Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಓಡಿ ಹೋದ ಹುಡುಗ ಮರಳಿ ಬಂದ ಕಥೆ

ಓಡಿ ಹೋದ ಹುಡುಗ ಮರಳಿ ಬಂದ ಕಥೆ

‘ಓಡಿ ಹೋದ ಹುಡುಗ’ ಇದು ಅಭಿನವ ಪ್ರಕಾಶನ ಪ್ರಕಟಿಸಿರುವ ಕತೆಗಾರ ಬಸು ಬೇವಿನಗಿಡದ ಅವರ ಮಕ್ಕಳ ಕಾದಂಬರಿ.

- Advertisement -
| ಡಾ.ಎಸ್.ಬಿ.ಜೋಗುರ |
‘ಓಡಿ ಹೋದ ಹುಡುಗ’ ಇದು ಅಭಿನವ ಪ್ರಕಾಶನ ಪ್ರಕಟಿಸಿರುವ ಕತೆಗಾರ ಬಸು ಬೇವಿನಗಿಡದ ಅವರ  ಮಕ್ಕಳ ಕಾದಂಬರಿ. ಈ ಕಾದಂಬರಿಯ ಬಹುತೇಕ ಪಾತ್ರಗಳು ಮಲ್ಲೂರಲ್ಲಿ ಸುತ್ತಿ ಸುಳಿಯುತ್ತವೆ. ಈ ಕಾದಂಬರಿಯನ್ನು ಓದತೊಡಗಿದಾಗ ಓದುಗರಿಗೆ ತಮ್ಮ ತಮ್ಮ ಬಾಲ್ಯದ ಸ್ವಚ್ಚಂದ ಮನದ ಸುಳಿದಾಟವನ್ನು ನೆನಪಿಸಿಕೊಡುವ ಜೊತೆಗೆ, ಗಜ್ಯಾ ಎಂಬ ಬಾಲಕನ ಮೂಲಕ ಇಡೀ ಊರನ್ನು ನಿದ್ದೆಯಿಂದೆಬ್ಬಿಸಿ ಚಟುವಟಿಕೆಗೆ ನೂಕುವ ಕ್ರಿಯಾಶೀಲತೆಯಂತೆ ಕಾದಂಬರಿಕಾರರು ಗಜ್ಯಾ ಪಾತ್ರವನ್ನು ಸೃಷ್ಟಿಸಿದ್ದಾರೆ. ಹಾಗೆ ನೋಡಿದರೆ ಈ ಕಾದಂಬರಿಯಲ್ಲಿ ಹೊಸತೇನೂ ಮಹತ್ತರವಾಗಿ ಚಿತ್ರಿಸಲಾಗದಿದ್ದರೂ ಮಕ್ಕಳ ಕಾದಂಬರಿಗೆ ತಕ್ಕುದಾದ ಸಕಲ ಸಾಮಗ್ರಿಯನ್ನು ಮೈಗೂಡಿಸಿಕೊಂಡು ಕಾದಂಬರಿ ಮುಂದೆ ಸಾಗುತ್ತದೆ. ಕಾದಂಬರಿಯ ಆರಂಭದಲ್ಲಿ ಕೊಂಚ ಸಾವಧಾನ ಮತ್ತು ಜಡವೆನಿಸುವ ವಿವರಗಳಿವೆಯಾದರೂ ಕ್ರಮೇಣವಾಗಿ ತನ್ನದೇಯಾದ ವಿಶಿಷ್ಟ ಜಾಡಿನಲ್ಲಿ ಮುಂದೆ ಸಾಗುತ್ತದೆ. ಗಜ್ಯಾ ಈ ಕಾದಂಬರಿಯ ನಾಯಕ. ಚಿಕ್ಕ ವಯಸ್ಸಿನಲ್ಲಿಯೇ ಕುಳಿತುಂಡು ಕೆಡಬಾರದು ಎನ್ನುವ ಧೋರಣೆಯನ್ನು ಮೈಗೂಡಿಸಿಕೊಂಡಂತೆ ಬದುಕಿದ ಈ ಗಜ್ಯಾ ಊರಿನ ಅನೇಕರಿಗೆ ಮಾದರಿಯಾಗಿರುವಂತೆ ಉಡಾಳನಾಗಿಯೂ ಗುರುತಿಸಿಕೊಂಡವನು. ಗಜ್ಯಾ ಮತ್ತು ಅವನ ಸ್ನೇಹಿತರಲ್ಲಿ ಆ ವಯಸ್ಸಿಗೆ ತಕ್ಕಂತ ಸಹಜವಾಗಿರಬಹುದಾದ ಹುಡುಗ ಬುದ್ಧ್ಢಿಯ ಗುಣಗಳೂ ಇವೆ. ಎಲ್ಲ ಕಾಲಗಳಲ್ಲಿ ಎಲ್ಲ ಮಕ್ಕಳಲ್ಲಿ ವ್ಯಾಪಕವಾಗಿ ಕಾಣಬಹುದಾದ ಗುಣಗಳವು.
ಒಬ್ಬರನ್ನೊಬ್ಬರು ದೂರುವ ದ್ವೇಷಿಸುವ, ಮತ್ತೆ ಒಂದುಗೂಡುವ, ಕೂಡಿ ಕದಿಯುವ, ತಿನ್ನುವ, ಸೇಡಿಗಾಗಿ ಹೂಂಕರಿಸುವ ಇಂಥಾ ಹತ್ತಾರು ವಕ್ರಗುಣಂಗಣ ಪಟಾಲಮ್ಮಿನಂತಿರುವ ಆ ಹುಡುಗರು ಹಾಗಾಗಲು ಕಾರಣ ಆ ಆಲದ ಮರದ ಕೆಳಗೆ ವಾಸವಾಗಿರುವ ಅಜ್ಜ ಎನ್ನುವುದು ಹೆತ್ತವರ ದೂರುವಿಕೆ. ಗಜ್ಯಾ ಆಟವಾಡುವ ವಯಸ್ಸಿನಲ್ಲಿಯೇ ಹೊಣೆಗಾರಿಕೆಯನ್ನು ಹೆಗಲಿಗೇರಿಸಿಕೊಂಡು ತಾನು ಶಾಲೆ ಕಲಿಯದಿದ್ದರೂ ತನ್ನ ತಂಗಿಯನ್ನು ಓದಿಸಬೇಕೆಂದು ದುಡಿಯುವ ಅವನ ಗುಣವನ್ನು ಊರಿನ ಅನೇಕರು ಕೊಂಡಾಡುವ ಜೊತೆಗೆ ದಾರಿ ತಪ್ಪಿದ ಮಕ್ಕಳಿಗೆ ಗಜ್ಯಾನನ್ನು ಉದಾಹರಣೆಯಾಗಿ ಕೊಡುವಷ್ಟರ ಮಟ್ಟಿಗೆ ಮಲ್ಲೂರಿನ ಅನೇಕರಿಗೆ ಗಜ್ಯಾ ಇಷ್ಟವಾಗುತ್ತಿದ್ದ. ಗಜ್ಯಾ ಮತ್ತು ಅವನ ಸೈಕಲ್ ಇಡೀ ಮಲ್ಲೂರಿನ ಚಟುವಟಿಕೆಯ ಸಂಕೇತಗಳಾಗಿದ್ದವು. ಆತನ ಸೈಕಲ್ ಬೆಲ್ ಜಾಗೃತಿಯ ಸಂಕೇತದಂತೆ ಬಳಕೆಯಾಗುವದಿತ್ತು. ಕಾದಂಬರಿಕಾರ ಕಾಲನ ಓಟವನ್ನು ಸೈಕಲ್ ಜೊತೆಗೆ ಮತ್ತು ಅದರ ಗಂಟೆಯನ್ನು ಕಾಲ ಸರಿಯುವ ಎಚ್ಚರದ ನಾದವಾಗಿ ಬಳಸಿರುವುದು ಗಮನಾರ್ಹವಾದುದು. ಓಡಿ ಹೋದ ಹುಡುಗ ಇಲ್ಲಿ ಬೇರೆ ಯಾರೂ ಅಲ್ಲ ಆ ಸೈಕಲ್ ಸವಾರ ಗಜ್ಯಾ. ಆತ ದಿಕ್ಕು ದೆಸೆಯಿಲ್ಲದೇ ಓಡಿ ಹೋದವನಲ್ಲ, ಬದುಕನ್ನು ರೂಪಿಸಿಕೊಳ್ಳಲು ಹೋದವನು. ಸಿನೇಮಾ ಒಂದರಲ್ಲಿ ನಟಿಸುವ ಅವಕಾಶ ಸಿಕ್ಕ ಕಾರಣದಿಂದ ಕರೀಕಟ್ಟೆ ಮಾಸ್ತರರ ಜೊತೆಗೆ ಹೋಗಿ ಸಿನೇಮಾದಲ್ಲಿ ಪಾತ್ರ ನಿರ್ವಹಿಸಿ ಮರಳಿ ಬರುವಷ್ಟರಲ್ಲಿ ಮಲ್ಲೂರಿನ ಪಾಲಿಗೆ, ಗಜ್ಯಾನ ಜೊತೆಗಾರರಿಗೆ ಆತ ಓಡಿ ಹೋದ ಹುಡುಗನಾಗಿರುತ್ತಾನೆ. ಗಜ್ಯಾ ದಿನಾಲು ಊರಲ್ಲಿ ಸುತ್ತಿ ಸುಳಿಯುವಾಗ ಕಾಣದ ಅವನ ಹರಕತ್ತು ಒಂದೆರಡು ದಿನ ಅವನಿಲ್ಲದಿರುವಾಗ ಎದ್ದು ತೋರುವ ಜೊತೆಗೆ, ಅವನಿಗಾಗಿ ಇಡೀ ಊರಿನ ಬೆಟ್ಟ ಗುಡ್ಡಗಳನ್ನು ಹತ್ತಿ ಹುಡುಕುವ ರೀತಿಯಲ್ಲಿಯೇ ಓಡಿ ಹೋದ ಹುಡುಗನ ಪಾತ್ರದ ಹಿಕಮತ್ತು ಓದುಗನಿಗೆ ಮನದಟ್ಟಾಗುತ್ತದೆ.
ಇದು ಹೇಳೀ ಕೇಳೀ ಮಕ್ಕಳ ಕಾದಂಬರಿ. ಹೀಗಾಗಿ ಕಾದಂಬರಿಕಾರ ತಕ್ಕ ಮಟ್ಟಿಗೆ ಭಾಷೆಯನ್ನು ಸಡಿಲುಗೊಳಿಸಿ ಕತೆ ಹೇಳುತ್ತಾ ಹೋಗಿರುವದಿದೆ. ಜೊತೆಗೆ ಕತೆಯ ಹಂದರ ಜಾಳುಜಾಳಾಗದಂತೆ ಎಚ್ಚರವಹಿಸುವ ಜೊತೆಗೆ ಒಂದು ಮಕ್ಕಳ ಕಾದಂಬರಿಯ ಸೊಗಸಿಗೆ ಏನು ಸಾಮಗ್ರಿ ಬೇಕೋ ಅದೆಲ್ಲವನ್ನು ಒದಗಿಸಿಕೊಟ್ಟು ಕಾದಂಬರಿಗೆ ಪೂರಕವಾಗಿ ಸಲ್ಲಬಹುದಾದ ಹಿತಕರ ಪರಿಸರವನ್ನು ಕಾದಂಬರಿಕಾರ ಕಟ್ಟಿಕೊಟ್ಟಿದ್ದಾರೆ. ಈ ಕಾದಂಬರಿಯ ಭಾಷೆ, ವಸ್ತು, ತಂತ್ರ, ವಿನ್ಯಾಸ, ನಿರೂಪಣೆ ಎಲ್ಲವೂ ಮಕ್ಕಳ ಕಾದಂಬರಿಗೆ ಸಲ್ಲುವಂತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...