Homeಎಲೆಮರೆಅಲೆಮಾರಿ ಮೇಡಂ: ಶಾರದ

ಅಲೆಮಾರಿ ಮೇಡಂ: ಶಾರದ

- Advertisement -
- Advertisement -

ಬೀದರಿನ ವಾರ್ತಾಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಸಮಾಜಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಜಿಲ್ಲಾಧಿಕಾರಿಗಳ ಕಚೇರಿ ಮುಂತಾದ ಇಲಾಖೆಗಳ ಅಧಿಕಾರಿಗಳ ಬಳಿ ಮತ್ತು ಬೀದರ್ ಜಿಲ್ಲೆಯ ಯಾವುದೇ ಬುಡಕಟ್ಟು ಅಲೆಮಾರಿ ಜನರ ಬಳಿ `ಅಲೆಮಾರಿ ಮೇಡಂ’ ಯಾರು ಎಂದು ಕೇಳಿದರೆ ಅವರುಗಳು ಶಾರದ ಅವರ ಬಗ್ಗೆ ಹೇಳುತ್ತಾರೆ. ಕೆಲವು ಅಧಿಕಾರಿಗಳು ಮುಖ ಗಂಟಿಕ್ಕಿ ಚೂರು ಸಿಡುಕಿನಿಂದಲೆ ಹೇಳಿದರೆ, ಅಲೆಮಾರಿ ಬುಡಕಟ್ಟಿನ ಜನರು ಮುಖ ಅರಳಿಸಿ `ಓಹ್ ನಮ್ ಮೇಡಂ ಸರ್, ಗೊತ್ತವ್ರು, ಅವರ ನಂಬರ್.. ನಮ್ಮ ಆಧಾರ ಕಾರ್ಡ್ ಮೇಲಿದೆ’ ಎಂದು ನಿಮಗೆ ಶಾರದ ಅವರ ಫೋನ್ ನಂಬರ್ ಕೊಡುತ್ತಾರೆ.

ಹೀಗೆ ಬೀದರ್ ಜಿಲ್ಲೆಯಾದ್ಯಂತ ಅಲೆಮಾರಿ ಮೇಡಂ ಎಂದೇ ಗುರುತಿಸಲ್ಪಡುವ ಶಾರದ ಒಬ್ಬ ಸಾಮಾನ್ಯ ಪದವೀಧರ ಗೃಹಿಣಿ. ಅರೆ ಶಾರದ ಅವರನ್ನು ಯಾಕೆ ಅಲೆಮಾರಿ ಮೇಡಂ ಎಂದು ಕರೆಯುತ್ತಾರೆ..? ಏಕೆಂದರೆ 2013 ರಿಂದಲೂ ಬುಡಕಟ್ಟು ಅಲೆಮಾರಿ ಮಕ್ಕಳಿಗೆ ಅಕ್ಷರದ ಅರಿವು ಮೂಡಿಸಲು, ಅವರಿಗೊಂದು ಗುರುತು ಕೊಡಿಸಲು, ನೆಲೆ ಒದಗಿಸಲು, ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಯಾವುದೇ ಅಧಿಕಾರವಿಲ್ಲದೆ, ಲಾಭನಷ್ಟದ ಲೆಕ್ಕಾಚಾರಗಳಿಲ್ಲದೆ, ಉತ್ತಮ ಆರ್ಥಿಕ ಸ್ಥಿತಿಯೂ ಇಲ್ಲದೆ, ಮೇಲ್ಜಾತಿಯೂ ಅಲ್ಲದ ಪರಿಶಿಷ್ಟ ಜಾತಿಯ ಛಲವಾದಿ ಸಮುದಾಯಕ್ಕೆ ಸೇರಿದ, ಎಂ.ಎಸ್.ಡಬ್ಲು ಬಿಇಡಿ ಮಾಡಿದ ಒಬ್ಬ ಸಾಮಾನ್ಯ ಮಹಿಳೆಗೆ ಬುಡಕಟ್ಟು ಅಲೆಮಾರಿಗಳ ಒಳಿತಿಗಾಗಿ ದುಡಿವ ಮನಸ್ಸು ಹದಗೊಂಡದ್ದು ಹೇಗೆ ಎಂದು ನೋಡಿದರೆ, ಅದೊಂದು ಕುತೂಹಲಕರ ಸಂಗತಿ.

