Homeಅಂಕಣಗಳುಗಾಂಧಿ, ನೆಹರೂ, ಪಟೇಲ್ ಬಾಂಧವ್ಯದ ಬಗ್ಗೆ ಮೋದಿಗೇನು ಗೊತ್ತು....

ಗಾಂಧಿ, ನೆಹರೂ, ಪಟೇಲ್ ಬಾಂಧವ್ಯದ ಬಗ್ಗೆ ಮೋದಿಗೇನು ಗೊತ್ತು….

- Advertisement -
- Advertisement -

ಎಸ್.ಎಸ್.ದೊರೆಸ್ವಾಮಿ |

ಪ್ರಧಾನಿ ಮೋದಿ ಗುಜರಾತಿನ ನಾಯಕರತ್ನಗಳಾದ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಾಯಿ ಪಟೇಲ್ ಇಬ್ಬರಲ್ಲಿ ಒಬ್ಬರನ್ನು ಮರೆಸುವ ಕುತಂತ್ರ ಮಾಡುತ್ತಿರುವುದು ಮತ್ತು ಮತ್ತೊಬ್ಬರನ್ನು ತಮ್ಮ ಪ್ರತಿಷ್ಠೆ ಬೆಳೆಸಿಕೊಳ್ಳಲು ದುರುಪಯೋಗಪಡಿಸಿಕೊಳ್ಳುತ್ತಿರುವುದು ನಿಜಕ್ಕೂ ಹೇಯವಾದ ಕೆಲಸ.

ಮಹಾತ್ಮ ಗಾಂಧಿಯವರು ಜವಹರಲಾಲ್‌ರನ್ನು ಬೆಳೆಯಲು ಅವಕಾಶ ಮಾಡಿಕೊಟ್ಟು ಸರ್ದಾರ್ ಪಟೇಲರನ್ನು ಕಡೆಗಣಿಸಿದರು ಎಂಬ ಸುಳ್ಳು ಆಪಾದನೆ ಮೂಲಕ ಜನತೆಯ ಮೆಚ್ಚುಗೆ ಗಳಿಸಲು ಹಾಗೂ ಮತಗಳನ್ನು ಕಸಿಯಲು ಸಂಚು ಮಾಡಿದ್ದಾರೆ. ಗುಜರಾತ್‌ನಲ್ಲಿ ಪಟೇಲರ ಎತ್ತರ ಪ್ರತಿಮೆ ಸ್ಥಾಪಿಸಿದ್ದು ಕೂಡಾ ಇದರದೇ ಒಂದು ಭಾಗ.

ಇತಿಹಾಸದ ಕುರಿತು ಮೋದಿಯ ಹುಸಿಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ ನಾವು ಮೊದಲು ಗಾಂಧೀಜಿ, ನೆಹರು, ಪಟೇಲರ ಸಂಬಂಧ ಹೇಗಿತ್ತು ಎಂಬುದನ್ನು ಅರಿಯಬೇಕು. ಗಾಂಧೀಜಿ ಸೆರೆಮನೆಗೆ ಹೋದಾಗಲೆಲ್ಲ ವಲ್ಲಭಭಾಯಿ ಅವರ ಜೊತೆಗೇ ಇರುತ್ತಿದ್ದರು. ಸೆರೆಮನೆಯಲ್ಲಿ ಗಾಂಧೀಜಿಯವರ ನೆರವಿಗೆಂದು ಹಾಗೆ ಮಾಡುತ್ತಿದ್ದರು. ಹೀಗಾಗಿ ಅವರಿಬ್ಬರ ಸ್ನೇಹ-ಸಂಬಂಧ ಗಾಢವಾಗಿತ್ತು. ಸರ್ದಾರ್ ಪಟೇಲರ ಧೈರ್ಯ, ಸಾಹಸ, ರಾಜಕೀಯ ಚಾಣಾಕ್ಷತನ, ಹಿಡಿದ ಕೆಲಸ ಮುಗಿಸುವ ಛಲ ಎಲ್ಲದರ ಬಗ್ಗೆ ಗಾಂಧೀಜಿಗೆ ಅಪಾರ ಮೆಚ್ಚುಗೆಯಿತ್ತು.

