಮಾಜದಿಂದ `ಗಂಡು’ ಎಂದು ಕರೆಯಲ್ಪಟ್ಟು, ತನ್ನನ್ನು ತಾನು ಹೆಣ್ಣೆಂದು ಉಪಚರಿಸಿಕೊಂಡರೂ ಸರ್ಜರಿಯ ಮೂಲಕ ದೇಹವನ್ನು ಮಾರ್ಪಾಡಿಸಿಕೊಳ್ಳದೆ ಬದುಕುತ್ತಾರೆ. ಅಂತವರನ್ನು ನಮ್ಮ ದೇಶದಲ್ಲಿ ‘ಕೋಥಿ’ ಎಂದು ಕರೆಯಲಾಗುತ್ತೆ. ಇವರಲ್ಲಿ ಕೆಲವರ ಸ್ತ್ರೀ ಲಕ್ಷಣಗಳು ಅವರು ಧರಿಸುವ ಉಡುಪು ಮತ್ತು ಜೀವನಶೈಲಿಯ ಅಭಿವ್ಯಕ್ತಿವರೆಗೆ ವ್ಯಾಪಿಸಿರುತ್ತವೆ ಅಂತವರನ್ನು ‘ಸತ್ಲಾ ಕೋಥಿ’ ಎನ್ನಲಾಗುವುದು. ಇನ್ನು ಕೆಲವರು ಪ್ಯಾಂಟ್-ಶರ್ಟ್‍ನಂತಹ ಪುರುಷ ಸಹಜ ಧಿರಿಸಿ ನಲ್ಲಿದ್ದರೂ ಸ್ತ್ರೀ ಲಕ್ಷಣಗಳನ್ನು ಅಭಿವ್ಯಕ್ತಿಸುತ್ತಾರೆ. ಅಂತವರನ್ನು ‘ಪಂತಿ ಸತ್ಲಾ ಕೋಥಿ’ ಎಂದು ಗುರುತಿಸಲಾಗುತ್ತೆ. ಅಂತವರು ಪುರುಷರೊಂದಿಗಿನ ತಮ್ಮ ಸಂಬಂಧವನ್ನು ಒಪ್ಪಿಕೊಳ್ಳುವ ಮೂಲಕ ತಮ್ಮ ಸ್ತ್ರೀ ಲಿಂಗತ್ವವನ್ನು ಅನುಭವಿಸುತ್ತಾರೆ. ಕೆಲವು ಸಲ, ಇಂಗ್ಲಿಷ್ ಪದವಾದ ‘ಗೇ’ ಎಂದು ಗುರುತಿಸಿಕೊಳ್ಳುವವರನ್ನು ‘ಇಂಗ್ಲಿಷ್ ಕೋಥಿ’ ಎಂದೂ ಕರೆಯಲಾಗುವುದು. ಒಂದೊಮ್ಮೆ ನಾವು ‘ಗೇ’ ಅನ್ನೋದು ಪರಕೀಯ ಪದವೆಂದು ಕರೆಯುವುದಾದರೆ, ನಮ್ಮ ನೆಲದ ‘ಕೋಥಿ’ ಅದಕ್ಕೆ ಸಮನಾರ್ಥಕವಾದ ಪದವಾಗಿದೆ. ಇಲ್ಲಿರುವ ಒಂದೇ ವ್ಯತ್ಯಾಸವೇನೆಂದರೆ, ಕೋಥಿ ಎನ್ನುವುದು, ಹುಟ್ಟಿದಾರಭ್ಯ ನಿಗದಿಪಡಿಸಲಾದ `ಗಂಡು’ ಲಿಂಗತ್ವದಿಂದ ವ್ಯಕ್ತಿಯ `ಹೆಣ್ಣು’ ರೂಪಾಂತರದ ಲಿಂಗ ಆಯ್ಕೆಯನ್ನು ಒಪ್ಪಿಕೊಳ್ಳುವ ಒಂದು ಬಗೆಯ ಲಿಂಗ ಅನನ್ಯತೆಯಾದರೆ, ‘ಗೇ’ ಎನ್ನುವುದು ಆ ವ್ಯಕ್ತಿಯ ಲೈಂಗಿಕತೆಯನ್ನು ಬಿಂಬಿಸುತ್ತದೆ. ಕೋಥಿ-ಹಿಜಡಾ ದೃಷ್ಟಿಕೋನದ ಪ್ರಕಾರ, ಗಂಡಸರು ಯಾರೊಂದಿಗಾದರು ಸರಿ, ಯಾವುದರೊಂದಿಗಾದರು ಸರಿ ಕಾಮಾಸಕ್ತರಾಗಿರುತ್ತಾರೆ. ಗಂಡಸರತ್ತಲೇ ಲೈಂಗಿಕಾಸಕ್ತಿ ಹೊಂದಿರುವ ‘ಪುರುಷ ಗೇ’ ಎನ್ನುವುದಕ್ಕಾಗಲಿ, ಗಂಡು-ಹೆಣ್ಣಿನ ನಡುವಿನ heterosexualityಯನ್ನು ವಿವರಿಸುವುದಕ್ಕಾಗಲಿ, ಅಥವಾ ಗಂಡು ಇಲ್ಲವೇ ಹೆಣ್ಣು ಎರಡೂ ಲಿಂಗದ ಕಡೆ ಆಕರ್ಷಿತವಾಗುವ bisexualityಯನ್ನು ವಿವರಿಸುವುದಕ್ಕಾಗಲಿ ನಮ್ಮ ದೇಸಿ ನೆಲೆಗಟ್ಟಿನ ಪದಗಳು ಸಿಗುವುದಿಲ್ಲ.
