Homeಮುಖಪುಟಇವರ ಹೋರಾಟದ ಬದುಕಿಗೆ ನಮ್ಮದೊಂದು ಸಲಾಮ್

ಇವರ ಹೋರಾಟದ ಬದುಕಿಗೆ ನಮ್ಮದೊಂದು ಸಲಾಮ್

- Advertisement -
- Advertisement -

ನೀವೆಲ್ಲರೂ ಹಿಜಡಾ ಸಮುದಾಯದವರನ್ನು ಬಹಳ ಸಲ ನೋಡಿರುತ್ತೀರಿ. ಆದಾಗ್ಯೂ ನಮ್ಮ ಬಹುತೇಕ ಜನ ಈ ಲೆಸ್ಬಿಯನ್, ಗೇ, ಬೈಸೆಕ್ಷುವಲ್, ಟ್ರಾನ್ಸ್‍ಜೆಂಡರ್, ಕ್ವೀರ್ (LGBTQ) ನಂತಹ ಪದಗಳು ಪಾಶ್ಚಾತ್ಯದಿಂದ ಈಗತಾನೇ ಭಾರತದ ಸಂಸ್ಕøತಿಯೊಳಕ್ಕೆ ಕಾಲಿಡುತ್ತಿರುವ ಹೊಸ ಪರಿಕಲ್ಪನೆಗಳು ಅಂತಲೇ ಭಾವಿಸಿದ್ದಾರೆ.
ನನ್ನ ಈ ಲೇಖನಗಳ ಸರಣಿಯಲ್ಲಿ ಜಾಗತಿಕ ಮಟ್ಟದ ಐಉಃಖಿಕಿ ಸಮುದಾಯಗಳಿಗೂ, ನಮ್ಮದೇ ನೆಲದ ಸಾಂಸ್ಕøತಿಕ ರಚನೆಗಳಾದ ಹಿಜಡಾ ಬಳಗಗಳಿಗೂ ಇರುವ ರಾಜಕೀಯ ವ್ಯತ್ಯಾಸ ಹಾಗೂ ಸಂಬಂಧಗಳ ಬಗ್ಗೆ ವಿವರಿಸಲು ಪ್ರಯತ್ನಿಸುತ್ತೇನೆ. ಇವುಗಳ ನಡುವಿನ ಸಂಬಂಧ ಏನು ಅಂತಂದ್ರೆ, ಈ ಪರ್ಯಾಯ ಲಿಂಗಿಗಳನ್ನು ವಿವರಿಸಲು ನಮ್ಮಲ್ಲಿ ಬಳಸುವ ಬಹಳಷ್ಟು ಪದಗಳು ಇಂಗ್ಲಿಷ್‍ನಲ್ಲಿ ಇದೇ ಉದ್ದೇಶಕ್ಕೆ ಬಳಸಲಾಗುವ ಪದಗಳು ನೀಡುವ ಅರ್ಥವನ್ನೇ ಪ್ರತಿಫಲಿಸುತ್ತವೆ. ಇನ್ನು ಆ ವಿದೇಶಿ ಸಮುದಾಯಗಳಿಗೂ ನಮ್ಮ ಹಿಜಡಾ ಬಳಗಗಳಿಗೂ ಇರುವ ರಾಜಕೀಯ ವ್ಯತ್ಯಾಸ ಅಂದ್ರೆ, ನಮ್ಮ ಭಾರತೀಯ ಸಂಸ್ಕøತಿಯು ಈ ಜಗತ್ತನ್ನು ಲೈಂಗಿಕ ಅಭಿವ್ಯಕ್ತಿಯ ಚೌಕಟ್ಟಿನಲ್ಲಿ ನೋಡದೇ ಲಿಂಗತ್ವದ ಆಧಾರದಲ್ಲೇ ನೋಡುವುದಾಗಿದೆ. ಇದನ್ನು ಮುಂದಿನ ಬರಹಗಳಲ್ಲಿ ಚರ್ಚಿಸುತ್ತೇನೆ. ಸದ್ಯ ಈಗ ನಾನು ಹೇಳೋದಿಷ್ಟೆ; ಒಬ್ಬ ವ್ಯಕ್ತಿಯ ಜೈವಿಕ ಲಿಂಗ (ದೇಹ), ಲಿಂಗತ್ವ (ಲಿಂಗಕ್ಕೆ ಅನುಗುಣವಾದ ಸಾಮಾಜಿಕ ಪಾತ್ರ) ಮತ್ತು ಲೈಂಗಿಕತೆ (ಆ ವ್ಯಕ್ತಿ ಆಕರ್ಷಣೆಗೊಳ್ಳುವ ಲಿಂಗ/ಗಳು) ಇವೆಲ್ಲವುಗಳು ಒಂದೇ ಅಲ್ಲ! ಇವುಗಳ ನಡುವೆ ಅಪಾರ ವ್ಯತ್ಯಾಸವಿದೆ.