ಸ್ವಾತಂತ್ರ್ಯ ಪ್ರಾಪ್ತವಾದ ಕೂಡಲೇ ಸ್ವತಂತ್ರ ಭಾರತದ ಆಡಳಿತ ನಡೆಸಲು ದಕ್ಷರಾದ ನಾಯಕರನ್ನು ಗಾಂಧೀಜಿಯವರು ಹುಡುಕಿಕೊಳ್ಳಬೇಕಾಗಿತ್ತು. ಜವಾಹರ್‌ಲಾಲ್ ನೆಹರು ಸ್ವಾತಂತ್ರ್ಯ ಪೂರ್ವದಲ್ಲೇ ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಯುತ್ತಿದ್ದ ಅಂತರರಾಷ್ಟ್ರೀಯ ಸಮಾರಂಭಗಳಲ್ಲಿ, ಸೆಮಿನಾರ್‌ಗಳಲ್ಲಿ ಭಾಗವಹಿಸುತ್ತಿದ್ದರು. ಅಂದಿನ ವಿಶ್ವದ ಅನೇಕ ರಾಷ್ಟ್ರಗಳ ನಾಯಕರ ಸ್ನೇಹವನ್ನು ಬೆಳೆಸಿಕೊಂಡಿದ್ದರು. ಅಲ್ಲದೆ ನೆಹರು ಅಂತರಾಷ್ಟ್ರೀಯ ಸಮಸ್ಯೆಗಳ ಅಧ್ಯಯನ ಮಾಡಿದ್ದರು. ಇದೆಲ್ಲವನ್ನೂ ತಿಳಿದ ಗಾಂಧೀಜಿ ನೆಹರು ಅವರನ್ನು ಪ್ರಧಾನಿಯನ್ನಾಗಿ ಮಾಡಲು ಬಯಸಿದರು. ಬಿಗಿಯಾಗಿ ಆಡಳಿತ ನಡೆಸುವ ಸರ್ದಾರ್ ಪಟೇಲರ ದಕ್ಷತೆಯು ಹೊಸದಾಗಿ ರೂಪುಗೊಳ್ಳುತ್ತಿರುವ ಸ್ವದೇಶಿ ಸರ್ಕಾರದ ಕೈಬಲಗೊಳಿಸಲು ಅನಿವಾರ್ಯ ಎಂಬುದನ್ನರಿತೇ ಪಟೇಲರನ್ನು ಗೃಹಮಂತ್ರಿಯಾಗಿಸಬೇಕೆಂದು ಇಚ್ಛಿಸಿದರು.

