Homeಸಾಹಿತ್ಯ-ಸಂಸ್ಕೃತಿಕಥೆಪುರಾಣ ಮತ್ತು ವರ್ತಮಾನದ ಭೀಷ್ಮಂದಿರ ಹೋಲಿಕೆಗಳು !!!

ಪುರಾಣ ಮತ್ತು ವರ್ತಮಾನದ ಭೀಷ್ಮಂದಿರ ಹೋಲಿಕೆಗಳು !!!

- Advertisement -
- Advertisement -

| ಇಸ್ಮತ್ ಪಜೀರ್ |

ಭೀಷ್ಮ ಒಮ್ಮೆ ನಡೆದುಕೊಂಡು ಹೋಗುತ್ತಿರುವಾಗ ಆತನ ಊರುಗೋಲಿನಡಿಗೆ ಸಿಲುಕಿದ ಓತಿಕ್ಯಾತವೊಂದು ಅಪ್ಪಚ್ಚಿಯಾಗುತ್ತದೆ. ಹಾಗೆ ವಿಲವಿಲನೆ ಒದ್ದಾಡುತ್ತಿರುವ ಓತಿಕ್ಯಾತನ ಮೇಲೆ ಕಿಂಚಿತ್ತೂ ಕರುಣೆ ತೋರದೇ ಭೀಷ್ಮ ಅದನ್ನು ತನ್ನ ಊರಿಗೋಲಿನ ತುದಿಯಲ್ಲೇ ಎತ್ತಿ ಮುಳ್ಳಿನ ಗಿಡವೊಂದರ ಮೇಲೆ ಎಸೆಯುತ್ತಾನೆ. ಅಸಹಾಯಕ ಓತಿಕ್ಯಾತ ಭೀಷ್ಮ ನಿಗೆ ನೀನು ಶರಶಯ್ಯೆಯಲ್ಲೇ ಒದ್ದಾಡಿ ಪ್ರಾಣ ಬಿಡುವಂತಾಗಲಿ ಎಂದು ಶಾಪ ಹಾಕುತ್ತದೆ. ಓತಿಕ್ಯಾತನ ಶಾಪವೇ ಭೀಷ್ಮನಿಗೆ ಶರಶಯ್ಯೆಯ ಮರಣ ತಂದಿದೆ ಎಂಬುವುದೂ ಕನ್ನಡದ ಜನಪದರ ನಂಬುಗೆ.

ಮಹಾಭಾರತದ ಭೀಷ್ಮ ತನ್ನ ಶಿಷ್ಯಂದಿರ ಪಟ್ಟವನ್ನು ಖಾಯಂಗೊಳಿಸುವ ಕನಸ ಹೊತ್ತವನಾಗಿದ್ದರೆ…
ಬಿಜೆಪಿಯ ಭೀಷ್ಮ ಸ್ವತಃ ತಾನೇ ರಾಜನಾಗುವ ಕನಸು ಹೊತ್ತಿದ್ದವರು. ಮಹಾಭಾರತದ ಭೀಷ್ಮ ಹೇಗೆ ಕೊನೆಗೂ ತನ್ನ ಶಿಷ್ಯಂದಿರ ಪಟ್ಟ ಉಳಿಸಲು ಸಾಧ್ಯವಾಗಲಿಲ್ಲವೋ… ಹಾಗೆಯೇ ಬಿಜೆಪಿಯ ಭೀಷ್ಮನೂ ತನ್ನ ಕನಸನ್ನು ಸಾಕಾರಗೊಳಿಸಿ ಪಟ್ಟವೇರಲು ಸಾಧ್ಯವಾಗದಿದ್ದುದು ಪುರಾಣ ಮತ್ತು ವರ್ತಮಾನದ ಕ್ರೂರ ವ್ಯಂಗ್ಯವೇ ಸರಿ.

ಇದೀಗ‌ ಬಿಜೆಪಿಯ ಭೀಷ್ಮ ‌ಅಡ್ವಾಣಿಯದ್ದೂ‌ ಮಹಾಭಾರತದ ಭೀಷ್ಮನದ್ದೇ ಸ್ಥಿತಿ. ಇಂದು ಅಡ್ವಾಣಿ ಎಷ್ಟೇ‌‌ ಸುಭಗನಂತೆ ನಟಿಸಲಿ. ಅಡ್ವಾಣಿಗೆ ಅವರ ಪಾಪದ ಫಲ ದೊರೆಯುತ್ತಿದೆ ಎಂದಷ್ಟೇ ಇಂದಿನ‌ ಅವರ ದಯನೀಯ ಸ್ಥಿತಿಯನ್ನು ವಿಶ್ಲೇಷಿಸುವುದು ಹೆಚ್ಚು ಸೂಕ್ತ.