ಮೊದಲು ನಮ್ಮ ಹಿಜಡಾ ಸಮುದಾಯವನ್ನು ಅರ್ಥ ಮಾಡಿಕೊಳ್ಳೋಣ. ಸಾಮಾನ್ಯ ಗ್ರಹಿಕೆಯಲ್ಲಿ ಹಿಜಡಾ ವ್ಯಕ್ತಿಗಳನ್ನು ಅನೇಕ ಸಲ `ತೃತೀಯ ಲಿಂಗಿಗಳು’ ಎಂದು ಪರಿಗಣಿಸಲಾಗುತ್ತೆ. ಒಂದು ಮಗು ಹುಟ್ಟಿದಾಗ ವೈದ್ಯರು ಆ ಮಗುವನ್ನು ಗಂಡು ಅಥವಾ ಹೆಣ್ಣು ಎಂದು ಗುರುತಿಸುತ್ತಾರೆ. ಎಲ್ಲಾ ಹಿಜಡಾ ಸದಸ್ಯರ ದೇಹಗಳು ಹುಟ್ಟುವ ಸಂದರ್ಭದಲ್ಲೆ ಅತ್ತ ಗಂಡೂ ಅಲ್ಲದ, ಇತ್ತ ಹೆಣ್ಣೂ ಅಲ್ಲದಂತಹ ದೇಹ ರಚನೆಯನ್ನು ಹೊಂದಿರುತ್ತಾರೆ ಅನ್ನೋದು ಸಾಮಾನ್ಯವಾಗಿ ನಾವೆಲ್ಲರು ತಿಳಿದಿರುವ ತಪ್ಪು ಕಲ್ಪನೆ. ಇಂತಹ ದೇಹರಚನೆಯನ್ನು ವಿವರಿಸಲು ಇಂಗ್ಲಿಷಿನಲ್ಲಿ `Iಟಿಣeಡಿsex’ ಎಂಬ ಪದವಿದೆ. ಈ `ಇಂಟರ್‍ಸೆಕ್ಸ್’ ಬಗೆಯವರು ಮಾತ್ರ ಗಂಡಿನ ಅಥವಾ ಹೆಣ್ಣಿನ, ನಿರ್ದಿಷ್ಟ ಲಿಂಗದ ದೇಹ ಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ ಬಹಳಷ್ಟು ಹಿಜಡಾ ಸದಸ್ಯರು `ಇಂಟರ್‍ಸೆಕ್ಸ್’ ಬಗೆಗೆ ಸೇರುವವರಲ್ಲ! ಅಂದರೆ, ಅವರು ಹುಟ್ಟಿದಾಗಿನ ದೇಹ ಲಕ್ಷಣಗಳನ್ನು ಗಮನಿಸುವ ಸ್ವತಃ ವೈದ್ಯರೇ ಆ ಮಗುವನ್ನು `ಗಂಡು ಮಗು’ ಎಂದೇ ಘೋಷಿಸುತ್ತಾರೆ. ಅವರ ಹುಟ್ಟು ಅಷ್ಟು ಸಹಜವಾಗಿರುತ್ತೆ. ಹುಟ್ಟಿದಾಗ ಗಂಡು ಮಗು ಅಂತಲೇ ಗುರುತಿಸಿರಲಿ ಅಥವಾ ಇಂಟರ್‍ಸೆಕ್ಸ್ ಎಂದೇ ಐಡೆಂಟಿಫೈ ಮಾಡಿರಲಿ, ಪ್ರಪಂಚದ ಯಾವುದೇ ಭಾಗದ ಹಿಜಡಾ ಸದಸ್ಯರು `ಲಿಂಗಪರಿವರ್ತಿತ ಮಹಿಳೆ’ (Transgender woman)ಯ ಬದುಕನ್ನು ಹಾದು ಬರಲೇಬೇಕಾಗುತ್ತದೆ.
