Homeಅಂಕಣಗಳುಕೃಷಿ ಕಾರ್ಮಿಕನ ಗೋಳು ದೊಡ್ಡದು

ಕೃಷಿ ಕಾರ್ಮಿಕನ ಗೋಳು ದೊಡ್ಡದು

- Advertisement -
- Advertisement -

ಹೆಚ್.ಎಸ್.ದೊರೆಸ್ವಾಮಿ |

ವ್ಯವಸಾಯ ಪ್ರಧಾನ ದೇಶ ಭಾರತ. ನೂರಕ್ಕೆ 60 ಜನ ಇಂದಿಗೂ ಗ್ರಾಮಗಳಲ್ಲೇ ವಾಸ ಮಾಡುತ್ತಿದ್ದಾರೆ. ಅವರು ತಾವು ಬೆಳೆದು ತಿಂದು ದೇಶದ ಎಲ್ಲ ಜನಕ್ಕೂ ಆಹಾರ ಪದಾರ್ಥಗಳನ್ನು ಒದಗಿಸುತ್ತಿದ್ದಾರೆ. ಇತ್ತೀಚೆಗೆ ಹೆಚ್ಚು ಭೂಮಿ ಇರುವವರು ದಿನಗೂಲಿ 500-600 ಕೊಟ್ಟು ವ್ಯವಸಾಯ ಮಾಡಿಸಲು ಆಗುತ್ತಿಲ್ಲ. ಅದರಿಂದ ಅವರು ತಮ್ಮ ಮನೆಗೆ ಬೇಕಾದಷ್ಟು ಆಹಾರ ಪದಾರ್ಥಗಳನ್ನು ಬೆಳೆದುಕೊಂಡು ಉಳಿದ ಭೂಮಿಯಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಆಹಾರ ಧಾನ್ಯ ಪೂರೈಕೆ ಕಷ್ಟವಾಗುತ್ತಿದೆ. ಒಂದು ಎರಡು ಎಕರೆ ಜಮೀನುಳ್ಳವರು ನೂರಕ್ಕೆ 60 ಜನ ಇದ್ದು, ಇವರು ಬೆಳೆಯುವ ಬೆಳೆ ಇವರ ಜೀವನ ನಿರ್ವಹಣೆಗೇ ಬೇಕಾಗುತ್ತದೆ. ಇವರ ಕೈಗೆ ಇನ್ನಷ್ಟು ಜಮೀನು ಒದಗಿಸಿದರೆ ಮಾತ್ರ ಈ ದೇಶದ ಜನರ ಆಹಾರ ಪೂರೈಕೆಯ ಕೆಲಸ ಸುಸೂತ್ರವಾಗಿ ನಡೆಯುತ್ತದೆ.
ಈ ಬಡ ರೈತರ ಕೈಗೆ ಇನ್ನಷ್ಟು ಜಮೀನು ಕೊಡ ಮಾಡಬೇಕಿದ್ದರೆ, ಈಗಿನ ಸೀಲಿಂಗ್ ಮಿತಿಯನ್ನು ಇಳಿಸಬೇಕು. ಆದಾಗಬೇಕಾದರೆ ಭೂಸುಧಾರಣೆ ಶಾಸನವನ್ನು ಪುನಃ ಪರಿಶೀಲಿಸಬೇಕು. ಸರ್ಕಾರ ಈ ಸುಧಾರಣೆಗೆ ಕೈ ಹಾಕದಿದ್ದರೆ. ನಮ್ಮ ಸರ್ಕಾರ ಇತರೆ ರಾಷ್ಟ್ರಗಳ ಹತ್ತಿರ ಭಿಕ್ಷಾಪಾತ್ರೆ ಹಿಡಿದುಕೊಂಡು ಹೀಗೆ ಅವರ ಬಾಗಿಲಲ್ಲಿ ನಿಲ್ಲಬೇಕಾಗುತ್ತದೆ. ವ್ಯವಸಾಯ ಪ್ರಧಾನವಾದ ಭಾರತ. ಆಹಾರ ಪದಾರ್ಥಗಳಿಗಾಗಿ ಬೇರೆ ದೇಶಗಳಿಗೆ ಜೋಳಿಗೆ ಹಿಡಿದು ಹೋಗುವುದು ಅಪಮಾನ. ಆದ್ದರಿಂದ ಭೂಮಿತಿ ಶಾಸನವನ್ನು ಪುನಃ ಪರಿಶೀಲಿಸುವುದು ಅತ್ಯಗತ್ಯ. ಸರ್ಕಾರ ಈ ಕೆಲಸವನ್ನು ಮಾಡದಿದ್ದರೆ ಇದಕ್ಕಾಗಿ ಬಡರೈತರು ತಮ್ಮ ಉಳಿವಿಗಾಗಿ ಹೋರಾಟ ಮಾಡುವುದು ಅನಿವಾರ್ಯ.
