Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಓಡಿ ಹೋದ ಹುಡುಗ ಮರಳಿ ಬಂದ ಕಥೆ

ಓಡಿ ಹೋದ ಹುಡುಗ ಮರಳಿ ಬಂದ ಕಥೆ

‘ಓಡಿ ಹೋದ ಹುಡುಗ’ ಇದು ಅಭಿನವ ಪ್ರಕಾಶನ ಪ್ರಕಟಿಸಿರುವ ಕತೆಗಾರ ಬಸು ಬೇವಿನಗಿಡದ ಅವರ ಮಕ್ಕಳ ಕಾದಂಬರಿ.

- Advertisement -
| ಡಾ.ಎಸ್.ಬಿ.ಜೋಗುರ |
‘ಓಡಿ ಹೋದ ಹುಡುಗ’ ಇದು ಅಭಿನವ ಪ್ರಕಾಶನ ಪ್ರಕಟಿಸಿರುವ ಕತೆಗಾರ ಬಸು ಬೇವಿನಗಿಡದ ಅವರ  ಮಕ್ಕಳ ಕಾದಂಬರಿ. ಈ ಕಾದಂಬರಿಯ ಬಹುತೇಕ ಪಾತ್ರಗಳು ಮಲ್ಲೂರಲ್ಲಿ ಸುತ್ತಿ ಸುಳಿಯುತ್ತವೆ. ಈ ಕಾದಂಬರಿಯನ್ನು ಓದತೊಡಗಿದಾಗ ಓದುಗರಿಗೆ ತಮ್ಮ ತಮ್ಮ ಬಾಲ್ಯದ ಸ್ವಚ್ಚಂದ ಮನದ ಸುಳಿದಾಟವನ್ನು ನೆನಪಿಸಿಕೊಡುವ ಜೊತೆಗೆ, ಗಜ್ಯಾ ಎಂಬ ಬಾಲಕನ ಮೂಲಕ ಇಡೀ ಊರನ್ನು ನಿದ್ದೆಯಿಂದೆಬ್ಬಿಸಿ ಚಟುವಟಿಕೆಗೆ ನೂಕುವ ಕ್ರಿಯಾಶೀಲತೆಯಂತೆ ಕಾದಂಬರಿಕಾರರು ಗಜ್ಯಾ ಪಾತ್ರವನ್ನು ಸೃಷ್ಟಿಸಿದ್ದಾರೆ. ಹಾಗೆ ನೋಡಿದರೆ ಈ ಕಾದಂಬರಿಯಲ್ಲಿ ಹೊಸತೇನೂ ಮಹತ್ತರವಾಗಿ ಚಿತ್ರಿಸಲಾಗದಿದ್ದರೂ ಮಕ್ಕಳ ಕಾದಂಬರಿಗೆ ತಕ್ಕುದಾದ ಸಕಲ ಸಾಮಗ್ರಿಯನ್ನು ಮೈಗೂಡಿಸಿಕೊಂಡು ಕಾದಂಬರಿ ಮುಂದೆ ಸಾಗುತ್ತದೆ. ಕಾದಂಬರಿಯ ಆರಂಭದಲ್ಲಿ ಕೊಂಚ ಸಾವಧಾನ ಮತ್ತು ಜಡವೆನಿಸುವ ವಿವರಗಳಿವೆಯಾದರೂ ಕ್ರಮೇಣವಾಗಿ ತನ್ನದೇಯಾದ ವಿಶಿಷ್ಟ ಜಾಡಿನಲ್ಲಿ ಮುಂದೆ ಸಾಗುತ್ತದೆ. ಗಜ್ಯಾ ಈ ಕಾದಂಬರಿಯ ನಾಯಕ. ಚಿಕ್ಕ ವಯಸ್ಸಿನಲ್ಲಿಯೇ ಕುಳಿತುಂಡು ಕೆಡಬಾರದು ಎನ್ನುವ ಧೋರಣೆಯನ್ನು ಮೈಗೂಡಿಸಿಕೊಂಡಂತೆ ಬದುಕಿದ ಈ ಗಜ್ಯಾ ಊರಿನ ಅನೇಕರಿಗೆ ಮಾದರಿಯಾಗಿರುವಂತೆ ಉಡಾಳನಾಗಿಯೂ ಗುರುತಿಸಿಕೊಂಡವನು. ಗಜ್ಯಾ ಮತ್ತು ಅವನ ಸ್ನೇಹಿತರಲ್ಲಿ ಆ ವಯಸ್ಸಿಗೆ ತಕ್ಕಂತ ಸಹಜವಾಗಿರಬಹುದಾದ ಹುಡುಗ ಬುದ್ಧ್ಢಿಯ ಗುಣಗಳೂ ಇವೆ. ಎಲ್ಲ ಕಾಲಗಳಲ್ಲಿ ಎಲ್ಲ ಮಕ್ಕಳಲ್ಲಿ ವ್ಯಾಪಕವಾಗಿ ಕಾಣಬಹುದಾದ ಗುಣಗಳವು.