ಅಡ್ವಾಣಿ ತನ್ನ ರಾಜಕೀಯ ಏಳಿಗೆಗಾಗಿ ಮಾಡಿದ ಕೃತ್ಯಗಳು ಕಡಿಮೆ ಕ್ರೌರ್ಯಯದ್ದೇನಲ್ಲ. ಸ್ವತಃ ತಾನು ಕ್ರೌರ್ಯ ಮಾಡಿಸಿದ್ದಲ್ಲದೇ, ತನ್ನ ಶಿಷ್ಯಂದಿರಾದ ಕೌರವರು ಮಾಡಿದ ಕ್ರೌರ್ಯಕ್ಕೆ ಬೀಷ್ಮ ಮೌನಸಮ್ಮತಿ ನೀಡಿ ಒಳಗೊಳಗೇ ನಕ್ಕಂತೆ… ತನ್ನ ಶಿಷ್ಯಂದಿರಾದ ಮೋದಿ- ಶಾ ಜೋಡಿ ಗುಜರಾತಿನಲ್ಲಿ ಮಾಡಿದ ಅಮಾನವೀಯ ಬರ್ಬರ ಕೃತ್ಯಕ್ಕೆ ಇಂದು ತನ್ನ ರಾಜಕೀಯ ಬದುಕಿನ ಶರಶಯ್ಯೆಯಲ್ಲಿ ಮಲಗಿರುವ ಬಿಜೆಪಿಯ ಬೀಷ್ಮ ಪಿತಾಮಹ ಅಡ್ವಾಣಿ ಒಳಗೊಳಗೇ ನಗುತ್ತಾ ಮೌನ ಸಮ್ಮತಿ ನೀಡಿದ್ದು ಇತಿಹಾಸದ ಪುಟ ಸೇರುವಷ್ಟು ಹಳತಾಗಿಲ್ಲ.

ಮಹಾಭಾರತದ ಬೀಷ್ಮನಿಗೆ ಓತಿಕ್ಯಾತನ ಶಾಪವೆಂದು ಜನಪದರು ನಂಬಿದರೆ, ನಮ್ಮ ಕಾಲದ ರಾಜಕೀಯ ಬೀಷ್ಮನಿಗೆ ಎರಡೆರಡು ಶಾಪವಿದೆ. ಒಂದನೆಯದಾಗಿ ರಾಮ ಜನ್ಮ ಭೂಮಿಯ ಹೆಸರಲ್ಲಿ ದೇಶದ ಉದ್ದಗಲದ ಚರಂಡಿಗಳಲ್ಲಿ ಮಾನವ ರಕ್ತದ ಕೋಡಿ ಹರಿಸಿದ್ದರ ಶಾಪ. ಎರಡನೆಯದಾಗಿ ತನ್ನ ಶಿಷ್ಯಂದಿರ ಬರ್ಬರತೆಗೆ ಮೌನ ಸಮ್ಮತಿ ಸೂಚಿಸುತ್ತಾ, ಮಹಾಭಾರತದ ಭೀಷ್ಮ ಓತಿಕ್ಯಾತನ ಸಾವನ್ನು ಆನಂದಿಸಿದಂತೆ ಗುಜರಾತಿನ ಅಮಾಯಕ ಮುಸ್ಲಿಮರ ಸಾವನ್ನು ಆನಂದಿಸಿದುದರ ಶಾಪ.

ಮೊದಲನೆಯದಾಗಿ ನಮ್ಮ ತುಳನಾಡಿನ ಜನಪದರ ನಂಬಿಕೆಯಂತೆ ತಲೆಗೆ ಹಾಕಿದ ನೀರು ಕಾಲಿಗೆ ಬರಲೇಬೇಕು…
ಎರಡನೆಯದಾಗಿ ನಮ್ಮ ಕನ್ನಡದ ಗಾದೆಯಂತೆ ಮಾಡಿದ್ದುಣ್ಣೋ ಮಹರಾಯ.

ಬಿಜೆಪಿಯ ಭೀಷ್ಮನ ಈ ಸ್ಥಿತಿಗೆ ಇದಕ್ಕಿಂತ ಬೇರೆ ಕಾರಣ ಬೇಕೇ….?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...