Homeಅಂಕಣಗಳುಚುಕುಬುಕು ಚುಕುಬುಕು ರೈಲು; ರೈಲ್ವೆ ಸಚಿವ ಸುತ್ತಿದರು ರೀಲು!

ಚುಕುಬುಕು ಚುಕುಬುಕು ರೈಲು; ರೈಲ್ವೆ ಸಚಿವ ಸುತ್ತಿದರು ರೀಲು!

- Advertisement -
- Advertisement -

ಮಿಥ್ಯ: ‘ಅದು ಹಕ್ಕಿ…ಅದು ವಿಮಾನ…ವೀಕ್ಷಿಸಿ, ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ನಿರ್ಮಿಸಿರುವ ಭಾರತದ ಮೊದಲ ಅರೆ-ವೇಗವಾಹಿನಿ (ಸೆಮಿ-ಸ್ಪೀಡ್) ರೈಲು ವಂದೇ ಮಾತರಂ ಎಕ್ಸಪ್ರೆಸ್ ಅನ್ನು. ಇದು ಬೆಳಕಿನ ವೇಗದಲ್ಲಿ ಓಡುತ್ತದೆ…’

ರೈಲ್ವೆ ಸಚಿವ ಗೋಯಲ್ ಪೋಸ್ಟ್.

ಫೆಬ್ರುವರಿ 9ರಂದು ಈ ಮೇಲಿನ ಪೋಸ್ಟ್ ಹಾಕಿರುವ ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್, ಇದರ ಜೊತೆಗೆ ಒಂದು ಚಲಿಸುವ ರೈಲಿನ ವಿಡಿಯೋವನ್ನೂ ಹಾಕಿದ್ದಾರೆ. ಗೋಯಲ್ ಅವರ ಅಧಿಕೃತ ಟ್ವಿಟರ್ ಮತ್ತು ಫೇಸ್‌ಬುಕ್ ಪೇಜ್‌ನಲ್ಲೂ ಇದನ್ನು ಹಾಕಲಾಗಿದೆ. ಇದನ್ನೇ ನಂಬಿದ ‘ಭಕ್ತರು’ ಈ ವಿಷಯವನ್ನು ಜಾಲತಾಣದಲ್ಲಿ ಹರಡಿದ್ದೇ ಹರಡಿದ್ದು.
ಸಚಿವರು ಹಾಕಿದ ವಿಡಿಯೋ ಲಿಂಕ್: https://twitter.com/PiyushGoyal/status/1094496373410615296
ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಮಾಧವ್ ಕೂಡ ಇದೇ ವಿಡಿಯೋವನ್ನು ರಿಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ. ಇಂತಹ ವಿಷಯಗಳನ್ನು ಬೆಳಕಿನ ವೇಗದಲ್ಲಿ ಕ್ಯಾಚ್ ಮಾಡುವ ‘ರಿಪಬ್ಲಿಕ್’ ಟಿವಿಯವರು ತಮ್ಮ ವೆಬ್‌ಸೈಟಿನಲ್ಲಿ ಈ ವಿಡಿಯೋ ಒಗೆದು, ‘ವಾವ್, ಮೇಕ್ ಇನ್ ಇಂಡಿಯಾ’ ಎಂದಿದ್ದಾರೆ!

ಸತ್ಯ: ರೈಲು ಸಚಿವ ರೀಲು ಬಿಟ್ಟಿದ್ದು ಅವರು ಪೋಸ್ಟ್ ಹಾಕಿದ ಸ್ವಲ್ಪ ಹೊತ್ತಿನಲ್ಲೇ ಬಯಲಾಗಿತ್ತು. ಅವರ ಫೇಸ್‌ಬುಕ್ ಪೇಜ್‌ನಲ್ಲಿ ಕಮೆಂಟ್ ಮಾಡಿದ ಹಲವರು ಇದು ಒರಿಜಿನಲ್ ವಿಡಿಯೋ ಅಲ್ಲ ಎಂದು ಟೀಕಿಸಿದ್ದರು. ‘ಆರ್‌ಎಫ್ ಎಜೆ’ ಹೆಸರಿನ ಒಬ್ಬರು, ಇದು ನನ್ನ ವಿಡಿಯೋ. ಗೋಯಲ್ ಇದರ ವೇಗವನ್ನು (ವಿಡಿಯೋದಲ್ಲಿ) ದುಪ್ಪಟ್ಟು ಮಾಡಿ ಸುಳ್ಳು ಹರಡುತ್ತಿದ್ದಾರೆ ಎಂದು ಕಮೇಂಟ್ ಮಾಡಿದ್ದಲ್ಲದೇ, ಒರಿಜಿನಲ್ ವಿಡಿಯೊದ ಯು-ಟ್ಯೂಬ್ ವಿಳಾಸವನ್ನೂ ನೀಡಿದ್ದರು.