ಅದಕ್ಕೆ ಕಾರಣವೂ ಇತ್ತು. ಭಾರತದಿಂದ ಟಿಸಿಲೊಡೆದು ಪಾಕಿಸ್ತಾನ ಎಂಬ ಹೊಸ ದೇಶ ಅಸ್ತಿತ್ವಕ್ಕೆ ಬಂದೊಡನೆ ಅಲ್ಲಿದ್ದ ಮುಸ್ಲಿಮೇತರರನ್ನು ಹೊರಗಟ್ಟುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯಿತು. ಹಿಂದೂಗಳು, ಸಿಖ್ಖರು ಮುಂತಾದವರ ಆಸ್ತಿಗಳನ್ನು ವಶಪಡಿಸಿಕೊಳ್ಳುವುದು ಅವರ ಮೇಲೆ ದೌರ್ಜನ್ಯ ಮಾಡುವುದು, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುವುದು ಕ್ರೂರವಾಗಿ ನಡೆದುಕೊಳ್ಳುವುದು ಒಂದೇ ಸಮನೆ ನಡೆಯಿತು. ಇತ್ತ ಭಾರತದಲ್ಲೂ ಅಂತದ್ದೇ ಸನ್ನಿವೇಶಗಳು ಪ್ರತಿಫಲನಗೊಂಡವು. ದೌರ್ಜನ್ಯಕ್ಕೊಳಗಾದ ಈ ಜನ ಸಹಸ್ರಾರು ಸಂಖ್ಯೆಯಲ್ಲಿ ಜೀವ ಉಳಿಸಿಕೊಳ್ಳುವ ಏಕೈಕ ಕಾರಣಕ್ಕಾಗಿ ಪಾಕಿಸ್ತಾನದಿಂದ ಭಾರತದ ಕಡೆಗೆ, ಭಾರತದಿಂದ ಪಾಕಿಸ್ತಾನದ ಕಡೆಗೆ ಹರಿದಾಡಿದರು. ಹೀಗೆ ಭಾರತಕ್ಕೆ ಪ್ರವಾಹದೋಪಾದಿಯಲ್ಲಿ ಧಾವಿಸಿ ಬಂದ ಈ ನತದೃಷ್ಟರನ್ನು ಸಾಂತ್ವನಗೊಳಿಸುವುದು ಅವರಿಗೆ ನಿಲ್ಲಲು ನೆಲೆ ಕಲ್ಪಿಸುವುದು, ಊಟ ಉಪಚಾರಗಳ ಏರ್ಪಾಟು ಮಾಡುವುದು ಒಂದುಕಡೆಗಾದರೆ, ಭಾರತದಲ್ಲಿ ಹೊತ್ತಿ ಉರಿಯುತ್ತಿದ್ದ ಕೋಮುದಳ್ಳುರಿ ನಂದಿಸುವ ಕೆಲಸ ಮತ್ತೊಂದು ಕಡೆ ಏಕಕಾಲದಲ್ಲಿ ನಡೆಯಬೇಕಿತ್ತು. ನಿರಾಶ್ರಿತರೆಲ್ಲ ಬೆಂದು ಬೆಂಡಾದ ಜ್ವಾಲೆಯ ತುಣುಕುಗಳಂತೆ ಕಾಣುತ್ತಿದ್ದರು. ಅವರಲ್ಲಿ ಶಾಂತಿ ಮೂಡಿಸಿ ಅವರ ಉದ್ರೇಕ, ಉನ್ಮಾದಗಳನ್ನು ಸಹಿಸಿಕೊಂಡು ಅವರಿಗೆ ಸಾಂತ್ವನ ಹೇಳಿ ನಿಜ ಜೀವನಕ್ಕೆ ಅವರನ್ನು ತೊಡಗಿಸುವ ಮಹತ್ಕಾರ್ಯವನ್ನು ಜವಹರಲಾಲ್ ನೆಹರು ಮತ್ತು ಸರ್ದಾರ್ ಪಟೇಲರು ಬಹಳ ಯಶಸ್ವಿಯಾಗಿ ನಿರ್ವಹಿಸಿದರು. ಕುರುಕ್ಷೇತ್ರದಲ್ಲಿ ಈ ನಿರಾಶ್ರಿತರಿಗೆಲ್ಲ ಊಟ, ವಸತಿ, ವೈದ್ಯಕೀಯ ಸಹಾಯ, ರಕ್ಷಣೆ ಎಲ್ಲವನ್ನೂ ಒದಗಿಸಿಕೊಟ್ಟ ಕೀರ್ತಿ ಇವರಿಬ್ಬರು ಮಹಾನುಭಾವರಿಗೆ ಸಂದಾಯವಾಗಬೇಕು.