ರಾಯಚೂರು ಜಿಲ್ಲೆ ಮಾನವಿ ತಾಲೂಕಿನ ಬಾಗಲವಾಡ ಹಳ್ಳಿಯ ಶಾರದ ಮನೆಯ ಬಡತನದ ಕಾರಣ ಹೈಸ್ಕೂಲಿನಿಂದಲೂ ಮಾನವಿ, ರಾಯಚೂರಿನ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲುಗಳಲ್ಲಿ ಓದುತ್ತಾರೆ. ಹೀಗೆ ಓದುವಾಗ ತಮ್ಮ ಹಾಸ್ಟೆಲುಗಳ ಹೊರವಲಯದಲ್ಲಿ ಆಗಾಗ ಅಲೆಮಾರಿಗಳು ಬಟ್ಟೆಯ ಟೆಂಟ್ ಹಾಕಿ ವಾಸಿಸುತ್ತಿದ್ದರು. ಹಿರಿಯರು ಚಿಕ್ಕಪುಟ್ಟ ವ್ಯಾಪಾರ, ಬೇಟೆ, ಭಿಕ್ಷೆ ಅಂತೆಲ್ಲಾ ನಗರ ಮತ್ತು ಕಾಡು ಪ್ರವೇಶಿಸಿದರೆ, ಇವರ ಮಕ್ಕಳು ಬಟ್ಟೆಯಿಲ್ಲದೆ ಸ್ನಾನವಿಲ್ಲದೆ ಕೆದರಿದ ಕೂದಲಿನಲ್ಲಿ ಟೆಂಟಿನ ಮುಂದೆ ಮಣ್ಣಲ್ಲಿ ಆಟವಾಡುತ್ತಿದ್ದರು. ಶಾರದ ಹಾಸ್ಟೆಲ್ ಕಿಟಕಿಗಳಿಂದ ಈ ಮಕ್ಕಳನ್ನು ನೋಡುತ್ತಿದ್ದಾಗ ಅರೆ ಇವರ್ಯಾಕೆ ಹೀಗೆ ? ಇವರಿಗೆ ನಮ್ಮಂತೆ ಮನೆಗಳೇಕಿಲ್ಲ? ಎನ್ನುವ ಪ್ರಶ್ನೆಯೊಂದು ಮಿಂಚಿ ಮರೆಯಾಗುತ್ತಿತ್ತು. ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಆ ಸ್ಥಳದಿಂದ ಮಾಯವಾಗಿ ಎಷ್ಟೋ ದಿನಗಳ ಕಾಲ ಅವರು ಇತ್ತ ತಲೆ ಹಾಕುತ್ತಲೂ ಇರಲಿಲ್ಲ. ಒಮ್ಮೊಮ್ಮೆ ದಿಢೀರ್ ಟೆಂಟ್‍ಗಳು ಪ್ರತ್ಯಕ್ಷವಾಗುತ್ತಿದ್ದವು. ಈ ಕಣ್ಣೋಟದ ಅಲೆಮಾರಿಗಳ ಚಿತ್ರ ಶಾರದ ಅವರಲ್ಲಿ ಸುಪ್ತವಾಗಿತ್ತು.