ಆಹಾರ ಧಾನ್ಯಗಳ ಸಗಟು ಮತ್ತು ಚಿಲ್ಲರೆ ವ್ಯಾಪಾರ ಮಾಡುವ ಹೊರದೇಶಗಳ ಕಂಪೆನಿಗಳು ಈಗ ಭಾರತಕ್ಕೆ ಲಗ್ಗೆ ಇಡುತ್ತಿವೆ. ವಾಲ್‍ಮಾರ್ಟ್, ಮೆಟ್ರೋ ಮುಂತಾದ ಬೃಹತ್ ಪ್ರಮಾಣದ ಮಳಿಗೆಗಳು ಭಾರತದ ಎಲ್ಲ ಪಟ್ಟಣಗಳಿಗೆ, ಜಿಲ್ಲಾ ಮುಖ್ಯಸ್ಥಳಗಳಿಗೆ ಬಂದಿವೆ. ಇದರ ಜೊತೆ ಜೊತೆಗೆ ಭಾರತೀಯ ಬಂಡವಾಳಗಾರರೂ ಬಿಗ್‍ಬಜಾರ್‍ನಂತಹ ಮಳಿಗೆ ಸಮುಚ್ಚಯಗಳನ್ನು ಅಲ್ಲಲ್ಲಿ ಸ್ಥಾಪಿಸಲು ತೊಡಗಿದ್ದಾರೆ. ಇವರೆಲ್ಲರ ದಾಳಿಯಿಂದಾಗಿ ಸಣ್ಣ-ಪುಟ್ಟ ಆಹಾರ ಧಾನ್ಯ ಪೂರೈಕೆಯ ಅಂಗಡಿಗಳು ಮಾಯವಾಗುತ್ತಿವೆ. ಇವೆಲ್ಲ ಸಣ್ಣ-ಪುಟ್ಟ ಅಂಗಡಿಗಳೂ ಈ ಬ್ರಹ್ಮರಾಕ್ಷಸನ ಹೊಟ್ಟೆಯೊಗಳಗೆ ಸೇರಿ ಹೋಗಿವೆ. ಜಿಲ್ಲರೆ ಅಂಗಡಿ ನಡೆಸುತ್ತಿದ್ದ ಸಹಸ್ರಾರು ಮಂದಿ ಈ ಪೈಪೋಟಿ ಎದುರಿಸಲಾಗದೆ ಬೀದಿಪಾಲಾಗಿದ್ದಾರೆ. ನಮ್ಮ ಸರ್ಕಾರಗಳೇ ಈ ಮಾರ್ಟ್‍ಗಳನ್ನು ಆಹ್ವಾನಿಸುತ್ತವೆ. ಅವರಿಗೆ ಬೇಕಾದಷ್ಟು ಭೂಮಿ, ಜಲ, ವಿದ್ಯುತ್ ಎಲ್ಲವನ್ನೂ ಒದಗಿಸುತ್ತವೆ.