ಇಂಗ್ಲಿಷರು ಸ್ವಾತಂತ್ರ್ಯ ಘೋಷಿಸಿ ಹೋಗುವ ಮುನ್ನ ಭಾರತದಲ್ಲಿರುವ 562 ರಾಜ ಮಹಾರಾಜರು, ನವಾಬರು ಸ್ವತಂತ್ರ ರಾಜ್ಯಗಳನ್ನು ರಚಿಸಿಕೊಂಡು ಇರಬಹುದು ಎಂದು ಘೋಷಿಸಿ ಹೋಗಿದ್ದರು. ಸರ್ದಾರ್ ಪಟೇಲರು ಗೃಹ ಸಚಿವರಾಗಿ ಮಾಡಿದ ಮಹತ್ತರವಾದ ಕೆಲಸ ಎಂದರೆ ಈ ೫೬೨ ಸಂಸ್ಥಾನಗಳನ್ನೂ ಸ್ವತಂತ್ರ ಭಾರತದೊಳಗೆ ವಿಲೀನಮಾಡಿದ್ದು. ಆ ಮೂಲಕ ಸಾವಿರಾರು ವರ್ಷಗಳಿಂದ ಹೋಳುಹೋಳಾಗಿದ್ದ ಭಾರತವನ್ನು ಒಂದು ಆಡಳಿತ ಘಟಕವನ್ನಾಗಿ ರೂಪಿಸಿದರು. ಪ್ರಧಾನಿ ಜೊತೆ ಅವರಿಗೆ ಸಮನ್ವಯ ಇರದೇ ಹೋಗಿದ್ದರೆ ಇದು ಸಾಧ್ಯವಾಗುತ್ತಿತ್ತೇ?

ಜವಹರ್‌ಲಾಲ್ ನೆಹರು ವಿಶ್ವಶಾಂತಿ ಹಾಗೂ ನಿರ್ಲಿಪ್ತ ನೀತಿಗಳಿಗೆ ಹೆಸರಾದವರು. ವಿಶ್ವಶಾಂತಿ ನೆಲೆಸಬೇಕಾದರೆ ಎಲ್ಲ ರಾಷ್ಟ್ರಗಳೂ ಯುದ್ಧಗಳನ್ನು ನಿಷೇಧಿಸಬೇಕು, ರಾಷ್ಟ್ರರಾಷ್ಟ್ರಗಳಲ್ಲಿ ಸಖ್ಯ ಬೆಳೆಯಬೇಕು, ಒಂದು ರಾಷ್ಟ್ರದ ಕೊರತೆಯನ್ನು ಮತ್ತೊಂದು ರಾಷ್ಟ್ರ ನೀಗಬೇಕು ಎಂಬುದು ಜವಹರಲಾಲ್‌ರ ಧ್ಯೇಯವಾಗಿತ್ತು. ಅಮೆರಿಕ ಮುಂತಾದ ಎಲ್ಲ ಪ್ರಬಲ ರಾಷ್ಟ್ರಗಳೂ ಬಾಂಬುಗಳನ್ನು ತಯಾರಿಸಿ ಪೇರಿಸಿಡುವ ಕೆಲಸದಲ್ಲಿ ತೊಡಗಿದ್ದಾಗ ಭಾರತ ಬಾಂಬು ತಯಾರಿಕೆಗೆ ವಿರೋಧ ವ್ಯಕ್ತಪಡಿಸಿದ ಏಕೈಕ ರಾಷ್ಟ್ರ. Bomb is no detterant ಎಂದು ನೆಹರು ಘೋಷಣೆ ಮಾಡಿದರು.

ಜವಾಹರಲಾಲ್ ನೆಹರೂರವರ ಅಲಿಪ್ತ ನೀತಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮನ್ನಣೆ ತಂದುಕೊಟ್ಟಿತು. ಅವರ ಆಡಳಿತ ಕಾಲದಲ್ಲಿ ಅಮೆರಿಕ ಮತ್ತು ರಷ್ಯ ಎರಡು ಪ್ರತ್ಯೇಕ ಶಕ್ತಿ ಕೇಂದ್ರಗಳಾಗಿದ್ದವು. ಯಾವುದೇ ರಾಷ್ಟ್ರದ ನೆರವಿಗೆ ಯುದ್ಧದಲ್ಲಿ ಅಮೆರಿಕ ಕೈ ಜೋಡಿಸಿದರೆ ಅದರ ವಿರುದ್ಧ ಹೋರಾಡುವ ರಾಷ್ಟ್ರದ ನೆರೆವಿಗೆ ರಷ್ಯಾ ಧಾವಿಸುತ್ತಿತ್ತು. ಯುದ್ಧದಾಹಿ ರಾಷ್ಟ್ರಗಳು ಈ ಬಲಿಷ್ಠ ರಾಷ್ಟ್ರಗಳ ಬೆಂಬಲ ಕೋರುತ್ತಿದ್ದವು. ಜವಹರ್‌ಲಾಲ್ ನೆಹರೂರವರು ಈ ಸಂದರ್ಭದಲ್ಲಿ ಭಾರತ, ಅಮೆರಿಕ ಅಥವಾ ರಷ್ಯಾದ ಜೊತೆಗೆ ಸೇರಿಕೊಳ್ಳದೆ ತಟಸ್ಥ ರಾಷ್ಟ್ರವಾಗಿ ಉಳಿಯುವಂತೆ ನೋಡಿಕೊಂಡರು.

ಮೋದಿಯವರು ನೆಹರು, ಪಟೇಲರ ಅಧಿಕಾರದ ಅವಧಿಯ ಇತಿಹಾಸವನ್ನು ಓದಿಲ್ಲ. ಮನಸೋ ಇಚ್ಛೆ ಮಾತನಾಡಿ ನೆಹರು-ಪಟೇಲ್ ಇಬ್ಬರೂ ಶತ್ರುಗಳು; ಗಾಂಧೀಜಿಯವರು ಪಟೇಲರನ್ನು ಕಡೆಗಣಿಸಿದರು ಎನ್ನುವ ಸುಳ್ಳು ಆಪಾದನೆ ಮೂಲಕ ಈಗ ತಾವು ಸರ್ದಾರ್ ಪಟೇಲರಿಗೆ ಸಲ್ಲಬೇಕಾದ ಸ್ಥಾನವನ್ನು ಕೊಡಿಸಲು ಹೊರಟವರಂತೆ ನಡೆದುಕೊಳ್ಳುತ್ತಿದ್ದಾರೆ.

ಪ್ರಧಾನಿ ಮತ್ತು ಗೃಹಮಂತ್ರಿಯ ನಡುವೆ ತಾಳಮೇಳ ಇಲ್ಲದೇ ಹೋಗಿದ್ದರೆ, ವೈರತ್ವ ಮನೆ ಮಾಡಿಕೊಂಡಿದ್ದರೆ ಬ್ರಿಟೀಷರು ಕೋಮು ಬಾಣಲೆಯಲ್ಲಿ ಎಸೆದುಹೋಗಿದ್ದ ಭಾರತವನ್ನು ಮೇಲಕ್ಕೆತ್ತಿ ಪರಿಸ್ಥಿತಿಯನ್ನು ನಿಭಾಯಿಸಲು ಒಂದು ಅನನುಭವಿ ಸರ್ಕಾರಕ್ಕೆ ಸಾಧ್ಯವಾಗುತ್ತಿತ್ತೇ? ಸರ್ಕಾರದ ಒಳಗೇ ಆಂತರಿಕ ಸಂಘರ್ಷವಿದ್ದಿದ್ದರೆ ೫೨೬ ಪ್ರಾಂತ್ಯಗಳ ಮೇಲೆ ಹಿಡಿತ ಸಾಧಿಸಿ, ಭಾರತದಲ್ಲಿ ವಿಲೀನ ಮಾಡಿಸಲು ಸಾಧ್ಯವಿತ್ತೆ? ಇಂಥಾ ಸಾಮಾನ್ಯ ಜ್ಞಾನವೂ ಪ್ರಧಾನಿ ಮೋದಿಗಿಲ್ಲವೇ ಅಥವಾ ಇದ್ದೂ ಇಲ್ಲದಂತೆ ವರ್ತಿಸುತ್ತಿದ್ದಾರೆಯೇ..

ಈ ಎಲ್ಲ ಕಿತಾಪತಿಯ ಉದ್ದೇಶ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಪ್ರಧಾನಿ ಹುದ್ದೆಯನ್ನು ಉಳಿಸಿಕೊಳ್ಳುವುದೇ ಆಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...