ಬಿ.ಎ. ಎರಡನೆ ವರ್ಷ ಕಲಿಯುವಾಗಲೆ ಶಾರದ 2011 ರಲ್ಲಿ ಮದುವೆಯಾಗಿ ಬೀದರಿಗೆ ಬರುತ್ತಾರೆ. ಗಂಡ ಮತ್ತು ಮನೆಯವರ ಬೆಂಬಲದಿಂದ ಅರ್ಧಕ್ಕೆ ನಿಂತ ಓದನ್ನು ಮುಂದುವರಿಸುತ್ತಾರೆ. ಬಿ.ಎ., ಎಮ್.ಎಸ್.ಡಬ್ಲು, ಬಿಎಡ್ ಮಾಡುತ್ತಾರೆ. ಎಮ್.ಎಸ್.ಡಬ್ಲು ಮಾಡುವಾಗ ಸಮಾಜಸೇವೆಯ ಬಗ್ಗೆ ಗಮನ ಹರಿಯುತ್ತದೆ. ಹೈಸ್ಕೂಲಲ್ಲಿ ಕಂಡ ಅಲೆಮಾರಿಗಳ ಚಿತ್ರಗಳು ತರಗತಿಗಳಲ್ಲಿ ಮರುಕಳಿಸತೊಡಗುತ್ತವೆ. ಹೀಗೆ ಬಿಎಡ್ ಮುಗಿಸಿ ಬೀದರಿನ ಸೆಂಟ್ ಜೋಸೆಫ್ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರುತ್ತಾರೆ. ಶಾಲೆಗೆ ಹೋಗಿ ಬಂದು ಮಾಡುವ ಮಾರ್ಗಮಧ್ಯದಲ್ಲಿ ಒಮ್ಮೆ ಅರ್ಧಮುಚ್ಚಿದ ಬಾವಿಯೊಂದರಲ್ಲಿ ಅಲೆಮಾರಿ ಮಗು ಆಯತಪ್ಪಿ ಬಿದ್ದು ಅಳುತ್ತಿರುತ್ತದೆ. ಇದನ್ನು ನೋಡಿ ಶಾರದ ಆ ಮಗುವನ್ನು ಮೇಲಕ್ಕೆತ್ತಿ ಅವರ ತಂದೆತಾಯಿಗೆ ತಲುಪಿಸುತ್ತಾರೆ. ಆಗ ಅಲೆಮಾರಿಗಳ ಪರಿಚಯವಾಗುತ್ತದೆ.

ಸೋಷಿಯಲ್ ವರ್ಕ್ ಎನ್ನುವ ಕೆಲಸದಲ್ಲಿ ಡಾನ್‍ಬಾಸ್ಕೋ ಸಂಸ್ಥೆಯಲ್ಲಿ ಕೆಲದಿನ ಕೆಲಸ ಮಾಡುತ್ತಾರೆ. ಆಗ ಮಗುವಿಗೆ ಹೆರಿಗೆಯಾದ ಕಾರಣ ಡಾನ್‍ಬಾಸ್ಕೋ ಸಂಸ್ಥೆಯ ಕೆಲಸವನ್ನು ಬಿಡುತ್ತಾರೆ. ತಾಯಿ, ಮಗುವಿನ ಜತೆ ಕಾಲ ಕಳೆಯುವಾಗ ತನ್ನ ಮನೆಗೆ ಹತ್ತಿರದಲ್ಲಿರುವ ಅಲೆಮಾರಿಗಳ ಜತೆ ಸಂಪರ್ಕ ಬೆಳೆಯುತ್ತದೆ. ಓದುಬರಹವಿಲ್ಲದ ಅವರ ಮಕ್ಕಳನ್ನು ನೋಡಿ, ನಿಮ್ಮ ಮಕ್ಕಳಿಗೆ ಅಕ್ಷರ ಕಲಿಸುವೆ ಎಂದಾಗ ಅಲೆಮಾರಿಗಳು ಒಪ್ಪುವುದಿಲ್ಲ. ದಿನಾಲು ಅಲೆಮಾರಿಗಳ ಗುಡಿಸಲುಗಳ ಎದುರು ಅವರ ಮನವೊಲಿಸಲು ಪ್ರಯತ್ನಿಸುತ್ತಾರೆ. ಆದರೂ ಅಲೆಮಾರಿಗಳು ಇವರನ್ನು ನಂಬುವುದಿಲ್ಲ. ನಾನಾಗೆ ಇವರ ಮಕ್ಕಳಿಗೆ ಅಕ್ಷರ ಕಲಿಸುವೆ ಎಂದರೂ ಇವರು ನನ್ನನ್ನು ನಂಬುತ್ತಿಲ್ಲವಲ್ಲ ಎಂದು ಎಷ್ಟೋ ಬಾರಿ ಶಾರದ ಅಳುತ್ತಾ ಮನೆಗೆ ಮರಳಿದ್ದರು. ಇಷ್ಟಾಗಿಯೂ ಅಲೆಮಾರಿಗಳನ್ನು ಬಗೆಬಗೆಯ ರೀತಿಯಲ್ಲಿ ಆಪ್ತವಾಗಿ ಒಪ್ಪಿಸಲು ಪ್ರಯತ್ನಿಸಿದರು. ಒಂದೆರಡು ವರ್ಷದ ನಂತರ ನಿಧಾನಕ್ಕೆ ಅಲೆಮಾರಿಗಳಿಗೆ ಶಾರದ ಅವರಲ್ಲಿ ವಿಶ್ವಾಸ ಮೂಡುತ್ತದೆ.

`ನಮಗೆ ಮನಿಯಿಲ್ಲ ಮಠವಿಲ್ಲ ನೀವು ಬಂದ್ ಶಾಲಿ ಕಲಿಸ್ತೀನಿ ಅಂತೀರಿ, ನಾವು ಇವತ್ ಇಲ್ಲಿದ್ರೆ ನಾಳೆ ಅಲ್ಲಿರ್ತೀವಿ, ನಮ್ಮನ್ನ ಸರಕಾರದವರು ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಓಡಿಸ್ತಾನ ಇರ್ತಾರೆ. ನಮಗೆ ಉಳಿಯೋಕೆ ಒಂದು ನೆಲೆ ಅಂತ ಇಲ್ದಿರೋವಾಗ ನಮ್ಮ ಮಕ್ಕಳು ಶಾಲಿ ಕಲಿತು ಏನ್ ಮಾಡ್ತಾವೆ’ ಎನ್ನುತ್ತಾರೆ. ಆಗ ಶಾರದಾಗೆ ಹೊಳೆದ ಸಂಗತಿಯೆಂದರೆ, ಇವರಿಗೆ ಸರಕಾರದಿಂದ ಒಂದು ಮನೆ ಕಟ್ಟಿಸಿಕೊಟ್ಟರೆ ಒಂದೆಡೆ ಉಳಿಯುತ್ತಾರೆ ಎಂದು ಅನ್ನಿಸುತ್ತದೆ. ಅದಕ್ಕಾಗಿ `ನೀವು ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ, ನಾನು ಹೇಗಾದರೂ ಮಾಡಿ ನಿಮಗೆ ಮನೆಗಳನ್ನು ಕೊಡಿಸ್ತೀನಿ’ ಎನ್ನುವ ಸುಳ್ಳು ಭರವಸೆ ಕೊಡುತ್ತಾರೆ. ಈ ಒಂದು ಭರವಸೆಯಿಂದ ಅಲೆಮಾರಿಗಳು ತಮ್ಮ ಮಕ್ಕಳನ್ನು ಶಾರದ ಬಳಿ ಅಕ್ಷರ ಕಲಿಯಲು ಕಳಿಸುತ್ತಾರೆ. ಆಗ ಶಾರದ ಅವರು ಅಲೆಮಾರಿಗಳ ಜಾಗವನ್ನೆ ಶಾಲೆಯ ಆವರಣವನ್ನಾಗಿಸಿಕೊಂಡು ಅವರಿಗೆ ಅಕ್ಷರ ಕಲಿಸತೊಡಗುತ್ತಾರೆ.