ಹಾಗಾದ್ರೆ ಈ `ಟ್ರಾನ್ಸ್‍ಜೆಂಡರ್ ಮಹಿಳೆ’ ಅಂದ್ರೆ ಯಾರು? ಹುಟ್ಟಿದಾಗ ಈ ಸಮಾಜ ಮತ್ತು ವೈದ್ಯರು ಯಾವ ಲಿಂಗದವರೆಂದು ನಿಗದಿಪಡಿಸುತ್ತೋ, ಅದೇ ಲಿಂಗದ ರೂಪದಲ್ಲೇ ಬದುಕುವುದಕ್ಕೆ ವಿಪರೀತ ದೈಹಿಕ ಮತ್ತು ಸಾಮಾಜಿಕ ಯಾತನೆ ಅನುಭವಿಸುವವರೇ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳು. ಇನ್ನು ಹುಟ್ಟಿದಾಗ ಗಂಡು ಎಂದೋ ಅಥವಾ `ಇಂಟರ್‍ಸೆಕ್ಸ್’ ಎಂದೋ ಕರೆಯಲ್ಪಟ್ಟು, ಮುಂದೆ ಬೆಳೆಯುತ್ತಾ ಯಾರು ತಮ್ಮನ್ನು ತಾವು ಮಹಿಳೆಯಂತೆ ಉಪಚರಿಸಿಕೊಳ್ಳ ಬಯಸುತ್ತಾರೊ ಅವರೇ ಟ್ರಾನ್ಸ್‍ಜೆಂಡರ್ ಮಹಿಳೆಯರು. ಕೆಲವರು ತಮ್ಮನ್ನು ತಾವು `ಟ್ರಾನ್ಸ್‍ಜೆಂಡರ್ ಮಹಿಳೆ’ ಎಂದು ಕರೆದುಕೊಂಡರೆ ಮತ್ತೆ ಕೆಲವರು ಸಂಪೂರ್ಣವಾಗಿ `ಮಹಿಳೆ’ ಎಂದೂ, ಇನ್ನೂ ಕೆಲವರು `ತೃತೀಯ ಲಿಂಗಿ’ಗಳೆಂದೂ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಕರ್ನಾಟಕದಲ್ಲಿ ಇಂತವರನ್ನು ಮಂಗಳಮುಖಿ ಎಂತಲೂ, ತಮಿಳಿನಲ್ಲಿ ತಿರುನಂಗಾಯಿ ಅಥವಾ ಅರವಾಣಿ ಎಂತಲೂ, ಹಿಂದಿಯಲ್ಲಿ ಕಿನ್ನರ್ ಎಂದೂ ಆಯಾ ಭಾಗದ ಪ್ರಾದೇಶಿಕ ರೂಢಿ ನಾಮದೊಂದಿಗೆ ಗುರುತಿಸಲಾಗುತ್ತೆ.