ಭಾರತದ ರೈತರಲ್ಲೂ ಈಗ ಎರಡು ಬಣಗಳಾಗಿವೆ. ಮೊದಲನೆಯ ಬಣ ದೆಹಲಿಗೆ ಮುತ್ತಿಗೆ ಹಾಕಿ, ಬ್ಯಾಂಕ್ ಸಾಲಮನ್ನಾ ಮಾಡಿ, ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಬೆಳೆಗಳಿಗೆ ಸಬ್ಸಿಡಿ ಕೊಡಿ ಮುಂತಾದ ಬೇಡಿಕೆಗಳನ್ನು ಇಟ್ಟರೆ, ಶಿರ್ಡಿಯಲ್ಲಿ ಸಮಾವೇಶಗೊಂಡ ರೈತಸಂಘಟನೆಗಳು ಅದಕ್ಕೆ ವ್ಯತಿರಿಕ್ತವಾದ ಬೇಡಿಕೆಗಳನ್ನು ಇಟ್ಟವು. ಅವರೇನು ಹೇಳಿದರೆಂಬುದು ನೋಡಿದರೆ, ಕೆಲವು ರೈತರ ಪರವಾಗಿಯೇ ಇದ್ದಾವೆ ಎನಿಸಿದರೂ, ನಿಧಾನಕ್ಕೆ ಬೇರೆಯದೇ ಅಜೆಂಡಾ ಇರುವುದು ಅರಿವಾಗುತ್ತಾ ಹೋಗುತ್ತವೆ.
ಅವೆಂದರೆ ರೈತರಿಗೆ ಹೆಚ್ಚಿನ ಸ್ವಾತಂತ್ರ್ಯ ಕೊಡಿ, ರೈತರನ್ನು ಸರ್ಕಾರದ ಬಂಧನದಿಂದ ಬಿಡುಗಡೆ ಮಾಡಿ ರೈತ ತುಂಬ ತೊಂದರೆಯಲ್ಲಿದ್ದಾಗ ಅವನ ಮೇಲೆ ಸಲ್ಲದ ಸುಧಾರಣೆಗಳನ್ನು ತಂದು ಹೇರಬೇಡಿ, ಸಾಲಮನ್ನಾ ಒಂದೇ ರೈತರ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ, ಆದ್ದರಿಂದ ಸರ್ಕಾರದ ಖಜಾನೆ ಖಾಲಿಯಾಗುತ್ತದೆ. ಹೀಗೇ ಮುಂದುವರಿದರೆ ಸಾಲ ಮಾಡುವ ರೈತ ಸಾಲ ಮಾಡುವುದು ತನ್ನ ಹಕ್ಕು ಅದನ್ನು ತೀರಿಸುವುದು ಸರ್ಕಾರದ ಕರ್ತವ್ಯ ಎಂದು ಭಾವಿಸಲು ಎಡೆಮಾಡಿಕೊಡುತ್ತದೆ. ಅಲ್ಲದೆ ಸಾಲಮನ್ನಾದ ಲಾಭ ಬಹುಸಂಖ್ಯೆಯಲ್ಲಿರುವ ಒಂದು ಎರಡು ಎಕರೆ ಜಮೀನುಳ್ಳವರಿಗೆ ಖಂಡಿತ ಸಿಗುವುದಿಲ್ಲ. ಶ್ರೀಮಂತ ರೈತರಿಗೆ ಲಕ್ಷಗಟ್ಟಲೆ ಲಾಭ ಆಗುವುದಾದರೆ ಬಡ ರೈತನಿಗೆ ಸಾವಿರ, ಎರಡು ಸಾವಿರ ಕೂಡ ಸಿಗುವುದಿಲ್ಲ. ರೈತರ ರ್ಯಾಲಿಯ ಈ ಮಾತುಗಳನ್ನು ಒಪ್ಪಿಕೊಳ್ಳಬಹುದು. ಆದರೆ ಅಲ್ಲಿ ವ್ಯಕ್ತವಾದ ಇನ್ನು ಕೆಲವು ಸಲಹೆಗಳು ಬಡ ರೈತನ್ನು ಬೀದಿಪಾಲು ಮಾಡುವ ಸಂಚಿನಂತೆ ತೋರುತ್ತದೆ. ಹೆಚ್ಚಿನ ಸ್ವಾತಂತ್ರ್ಯವನ್ನು ರೈತರಿಗೆ ನೀಡಿ ಎಂದು ಸರ್ಕಾರಕ್ಕೆ ತಿಳಿಸುತ್ತಾ ಹೆಚ್ಚಿನ ಬಂಡವಾಳ, ವ್ಯವಸಾಯ ಕ್ಷೇತ್ರಕ್ಕೆ ಹರಿದು ಬರುವಂತಾಗಬೇಕು ಎಂಬ ಸಲಹೆಯನ್ನು ಮಾಡಲಾಗಿದೆ. ವ್ಯವಸಾಯ ಕ್ಷೇತ್ರದಿಂದ ರಾಷ್ಟ್ರದ ಬೊಕ್ಕಸಕ್ಕೆ ಶೇ.14ರಷ್ಟು ಮಾತ್ರ ಆದಾಯ ಬರುತ್ತದೆ. ಆದರೆ ಭಾರತದ ಒಟ್ಟು ಕಾರ್ಮಿಕರ ಸಂಖ್ಯೆಯ ಅರ್ಧದಷ್ಟು ಕಾರ್ಮಿಕರು ಗ್ರಾಮೀಣ ಭಾರತದಲ್ಲೇ ಕೆಲಸ ಮಾಡುವವರು.
ಆದರೆ ವ್ಯವಸಾಯ ಕ್ಷೇತ್ರದಿಂದ ಹೊರಗಿರುವ ಕಾರ್ಮಿಕ ಗ್ರಾಮೀಣ ಕಾರ್ಮಿಕನಿಗಿಂತ ಮೂರು ಪಟ್ಟು ಹೆಚ್ಚಿನ ವರಮಾನ ಪಡೆಯುತ್ತಾನೆ. ಗ್ರಾಮೀಣ ಕಾರ್ಮಿಕನಿಗೆ ಪಟ್ಟಣದ ಕಾರ್ಮಿಕರಿಗೆ ಸಿಗುವಷ್ಟು ಆದಾಯ ದೊರಕಬೇಕಾದರೆ ಕೆಲವು ಸುಧಾರಣೆಗಳನ್ನ ವ್ಯವಸಾಯ ಕ್ಷೇತ್ರದಲ್ಲಿ ತರಬೇಕಾಗುವುದು. ಈ ಸುಧಾರಣೆಗಳನ್ನು ಜಾರಿಗೊಳಿಸಲು ಸ್ವಲ್ಪ ಕಾಲಾವಕಾಶ ಬೇಕಾಗಿರುವುದರಿಂದ ಕೂಡಲೇ ಮಾಡಬೇಕಾದ ಕೆಲಸವೆಂದರೆ ವ್ಯವಸಾಯಗಾರನನ್ನು ಸರ್ಕಾರ ಬಂಧಮುಕ್ತನನ್ನಾಗಿ ಮಾಡಬೇಕು. ರೈತ ಬೆಳೆದ ಬೆಳೆಗೆ ತಾನೇ ಬೆಲೆ ನಿರ್ಧರಿಸುವಂತಾಗಬೇಕು. ತನಗೆ ಬೇಕಾದವರಿಗೆ ತನ್ನ ಜಮೀನನ್ನು ಮಾರಿಕೊಳ್ಳುವ ಮತ್ತು ಬೇರೆಯವರಿಗೆ ವರ್ಗಾಯಿಸುವ ಅಧಿಕಾರ ರೈತನಿಗೆ ಇರಬೇಕು. ಭೂಮಿ ಕಾಯ್ದೆಯನ್ನು