ಇದೇ ಹೊತ್ತಿಗೆ ಬೀದರ್ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯು ಬೀದರಿನಲ್ಲಿ ಅಲೆಮಾರಿಗಳಿಲ್ಲ ಎಂದು ಸರಕಾರಕ್ಕೆ ವರದಿ ಸಲ್ಲಿಸುತ್ತದೆ. ಸ್ವತಃ ಅಲೆಮಾರಿಗಳ ಜತೆ ಬದುಕುತ್ತಿದ್ದ ಶಾರದ ಅವರಿಗೆ ಈ ವರದಿ ಅಚ್ಚರಿ ಹುಟ್ಟಿಸಿ ಇಲಾಖೆಯ ಗಮನಕ್ಕೆ ತರುತ್ತಾರೆ. ಆಗ ಇಲಾಖೆಯು ಅಲೆಮಾರಿಗಳು ಇದ್ದರೆ ಅವರನ್ನು ಗುರುತಿಸಲು ಶಾರದಾ ಅವರಿಗೆ ಸಹಕಾರ ನೀಡುತ್ತದೆ. ಈ ನಡುವೆ ತಾನು ಅಕ್ಷರ ಕಲಿಸುವ ಮಕ್ಕಳನ್ನು ಶಾಲೆಗೆ ಸೇರಿಸಬೇಕು. ಆದರೆ ಆ ಮಕ್ಕಳಿಗೆ ಯಾವುದೇ ಗುರುತಿಲ್ಲ. ಮೊದಲನೆಯದಾಗಿ ಆಧಾರ ಕಾರ್ಡ್ ಮಾಡಿಸಬೇಕಾದ ಅನಿವಾರ್ಯ ಬರುತ್ತದೆ. ಮಕ್ಕಳಿಗೆ ಆಧಾರ್ ಮಾಡಿಸಲು ತಂದೆತಾಯಿಯರ ಆಧಾರ್ ಬೇಕು.

ಆದರೆ ಈ ಯಾವ ಕುಟುಂಬಗಳಿಗೂ ಆಧಾರ ಕಾರ್ಡ್ ಕೊಟ್ಟಿರಲಿಲ್ಲ. ಈಗ ಮತ್ತೊಂದು ಸಮಸ್ಯೆ ಶುರುವಾಯಿತು. ಮಕ್ಕಳ ತಂದೆತಾಯಿಯರಿಗೆ ಆಧಾರ್ ಕಾರ್ಡ್ ಮಾಡಿಸುವುದು. ಯಾವುದೇ ದಾಖಲೆಗಳಿಲ್ಲದ ಈ ಅಲೆಮಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಸೆಳೆದು, ಅಲೆದಲೆದು ಶಾರದ ಅವರೆ ಸ್ವತಃ ಎಲ್ಲರಿಗೂ ಸಾಕ್ಷಿಯಾಗಿದ್ದು ಆಧಾರ್ ಕಾರ್ಡ ಮಾಡಿಸುತ್ತಾರೆ. ಹೀಗೆ ನಿರಂತರವಾಗಿ ನಾಲ್ಕೈದು ವರ್ಷದಲ್ಲಿ ಅಲೆಮಾರಿ ಸಮುದಾಯದ 500ಕ್ಕೂ ಹೆಚ್ಚು ಜನರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಓಟರ್ ಐಡಿ ಮಾಡಿಸಿದ್ದಾರೆ. ಇದೀಗ 63 ಅಲೆಮಾರಿ ಮಕ್ಕಳು ಶಾಲೆ ಕಲಿಯುತ್ತಿದ್ದಾರೆ. ಅಲೆಮಾರಿಗಳ ಮನೆ ಕಟ್ಟಿಸಲಿಕ್ಕಾಗಿ ನಾಲ್ಕು ಎಕರೆ ಜಮೀನು ಮಂಜೂರಾಗಿದೆ. ಇದೀಗ ಅಲೆಮಾರಿಗಳ ಸ್ವಂತ ಉದ್ಯೋಗಕ್ಕಾಗಿ ಸಣ್ಣಮಟ್ಟದಲ್ಲಿ ಸಾಲಸೌಲಭ್ಯಗಳು ಸಿಗತೊಡಗಿವೆ. ಇದೆಲ್ಲವೂ ಸುಲಭವಾಗಿ ದಕ್ಕಿರುವುದಲ್ಲ ಶಾರದ ಅವರು ನಾಲ್ಕೈದು ವರ್ಷಗಳ ಕಾಲ ಸರಕಾರಿ ಇಲಾಖೆಗಳ ಜತೆ, ಅಧಿಕಾರಿಗಳ ಜತೆ ನಿರಂತರ ಜಗಳ, ಹಕ್ಕೊತ್ತಾಯ, ಚರ್ಚೆ ಸಂವಾದಗಳ ಮೂಲಕ ಇದನ್ನೆಲ್ಲಾ ಆಗುಮಾಡಿದ್ದಾರೆ.