ಹಾಗಾಗಿ, ಲಿಂಗ ಪರಿವರ್ತಿತರು ಮತ್ತು ಇಂಟರ್‍ಸೆಕ್ಸ್ ಸಮುದಾಯದ ವ್ಯಕ್ತಿಗಳು ಒಟ್ಟಾಗಿ, ಪರಸ್ಪರ ಬೆನ್ನೆಲುಬಾಗಿ ಜೀವಿಸುವ ಒಂದು ಸಾಂಸ್ಕøತಿಕ ಸಮೂಹ ವ್ಯವಸ್ಥೆಯನ್ನೇ ಹಿಜಡಾ ಸಮುದಾಯ ಅಂತ ಕರೆಯಬಹುದು. ಅಲ್ಲಿ ಅವರು ತಮಗಿಷ್ಟವಾದ ಲಿಂಗತ್ವದ ರೂಪದಲ್ಲಿ ಬದುಕುತ್ತಾರೆ, ಮತ್ತು ತಾವೇ ಗುರುತಿಸಿಕೊಳ್ಳಲು ಬಯಸುವ ಲಿಂಗಕ್ಕೆ ಅನುಗುಣವಾಗಿ ತಮ್ಮ ದೇಹವನ್ನು ಸರ್ಜರಿ ಮಾಡಿಕೊಳ್ಳಲೂಬಹುದು. ಇವರು ತಮ್ಮದೇ ಮನೆಯವರಿಂದ, ಈ ಸಮಾಜದಿಂದ ತೀವ್ರ ಹಿಂಸೆ, ಬಹಿಷ್ಕಾರಗಳನ್ನು ಅನುಭವಿಸುತ್ತಾರೆ; ಮನೆ, ಆಸ್ಪತ್ರೆ ಸೌಲಭ್ಯ, ಶಿಕ್ಷಣ, ಉದ್ಯೋಗ ಹೀಗೆ ಎಲ್ಲಾ ಸವಲತ್ತುಗಳಿಂದ ಅವರನ್ನು ವಂಚಿಸಲಾಗುತ್ತೆ. ಕೊನೆಗೆ ತಮ್ಮ ಹೊಟ್ಟೆಪಾಡಿಗಾಗಿ ಸ್ವಯಂ-ಸಂಘಟಿತ ಭಿಕ್ಷಾಟನೆಯನ್ನೋ, ವೇಶ್ಯಾವಾಟಿಕೆಯನ್ನೋ ಅವರು ಅನಿವಾರ್ಯವಾಗಿ ಅವಲಂಭಿಸಬೇಕಾಗುತ್ತೆ. ಬಹಳಷ್ಟು ಲಿಂಗಪರಿವರ್ತಿತ ಮಹಿಳೆಯರು ಮತ್ತು ಇಂಟರ್‍ಸೆಕ್ಸ್ ವ್ಯಕ್ತಿಗಳು ಈ ಹಿಜಡಾ ವ್ಯವಸ್ಥೆಯ ಹೊರಗೂ ತಮ್ಮ ಜೀವನ ನಡೆಸುತ್ತಾರೆ.
ಇನ್ನು ಕೆಲವರು ಹುಟ್ಟಿದಾಗ ಈ ಸಮಾಜದಿಂದ `ಗಂಡು’ ಎಂದು ಕರೆಯಲ್ಪಟ್ಟು, ತನ್ನನ್ನು ತಾನು ಹೆಣ್ಣೆಂದು ಉಪಚರಿಸಿಕೊಂಡರೂ ಸರ್ಜರಿಯ ಮೂಲಕ ದೇಹವನ್ನು ಮಾರ್ಪಾಡಿಸಿಕೊಳ್ಳದೆ ಬದುಕುತ್ತಾರೆ. ಅಂತವರನ್ನು ನಮ್ಮ ದೇಶದಲ್ಲಿ ‘ಕೋಥಿ’ ಎಂದು ಕರೆಯಲಾಗುತ್ತೆ. ಇವರಲ್ಲಿ ಕೆಲವರ ಸ್ತ್ರೀ ಲಕ್ಷಣಗಳು ಅವರು ಧರಿಸುವ ಉಡುಪು ಮತ್ತು ಜೀವನಶೈಲಿಯ ಅಭಿವ್ಯಕ್ತಿವರೆಗೆ ವ್ಯಾಪಿಸಿರುತ್ತವೆ ಅಂತವರನ್ನು ‘ಸತ್ಲಾ ಕೋಥಿ’ ಎನ್ನಲಾಗುವುದು. ಇನ್ನು