ಓರಿಜಿನಿಲ್ ವಿಡಿಯೋ ಮಾಡಿದವರ ಕಮೆಂಟ್

ಯು-ಟ್ಯೂಬ್ ಪರೀಕ್ಷಿಸಿದಾಗ ‘ರೈಲ್ ಮೇಲ್’ ಎಂಬ ಚಾನೆಲ್ ಒಂದಿದ್ದು, ಇದರ ಸದಸ್ಯರು ರೈಲು, ರೈಲು ಪ್ರಯಾಣ ಕುರಿತು ಆಸಕ್ತಿ ಇರುವ ಜನರಾಗಿದ್ದಾರೆ. ‘ಆರ್‌ಎಫ್ ಎಜೆ’ ಅವರೇ ಅಡ್ಮಿನ್ ಆಗಿರುವ ‘ರೈಲ್‌ಮೇಲ್’ ಹೆಸರಿನ ಫೇಸ್‌ಬುಕ್ ಪೇಜ್ ಕೂಡ ಇದೆ.
ಮೂಲ ವಿಡಿಯೋದಲ್ಲಿನ ರೈಲಿನ ವೇಗವನ್ನು ವಿಡಿಯೋದಲ್ಲಿ ಡಬಲ್ ಮಾಡಿರುವ (ಮಾಡಿಸಿರುವ!) ರೈಲು ಸಚಿವರು, ಮೇಕ್ ಇನ್ ಇಂಡಿಯಾ ಅಂತೆಲ್ಲ ರೈಲು ಬಿಟ್ಟಿದ್ದು, ರೀಲು ಸುತ್ತಿದ್ದು ಪಕ್ಕಾ ಆಗಿತು. ಇವೆರಡೂ ವಿಡಿಯೋಗಳನ್ನು ಪಕ್ಕಕ್ಕಿಟ್ಟು ಪರೀಕ್ಷಿಸಿದಾಗ ಸತ್ಯ ಇನ್ನಷ್ಟು ನಿಚ್ಚಳವಾಯಿತು. ಮೂಲ ವಿಡಿಯೋವನ್ನು ಹರಿಯಾಣದ ಅಸೌಟಿ ರೈಲು ನಿಲ್ದಾಣದಲ್ಲಿ ಚಿತ್ರೀಕರಿಸಲಾಗಿದ್ದು, ಆ ವಿಡಿಯೋ ಮೇಲೆ ವಾಟರ್ ಟ್ರೇಡ್‌ಮಾರ್ಕ್ ಕೂಡ ಇದೆ.

ಪಿಯುಷ್ ಗೋಯಲ್

ಎರಡೂ ವಿಡಿಯೋ ಪರೀಕ್ಷಿಸಿದ ಲಿಂಕ್:
https://vimeo.com/316395038
ಇದೇನೂ ಮೊದಲ ಬಾರಿ ಅಲ್ಲ, ಹಲವಾರು ಸಲ ರೈಲ್ವೆ ಸಚಿವ ಕೇಂದ್ರ ಸರ್ಕಾರವನ್ನು ಹೊಗಳಿಕೊಳ್ಳಲು ಸುಳ್ಳು ಟ್ವೀಟ್, ಸುಳ್ಳು ಪೋಸ್ಟ್ಗಳನ್ನು ಹಾಕುತ್ತಲೇ ಬಂದಿದ್ದಾರೆ.
ರೈಲು ಬಿಡೋ ಮಾರಾಯ ಅಂದರೆ ರೀಲು ಸುತ್ತುತ್ತ ಕುಳಿತಿದ್ದಾರೆ ಪಿಯುಷ್ ಗೋಯಲ್.

( ಕೃಪೆ: ಅಲ್ಟ್ ನ್ಯೂಸ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...