ರದ್ದು ಮಾಡಬೇಕು. ವ್ಯವಸಾಯ ಮಾಡಲಾಗುತ್ತಿರುವ ಜಮೀನನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವ ಅವಕಾಶವಿರಬೇಕು. ಈ ವಿಚಾರದಲ್ಲಿ ಸರ್ಕಾರದ ನಿರ್ಬಂಧಗಳು ಹಾಗೂ ಭ್ರಷ್ಟಾಚಾರ ಇರಕೂಡದು. ಈ ಸುಧಾರಣೆಗಳಲ್ಲಿ ಬೆಳೆದ ಬೆಳೆಗಳಿಗೆ ಅನಿರ್ಬಂಧಿತ ರಫ್ತು ಅವಕಾಶ ಇರಬೇಕು. ಫಾರಂಗಳಲ್ಲಿ ವ್ಯವಸಾಯೋತ್ಪನ್ನಗಳನ್ನು ಬೆಳೆಯುವ ಕಂಪನಿಗಳು ಹೊಸ ಹೊಸ ಪ್ರಯೋಗಗಳನ್ನು ಮಾಡುವುದರಲ್ಲಿ ಬಹಳ ಮುಂದಿವೆ. ಅವು ಫಾರಂಗಳ ಒಕ್ಕೂಟ ರಚಿಸಿ, ಅದರ ಆಡಳಿತವನ್ನು ನಡೆಸುವ ಕೌಶಲ್ಯವನ್ನು ಹೊಂದಿವೆ. ಆ ಮೂಲಕ ರೈತರಿಗೆ ಹೆಚ್ಚಿನ ಲಾಭ ದೊರಕಿಸಲೂ ಸಾಧ್ಯವಾಗುತ್ತದೆ. ಆದರೆ ಈ ಕಂಪೆನಿಗಳು ತಮ್ಮ ಮೇಲೆ ಸರ್ಕಾರ ಹೇರುವ ತೆರಿಗೆಗಳಿಂದ ಮುಕ್ತಿ ಪಡೆಯಬೇಕು ಮತ್ತು ಸರ್ಕಾರ ಇಂತಹ ಕಂಪೆನಿಗಳು ಅಸ್ತಿತ್ವಕ್ಕೆ ಬರಲು ನೆರವು ನೀಡಬೇಕು ಮತ್ತು ಬೆಳೆಯ ಮೇಲಿನ ತೆರಿಗೆಗಳನ್ನು ರದ್ದು ಮಾಡಬೇಕು. ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ರೈತರು ಬಡವರಾಗಿ ಉಳಿದಿಲ್ಲ. ಭಾರತದಲ್ಲೂ ಈ ಬಗೆಯ ಸುಧಾರಣೆಗಳನ್ನು ಜಾರಿಗೆ ತರಬೇಕು ಎಂದು ಅಭಿಪ್ರಾಯಪಡಲಾಗಿದೆ. ಶಿರಡಿಯಲ್ಲಿ ಸಮಾವೇಶಗೊಂಡ ಈ ರೈತರು ಶ್ರೀಮಂತ ವರ್ಗದವರು ಮತ್ತು ಬಂಡವಾಳ ಶಾಹಿಗಳ ಬಾಲಬಡುಕರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಪಟ್ಟಭದ್ರ ಹಿತಾಸಕ್ತಿಯನ್ನು ಕಾಯುವ ಈ ಬಾಲಬಡುಕ ರೈತಮುಖಂಡರು