ಕೆಲವರು ಪ್ಯಾಂಟ್-ಶರ್ಟ್‍ನಂತಹ ಪುರುಷ ಸಹಜ ಧಿರಿಸಿ ನಲ್ಲಿದ್ದರೂ ಸ್ತ್ರೀ ಲಕ್ಷಣಗಳನ್ನು ಅಭಿವ್ಯಕ್ತಿಸುತ್ತಾರೆ. ಅಂತವರನ್ನು ‘ಪಂತಿ ಸತ್ಲಾ ಕೋಥಿ’ ಎಂದು ಗುರುತಿಸಲಾಗುತ್ತೆ. ಅಂತವರು ಪುರುಷರೊಂದಿಗಿನ ತಮ್ಮ ಸಂಬಂಧವನ್ನು ಒಪ್ಪಿಕೊಳ್ಳುವ ಮೂಲಕ ತಮ್ಮ ಸ್ತ್ರೀ ಲಿಂಗತ್ವವನ್ನು ಅನುಭವಿಸುತ್ತಾರೆ. ಕೆಲವು ಸಲ, ಇಂಗ್ಲಿಷ್ ಪದವಾದ ‘ಗೇ’ ಎಂದು ಗುರುತಿಸಿಕೊಳ್ಳುವವರನ್ನು ‘ಇಂಗ್ಲಿಷ್ ಕೋಥಿ’ ಎಂದೂ ಕರೆಯಲಾಗುವುದು. ಒಂದೊಮ್ಮೆ ನಾವು ‘ಗೇ’ ಅನ್ನೋದು ಪರಕೀಯ ಪದವೆಂದು ಕರೆಯುವುದಾದರೆ, ನಮ್ಮ ನೆಲದ ‘ಕೋಥಿ’ ಅದಕ್ಕೆ ಸಮನಾರ್ಥಕವಾದ ಪದವಾಗಿದೆ. ಇಲ್ಲಿರುವ ಒಂದೇ ವ್ಯತ್ಯಾಸವೇನೆಂದರೆ, ಕೋಥಿ ಎನ್ನುವುದು, ಹುಟ್ಟಿದಾರಭ್ಯ ನಿಗದಿಪಡಿಸಲಾದ `ಗಂಡು’ ಲಿಂಗತ್ವದಿಂದ ವ್ಯಕ್ತಿಯ `ಹೆಣ್ಣು’ ರೂಪಾಂತರದ ಲಿಂಗ ಆಯ್ಕೆಯನ್ನು ಒಪ್ಪಿಕೊಳ್ಳುವ ಒಂದು ಬಗೆಯ ಲಿಂಗ ಅನನ್ಯತೆಯಾದರೆ, ‘ಗೇ’ ಎನ್ನುವುದು ಆ ವ್ಯಕ್ತಿಯ ಲೈಂಗಿಕತೆಯನ್ನು ಬಿಂಬಿಸುತ್ತದೆ. ಕೋಥಿ-ಹಿಜಡಾ ದೃಷ್ಟಿಕೋನದ ಪ್ರಕಾರ, ಗಂಡಸರು ಯಾರೊಂದಿಗಾದರು ಸರಿ, ಯಾವುದರೊಂದಿಗಾದರು ಸರಿ ಕಾಮಾಸಕ್ತರಾಗಿರುತ್ತಾರೆ. ಗಂಡಸರತ್ತಲೇ ಲೈಂಗಿಕಾಸಕ್ತಿ ಹೊಂದಿರುವ ‘ಪುರುಷ ಗೇ’ ಎನ್ನುವುದಕ್ಕಾಗಲಿ, ಗಂಡು-ಹೆಣ್ಣಿನ ನಡುವಿನ heterosexualityಯನ್ನು ವಿವರಿಸುವುದಕ್ಕಾಗಲಿ, ಅಥವಾ ಗಂಡು ಇಲ್ಲವೇ ಹೆಣ್ಣು ಎರಡೂ ಲಿಂಗದ ಕಡೆ ಆಕರ್ಷಿತವಾಗುವ bisexualityಯನ್ನು ವಿವರಿಸುವುದಕ್ಕಾಗಲಿ ನಮ್ಮ ದೇಸಿ ನೆಲೆಗಟ್ಟಿನ ಪದಗಳು ಸಿಗುವುದಿಲ್ಲ.
