Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಓಡಿ ಹೋದ ಹುಡುಗ ಮರಳಿ ಬಂದ ಕಥೆ

ಓಡಿ ಹೋದ ಹುಡುಗ ಮರಳಿ ಬಂದ ಕಥೆ

‘ಓಡಿ ಹೋದ ಹುಡುಗ’ ಇದು ಅಭಿನವ ಪ್ರಕಾಶನ ಪ್ರಕಟಿಸಿರುವ ಕತೆಗಾರ ಬಸು ಬೇವಿನಗಿಡದ ಅವರ ಮಕ್ಕಳ ಕಾದಂಬರಿ.

- Advertisement -
| ಡಾ.ಎಸ್.ಬಿ.ಜೋಗುರ |
‘ಓಡಿ ಹೋದ ಹುಡುಗ’ ಇದು ಅಭಿನವ ಪ್ರಕಾಶನ ಪ್ರಕಟಿಸಿರುವ ಕತೆಗಾರ ಬಸು ಬೇವಿನಗಿಡದ ಅವರ  ಮಕ್ಕಳ ಕಾದಂಬರಿ. ಈ ಕಾದಂಬರಿಯ ಬಹುತೇಕ ಪಾತ್ರಗಳು ಮಲ್ಲೂರಲ್ಲಿ ಸುತ್ತಿ ಸುಳಿಯುತ್ತವೆ. ಈ ಕಾದಂಬರಿಯನ್ನು ಓದತೊಡಗಿದಾಗ ಓದುಗರಿಗೆ ತಮ್ಮ ತಮ್ಮ ಬಾಲ್ಯದ ಸ್ವಚ್ಚಂದ ಮನದ ಸುಳಿದಾಟವನ್ನು ನೆನಪಿಸಿಕೊಡುವ ಜೊತೆಗೆ, ಗಜ್ಯಾ ಎಂಬ ಬಾಲಕನ ಮೂಲಕ ಇಡೀ ಊರನ್ನು ನಿದ್ದೆಯಿಂದೆಬ್ಬಿಸಿ ಚಟುವಟಿಕೆಗೆ ನೂಕುವ ಕ್ರಿಯಾಶೀಲತೆಯಂತೆ ಕಾದಂಬರಿಕಾರರು ಗಜ್ಯಾ ಪಾತ್ರವನ್ನು ಸೃಷ್ಟಿಸಿದ್ದಾರೆ. ಹಾಗೆ ನೋಡಿದರೆ ಈ ಕಾದಂಬರಿಯಲ್ಲಿ ಹೊಸತೇನೂ ಮಹತ್ತರವಾಗಿ ಚಿತ್ರಿಸಲಾಗದಿದ್ದರೂ ಮಕ್ಕಳ ಕಾದಂಬರಿಗೆ ತಕ್ಕುದಾದ ಸಕಲ ಸಾಮಗ್ರಿಯನ್ನು ಮೈಗೂಡಿಸಿಕೊಂಡು ಕಾದಂಬರಿ ಮುಂದೆ ಸಾಗುತ್ತದೆ. ಕಾದಂಬರಿಯ ಆರಂಭದಲ್ಲಿ ಕೊಂಚ ಸಾವಧಾನ ಮತ್ತು ಜಡವೆನಿಸುವ ವಿವರಗಳಿವೆಯಾದರೂ ಕ್ರಮೇಣವಾಗಿ ತನ್ನದೇಯಾದ ವಿಶಿಷ್ಟ ಜಾಡಿನಲ್ಲಿ ಮುಂದೆ ಸಾಗುತ್ತದೆ. ಗಜ್ಯಾ ಈ ಕಾದಂಬರಿಯ ನಾಯಕ. ಚಿಕ್ಕ ವಯಸ್ಸಿನಲ್ಲಿಯೇ ಕುಳಿತುಂಡು ಕೆಡಬಾರದು ಎನ್ನುವ ಧೋರಣೆಯನ್ನು ಮೈಗೂಡಿಸಿಕೊಂಡಂತೆ ಬದುಕಿದ ಈ ಗಜ್ಯಾ ಊರಿನ ಅನೇಕರಿಗೆ ಮಾದರಿಯಾಗಿರುವಂತೆ ಉಡಾಳನಾಗಿಯೂ ಗುರುತಿಸಿಕೊಂಡವನು. ಗಜ್ಯಾ ಮತ್ತು ಅವನ ಸ್ನೇಹಿತರಲ್ಲಿ ಆ ವಯಸ್ಸಿಗೆ ತಕ್ಕಂತ ಸಹಜವಾಗಿರಬಹುದಾದ ಹುಡುಗ ಬುದ್ಧ್ಢಿಯ ಗುಣಗಳೂ ಇವೆ. ಎಲ್ಲ ಕಾಲಗಳಲ್ಲಿ ಎಲ್ಲ ಮಕ್ಕಳಲ್ಲಿ ವ್ಯಾಪಕವಾಗಿ ಕಾಣಬಹುದಾದ ಗುಣಗಳವು.