ಈ ಎಲ್ಲಾ ಹೋರಾಟ ಹಕ್ಕೊತ್ತಾಯಗಳ ಜೊತೆಜೊತೆಗೆ ಇದೀಗ ಗುತ್ತಿಗೆ ಆಧಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮಹಿಳಾ ಶಕ್ತಿ ಕೇಂದ್ರ ಯೋಜನೆಯ ಜಿಲ್ಲಾ ಮಹಿಳಾ ಕಲ್ಯಾಣಾಧಿಕಾರಿಯಾಗಿ ಇದೇ ಜನವರಿ 13, 2020 ರಿಂದ ಕೆಲಸಕ್ಕೆ ಸೇರಿದ್ದಾರೆ. `ನಮ್ ಮನೆಯವ್ರ ಬೆಂಬಲ ಇರದಿದ್ರ ಇದನ್ನೆಲ್ಲ ಮಾಡೋಕೆ ಆಗ್ತಿರಲಿಲ್ಲ ಸರ್, ಈಗ ಸಿ.ಎ.ಎ ಎನ್.ಆರ್.ಸಿ ಬಂದದಲ್ಲ ಮತ್ತೆ ನನಗೆ ಭಯ ಶುರು ಆಗ್ಯಾತಿ. ಇವರಿಗೆ ಈಗಿರೋದನ್ನು ಬಿಟ್ಟರೆ ಇವರ ಹಿರೇರು ಎಲ್ಲಿದ್ರು ಅನ್ನೋಕೆ ಏನೂ ದಾಖಲೆ ಇಲ್ಲ. ಅದೇನು ಆಗ್ತಾತೋ ಅಂತ ಭಯ ಆಗೇತಿ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಯಾವುದೇ ಆಕಾಡೆಮಿಕ್ ಸಂಶೋಧಕರಿಗಿಂತಲೂ ಸೂಕ್ಷ್ಮವಾಗಿ ಅಲೆಮಾರಿ ಬುಡಕಟ್ಟು ಸಮುದಾಯದ ನಾಡಿಮಿಡಿತ ಗುರುತಿಸುವ ಶಾರದ ಅವರು ನಿಜಕ್ಕೂ ಈ ಕಾಲಕ್ಕೆ ಮಾದರಿಯಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಶಾರದಾ ಅವರ ಸಮಾಜಸೇವೆ ಜೋತೆ… ವಿದ್ಯೆ ದಾನವನ್ನು ಮಾಡಿದ್ದಾರೆ. ಅವರಿಗಿ ಅಭಿನಂದನೆಗಳು

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...