ನನಗೆ ತಿಳಿದಿರುವ ಮಟ್ಟಿಗೆ, ಒಂದು ಹೆಣ್ಣು ಮತ್ತೊಂದು ಹೆಣ್ಣಿನತ್ತ ಆಕರ್ಷಿತವಾಗುವುದನ್ನು ಉಲ್ಲೇಖಿಸುವ `ಲೆಸ್ಬಿಯನ್’ ಪದಕ್ಕೆ ಸಮನಾರ್ಥಕವಾದ ಪದ ಭಾರತದ ಯಾವ ಭಾಷೆಯಲ್ಲೂ ಕಾಣಸಿಗದು. ಇದಕ್ಕೆ ನಮ್ಮ ಜಾತಿ ಮತ್ತು ಪಿತೃಪ್ರಧಾನ ವ್ಯವಸ್ಥೆಯ ಮನಸ್ಥಿತಿ ಕಾರಣವಾಗಿರಬಹುದು. ನಮ್ಮ ದೇಶದಲ್ಲಿ ಮಹಿಳೆಯ ಲೈಂಗಿಕ ಒಲವಿಗೆ ಮನ್ನಣೆ ಸಿಕ್ಕಿದ್ದು ತುಂಬಾ ವಿರಳ; ಇಲ್ಲವೇ ಇಲ್ಲ ಅನ್ನಬಹುದೇನೊ. ಕಾರಣ ಸ್ಪಷ್ಟ. ಜಾತಿ ಪದ್ಧತಿ ಮತ್ತು ಆಸ್ತಿ ಹಸ್ತಾಂತರ ವ್ಯವಸ್ಥೆಯನ್ನು ಕಾಪಿಟ್ಟುಕೊಳ್ಳಬೇಕೆಂದರೆ ಈ ಪುರುಷ ಅಧಿಪತ್ಯದ ಸಮಾಜಕ್ಕೆ ಆಕೆಯ ಲೈಂಗಿಕತೆಯನ್ನು ನಿರ್ಬಂಧಿಸಿ, `ನಿಶ್ಚಯಿಸಿದ ಮದುವೆಗೆ’ ಆಕೆಯನ್ನು ಬಿಗಿಯುವುದು ಅನಿವಾರ್ಯವಾಗಿತ್ತು.
ಅದೇರೀತಿ, ಹುಟ್ಟಿದಾಗ ಹೆಣ್ಣು ಎಂದು ಘೋಷಿಸಲ್ಪಟ್ಟು, ಬೆಳೆಯುತ್ತಾ ತನ್ನನ್ನು ಗಂಡಾಗಿ ಉಪಚರಿಸಿಕೊಳ್ಳಲು ಬಯಸುವ `ಲಿಂಗಪರಿವರ್ತಿತ ಪುರುಷ’ರನ್ನು ಉಲ್ಲೇಖಿಸುವುದಕ್ಕೂ ನಮ್ಮ ದೇಶೀ ಭಾಷೆಗಳಲ್ಲಿ ಹೆಚ್ಚು ಪದಗಳಿಲ್ಲ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಳಸಲಾಗುವ ‘ಗಂಡುಬಸಕ’ ಎನ್ನುವ ಪದ ತುಂಬಾ ಅವಹೇಳನಾತ್ಮಕವಾದುದು. ಇನ್ನು ‘ಶಿಖಂಡಿ’ ಕೂಡ ಅಷ್ಟೇ ಅವಹೇಳನಕಾರಿ. ಈ ಲಿಂಗಪರಿವರ್ತಿತ ಪುರುಷರಿಗಿರುವ ಏಕಮಾತ್ರ ಗೌರವಯುತ ಪದವೆಂದರೆ ‘ತಿರುನಂಬಿ’. ಈ ಪದ ತಮಿಳುನಾಡಿನಲ್ಲಿ ನಡೆದ ಪೆರಿಯಾರ್‍ವಾದಿ ಆತ್ಮ-ಗೌರವ ಚಳವಳಿಯ ಕೊಡುಗೆ.