ನನಗೆ ತಿಳಿದಿರುವ ಮಟ್ಟಿಗೆ, ಒಂದು ಹೆಣ್ಣು ಮತ್ತೊಂದು ಹೆಣ್ಣಿನತ್ತ ಆಕರ್ಷಿತವಾಗುವುದನ್ನು ಉಲ್ಲೇಖಿಸುವ `ಲೆಸ್ಬಿಯನ್’ ಪದಕ್ಕೆ ಸಮನಾರ್ಥಕವಾದ ಪದ ಭಾರತದ ಯಾವ ಭಾಷೆಯಲ್ಲೂ ಕಾಣಸಿಗದು. ಇದಕ್ಕೆ ನಮ್ಮ ಜಾತಿ ಮತ್ತು ಪಿತೃಪ್ರಧಾನ ವ್ಯವಸ್ಥೆಯ ಮನಸ್ಥಿತಿ ಕಾರಣವಾಗಿರಬಹುದು. ನಮ್ಮ ದೇಶದಲ್ಲಿ ಮಹಿಳೆಯ ಲೈಂಗಿಕ ಒಲವಿಗೆ ಮನ್ನಣೆ ಸಿಕ್ಕಿದ್ದು ತುಂಬಾ ವಿರಳ; ಇಲ್ಲವೇ ಇಲ್ಲ ಅನ್ನಬಹುದೇನೊ. ಕಾರಣ ಸ್ಪಷ್ಟ. ಜಾತಿ ಪದ್ಧತಿ ಮತ್ತು ಆಸ್ತಿ ಹಸ್ತಾಂತರ ವ್ಯವಸ್ಥೆಯನ್ನು ಕಾಪಿಟ್ಟುಕೊಳ್ಳಬೇಕೆಂದರೆ ಈ ಪುರುಷ ಅಧಿಪತ್ಯದ ಸಮಾಜಕ್ಕೆ ಆಕೆಯ ಲೈಂಗಿಕತೆಯನ್ನು ನಿರ್ಬಂಧಿಸಿ, `ನಿಶ್ಚಯಿಸಿದ ಮದುವೆಗೆ’ ಆಕೆಯನ್ನು ಬಿಗಿಯುವುದು ಅನಿವಾರ್ಯವಾಗಿತ್ತು.