ಒಬ್ಬರನ್ನೊಬ್ಬರು ದೂರುವ ದ್ವೇಷಿಸುವ, ಮತ್ತೆ ಒಂದುಗೂಡುವ, ಕೂಡಿ ಕದಿಯುವ, ತಿನ್ನುವ, ಸೇಡಿಗಾಗಿ ಹೂಂಕರಿಸುವ ಇಂಥಾ ಹತ್ತಾರು ವಕ್ರಗುಣಂಗಣ ಪಟಾಲಮ್ಮಿನಂತಿರುವ ಆ ಹುಡುಗರು ಹಾಗಾಗಲು ಕಾರಣ ಆ ಆಲದ ಮರದ ಕೆಳಗೆ ವಾಸವಾಗಿರುವ ಅಜ್ಜ ಎನ್ನುವುದು ಹೆತ್ತವರ ದೂರುವಿಕೆ. ಗಜ್ಯಾ ಆಟವಾಡುವ ವಯಸ್ಸಿನಲ್ಲಿಯೇ ಹೊಣೆಗಾರಿಕೆಯನ್ನು ಹೆಗಲಿಗೇರಿಸಿಕೊಂಡು ತಾನು ಶಾಲೆ ಕಲಿಯದಿದ್ದರೂ ತನ್ನ ತಂಗಿಯನ್ನು ಓದಿಸಬೇಕೆಂದು ದುಡಿಯುವ ಅವನ ಗುಣವನ್ನು ಊರಿನ ಅನೇಕರು ಕೊಂಡಾಡುವ ಜೊತೆಗೆ ದಾರಿ ತಪ್ಪಿದ ಮಕ್ಕಳಿಗೆ ಗಜ್ಯಾನನ್ನು ಉದಾಹರಣೆಯಾಗಿ ಕೊಡುವಷ್ಟರ ಮಟ್ಟಿಗೆ ಮಲ್ಲೂರಿನ ಅನೇಕರಿಗೆ ಗಜ್ಯಾ ಇಷ್ಟವಾಗುತ್ತಿದ್ದ. ಗಜ್ಯಾ ಮತ್ತು ಅವನ ಸೈಕಲ್ ಇಡೀ ಮಲ್ಲೂರಿನ ಚಟುವಟಿಕೆಯ ಸಂಕೇತಗಳಾಗಿದ್ದವು. ಆತನ ಸೈಕಲ್ ಬೆಲ್ ಜಾಗೃತಿಯ ಸಂಕೇತದಂತೆ ಬಳಕೆಯಾಗುವದಿತ್ತು. ಕಾದಂಬರಿಕಾರ ಕಾಲನ ಓಟವನ್ನು ಸೈಕಲ್ ಜೊತೆಗೆ ಮತ್ತು ಅದರ ಗಂಟೆಯನ್ನು ಕಾಲ ಸರಿಯುವ ಎಚ್ಚರದ ನಾದವಾಗಿ ಬಳಸಿರುವುದು ಗಮನಾರ್ಹವಾದುದು. ಓಡಿ ಹೋದ ಹುಡುಗ ಇಲ್ಲಿ ಬೇರೆ ಯಾರೂ ಅಲ್ಲ ಆ ಸೈಕಲ್ ಸವಾರ ಗಜ್ಯಾ. ಆತ ದಿಕ್ಕು ದೆಸೆಯಿಲ್ಲದೇ ಓಡಿ ಹೋದವನಲ್ಲ, ಬದುಕನ್ನು ರೂಪಿಸಿಕೊಳ್ಳಲು ಹೋದವನು. ಸಿನೇಮಾ ಒಂದರಲ್ಲಿ ನಟಿಸುವ ಅವಕಾಶ ಸಿಕ್ಕ ಕಾರಣದಿಂದ ಕರೀಕಟ್ಟೆ ಮಾಸ್ತರರ ಜೊತೆಗೆ ಹೋಗಿ ಸಿನೇಮಾದಲ್ಲಿ ಪಾತ್ರ ನಿರ್ವಹಿಸಿ ಮರಳಿ ಬರುವಷ್ಟರಲ್ಲಿ ಮಲ್ಲೂರಿನ ಪಾಲಿಗೆ, ಗಜ್ಯಾನ ಜೊತೆಗಾರರಿಗೆ ಆತ ಓಡಿ ಹೋದ ಹುಡುಗನಾಗಿರುತ್ತಾನೆ. ಗಜ್ಯಾ ದಿನಾಲು ಊರಲ್ಲಿ ಸುತ್ತಿ ಸುಳಿಯುವಾಗ ಕಾಣದ ಅವನ ಹರಕತ್ತು ಒಂದೆರಡು ದಿನ ಅವನಿಲ್ಲದಿರುವಾಗ ಎದ್ದು ತೋರುವ ಜೊತೆಗೆ, ಅವನಿಗಾಗಿ ಇಡೀ ಊರಿನ ಬೆಟ್ಟ ಗುಡ್ಡಗಳನ್ನು ಹತ್ತಿ ಹುಡುಕುವ ರೀತಿಯಲ್ಲಿಯೇ ಓಡಿ ಹೋದ ಹುಡುಗನ ಪಾತ್ರದ ಹಿಕಮತ್ತು ಓದುಗನಿಗೆ ಮನದಟ್ಟಾಗುತ್ತದೆ.
ಇದು ಹೇಳೀ ಕೇಳೀ ಮಕ್ಕಳ ಕಾದಂಬರಿ. ಹೀಗಾಗಿ ಕಾದಂಬರಿಕಾರ ತಕ್ಕ ಮಟ್ಟಿಗೆ ಭಾಷೆಯನ್ನು ಸಡಿಲುಗೊಳಿಸಿ ಕತೆ ಹೇಳುತ್ತಾ ಹೋಗಿರುವದಿದೆ. ಜೊತೆಗೆ ಕತೆಯ ಹಂದರ ಜಾಳುಜಾಳಾಗದಂತೆ ಎಚ್ಚರವಹಿಸುವ ಜೊತೆಗೆ ಒಂದು ಮಕ್ಕಳ ಕಾದಂಬರಿಯ ಸೊಗಸಿಗೆ ಏನು ಸಾಮಗ್ರಿ ಬೇಕೋ ಅದೆಲ್ಲವನ್ನು ಒದಗಿಸಿಕೊಟ್ಟು ಕಾದಂಬರಿಗೆ ಪೂರಕವಾಗಿ ಸಲ್ಲಬಹುದಾದ ಹಿತಕರ ಪರಿಸರವನ್ನು ಕಾದಂಬರಿಕಾರ ಕಟ್ಟಿಕೊಟ್ಟಿದ್ದಾರೆ. ಈ ಕಾದಂಬರಿಯ ಭಾಷೆ, ವಸ್ತು, ತಂತ್ರ, ವಿನ್ಯಾಸ, ನಿರೂಪಣೆ ಎಲ್ಲವೂ ಮಕ್ಕಳ ಕಾದಂಬರಿಗೆ ಸಲ್ಲುವಂತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...