ಒಂದು ಎಕರೆ ಎರಡು ಎಕರೆ ಹೊಂದಿರುವ ¨ಡ ರೈತರ ಜಮೀನುಗಳನ್ನೆಲ್ಲ ಕೊಂಡುಕೊಳ್ಳಲು ಆ ಶ್ರೀಮಂತ ಕಂಪೆನಿಗಳನ್ನು ಬಳಸಿಕೊಳ್ಳಬಹುದು. ಆ ಮೂಲಕ ಕನ್ಸಾಲಿಡೇಷನ್ ಆಫ್ ಹೋಲ್ಡಿಂಗ್ಸ್‍ಗೆ ಕೈ ಹಾಕಬಹುದು. ಆ ಮೂಲಕ ಗ್ರಾಮೀಣ ಬಡರೈತರನ್ನು ಬೀದಿಪಾಲು ಮಾಡಬಹುದು. ಬಡ ರೈತರ ಕೈಯಲ್ಲಿ ಜಮೀನಿರುವುದನ್ನು ಶ್ರೀಮಂತ ಕಂಪೆನಿಗಳು ಸಹಿಸುವುದಿಲ್ಲ. ಅದಕ್ಕೆ ಕಾರಣವೇನೆಂದರೆ ಈ ಬಡರೈತರಿಂದ ಅವರಿಗೆ ಏನೂ ಪ್ರತಿಫಲ ಸಿಗುವುದಿಲ್ಲ. ಅಲ್ಲದೆ ಈ ಬಡ ರೈತರನ್ನು ಭೂರಹಿತರನ್ನಾಗಿ ಮಾಡಿದರೆ, ಅವರೆಲ್ಲರೂ ಶ್ರೀಮಂತ ರೈತರ ಜಮೀನುಗಳಲ್ಲಿ ದಿನಗೂಲಿಗಳಾಗಿ ಕೆಲಸಕ್ಕೆ ಸೇರಬಹುದು. ಅವರ ದುಡಿಮೆಯ ಲಾಭವನ್ನು ಶ್ರೀಮಂತ ರೈತರು ಹಾಗೂ ಬಂಡವಾಳ ಹೂಡುವ ಕಾರ್ಪೊರೇಟ್ ಕಂಪನಿಗಳು ಲಪಟಾಯಿಸಬಹುದು ಎಂಬುದು ಅವರ ಲೆಕ್ಕಾಚಾರ.
ನಮ್ಮ ಶ್ರೀಮಂತ ರೈತರು ತಿಳಿಯಬೇಕಿರುವುದೇನೆಂದರೆ ಭಾರತ ಅಮೆರಿಕಾ ಅಲ್ಲ. ಅಮೆರಿಕಾ ಒಂದು ಔದ್ಯೋಗಿಕ ದೇಶ. ಅಲ್ಲಿ ವ್ಯವಸಾಯ ಮಾಡುವವರ ಸಂಖ್ಯೆ ಬಹಳ ಕಡಿಮೆ. ವ್ಯವಸಾಯದಲ್ಲಿ ತೊಡಗುವ ಹಿಡಿ ಮಂದಿಗೆ ಸಾವಿರ ಸಾವಿರ ಎಕರೆ ಜಮೀನು ಇರುತ್ತದೆ. ಇವರಿಗೆ ವ್ಯವಸಾಯ ಕೂಲಿಗಳು ಸಿಗುವುದು ದುರ್ಲಭ. ಇದರಿಂದಾಗಿ ಅಲ್ಲಿಯ ರೈತರು ಉಳುವುದಕ್ಕೆ ಕಳೆಕೀಳುವುದಕ್ಕೆ, ಪೈರು ಕಟಾವು ಮಾಡುವುದಕ್ಕೆ, ಕಾಳು ಒಣಗಿಸುವುದಕ್ಕೆ ಹೀಗೆ ಎಲ್ಲಕ್ಕೂ ಯಂತ್ರಗಳನ್ನು ಅವಲಂಬಿಸಬೇಕು. ಅವಿಲ್ಲದೆ ವ್ಯವಸಾಯವೇ ಸಾಧ್ಯವಿಲ್ಲ.