ಲೈಂಗಿಕ ಅಭಿವ್ಯಕ್ತಿಯ ವೈವಿಧ್ಯತೆಗಳನ್ನು ವಿವರಿಸುವ ಇಂಗ್ಲಿಷ್ ಸಂಕ್ಷೇಪವಾದ ‘ಐಉಃಖಿಕಿ’ ಎನ್ನುವುದಕ್ಕೆ ಭಾರತೀಯ ಭಾಷೆಗಳಲ್ಲಿ ಹೆಚ್ಚೇನು ಸಮಾನ ಪದಗಳು ಸಿಗುವುದಿಲ್ಲ. ತನ್ನದೇ ಲಿಂಗದ ಇನ್ನೊಬ್ಬ ವ್ಯಕ್ತಿಯತ್ತ ಆಕರ್ಷಣೆ ಹೊಂದುವುದನ್ನು ಸೂಚಿಸುವುದಕ್ಕೆ ಇತ್ತೀಚೆಗೆ ‘ಸಮಲೈಂಗಿಕ’ ಎನ್ನುವ ಕೃತಕ ಪದವನ್ನು ಬಳಸಲಾಗುತ್ತಿದೆ. ಇಂಗ್ಲಿಷ್ ಭಾಷೆಯಲ್ಲೂ ಈ ಐಉಃಖಿಕಿ ಎನ್ನುವ ಪದಗಳು ಇತ್ತೀಚಿನವೇ ಎನ್ನುವುದೂ ಗಮನಾರ್ಹ.
ಆದಾಗ್ಯೂ, ಲಿಂಗ ವೈವಿಧ್ಯತೆಯನ್ನು ವಿವರಿಸಲು ಭಾರತೀಯ ಭಾಷೆಗಳಲ್ಲಿ ಅಪಾರ ಪದಗಳ ಸಂಪತ್ತಿದೆ; ಆದರೆ ಇಂಗ್ಲೀಷಿನಲ್ಲಿ ಇದಕ್ಕೆ ಇರೋದು `ಟ್ರಾನ್ಸ್‍ಜೆಂಡರ್’ ಎನ್ನುವ ಪದವೊಂದೇ. ಇದಕ್ಕೆ ಕಾರಣವೇನೆಂದರೆ, ಹಿಜಡಾ ಸಮುದಾಯವು ಭಾರತದ ಐತಿಹಾಸಿಕ ಹೆಜ್ಜೆಗಳಲ್ಲಿ ತನ್ನದೇ ಆದ ನಾಯಕತ್ವಗಳ ಛಾಪು ಮೂಡಿಸಿದೆ. ಇಂತಹ ಇತಿಹಾಸ ಪಾಶ್ಚಾತ್ಯ ದೇಶಗಳಲ್ಲಿಲ್ಲ. ತಾರತಮ್ಯ, ಹಿಂಸೆ, ನಿಂದನೆಯ ವಿರುದ್ಧ ದಿನನಿತ್ಯವೂ ಸಂಘಟನಾತ್ಮಕ ಹೋರಾಟ ನಡೆಸುತ್ತಾ ಬಂದ ಈ ಸಂಪದ್ಭರಿತ ಇತಿಹಾಸಕ್ಕೆ ನಮ್ಮದೊಂದು ದೊಡ್ಡ ಸಲಾಮ್.

– ಕಾರ್ತಿಕ್ ಬಿಟ್ಟು
ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...