ಅದೇರೀತಿ, ಹುಟ್ಟಿದಾಗ ಹೆಣ್ಣು ಎಂದು ಘೋಷಿಸಲ್ಪಟ್ಟು, ಬೆಳೆಯುತ್ತಾ ತನ್ನನ್ನು ಗಂಡಾಗಿ ಉಪಚರಿಸಿಕೊಳ್ಳಲು ಬಯಸುವ `ಲಿಂಗಪರಿವರ್ತಿತ ಪುರುಷ’ರನ್ನು ಉಲ್ಲೇಖಿಸುವುದಕ್ಕೂ ನಮ್ಮ ದೇಶೀ ಭಾಷೆಗಳಲ್ಲಿ ಹೆಚ್ಚು ಪದಗಳಿಲ್ಲ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಳಸಲಾಗುವ ‘ಗಂಡುಬಸಕ’ ಎನ್ನುವ ಪದ ತುಂಬಾ ಅವಹೇಳನಾತ್ಮಕವಾದುದು. ಇನ್ನು ‘ಶಿಖಂಡಿ’ ಕೂಡ ಅಷ್ಟೇ ಅವಹೇಳನಕಾರಿ. ಈ ಲಿಂಗಪರಿವರ್ತಿತ ಪುರುಷರಿಗಿರುವ ಏಕಮಾತ್ರ ಗೌರವಯುತ ಪದವೆಂದರೆ ‘ತಿರುನಂಬಿ’. ಈ ಪದ ತಮಿಳುನಾಡಿನಲ್ಲಿ ನಡೆದ ಪೆರಿಯಾರ್‍ವಾದಿ ಆತ್ಮ-ಗೌರವ ಚಳವಳಿಯ ಕೊಡುಗೆ.
ಲೈಂಗಿಕ ಅಭಿವ್ಯಕ್ತಿಯ ವೈವಿಧ್ಯತೆಗಳನ್ನು ವಿವರಿಸುವ ಇಂಗ್ಲಿಷ್ ಸಂಕ್ಷೇಪವಾದ ‘ಐಉಃಖಿಕಿ’ ಎನ್ನುವುದಕ್ಕೆ ಭಾರತೀಯ ಭಾಷೆಗಳಲ್ಲಿ ಹೆಚ್ಚೇನು ಸಮಾನ ಪದಗಳು ಸಿಗುವುದಿಲ್ಲ. ತನ್ನದೇ ಲಿಂಗದ ಇನ್ನೊಬ್ಬ ವ್ಯಕ್ತಿಯತ್ತ ಆಕರ್ಷಣೆ ಹೊಂದುವುದನ್ನು ಸೂಚಿಸುವುದಕ್ಕೆ ಇತ್ತೀಚೆಗೆ ‘ಸಮಲೈಂಗಿಕ’ ಎನ್ನುವ ಕೃತಕ ಪದವನ್ನು ಬಳಸಲಾಗುತ್ತಿದೆ. ಇಂಗ್ಲಿಷ್ ಭಾಷೆಯಲ್ಲೂ ಈ ಐಉಃಖಿಕಿ ಎನ್ನುವ ಪದಗಳು ಇತ್ತೀಚಿನವೇ ಎನ್ನುವುದೂ ಗಮನಾರ್ಹ.
ಆದಾಗ್ಯೂ, ಲಿಂಗ ವೈವಿಧ್ಯತೆಯನ್ನು ವಿವರಿಸಲು ಭಾರತೀಯ ಭಾಷೆಗಳಲ್ಲಿ ಅಪಾರ ಪದಗಳ ಸಂಪತ್ತಿದೆ; ಆದರೆ ಇಂಗ್ಲೀಷಿನಲ್ಲಿ ಇದಕ್ಕೆ ಇರೋದು `ಟ್ರಾನ್ಸ್‍ಜೆಂಡರ್’ ಎನ್ನುವ ಪದವೊಂದೇ. ಇದಕ್ಕೆ ಕಾರಣವೇನೆಂದರೆ, ಹಿಜಡಾ ಸಮುದಾಯವು ಭಾರತದ ಐತಿಹಾಸಿಕ ಹೆಜ್ಜೆಗಳಲ್ಲಿ ತನ್ನದೇ ಆದ ನಾಯಕತ್ವಗಳ ಛಾಪು ಮೂಡಿಸಿದೆ. ಇಂತಹ ಇತಿಹಾಸ ಪಾಶ್ಚಾತ್ಯ ದೇಶಗಳಲ್ಲಿಲ್ಲ. ತಾರತಮ್ಯ, ಹಿಂಸೆ, ನಿಂದನೆಯ ವಿರುದ್ಧ ದಿನನಿತ್ಯವೂ ಸಂಘಟನಾತ್ಮಕ ಹೋರಾಟ ನಡೆಸುತ್ತಾ ಬಂದ ಈ ಸಂಪದ್ಭರಿತ ಇತಿಹಾಸಕ್ಕೆ ನಮ್ಮದೊಂದು ದೊಡ್ಡ ಸಲಾಮ್.

– ಕಾರ್ತಿಕ್ ಬಿಟ್ಟು
ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...