ಭಾರತ ವ್ಯವಸಾಯ ಪ್ರಧಾನ ದೇಶ. ಜನಸಂಖ್ಯೆ ಅಧಿಕವಾಗಿರುವ ದೇಶ. ಅಷ್ಟೇ ಅಲ್ಲ ಭಾರತದ ಹಳ್ಳಿಗಳಲ್ಲಿ ಒಟ್ಟು ಜನಸಂಖ್ಯೆಯ ಶೇ.60ರಿಂದ 70 ಜನ ವಾಸಿಸುತ್ತಾರೆ. ಇವರಲ್ಲಿ ಒಂದು ಎರಡು ಎಕರೆ ಜಮೀನುಳ್ಳವರು ಹಾಗೂ ವ್ಯವಸಾಯ ಕಾರ್ಮಿಕರು ಗ್ರಾಮೀಣ ಜನಸಂಖ್ಯೆಯ ಶೇ.60 ಜನ ಇದ್ದಾರೆ. ಇಷ್ಟು ಅಪಾರ ಸಂಖ್ಯೆಯ ನಿರುದ್ಯೋಗಿ ರೈತಾಪಿಗಳಿಗೆ ಗ್ರಾಮಗಳಲ್ಲೆ ಕೆಲಸ ಒದಗಿಸುವುದು ಸಾಧ್ಯವಿಲ್ಲ. ಹಾಗೆಂದು ಅವರನ್ನೆಲ್ಲ ನಗರಗಳಿಗೆ ಅಟ್ಟಿದರೆ ಅಲ್ಲಿ ಅವರಿಗೆಲ್ಲ ಜೀವನ ನಿರ್ವಹಣೆಗೆ ಬೇಕಾದಷ್ಟು ವರಮಾನ ದೊರಕಿಸುವುದಾದರೂ ಹೇಗೆ?
ಹಳ್ಳಿಯಲ್ಲೇ ಉಳಿಯುವ ಸಂಕಲ್ಪ ಮಾಡುವ ಈ ನತದೃಷ್ಟರಿಗೆಲ್ಲಾ ಶ್ರೀಮಂತ ರೈತರು, ಅವರ ಬೆಂಬಲಕ್ಕೆ ನಿಂತ ಕಾರ್ಪೊರೇಟ್ ಕಂಪನಿಗಳು ಅವರ ಹೊಟ್ಟೆ ತುಂಬುವಷ್ಟು ವೇತನವನ್ನು ಕೊಟ್ಟು ಪೂರೈಸಬಲ್ಲವೇ? ಕನ್ಸಾಲಿಡೇಷನ್ ಆಫ್ ಹೋಲ್ಡಿಂಗ್ ಮಾಡಿದ ಮೇಲೆ ಅಮೆರಿಕಾದಂತೆ ಭಾರತದಲ್ಲಿಯೂ ವ್ಯವಸಾಯ ಮಾಡಲು ಎಲ್ಲಾ ಹಂತದಲ್ಲೂ ಯಂತ್ರಗಳನ್ನೇ ಬಳಸುವುದು ಅನಿವಾರ್ಯವಾಗುತ್ತದೆ. ಯಂತ್ರಗಳನ್ನು ಎಲ್ಲಾ ಹಂತದಲ್ಲೂ ಬಳಸಿದ ಮೇಲೆ ಗ್ರಾಮಗಳಲ್ಲಿರುವ ಈ ನಿರುದ್ಯೋಗಿಗಳಿಗÉಲ್ಲ ದುಡಿಯಲು ಅವಕಾಶ ಕೊಡುವುದು ಸಾಧ್ಯವಿಲ್ಲದ ಮಾತು.
ಒಟ್ಟಿನಲ್ಲಿ ಈ ಪಟ್ಟಭದ್ರ ಹಿತಾಸಕ್ತಿಗಳು ಅಂದುಕೊಂಡಂತೆ ವ್ಯವಸಾಯ ಕ್ಷೇತ್ರದಲ್ಲಿ ಈ ಕ್ರಾಂತಿಯಾದಲ್ಲಿ ಹಳ್ಳಿಗಳಲ್ಲಿ ಉಳ್ಳವರು ಮತ್ತು ಬಡವರ ಮಧ್ಯೆ ಒಂದು ವಿಪ್ಲವ ನಡೆಯಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...