ಒಬ್ಬರನ್ನೊಬ್ಬರು ದೂರುವ ದ್ವೇಷಿಸುವ, ಮತ್ತೆ ಒಂದುಗೂಡುವ, ಕೂಡಿ ಕದಿಯುವ, ತಿನ್ನುವ, ಸೇಡಿಗಾಗಿ ಹೂಂಕರಿಸುವ ಇಂಥಾ ಹತ್ತಾರು ವಕ್ರಗುಣಂಗಣ ಪಟಾಲಮ್ಮಿನಂತಿರುವ ಆ ಹುಡುಗರು ಹಾಗಾಗಲು ಕಾರಣ ಆ ಆಲದ ಮರದ ಕೆಳಗೆ ವಾಸವಾಗಿರುವ ಅಜ್ಜ ಎನ್ನುವುದು ಹೆತ್ತವರ ದೂರುವಿಕೆ. ಗಜ್ಯಾ ಆಟವಾಡುವ ವಯಸ್ಸಿನಲ್ಲಿಯೇ ಹೊಣೆಗಾರಿಕೆಯನ್ನು ಹೆಗಲಿಗೇರಿಸಿಕೊಂಡು ತಾನು ಶಾಲೆ ಕಲಿಯದಿದ್ದರೂ ತನ್ನ ತಂಗಿಯನ್ನು ಓದಿಸಬೇಕೆಂದು ದುಡಿಯುವ ಅವನ ಗುಣವನ್ನು ಊರಿನ ಅನೇಕರು ಕೊಂಡಾಡುವ ಜೊತೆಗೆ ದಾರಿ ತಪ್ಪಿದ ಮಕ್ಕಳಿಗೆ ಗಜ್ಯಾನನ್ನು ಉದಾಹರಣೆಯಾಗಿ ಕೊಡುವಷ್ಟರ ಮಟ್ಟಿಗೆ ಮಲ್ಲೂರಿನ ಅನೇಕರಿಗೆ ಗಜ್ಯಾ ಇಷ್ಟವಾಗುತ್ತಿದ್ದ. ಗಜ್ಯಾ ಮತ್ತು ಅವನ ಸೈಕಲ್ ಇಡೀ ಮಲ್ಲೂರಿನ ಚಟುವಟಿಕೆಯ ಸಂಕೇತಗಳಾಗಿದ್ದವು. ಆತನ ಸೈಕಲ್ ಬೆಲ್ ಜಾಗೃತಿಯ ಸಂಕೇತದಂತೆ ಬಳಕೆಯಾಗುವದಿತ್ತು. ಕಾದಂಬರಿಕಾರ ಕಾಲನ ಓಟವನ್ನು ಸೈಕಲ್ ಜೊತೆಗೆ ಮತ್ತು ಅದರ ಗಂಟೆಯನ್ನು ಕಾಲ ಸರಿಯುವ ಎಚ್ಚರದ ನಾದವಾಗಿ ಬಳಸಿರುವುದು ಗಮನಾರ್ಹವಾದುದು. ಓಡಿ ಹೋದ ಹುಡುಗ ಇಲ್ಲಿ ಬೇರೆ ಯಾರೂ ಅಲ್ಲ ಆ ಸೈಕಲ್ ಸವಾರ ಗಜ್ಯಾ. ಆತ ದಿಕ್ಕು ದೆಸೆಯಿಲ್ಲದೇ ಓಡಿ ಹೋದವನಲ್ಲ, ಬದುಕನ್ನು ರೂಪಿಸಿಕೊಳ್ಳಲು ಹೋದವನು. ಸಿನೇಮಾ ಒಂದರಲ್ಲಿ ನಟಿಸುವ ಅವಕಾಶ ಸಿಕ್ಕ ಕಾರಣದಿಂದ ಕರೀಕಟ್ಟೆ ಮಾಸ್ತರರ ಜೊತೆಗೆ ಹೋಗಿ ಸಿನೇಮಾದಲ್ಲಿ ಪಾತ್ರ ನಿರ್ವಹಿಸಿ ಮರಳಿ ಬರುವಷ್ಟರಲ್ಲಿ ಮಲ್ಲೂರಿನ ಪಾಲಿಗೆ, ಗಜ್ಯಾನ ಜೊತೆಗಾರರಿಗೆ ಆತ ಓಡಿ ಹೋದ ಹುಡುಗನಾಗಿರುತ್ತಾನೆ. ಗಜ್ಯಾ ದಿನಾಲು ಊರಲ್ಲಿ ಸುತ್ತಿ ಸುಳಿಯುವಾಗ ಕಾಣದ ಅವನ ಹರಕತ್ತು ಒಂದೆರಡು ದಿನ ಅವನಿಲ್ಲದಿರುವಾಗ ಎದ್ದು ತೋರುವ ಜೊತೆಗೆ, ಅವನಿಗಾಗಿ ಇಡೀ ಊರಿನ ಬೆಟ್ಟ ಗುಡ್ಡಗಳನ್ನು ಹತ್ತಿ ಹುಡುಕುವ ರೀತಿಯಲ್ಲಿಯೇ ಓಡಿ ಹೋದ ಹುಡುಗನ ಪಾತ್ರದ ಹಿಕಮತ್ತು ಓದುಗನಿಗೆ ಮನದಟ್ಟಾಗುತ್ತದೆ.
ಇದು ಹೇಳೀ ಕೇಳೀ ಮಕ್ಕಳ ಕಾದಂಬರಿ. ಹೀಗಾಗಿ ಕಾದಂಬರಿಕಾರ ತಕ್ಕ ಮಟ್ಟಿಗೆ ಭಾಷೆಯನ್ನು ಸಡಿಲುಗೊಳಿಸಿ ಕತೆ ಹೇಳುತ್ತಾ ಹೋಗಿರುವದಿದೆ. ಜೊತೆಗೆ ಕತೆಯ ಹಂದರ ಜಾಳುಜಾಳಾಗದಂತೆ ಎಚ್ಚರವಹಿಸುವ ಜೊತೆಗೆ ಒಂದು ಮಕ್ಕಳ ಕಾದಂಬರಿಯ ಸೊಗಸಿಗೆ ಏನು ಸಾಮಗ್ರಿ ಬೇಕೋ ಅದೆಲ್ಲವನ್ನು ಒದಗಿಸಿಕೊಟ್ಟು ಕಾದಂಬರಿಗೆ ಪೂರಕವಾಗಿ ಸಲ್ಲಬಹುದಾದ ಹಿತಕರ ಪರಿಸರವನ್ನು ಕಾದಂಬರಿಕಾರ ಕಟ್ಟಿಕೊಟ್ಟಿದ್ದಾರೆ. ಈ ಕಾದಂಬರಿಯ ಭಾಷೆ, ವಸ್ತು, ತಂತ್ರ, ವಿನ್ಯಾಸ, ನಿರೂಪಣೆ ಎಲ್ಲವೂ ಮಕ್ಕಳ ಕಾದಂಬರಿಗೆ ಸಲ್ಲುವಂತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...